tag:blogger.com,1999:blog-18433939328756446232024-03-13T02:16:34.091-07:00ಯಾರ ಜಪ್ತಿಗೂ ಸಿಗದ ನವಿಲು!!My Facebook Id is: Sharath Bhat Seraje, my mail id is: sharathbhats@gmail.comSharath Bhat serajehttp://www.blogger.com/profile/11873783107861311555noreply@blogger.comBlogger133125tag:blogger.com,1999:blog-1843393932875644623.post-52806163044898846302023-02-21T02:54:00.002-08:002023-02-21T02:57:06.427-08:00Some of my favorite posts<p> I have culled a list of some of my favorites for easy reference:</p><p><br /></p><p><b>Made Easy series</b>:</p><p><a href="http://sharathbhats.blogspot.com/2016/04/imdb-top-250-made-easy.html">http://sharathbhats.blogspot.com/2016/04/imdb-top-250-made-easy.html</a></p><p><br /></p><p><a href="http://sharathbhats.blogspot.com/2016/05/gravitational-waves-made-easy.html">http://sharathbhats.blogspot.com/2016/05/gravitational-waves-made-easy.html</a></p><p><br /></p><p><a href="http://sharathbhats.blogspot.com/2016/07/rexit-reserve-bank-of-india-and-indian.html">http://sharathbhats.blogspot.com/2016/07/rexit-reserve-bank-of-india-and-indian.html</a></p><p><br /></p><p><a href="http://sharathbhats.blogspot.com/2016/09/lying-with-mathematics.html">http://sharathbhats.blogspot.com/2016/09/lying-with-mathematics.html</a></p><p><br /></p><p><a href="http://sharathbhats.blogspot.com/2016/12/the-secret-life-of-passwords.html">http://sharathbhats.blogspot.com/2016/12/the-secret-life-of-passwords.html</a></p><p><br /></p><p><a href="http://sharathbhats.blogspot.com/2018/01/gst-made-easy.html">http://sharathbhats.blogspot.com/2018/01/gst-made-easy.html</a></p><p><br /></p><p><b>Miscellaneous</b>:</p><p><a href="http://sharathbhats.blogspot.com/2016/05/how-many-countries-are-there-in-world.html">http://sharathbhats.blogspot.com/2016/05/how-many-countries-are-there-in-world.html</a></p><p><br /></p><p><a href="http://sharathbhats.blogspot.com/2017/06/fun-with-english.html">http://sharathbhats.blogspot.com/2017/06/fun-with-english.html</a></p><p><br /></p><p><a href="http://sharathbhats.blogspot.com/2017/03/ar-rahmans-instruments.html">http://sharathbhats.blogspot.com/2017/03/ar-rahmans-instruments.html</a></p><p><br /></p><p><a href="http://sharathbhats.blogspot.com/2017/06/why-i-am-not-against-shivaji-statue.html">http://sharathbhats.blogspot.com/2017/06/why-i-am-not-against-shivaji-statue.html</a></p><p><br /></p><p><b>Movie and Book Recommendations:</b></p><p><a href="http://sharathbhats.blogspot.com/2019/01/movies-with-great-plot-twists.html">http://sharathbhats.blogspot.com/2019/01/movies-with-great-plot-twists.html</a></p><p><br /></p><p><a href="http://sharathbhats.blogspot.com/2018/07/recommended-war-movies.html">http://sharathbhats.blogspot.com/2018/07/recommended-war-movies.html</a></p><p><br /></p><p><a href="http://sharathbhats.blogspot.com/2018/01/top-tv-shows-that-i-recommend.html">http://sharathbhats.blogspot.com/2018/01/top-tv-shows-that-i-recommend.html</a></p><p><br /></p><p><a href="http://sharathbhats.blogspot.com/2017/03/best-of-infotainmentbraingasm-books.html">http://sharathbhats.blogspot.com/2017/03/best-of-infotainmentbraingasm-books.html</a></p>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-90160901129333926972020-12-19T08:49:00.003-08:002020-12-19T08:49:27.490-08:00ಕಿಮ್ ಕಿ-ಡುಕ್<p><span style="background-color: white; color: #050505; font-family: inherit; font-size: 15px; white-space: pre-wrap;">ಕನ್ನಡಪ್ರಭದಲ್ಲಿ ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಬಗ್ಗೆ ನನ್ನದೊಂದು ಪುಟ್ಟ ಲೇಖನ. ಬರೆಸಿ,ಪ್ರಕಟಿಸಿದ ಜೋಗಿಯವರಿಗೆ ಧನ್ಯವಾದಗಳು:</span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">ಎಲ್ಲೋ ಓದಿದ ಈ ಸಾಲುಗಳನ್ನ ಇನ್ನೊಮ್ಮೆ ಓದಿಕೊಳ್ಳಿ :</div><div dir="auto" style="font-family: inherit;">ಬಿರುಗಾಳಿ ನಡುವೆ ಕಾಫಿಶಾಪ್</div><div dir="auto" style="font-family: inherit;">ಕೈಯ್ಯಲ್ಲೊಂದು ಕಪ್ ಕಾಫಿ</div><div dir="auto" style="font-family: inherit;">ಕಾಫಿಯೊಳಗೊಂದು ಬಿರುಗಾಳಿ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇದನ್ನೇ ನೀವು ಅಡ್ಡಡ್ಡ ಬರೆದು ಚು ಆಂಗ್ ತ್ಸು ಅಂತಲೋ ಅಥವಾ ಇನ್ನು ಯಾವುದಾದರೂ ಚೀನಿ,ಜಪಾನೀ ಹೆಸರು ತಗೊಂಡು ಆ ಝೆನ್ ಗುರು ಕಾಫಿಶಾಪ್ ನಲ್ಲಿ ಇದ್ದ ಅಂದು ಬಿಟ್ಟರೆ ಇದನ್ನೊಂದು ಝೆನ್ ಕಥೆ ಅಂತಲೂ ಅಂದುಕೊಳ್ಳಬಹುದು. ಇಂಥದ್ದನ್ನೆಲ್ಲ ಇಷ್ಟಪಡುವವರಿಗೆ ಅಂತ ಒಂದು ಸಿನಿಮಾ ಮಾಡಿದರೆ? ಇದನ್ನು ಕಲ್ಪಿಸಿಕೊಳ್ಳಿ: ಅಲ್ಲೊಂದು ನಿಶ್ಚಲ ಸರೋವರ, ಅದರ ಮೇಲೊಂದು ಬೌದ್ಧ ಸಂನ್ಯಾಸಿಯ ಕುಟೀರ. ಸರೋವರದಲ್ಲಿ ತೇಲುವ ಕುಟೀರದ ಸುತ್ತಲೂ ಎದ್ದುನಿಂತ ಗುಡ್ಡಗಳು, ಹಬ್ಬಿದ ಕಾಡು. ಇಂಥಲ್ಲಿ ನಿರಾಳವಾಗಿ ಬದುಕುವ ಗುರು ಶಿಷ್ಯರು; ಅಲ್ಲಿ ಅವರು ಬಿಟ್ಟರೆ ಇನ್ನೊಬ್ಬರಿಲ್ಲ. ಅಲ್ಲಿ ಬದಲಾಗುವ ಋತುಗಳು ಬದುಕಿನ ಬೇರೆ ಬೇರೆ ಹಂತಗಳಿಗೆ ಸಾಕ್ಷಿಯಾಗಿ, ರೂಪಕಗಳಾಗಿ ಇರುತ್ತವೆ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇದು ಯಾವುದಾದರೂ ವಿಮರ್ಶಕರು ಮಾತ್ರ ಮೆಚ್ಚುವ ಕಾದಂಬರಿಗೋ ಕವನಕ್ಕೋ ಆದೀತು, ಇಂಥ ಚಲನಚಿತ್ರವೂ ಇರಲು ಸಾಧ್ಯವೇ ಅಂತ ತಲೆ ಕೆರೆದುಕೊಳ್ಳಬಹುದು. ಹೀಗೂ ಉಂಟು ಅನ್ನುವ ತರ ಇದ್ದದ್ದು Spring, Summer, Fall, Winter... and Spring ಎಂಬ ಚಿತ್ರ, ಅದನ್ನು ನೋಡಿ, ಈ ನಿರ್ದೇಶಕ ಬೇರೇನು ಮಾಡಿದ್ದಾನೆ ಅಂತ ಆಸಕ್ತರಾದವರೇ ಹೆಚ್ಚು. ಕಿಮ್ ಕಿ-ಡುಕ್ ಎಂಬ ಕೊರಿಯನ್ ನಿರ್ದೇಶಕನ ಪರಿಚಯ ಹಲವರಿಗೆ ಆದದ್ದು ಹಾಗೆಯೇ. ಅದು ಆಗಬೇಕಾದ್ದೂ ಹಾಗೆಯೇ ಎನ್ನಬೇಕು! ಜುಗುಪ್ಸೆ ಹುಟ್ಟಿಸುವ, ಕೆರಳಿಸುವ, ರೋಸಿಕೊಳ್ಳುವಂತೆ ಮಾಡುವ ಸಾಕಷ್ಟು ಚಿತ್ರಗಳನ್ನೂ ಈ ಮನುಷ್ಯ ಮಾಡಿದ್ದರಿಂದ ಈ ಮಾತನ್ನು ಹೇಳಬೇಕಾಯಿತು. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಕ್ರೈಮ್ ಥ್ರಿಲ್ಲರುಗಳನ್ನು ಕೊರಿಯನ್ನರಂತೆ ಮಾಡುವವರಿಲ್ಲ, ಹಿಂಸೆಯನ್ನು ಅವರಷ್ಟು ತೋರಿಸುವವರಿಲ್ಲ, ಅವರಂತೆ ತೋರಿಸುವವರೂ ಇಲ್ಲ ಎಂಬ ಭಾವನೆ ಸಿನಿಪ್ರಿಯರ ವಲಯದಲ್ಲಿದೆ. ಅಷ್ಟಲ್ಲದೆ,ಒಂದು ಒಳ್ಳೆಯ ಕನ್ನಡ ಥ್ರಿಲ್ಲರ್ ಬಂದರೆ, ಅದನ್ನು ಹೊಗಳುವ ಮೊದಲು, ಇದರ ಮೂಲ ಯಾವುದಾದರೂ ಕೊರಿಯನ್ ಸಿನೆಮಾದಲ್ಲಿ ಇರಬಹುದೇ ಅಂತ ಹುಡುಕಿ ನೋಡುವವರೂ ಇದ್ದಾರೆ! ಇಂಥ ಚಿತ್ರರಂಗದಲ್ಲಿ ತನ್ನದು ಮತ್ತು ತನ್ನದು ಮಾತ್ರವೇ ಆದ ಸ್ವರದ ಮೂಲಕ ಸದ್ದು ಮಾಡಿದ್ದು ಕಿಮ್ ಕಿ-ಡುಕ್. ಇಟಾಲಿಯನ್ ನಿಯೋರಿಯಲಿಸಂ, ಇರಾನಿಯನ್ ನ್ಯೂ ವೇವ್ ಇರುವಂತೆ ಕೊರಿಯನ್ ಹೊಸ ಅಲೆಯೂ ಬಂದಾಗ ಅದರಲ್ಲಿ ಕಾಣಿಸಿಕೊಂಡ ಹೆಸರುಗಳಲ್ಲಿ ಇವನದ್ದೂ ಗಮನಾರ್ಹವಾದ ಹೆಸರು. ಒಂದು ಸಿನಿಮೀಯ ದುರಂತ ಎಂದರೆ, ಕೊರಿಯಾದಲ್ಲಿಯೇ ಅವನಿಗೆ ಅಂಥ ದೊಡ್ಡ ಹೆಸರಿರಲಿಲ್ಲ, ಅವನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿಯೂ ಸೋತವು, ವಿಮರ್ಶಕರನ್ನೂ ಅಷ್ಟಾಗಿ ಸೆಳೆಯಲಿಲ್ಲ. ಅವನ ಅಭಿಮಾನಿಗಳು ಯೂರೋಪಿನಲ್ಲಿ, ಅಮೆರಿಕಾದಲ್ಲಿ, ಭಾರತದಲ್ಲಿಯೇ ಹೆಚ್ಚು ಇರುವುದು. ಚಿತ್ರೋತ್ಸವಗಳಲ್ಲಿ ಅವನಿಗೆ ಸ್ಟಾರ್ ನಿರ್ದೇಶಕನಿಗೆ ಸಿಗುವ ರಾಜಮರ್ಯಾದೆಯೇ ಸಿಗುತ್ತಿತ್ತು. ಮಿಟೂ ಚಳುವಳಿಯ ಕಾಲದಲ್ಲಿ ಹಲವರು ಇವನೊಬ್ಬ ಅತ್ಯಾಚಾರಿ ಅಂದಾಗ ಎಲ್ಲರಿಗೆ ಬೇಸರವಾಗಿತ್ತು, ಒಬ್ಬ ಒಳ್ಳೆಯ ಕಲಾವಿದನು ಒಬ್ಬ ಒಳ್ಳೆಯ ಮನುಷ್ಯನೂ ಆಗಿರುತ್ತಾನೆಯೇ ಎಂಬ ಪ್ರಶ್ನೆಗಳು ಎದ್ದದ್ದೂ ಉಂಟು. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">Orson Wellesನು ಮೊದಲ ಬಾರಿ Citizen Kane ಅನ್ನು ಜನರಿಗೆ ತೋರಿಸಿದಾಗ, ಈ ಪುಣ್ಯಾತ್ಮ ಹಾಲಿವುಡ್ಡಿನ ಎಲ್ಲ ನಿಯಮಗಳನ್ನ ಮುರಿದಿದ್ದಾನೆ ಅಂದರಂತೆ ಯಾರೋ. ಮುರಿಯುವುದಕ್ಕೆ ಈ ರೂಲ್ಸು ಯಾವ್ದು ಅಂತ ನನಗೆ ಗೊತ್ತೇ ಇರ್ಲಿಲ್ಲ ಅಂದಿದ್ದನಂತೆ ಆತ. ಅಜ್ಞಾನವೇ ಪರಮಸುಖ ಅಂದಂತೆ. ಕಿಮ್ ಕಿ-ಡುಕ್ ಕೂಡಾ ಹಾಗೆ ಗೊತ್ತಿಲ್ಲದೇ ನಿಯಮಗಳನ್ನು ಗಾಳಿಗೆ ತೂರಿದವನೋ, ಬೇಕೆಂತಲೇ ಎಲ್ಲರನ್ನೂ ಬೆಚ್ಚಿ ಬೀಳಿಸ ಹೊರಟವನೋ ಅಂತ ಹೇಳುವುದು ಕಷ್ಟ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಚಿತ್ರಕಥೆ ಬರೆಯುವುದನ್ನು ಹೇಳಿಕೊಡುವ ಮಾಷ್ಟ್ರುಗಳು ಹೇಳಿ ಕೊಡುವ ಮೊದಲನೇ ಪಾಠ ಅಂದರೆ “Don’t tell,Show” ಅಂತ. ಅಂದರೆ ಪಾತ್ರಗಳು ಆಡದೇ, ಮಾಡಿ ರೂಢಿಯೊಳಗುತ್ತಮರಾಗಬೇಕು ಅಂತ. ಇಂಥಹ ಮೇಷ್ಟ್ರುಗಳ ಮಾತು ಕೇಳಿಸದಷ್ಟು ಮಾತಾಡಿದ್ದು ಯೋಗರಾಜ ಭಟ್ಟರ ಪಾತ್ರಗಳು. ಯೋಗರಾಜ ಭಟ್ಟರ ಪ್ರೀತಂ ಸ್ವಲ್ಪ ಸೈಲೆಂಟ್ ಹುಡುಗ ಅನ್ನಿಸುವಷ್ಟು ಮಾತಾಡಿದ್ದು ಗುರುಪ್ರಸಾದರ ಪಾತ್ರಗಳು ಮತ್ತು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಪಾತ್ರಗಳು. “Don’t tell,Show” ಸಿದ್ದಾಂತವನ್ನು ಇನ್ನೊಂದು ಅತಿಗೆ ಕೊಂಡು ಹೋದವನಂತೆ, ಮಾತೇ ಆಡದ ಪಾತ್ರಗಳನ್ನು ಕಟ್ಟಿದ್ದು ಕಿಮ್ ಕಿ-ಡುಕ್. ನಮ್ಮಲ್ಲಿ ಹಾಕುವಂತೆ, ಕಥೆ-ಚಿತ್ರಕಥೆ- ಸಂಭಾಷಣೆ ಎಂಬ ಕ್ರೆಡಿಟ್ ಕೊಡುವ ಅಗತ್ಯವೇ ಅವನ ಹಲವು ಚಿತ್ರಗಳಲ್ಲಿಲ್ಲ, ಅಷ್ಟೆಲ್ಲ ಸಂಭಾಷಣೆಗಳನ್ನು ಬರೆಯುವುದರಲ್ಲಿ ಅವನಿಗೆ ನಂಬಿಕೆಯಿದ್ದಂತಿಲ್ಲ. ಕಥೆ-ಚಿತ್ರಕಥೆ- ಛಾಯಾಗ್ರಹಣ ಅಂತ ಹಾಕಿ, ದೃಶ್ಯ, ಪರಿಸರ, ಹಿನ್ನೆಲೆ ಸಂಗೀತಗಳೇ ಸಂಭಾಷಣೆಯ ಕೆಲಸ ಮಾಡುತ್ತವೆ ಅಂದು ಸುಮ್ಮನಾಗಬಹುದು.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅವನ ಮೋಬಿಯಸ್ ಎಂಬ ವಿಕೃತ ಚಿತ್ರವನ್ನು ನೋಡದಿರುವುದೇ ಒಳ್ಳೆಯದೇನೋ, Pieta ಎಂಬ ಚಿತ್ರದಲ್ಲಿ ತೋರಿಸುವ ಕ್ರೌರ್ಯ ಅಸಹ್ಯ ತರಿಸಿ, ಎದ್ದು ಹೋಗುವ ಅನ್ನಿಸುವಂತೆ ಮಾಡಿದರೂ, ಅದನ್ನು ಸಹಿಸಿಕೊಂಡರೆ, ಅಬ್ಬಬ್ಬಾ ಎನ್ನಿಸುವ, ವಿಕ್ಷಿಪ್ತವಾದರೂ ಅದ್ಭುತವಾದ ಚಿತ್ರವಾಗಿ ಕಾಡುತ್ತದೆ. 3-Iron ಅವನ ನೋಡಲೇಬೇಕಾದ ಚಿತ್ರಗಳಲ್ಲೊಂದು. ಜತನದಿಂದ ಕಲಾತ್ಮಕವಾಗಿ ರೂಪಿಸಿದ ದೃಶ್ಯಗಳಲ್ಲಿ, ಆರದ ಗಾಯಕ್ಕೆ ಮುಲಾಮು ಹುಡುಕುತ್ತಿರುವ ಪಾತ್ರಗಳ ತೊಳಲಾಟದಲ್ಲಿ, ತಣ್ಣನೆಯ ಕ್ರೌರ್ಯದಲ್ಲಿ, ಸಂಕಟದಲ್ಲಿ, ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಮಾತುಗಳಲ್ಲಿ, ನಿಧಾನಕ್ಕೆ ಇಷ್ಟಿಷ್ಟೇ ಬಿಚ್ಚಿಕೊಳ್ಳುವ ಬಾವುಟದ ಥರ ಕಥೆ ಬಿಚ್ಚಿ ಪಟಪಟಿಸುವುದು ಅವನ ಚಿತ್ರಗಳ ಕ್ರಮ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ನಮ್ಮ ಸೂರಿಯಂತೆ ಇವನೂ ಒಬ್ಬ ವರ್ಣಚಿತ್ರಕಾರ. ಅಕ್ಕರೆಯಿಂದ ಬಿಡಿಸಿಟ್ಟ ಚಿತ್ರದಂತೆ ಇರುವ, ರವಿಚಂದ್ರನ್ ಇದನ್ನು ಇಷ್ಟಪಟ್ಟಾರು ಅನ್ನಿಸುವಂಥ ಫ್ರೇಮುಗಳು ಅವನ ಚಿತ್ರಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ಅಷ್ಟು ಮಾತ್ರ ಅಲ್ಲ. ಇವಕ್ಕೆ ಹೋಲಿಸಿದರೆ ಸೂರಿ ಸಿನೆಮಾಗಳಲ್ಲಿ ತೋರಿಸುವ ಹಿಂಸೆಯು ರಾಜಕುಮಾರರ ಚಿತ್ರಗಳಷ್ಟು ಸಭ್ಯ ಎನ್ನಬಹುದಾದಷ್ಟು ಭಯಂಕರ, ವಿಕೃತ, ಭೀಭತ್ಸ ಚಿತ್ರಗಳನ್ನೂ ಈ ಪುಣ್ಯಾತ್ಮ ಮಾಡಿಟ್ಟಿದ್ದಾನೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">The Silence of the Lambs ಅವನ ಮೇಲೆ ತುಂಬಾ ಪ್ರಭಾವ ಬೀರಿದ ಚಿತ್ರವಂತೆ. ಅದು ಸೀರಿಯಲ್ ಕಿಲ್ಲರನ್ನು ತೋರಿಸುವ ಚಿತ್ರ, ಅದರ ಮುಖ್ಯ ಪಾತ್ರ ಒಬ್ಬ ನರಭಕ್ಷಕನದು ಆದರೂ ಅದೇನು ಹಸಿಬಿಸಿಯಾದ, ಅಸಹ್ಯ ಎನ್ನಿಸುವ ಚಿತ್ರವಾಗಿರಲಿಲ್ಲ. ಅದರಲ್ಲಿ ಬರುವ ನರಭಕ್ಷಕನೂ ಚಾರ್ಮಿಂಗ್ ಆದ ವ್ಯಕ್ತಿ. ಆದರೆ ಕಿಮ್ ಕಿ-ಡುಕ್ಕನಿಗೆ ಯಾಕೋ ಕ್ರೌರ್ಯದ, ಲೈಂಗಿಕತೆಯ ಹಸಿ ಹಸಿ ಚಿತ್ರಣದಲ್ಲಿ ಆಸಕ್ತಿ ಜಾಸ್ತಿ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇವೆಲ್ಲ ಏನಿದ್ದರೂ, ಶಾಂತ ರಸ, ಕರುಣ ರಸಗಳನ್ನೂ ಧ್ಯಾನಸ್ಥನಂತೆ ಮುಟ್ಟಿ, ರೌದ್ರ,ಭೀಭತ್ಸಗಳನ್ನೂ ಅಷ್ಟೇ ಆಸಕ್ತಿಯಿಂದ ಚಿತ್ರಿಸಿ, ಅಲ್ಲೂ ಚಿಂತನೆಗೆ ಗ್ರಾಸ ಒದಗಿಸಿದ ಮತ್ತೊಬ್ಬ ನಿರ್ದೇಶಕನ ಹೆಸರು ನೆನಪಾಗುವುದಿಲ್ಲ. ಬಹುಶಃ ಎಲ್ಲ ಅತಿಗಳಿಗೆ ಹೋಗಿಯೂ ತುಂಬ ಗೌರವ ಕಾಪಾಡಿಕೊಂಡು, ಜೀನಿಯಸ್ ಎನ್ನಿಸಿಕೊಂಡ ಸ್ಟಾನ್ಲಿ ಕೂಬ್ರಿಕ್ ಕೂಡಾ ಸ್ವಲ್ಪ(ಸ್ವಲ್ಪ ಮಾತ್ರ) ಇದೇ ಜಾತಿಯ ಪ್ರಾಣಿ ಎನ್ನಬಹುದು. ಇಂಥವರ ಚಿತ್ರಗಳು ಖುಷಿ ಕೊಟ್ಟು, ಪ್ರಚೋದಿಸಿ, ರೇಗಿಸಿ,ಚಿಂತನೆಗೆ ಸರಕನ್ನು ಸರಬರಾಜು ಮಾಡಿ, ಚರ್ಚೆಗೆ ವಿಚಾರವನ್ನು ಒದಗಿಸಿ art should comfort the disturbed and disturb the comfortable ಎಂಬಂತೆ ನಮ್ಮನ್ನು ಕಲಕುತ್ತವೆ ಎಂಬ ಕಾರಣಕ್ಕಾದರೂ ಸಿನೆಮಾವ್ಯಾಮೋಹಿಗಳ ಬಾಯಲ್ಲಿ ಇವನ ಹೆಸರು ಉಳಿಯುತ್ತದೆ.</div><div dir="auto" style="font-family: inherit;"><br /></div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEj22G3gX7lZS9sLyHxgDfuh3beJtdZhNKcMU2OlS5q8aL2tsvJj33hoDJQ9WFhhRVLdoxoH-ojtATAJKwhgxILwK3Mu7p5TnrnROddN5uSao3XCOUvkZmv52P-6RWowmxVCHDTd33sPA8M/s843/Kim.jpg" imageanchor="1" style="margin-left: 1em; margin-right: 1em;"><img border="0" data-original-height="757" data-original-width="843" src="https://blogger.googleusercontent.com/img/b/R29vZ2xl/AVvXsEj22G3gX7lZS9sLyHxgDfuh3beJtdZhNKcMU2OlS5q8aL2tsvJj33hoDJQ9WFhhRVLdoxoH-ojtATAJKwhgxILwK3Mu7p5TnrnROddN5uSao3XCOUvkZmv52P-6RWowmxVCHDTd33sPA8M/s320/Kim.jpg" width="320" /></a></div><br /><div dir="auto" style="font-family: inherit;"><br /></div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-70436649724842979762020-12-19T08:48:00.001-08:002020-12-19T08:48:05.693-08:00ಮರಡೋನಾ ಎಂಬ ಮೋಹಕ ವ್ಯಸನ<p> ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: </p><p><span style="background-color: white; color: #222222; font-family: Arial, Helvetica, sans-serif; font-size: small;">ತೊಂಬತ್ತರ ದಶಕದ ಹುಡುಗರಿಗೆ ತೆಂಡೂಲ್ಕರ್ ಇದ್ದಂತೆ ಎಂಬತ್ತರ ದಶಕದ ಫುಟ್ಬಾಲ್ ಪ್ರಿಯರನ್ನು ವಶೀಕರಿಸಿದ ಹೆಸರು ಡಿಯಾಗೋ </span><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;">ನದ್ದು. ನಮ್ಮನ್ನು ಈ ಪರಿ ಸಮ್ಮೋಹಗೊಳಿಸಿದ ಮಹರಾಯ ಅದೇನು ಆಡ್ತಾನೆ ಅಂತ ನೋಡುವ ಕುತೂಹಲದಿಂದ 1986ರ ವಿಶ್ವಕಪ್ಪಿನ ವೀಡಿಯೊ ಟೇಪ್ ಒಂದನ್ನು ಆ ಕಾಲದಲ್ಲಿ ಸಂಪಾದಿಸಿ ನಾವೆಲ್ಲ ನೋಡಿದ್ದೇ ನೋಡಿದ್ದು. ನೋಡಿ ನೋಡಿ ನೋಡಿ ಆ ಟೇಪು ಸವೆದಿತ್ತು, ಆಗ ಹಾಗೆ ಪರವಶರಾಗುತ್ತಿದ್ದದ್ದರ ನೆನಪು ಮಾತ್ರ ಇನ್ನೂ ಸವೆದಿಲ್ಲ. ಪುರುಸೊತ್ತು ಇಲ್ಲದೆ ಇದ್ದಾಗಂತೂ ಫಾರ್ವರ್ಡ್ ಮಾಡುವುದು,ಸೀದಾ ಆ ಗೋಲಿನ ನಿಮಿಷಕ್ಕೆ ಬರುವುದು ! ಹ್ಯಾಂಡ್ ಆಫ್ ಗಾಡ್ ಅಂತ ಕುಪ್ರಸಿದ್ಧವಾದ ಗೋಲು ಆಗಿ ಸ್ವಲ್ಪವೇ ಹೊತ್ತಿನಲ್ಲಿ ಅದು ಬಂದದ್ದು.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಅದೆಂಥಾ ಗೋಲು ಅಂತೀರಿ ! ಒಂದಿಡೀ ಜೀವಮಾನದ ಪ್ರತಿಭೆಯನ್ನು ಹನ್ನೊಂದು ಸೆಕೆಂಡುಗಳ ಸ್ತೋತ್ರಗೀತೆಯಾಗಿ ಹೇಳಿದಂತೆ, ಗೋಲು ಮಾಡಲು ಓಡಿದ ಅರುವತ್ತು ಮೀಟರುಗಳ ಸರಕ್ಕನೆಯ ಓಟ; ಅಮರಕೀರ್ತಿ ಎಂಬ ಗಮ್ಯದ ಕಡೆಗಿನ ದೂರ ಬರೀ ಅರುವತ್ತು ಮೀಟರು ಅಂತ ತೋರಿಸಿದ ಓಟ ಅದು! ಮೈದಡವಿದ್ದು, ಕುಟ್ಟಿದ್ದು, ನೂಕಿದ್ದು, ಗಿರ್ರನೆ ಸುತ್ತಿದ್ದು ಎಲ್ಲದರ ಕಥೆಯನ್ನು ಆ ಬಾಲೇ ನಮಗೆ ಹೇಳಿದ್ದರೆ ಚೆನ್ನಿತ್ತು !</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">1986ರ ಜೂನ್ 22ಕ್ಕೆ ಮೆಕ್ಸಿಕೋ ಸಿಟಿಯಲ್ಲಿ ಹೊಡೆದ ಆ ಗೋಲಿಗೆ ಸಾಕ್ಷಿಯಾಗಿ ಮೈದಾನದಲ್ಲೇ ಲಕ್ಷ ಜನ ನೆರೆದಿದ್ದರು. ಅಲ್ಲಿ ಬೀಟಲ್ಸ್ ತಂಡದ ಒಬ್ಬನ ಹಾಡು ಕೇಳುವುದಕ್ಕೆ ಲಕ್ಷ ಜನರ ಸಂತೆ ನೆರೆದದ್ದಿತ್ತು, ಧರ್ಮಗುರುಗಳ ಬೋಧನೆಗೆ ಜನಸಂತೆ ಒಟ್ಟಾದದ್ದಿತ್ತು, ಅಂಥಲ್ಲಿ ಆ ದಿನ </span><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;"> ಭಕ್ತರ ಜಾತ್ರೆ ನೆರೆದಿತ್ತು. ರಭಸವೇ, ಜೋರೇ, ಚುರುಕೇ, ಬಿರುಸೇ, ಭಂಡ ಧೈರ್ಯವೇ - ಆ ಗೋಲಿನಲ್ಲಿ ಏನಿತ್ತು, ಏನಿರಲಿಲ್ಲ ! ಹೀಗೂ ಆಡಿ ದಕ್ಕಿಸಕೊಳ್ಳಬಹುದು ಅಂತ ನಮಗೆಲ್ಲ ಗೊತ್ತಾದದ್ದೇ ಅವತ್ತು. </span><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;"> ಮೈದಾನದ ಮೂಲೆಯಲ್ಲಿ ಹಾಗೆ ಓಡಿದ್ದು, ಕೊಳೆಗೇರಿಯಲ್ಲಿ ಕಳೆದ ತನ್ನ ಬಾಲ್ಯದ ಅದೆಷ್ಟೋ ಕ್ಷಣಗಳೆಂಬ ಇಕ್ಕಟ್ಟಾದ ಸಂದಿಗಳಲ್ಲಿ,ಓಣಿಗಳಲ್ಲಿ ಓಡಿದ್ದರ ನೆನಪು ತರುವಂತಿತ್ತು.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ತೆಂಡೂಲ್ಕರನ ಮನಮೋಹಕ ಹುಕ್ಕು , ಲೆಕ್ಕಾಚಾರದ ಕವರ್ ಡ್ರೈವು, ಜಾನ್ ಮೆಕೆನ್ರೋವಿನ ಅದ್ಭುತ ವಾಲಿ, ಅದ್ಯಾರೋ ಜಿಮ್ನಾಸ್ಟಳು ತಾನು ಮನುಷ್ಯಳೇ ಅಲ್ಲ ಎಂಬಂತೆ ಬಳುಕಿದ್ದು ಇವನ್ನೆಲ್ಲ ಎಷ್ಟೆಷ್ಟು ಸಲ ಯುಟ್ಯೂಬಿನಲ್ಲಿ ನೋಡಿ ತಣಿಯುತ್ತೇವೋ ಅಷ್ಟೇ ಸಲ ಈ ಗೋಲನ್ನೂ ನೋಡಿರುತ್ತೇವೆ, ಅದು ಮಾಡಿದ ಮೋಡಿಯೇ ಹಾಗಿದೆ. ಮೆಸ್ಸಿ Getafeಯ ಜೊತೆ ಹೊಡೆದ ಗೋಲು ಗ್ರೇಟಾ ಇದು ಅದಕ್ಕಿಂತ ಮೇಲೆಯಾ ಅಂತ ನಾವು ಆಗಾಗ ಜಗಳ ಆಡುವುದುಂಟು. ಅದು ಉತ್ತರ ಗೊತ್ತಿದ್ದೇ ಕೇಳಿದ ಪ್ರಶ್ನೆಯ ಹಾಗೆ, ಜಗಳದಲ್ಲಿ ಗೆಲ್ಲುವುದು ಯಾರು ಅಂತ ಮೊದಲೇ ತೀರ್ಮಾನ ಆಗಿರುವ ಜಗಳ ! ಎಲ್ಲಿಯ ವರ್ಲ್ಡ್ ಕಪ್ಪು ಎಲ್ಲಿಯ, ಕ್ಲಬ್ಬು ಮ್ಯಾಚುಗಳು ಸ್ವಾಮೀ.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;"> ಅರುವತ್ತಕ್ಕೇ ಆಟ ಮುಗಿಸಿದ್ದು, ಆಶ್ಚರ್ಯವಲ್ಲದಿದ್ದರೂ ಮನಕರಗಿಸುವ ಸಂಗತಿ ಎನ್ನಬೇಕು. ಅವನು ಎಡವದೇ ಇರುತ್ತಿದ್ದದ್ದು ಮೈದಾನದಲ್ಲಿ ಮಾತ್ರ. ಆತ ತಪ್ಪೇ ಮಾಡುವುದಿಲ್ಲ ಅಂತಾಗುತ್ತಿದ್ದದ್ದು ಅವನ ಕಾಲು ಫುಟ್ಬಾಲನ್ನು ಸ್ಪರ್ಶಿಸಿದಾಗಲೇ. ಒಮ್ಮೆ ಮೈದಾನಕ್ಕೆ ಇಳಿದನೋ, ಮತ್ತೆ ತೊಂಬತ್ತು ನಿಮಿಷ ಅವನು ನಮ್ಮನ್ನೆಲ್ಲ ಯಾವುದೋ ಮಾಯಾಲೋಕಕ್ಕೆ ಕರೆದುಕೊಂಡು ಹೋಗುವ ಮಾಯಗಾರ. ಅವನದ್ದು ಮಲ್ಲಕಂಬಕ್ಕೆ ಹತ್ತಿದವನ ಸಮತೋಲನ, gymnastನಂಥ ಬಳುಕು, ಹಸಿದ ಚಿರತೆಯ ನೆಲಮುಟ್ಟದ ಓಟ. ಜೀವನದ ಓಟದಲ್ಲಿ ಮಾತ್ರ ಆ ಚಿರತೆ ಬಲೆಗೆ ಬೀಳುತ್ತಿತ್ತು, ಕಾಲುತಪ್ಪಿ ಎಡವುತ್ತಿತ್ತು.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;"> ಎಂದಾಗ ನೆನಪಾಗುವುದು ಆರು ಜನ ಬೆಲ್ಜಿಯಂನ ಆಟಗಾರರು ಅವನೆದುರು ಹೊಡೆದೇ ಬಿಡುತ್ತಾರೇನೋ ಎಂಬಂತೆ ಅಡ್ಡಗಟ್ಟಿ ನಿಂತದ್ದರ ಛಾಯಾಚಿತ್ರ. ಒಂದು ರಾಶಿ ಬ್ರೆಝಿಲಿಯನ್ನರ ನಡುವೆ ಜಾಗ ಮಾಡಿಕೊಂಡು ಬಾಲನ್ನು ತೂರಿ ನೂಕಿ ಓಡೋಡುವ ದೃಶ್ಯ. ದಿನಬೆಳಗಾದರೆ </span><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;"> ಸಾಕ್ಸು ಏರಿಸುವ, ಲೇಸು ಕಟ್ಟುವ, ಕುಣಿಯುವ, ಬಾಲನ್ನು ಕುಣಿಸುವ, ಹರ್ಷದಿಂದ ಮಗುವಿನಂತೆ ಜಿಗಿಯುವ ವೀಡಿಯೊ ಕ್ಲಿಪ್ಪುಗಳು ಮೊಬೈಲಿಗೆ ಬಂದು ಬೀಳುತ್ತವೆ. ಹಾಗೆ ಓಡುವ, ಹಾರುವ, ಹರ್ಷದಿಂದ ಕುಪ್ಪಳಿಸುವ, ಮಗುವಿನಂಥ ಚಿತ್ರವೇ ನಮಗೆ ಇಷ್ಟವಾಗುವ, ಮನಸ್ಸಿನಲ್ಲಿ ಉಳಿಯಬೇಕಾದ ಚಿತ್ರ. </span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;"> ನಮಗೆ ಯಾಕಿಷ್ಟ? ಆ ಪ್ರತಿಭೆಗೆ, ಆ ಕೌಶಲಕ್ಕೆ ಮರುಳಾದೆವು ಅನ್ನುವುದೇನೋ ನಿಜವೇ, "ನಮ್ಮ ದೊಡ್ಡಪ್ಪನ ಮಗ ಇದ್ದ ನೋಡಿ, ಪಾಪ ! ಹಳ್ಳಿಯಲ್ಲಿ ಹೇಗಿದ್ದ, ಏನು ಕ್ಲೇಶ, ಏನು ಬಡತನ, ಕಷ್ಟಪಟ್ಟು ಹೇಗೆ ಮೇಲೆ ಬಂದ ನೋಡಿ" ಅನ್ನುವಂತೆ </span><span class="il" style="background-color: white; color: #222222; font-family: Arial, Helvetica, sans-serif; font-size: small;">ಮರಡೋನಾ</span><span style="background-color: white; color: #222222; font-family: Arial, Helvetica, sans-serif; font-size: small;">ನ ಜೀವನವಿತ್ತು. ಅವನು ಅಲ್ಲೆಲ್ಲೋ ಅರಮನೆಯಲ್ಲಿ ನಳನಳಿಸುತ್ತ ಕೂತ ಕೀರ್ತಿವಂತನಂತಿರಲಿಲ್ಲ, ಅವನು ನಮ್ಮಂತಿದ್ದ ನಿಮ್ಮಂತಿದ್ದ, ಗೆಲ್ಲುತ್ತಿದ್ದ, ಕುಸಿಯುತ್ತಿದ್ದ, ಹಾರುತ್ತಿದ್ದ, ಬೀಳುತ್ತಿದ್ದ. </span></p><div style="background-color: white; color: #222222; font-family: Arial, Helvetica, sans-serif; font-size: small;"><br /></div><div style="background-color: white; color: #222222; font-family: Arial, Helvetica, sans-serif; font-size: small;">"ಇವನು ನಮಗೆ ರೋಲ್ ಮಾಡೆಲ್ ಕಣ್ರೀ" ಅಂತ ಯಾರೂ ಹೇಳಿರಲಾರರು, ಫುಟ್ಬಾಲನ್ನು ತುಳಿದ ಹಾಗೆ ದಾರಿದ್ರ್ಯ, ದುರ್ವ್ಯಸನಗಳು, ವಿವಾದಗಳು, ಊದಿಕೊಂಡ ದೇಹ, ಒತ್ತಡಗಳು ಇಂಥದನ್ನೆಲ್ಲ ಮೆಟ್ಟಿ, ಮೀಟಿ ಮೇಲೆ ಬಂದಿದ್ದ, ರಾರಾಜಿಸಿದ್ದ. ಮೈದಾನದಲ್ಲಿ ಓಡುವಾಗ, ಹೀಗೆ ಮುಗ್ಗರಿಸಿ, ಹಾಗೆ ಎದ್ದು, ಇಲ್ಲಿ ಕುಣಿದು, ಅಲ್ಲಿ ಬಿದ್ದು ಅತ್ತಿತ್ತ ಓಡುವವನಂತೆ <span class="il">ಮರಡೋನಾ</span> ಬದುಕಿದ್ದ. </div><div style="background-color: white; color: #222222; font-family: Arial, Helvetica, sans-serif; font-size: small;"><br />ಅವನ ಕಥೆಯ ಪುಸ್ತಕದಲ್ಲಿ, "ಇದೆಲ್ಲ ಯಾಕೆ ಬೇಕಿತ್ತು" ಅನಿಸುವಂಥ ಅಧ್ಯಾಯಗಳಿವೆ. "ಪಕ್ಕದ್ಮನೆ ಅಂಕಲ್ಲು, ಮೊದಲು ಚೆನ್ನಾಗಿದ್ರಲ್ಲ, ಹೀಗ್ಯಾಕಾದ್ರು" ಅಂತ ಮೋರೆ ಕಿವುಚುವಂತೆ ಮಾಡುವ ಸನ್ನಿವೇಶಗಳೂ ಉಂಟು. ಅವೆಲ್ಲವನ್ನು ಮೀರಿ ಆ ಅಮರ ಗೋಲಿದೆ, ಶೇಖರಿಸಿಡುವುದಕ್ಕೆ ಅಂಥ ಉನ್ಮಾದದ ಅಮರ ಕ್ಷಣಗಳಿವೆ, ಇವತ್ತೂ ನಾಳೆಯೂ ನಾಡಿದ್ದೂ ನೆನಪಿಸಿಕೊಂಡು ರೋಮಾಂಚನ ಪಡಬಹುದಾದ ಮಾಯಕದ ಗಳಿಗೆಗಳಿವೆ. ಒಬ್ಬ ಆಟಗಾರ ಬಿಟ್ಟುಹೋಗಬೇಕಾದ್ದು ಅಂಥ ಕ್ಷಣಗಳ ಉಡುಗೊರೆಯನ್ನೇ. <br /><div>(ರೋಹಿತ್ ಬ್ರಿಜನಾಥ್ ಬರೆದ ಲೇಖನವೊಂದರ ಭಾವಾನುವಾದ)</div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiwz_-GvC9eKa0_j9W54OZ4KLr_biZKkYUtf2iobtbJ2WNLuBpollj47KxN2ig9hC-FET4ap3_-hN_Dd5V37C8oh7jLgbOVqseYGxj3pvtlntS2eYFKxukaSNROSGq7Ys-UQoAchnF5gRA/s1829/42ebcb99-35f0-4e5e-988a-fe81d47f1e83.jpg" imageanchor="1" style="margin-left: 1em; margin-right: 1em;"><img border="0" data-original-height="1829" data-original-width="899" height="320" src="https://blogger.googleusercontent.com/img/b/R29vZ2xl/AVvXsEiwz_-GvC9eKa0_j9W54OZ4KLr_biZKkYUtf2iobtbJ2WNLuBpollj47KxN2ig9hC-FET4ap3_-hN_Dd5V37C8oh7jLgbOVqseYGxj3pvtlntS2eYFKxukaSNROSGq7Ys-UQoAchnF5gRA/s320/42ebcb99-35f0-4e5e-988a-fe81d47f1e83.jpg" /></a></div><br /><div><br /></div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-45396505840170755232020-12-19T08:42:00.005-08:002020-12-19T08:42:39.810-08:00ರವಿ ಬೆಳಗೆರೆ<p> <span style="background-color: white; color: #050505; font-family: inherit; font-size: 15px; white-space: pre-wrap;">ನನ್ನ ಎಂಜಿನಿಯರಿಂಗಿನ ರೂಮ್ ಮೇಟ್, ಹತ್ತಿರದ ಗೆಳೆಯ ಪ್ರವೀಣ ಈಗ ಸಿಕ್ಕಿದರೂ ಮಾತು ಶುರು ಮಾಡುವುದು, "ನಿನ್ನ ರವಿ ಬೆಳಗೆರೆ ಈಗ ಎಂತ ಮಾಡ್ತಾ ಇದ್ದಾನೆ" ಎಂಬ ಧಾಟಿಯಲ್ಲೇ. ಆಗಿನ ಕಾಲದಲ್ಲಿ ಮಂಗಳವಾರವಾದರೆ 'ಹಾಯ್' ತರಲಿಕ್ಕೆ ಪೇಟೆಗೆ ಓಡಲು ಕಾಲು ಎಳೆಯುತ್ತಿತ್ತು, ಮನ ಎಳಸುತ್ತಿತ್ತು. ಜೋಗಿಯ ಜಾನಕಿ ಕಾಲಂ ಮತ್ತು ಬೆಳಗೆರೆಯ ಅಂಕಣಗಳ ಬಗ್ಗೆ ನನ್ನ ಪಾಠ್ಯ ಪುಸ್ತಕಗಳಿಗೆ ಅಸೂಯೆ ಹುಟ್ಟುತ್ತಿತ್ತೋ ಏನೋ ಅನ್ನಿಸುವಷ್ಟು ಓದುತ್ತಿದ್ದೆ ಅಂತ ಕಾಣುತ್ತದೆ. ನಾನು ಇಂಥವರ ಫ್ಯಾನು ಅನ್ನಬಹುದಾದಂತೆ ಓದಿದ್ದು ಬೀಚಿಯವರ ಪುಸ್ತಕಗಳನ್ನು. ಬೀಚಿಯವರ ಮಾತ್ರೆಗಳು, ಬೆಳ್ಳಿ ತಿಂಮ ನೂರೆಂಟು ಹೇಳಿದ, ಹುಚ್ಚು ಹುರುಳು, ಆರು ಏಳು ಸ್ತ್ರೀ ಸೌಖ್ಯ, ತಿಮ್ಮಿಕ್ಷನರಿ, ಮಾತನಾಡುವ ದೇವರುಗಳು ಇಂಥವೆಲ್ಲ ನನಗೆ ಓದುವ ಹುಚ್ಚು ಹಿಡಿಸಿದ ಪುಸ್ತಕಗಳು. ಆಮೇಲೆ ಅಂಥದ್ದೇ ಕಿಕ್ ಸಿಕ್ಕಿದ್ದು ಬಳಸಿ ಬರೆಯಲು ಕಂಠಪತ್ರದ ಉಲುಹುಗೆಡದಂತೆ ಬರೆದು ಬಿಸಾಕುತ್ತಿದ್ದಾರೇನೋ ಅನಿಸುತ್ತಿದ್ದ 'ಬೆಳಗೆರೆ ಉವಾಚ'ಗಳಲ್ಲಿ. ಕನ್ನಡದಲ್ಲಿ ಅತ್ಯಂತ ಪ್ರಖರವಾದ ವಿಡಂಬನೆ, ವ್ಯಂಗ್ಯ ಬಂದದ್ದು ಬೀಚಿ, ಚಂಪಾ ಮತ್ತು ಬೆಳೆಗೆರೆಯವರ ಪೆನ್ನುಗಳಿಂದ. </span></p><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಆದರೆ ಚಂಪಾರದ್ದು ಭಾವುಕತೆಯಿಲ್ಲದ ಜಗಳಗಂಟಿ ವ್ಯಂಗ್ಯ, ಬೀಚಿ ಮತ್ತು ಬೆಳಗೆರೆಯವರದ್ದು ಇನ್ನೊಂದು ತರದ, ಭಾವದ ಸ್ಪರ್ಶವಿರುವ, ತುಂಟತನ, ವಿಷಾದ ಎಲ್ಲ ಸೇರಿದ ವಿಡಂಬನೆ. ಮಾರ್ಕ್ ಟ್ವೈನ್, ಆಸ್ಕರ್ ವೈಲ್ಡ್ , ಬರ್ನಾರ್ಡ್ ಷಾ , ಎಚ್ ಎಲ್ ಮೆಂಕನ್, Steve Martin,Woody Allen, Groucho Marx ಮುಂತಾದವರ witty ಸಾಲುಗಳನ್ನು ಸವಿದವರಿಗೆ ಕನ್ನಡದಲ್ಲಿ ಅಂಥದ್ದನ್ನು ಧಾರಾಳವಾಗಿ ಕೊಟ್ಟವರೆಂದರೆ ಬೀಚಿ, ಬೆಳಗೆರೆ ಮತ್ತು ಜೋಗಿ ಎನ್ನಬಹುದು. ಸುಮ್ಮನೆ ಕೇಳಿದವರು ಓಡಿಹೋಗುವಂತೆ ಬಯ್ಯುವುದಕ್ಕೂ ತುಂಟತನದಲ್ಲಿ ಕೆಣಕಿ,ಮಾತು ಸ್ಫಟಿಕದ ಶಲಾಕೆಯಾಗುವಂತೆ ಝಾಡಿಸುವುದಕ್ಕೂ ಇರುವ ವ್ಯತ್ಯಾಸ ಕಾಣಬೇಕಾದರೂ ಬೀಚಿ, ಬೆಳಗೆರೆ ಇವರುಗಳ ವಿಡಂಬನೆಗಳನ್ನೂ ಬೇರೆ ಟ್ಯಾಬ್ಲಾಯ್ಡ್ ಗಳು ಬಳಸಿದ ಬೈಗುಳಗಳನ್ನೂ ಹೋಲಿಸಿ ನೋಡಬೇಕು. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ರಾಜೀವ್ ಹತ್ಯೆ, ಗಾಂಧೀ ಹತ್ಯೆ, ಸಂಜಯ್ ಗಾಂಧಿ,ಮುಸ್ಲಿಂ ಇಂಥ ವಿಷಯಗಳ ಬಗ್ಗೆ ಇಷ್ಟು ಇಂಟೆರೆಸ್ಟಿಂಗ್ ಆಗಿ, balanced ಆಗಿ ಕನ್ನಡದಲ್ಲಂತೂ ಬೇರೆ ಯಾರೂ ಬರೆದಿಲ್ಲ ಅನ್ನಬೇಕು. ಭೂಗತ ಲೋಕವೆಂಬ ಹುತ್ತದೊಳಕ್ಕೆ ಕೈ ಹಾಕಿ ಬರೆದ 'ಪಾಪಿಗಳ ಲೋಕದಲ್ಲಿ' ಕೂಡಾ ಒಂದು ಅಸಾಧಾರಣ ಕೃತಿ. ಸಮಾಜದಲ್ಲಿ ಕ್ರಿಮಿನಲ್ಲುಗಳು ಹೇಗೆ ಮತ್ತು ಯಾಕೆ ಸೃಷ್ಟಿಯಾಗುತ್ತಾರೆ ಎಂಬುದರ ಅಧ್ಯಯನ ಮಾಡಿದರೆ, "ಇಂಥಾ ಕೃತಿಗಳು ಸಮಾಜಕ್ಕೆ ಒಳ್ಳೆಯದಲ್ಲ" ಎಂಬ ಆರೋಪಗಳಲ್ಲಿ ವೈಜ್ಞಾನಿಕ ಸತ್ಯ ಇಲ್ಲ ಅಂತ ಗೊತ್ತಾದೀತು. ಅದನ್ನು ಓದಿ ಇಷ್ಟ ಪಟ್ಟ ನಾನೇನೂ ಮಚ್ಚು ಹಿಡಿದು ರೌಡಿಯಾಗಿಲ್ಲ! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಈಗಲೂ ಮೆಚ್ಚಬಹುದಾದ 'ಪಾವೆಂ ಹೇಳಿದ ಕಥೆ', ಕಣ್ಣೀರು ತೊಟ್ಟಿಕ್ಕುವಂತೆ, ರಕ್ತ ಕುದಿಯುವಂತೆ ಮಾಡುವ ‘ಹಿಮಾಲಯನ್ ಬ್ಲಂಡರ್’ ಇವೆರಡನ್ನೇ ಬೆಳಗೆರೆ ಬರೆದಿದ್ದರೂ ದೊಡ್ಡ ಹೆಸರೇ ಮಾಡಿರುತ್ತಿದ್ದರು. ಬಸ್ ಸ್ಟಾಂಡಿನಲ್ಲಿ ಮೈಕ ಸಿಕ್ಕಿತೆಂದು, ಅನೌನ್ಸರ್ ಒಬ್ಬನು ಸಿಕ್ಕಾಪಟ್ಟೆ ಮಾತಾಡುವ ಕಥೆ, 'ಪಾವೆಂ ಹೇಳಿದ ಕಥೆ', ಕದಿಯುವ ಚಟ ಇರುವ ಅಮ್ಮನ ಕಥೆ ಇವೆಲ್ಲ ವಿಶಿಷ್ಟ ಸೃಷ್ಟಿಗಳು. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">'ಅಸಲಿಗೆ', 'ನಂಗೊತ್ತು' Fine. ಬರ್ಬಾದ್, ಗಾಯಬ್, ಏಕ್ದಮ್, ನಿಕೃಷ್ಟ, ಮಟಾಷ್, 'ಹಟಕ್ಕೆ ಬಿದ್ದವನಂತೆ' ,'ಅಜಮಾಸು', ಪಟ್ಟಾಗಿ ಕೂತು 'ಬರೋಬ್ಬರಿ', 'ಮಟ್ಟಸ', ’ದರ್ದು’, "ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ? ಊಹುಂ, ಗೊತ್ತಿಲ್ಲ" 'ಅಫಿಡವಿಟ್ಟು', 'ಅರೆ ಇಸ್ಕಿ', “ಒಂದ್ಕಡೆಯಿಂದ ತಿಂದು ಹಾಕೋಣ ಅನ್ನೋಷ್ಟು ಚೆಂದ ಕಾಣ್ತಿದೀಯ ಇವತ್ತು!'' ಮುಂತಾದ ಟ್ರೇಡ್ಮಾರ್ಕ್ ಪದಪ್ರಯೋಗಗಳು,ಕುಟುಕುವ, ಕುತೂಹಲವನ್ನು ಕದಡಿ ಮಿಸುಕಾಡಿಸುವ, ಮಿಡಿಯುವ, ಬುದ್ಧಿ ಹೇಳುವ, ತುಂಟತನದ, ಭಾವದ ಮೂಲಕವೇ ಸ್ಪರ್ಶಿಸುವ ಬೆಳಗೆರೆ ಶೈಲಿ ಅನನ್ಯ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ನಾನು ಒಂದು ಹತ್ತು ವರ್ಷ ಡ್ರಗ್ ಅಡಿಕ್ಟ್ ಆದವನಂತೆ ಹಾಯ್ ಓದಿದ್ದೆ. ಅದರ ಕ್ರೈಂ ವರದಿಗಳನ್ನು ಓದಿದ್ದು ಕಡಮೆ, ಅಂಕಣಗಳು, ಸಿನೆಮಾ ಸುದ್ದಿ ಇಂಥವೇ ಜಾಸ್ತಿ ಓದಿದ್ದು. ಆಮೇಲಾಮೇಲೆ ಅದದೇ ರಿಪೀಟ್ ಆಗುತ್ತದೆ, ಸರಕು ಮುಗಿದಿದೆ, ಬೋರು ಹೊಡೆಯುತ್ತಿದೆ, ಲೇಖಕ ತನ್ನ ಸರಕು ಖಾಲಿಯಾಗಿ, ಅಭ್ಯಾಸ ಬಲದಿಂದ ಬರೆಯತೊಡಗಬಾರದು ಅನಿಸಿತ್ತು. ಹಾಗನ್ನಿಸಿ 2012ರ ಸುಮಾರಿಗೆ ನಿಧಾನಕ್ಕೆ ಹಾಯ್ ಓದುವುದನ್ನು ಬಿಟ್ಟೆ. ಹೀಗೆ ಹತ್ತು ವರ್ಷ ಒಬ್ಬ ಓದುಗನನ್ನು ಹಿಡಿದಿಡುವುದು ಕಡಮೆ ಮಾತಲ್ಲ. ಬೆಳಗೆರೆಯೂ ತಮ್ಮ ಬಗ್ಗೆ ಸುಳ್ಳು, ಉತ್ಪ್ರೇಕ್ಷೆ ಮತ್ತೊಂದೆಲ್ಲ ಬರೆದುಕೊಳ್ಳುತ್ತಾರೆ ಅನಿಸಿತ್ತು, ಹಾಗಾಗಿ ಅವರ ಬರೆಹಗಳನ್ನು, ಖಾಸ್ ಬಾತ್ ಗಳನ್ನೂ ಕೂಡಾ ಕಥೆ ಅಂದುಕೊಂಡು ಓದುತ್ತಿದ್ದದ್ದೂ ಇತ್ತು. ಮುಟ್ಟಿದ್ದನ್ನೆಲ್ಲ ಒರೆಸುವ ಸ್ವಭಾವ ಇರುವ ತಮಿಳು ಹುಡುಗಿಯೊಬ್ಬಳ ಕಥೆ, ಒಂದು rogue ಸೈನಿಕರ ಗುಂಪನ್ನು ಒಂದು elite ಬಟಾಲಿಯನ್ನಾಗಿ ಪರಿವರ್ತನೆ ಮಾಡಿದವನ ಕಥೆ ಇಂಥವೆಲ್ಲ ಖಾಸ್ ಬಾತಿನ ರೂಪದಲ್ಲಿ ಬಂದ ಒಳ್ಳೆಯ ಸಣ್ಣ ಕಥೆಗಳೇ ಆಗಿದ್ದವು ಕೂಡಾ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅರಾ ಮಿತ್ರ, ಕೃಷ್ಣೇ ಗೌಡ, ಪ್ರಾಣೇಶ್, ಹಿರಣ್ಣಯ್ಯ ಮುಂತಾದವರ ಜೊತೆಗೆ ನಿಲ್ಲಿಸಿದರೂ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡಾರು ಎನ್ನಿಸುವಂಥ ಭರ್ಜರಿ ಭಾಷಣಕಾರನೂ ರವಿಯವರ ಒಳಗಿದ್ದ. ಕಾಮರಾಜ ಮಾರ್ಗ ಪುಸ್ತಕ ಪ್ರಕಟವಾದಾಗಿನ ಸಭೆ ನನಗಿನ್ನೂ ನೆನಪಿದೆ. ಒಂದಿಡೀ ರವೀಂದ್ರ ಕಲಾಕ್ಷೇತ್ರ(ಅಥವಾ ಟೌನ್ ಹಾಲು) ತುಂಬಿ, ಹೊರಗೆ ಸ್ಕ್ರೀನು ಹಾಕಿ, ಅದನ್ನು ನೋಡಲಿಕ್ಕೂ ಜನತುಂಬಿ, 'ಪುಸ್ತಕದ ಕಾರ್ಯಕ್ರಮಕ್ಕೆ ಇಷ್ಟು ಜನ ಎಲ್ಲ ಬರ್ತಾರಾ' ಅನ್ನಿಸಿದ ಕಾರ್ಯಕ್ರಮ. ಅವತ್ತು ರಾಜಕಾರಣಿ ರಮೇಶ್ ಕುಮಾರ್ ಅವರದ್ದು ಎಲ್ಲರನ್ನೂ ಗೆದ್ದ ವಾಗ್ಜರಿ. "ಈ ಭಾಷಣ ಆದ್ಮೇಲೆ ಯಾರು ಮಾತಾಡಿದ್ರೂ ಡಲ್ ಹೊಡೆಯುತ್ತೆ" ಅಂತ ಶುರು ಮಾಡಿದ ಬೆಳಗೆರೆ ಅಷ್ಟೇ ಆಕರ್ಷಕವಾಗಿ ಮಾತಾಡಿ ಸಭಾಸದರನ್ನು ಮೋಡಿ ಮಾಡಿ ಬಿಟ್ಟಿದ್ದರು. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅವರ ಕುಣಿ ಕುಣಿಯುವ ಶಕ್ತಿಶಾಲಿ ಗದ್ಯ, ಹಿಂಡಿ ಬಿಡುವ ಭಾವುಕತೆ, ಕುಕ್ಕಿ ಬಿಡುವ ಹರಿತವಾದ ವ್ಯಂಗ್ಯ, ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಚಿತ್ರಕ ಶಕ್ತಿ, ಅಳುಕಿಲ್ಲದೆ ಬದುಕಿನ ವಿಚಿತ್ರ ಮುಖಗಳಿಗೆ ಕನ್ನಡಿ ಹಿಡಿಯುವ ಗುಣ, ಸವಕಲಾಗದ ಗರಿಗರಿ ಭಾಷೆ, ತೀವ್ರತೆ, ಪುಸ್ತಕ ಬರೆಯಲು ಮಾಡುತ್ತಿದ್ದ ರಿಸರ್ಚು ಇವೆಲ್ಲ ಪ್ರಶಂಸನೀಯ. ಇಪ್ಪತ್ತು ವರ್ಷಗಳ ಖಾಸ್ ಬಾತನ್ನು ನೋಡಿ, ಹೇಳಿದ್ದನ್ನೇ ಹೇಳುವ ಸಾಧಾರಣ ಮಟ್ಟದವನ್ನು ಬಿಟ್ಟು, ಅದ್ಭುತವಾದವುಗಳನ್ನು ಹೆಕ್ಕಿ "ಬೆಸ್ಟ್ ಆಫ್ ಖಾಸ್ ಬಾತ್" ಅಂತ ಮಾಡಿದರೆ ಒಂದು ಮೂರು ಸಂಪುಟಗಳಿಗೆ ಆಗುವಷ್ಟು ವಸ್ತು ಅಲ್ಲೇ ಸಿಕ್ಕೀತು. ಹಾಗೆ ನಾನೇ ಒಂದು ದಿನ ಮಾಡಿಯೇನು ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ ಕೂಡಾ ! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">Alexander Mackendrick ಎಂಬ ನಿರ್ದೇಶಕ , ಮಾಸ್ಟ್ರು ಒಂದು ಸಲ ಹೇಳಿದ್ದ- ಹೊಸತಾಗಿ ಸಿನೆಮಾಕ್ಕೆ ಬರೆಯುವವರು ಈ ಕ್ಲಾಸಿಕ್ಕುಗಳು , ಅವಾರ್ಡ್ ವಿನ್ನಿಂಗೂ , ಕ್ರಿಟಿಕಲಿ acclaimed ತರದ್ದನ್ನೆಲ್ಲ ಓದ ಹೋಗಬಾರದು. ಅವರು ಓದಬೇಕಾದ್ದು pulp ಫಿಕ್ಷನ್ ಅನ್ನಿಸಿಕೊಂಡ ರೋಚಕ ಪತ್ತೆದಾರಿ, ಥ್ರಿಲ್ಲರ್ ರೈಟರುಗಳನ್ನು. ಕಸುಬು ಕಲಿಯಲು ಅದೇ ಸೂಕ್ತ ಅಂತ. </div><div dir="auto" style="font-family: inherit;">ನಾವೂ ಅದನ್ನು ಒಪ್ಪಬಹುದು. ಹೊಸತಾಗಿ ಬರೆಯ ಹೊರಟವರು, ಈಗಷ್ಟೇ ಓದಲು ತೊಡಗಿದವರು ಎಲ್ಲ ನಮ್ಮ ವಿಮರ್ಶಕರು ಮೆಚ್ಚುವ ಘನ ಗಂಭೀರ ಸಾಹಿತ್ಯ ಓದುವುದು ಸೂಕ್ತವಲ್ಲ(ಮಾಸ್ತಿ, ತೇಜಸ್ವಿ ತರದ ಜನಪ್ರಿಯರೂ, ವಿಮರ್ಶಕರ ಮೆಚ್ಚುಗೆ ಗಳಿಸಿದವರೂ ಆದ exceptionಗಳಿದ್ದಾರೆ ಆ ಮಾತು ಬೇರೆ). ಹೊಸಬರು ಓದಬೇಕಾದ್ದು ಅನಕೃ, ತರಾಸು, ಬೀಚಿ, ಬೆಳಗೆರೆ ತರದ craftsmanಗಳ ಆಕರ್ಷಕ, ರುಚಿಕಟ್ಟಾದ ಗದ್ಯವನ್ನೇ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಹೋಗಿಬನ್ನಿ ಬೆಳಗೆರೆ.</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-79459682548801271412020-12-19T08:42:00.001-08:002020-12-19T08:42:08.092-08:00ಲೋಕೋ ಭಿನ್ನ ರುಚಿ:<p> <span style="background-color: white; color: #050505; font-family: inherit; font-size: 15px; white-space: pre-wrap;">ಕೆಲವು ವಿಚಾರಗಳಿರುತ್ತವೆ, ಅವು ಅರ್ಥಪೂರ್ಣವೂ, ಸತ್ತ್ವಭರಿತವೂ ಆಗಿರುತ್ತವೆ, ಆದರೆ ಅವುಗಳನ್ನೂ ಯಾರೂ ಪಾಲಿಸುವುದಿಲ್ಲ! 'ಎಲ್ಲರಿಗೂ ಗೊತ್ತಿರುವ ಆದರೆ ಯಾರೂ ಓದದ ಕೃತಿಯೇ ಕ್ಲಾಸಿಕ್' ಎಂಬಂತೆ ಈ ಆದರ್ಶಗಳ ಪಾಡು. ವಿವೇಕಿಗಳ ಬಾಯಿಂದ ಬಂದ, 'ಲೋಕೋ ಭಿನ್ನ ರುಚಿ:' ಎಂಬ ಉಕ್ತಿಗೂ ಈ ದುರ್ಗತಿ ಒದಗಿದೆಯೇನೋ. 'ಈ ಹೇಳಿಕೆಯೊಂದು ಕ್ಲೀಷೆ' ಅನ್ನಿಸುವ ಮಟ್ಟಿಗೆ ಅದು ಎಲ್ಲರಿಗೂ ಗೊತ್ತಿದೆ, ಆದರೆ ಅದನ್ನು ಮನಸಾರೆ ಒಪ್ಪಿ, ಅನುಷ್ಠಾನಕ್ಕೆ ತರುವವರು ಎಷ್ಟು ಜನರಿದ್ದಾರೆ ಅಂತ ಲೆಕ್ಕ ಹಾಕಿದರೆ, ಹತ್ತು ನಿಮಿಷದಲ್ಲಿ ಲೆಕ್ಕ ಮುಗಿದೀತು! ಕಳೆದ ಸೋಮವಾರ ಫೇಸ್ಬುಕ್ಕಿನಲ್ಲಿ ಒಂದು ಸಿನೆಮಾದ ಬಗ್ಗೆ ಬರೆದವನನ್ನು ನೋಡಿ, 'ನನ್ನ ಅಭಿಪ್ರಾಯವೊಂದು ರಾಜಾಜ್ಞೆ, ಲೋಕದ ಸಕಲ ಚರಾಚರ ವಸ್ತುಗಳೂ ಇದನ್ನು ಮತ್ತು ಇದನ್ನು ಮಾತ್ರ ಒಪ್ಪಬೇಕು' ಎಂಬ ಧಾಟಿ ಅವನಲ್ಲಿರುತ್ತದೆ. ಮೋದಿಯ ವಿರುದ್ಧವೋ ಪರವೋ ದಿನಗಟ್ಟಲೆ ಮಾತಾಡುವರನ್ನು ನೋಡಿ, 'ಇಡೀ ಲೋಕದ ಒಳಿತು ಕೆಡುಕುಗಳು ನನಗೊಬ್ಬನಿಗೇ ಮಾತ್ರ ಗೊತ್ತಿರುವುದು, ಎಲ್ಲ ಸರಿತಪ್ಪುಗಳ ನಿಶ್ಚಯವನ್ನು ನಾನೊಬ್ಬನೇ ಗುತ್ತಿಗೆ ತೆಗೆದುಕೊಂಡಿದ್ದೇನೆ' ಎಂಬ ಭಾವ ಅಲ್ಲಿ ಇಣುಕುತ್ತಿರುತ್ತದೆ. ನನಗೆ ಇಷ್ಟವಾಗದಿದ್ದರೆ ಆ ಸಿನೆಮಾ ಡಬ್ಬಾ ಅದನ್ನು ಬೇರೆ ಯಾರೂ ಇಷ್ಟಪಡುವಂತಿಲ್ಲ, ನನಗೆ ಹಿಡಿಸದ ಪುಸ್ತಕ ಕಳಪೆ, ಅದನ್ನು ಮೆಚ್ಚುವವರು ಅಭಿರುಚಿಹೀನರು, ನನ್ನ ಫೇವರಿಟ್ ನಟನಿಗೆ ಮಾತ್ರ ನಟನೆ ಗೊತ್ತಿರುವುದು ಅಂತೆಲ್ಲ ಹಲವರು ಒಳಗೊಳಗೇ ನಂಬಿರುತ್ತಾರೋ ಏನೋ ಅಂತ ಒಮ್ಮೊಮ್ಮೆಯಾದರೂ ಅನಿಸುತ್ತದೆ. ವಿ. ಸೀತಾರಾಮಯ್ಯನವರ ಈ ಕೆಳಗಿನ, ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ, ಸಾಲುಗಳನ್ನು ಉದ್ಧರಿಸಲಿಕ್ಕೆ ಇಷ್ಟು ಪೀಠಿಕೆ ಹಾಕಿದೆ ಸ್ವಾಮೀ:</span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">"ವಿಮರ್ಶೆಯಲ್ಲಿ ಕೊನೆಯ ಮಾತೆಂಬುದಿಲ್ಲ. ಕಾವ್ಯದ ಅರ್ಥವೆಂಬುದು ರುಚಿ, ಅನುಭವ, ತಾರತಮ್ಯಜ್ಞಾನ ಇರುವವರೆಲ್ಲರೂ ತಾವು ತಾವು ಮಾಡಿಕೊಳ್ಳುವ ಅರ್ಥ. ಅವರ ಬೆಲೆ, ವಿನೋದ, ತರ್ಕ, ತೀರ್ಮಾನ , ಸುಹೃತ್, ಬಗೆಬಗೆಯ ಸಾಹಿತ್ಯ ಪರಿಚಯ, ಮೇಧಾಶಕ್ತಿ ಇದ್ದಂತೆಲ್ಲ ಅವರು ತಮ್ಮ ತಮ್ಮ ಕೈಲಾಸಗಳಲ್ಲಿ ಆಳಬಹುದು. ಉಳಿದೆಲ್ಲಕ್ಕಿಂತ ತಮ್ಮ ಕೈವಲ್ಯವೇ ಮೇಲಿನದೆನ್ನಬಹುದು. ಒಂದು ತೀರ್ಮಾನ ಹೊಳೆದ ಕೂಡಲೇ ಅದರ ಪರವಾಗಿ ವಾದ, ತರ್ಕ, ಹಟ ಸಹಜ; ಬೇರೆಯವುಗಳ ಖಂಡನೆಗೆ ಮನಸ್ಸು ತುಯ್ಯುತ್ತದೆ. ಇದು ಸಾಮಾನ್ಯ ಮಾನವ ಮನೋವೃತ್ತಿ. ಆದರೆ ನನ್ನ ಅಭಿಪ್ರಾಯವೇ ಸರ್ವಶ್ರೇಷ್ಠವೆಂದು ಯಾರು ಹೇಳುವುದೂ ದಾರ್ಷ್ಟ್ಯವಾದೀತು." </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಏನಂತೀರಿ ?</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-19314150084198561992020-12-19T08:41:00.002-08:002020-12-19T08:41:28.924-08:00ಒಂದು ಕಾರ್ಪೊರೇಟು ನೀತಿಕಥೆ<p> <span style="background-color: white; color: #050505; font-family: inherit; font-size: 15px; white-space: pre-wrap;">ಬೀಚಿಯವರ ಒಂದು ಹಳೇ ಜೋಕನ್ನು ನೇಟಿವಿಟಿಗೆ ತಕ್ಕಂತೆ ಸ್ವಲ್ಪ ಬದಲಾಯಿಸಿ ರಚಿಸಿರುವ ಒಂದು ಕಾರ್ಪೊರೇಟು ನೀತಿಕಥೆ:</span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">ತಿಂಮನಿಗೆ ಏನೇನು ಮಾಡಿದರೂ ವಿದ್ಯೆ ತಲೆಗೆ ಹತ್ತದು, ಹಾಗಾಗಿ ಕ್ಲಾಸ್ ರೂಮೂ ಬದಲಾಗದು. ಹೆಡ್ ಮಾಸ್ತರರಿಗೂ ಸುಸ್ತಾಗಿ, ತಿಂಮನನ್ನು ಹೇಗಾದರೂ ಪಾಸು ಮಾಡಿ ಪುಣ್ಯ ಕಟ್ಟಿಕೊಳ್ಳುವಂತೆ ಮಾಷ್ಟ್ರುಗಳಲ್ಲಿ ಹೇಳಿದ್ದಾಯಿತು. ಶಾಲೆಯಲ್ಲಿ ಒಂದು appraisal ಸಮಿತಿ ಮಾಡಿ, ಮೀಟಿಂಗು ನಡೆಸಿ, ಕಡೆಗೆ ತಿಂಮನಿಗೆಂದೇ ಪ್ರತ್ಯೇಕ ಪರೀಕ್ಷೆ ಮಾಡುವುದೆಂದಾಯಿತು, ಹೆಚ್ಚು ಪ್ರಶ್ನೆಗಳನ್ನು ಕೆಳತಕ್ಕದ್ದಲ್ಲ, ಹೇಗಾದರೂ ಯಾವುದಾದರೂ ಒಂದು ಉತ್ತರ ಬಂದರೂ ಪಾಸು ಮಾಡಿ ಅಂದರು ಹೆಡ್ ಮಾಸ್ತರರು. </div><div dir="auto" style="font-family: inherit;">ಮೊದಲಿಗೆ ಇಂಗ್ಲೀಷು ಮಾಸ್ಟರು ಒಂದೇ ಒಂದು ಶಬ್ದದ ಸ್ಪೆಲ್ಲಿಂಗು ಬರೆಯಲು ಹೇಳಿದರಂತೆ, ಯಾವುದಾದರೂ ಒಂದು ಅಕ್ಷರ ಸರಿಯಾದರೂ ಪಾಸು ಮಾಡುವುದೆಂದು ನಿರ್ಣಯ ಮಾಡಿ, "ಎಂಚ" ಅಂತ ಕಣ್ಣು ಮಿಟುಕಿಸಿದರಂತೆ. ಏನು ಮಾಡುವುದು, ಮಾಷ್ಟ್ರ ಗ್ರಹಚಾರ! ಅವರು ಕೊಟ್ಟ ಶಬ್ದ- "ಕಾಫಿ", ಅದನ್ನು ತಿಂಮ ಬರೆದದ್ದು ಹೀಗೆ :</div><div dir="auto" style="font-family: inherit;">KAAPI. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಮುಂದೆ ಕನ್ನಡ ಮಾಷ್ಟ್ರ ಸರದಿ, ಅವರೋ ಏಳು ಕೆರೆಯ ನೀರು ಕುಡಿದವರು, ಪ್ರಶ್ನೆ ಪತ್ರಿಕೆಯನ್ನು ಹೀಗೆ ರಚಿಸಿ ಕೊಟ್ಟರು :</div><div dir="auto" style="font-family: inherit;">೧. ಕನ್ನಡದಲ್ಲಿ ಒಟ್ಟು ಎಷ್ಟು ಸಂಧಿಗಳಿವೆ ?</div><div dir="auto" style="font-family: inherit;">೨. ಕನ್ನಡದ ಮೂರು ಸಂಧಿಗಳು ಯಾವುವು ?</div><div dir="auto" style="font-family: inherit;">೩. ಕನ್ನಡ ಸಂಧಿಯಾದ ಆಗಮ ಸಂಧಿಗೆ ಒಂದು ಉದಾಹರಣೆ ಕೊಡಿ </div><div dir="auto" style="font-family: inherit;">೪. ಕನ್ನಡ ಸಂಧಿಯಾದ ಆದೇಶ ಸಂಧಿಗೆ ಒಂದು ಉದಾಹರಣೆ ಕೊಡಿ</div><div dir="auto" style="font-family: inherit;">೫. ಕನ್ನಡ ಸಂಧಿಯಾದ ಲೋಪ ಸಂಧಿಗೆ ಒಂದು ಉದಾಹರಣೆ ಕೊಡಿ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ತಿಂಮನೇನು ಇಷ್ಟಕ್ಕೆಲ್ಲ ಸೋಲುವವನೇ? ಎಲ್ಲ ಪ್ರಶ್ನೆಗಳಿಗೂ, "ಗೊತ್ತಿಲ್ಲ" ಅಂತಲೇ ಬರೆದ! </div><div dir="auto" style="font-family: inherit;">ಮಾಷ್ಟ್ರು ಬಿಡುತ್ತಾರೆಯೇ? ಗೊತ್ತು + ಇಲ್ಲ = ಗೊತ್ತಿಲ್ಲ, ಲೋಪ ಸಂಧಿಗೆ ಸರಿಯಾದ ಉದಾಹರಣೆಯೇ ಕೊಟ್ಟಿದ್ದಾನೆ, ಐದನೇ ಉತ್ತರ ಸರಿ ಅಂತ ಹೇಳಿ ಪಾಸು ಮಾಡಿದರಂತೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಕಾರ್ಪೊರೇಟ್ ನೀತಿ: "ಈ ಸಲ ಪ್ರಮೋಷನ್ ಸಿಗುತ್ತದೋ ಇಲ್ಲವೋ" ಎನ್ನುವುದು ಸರಿಯಾದ ಪ್ರಶ್ನೆಯಲ್ಲ. "ಈ ಸರ್ತಿ ಮ್ಯಾನೇಜರು/ಬಾಸು ಮನಸ್ಸು ಮಾಡುತ್ತಾರೋ ಇಲ್ಲವೋ" ಎಂಬುದೇ ಉಚಿತವಾದ ಪ್ರಶ್ನೆ.</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-20883505445214622292020-12-19T08:40:00.003-08:002020-12-19T08:40:38.545-08:00ಎರಡು ಅನುವಾದಗಳು<p> <span style="background-color: white; color: #050505; font-family: inherit; font-size: 15px; white-space: pre-wrap;">ಅನುವಾದವೆನ್ನುವುದು ಎಷ್ಟೋ ಸರ್ತಿ, ಅಂಗಡಿಯಲ್ಲಿದ್ದ ಐಸ್ ಕ್ರೀಮನ್ನು ಆಸೆಪಟ್ಟು, ಬಟ್ಟಲೊಂದರಲ್ಲಿ ಹಾಕಿ, ಮನೆಗೆ ತರಹೊರಟಂತೆ ಆಗುವುದುಂಟು. ಮನೆಗೆ ಮುಟ್ಟುವಾಗ ಐಸು ಕ್ರೀಮು ಕರಗಿ ಸೊರಗಿ ನೀರಾಗಿ, ಮತ್ತೇನೋ ಆಗಿ, 'ಏಗಿದ್ದೆಲ್ಲ ಸುಮ್ಮನೆ' ಅನಿಸಿಬಿಡುತ್ತದೆ. ಎಷ್ಟೋ ಸಲ ದೊಡ್ಡವರು ಮಾಡಿದ ಅನುವಾದಗಳಲ್ಲಿಯೇ, "He is so cool" ಅನ್ನುವುದನ್ನು, 'ಅವನು ತಣ್ಣನೆಯ ಮನುಷ್ಯ' ಅಂತ ಮಾಡಿಬಿಟ್ಟಿದ್ದಾರೋ ಏನ್ಕತೆ ಅಂತ ತೋರುವುದಿದೆ. ಮೂಲ ಬಿಜೆಪಿ, ಅನುವಾದ ಕಾಂಗ್ರೆಸ್ಸು ಎಂಬಂತಾದರಂತೂ ಕಡುಕಷ್ಟ. ಎಲ್ಲೋ ಕೆಲವೊಮ್ಮೆ, ಬಿಎಂಶ್ರೀಯವರ ಅನುವಾದಗಳಲ್ಲೋ, ಜೋಗಿ, ರವಿ ಬೆಳಗೆರೆ ಅವರುಗಳು ಮಾಡಿದ ರೂಪಾಂತರಗಳಲ್ಲೋ ಚೀನಾದ ಗೋಬಿ ಮಂಚೂರಿ ನಮ್ಮದೇ ತಿಂಡಿ ಆಗಿಬಿಟ್ಟಂತೆ, ಅಲ್ಲಿಯದು ಇಲ್ಲಿಯದೇ ಆಗುವುದುಂಟು. ಹಾಗಾದರೆ, ಓದುಗರಿಗೆ ಗೋಬಿ ಮಂಚೂರಿಯನ್ನನ್ನು ಕಚ್ಚಿದ ಸುಖಪ್ರಾಪ್ತಿ. </span></p><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಸುಖವೋ ಕಷ್ಟವೋ, ಯಾವುದಕ್ಕೂ ಒಮ್ಮೆ ಷೆಲ್ಲಿಯ 'To a Skylark' ಕವನವನ್ನೊಮ್ಮೆ ನೋಡೋಣ. ಕನ್ನಡಿಗರ ಸುದೈವ ಎಂಬಂತೆ ಇಬ್ಬರು ಘನ ವಿದ್ವಾಂಸರು skylark ಎಂಬ ಹಕ್ಕಿಗೆ ಇಲ್ಲಿ ಗೂಡುಕಟ್ಟಿದ್ದಾರೆ. ಪಂಡಿತರ ಲೋಕದಲ್ಲಿ, "ಹುಲಿ ಅಂದ್ರೆ ಹುಲೀನೇ" ಎನ್ನಬಹುದಾದ ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ' ಎಂಬ ಹೆಸರಿನಲ್ಲೂ, ನನಗೆ ಇವತ್ತಿಗೂ ಅನುವಾದಕ್ಕೆ ಮಾದರಿಯಾಗಿರುವ ಬಿಎಂಶ್ರೀಯವರು `ಬಾನಾಡಿ' ಎಂದೂ ಈ ಪದ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಸುಮ್ಮನೆ ತಮಾಷೆಗೆ ಕೆಲವು ಸಾಲುಗಳನ್ನು ಅಕ್ಕಪಕ್ಕ ಇಟ್ಟು ಮೂಲದ ಒನಪನ್ನೂ, ಅನುವಾದದ ಒಯ್ಯಾರವನ್ನೂ, ಇಂಗ್ಲೀಷಿನ ಬಿಂಕವನ್ನೂ ಕನ್ನಡದ/ಹಳಗನ್ನಡದ ಬಿಗುಮಾನವನ್ನೂ ನೋಡೋಣ. ಇದೊಂತರ ತೆಂಡೂಲ್ಕರನನ್ನೂ ಲಾರಾನನ್ನೂ ಆಚೀಚೆ ಇಟ್ಟು ನೋಡಿದಂತೆ. ಬಿಎಂಶ್ರೀಯವರದ್ದು ಹೆಚ್ಚಿನ ಕಡೆ ಪಾಂಡಿತ್ಯದ ಭಾರ ಓದುವವರ ಮೇಲೆ ಬೀಳದಂತ ಸರಳ,ಲಲಿತ, ಭಾವಗೀತದ ಓಟ. ಗೋವಿಂದ ಪೈಗಳದ್ದು ಹಳೆಕಾಲದ ಪಂಡಿತರ ಬಿಗಿಯಾದ ಗತ್ತಿನ ನಡಿಗೆಯ ಕ್ರಮ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಮೊದಲ ಸಾಲುಗಳು ಹೀಗಿವೆ: </div><div dir="auto" style="font-family: inherit;">'Hail to thee blithe spirt! </div><div dir="auto" style="font-family: inherit;">Bird thou never wert,</div><div dir="auto" style="font-family: inherit;">That from heaven, or near it </div><div dir="auto" style="font-family: inherit;">pourest thyfull heart </div><div dir="auto" style="font-family: inherit;">In profuse strains of unpremeditated art'' </div><div dir="auto" style="font-family: inherit;">ಇದನ್ನು ಶ್ರೀಯವರು ಹೀಗೆ ಅನುವಾದಿಸಿದ್ದಾರೆ: </div><div dir="auto" style="font-family: inherit;">'ಆರು ನೀನೆಲೆ ಹರುಷ ಮೂರುತಿ? </div><div dir="auto" style="font-family: inherit;">ಹಕ್ಕಿಯೆಂಬರೆ ನಿನ್ನನು! </div><div dir="auto" style="font-family: inherit;">ತೋರಿ ದಿವಿಜರು ಸುಳಿವ ಬಳಿ,ಸುಖ </div><div dir="auto" style="font-family: inherit;">ವುಕ್ಕಿ ಬಹನಿನ್ನೆದೆಯನು </div><div dir="auto" style="font-family: inherit;">ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ'</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇದು ಪೈಗಳಲ್ಲಿ ಹೀಗೆ ಬಂದಿದೆ:</div><div dir="auto" style="font-family: inherit;">ಸೊಗಯಿಸೈ ಸುಖಜೀವಿ!</div><div dir="auto" style="font-family: inherit;">ನೆಗೆವಕ್ಕಿ ನೀನಲ್ಲ;</div><div dir="auto" style="font-family: inherit;">ಗಗನದಿಂದಲೊ ಗಗನದರುಗಿಂದಲೊ</div><div dir="auto" style="font-family: inherit;">ಮೊಗೆವೆ ತುಂಬೆದೆಯ </div><div dir="auto" style="font-family: inherit;">ಮುಂಬಗೆದಿಲ್ಲದಿಹ </div><div dir="auto" style="font-family: inherit;">ಬಿನ್ನಣಿಗೆಯುಗುವುದಾರ ಗಾಯನದ ಝರಿಯಿಂ </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇದರಲ್ಲಿ ಪೈಗಳದ್ದು ಮೂಲವನ್ನು ಇರುವ ಹಾಗೇ ತರುವ ಕ್ರಮ, ಶ್ರೀಯವರದ್ದು ಮೂಲದ ದಿಕ್ಕಿನಲ್ಲಿ ಸ್ವಲ್ಪ ಆಚೀಚೆ ಹೋಗುವ ದಾರಿ. pourest thy full heart In profuse strains of unpremeditated art ಅನ್ನುವುದರ ಕೊರಳಿಗೆ ಹಗ್ಗ ಬಿಗಿದು ಎಳೆತರುವುದು ಸಾಹಸದ ಕೆಲಸ. unpremeditated art ಅನ್ನುವುದರ ಭಾವ "ನೆನೆಯದ ಕಲೆಯ ಕುಶಲದ" ಅಂದಾಗ ಬರಲಿಲ್ಲ, "ಮುಂಬಗೆದಿಲ್ಲದಿಹ ಬಿನ್ನಣಿಗೆ ಉಗುವುದು" ಎಂದಾಗ ಮೂಲದ ಅಬ್ಬರವೇನೋ ಬಂತು, ಆದರೆ 'ಬಿನ್ನಣಿಗೆ' ಎಂಬ ಶಬ್ದಕ್ಕೆ ಡಿಕ್ಷನರಿ ಬೇಕಾದೀತು! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಬಿ ಎಂ ಶ್ರೀಯವರ "ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು ಎಂಬ ಸಾಲುಗಳಲ್ಲಿHigher still and higher/From the earth thou springest/Like a cloud of fire ಎಂಬ ಸಾಲುಗಳ ಸೊಗಸು ಮಾಯವಾಗಿದೆ. "ಉನ್ನತಂ ಮೇಣದರಿನುನ್ನತಂ ಭುವಿಯಿಂದ ನೀನ್ನೆಗೆವೆ ಕೆಂಡದುರಿ ಮೋಡದಂತೆ" ಎಂಬ ಪೈಗಳ ಸಾಲುಗಳು ಮೂಲಕ್ಕೆ ಹತ್ತಿರ. ಮುಂದೆ ಬರುವ And singing still dost soar, and soaring ever singest ಪೈಗಳಲ್ಲಿ - "ಗನ್ನದೊಳೇರುತಿನ್ನು ಹಾಡುವೆ, ಹಾಡುತಿನ್ನೇರುವೆ" ಅಂತ ಸಾಧಾರಣವಾಗಿದೆ. ಶ್ರೀಯವರ, "ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ" ಎಂಬಲ್ಲಿ ಪದಗಳನ್ನು ಕುಣಿಸಿರುವ ರೀತಿಯಿಂದ ಮಜಾ ಬಂದಿದೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಕೈಗೆ ಸಿಗದೇ ಜಾರಬಹುದಾದ ಒಂದು ಸಾಲು ಇದು: Thou dost float and run; Like an unbodied joy whose race is just begun. ಶ್ರೀಯವರ "ಮುಳುಗಿ ಏಳುವೆ, ಹರಿಯುವೆ, ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು" ಎಂಬಲ್ಲಿ ಮೂಲಕ್ಕೆ ಬೇರೆಯೇ ಟ್ವಿಸ್ಟ್ ಕೊಟ್ಟಿದ್ದಾರೆ. ಪೈಗಳ "ಮುಂಗತಿಗಣಂ ತೊಡಗಿದಂಗವಡೆಯದ ಸೊಗದ ಪಾಂಗಿನಿಂ ತೇಲಾಡಿ ಹರಿದಾಡುವೆ" ಎಂಬುದು, ಸ್ವಲ್ಪ ಹಳಗನ್ನಡದಂತಿದ್ದರೂ ಮೂಲದ ಚೆನ್ನಾದ ಮರುಸೃಷ್ಟಿ. unbodied joy = ಅಂಗವಡೆಯದ ಸೊಗ ಎಂಬುದುಕಣ್ಣು ಸೆಳೆಯುವ ಅನುವಾದ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಕಡೆಗೊಮ್ಮೆ ಬರುವ We look before and after, And pine for what is not ಎಂಬ ಸರಳವಾದ ಸಾಲು, ಗೋವಿಂದ ಪೈಗಳಲ್ಲಿ "ಹಿಂದುಮುಂದಕೆ ನೋಡಿ ಹೊಂದದನು ಹಲುಬಲಾವೊಂದು" ಅಂತಾಗಿ ಭಾವ ಅಷ್ಟಾಗಿ ಮೂಡುವುದಿಲ್ಲ, ಇಂತಲ್ಲಿ ಸರಳತೆಯೇ ಒಳ್ಳೆಯದು ಎಂಬಂತೆ, ಶ್ರೀಯವರ ಈ ಸಾಲುಗಳು ತಟ್ಟನೆ ಮನಮುಟ್ಟುತ್ತವೆ: "ಹಿಂದುಮುಂದನು ನೋಡಿ ನಮೆವೆವು ನೆನೆಯುತಿಲ್ಲದ ಸುಖವನು". ಹಾಗೆ ನೋಡಿದರೆ ಈ ಸಾಲು ಅತ್ಯಂತ ಮನೋಹಾರಿಯಾಗಿ ಮೂಡಿರುವುದು ಅಡಿಗರಲ್ಲಿ ಮತ್ತು ಪುತಿನ ಅವರಲ್ಲಿ, ಅವರು ಈ ಕವನದ ಅನುವಾದ ಮಾಡಿರದಿದ್ದರೂ ! ಅಡಿಗರ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ" ಎಂಬ ಸಾಲು ಷೆಲ್ಲಿಗಿಂತ ಒಂದು ಕೈ ಮೇಲೆಯೇ ಇದೆ. ಗೋಕುಲ ನಿರ್ಗಮನದಲ್ಲಿ ಪುತಿನ ಬರೆದಿರುವ ಈ ಸಾಲನ್ನು ಇವುಗಳ ಜೊತೆಯಿಟ್ಟು ನೋಡಿ, ಇದು ಉಳಿದೆಲ್ಲವನ್ನೂ ಮೀರಿಸುವಂತಿಲ್ಲವೇ: "ಬಯಕೆಯೊಳೇ ಬಾಳ್ ಕಳೆವುದು ಬಯಕೆಯು ದೊರೆತ ಚಣ/ ಬಯಸಿಕೆಯನೆ ಬಯಸುವ ತೆರವೇಕಹುದೆನ್ನ ಮನ" </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇನ್ನು ಷೆಲ್ಲಿಯ Our sweetest songs are those that tell of saddest thought ಎಂಬುದರ ಪಂಚ್ ಗೋವಿಂದ ಪೈಗಳ "ಸಂದ ಬೇವಸವ ಬಗೆ ತಂದೊರೆವುವೆಮ್ಮ ಸ್ವಾದಿಷ್ಠ ಗೀತಂ" ಎಂಬ ಸಾಲಿನಲ್ಲಿ ಸಿಗುವುದಿಲ್ಲ. ಶ್ರೀಯವರ, "ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು" ಎನ್ನುವುದರಲ್ಲಿಯೂ ಅಷ್ಟು ಪಂಚ್ ಇಲ್ಲ, ಭಾವಸ್ಫುರಣೆಯಿಲ್ಲ. ಈ ಸಾಲು ನಿಜವಾಗಿಯೂ ಸತ್ತ್ವಪೂರ್ಣವಾಗಿ ಇನ್ನೊಂದು ತರದಲ್ಲಿ ಬಂದಿರುವುದು ಬೇಂದ್ರೆಯವರ ಈ ಕೆಳಗಿನ ಸಾಲುಗಳಲ್ಲಿ ! </div><div dir="auto" style="font-family: inherit;">ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ</div><div dir="auto" style="font-family: inherit;">ನೀಡುವೆನು ರಸಿಕ ನಿನಗೆ</div><div dir="auto" style="font-family: inherit;">ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ</div><div dir="auto" style="font-family: inherit;">ಆ ಸವಿಯ ಹಣಿಸು ನನಗೆ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ವಿಶೇಷವೆಂದರೆ,ಇಬ್ಬರು ವಿಶಾರದರು ಒಂದೇ ಪದ್ಯವನ್ನು ಅನುವಾದಿಸಿದರೂ, ಒಂದೇ ಪದವನ್ನು ಬಳಸುವುದು ಇಲ್ಲ ಎಂಬಷ್ಟು ಕಡಮೆ ಎಂಬುದನ್ನು ಗಮನಿಸಿ. </div><div dir="auto" style="font-family: inherit;">ಹೀಗಿದೆ ಅನುವಾದಗಳ ಕಥೆ. ಅಂತೂ ಒಲಿಯದ ನಲ್ಲೆಯನ್ನು ಒಲಿಸಿಕೊಳ್ಳಲು ಹೆಣಗುವ ಹುಡುಗರಂತೆ ಬರೆಯುವವರು ಅನುವಾದಗಳನ್ನು ಮಾಡುತ್ತಲೇ ಇರುತ್ತಾರೆ.</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-70078857465347142102020-12-19T08:39:00.004-08:002020-12-19T08:39:43.148-08:00ಶೂಟಿಂಗ್ ದ ಪಾಸ್ಟ್<p><span style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">ನಿನ್ನೆ ವರ್ಲ್ಡ್ ಫೋಟೋಗ್ರಫಿ ದಿನದ ಸಾಲು ಸಾಲು ಪೋಸ್ಟುಗಳು ಕಾಣಿಸಿದಾಗ ನೆನಪಾದದ್ದು ಬಿಬಿಸಿ ವಾಹಿನಿಯ </span><span style="color: #050505; font-family: Segoe UI Historic, Segoe UI, Helvetica, Arial, sans-serif;"><span style="font-size: 15px; white-space: pre-wrap;">ಶೂಟಿಂಗ್ ದ ಪಾಸ್ಟ್ ಎಂಬ </span></span><span style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">ಒಂದು ಹಳೇ ಮಿನಿ ಸೀರಿಸ್. ಅದರ ಕತೆ ಸುಲಭ. ಒಂದು ದೊಡ್ಡ ಓಬೀರಾಯನ ಕಾಲದ ಕಟ್ಟಡ ಇರುತ್ತದೆ, ಅದೊಂದು ಛಾಯಾಚಿತ್ರಗಳ ಸಂಗ್ರಹಾಲಯ(Photo Library). ಕೈಗೆ ಸಿಕ್ಕದ ಚಿಟ್ಟೆ ಕ್ಯಾಮೆರಾಕ್ಕೆ ಸಿಕ್ಕುವ ಹಾಗೆ, ಅದೆಷ್ಟೋ ಜನರ ಜೀವನದ ಸಂತಸದ, ನಿತ್ಯದ ಕಲಾಪಗಳ ,ಹಳವಂಡಗಳ, ಲಕ್ಷ ಲಕ್ಷ ಕ್ಷಣಗಳು ಫೋಟೋಗಳಾಗಿ ಮರುಜನ್ಮ ತಾಳಿ ಅಲ್ಲಿ ಕೂತಿರುತ್ತವೆ. ಒಂದು ಫೋಟೋ ಬಾಲ್ಯದ್ದು , ಒಂದು ಅಜ್ಜನ ಮನೆಯದ್ದು , ಒಂದು ಕಾಲೇಜಿನದ್ದು ಎಲ್ಲ ಒಟ್ಟಿಗೆ ಇಟ್ಟು ನೋಡಿದರೆ ಅಲ್ಲೊಂದು ಕತೆ ಕಾಣಿಸುವ ಹಾಗೆ, ತತ್ ಕ್ಷಣಕ್ಕೆ ನಿಲುಕದ ಅದೆಷ್ಟೋ ಕತೆಗಳು ನೂರಾರು, ಸಾವಿರಾರು ಫೋಟೋಗಳಲ್ಲಿ ಅಡಗಿ ಕೂತಿರುತ್ತವೆ. ಆ ಕಟ್ಟಡ ಒಂದು ವ್ಯಾಪಾರಿ ಸಂಸ್ಥೆಯ ಕೈಗೆ ಹೋಗುತ್ತದೆ. ಅವರಿಗೋ ಅಲ್ಲೊಂದು School of Business ಕಟ್ಟುವ ಯೋಜನೆ . ದುಡ್ಡಿನ ಮಾತು ಬಂದ ಮೇಲೆ, ಈ ಲಕ್ಷಗಟ್ಟಲೆ ಫೋಟೋಗಳಿಗೆ ಜಾಗ ಎಲ್ಲಿರುತ್ತದೆ ? ಅವನ್ನೇನು ಮಾಡಬೇಕು ? ಮಾರಬೇಕೇ ? ಎಂಥವರಿಗೆ? ಯಾರು ಕೊಳ್ಳುತ್ತಾರೆ ? ಎಸೆಯಬೇಕೇ ? ಎಲ್ಲಿಗೆ ಎಸೆಯಬೇಕು? ಆ ಫೋಟೋಗಳ ಒಳಗಿರುವ ಭಾವಗೀತಗಳಿಗೆ ಯಾರು ಬೆಲೆ ಕೊಡುತ್ತಾರೆ ? ಕಲೆಗೆ ದುಡ್ಡಿನಿಂದ ಬೆಲೆ ಕಟ್ಟಲು ಸಾಧ್ಯವೇ ? ಈ ಎಲ್ಲ ಅಂಶಗಳನ್ನಿಟ್ಟುಕೊಂಡು, ಚಿತ್ರ ವಿಚಿತ್ರ ಪಾತ್ರಗಳನ್ನಿಟ್ಟುಕೊಂಡು, typically ಬ್ರಿಟಿಷ್ ಎನ್ನಬಹುದಾದ ನಿರೂಪಣೆಯೊಂದಿಗೆ, ಮೂರೇ ಘಂಟೆಗಳ ಈ ಮಿನಿಸೀರೀಸ್ ಆವರಿಸಿಕೊಳ್ಳುತ್ತದೆ</span></p><p><span style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;"><a href="https://www.imdb.com/title/tt0184157/?fbclid=IwAR0EsdsmrIFWPrm2TYUgxqm6BTjVnZ7cQnegOnskBqgCLzp-BXqfUd67scg">https://www.imdb.com/title/tt0184157/?fbclid=IwAR0EsdsmrIFWPrm2TYUgxqm6BTjVnZ7cQnegOnskBqgCLzp-BXqfUd67scg</a><br /></span></p>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-49367454406805539462020-12-19T08:37:00.003-08:002020-12-19T08:37:32.797-08:00ಡ್ರೋನುಗಳ ಪ್ರತಾಪ<p> <span style="background-color: white; color: #050505; font-family: inherit; font-size: 15px; white-space: pre-wrap;">"ನೀವು ಇಷ್ಟೊಂದು ಖುಷಿಯಿಂದ, ನೆಮ್ಮದಿಯಿಂದ ಇದ್ದೀರಲ್ಲ,ಇದರ ಗುಟ್ಟೇನು" ಅಂತ ಯಾರಾದರೂ ಕೇಳಿದರೆ, ನನ್ನ ಉತ್ತರ, 'ಪವರ್ ಆಫ್ ಪಾಸಿಟಿವ್ ಥಿಂಕಿಂಗ್' ಎಂತಲೋ, 7 Habits of Highly Effective Peopleನ ತಂತ್ರಗಳು ಎಂದೋ,How to Stop Worrying and Start Livingನ ಸೂತ್ರಗಳು ಅಂತಲೋ ಅಲ್ಲ. ನನ್ನ ಯಶಸ್ಸಿನ ಗುಟ್ಟು ಇಷ್ಟೇ : ನಾನು ನಮ್ಮ ಟೀವಿ ನ್ಯೂಸ್ ಚಾನೆಲುಗಳನ್ನು ನೋಡುವುದಿಲ್ಲ ! ಅತಳ, ಸುತಳ, ಭೂತಳ, ಪಾತಾಳ, ತಳಾತಳ ಮತ್ತು ಫೇಸ್ಬುಕ್ಕುಗಳಲ್ಲಿ ಅಡಗಿದ್ದ ಸಕಲ ಚರಾಚರ ಪ್ರಾಣಿಗಳೆಲ್ಲ ಡ್ರೋನುಗಳ ಪ್ರತಾಪದ ವರ್ಣನೆ ಮಾಡುವುದನ್ನು ನೋಡಿದ ಮೇಲೆ, ಈ ವೀರವ್ರತವನ್ನು ಮುರಿದು ಹತ್ತು ನಿಮಿಷಗಳ ಕಾಲ ಕಿರಿಕ್ ಪ್ರತಾಪರ ಸಂದರ್ಶನದ 'ದರ್ಶನ್' ಭಾಗದ ದರ್ಶನ ಭಾಗ್ಯವನ್ನು ನಾನೂ ದಕ್ಕಿಸಿಕೊಂಡೆ. ವಿಜ್ಞಾನದ ವಿದ್ಯಾರ್ಥಿಯಾಗಿ ನಾನು ಅಷ್ಟನ್ನು ವ್ಯಾಖ್ಯಾನ ಮಾಡಿದರೆ ಸಾಕೆನಿಸುತ್ತದೆ.</span></p><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ದರ್ಶನ್ ಕೇಳಿದ್ದು ಇಷ್ಟು : "ಬೇರೇನೂ ಬೇಡ, Lift,drag,Thrust ಮತ್ತು viscosityಗಳನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡ್ತಿ ಅಂತ ಹೇಳಿಬಿಟ್ಟರೆ ಸಾಕು". </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇವು Aerodynamics ಎಂಬ ವಿಜ್ಞಾನ ಶಾಸ್ತ್ರಕ್ಕೆ ಸಂಬಂಧ ಪಟ್ಟ ಪದಗಳು. ಗಾಳಿಯು ವಸ್ತುಗಳನ್ನು ಹೇಗೆಲ್ಲ ಉದುರಿಸಿ, ಕೆದರಿಸಿ,ಸುತ್ತಿಸಿ, ಝಾಡಿಸಿ , ಆಡಿಸಿ,ಅಡಿಮೇಲಾಗಿಸುತ್ತದೆ ಅಂತ ಹೇಳುವುದು ಈ ಶಾಸ್ತ್ರದ ಕೆಲಸ. ಸ್ವಲ್ಪ ಫ್ಲ್ಯಾಶ್ ಬ್ಯಾಕಿಗೆ ಜಾರಿ ದರ್ಶನರು ಬಳಸಿದ ಈ ಪದಗಳ ಅರ್ಥ ಏನು ಅಂತ ನೋಡೋಣ. ಒಂದು ಕಾರು ಎಲ್ಲಿಗೆ ಚಲಿಸುತ್ತದೆ? ಮುಂದಕ್ಕೆ. ಸರಿ, ಮುಂದಕ್ಕೆ ಹೋಗೋಣ, ವಿಮಾನ ? ಅದು ಮೇಲಕ್ಕೂ ಹೋಗುತ್ತದೆ, ಮುಂದಕ್ಕೂ ಸಾಗುತ್ತದೆ. ವಿಮಾನ, ಹೆಲಿಕಾಪ್ಟರುಗಳ ಮೊಮ್ಮಗನಂಥ ಡ್ರೋನು ಕೂಡಾ ಅಷ್ಟೇ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಮೇಲೆ ಹೋಗುವವರಿಗೆಲ್ಲ ಗೊತ್ತಿರುವ ವಿಚಾರ ಏನಪ್ಪಾ ಅಂದರೆ, ಮೇಲೆ ಹೋಗುವಾಗ ನಮ್ಮನ್ನು ಕೆಳಕ್ಕೆಳೆಯುವವರೂ ಇರುತ್ತಾರೆ, ಮುಂದೆ ಹೊರಟಾಗ ಹಿಂದಕ್ಕೆ ಜಗ್ಗುವವರೂ ಇದ್ದೇ ಇರುತ್ತಾರೆ. Lift,drag,Thrust ಮತ್ತು weight ಗಳದ್ದೂ ಇದೇ ಕೆಲಸ. ಮೇಲೆತ್ತಿ ಉದ್ದಾರ ಮಾಡುವ ಉತ್ತೇಜಕ ಶಕ್ತಿ ಲಿಫ್ಟ್ ಆದರೆ ಕೆಳಗೆಳೆಯುವ ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ weight. ಮುನ್ನುಗ್ಗಿಸುವ ಭೀಮಬಲ Thrust ಆದರೆ, ಕರುಬಿ ಮುಂದೆ ಹೊರಟವರನ್ನು ಹಿಂದೆ ಎಳೆಯುವ ಕೇಡಿಗನ ಪಾತ್ರ dragನದ್ದು. ವಿಮಾನಕ್ಕೆ ಅದರ ಭಾರ, ಗುರುತ್ವಾಕರ್ಷಣೆಗಳೇ ಕೆಳಗೊತ್ತುವ ಶಕ್ತಿಗಳು, ಅದರ ರೆಕ್ಕೆಯೇ ಮೇಲೆತ್ತುವ ಬಲ. ವಿಮಾನದ ರೆಕ್ಕೆಯ ಕೆಳಗೆ ಗಾಳಿಯಲ್ಲಿ high pressure ಇರುವ ಹಾಗೂ ಮೇಲೆ ಕಡಮೆ ಒತ್ತಡ ಇರುವ ಹಾಗೂ ತಂತ್ರ ಮಾಡಿರುತ್ತಾರೆ. ಹೀಗೆ ಗಾಳಿಯನ್ನು ಬೇಸ್ತು ಬೀಳಿಸಿ ಅದೇ ವಿಮಾನವನ್ನು ಮೇಲೆ ದೂಡುವಂತೆ ಮಾಡಿರುತ್ತಾರೆ. ಮೇಲೆ ದೂಡುವ ಶಕ್ತಿ ಹೆಚ್ಚೋ, ಕೆಳಗೆ ಸೆಳೆಯುವ ತಾಕತ್ತು ಹೆಚ್ಚೋ ಅಂತ ಎಂಜಿನಿಯರುಗಳು ಲೆಕ್ಕ ಹಾಕದಿದ್ದರೆ ವಿಮಾನವೋ ಡ್ರೋನೋ ಶಾಲೆಗೆ ಹೋಗಲು ಮನಸ್ಸಿಲ್ಲದ ಮಗುವಿನಂತೆ ಕೆಳಗೇ ಉಳಿದುಬಿಟ್ಟೀತು. ಈ ಲೆಕ್ಕವನ್ನೇ ದರ್ಶನ್ ಕೇಳಿದ್ದು. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ವಿಮಾನಕ್ಕೆ thrust ಕೊಟ್ಟು ಮುನ್ನೂಕಲಿಕ್ಕೆ propellerಗಳು ಇರುತ್ತವೆ. ಡ್ರೋನಿನ ಬದಿಗಳಲ್ಲಿ ಗರಗರ ತಿರುಗುವ ಚಕ್ರಗಳ ತರದ rotorಗಳು ಇರುತ್ತವೆ. ಇವೇ ಅದನ್ನು ಜೋರ್ ಲಗಾಕೇ ಐಸಾ ಅಂತ ದೂಡುವ ಶಕ್ತಿಗಳು. ಆಗ Pressure drag, Viscous drag ಅಂತೆಲ್ಲ ದುಷ್ಟಶಕ್ತಿಗಳು ಹಗ್ಗ ಜಗ್ಗಾಟ ಮಾಡಿ ಅದನ್ನು ಮುಂದೆ ಹೋಗದಂತೆ ತಡೆಯುತ್ತವೆ. viscosityಯ ಬಗ್ಗೆ ಕೇಳಿದ್ದು ಅದಕ್ಕೇ. ಈ viscosityಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸುಲಭ. ಮಜ್ಜಿಗೆ ನೀರು ನೀರಾಗಿರುತ್ತದೆ, ಮೊಸರು ದಪ್ಪ ದಪ್ಪ ಇರುತ್ತದೆ. ನೀರು ತೆಳು ತೆಳು, ಜೇನು ಮಂದ ಮಂದ. ಜೇನು, ಮೊಸರುಗಳ ದಪ್ಪ, ಜಿಗುಟುತನ ಉಂಟಲ್ಲ ಅದೇ viscosity. ಡ್ರೋನಿನ ಬಗ್ಗೆ ಮಾತಾಡುವಾಗ ಇದರ ಸುದ್ದಿ ಯಾಕೆ ಅನ್ನುವವರಿಗೆ ಒಂದು ಪ್ರಶ್ನೆ. ನೀರಿನ ಹೊಳೆಯಲ್ಲಿ ಈಜುವುದು ಸುಲಭವೋ ? ಜೇನಿನ ಹೊಳೆಯಲ್ಲೋ ? ವಾತಾವರಣದಲ್ಲಿ ಗಾಳಿಯ ಬದಲಿಗೆ ಫೆವಿಕಾಲ್ ಗಮ್ಮು ಇದ್ದಿದ್ದರೆ ನಿಮ್ಮ ಕಾರು ಗಾಳಿಯನ್ನು ನೂಕುವ ಬದಲು ಫೆವಿಕಾಲನ್ನು ದೂಡಬೇಕಾಗಿ ಬಂದಿದ್ದರೆ ಅದು ಎಷ್ಟು ವೇಗ ಹೋಗಲು ಸಾಧ್ಯವಿತ್ತು. ಒಂದು ವಸ್ತು ದಪ್ಪ ಇದ್ದಷ್ಟು ಅದರಲ್ಲಿ ಚಲಿಸಲು ಕಷ್ಟ ನಮಗಾದರೂ ಅಷ್ಟೇ, ಕಾರಿಗಾದರೂ ಅಷ್ಟೇ, ಡ್ರೋನಿಗಾದರೂ ಅಷ್ಟೇ. ಅದರ ಲೆಕ್ಕ ಬೇಕಾದದ್ದು ಅದೇ ಕಾರಣಕ್ಕೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಹೀಗೆ ಒಂದು ಡ್ರೋನು ಮೇಲೆ, ಕೆಳಗೆ, ಹಿಂದೆ, ಮುಂದೆ ಹೋಗುವುದು ಹೇಗೆ ಅಂತ ಹೇಳಲಿಕ್ಕೆ Lift,drag,Thrust, viscosity ಇಷ್ಟರ ಲೆಕ್ಕ ಬೇಕು. ಇಲ್ಲದಿದ್ದರೆ ಅದು ಮಣಿಶಂಕರ ಐಯ್ಯರರ ಮಾತಿನಂತೆ ಬೇಕಾಬಿಟ್ಟಿ ಒಟ್ರಾಶಿ ಎಲ್ಲೆಲ್ಲಿಗೋ ಹೋಗಿ ಬಿಟ್ಟೀತು. ಇಷ್ಟು ಲೆಕ್ಕವನ್ನೇ ಪ್ರತಾಪರಿಗೆ ದರ್ಶನ್ ಕೇಳಿದ್ದು. ನಮ್ಮ ವಾರ್ತಾವಾಹಿನಿಗಳ ಮಟ್ಟ ಎಷ್ಟು drag ಆಗಿದೆ, ಅವುಗಳಿಗೆ ಎಷ್ಟು ಲಿಫ್ಟ್ ಬೇಕು ಅಂದರೆ, ಜನರಿಗೆ, "ಕೀರ್ತಿ ಪ್ರತಾಪರನ್ನು ಕೊಚ್ಚಿ ಕೊಂದೇ ಬಿಡಬೇಕಿತ್ತು" ಎಂಬ ನಿರೀಕ್ಷೆಯಿದ್ದಂತಿತ್ತು! ಹೀಗಾಗಿ, "ಇನ್ನೊಂದು ನಾಲ್ಕೇಟು ಹಾಕಬೇಕಿತ್ತು, ಚಾನ್ಸ್ ತಪ್ಪಿಹೋಯಿತು" ಎಂಬಂತೆ ಹಲವರಾಡಿದ್ದಾರೆ. 'ದಿನಾ ಹತ್ತು ಕೊಲೆ ಮಾಡುವವನು ಇವತ್ತು ಚಿವುಟಿ ಸುಮ್ಮನಾಗಿಬಿಟ್ಟನಲ್ಲ' ಅಂತ ಆಗುವ ನಿರಾಸೆಯಂತೆಯೇ ಇದು ಇರಬಹುದೇನೋ ! ಈ ಸರಿ ತಪ್ಪುಗಳ ವಿಚಾರ ಏನೇ ಇದ್ದರೂ,ವಿಜ್ಞಾನ ಗೊತ್ತಿದ್ದವರಿಗೆ Lift,drag,Thrust, viscosityಗಳ ಪ್ರಶ್ನೆಗಳೇ ಸ್ಥಾಲೀ ಪುಲಾಕ ನ್ಯಾಯದಿಂದ ಸಾಕು. "ಡ್ರೋನು, ಮೇಲೆ , ಕೆಳಗೆ, ಹಿಂದೆ, ಮುಂದೆ ಹೇಗೆ ಚಲಿಸುತ್ತದೆ ಎಂಬ ವಿಚಾರಗಳನ್ನು ಬಿಟ್ಟು ಬೇರೆಲ್ಲಾ ಗೊತ್ತಿದೆ" ಅಂತ ಯಾರಾದರೂ ಹೇಳಿದರೆ, ಅಷ್ಟು ಸಾಕು ! ಅದು ದೋಣಿ ತಯಾರು ಮಾಡುವವನು, 'ಯಾವ ತರದ ದೋಣಿ ಯಾವಾಗ ಮುಳುಗುತ್ತದೆ ಅಂತ ಗೊತ್ತಿಲ್ಲ' ಅಂದ ಹಾಗೆಯೇ. ಅವನಿಗೆ ಆರ್ಕಿಮಿಡೀಸನ ಸಿದ್ದಾಂತ ಎಲ್ಲ ಗೊತ್ತಿದೆಯೋ ಇಲ್ಲವೋ, ದೋಣಿ ಮುಳುಗದೆ ದೂರ ತೀರಕ್ಕೆ ಸೇರಲು ಏನು ಮಾಡಬೇಕು ಅಂತಾದರೂ ಅವನಿಗೆ ಹೇಳಲು ಬರಬೇಕು. ಮಾಧ್ಯಮಗಳಿಗೆ ಕಾಗದದ ದೋಣಿಯೂ ಸುದ್ದಿಯೇ , ನಮಗೆ ಯಾವುದು ಸುದ್ದಿ ಅಂತ ನಾವೇ ಕೇಳಿಕೊಳ್ಳಬೇಕು. ಇದೆಲ್ಲ ಏನೇ ಇದ್ದರೂ ಈ ನೆವದಲ್ಲಿ ನಾವು ವಿಜ್ಞಾನದ ಮಾತಾಡಿದೆವಲ್ಲ, ಅದೇ ಸಂತೋಷ.</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-87087539935988118712020-12-19T08:36:00.002-08:002020-12-19T08:36:18.437-08:00ಪಾ. ವೆಂ. ಆಚಾರ್ಯ<p> <span style="background-color: white; color: #050505; font-family: inherit; font-size: 15px; white-space: pre-wrap;">40-50 ವರ್ಷಗಳ ಹಿಂದೆ ನಮ್ಮಲ್ಲಿ ಟೀವಿಗಳಿರಲಿಲ್ಲ, ನ್ಯಾಷನಲ್ ಜಿಯೋಗ್ರಾಫಿಕ್ಕಿನಂಥಾ ಚಾನೆಲ್ ಕೂಡಾ ಇರಲಿಲ್ಲ. ಆದರೇನಂತೆ? ಸರ್ವಜ್ಞಾಚಾರ್ಯ, ಸರ್ವಕುತೂಹಲಿ ಎಂಬ ಬಿರುದುಗಳಿದ್ದ ಸರ್ವಂಕಷ ಪ್ರತಿಭೆಯ ಪಾ. ವೆಂ. ಆಚಾರ್ಯರಿದ್ದರು, ಅವರೇ ಕಟ್ಟಿದ ಕಸ್ತೂರಿ ಪತ್ರಿಕೆಯಿತ್ತು. SSLCಯಲ್ಲಿ rank ಬಂದರೂ ಕಿತ್ತು ತಿನ್ನುವ ಬಡತನ ಅವರನ್ನು ಡಿಗ್ರಿಗೆ ಓದಲು ಬಿಡಲಿಲ್ಲ, ಜ್ಞಾನಕ್ಕೆ ಡಿಗ್ರಿಯ ಹಂಗು ಎಲ್ಲಿರುತ್ತದೆ(ಇವರು ಡಾಕ್ಟರೇಟು ಪಡೆದವರು ಅಂತ ಭಾವಿಸಿ ಕೆಲವರು ಅವರನ್ನು ಡಾ. ಪಾ. ವೆಂ. ಆಚಾರ್ಯರೇ ಅಂತಲೇ ಸಂಭೋದಿಸುತ್ತಿದ್ದರಂತೆ !) ಮುಂದೆ ವಿಧಿಯ ಮೇಲೆ ಸೇಡು ತೀರಿಸಲೋ ಎಂಬಂತೆ ಪಾವೆಂ ನೂರೆಂಟು ವಿಷಯಗಳನ್ನು ಓದಿಕೊಂಡರು, ಅವುಗಳ ಬಗ್ಗೆ ಕಸ್ತೂರಿಯಲ್ಲಿ ಸೊಗಸಾಗಿ ಬರೆದರು. ಕಾಲೇಜಿನ ಪ್ರಾಯಕ್ಕೆ ಬರುವಾಗಲೇ ನಾಗವರ್ಮನ ಛಂದೋಂಬುಧಿ, ಕೇಶಿರಾಜನ ಶಬ್ದಮಣಿದರ್ಪಣಗಳಂತಹ ಶಾಸ್ತ್ರ ಗ್ರಂಥಗಳನ್ನು ಪಾವೆಂ ಇಡಿ ಇಡಿಯಾಗಿ ನುಂಗಿ ಹಾಕಿದ್ದರಂತೆ. ಪಾಠ ಮಾಡಿದರೂ ತಲೆಗೆ ಹೋಗುವುದಿಲ್ಲ ಅನಿಸಬಹುದಾದ ಈ ತರದ ಶಾಸ್ತ್ರಗ್ರಂಥಗಳನ್ನು, ಪಾವೆಂ ಕಥೆ ಕಾದಂಬರಿ ಓದುವಂತೆ ತಮ್ಮಷ್ಟಕ್ಕೆ ತಾವೇ ಓದಿ ಮುಗಿಸಿದರೆಂದು ಕಾಣುತ್ತದೆ. </span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">ಭೌತ ಶಾಸ್ತ್ರ,ರಸಾಯನ ಶಾಸ್ತ್ರ,ಮನೋವಿಜ್ಞಾನ, ಭಾಷೆ, ಶಬ್ದ ವ್ಯುತ್ಪತ್ತಿ, ರಾಜಕೀಯ,ಕ್ರೈಂ, ಇತಿಹಾಸ, ಭೂಗೋಳ,ಗಣಿತ, ವೈದ್ಯಕೀಯ ವಿಚಾರಗಳು, ಹೂವು, ಹಣ್ಣು ಹೀಗೆ ನೀವು ಯಾವ ವಿಷಯ ಬೇಕಾದರೂ ಹೇಳಿ, ಅಲ್ಲಿಗೆ ಆಚಾರ್ಯರ ಪೆನ್ನು ಆ ಕಾಲದಲ್ಲೇ ಹೋಗಿ ಬಂದಿರುತ್ತದೆ! ಮೊನಚಾದ ಹರಟೆ,ವಿಡಂಬನೆಗಳು, ಅನುವಾದಗಳು, ಕವಿತೆಗಳು ಎಲ್ಲವನ್ನೂ ಅವರು ಬರೆದಿದ್ದಾರೆ. ಸರ್ವಕುತೂಹಲದ ಕಾರಣಕ್ಕೆಯೋ ಏನೋ, ನನ್ನ ಪುಸ್ತಕದ ಬೆನ್ನುಡಿ,ಮುನ್ನುಡಿ, ಲೇಖಕನ ಮಾತು ಎಲ್ಲ ಕಡೆಗಳಲ್ಲೂ ಆಚಾರ್ಯರ ಹೆಸರು ಬಂದಿದೆ. ಒಬ್ಬ ಚೆಸ್ ಆಟಗಾರನ ಬಗ್ಗೆ ನಾನು ಬರೆಯಹೊರಟಾಗ, ಇಂತದ್ದು ಕನ್ನಡದಲ್ಲಿ ಬಂದಿರಲಿಕ್ಕಿಲ್ಲ ಅಂದುಕೊಂಡು ಹೊರಟಿದ್ದೆ, ಆಮೇಲೆ ನೋಡಿದರೆ ಎಪ್ಪತ್ತರ ದಶಕದಲ್ಲಿಯೇ ಆಚಾರ್ಯರು ಬಾಬಿ ಫಿಷರ್ ನ ಬಗ್ಗೆ ಬರೆದುಬಿಟ್ಟಿದ್ದಾರೆ ! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅವರ ಆರೋಗ್ಯ ಕೈಕೊಟ್ಟಾಗ, ನೂರಕ್ಕೆ ನೂರು ಕೆಲಸ ಮಾಡಲಾಗುತ್ತಿಲ್ಲ, ಹಾಗಾಗಿ ನನ್ನನ್ನು ಕೆಲಸದಿಂದ ಬಿಡುಗಡೆ ಮಾಡಿ ಅಂತ ಕೇಳಿಕೊಂಡು ರಾಜೀನಾಮೆ ಪತ್ರ ಬರೆದಿದ್ದರಂತೆ. ಇಷ್ಟು ಪ್ರಾಮಾಣಿಕರ ರಾಜೀನಾಮೆ ಪಾತ್ರವನ್ನು ಮೊಹರೆ ಹನುಮಂತ ರಾಯರು ಒಪ್ಪಿಯಾರೇ ? "ನೀವು ಮನೆಯಲ್ಲೇ ಕುಳಿತು ಕೆಲಸ ಮಾಡಿ" ಅಂತಂದು ಅವರದನ್ನು ಕಸದ ಬುಟ್ಟಿಗೆ ಎಸೆದರಂತೆ. ಪಾವೆಂ ಬರೆದದ್ದರಲ್ಲಿ ಕಸದ ಬುಟ್ಟಿ ಸೇರಲು ಯೋಗ್ಯವಾದದ್ದು ಈ ರಾಜೀನಾಮೆಯ ಪತ್ರವೊಂದೇ ಇರಬಹುದೇನೋ ! ಹೀಗೆ ಆ ಕಾಲದಲ್ಲೇ ವರ್ಕ್ ಫ್ರಮ್ ಹೋಮ್ ಅನ್ನೂ ಪಾವೆಂ ಮಾಡಿದರು ! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಆಚಾರ್ಯರು ಎಷ್ಟೋ ಸಲ ಕಸ್ತೂರಿಯ ಪುಟಗಳನ್ನು ತಾವೇ ಹಲವು ಹೆಸರುಗಳಲ್ಲಿ ಬರೆದು ತುಂಬಿಸುತ್ತಿದ್ದದ್ದಿತ್ತು. ಅವರು ಒಟ್ಟು ಎಷ್ಟು ಬರೆದಿದ್ದಾರೆ, ಎಷ್ಟು ಗುಪ್ತನಾಮಗಳಲ್ಲಿ ಬರೆದಿದ್ದಾರೆ, ಯಾವೆಲ್ಲ ಪತ್ರಿಕೆಗಳಿಗೆ ಬರೆದಿದ್ದಾರೆ ಅಂತ ಲೆಕ್ಕವಿಟ್ಟವರಿಲ್ಲ. ಹೀಗಿದ್ದ ಆಚಾರ್ಯರ ಎಲ್ಲ ಬರೆಹಗಳನ್ನೂ ಹುಡುಕಿ ತೆಗೆಯುವುದು ಕಷ್ಟಸಾಧ್ಯ. ಅದಕ್ಕೆ ಬೇಕಾಗುವ ಓಡಾಟ, ಹುಡುಕಾಟ, ತಾಳ್ಮೆ ಅಪಾರ. ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ, ಈ ನಿಟ್ಟಿನಲ್ಲಿ ಶ್ರಮ ವಹಿಸಿ ಅಜ್ಜನ ಬಹಳಷ್ಟು ಬರೆಹಗಳನ್ನು ಸಂಗ್ರಹಿಸಿ ಆನ್ಲೈನಿನಲ್ಲಿ ಹಾಕಿದ್ದಾರೆ. ಸಿಕ್ಕಿದ ಎಲ್ಲ ವಿವರಗಳನ್ನೂ ಕೃತಿಗಳನ್ನೂ ಸೇರಿಸಿ ಸೈಟ್ ಒಂದನ್ನು ಅವರ ಬಳಗದವರು ಮಾಡಿದ್ದಾರೆ. ಆಚಾರ್ಯರ ಬಹಳಷ್ಟು ಕೃತಿಗಳು ಇಲ್ಲಿ ಸಿಗುತ್ತವೆ , ಓದಿ ಆನಂದಿಸಿ, </div><div dir="auto" style="font-family: inherit;"><br /></div><div dir="auto" style="font-family: inherit;">ಪಾವೆಂ ಬಗ್ಗೆ ರವಿ ಬೆಳಗೆರೆ 1996ರಲ್ಲಿ ಬರೆದಿದ್ದ ಸಾಲುಗಳನ್ನು ಕೆಳಗೆ ಹಾಕಿದ್ದೇನೆ: </div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEhAgoYR7gvLU1wp2eWn6GbnxJmy5-2eAsd5l6vluMfpS81K4Q8udH_U_PfrTetsSmBFA-lozDqkSiJPPCVWIxU19-Sf8xrBxxG4Ddk4GYwgtXBdHEx9KIswia3I_OKro76XNaeUfQwXsD0/s1040/Pavem1.jpg" imageanchor="1" style="margin-left: 1em; margin-right: 1em;"><img border="0" data-original-height="1040" data-original-width="780" height="320" src="https://blogger.googleusercontent.com/img/b/R29vZ2xl/AVvXsEhAgoYR7gvLU1wp2eWn6GbnxJmy5-2eAsd5l6vluMfpS81K4Q8udH_U_PfrTetsSmBFA-lozDqkSiJPPCVWIxU19-Sf8xrBxxG4Ddk4GYwgtXBdHEx9KIswia3I_OKro76XNaeUfQwXsD0/s320/Pavem1.jpg" /></a></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><br /></div><br /><div dir="auto" style="font-family: inherit;"><br /></div></div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEiRfBVdPzF2-xzIKwYsduAcip42365NcK-kJlPK281gZcVWDHsLdGbQF3vdL8_81ozlNleHbgtr-v6p92F3brA5aHVCX9Z5i8dpEJDDazxaDRyfgNpY9b67vfVCnEvKk27h94Swk4Sun6U/s1040/Pavem2.jpg" imageanchor="1" style="margin-left: 1em; margin-right: 1em;"><img border="0" data-original-height="1040" data-original-width="780" height="320" src="https://blogger.googleusercontent.com/img/b/R29vZ2xl/AVvXsEiRfBVdPzF2-xzIKwYsduAcip42365NcK-kJlPK281gZcVWDHsLdGbQF3vdL8_81ozlNleHbgtr-v6p92F3brA5aHVCX9Z5i8dpEJDDazxaDRyfgNpY9b67vfVCnEvKk27h94Swk4Sun6U/s320/Pavem2.jpg" /></a></div><br />Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-21998006196919137412020-12-19T08:32:00.004-08:002020-12-19T08:32:50.321-08:00ಗೋವಿನ ಹಾಡು ಮತ್ತು ಅದನ್ನು ಬರೆದವರ ಜಾಡು<p><span style="background-color: white;"><span style="color: #222222; font-family: Arial, Helvetica, sans-serif; font-size: x-small;">ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ:</span></span></p><p><span style="background-color: white; color: #222222; font-family: Arial, Helvetica, sans-serif; font-size: small;">"</span><span class="il" style="background-color: white; color: #222222; font-family: Arial, Helvetica, sans-serif; font-size: small;">ಧರಣಿಮಂಡಲ</span><span style="background-color: white; color: #222222; font-family: Arial, Helvetica, sans-serif; font-size: small;"> ಮಧ್ಯದೊಳಗೆ ಮೆರೆಯುತಿಹ ಕರ್ಣಾಟ ದೇಶದಿ" ಎಂದು ಶುರುವಾಗುವ ಪುಣ್ಯಕೋಟಿಯ ಕಥೆಯನ್ನು ಲಾಲಿಸದವರಾರು, ಕೇಳಿ ಹನಿಗಣ್ಣಾಗದವರಾರು? ಎಲ್ಲರಿಗೂ ಗೊತ್ತಿರುವ ಪದ್ಯದ ಬಗ್ಗೆ ಇನ್ನೊಮ್ಮೆ ನಾನು ಹೇಳುವುದೇನೂ ಇಲ್ಲ. ನಾನು ಹೇಳಹೊರಟದ್ದು ಈ ಪದ್ಯದ ಬಗ್ಗೆ ಈಚೆಗೆ ಬಂದ, ವೈರಲ್ ಆದ ವೀಡಿಯೊ ಒಂದರ ಬಗ್ಗೆ. ಆದದ್ದಿಷ್ಟು: 'ಮೈಸೂರಿನ ಕಥೆಗಳು' ಎಂಬ ಫೇಸ್ಬುಕ್ ಪೇಜಿನಲ್ಲಿ ಚ.ವಾಸುದೇವಯ್ಯ(ಇವರು 1852ರಿಂದ 1943ರ ಕಾಲದಲ್ಲಿ ಇದ್ದವರು) ಎಂಬ ಮಹನೀಯರ ಪರಿಚಯ ಮಾಡಿಕೊಡಲಾಯಿತು. ಹಾಗೆ ಮಾಡುವಾಗ, ಜನಪದದಲ್ಲಿದ್ದ ಗೋವಿನ ಹಾಡನ್ನು ಬರೆದವರು ಚ.ವಾಸುದೇವಯ್ಯನವರೇ ಅಂತ ಹೇಳಲಾಯಿತು. ಈ ವೀಡಿಯೊವನ್ನು ಸುಮಾರು ಲಕ್ಷಕ್ಕೂ ಹೆಚ್ಚು ಜನ ಫೇಸ್ಬುಕ್ಕಿನಲ್ಲಿಯೇ ನೋಡಿದ್ದಾರೆ. ವಾಟ್ಸಪ್ಪಿನಲ್ಲಿ ಇದು 'ಗೋವಿನ ಹಾಡನ್ನು ಬರೆದವರು ಯಾರು ಗೊತ್ತೇ' ಎಂಬಂತೆ ವೈರಲ್ ಆಗಿದ್ದು, ಅಲ್ಲಿ ಅದೆಷ್ಟು ಸಾವಿರ ಜನ ನೋಡಿದ್ದಾರೋ.</span></p><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ವೀಡಿಯೊ ಮಾಡಿದವರು ಒಳ್ಳೆಯ ಮನಸ್ಸಿನಿಂದ,ಸದುದ್ದೇಶದಿಂದ ಅದನ್ನು ಮಾಡಿರುವಂತೆ ಕಾಣುತ್ತದೆ. ಚ.ವಾಸುದೇವಯ್ಯನವರು ದೊಡ್ಡವರು, ಕನ್ನಡಿಗರಿಗೆ ಪ್ರಾತಃಸ್ಮರಣೀಯರು ಅನ್ನುವುದೇನೋ ಸರಿಯೇ, ಆದರೆ, 'ಧರಣಿ ಮಂಡಲ ಮಧ್ಯದೊಳಗೆ' ಎಂಬ ಪದ್ಯವನ್ನು ಅವರೇ ಬರೆದದ್ದು ಎನ್ನುವ ಹೇಳಿಕೆಗೆ ಮಾತ್ರ ಬೇರೆಡೆಗಳಿಂದ ಸಾಕಷ್ಟು ಪುಷ್ಟಿ ನನಗಂತೂ ಸಿಗಲಿಲ್ಲ, ಪೂರಕ ಆಧಾರಗಳಿಲ್ಲದೆ ಗೋವಿನ ಹಾಡಿನ ಕರ್ತೃತ್ವವನ್ನು ಹೇಳುವುದು ಅವಸರದ ತೀರ್ಮಾನವಾದೀತೆಂದೇ ನನಗೆ ಕಾಣುತ್ತದೆ. ಸಂಶೋಧನೆ ಅರ್ಜೆಂಟಿನಲ್ಲಿ ಆಗುವ ಕೆಲಸವಲ್ಲವಲ್ಲ!</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದರ ಬಗ್ಗೆ ಶತಾವಧಾನಿ ಗಣೇಶರ ಅಭಿಪ್ರಾಯವನ್ನು ಪಾದೆಕಲ್ಲು ವಿಷ್ಣು ಭಟ್ಟರು ಕೇಳಿದಾಗ ಅವರೂ ಈ ವೀಡಿಯೊದಲ್ಲಿ ಗೋವಿನಹಾಡಿನ ಬಗ್ಗೆ ಹೇಳಿದ್ದನ್ನು ಒಪ್ಪುವುದು ಕಷ್ಟವೆಂದೇ ಹೇಳಿದ್ದಾರೆ. ಗ್ರಂಥಸಂಪಾದನೆ ಮಾಡುವುದು, ಪರಿಷ್ಕೃತ ಆವೃತ್ತಿ ತರುವುದು, ಇರುವ ಒಂದು ಪದ್ಯವನ್ನು ಪಾಠ್ಯ ಪುಸ್ತಕಕ್ಕೆ ಏರಿಸುವುದು ಎಂಬವುಗಳ ನಡುವಿನ ವ್ಯತ್ಯಾಸವನ್ನು ವೀಡಿಯೊ ಮಾಡಿದವರು ಅಷ್ಟಾಗಿ ಗಮನಿಸಿದಂತೆ ಕಾಣುವುದಿಲ್ಲ. ಇದಲ್ಲದೆ ಡಿವಿಜಿಯವರೇ ವಾಸುದೇವಯ್ಯನವರ ಬಗ್ಗೆ ಬರೆದಿದ್ದಾರೆ; ಆದರೆ ಅವರೆಲ್ಲೂ ಈ ಪದ್ಯದ ವಿಚಾರ ಎತ್ತಿಲ್ಲ. ಕರ್ಣಾಟಕ ಕವಿಚರಿತೆಯನ್ನು ಬರೆದವರಾದ, ಮಹಾಪಂಡಿತರಾಗಿದ್ದ ರಾ.ನರಸಿಂಹಾಚಾರ್ಯರು ಮತ್ತು ಎಸ್.ಜಿ ನರಸಿಂಹಾಚಾರ್ಯರು ವಾಸುದೇವಯ್ಯನವರ ಒಡನಾಟ ಇದ್ದವರು, ಅವರೂ ಈ ಬಗ್ಗೆ ಒಂದು ಮಾತೂ ತಿಳಿಸಿಲ್ಲ. ಪಂಜೆ ಮಂಗೇಶರಾಯರು ಅವರ ಕಿರಿಯ ಸಮಕಾಲೀನರಾದರೂ ಗೋವಿನ ಹಾಡಿನ ವಿಷಯ ಬಂದಾಗಲೂ ಎಲ್ಲೂ ಅದನ್ನು ಬರೆದವರ ಹೆಸರು ಹೇಳಿಲ್ಲ. ಈ ಎಲ್ಲ ಅಂಶಗಳನ್ನಿಟ್ಟುಕೊಂಡು ನೋಡಿದರೆ ಪುಣ್ಯಕೋಟಿಯ ಹಾಡು ವಾಸುದೇವಯ್ಯನವರ ರಚನೆಯಾಗಿರುವ ಸಂಭವನೀಯತೆ ತೀರಾ ಕಡಮೆ ಎಂದು ಗಣೇಶರ ಅಭಿಪ್ರಾಯ. ವಾಸುದೇವಯ್ಯನವರ ಬಗ್ಗೆ ಬರೆಯುವಾಗ ಟಿವಿ ವೆಂಕಟಾಚಲ ಶಾಸ್ತ್ರಿಗಳೂ ಎಲ್ಲೂ ಗೋವಿನ ಹಾಡನ್ನು ಉಲ್ಲೇಖಿಸಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇದಕ್ಕೆ ಪೂರಕವಾಗಿ ಇನ್ನೊಂದಷ್ಟು ಒಗ್ಗರಣೆ: ನಮ್ಮ ಸಂಸ್ಕೃತ ಪಂಡಿತರ ಎದುರೋ, ಹಳಗನ್ನಡ ಕಾವ್ಯಾಸಕ್ತರ ಮುಂದೋ ದೇವರು ಪ್ರತ್ಯಕ್ಷನಾಗಿ, "ವತ್ಸಾ, ಒಂದು ವರ ಕೇಳಿಕೋ" ಅಂತ ಹೇಳಿದನಾದರೆ, ಈ ಪಂಡಿತರಲ್ಲನೇಕರು, "ಯಾವ ಯಾವ ಕೃತಿಗಳನ್ನು ಯಾರ್ಯಾರು ಬರೆದರು, ಬರೆದವರು ಎಲ್ಲಿ, ಯಾವಾಗ, ಹೇಗೆ ಇದ್ದರು ಅಂತ ಹೇಳಿಬಿಡು ತಂದೆ" ಅಂದುಬಿಟ್ಟಾರು ಎನ್ನಿಸುವಷ್ಟು ಎಟುಕಿಗೆ ನಿಲುಕದ ಕರ್ತೃತ್ವದ ಸಮಸ್ಯೆಗಳಿವೆ. ಕಾಳಿದಾಸ, ಕುಮಾರವ್ಯಾಸ, ಭಾಸ, ಪಾಣಿನಿ, ಭರತ ಇವರೆಲ್ಲ ಯಾರು, ಹೇಗಿದ್ದರು ಎಂಬುದೇ ಗೊತ್ತಾಗದಷ್ಟು ಮಟ್ಟಿಗೆ ಅವರ ವೈಯಕ್ತಿಕ ವಿವರಗಳನ್ನು ಹೇಳುವಲ್ಲಿ ನಿರಾಸಕ್ತಿಯನ್ನು ಖುದ್ದು ಅವರೂ, ಪ್ರಾಚೀನರೂ ತೋರಿಸಿದಂತೆ ಕಾಣುತ್ತದೆ. ನಮ್ಮಲ್ಲಿ ಕವಿರಾಜಮಾರ್ಗವನ್ನು ನಿಜವಾಗಿಯೂ ಬರೆದವರು ಯಾರು ಎಂಬ ವಿಷಯದಲ್ಲಿ ಶಾಸ್ತ್ರಕೋವಿದರು ಎಳೆದೆಳೆದು ಮಾಡಿರುವ ಚರ್ಚೆಗಳು, ಅವುಗಳಿಗೆ ಹುಟ್ಟಿರುವ ಉತ್ತರ, ಪ್ರತ್ಯುತ್ತರಗಳು ಎಲ್ಲ ಸೇರಿದರೆ ಒಂದು ರೋಚಕ whodunnit ಕಾದಂಬರಿಗೆ ಸರಕಾಗಬಲ್ಲವು ಎಂಬಷ್ಟಿವೆ ! ಭಾಸನ ವಿಷಯದಲ್ಲೂ ಹಾಗಾಗಿದೆ. ತಿರುವಾಂಕೂರಿನ ಗಣಪತಿ ಶಾಸ್ತ್ರಿ ಎಂಬವರಿಗೆ ಹದಿಮೂರು ನಾಟಕಗಳು ಸಿಕ್ಕಿ, ಅವನ್ನು ಭಾಸನೇ ಬರೆದದ್ದು ಎಂಬ ತೀರ್ಮಾನಕ್ಕೆ ಅವರು ಬಂದರು. ಅನಂತರ ಅವನ್ನು ಭಾಸನೇ ಬರೆದದ್ದೋ, ಬೇರೆ ಯಾರಾದರೋ ಎಂಬುದರ ಬಗ್ಗೆ ಎದ್ದ ಕೋಲಾಹಲ, ಪಂಡಿತರು ಹೂಡಿದ ತರ್ಕಗಳು, ನೋಡಿದ ಆಧಾರಗಳು, ನೀಡಿದ ನಿರ್ಣಯಗಳು ಎಂತಹ ಪತ್ತೆದಾರನಿಗೂ ಕೀಳರಿಮೆ ಹುಟ್ಟಿಸಬಲ್ಲವು. ಗೋವಿನ ಹಾಡಿನ ಕರ್ತೃತ್ವದಲ್ಲಿ ಹೀಗೆಲ್ಲ ಚರ್ಚೆಗಳಾಗಿಲ್ಲ. </span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಗೋವಿನ ಹಾಡನ್ನು ಸಂಪಾದಿಸಿ ವಿಸ್ತೃತ,ಪರಿಷ್ಕೃತ ಆವೃತ್ತಿಗಳನ್ನು ಇಬ್ಬರು ವಿದ್ವನ್ಮಹನೀಯರು ತಂದಿದ್ದಾರೆ - ಡಿ ಎಲ್ ನರಸಿಂಹಾಚಾರ್ಯ ಮತ್ತು ತಾಳ್ತಜೆ ಕೇಶವ ಭಟ್ಟ. ಡಿ ಎಲ್. ಎನ್ ಅವರದ್ದು ಮೇರುಸದೃಶವಾದ ಪಾಂಡಿತ್ಯ. ಇವರು ಸ್ಪಷ್ಟವಾಗಿ, ಈ ಹಾಡನ್ನು ರಚಿಸಿದವರಾರೋ ಗೊತ್ತಿಲ್ಲ ಅಂತಲೇ ಬರೆದಿದ್ದಾರೆ. ಸಾವಿರ ವರ್ಷಗಳ ಹಿಂದಿನ ಕೃತಿಗಳ ಜನ್ಮ ಜಾಲಾಡಿಬಿಡುತ್ತಿದ್ದ ಇಂಥಹಾ ವಿದ್ವನ್ಮಣಿಗೆ ತಮ್ಮ ಮೊದಲ ತಲೆಮಾರಿನವರೊಬ್ಬರು ಒಂದು ಪದ್ಯವನ್ನು ಬರೆದ ವಿಚಾರ ಗೊತ್ತಾಗಲಿಲ್ಲ ಅಂತ ಒಪ್ಪುವುದು ನನಗಂತೂ ಕಷ್ಟವೇ ಸರಿ. ಇಲ್ಲಿ ಇನ್ನೊಂದು ತಮಾಷೆಯೂ ಇದೆ. ಡಿ ಎಲ್ ನರಸಿಂಹಾಚಾರ್ ಅವರು ತಾವು ನೋಡಿದ್ದು, ಆಕರವಾಗಿ ಇಟ್ಟುಕೊಂಡದ್ದು ಸರಸ್ವತೀ ಭಂಡಾರದ ಓಲೆಯ ಪ್ರತಿ ಮತ್ತು ಮೈಸೂರು ಓರಿಯೆಂಟಲ್ ಲೈಬ್ರರಿಯ ಪ್ರತಿಗಳನ್ನು ಅಂತ ಕೊಟ್ಟಿದ್ದಾರೆ. 1870ರ ಆಸುಪಾಸಿನ ಕೃತಿಯೊಂದು ತಾಳೆಗರಿಗಳಲ್ಲಿ, ಓಲೆಯ ಪ್ರತಿಗಳಲ್ಲಿ ಸಿಗುತ್ತದೆಯೇ ? ಇದೀಗ ಯೋಚನೆ ಮಾಡಬೇಕಾದ ಅಂಶ!</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಇನ್ನು ಇನ್ನೊಬ್ಬ ದೊಡ್ಡ ವಿದ್ವಾಂಸರಾದ ತಾಳ್ತಜೆ ಕೇಶವ ಭಟ್ಟರು ಸಂಪಾದಿಸಿದ್ದು ಅವರ ತಂದೆಯವರೇ ಲಿಪಿಕಾರನಾಗಿ 1915ರಲ್ಲಿ ಮಾಡಿಟ್ಟಿದ್ದ ಪ್ರತಿಯೊಂದರಿಂದ, ಅವರ ತಂದೆಯವರೂ ಪ್ರತಿ ಮಾಡಿದ್ದು ತಾಳೆಯೋಲೆಯಿಂದಲೇ ಇರಬೇಕಷ್ಟೇ. ಇದು ದಕ್ಷಿಣ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಹಾಡಾಗಿರಬೇಕು. ಗುಬ್ಬಿ ಗುರುಸಿದ್ದಪ್ಪನವರು ಬರೆದ ಗೋವುಚರಿತ್ರೆ ಎಂಬ ಒಂದು ಯಕ್ಷಗಾನ ಪ್ರಸಂಗ 1895ರಲ್ಲೇ ಇದ್ದದ್ದನ್ನೂ ಅವರೇ ನಮೂದಿಸಿದ್ದಾರೆ.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಈ ಕಥೆಗೆ ಸಂಸ್ಕೃತದ ‘ಇತಿಹಾಸ ಸಮುಚ್ಚಯ’ ಎಂಬ ಗ್ರಂಥದಲ್ಲಿನ ಕಥೆಯೊಂದೇ ಮೂಲವೆನ್ನುವ ವಿಚಾರಕ್ಕೆ ಮೇಲಿನ ಇಬ್ಬರು ವಿದ್ವಾಂಸರ ಸಮ್ಮತಿಯೂ ಇದೆ. (ಬಹುಶಃ ಇವರಿಬ್ಬರು ಕೊಟ್ಟಿರುವುದರ ಆಧಾರದ ಮೇಲೆ) ಕೆ.ವಿ.ಸುಬ್ಬಣ್ಣನವರು ತಮ್ಮ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಕೃತಿಯಲ್ಲಿ ಹೀಗೆ ಬರೆದಿದ್ದಾರೆ :</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">"ಸಂಸ್ಕೃತದ ‘ಪದ್ಮಪುರಾಣ’ದಲ್ಲಿ ಮತ್ತು ‘ಇತಿಹಾಸ ಸಮುಚ್ಚಯ’ವೆಂಬುದರಲ್ಲಿ ಈ ಕಥೆ ಬರುತ್ತದಂತೆ. ‘ಪದ್ಮ ಪುರಾಣ’ದಲ್ಲಿ ಶಾಪಗ್ರಸ್ತನಾದ ಪ್ರಭಂಜನನೆನ್ನುವನು ಹುಲಿಯ ಜನ್ಮ ತಾಳಿರುತ್ತಾನೆ. ‘ಇತಿಹಾಸ ಸಮುಚ್ಚಯ’ದಲ್ಲಿ ಅದು, ಭೀಷ್ಮನು ಧರ್ಮರಾಯನಿಗೆ ಹೇಳುವ ‘ಬಹುಲೋಪಾಖ್ಯಾನ’; ಬಹುಲಾ ಎಂಬುದು ಹಸು, ಕಾಮರೂಪಿಯೆಂಬುದು ಹುಲಿ. ಇವೆಲ್ಲಕ್ಕೂ ಪ್ರಾಯಶಃ ಮೊದಲೇ, ಕಾಲಿದಾಸನ ‘ರಘುವಂಶ’ದ ದಿಲೀಪಾಖ್ಯಾನದಲ್ಲಿ ನಂದಿನಿಯ ಮೇಲೆ ಆಕ್ರಮಣ ನಡೆಸಲು ಬಂದ ಸಿಂಹದ ಇಂಥದೇ ಕಥೆ ಉಂಟಲ್ಲ? ‘ರಘುವಂಶ’ದ ಸಿಂಹವು</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ನಂದಿಯೇ ಸೃಷ್ಟಿಸಿದ ಮಾಯೆ. ಅವೆಲ್ಲ ಇದ್ದರೂ ಈ ಕನ್ನಡ ಹಾಡಿನ ಸ್ವಂತಿಕೆ ಅನನ್ಯತ್ವಗಳಿಗೆ ಆಪೋಹವಿಲ್ಲ"</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಗೋವಿನ ಹಾಡು ಮತ್ತೊಂದು ರೂಪದಲ್ಲಿ ಸಿಗುವುದು ಕೆ ಶಿವರಾಮ ಐತಾಳರ 'ದಕ್ಷಿಣ ಕನ್ನಡದ ಜನಪದ ಸಾಹಿತ್ಯ' ಎಂಬ ಕೃತಿಯಲ್ಲಿ. ಇಲ್ಲಿ ಬರುವ ಹಾಡಿನ ಕಥೆ ಗೋವಿನ ಹಾಡಿನದ್ದೇ ಆದರೂ ನಿರೂಪಣೆ ಬೇರೆಯೇ ತರದಲ್ಲಿ ಇದೆ. ಇದು ತ್ರಿಪದಿಯಲ್ಲಿದೆ, ಇದರ ಗಾತ್ರವೂ ಕಿರಿದು. ದಕ್ಷಿಣ ಕನ್ನಡ ಅಂತಿದ್ದರೂ ಭಾಷೆ ಅಲ್ಲಿಯದರಂತೆ ತೋರಲಿಲ್ಲ. ‘ಇತಿಹಾಸ ಸಮುಚ್ಚಯ’ದಲ್ಲಿ ಈ ಕಥೆಯನ್ನು ಭೀಷ್ಮನು ಧರ್ಮರಾಯನಿಗೆ ಹೇಳಿದ್ದರ ಪ್ರಸ್ತಾವ ಬಂತಲ್ಲ, ಈ ಕೃತಿಯಲ್ಲಿಯೂ ಹಾಗೇ ಇದೆ. ಶಿವರಾಮ ಐತಾಳರ ಸವಿಸ್ತಾರವೂ ಉಪಯುಕ್ತವೂ ಆದ ಪ್ರಸ್ತಾವನೆ ಇದರ ಇನ್ನೊಂದು ವಿಶೇಷ .</span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕ.ರಾ.ಕೃಷ್ಣಸ್ವಾಮಿಯವರು ಸಂಪಾದಿಸಿದ ತೀರ್ಥಹಳ್ಳಿ ಕಡೆಯ 'ಕೌಲೆ ಹಾಡು' ಇದೇ ಕಥೆಯ ಮತ್ತೊಂದು ಅವತಾರ. ಈ ಹಾಡಿನಲ್ಲಿ ಹುಲಿ ಆತ್ಮಬಲಿ ಎಲ್ಲ ಮಾಡುವಷ್ಟು ಕರುಣರಸ ಇಲ್ಲ, ಇದರಲ್ಲಿ ಹುಲಿ ಹಸುವನ್ನು ತಿಂದು, ಕರು ಅಮ್ಮನನ್ನು ಹುಡುಕಿಕೊಂಡು ಬಂದು, ಹುಲಿಯ ಜೊತೆ ಹೋರಾಟ ಮಾಡುವಂತೆ ಕಥೆಯನ್ನು ತಿರುಗಿಸಲಾಗಿದೆ. </span><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಕಾಪಸೆ ರೇವಪ್ಪ ಎಂಬವರು ಸಂಗ್ರಹ ಮಾಡಿಕೊಟ್ಟಿರುವ, ತ್ರಿಪದಿಯಲ್ಲಿರುವ 'ಆಕಳ ಹಾಡು' ಉತ್ತರ ಕರ್ನಾಟಕದ ಸೊಗಡಿನ ಭಾಷೆಯ ಹಾಡು, ಇದರಲ್ಲಿ ಬರೀ 31 ಪದ್ಯಗಳಿವೆ, ಇಲ್ಲಿನದ್ದು ಋಷಿಯ ಆಶ್ರಮದ ಹಸು. ಇಲ್ಲಿ ಹುಲಿಯ ಪ್ರಾಣತ್ಯಾಗ ಮಾಡಿಸದೇ ದೇವತೆಗಳನ್ನು ಬರಿಸಿ ಕಥೆಗೆ ಸುಖಾಂತ್ಯ ಕೊಡಲಾಗಿದೆ. ಇದರಿಂದ ಹಾಡಿನ ಮನಕಲಕುವ ಗುಣ ಕಡಮೆಯಾಗುತ್ತದೆ ಎಂಬುದು ಬೇರೆ ಮಾತು. </span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಮೇಲೆ ತೋರಿಸಿದಂತೆ ಈ ಹಾಡಿಗೆ ಬಹಳಷ್ಟು ಪಾಠಾಂತರಗಳು,ಮರುನಿರೂಪಣೆಗಳು, ಆಕೃತಿಗಳು ಇವೆ ಅನ್ನುವುದು ಸ್ಪಷ್ಟ. ಡಿ.ಎಲ್.ಎನ್ ಮತ್ತು ಕೇಶವ ಭಟ್ಟರು ಸಂಪಾದಿಸಿದ ಆವೃತ್ತಿಗಳಲ್ಲೇ ಎಷ್ಟೋ ವ್ಯತ್ಯಾಸಗಳಿವೆ. ಹೊಸ ಕೃತಿಗಳಿಗೆ ಹೀಗೆ ಅಷ್ಟೊಂದು ಪಾಠಾಂತರಗಳು ಇರುವುದಿಲ್ಲ. ಉದಾ: ಪಂಜೆ ಮಂಗೇಶರಾಯರೋ , ಮಂಜೇಶ್ವರ ಗೋವಿಂದ ಪೈಗಳೋ ಬರೆದ ಹಾಡೊಂದು ಹತ್ತು ಕಡೆಗಳಲ್ಲಿ ಹತ್ತು ತರದ ಸಾಹಿತ್ಯ ಹೊಂದಿರುವುದಿಲ್ಲ. ಹೀಗಾಗುವುದು ಪ್ರಾಚೀನ ಕೃತಿಗಳಲ್ಲಿ, ಓಲೆಗರಿಯ ಪ್ರತಿಗಳಲ್ಲೇ ಜಾಸ್ತಿ. ಇನ್ನುಳಿದದ್ದು, 'ಬೆಳಗೆರೆ ಕೃಷ್ಣಶಾಸ್ತ್ರಿಗಳು ಗೋವಿನ ಹಾಡನ್ನು ವಾಸುದೇವಯ್ಯನವರೇ ಬರೆದದ್ದೆಂದು ಹೇಳಿದ್ದಾರೆ' ಎಂಬ ಹೇಳಿಕೆ. ಶಾಸ್ತ್ರಿಗಳು ಏನು ಹೇಳಿದರೋ, ಅವರು ಹೇಳಿದ್ದನ್ನು ಸರಿಯಾಗಿ ಗ್ರಹಿಸದೇ ಯಾರಾದರೂ misquote ಮಾಡಿದರೋ, ಶಾಸ್ತ್ರಿಗಳೇ ಬೇರೆ ಯಾರೋ ಹೇಳಿದ್ದನ್ನು ಕೇಳಿ ಹೇಳಿದರೋ ಅಂತ ಇನ್ನು ಗೊತ್ತಾಗುವುದು ಕಷ್ಟ. ಏನೇ ಇದ್ದರೂ ಇಂತಹಾ ವಿಷಯಗಳಿಗೆ ಅವರೊಬ್ಬರ ಹೇಳಿಕೆ ಸಾಕಾಗುವುದಿಲ್ಲ ಎಂದಷ್ಟೇ ಹೇಳಬಹುದು.</span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">"ಜನರಿಗಾಗಿ ಜನಜೀವನವನ್ನು ಜನಸಾಮಾನ್ಯರು ತಿರುಳುಗನ್ನಡದಲ್ಲಿ ರಸವತ್ತಾಗಿ ಚಿತ್ರಿಸಿದ್ದೇ ಜನಪದ ಸಾಹಿತ್ಯ" ಅಂತ ಉತ್ತಂಗಿ ಚೆನ್ನಪ್ಪನವರು ಹೇಳಿದ ಮಾತಿನಿಂದ, "ಜನರಿಗಾಗಿ, ತಿರುಳುಗನ್ನಡದಲ್ಲಿ, ರಸವತ್ತಾಗಿ ಚಿತ್ರಿಸಿದ್ದು" ಮುಂತಾದ ಗುಣವಿಶೇಷಗಳನ್ನು ಗೋವಿನ ಹಾಡಿಗೂ ಅನ್ವಯಿಸಬಹುದು. ಇದರ ಕಥೆ ನಾಟಕೀಯ. ಈಗಲೂ ನಾಟಕವಾಗಿ ಮಾಡಿದರೆ ರಂಗಸ್ಥಳದಲ್ಲಿ ಸೊಗಸಾಗಿ ಮೂಡಿಬರುತ್ತದೆ, ಹೀಗಾಗಿ ಇದನ್ನು ಜನ ನಾಟಕವಾಗಿ ಆಡುತ್ತಲೂ ಇದ್ದಿರಬಹುದೇನೋ ಎಂಬ ಊಹೆಗೆ ಅವಕಾಶವುಂಟು. ಅಂತೂ ಈ ಹಾಡು ಒಂದು ಪಕ್ಷದಲ್ಲಿ ಬರೆಹದ ರೂಪದಲ್ಲಿ ಇರದೇ ಹೋಗಿದ್ದರೂ, ಊರಿನಲ್ಲಿ ಯಾರೋ ಹಾಡುವುದನ್ನು ಕೇಳಿಯೋ, ಅಜ್ಜಿಯಿಂದಲೋ ಅಮ್ಮನಿಂದಲೋ ಕಲಿತೋ, ಮೌಖಿಕವಾಗಿಯೇ ತಲೆಮಾರಿನಿಂದ ತಲೆಮಾರಿಗೆ ಬರುತ್ತಿತ್ತೆನ್ನಲಿಕ್ಕೆ ಅಡ್ಡಿಯಿಲ್ಲ. </span><br style="background-color: white; color: #222222; font-family: Arial, Helvetica, sans-serif; font-size: small;" /><br style="background-color: white; color: #222222; font-family: Arial, Helvetica, sans-serif; font-size: small;" /><span style="background-color: white; color: #222222; font-family: Arial, Helvetica, sans-serif; font-size: small;">ಚ.ವಾಸುದೇವಯ್ಯನವರಿಗೆ ಇಲ್ಲಿಂದಲೇ ಒಂದು ಗೌರವಪೂರ್ವಕ ನಮಸ್ಕಾರ ಹಾಕಿ, ಯಾರಾದರೂ ಪುಣ್ಯಕೋಟಿಯ ಜಾಡು ಹಿಡಿದು, ಅದರ ಕವಿಯ ಹೆಸರನ್ನು ಕಂಡುಹಿಡಿಯಲಿ ಅಂತ ಆಶಿಸೋಣ.</span><div><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjvUtIycidg53LYmcmb2B9HjBOgVG9RJV100I45xR3ic2SDMdvXy442K0UHxjJl4TZuNpjsWyMU9GaM3Z1bGYYbYnISpUp_GxwfWwNBk5E_ww-fNakXIATa-wyV-T6amRMUCsVX5zm8qJI/s1370/myfile_name.jpg" imageanchor="1" style="margin-left: 1em; margin-right: 1em;"><img border="0" data-original-height="1370" data-original-width="1348" height="320" src="https://blogger.googleusercontent.com/img/b/R29vZ2xl/AVvXsEjvUtIycidg53LYmcmb2B9HjBOgVG9RJV100I45xR3ic2SDMdvXy442K0UHxjJl4TZuNpjsWyMU9GaM3Z1bGYYbYnISpUp_GxwfWwNBk5E_ww-fNakXIATa-wyV-T6amRMUCsVX5zm8qJI/s320/myfile_name.jpg" /></a></div><br /><span style="background-color: white; color: #222222; font-family: Arial, Helvetica, sans-serif; font-size: small;"><br /></span></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-66352028087609734612020-12-19T08:29:00.004-08:002020-12-19T08:29:39.056-08:00Dia - Kannada movie<p> <span style="background-color: white; color: #050505; font-family: inherit; font-size: 15px; white-space: pre-wrap;">The funny thing about Dia is that, it tempts you to praise it for what it is not. The film does not have an earth shatteringly distinctive story. The plot wouldn't exactly invoke an urge in you to compare it to a Nolan screenplay. There is no action or anything remotely similar to a fight and no, there is not much comedy, sorry Sadhu and Chikkanna fans! There is not much for fans of horror or suspense either. Tssk! </span></p><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">Heroism and build up? No sir! Villains ? Naa baba naa. Breathtaking locations then? No. And for those want a longer list of "No"s, there are no songs either! How on earth can anyone make an engaging movie without any of these then? The director somehow magically pulls it off, an accomplishment I would've once thought inconceivable. It is the fragrance of genuine warmth,innocence and grace that happens to be the director's magical wand. It is those intimate, beautifully observed small moments beaming with warmth that turn a 90s type old fashioned story into something delicate, dignified and honestly moving. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">Almost a disney film like cheerfulness in the background score by Ajaneesh adds to the mood. New faces and their fresh voices help. We were discussing as to how a single dubbing artist seems to be lending her voice to almost every heroine, hence creating some sort of monotony and how it felt so fresh to hear Manvita Hareesh's voice in Kendasampige. Here also the heroine's voice seems new. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">Characters(especially the leading lady and her voice-overs) are cute and the progression of their affection for one another is believable and not as artificial as is generally the case in the routine masala movies. This genuineness matters. There also is a deliberate attempt to avoid most of the cliches and infuse freshness in the narration. Result is a film of moods and tones and pools of feeling, full of moving moments and tenderness. This is as close as KFI can possibly get to humming KS Narsimhaswaami's love songs. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">Direction and writing is simple, yet assured, situations are explored with lyrical artistry and touching drama, touching mainly because we care about the characters. It is an achingly tender love story,that leaves a bittersweet or rather a bitter aftertaste, it is no wonder that the suddenness of the climax and the bitter aftertaste exasperated many. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">All said, this film is an evidence that sometimes it's the simple, unfussy storytelling that comes off best.</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-73980041487255776582020-12-19T08:28:00.002-08:002020-12-19T08:28:22.794-08:00ಅಣಕವಾಡುಗಳು<p> <span style="background-color: white; color: #050505; font-family: inherit; font-size: 15px; white-space: pre-wrap;">ಸುಮ್ಮನೆ ಏನನ್ನೋ ನೋಡುತ್ತಿದ್ದಾಗ ಸಿಕ್ಕಿದ ನಾಲ್ಕೈದು ಅಣಕವಾಡು(parody)ಗಳು ಕಚಗುಳಿಯಿಟ್ಟವು, ನಿಮ್ಮ ಖುಷಿಗೆ ಅವನ್ನಿಲ್ಲಿ ಕೊಡುತ್ತಿದ್ದೇನೆ(ಶತಾವಧಾನಿ ಗಣೇಶ್ ಮತ್ತವರ ಬಳಗದವರು ನಡೆಸುತ್ತಿರುವ ಪದ್ಯಪಾನ ಸೈಟಿನಿಂದ ಹೆಕ್ಕಿದ್ದು). ಅಣಕಗಳು ಮೂಲಪದ್ಯದ ಪದಪ್ರಯೋಗ,ಛಂದಸ್ಸು, ಗತಿಗಳನ್ನು ಅನುಕರಣೆ ಮಾಡುವುದರಿಂದ ಅವನ್ನು ಹಾಡಿದರೆ ರಸಾಸ್ವಾದ ಹೆಚ್ಚು. ಹೇಗೂ ಅಣಕಿಸುವುದಾದರೆ ಮಹಾಕವಿ ಕುಮಾರವ್ಯಾಸನನ್ನೇ ಅಣಕಿಸಿದರೆ ಮಜಾ ಅಲ್ಲವೇ ? ಆ ಕವಿ ತನ್ನ ಕಾವ್ಯದ ಬಗ್ಗೆ ಬರೆದುಕೊಂಡ ಸಾಲುಗಳಿವು: </span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">ಅರಸುಗಳಿಗಿದು ವೀರ ದ್ವಿಜರಿಗೆ</div><div dir="auto" style="font-family: inherit;">ಪರಮವೇದದ ಸಾರ ಯೋಗೀ-</div><div dir="auto" style="font-family: inherit;">ಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ</div><div dir="auto" style="font-family: inherit;">ವಿರಹಿಗಳ ಶೃಂಗಾರ ವಿದ್ಯಾ-</div><div dir="auto" style="font-family: inherit;">ಪರಿಣತರಲಂಕಾರ ಕಾವ್ಯಕೆ</div><div dir="auto" style="font-family: inherit;">ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಈ ಸಾಲುಗಳು ನಮ್ಮ ಗಾಂಧಿನಗರದ ಮಾಸ್ ಚಿತ್ರಗಳ ನಿರ್ಮಾಪಕರು ಆಗಾಗ ಹೇಳುವುದನ್ನು ಹೇಗೆ ಹೋಲುತ್ತವೆ ಅಂತ ಒಂದು ತಲೆಹರಟೆಯ ಕಲ್ಪನೆಯನ್ನು ನಾನು ಹಿಂದೊಮ್ಮೆ ಮಾಡಿದ್ದೆ:</div><div dir="auto" style="font-family: inherit;">ಅರಸುಗಳಿಗಿದು ವೀರ - ಇಲ್ಲಿ ನಂ ಹೀರೋದು ಒಂದು ಸಕ್ಕತ್ ಫೈಟ್ ಬರುತ್ತೆ.</div><div dir="auto" style="font-family: inherit;">ದ್ವಿಜರಿಗೆ ಪರಮ ವೇದದ ಸಾರ - ನಮ್ಮ ಯೋಗರಾಜ ಭಟ್ರು ಬರೆದಿರೋ ಓತ್ಲಾ ವೇದಾಂತ ಸಾಂಗು ಬರುತ್ತೆ , ಹರಿಕೃಷ್ಣ ಮತ್ತೆ ಟಿಪ್ಪು ಹಾಡ್ತಾರೆ</div><div dir="auto" style="font-family: inherit;">ಯೋಗೀಶ್ವರರ ತತ್ತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ - ಫ್ಯಾಮಿಲಿಗೆ ಒಂದೊಳ್ಳೆ ಮೆಸೇಜ್ ಕೊಟ್ಟಿದೀವಿ !</div><div dir="auto" style="font-family: inherit;">ವಿರಹಿಗಳ ಶೃಂಗಾರ - ಇಲ್ಲಿ ಕಾಯ್ಕಿಣಿ ಸರ್ ದು ಪ್ಯಾಥೋ ಸಾಂಗ್ ಬರುತ್ತೆ ಸೋನು ನಿಗಂ ವಾಯ್ಸಲ್ಲಿ !</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅದು ಹಾಗಿರಲಿ, ಈಗ ಈ ಪದ್ಯದ ವಿಡಂಬನ ಮಾಡಿ ಬರೆದಿರುವ ಪದ್ಯಗಳನ್ನು ನೋಡೋಣ. </div><div dir="auto" style="font-family: inherit;">ಮೊದಲಿಗೆ ನೀಲಕಂಠ ಅವರ ರಚನೆ :</div><div dir="auto" style="font-family: inherit;">ಅರಸುಗಳಿಗಿದು ನೀರ, ದ್ವಿಜರಿಗೆ</div><div dir="auto" style="font-family: inherit;">ಪರಮಭೋಜನಸಾರ, ಭೋಗೀ-</div><div dir="auto" style="font-family: inherit;">ಶ್ವರರ ವಿತ್ತವಿಚಾರ (ಪಿತ್ಥವಿಕಾರ), ಮಂತ್ರಿಜನಕ್ಕೆ ನರಿಯ ಗುಣ</div><div dir="auto" style="font-family: inherit;">ವಿರಹಿಗಳು ಬೇರೊಬ್ಬರನರಸೆ</div><div dir="auto" style="font-family: inherit;">ಪರಿಣತಿಯ ಬೋಧವಿದು, ಕಾವ್ಯಕೆ</div><div dir="auto" style="font-family: inherit;">ಗುರುತದುಂಟೇ ನೀಲಕಂಠನೆ ರಚಿಸೆ ಭಾರತವ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅವರದ್ದೇ ಇನ್ನೊಂದು ಪದ್ಯ:</div><div dir="auto" style="font-family: inherit;">ನೆರೆಯ ಮನೆಗಿವ ದೂರ, ನಿತ್ಯದ</div><div dir="auto" style="font-family: inherit;">ತರಲೆ ತಂಟೆಗೆ ಶೂರ, ಮಾತಿನೊ-</div><div dir="auto" style="font-family: inherit;">ಳರೆದ ಮೆಣಸಿನ ಖಾರ, ಕಂತ್ರಿಜನಕ್ಕೆ ಮಂತ್ರಿಯಿವ</div><div dir="auto" style="font-family: inherit;">ಸಿರಿಯು ಕಾಲ್ಕೆಳಗಾಡುತಿದ್ದರು</div><div dir="auto" style="font-family: inherit;">ಕರೆದು ಕೊಟ್ಟವನಲ್ಲ ಕೇಳ್ವರ,</div><div dir="auto" style="font-family: inherit;">ಹೊರುವ ಜನರಿಗೆ ಭಾರ ಕೊನೆಗೀತನ ಕಳೇಬರವು</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಸೋಮ ಅವರ ಪದ್ಯವನ್ನೂ ಓದಿಬಿಡಿ:</div><div dir="auto" style="font-family: inherit;">ಅರಸರನೆ ಬಿಡ ಪೋರ, ದ್ವಿಜರೆನೆ</div><div dir="auto" style="font-family: inherit;">ಕೊರಮಗಾಗದಪಾರ ಕೂಗೇ-</div><div dir="auto" style="font-family: inherit;">ನರರೆ, ತತ್ವವಿಚಾರ ಕಂತ್ರಿಜನಕ್ಕೆ ಬುದ್ಧಿಗುಣ</div><div dir="auto" style="font-family: inherit;">ಗುರುಹಿರಿಯರಿಂ ದೂರವಿದ್ಯಾ-</div><div dir="auto" style="font-family: inherit;">ಪರಿಣತರಲಂಕಾರ ಕೀಳ್ಮೆಗೆ-</div><div dir="auto" style="font-family: inherit;">ಗುರುವೆ ಕನಯಕುಮಾರ ಜೇಎನ್ಯು ಪೀಡೆ ಭಾರತಕೆ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಕಾಂಚನಾ ಅವರಿಗೆ ಹೊಳೆದ ಸಾಲುಗಳು:</div><div dir="auto" style="font-family: inherit;">ಅರಸುಗಳಿಗಿದು ಸೇರ,ದ್ವಿಜರಿಗೆ</div><div dir="auto" style="font-family: inherit;">ಪರಮ ಮೋದದ”ಸಾರ”ಯೋಗೀ</div><div dir="auto" style="font-family: inherit;">ಶ್ವರರ ಪಥ್ಯಕೆ ಬಾರ,ಮಂತ್ರಿಜಗ ಕ್ಕೆ ವರ್ಜ್ಯ ಕಣಾ!</div><div dir="auto" style="font-family: inherit;">ಸುರಿಯಲಿದು ಬಂಗಾರ,ಪಾಕದ</div><div dir="auto" style="font-family: inherit;">ಪರಿಣತಿಗಲಂಕಾರ,ಭೋಜ್ಯಕೆ</div><div dir="auto" style="font-family: inherit;">ಗುರುವೆನುತೆ ಕುದಿಸಿದ ಕುಮಾರ ಭಟ್ಟ ,ಬೇಳೆಯನು!!</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಸೋಮ ಅವರ ಮತ್ತೊಂದು ರಚನೆಯನ್ನೋದಿ ಮುಗಿಸೋಣ :</div><div dir="auto" style="font-family: inherit;">ಚರಿತೆಯೊಳಗಿವ ಜಾರ, ವನಿತೆಯ-</div><div dir="auto" style="font-family: inherit;">ನರಸೆ ಜೀವನಸಾರ, ಭೋಗೀ-</div><div dir="auto" style="font-family: inherit;">ಶ್ವರರ ತತ್ತ್ವಕೆ ಧೀರ, ಮಂತ್ರಿಗಣಕ್ಕುಮೇರ್ದ ಕಣ</div><div dir="auto" style="font-family: inherit;">ಸುರರವೊಲೆ ಶೃಂಗಾರ, ಮದ್ಯದ-</div><div dir="auto" style="font-family: inherit;">ಪರಿಣತರಲಂಕಾರ, ಬ್ಯಾಂಕಿಗೆ</div><div dir="auto" style="font-family: inherit;">ಗರಗಸಮೆನಲು ಮಲ್ಯ ಮೆರೆಯುತೆ ತೊರೆದ ಭಾರತವ</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-90999566714213509342020-12-19T08:27:00.000-08:002020-12-19T08:27:00.832-08:00ಪಂಪಭಾರತ ಗಮಕ ವಾಚನ<p> <span style="background-color: white; color: #050505; font-family: inherit; font-size: 15px; white-space: pre-wrap;">ಋತುಮಾನ ವೆಬ್ ಸೈಟಿನವರು ಪ್ರಸ್ತುತಪಡಿಸುತ್ತಿರುವ ಪಂಪಭಾರತದ ಒಂದು ಭಾಗದ ಗಮಕ ವಾಚನ ಮತ್ತು ವ್ಯಾಖ್ಯಾನಕ್ಕೆ ನಾನು ಬರೆದಿರುವ ಪುಟ್ಟ ಪೀಠಿಕೆಯಿದು,ಟಿವಿ ವೆಂಕಟಾಚಲ ಶಾಸ್ತ್ರಿ, ಕೆ ಆರ್ ಗಣೇಶ್, ಸಿಪಿಕೆ, ಚಂದ್ರಶೇಖರ ಕೆದ್ಲಾಯ ಮುಂತಾದ ಮಹನೀಯರು ವೀಡಿಯೊದಲ್ಲಿದ್ದಾರೆ. ಗಮಕಕ್ಕೆ ಪ್ರಸ್ತಾವನೆಯಾಗಿ ಇದನ್ನು ಬರೆದಿರುವುದರಿಂದ ಒಂದು ಲೇಖನದ ಸೊಗಸು ಕಾಣಲಾರದೇನೋ ಎಂಬ ಹೆದರಿಕೆ, ಅರ್ಜೆಂಟಿನಲ್ಲಿ ಮಾಡಿದ ಅಡುಗೆ ಬೇರೆ, ಈ ಸಂಕೋಚದೊಂದಿಗೇ ಇದನ್ನು ನಿಮ್ಮ ಮುಂದಿಡುತ್ತಿದ್ದೇನೆ:</span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">ಪಂಪಭಾರತದಲ್ಲಿ ಭೀಷ್ಮ ಸೇನಾಧಿಪತ್ಯದ ಪ್ರಸಂಗವು ರಸವತ್ತಾದ ಭಾಗ. ಇಲ್ಲಿನ ಮೂರ್ನಾಲ್ಕು ಪದ್ಯಗಳು ಹತ್ತು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿವೆ, ಚರ್ಚೆಗಳನ್ನೂ ಎಬ್ಬಿಸಿವೆ. ಭೀಷ್ಮರ ನಿವಾಸಕ್ಕೆ ರಾತ್ರಿಯೇ ತೆರಳಿ, ಅವರ ಮನವೊಲಿಸಿ ಬಂದು, ಸಹಸ್ರ ಕಿರಣೋದಯವಾದಾಗ(ಬೆಳಗಾದಾಗ) ಅವರಿಗೆ ಸಕಲ ರಾಜವೈಭೋಗಗಳೊಂದಿಗೆ ಶಾಸ್ತ್ರೋಕ್ತವಾಗಿ ವೀರಪಟ್ಟವನ್ನು ಕಟ್ಟಲು ಧುರ್ಯೋಧನ ಹೊರಡುತ್ತಾನೆ. ಆ ಭೀಷ್ಮರಾದರೂ ಎಂಥವರು ? ಒಂದು ಕಾಲದಲ್ಲಿ ಪರಶುರಾಮನನ್ನೇ ಅಂಜಿಸಿದ ವೀರರು. ಅಂಥ ವೀರಾಗ್ರಣಿಯೇ ಸೇನಾಧಿಪತಿಯಾಗಿ ಬಂದು ನಿಂತರೆ, 'ಪಗೆವರನು ಎನ್ನ ಮಂಚದ ಕಾಲೊಳ್ ಕಟ್ಟಿದಂತೆಯೇ' ಎಂದು ಗರ್ವಿಸಿ ಉಬ್ಬುತ್ತಾನೆ ಧುರ್ಯೋಧನ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಕರ್ಣನಿಗೋ ಯೌವನದ ಸಹಜ ದುಡುಕು, ತನಗೆ ಎಷ್ಟೆಲ್ಲವನ್ನೂ ಕೊಟ್ಟ ದೊರೆಗೆ ಸ್ವಾಮಿನಿಷ್ಠೆಯನ್ನು ತೋರಿಸುವ ತವಕ, ಹಿಂದೊಮ್ಮೆ ಪಾಂಡವರು ತನ್ನ ಸೋದರರೆಂದು ತಿಳಿದಾಗ, ಅತ್ತ ತನ್ನವರನ್ನೂ ಕೊಲ್ಲಲಾರೆ ಇತ್ತ ತನ್ನನ್ನು ಪೂರ್ಣವಾಗಿ ನಂಬಿದ ಸುಯೋಧನನ್ನೂ ಬಿಡಲಾರೆ ಎಂಬ ಭಾವದಲ್ಲಿ, "ನನ್ನೊಡೆಯನಿಗಿಂತ ಮೊದಲು ನಾನೇ ಪರಾಕ್ರಮವನ್ನು ಅಂಗೀಕರಿಸಿ ಸಾಯುತ್ತೇನೆ(ತಱಸಂದುದ್ಧತ ವೈರಿ ಭೂಪ ಬಲದೊಡ್ಡಳ್ಳಾಡೆ ಲೆಕ್ಕಕ್ಕೆ ತಳ್ತಿಱದೆನ್ನಾಳ್ದನಿವಾನೆ ಮುಂಚೆ ನಿಱಪೆಂ ಕೆಯ್ಕೊಂಡು ಕಟ್ಟಾಯಮಂ)" ಎಂದು ನಿಷ್ಕರ್ಷೆ ಮಾಡಿಕೊಂಡವನಾತ, ಅಷ್ಟಾಗಿ ಹೆಜ್ಜೆ ಹೆಜ್ಜೆಗೂ ಜಾತಿಯ ಹೆಸರಿನಲ್ಲಿ ಆದ ಅವಮಾನಗಳಿಂದ ಮಡುಗಟ್ಟಿದ್ದ ಅಸಹಾಯಕತೆ, ಕೀಳರಿಮೆ ಮತ್ತು ಕ್ರೋಧಗಳು ಬೇರೆ ಇದ್ದವು .</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇಂಥಹಾ ಕರ್ಣನಿಗೆ ತನ್ನ ಗೆಳೆಯ, ತನ್ನ ದೊರೆ ತನ್ನನ್ನು ಬಿಟ್ಟು, ಹೋಗಿ ಹೋಗಿ ಒಬ್ಬ ಮುದುಕರಿಗೆ ಪಟ್ಟಗಟ್ಟಿದಾಗ ಬರಬಾರದ ಕೋಪವೇ ಬರುತ್ತದೆ. ತಾನಾದರೋ ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬಲ್ಲವನು, ಅದುಬಿಟ್ಟು ಈ ಹಣ್ಣುಹಣ್ಣು ಮುದುಕರಿಂದೇನಾದೀತು ಎಂಬುದು ಅವನ ವ್ಯಥೆ. ಭೀಷ್ಮರು ಕಣ್ಣು ಕಾಣದ ಮುದುಕನಂತೆ, ಬಿಲ್ಲನ್ನು ಊರುಗೋಲಾಗಿ ಹಿಡಿಯಬೇಕಾದ ದುರ್ಬಲ ವೃದ್ಧರಂತೆ(ಅವರು ಪಿಡಿದ ಬಿಲ್ಲೆ ದಂಟಿಂಗೆಣೆ) ಅವನಿಗೆ ಕಾಣುತ್ತಾರೆ. ಅವರ ಪೌರುಷ ದೇವಿ ಮೈಮೇಲೆ ಬಂದವರ ಆವೇಶದಂತೆ, ಕಟ್ಟುಕಥೆ(ಇಲ್ಲಿ ಬರುವ "ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಅರ್ಥವೇನು ಎಂಬುದರ ಬಗ್ಗೆ ವಿದ್ವದ್ವಲಯದಲ್ಲಿ ಸಾಕಷ್ಟು ಚರ್ಚೆಗಳಾಗಿವೆ). ಇಂತಹಾ ಮುದುಕರನ್ನು ಯುದ್ಧರಂಗಕ್ಕೆ ಒಯ್ದರೆ ಶತ್ರುಗಳು ಬಿದ್ದು ಬಿದ್ದು ನಕ್ಕಾರು ಅನಿಸುತ್ತದೆ ಕರ್ಣನಿಗೆ, ಇದೆಲ್ಲವನ್ನೂ ಬಾಯಿಬಿಟ್ಟು ಹೇಳಿಯೂ ಬಿಡುತ್ತಾನೆ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇಷ್ಟಾದಾಗ ದ್ರೋಣರು ತಾವೇನು ಕಮ್ಮಿ ಕೋಪದವರಲ್ಲ ಎಂಬಂತೆ ಕೆರಳಿಬಿಡುತ್ತಾರೆ. ಈ ಕೋಪೋದ್ರೇಕದಲ್ಲಿ ಜಾತಿ ಬಂದುಬಿಡುತ್ತದೆ ! ಸತ್ಕುಲಪ್ರಸೂತರಾದ ಭೀಷ್ಮರನ್ನು ಹೀಗೆ ಆಡಿಕೊಳ್ಳಬೇಕಾದರೆ ಹೀನಕುಲದವನದ್ದೇ ನಾಲಗೆಯಾಗಬೇಕು ಎಂದವರ ಎಣಿಕೆ. ನಾಲಗೆ ಕುಲಮಂ ತುಬ್ಬುವುದು(ಪ್ರಕಟಪಡಿಸುವುದು) ಎಂಬ ನಾಣ್ಣುಡಿ ನಿನ್ನಂಥವರಿಗೇ ಇರುವುದು ಎಂದಾಡಿಬಿಡುತ್ತಾರೆ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅಲ್ಲಿಗೆ ಕರ್ಣನ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದಂತಾಗುತ್ತದೆ. ದ್ರೋಣನ ಕರ್ಣಕಠೋರ ವಚನಗಳಿಗೆ ಉತ್ತರ ಪಟಪಟನೆ ಅವನ ಬಾಯಿಯಿಂದ ಹೊರಡುತ್ತದೆ. "ಕುಲಮನೆ ಮುನ್ನಂ ಉಗ್ಗಡಿಪಿರೇಂ ಗಳ" (ಬಾಯಿ ತೆಗೆದರೆ ಮೊದಲು ಕುಲವನ್ನೇ ಕುರಿತು ದೊಡ್ಡದಾಗಿ ಯಾಕೆ ಹೇಳುತ್ತೀರಿ ಸ್ವಾಮೀ?) ಎನ್ನುತ್ತಾನೆ. ಹಿಂದೊಮ್ಮೆ ಧನುರ್ವಿದ್ಯಾ ಪ್ರದರ್ಶನವಾದಾಗಲೂ, ಕರ್ಣ ಅರ್ಜುನನ ಜೊತೆ ಸ್ಪರ್ಧಿಸಹೊರಟಾಗ ಅವನು ಕುಲದ ಕಾರಣದಿಂದ ಅರ್ಜುನನಿಗೆ ಸಮನಲ್ಲ ಎಂಬ ಕಟುನಿಂದೆ ಕೇಳಿಬಂದಿತ್ತು. ಆಗ ಕರ್ಣನ ಪರವಾಗಿ ಧುರ್ಯೋಧನನೇ ಮಾತಾಡಿ, "ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ ಕುಲಮನಿಂತು ಪಿಕ್ಕದಿರಿಂ"(ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದಿದ್ದ. ಅದು ಕರ್ಣನಿಗೆ ನೆನಪಿದ್ದಿರಬೇಕು. ಮುಂಬರಿದು, "ನಿಮ್ಮ ಕುಲಂಗಳು ಆಂತು ಮಾರ್ಮಲೆವನನು ಅಟ್ಟಿ ತಿಂಬುವೆ" ಅಂತ ಸವಾಲು ಹಾಕುತ್ತಾನೆ(ಯುದ್ಧದಲ್ಲಿ ಎದುರಾಳಿ ಬಾಣಗಳ ಮಳೆಗರೆದಾಗ, "ನಾನು ಇಂಥಹಾ ಕುಲದವನು" ಅಂತ ಜಂಬ ಕೊಚ್ಚಿದರೆ, ನಿಮ್ಮ ಕುಲವೇನು ಯುದ್ಧ ಗೆದ್ದು ಕೊಡುತ್ತದೆಯೇ ಮಾರಾಯರೇ ಎಂಬ ಭಾವ).</div><div dir="auto" style="font-family: inherit;">ಕೊನೆಗೆ "ಕುಲಂ ಕುಲಮಲ್ತು, ಚಲಂ ಕುಲಂ,ಗುಣಂ ಕುಲಂ, ಅಭಿಮಾನಮೊಂದೆ ಕುಲಂ,ಅಣ್ಮು ಕುಲಂ"(ಹುಟ್ಟಿನಿಂದ ಬಂದದ್ದು ಕುಲವಲ್ಲ. ಚಲ, ಸದ್ಗುಣ, ಆತ್ಮಾಭಿಮಾನ, ಪರಾಕ್ರಮಗಳೇ ಕುಲ) ಎಂದುಸುರುತ್ತಾನೆ. ಪಂಪನ ಸಾಮಾಜಿಕ ಪ್ರಜ್ಞೆಗೆ ಇಲ್ಲಿ ಕರ್ಣ ಬಾಯಾಗುತ್ತಾನೆ. ಕಡೆಗೆ, ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ ಅಂತ ಬೇರೆ ಹೇಳುತ್ತಾನೆ!</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇಷ್ಟಾದ ಮೇಲೆ ಭೀಷ್ಮರು ತಣ್ಣಗೆ ಕರ್ಣನನ್ನು taunt ಮಾಡುವಂತೆ ಮಾತಾಡುತ್ತಾರೆ, 'ನಿನಗಿರುವಷ್ಟು ಕಲಿತನದ ಉಕ್ಕು, ಜವ್ವನದ ಸೊಕ್ಕು, ರಾಜನ ಗೆಳೆತನ, ತೋಳ್ಬಲದ ಶಕ್ತಿ ನನಗೆಲ್ಲಿದೆಯಪ್ಪಾ' ಎನ್ನುತ್ತಾರೆ. ಅಲ್ಲಿ ಅವರಾಡುವ "ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್" ಎಂಬ ಮಾತೂ ಬಹುಪ್ರಸಿದ್ಧ. "ಈ ಮಹಾಯುದ್ಧದಲ್ಲಿ ನಮಗೆ ಸಿಗುವುದು ವಿಜಯವಲ್ಲ, ನಮ್ಮದೇನಿದ್ದರೂ ಒಬ್ಬರಾದ ಮೇಲೆ ಒಬ್ಬರು ಪತನ ಹೊಂದುವ ಕೆಲಸ, ಸಾಯುವುದಕ್ಕೆ ನಮ್ಮ ಸರದಿ ಯಾವಾಗ ಬರುತ್ತದೆ ಅಂತ ಕಾಯುವ ಕೆಲಸ. ಹೀಗಾಗಿ, ಜಾಸ್ತಿ ಹಾರಾಡಬೇಡ, ನಿನ್ನ ಸರದಿಯೂ ಬಂದೇ ಬರುತ್ತದೆ" ಎಂಬ ವ್ಯಂಗ್ಯ ಭೀಷ್ಮರದು. ಇಷ್ಟು ಹೇಳಿ, "ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಅರ್ಜುನನ ರಥವು ಎಂಟು ಗಾವುದ ದೂರ ಹೋಗುವಂತೆ ಬಾಣಪ್ರಯೋಗ ಮಾಡುತ್ತೇನೆ, ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ಯೋಧರನ್ನು ಧರೆಗುರುಳಿಸುತ್ತೇನೆ" ಎಂದು ಭೀಷ್ಮರು ಮಹಾಪ್ರತಿಜ್ಞಾರೂಢರಾಗುವಲ್ಲಿಗೆ ಈ ಪ್ರಸಂಗ ಮುಗಿಯುತ್ತದೆ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಪೂರಕ ಓದಿಗೆ : </div><div dir="auto" style="font-family: inherit;">ಮುಳಿಯ ತಿಮ್ಮಪ್ಪಯ್ಯನವರ "ನಾಡೋಜ ಪಂಪ" ಎಂಬ ಅಧ್ಭುತ ಕೃತಿ </div><div dir="auto" style="font-family: inherit;">ವಿದ್ವಾನ್ ಕೆವಿ ಕೃಷ್ಣ ಭಟ್ಟರ 'ಕರ್ಣ ರಸಾಯನಂ' ಎಂಬ ಪುಸ್ತಕ</div><div dir="auto" style="font-family: inherit;">ಎಂ ಎಂ ಕಲಬುರ್ಗಿಯವರ "ನನ್ನಿಯೊಳಿನತನಯಂ" ಎಂಬ ಲೇಖನ </div><div dir="auto" style="font-family: inherit;">ಶಂಭಾ ಜೋಶಿಯವರ, 'ಕರ್ಣನ ಮೂರು ಚಿತ್ರಗಳು' ಎಂಬ ಲೇಖನ </div><div dir="auto" style="font-family: inherit;">"ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು" ಎಂಬ ಸಾಲಿನ ಬಗ್ಗೆ ಡಿ ಎಲ್ ನರಸಿಂಹಾಚಾರ್, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಚಿದಾನಂದ ಮೂರ್ತಿ ಇವರೆಲ್ಲ ಬರೆದಿರುವ ಲೇಖನಗಳು </div><div dir="auto" style="font-family: inherit;">ವಾಗರ್ಥ ಬಳಗದಲ್ಲಿ ಈ ಪದ್ಯದ ಸೂಕ್ಷ್ಮಗಳ ಬಗ್ಗೆ ನಡೆದ ಚರ್ಚೆಗಳು(<span style="font-family: inherit;"><a class="oajrlxb2 g5ia77u1 qu0x051f esr5mh6w e9989ue4 r7d6kgcz rq0escxv nhd2j8a9 nc684nl6 p7hjln8o kvgmc6g5 cxmmr5t8 oygrvhab hcukyx3x jb3vyjys rz4wbd8a qt6c0cv9 a8nywdso i1ao9s8h esuyzwwr f1sip0of lzcic4wl oo9gr5id gpro0wi8 lrazzd5p" href="https://www.facebook.com/groups/vagartha/permalink/1535529626537188/?__cft__[0]=AZUvaJKp7BO3gR5gWt8myH-TPtanci49R_3TF6b_rE9tCSho4JHqLLRhEaGgNtHHrih7jinEG7kX5cucvoRgLab_uPi-5dvujfgobTcQ4xp2LmCQ413OE7YFa_pSeTCE8oY&__tn__=-UK-R" role="link" style="-webkit-tap-highlight-color: transparent; background-color: transparent; border-color: initial; border-style: initial; border-width: 0px; box-sizing: border-box; cursor: pointer; display: inline; font-family: inherit; font-weight: 600; list-style: none; margin: 0px; outline: none; padding: 0px; text-align: inherit; touch-action: manipulation;" tabindex="0">https://www.facebook.com/groups/vagartha/permalink/1535529626537188/</a></span>)</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಗಮಕದ ವೀಡಿಯೊ ಇಲ್ಲಿದೆ :</div><div dir="auto" style="font-family: inherit;"><a href="https://www.youtube.com/watch?v=4N8JA9ljG2A">https://www.youtube.com/watch?v=4N8JA9ljG2A</a><br /></div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-59170182656052967292020-12-19T08:24:00.001-08:002020-12-19T08:24:08.255-08:00ಮಂಜೇಶ್ವರ ಗೋವಿಂದ ಪೈ ಎಂಬ ಅದ್ಭುತ<p> <span style="background-color: white; color: #050505; font-family: inherit; font-size: 15px; white-space: pre-wrap;">ಕನ್ನಡದಲ್ಲಿ ಅಸಾಧಾರಣ ಕೆಲಸ ಮಾಡಿದ ವಿದ್ವನ್ಮಣಿಗಳಿಗೆ ಮೆಚ್ಚಿಕೆ ಸಲ್ಲಿಸಿ ಅವರ ಪರಿಚಯವನ್ನು ಫೇಸ್ಬುಕ್ಕಿಗರಿಗೆ ಮಾಡಿಸುವ ಪ್ರಯತ್ನ. </span></p><div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0px; overflow-wrap: break-word; white-space: pre-wrap;"><div dir="auto" style="font-family: inherit;">ಪಂಡಿತರನ್ನು ಅಂಕಿಅಂಶಗಳಲ್ಲಿ ಅಳೆಯುವುದು ಆಫೀಸಿನ ಕೆಲಸವನ್ನು ಗಂಟೆಗಳಲ್ಲಿ ಅಳೆದಂತೆ ಬರೀ ತೋರಿಕೆಯ ಮಾತಾದೀತು. ಆದರೆ ಮಂಜೇಶ್ವರ ಗೋವಿಂದ ಪೈಗಳ ವಿಷಯ ಹಾಗಲ್ಲ. ಬ್ರಾಡ್ಮನ್ನನ ಸರಾಸರಿಯನ್ನು ನೋಡಿ ಬೆರಗಾಗುವಂತೆ ಆಗಬೇಕಾದರೆ ಇದನ್ನು ನೋಡಿ: ಗೋವಿಂದ ಪೈಗಳ ಗ್ರಂಥಸಂಗ್ರಹದಲ್ಲಿ ಸುಮಾರು 4750 ಪುಸ್ತಕಗಳು ಸಿಕ್ಕಿವೆ. ಅದರಲ್ಲೇನಿದೆ ಎನ್ನುವವರಿದ್ದರೆ, ಇನ್ನೊಂದು ವಿವರವನ್ನೂ ಹೇಳಿ ಬಿಡುತ್ತೇನೆ, ಸಿಕ್ಕಿದ ಸಂಗ್ರಹದಲ್ಲಿ 35 ಭಾಷೆಗಳ ಪುಸ್ತಕಗಳಿವೆ! ಇವುಗಳಲ್ಲಿ 22 ಭಾಷೆಗಳು ಪೈಗಳಿಗೆ ಗೊತ್ತಿದ್ದವು ! ಸಂಸ್ಕೃತ,ತುಳು, ಪ್ರಾಕೃತ, ಪಾಲಿ, ಬಂಗಾಲಿ, ಉರ್ದು,ಮರಾಠಿ, ಜರ್ಮನ್, ಜಪಾನಿಯಿಂದ ಮುಂತಾದ ಭಾಷೆಗಳಿಂದ ಅವರು ಭಾಷಾಂತರ ಮಾಡಿಯೂ ಇದ್ದಾರೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಈಜಿಪ್ಟಿನಲ್ಲಿ ಸಿಕ್ಕಿದ Oxyrhynchus Papyri ಎಂಬ ಪುರಾತನ ಕಾಗದಗಳ ಕಟ್ಟೊಂದರಲ್ಲಿರುವ, ಎರಡೂ ಕಾಲು ಸಾವಿರ ವರ್ಷ ಹಳೆಯ ಗ್ರೀಕ್ ನಾಟಕವೊಂದರಲ್ಲಿ ಕೆಲವು ಕನ್ನಡದ ಪದಗಳಿವೆ ಅಂತ, ಮೂಲ papyrusನಲ್ಲಿದ್ದ ನಾಟಕವನ್ನು ಗ್ರೀಕ್ ಭಾಷೆಯಲ್ಲಿಯೇ ಓದಿ ಪೈಗಳು ಹೇಳಿಯೂ ಇದ್ದಾರೆ ! ಹಿರಿಯಡಕ ಮುರಳೀಧರ ಉಪಾಧ್ಯರು ಭಾಷಣವೊಂದರಲ್ಲಿ ಹೇಳಿದಂತೆ, "ಬ್ರಿಟಿಷರ ಭಾರತದಲ್ಲಿ ತಮ್ಮ ಜೀವನದ 64 ವರ್ಷಗಳನ್ನು ಕಳೆದ ಪೈಗಳು ಜಗತ್ತಿನ ಜ್ಞಾನನಿಧಿ ಇಂಗ್ಲಿಷಿನಲ್ಲಿ ಮಾತ್ರ ಇದೆ ಎಂಬುದನ್ನು ಒಪ್ಪಲಿಲ್ಲ ಎಂಬುದು ಮಹತ್ವದ ಸಂಗತಿ. ಸಂಸ್ಕೃತ, ಪಾಲಿ, ಪ್ರಾಕೃತ, ಪರ್ಷಿಯನ್,ಜಪಾನಿ, ಚೀನೀ ಇಂಥ ಭಾಷೆಗಳಲ್ಲಿ ಜ್ಞಾನದ ಕೊಪ್ಪರಿಗೆಗಳಿವೆ ಎಂಬುದು ಅವರಿಗೆ ಗೊತ್ತಿತ್ತು"</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇನ್ನೊಬ್ಬ ಮಹಾಪಂಡಿತರಾದ ಸೇಡಿಯಾಪು ಕೃಷ್ಣ ಭಟ್ಟರು ಪೈಗಳ ಕೆಲಸದ ಬಗ್ಗೆ ಹೇಳಿರುವ ಮಾತುಗಳು most appropriate ಎಂಬಂತಿವೆ: "ಅವರು ನೂರಾರು ಗ್ರಂಥಗಳನ್ನು ಓದಿ ಸಾರಗ್ರಹಣ ಮಾಡಿ ಬರೆದ ಲೇಖನಗಳು ಇತರ ಎಷ್ಟೋ ಮಂದಿ ಸಂಶೋಧಕರೆಂಬವರ ಜ್ಞಾನಸಂಪತ್ತಿನ ಪೇಟಿಕೆಗಳಾಗಿವೆ. ಹೀಗೆ ಅವರು ಸಂಗ್ರಹಿಸಿದ ಜ್ಞಾನಸಂಪತ್ತು ಒಂದುದೃಷ್ಟಿಯಿಂದ ನೋಡಿದರೆ ಅವರ ಲೇಖನಗಳಿಂದ ಕನ್ನಡಕ್ಕೆ ಎಷ್ಟು ಪ್ರಯೋಜನವಾಗಿದೆಯೋ ಅದಕ್ಕಿಂತ ಎಷ್ಟೋ ಮಿಗಿಲೆಂಬುದರಲ್ಲಿ ಸಂದೇಹವಿರಲಾರದು. ಹೀಗೆ ಸಂಶೋಧನಕ್ಕೆ ಬೇಕಾದ ಮೂಲದ್ರವ್ಯಗಳನ್ನು ಏಕಾಂಗವೀರತೆಯಿಂದ ಸಂಗ್ರಹಿಸಿ ಅವರು ಮಾಡಿದ ಅದ್ಭುತಕಾರ್ಯವನ್ನು ಕಾಡಿನಲ್ಲಿ ಒಂಟಿಯಾಗಿ ಕುಳಿತು ತಪಸ್ಸು ಮಾಡಿ ಸಿದ್ಧಿಯನ್ನು ಪಡೆಯುತ್ತಿದ್ದ ಪುರಾಣಮುನಿಗಳ ಪ್ರಯತ್ನಕ್ಕೆ ಹೋಲಿಸಬಹುದು. ಅವರ ನಿಗಮನಗಳಲ್ಲಿ ಹಲವು ನನಗೆ ಒಪ್ಪಿಗೆಯಾಗದಿದ್ದರೂ ಅವರ ಇಂತಹ ಸಂಗ್ರಹಗಳಿಂದ ಅಷ್ಟಿಷ್ಟು ಪ್ರಯೋಜನವನ್ನು ಪ್ರಸಾದರೂಪವಾಗಿ ಪಡೆದ ಕಿರಿಯರೊಳಗೆ ನಾನೂ ಒಬ್ಬನು ಎಂದು ಕೃತಜ್ಞತಾಪೂರ್ವಕವಾಗಿ ನಿವೇದಿಸುತ್ತಿದ್ದೇನೆ", ಸೇಡಿಯಾಪು ಅವರು ಅಳೆದು ತೂಗಿ, ಒಂದಕ್ಷರವೂ ಬದಲಿಸಲಾಗದಂತೆ ಕೊಟ್ಟಿರುವ ಈ ಪ್ರಶಂಸೆಯ ಸರ್ಟಿಫಿಕೇಟು ಎಲ್ಲವನ್ನೂ ಹೇಳುತ್ತದೆ. ಪೈಗಳ ಸಮಗ್ರ ಸಂಶೋಧನ ಸಂಪುಟವನ್ನು (ಓದಿ?)ನೋಡಿ, ಲಂಕೇಶರು, "ಇದನ್ನೋದಿ ಅರ್ಥ ಮಾಡಿಕೊಳ್ಳಲು ನನ್ನ ಒಂದು ಜೀವಮಾನ ಸಾಲದು" ಅಂತ ಬರೆದಿದ್ದರಂತೆ!</div><div dir="auto" style="font-family: inherit;">ಸನಾತನಧರ್ಮದಲ್ಲಿ ಅಚಲವಾದ ಶ್ರದ್ಧೆಯಿದ್ದ ಪೈಗಳು ಹೀಬ್ರೂ ಭಾಷೆಯಲ್ಲಿ ಬೈಬಲ್ಲನ್ನು ಓದಿ ಏಸುಕ್ರಿಸ್ತನ ಕೊನೆಯ ದಿನಗಳ ಬಗ್ಗೆ "ಗೋಲ್ಗೋಥಾ" ಎಂದೂ, ಪಾಳಿ ಭಾಷೆಯಲ್ಲಿ ಬುದ್ಧನ ಬಗ್ಗೆ ಓದಿ,ಅವನ ಬಗ್ಗೆ "ವೈಶಾಖಿ" ಎಂದೂ ಖಂಡಕಾವ್ಯಗಳನ್ನು ಕಟ್ಟಿದ್ದಾರೆ. ಪೈಗಳ ಬಗ್ಗೆ ಬೇಂದ್ರೆಯವರು ಬರೆದಿರುವ ಚಂದದ ಕವಿತೆಯಿಂದ ಕೆಲವು ಸಾಲುಗಳು :</div><div dir="auto" style="font-family: inherit;">ಕಲ್ಲು-ಕಾಗದ-ಕಡತಗಳಲಿ ಕಾಲನ ಕಾಲು/ಸಿಕ್ಕು ತೊಳಲಾಡುವಲ್ಲಿ ಕುಣಿಕೆ ಬಿಡಿಸಿದಿರಣ್ಣ ! ...... ನಿಮಗೆ ನೀವೇ ಪೂರ್ವಪಕ್ಷ,ಅಕ್ಷರ-ರಮ್ಯ. (ಕನ್ನಡ ಎಷ್ಟು ಹಳತು,ಕುಮಾರವ್ಯಾಸ, ರಾಘವಾಂಕನ ಕಾಲನಿರ್ಣಯ ಹೇಗೆ, ರನ್ನನು ಗದಾಯುದ್ಧವನ್ನು ಬರೆದುದೆಂದು? ಹೀಗೆ ಎಷ್ಟೋ ವಿಷಯಗಳ ಕಾಲನಿರ್ಣಯ ಮಾಡಿದ್ದರ ಸೂಚನೆ ಮೊದಲ ಸಾಲಿನಲ್ಲಿದೆ. ಒಂದು ವಿಷಯದ ಬಗ್ಗೆ ಚರ್ಚೆಯಾಗುವಾಗ, ಮೊದಲು ಹೂಡಿದ ವಾದವನ್ನು ಪೂರ್ವಪಕ್ಷ ಎನ್ನುತ್ತಾರೆ, ಡಿಬೇಟಿನಲ್ಲಿ ಒಂದು motion ಇರುತ್ತದೆ, ಅನಂತರ against ದಿ motion ವಾದವೂ ಇರುತ್ತದೆ. ಪೈಗಳದ್ದು ಅವರಿಗೆ ಅವರೇ ಪೂರ್ವಪಕ್ಷ, ಅವರಿಗೆ ಅವರೇ for the motion ಮತ್ತು against the motion ಹೇಳಬೇಕು ಎಂಬ ಚಮತ್ಕಾರದ ಕಲ್ಪನೆ ಬೇಂದ್ರೆಯವರದ್ದು)</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-14869210023543885832020-12-19T08:21:00.001-08:002020-12-19T08:21:11.110-08:00ಗೂಢಚಾರಿಕೆ<p> <span style="background-color: white; color: #050505; font-family: inherit; font-size: 15px; white-space: pre-wrap;">'ಗೂಢಚಾರಿಕೆ' ಎನ್ನುವುದು ನನ್ನ ಮಟ್ಟಿಗೆ ಕುತೂಹಲವನ್ನು ಕದಡಿ ಮಿಸುಕಾಡಿಸುವ ಸಂಗತಿ. ಅಲ್ಲಿ ನಡೆಯುವುದೆಲ್ಲ ಗೋಪ್ಯವೂ ನಿಗೂಢವೂ ಆದ್ದರಿಂದ ಆ ಗುಟ್ಟುಗಳನ್ನು ತಿಳಿಯಲು ಮನ ಎಳಸುತ್ತದೆ. ಈ ನಿಟ್ಟಿನಲ್ಲಿ The Unending Game: A Former R&AW Chief's Insights into Espionage ಎಂಬ ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳು (ನನ್ನ ಒಗ್ಗರಣೆಯೊಂದಿಗೆ). </span></p><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ವಿಕ್ರಮ್ ಸೂದ್ ಅವರದ್ದು ಅಂತಹಾ ಆಕರ್ಷಕ, ರೋಚಕ ಗದ್ಯವೇನೂ ಅಲ್ಲ, ಮಾಹಿತಿಗಳಿಂದ ಇಡಿಕಿರಿದಿರುವ, ಪಠ್ಯಪುಸ್ತಕದಂಥಾ ಶೈಲಿ ಅವರದ್ದು (The best and most successful spies are the quiet, apparently boring and dull people ಅಂತೊಂದು ಮಾತೇ ಇದೆ! ಜೇಮ್ಸ್ ಬಾಂಡ್ನಂತೆ ಎಲ್ಲರ ಗಮನ ಸೆಳೆಯುವವರು ಒಳ್ಳೆಯ ಗುಪ್ತಚರರಾಗುವುದು ಕಷ್ಟ. ಎಲ್ಲರೂ ಯಾವಾಗಲೂ ನಿಮ್ಮನ್ನು ನೋಡುತ್ತ, ಮಾತಾಡಿಸುತ್ತ ಇದ್ದರೆ ಗುಪ್ತ ಚಟುವಟಿಕೆಗಳನ್ನು ಮಾಡುವುದಾದರೂ ಹೇಗೆ ?! James Bond is fantasy, George Smiley is reality ಅಂತ ವಿಕ್ರಮ್ ಸೂದ್ ಅವರೇ ಬರೆಯುತ್ತಾರೆ ಕೂಡಾ!). ಶೈಲಿ ಸ್ವಲ್ಪ dry ಆದರೂ, ಬರೆದವರು ನಮ್ಮ ದೇಶದ ಬೇಹುಗಾರಿಕಾ ಸಂಸ್ಥೆಯಾದ R&AWದಲ್ಲಿ ಮೂವತ್ತು ವರ್ಷ ಕೆಲಸ ಮಾಡಿದವರು, ಅದರ ಮುಖ್ಯಸ್ಥರೂ ಆಗಿದ್ದವರು ಎಂಬ ಕಾರಣಕ್ಕೆ ಪುಸ್ತಕಕ್ಕೊಂದು ವಿಶ್ವಾಸಾರ್ಹತೆ ತನ್ನಿಂತಾನೇ ಸಿಗುತ್ತದೆ. ಇನ್ನು ಪುಸ್ತಕದಿಂದ ಹೆಕ್ಕಿದ ನಾಲ್ಕಾರು ವಿಷಯಗಳಿಗೇ ಬರೋಣ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇಂದಿರಾ ಗಾಂಧಿಯ ಕ್ಯಾಬಿನೆಟ್ಟಿನಲ್ಲಿ ಇದ್ದ ಭೂಪರೊಬ್ಬರು, "ನನಗೆ 50000 ಡಾಲರುಗಳನ್ನು ಕೊಟ್ಟರೆ ನಿಮಗೆ ಗುಟ್ಟಿನಲ್ಲಿ ಸುದ್ದಿ ಕೊಡುತ್ತೇನೆ" ಅಂತ ರಷ್ಯಾದ ಕೆಜಿಬಿಯ ಹತ್ತಿರ ಯೋಜನೆಯನ್ನು ಮುಂದಿಟ್ಟರಂತೆ. ತಮಾಷೆ ಅಂದರೆ ಕೆಜಿಬಿ ಅದಕ್ಕೊಪ್ಪಲಿಲ್ಲವಂತೆ -- "ಬೇಕಾದಷ್ಟು ಜನ ವರ್ತಮಾನ ಕೊಡುವವರು ದೊಡ್ಡ ದೊಡ್ಡ ಸ್ಥಾನಗಳಲ್ಲಿ ಈಗಾಗಲೇ ಇದ್ದಾರೆ, ನಿಮಗೆ ಕೊಟ್ಟು ದುಡ್ಡು ವೇಸ್ಟು ಮಾಡುವುದು ಯಾಕೆ" ಎಂಬ ಕಾರಣಕ್ಕೆ! ಸ್ವತಃ ಇಂದಿರಾ ಗಾಂಧಿಯ ಹೆಸರೇ VANO ಎಂಬ ಹೆಸರಿನಲ್ಲಿ ಕೆಜಿಬಿಯ ದಾಖಲೆಗಳಲ್ಲಿ ಇದೆಯಂತೆ. ಇನ್ನು "1971ರ ಕಾಲದಲ್ಲಿ ಮೊರಾರ್ಜಿ ದೇಸಾಯಿ ನಮ್ಮ informer ಆಗಿದ್ದರು, ನಮಗೆ ಅಲ್ಲಿನ ವೃತ್ತಾಂತಗಳನ್ನು ತಿಳಿಸುತ್ತಿದ್ದರು ಅಂತ ಅಮೆರಿಕಾದ CIAಯವರೊಬ್ಬರು ಪುಸ್ತಕವೊಂದರಲ್ಲಿ ಬರೆದಿದ್ದಾರಂತೆ ! ಇಂಥವರು ಇನ್ನಷ್ಟು ಜನರೂ ಇದ್ದರಂತೆ. "ಅವ್ನು ಬಿಡಿ, ಪಾಕಿಸ್ತಾನದ paid ಏಜೆಂಟ್" ಅಂತ ಕೆಲವರನ್ನು ಫೇಸ್ಬುಕ್ಕಿಗರು ಹಳಿಯುವುದುಂಟು, ಆದರೆ ಅಂತದ್ದು ದೊಡ್ಡ ದರ್ಜೆಯವರಲ್ಲಿ ನಿಜವಾಗಿಯೂ ಆಗುತ್ತದೆ ಅಂತ ಮಾತ್ರ ಹೀಗೆ ಆರೋಪ ಮಾಡುವವರಿಗೂ ಗೊತ್ತಿದೆಯೋ ಇಲ್ಲವೋ ! ಹಾಗಂತ ಇದು ನಮ್ಮಲ್ಲಿ ಮಾತ್ರ ನಡೆಯುವುದೂ ಅಲ್ಲ, ಅಮೆರಿಕಾದಲ್ಲಿ ದೊಡ್ಡ ಹುದ್ದೆಗಳಲ್ಲಿ ರಷ್ಯಾದ ಏಜೆಂಟರು ಇದ್ದದ್ದು, ರಷಿಯಾದಲ್ಲಿ ಎತ್ತರದ ಸ್ಥಾನದಲ್ಲಿ ಅಮೆರಿಕಾದ ಗೂಢಚಾರರು ಇದ್ದದ್ದು ಎಲ್ಲ ಅಧಿಕೃತವಾಗಿಯೇ ವರದಿಯಾಗಿವೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಪೇಯ್ಡ್ ಮೀಡೀಯಾ ಕೂಡಾ ನಿಜವೇ; ಇಂದಿಗೂ ಅಂದಿಗೂ. Between 1972 and 1975, the KGB planted nearly 17,000 stories in the media ಅಂತ ಸೂದ್ ಬರೆಯುತ್ತಾರೆ. ಅಮೆರಿಕಾದ CIAಯದ್ದಂತೂ Propaganda and Covert operations ಅಂತೊಂದು ಅಧಿಕೃತ ವಿಭಾಗವೇ ಇತ್ತಂತೆ(ಈಗಲೂ ಇರಬಹುದು) ! ಆ ಕಾಲಕ್ಕೇ ಹೀಗೆ ಅಂದಮೇಲೆ, ಇವತ್ತು ತಮಗೆ ಬೇಕಾದಂತೆ ಬರೆಯುವುದಕ್ಕೆ, ಸುದ್ದಿ ತೋರಿಸುವುದಕ್ಕೆ ಪಾಕಿಸ್ತಾನದ ISI, ಅಮೆರಿಕಾ, ರಷಿಯಾಗಳ ಸಂಸ್ಥೆಗಳು ಇವರ ಕೈಯಿಂದೆಲ್ಲ ತಿಂಗಳಿಗಿಷ್ಟು ಅಂತ ತೆಗೆದುಕೊಳ್ಳುವವರು ನಮ್ಮಲ್ಲಿ ಹಲವರು ಇದ್ದಾರು. ಹೀಗಾಗಿ "ರಾಹುಲ್ ಗಾಂಧಿಯೇ ಪ್ರಧಾನಿಯಾಗಲಿ" ಎನ್ನುವವರು, ದಿನಕ್ಕೆರಡು ಸಲ ಮೋದಿಯ ಗುಣಗಾನ ಮಾಡುವವರು, ಕೋಮುವಾದ ಇನ್ನೊಂದು ಮತ್ತೊಂದು ಅಂತ ಹಾರಾಡುವವರು, ಹಿಂದುತ್ವ ಆತ್ವ ಈತ್ವ ಅಂತ ಕೂಗಾಡುವವರು, ಕಮ್ಮ್ಯುನಿಸ್ಟ್ ಪಕ್ಷದ ವಕ್ತಾರರಂತೆ ಸಮಾಜವಾದ ಅದು ಇದು ಅಂತ ಎಡೆಬಿಡದೆ ಬಿತ್ತರಿಸುವವರು, ವಾರಕ್ಕೊಮ್ಮೆ ಟೌನ್ ಹಾಲ್ ಹೋರಾಟ ಮಾಡುವವರು, ಸಿಕ್ಕಾಬಟ್ಟೆ ಎಡಗಡೆಗೋ, ಬಲಗಡೆಗೋ ನೋಡುತ್ತ ಬರೆಯುವವರು ಇಂಥವರು ಹೇಳುವುದನ್ನೆಲ್ಲ ಸ್ವಲ್ಪ ಸಂಶಯದ ದೃಷ್ಟಿಯಿಂದಲೇ ನೋಡುವುದೊಳ್ಳೆಯದು. ಯಾರ ಅಕೌಂಟಿಗೆ ಎಷ್ಟು ಎಲ್ಲಿಂದ ಬಂದುಬೀಳುತ್ತಿದೆ ಅಂತ ಯಾರಿಗೆ ಗೊತ್ತಿದೆ ? ಕೆಲವೊಮ್ಮೆ ಇಂಥವರು ಇಂಥದ್ದನ್ನು ಬೇಕೆಂತಲೇ ಮಾಡದೆಯೂ ಇರಬಹುದು. Never attribute to malice that which can be adequately explained by stupidity ಅನ್ನುತ್ತಾರಲ್ಲ! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಇನ್ನು ಪಾಕಿಸ್ತಾನದ ISIಯ ವಿಚಾರ. ಒಂದು ಅಂದಾಜಿನ ಪ್ರಕಾರ ಈ ISI ಕಳೆದ ದಶಕದಲ್ಲಿ ಲಷ್ಕರ್–ಎ–ತಯಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನಿನಂತಹಾ ಭಯೋತ್ಪಾದಕರ ಸಂಘಟನೆಗಳಿಗೆ ವರ್ಷಕ್ಕೆ ಸುಮಾರು 1792ಕೋಟಿ ರೂಪಾಯಿಯಂತೆ ಕೊಡುತ್ತ ಬಂದಿದೆಯಂತೆ. 1792 ರೂಪಾಯಿಯಲ್ಲ, 1792 ಕೋಟಿ ರೂಪಾಯಿ ಅದೂ ಪ್ರತಿವರ್ಷ! ಕಳೆದ ಸಲದ ಮುಂಬಯಿಯ ಆಕ್ರಮಣವೊಂದಕ್ಕೇ ಸುಮಾರು ಐದು ಕೋಟಿ ರೂಪಾಯಿ ದುಡ್ಡನ್ನು ಐಎಸ್ಐ ಸುರಿದಿರಬಹುದು. ಬರೀ ಕಾಶ್ಮೀರದಲ್ಲಿ ಒಂದು operating seasonಇಗೆ ಲಷ್ಕರ್–ಎ–ತಯಬಾದಂತಹ ಭಯೋತ್ಪಾದಕರ ಸಂಘಟನೆಯೊಂದಕ್ಕೇ ಸುಮಾರು 25 ಕೋಟಿ ಕೊಡುತ್ತದೆ ಪಾಪಿ ಐಎಸ್ಐ ! ಒಂದು ಸೀಸನ್ನಿಗೆ ಒಂದು ಸಂಘಟನೆಗೆ 25 ಕೋಟಿ ಕೊಡುವ State-sponsored terrorism. ಇಷ್ಟು ದೊಡ್ಡ ಬಜೆಟ್ ಇದ್ದರೆ ಹೋರಾಟವೂ ಆಗುತ್ತದೆ, ಇನ್ನೊಂದೂ ಆಗುತ್ತದೆ. ಇದ್ಯಾವುದೂ ವಾಟ್ಸಪ್ಪಿನಲ್ಲಿ ಬಂದ ಸುಳ್ಸುದ್ದಿಯಲ್ಲ -- ಇವೆಲ್ಲ R&AWದ ಮಾಜಿ Chief ಆಗಿದ್ದ ವಿಕ್ರಂ ಸೂದ್ ಬರೆದಿರುವ ಅಂಕಿ ಅಂಶಗಳು. ಇಷ್ಟಿರುವಾಗ ISI ಕೃಪಾಪೋಷಿತ ನಾಟಕಮಂಡಳಿಯ ಕಾಶ್ಮೀರದ ಹೋರಾಟಗಾರರು ಸೈನಿಕರ ಕಡೆಗೆ ಕಲ್ಲೇಕೆ ಮುತ್ತು ರತ್ನಗಳನ್ನೇ ಎಸೆದರೂ ಆಶ್ಚರ್ಯವೇನೂ ಇಲ್ಲ ! </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಪಾಕಿಸ್ತಾನದ ಸ್ಥಿತಿ ಆರ್ಥಿಕವಾಗಿ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆಯೂ ಇಲ್ಲ ಎಂಬಂತಿರುವಾಗ ಇಷ್ಟು ದುಡ್ಡು ಎಲ್ಲಿಂದ ಬರುತ್ತದೆ ಹಾಗಾದರೆ ? ನಮ್ಮಲ್ಲಿ ಅಥವಾ ಎಲ್ಲಿಯೇ ಆದರೂ ಬೇಹುಗಾರಿಕಾ ಸಂಸ್ಥೆಯೊಂದರ ಕೆಲಸ ಎಂದರೆ ಬೇಹುಗಾರಿಕೆ ಮಾಡುವುದು, ರಾಷ್ಟ್ರದ ರಕ್ಷಣೆ ಮಾಡುವುದು. ಅವುಗಳಿಗೆ ಸಂವಿಧಾನದ, ಕೋರ್ಟುಗಳ, ಪ್ರಧಾನಿಯ ಚೌಕಟ್ಟಿದೆ. ಪಾಕಿಸ್ತಾನದಲ್ಲಿ ಹಾಗಲ್ಲ. ಅಲ್ಲಿ ISI ವಿದೇಶಾಂಗ ಸಚಿವನ ಕೆಲಸವನ್ನೂ ಮಾಡುತ್ತದೆ, ಪ್ರಧಾನಿಯನ್ನೂ ಕುಣಿಸುತ್ತದೆ, ಮಿಲಿಟರಿಯನ್ನು ಆಡಿಸುತ್ತದೆ, ವ್ಯಾಪಾರದಿಂದ ಹಿಡಿದು ಕಳ್ಳವ್ಯಾಪಾರದವರೆಗೆ ನೂರೆಂಟು ವಹಿವಾಟುಗಳನ್ನೂ ಮಾಡುತ್ತದೆ! ಅದಕ್ಕೆ ದುಡ್ಡು ಬರಲಿಕ್ಕೆ ಜನರು ಕಟ್ಟುವ ತೆರಿಗೆಯೂ ಬೇಡ, ಸರ್ಕಾರದ ಬಜೆಟ್ಟೂ ಬೇಡ. ಉದಾ: ನಮ್ಮ ದೇಶದಲ್ಲಿ ನಕಲಿ ನೋಟುಗಳನ್ನು ಹರಿಯಬಿಟ್ಟೇ ಈ ಧೂರ್ತ ಸಂಸ್ಥೆ ವರ್ಷಕ್ಕೆ ಕಮ್ಮಿ ಎಂದರೂ ಐನೂರು ಕೋಟಿ ಗಳಿಸುತ್ತದಂತೆ. ಜಗತ್ತಿನಲ್ಲಿ ಮಾದಕದ್ರವ್ಯಗಳ ಜಾಲಗಳದ್ದು ಸುಮಾರು ಐನೂರು ಬಿಲಿಯನ್ ಡಾಲರುಗಳ ವಹಿವಾಟು, ಅದರಲ್ಲಿ 40 ಶೇಕಡಾ ಅಪಘಾನಿಸ್ತಾನದಿಂದಲೇ ಬರುತ್ತದೆ, ಇದರಲ್ಲಿ ದೊಡ್ಡ ಪಾಲನ್ನು ISI ಬಾಚಿಕೊಳ್ಳುತ್ತದೆ(ಅದರಲ್ಲಿ ಸಿಂಹಪಾಲನ್ನು ನಮ್ಮ ದೇಶದ ವಿರುದ್ಧ ಬಳಸುತ್ತದೆ ಅಂತ ಬೇರೆ ಹೇಳಬೇಕಾದ್ದಿಲ್ಲ). </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಯಾವುದೇ ದಾಳಿ ಆದರೂ ಕೇಳಿ ಬರುವ ಕೂಗು intelligence failureನದ್ದು. ಅದರಲ್ಲಿ ಎಷ್ಟೋ ಸಲ ಸತ್ಯ ಇರುವುದಿಲ್ಲ ಎನ್ನುತ್ತಾರೆ ಸೂದ್. ಉದಾ: ಕಾರ್ಗಿಲ್ಲಿನಲ್ಲಿ ಹೀಗೇ ಆಗಲಿದೆ ಅಂತ ಸ್ಪಷ್ಟವಾಗಿ ಮೂರ್ನಾಲ್ಕು ವರದಿಗಳನ್ನು ಬೇಹುಗಾರಿಕಾ ಸಂಸ್ಥೆಗಳು ಕೊಟ್ಟಿದ್ದವಂತೆ, ಸೈನ್ಯದ ಕೆಲವು ಬ್ರಿಗೇಡಿಯರುಗಳೂ ಎಚ್ಚರಿಸಿದ್ದರಂತೆ, ಆದರೆ ಯಾಕೋ ಸರ್ಕಾರ ಮತ್ತು ಸೈನ್ಯ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಮುಂಬಯಿಯಲ್ಲಿ ದಾಳಿ ಆಗುವ ಎರಡು ತಿಂಗಳಿಗೆ ಮೊದಲೇ ಸಮುದ್ರದ ಹತ್ತಿರ ಇರುವ ಐಷಾರಾಮಿ ಹೋಟೆಲುಗಳ ಮೇಲೆ ದಾಳಿ ಆಗಲಿದೆ ಅಂತ R&AW ಎರಡು ಮೂರು ಸಲ ಸ್ಪಷ್ಟವಾದ ವರದಿ ಕಳಿಸಿತ್ತಂತೆ(ಆದರೂ ಕೃತ್ಯ ನಡೆದೇ ಹೋದದ್ದು ಬೇಸರದ ವಿಷಯ), ಏನೇ ಆದರೂ ಘಟನೆಯ ಎರಡು ತಿಂಗಳು ಮೊದಲೇ ವ್ಯೂಹ ಭೇದಿಸಿ, ಹೀಗಾಗಲಿದೆ ಅಂದದ್ದು ಸಾಮಾನ್ಯ ವಿಷಯವಲ್ಲ. ಇಂಥಹಾ ಕಿಲಾಡಿಗಳು ಬೇಹುಗಾರಿಕೆಯಲ್ಲಿ ಇರುವುದರಿಂದಲೇ ಭಯೋತ್ಪಾದಕರ ನೂರಾರು ಸಂಚುಗಳು ಹೊಸಕಿ ಹಾಕಲ್ಪಟ್ಟು ಸಾವಿರಾರು ಅಮಾಯಕರ ಜೀವಗಳು ಉಳಿಯುತ್ತವೆ ಅಂತ ಹೇಳಿದರೆ ಸಾಕು.</div></div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-76542254417631119582020-12-19T08:20:00.003-08:002020-12-19T08:20:29.971-08:00ಶೀರ್ಷಿಕೆಯ ತಮಾಷೆ<p> <span style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">ಮಂಗಳವಾರ ಮಧ್ಯಾಹ್ನದ ತಲೆಹರಟೆ ಚಿಂತನೆ:</span></p><div dir="auto" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">Connie Willis ಎಂಬವರು ಬರೆದಿರುವ ಸಣ್ಣಕಥೆಯೊಂದರ ಶೀರ್ಷಿಕೆ ಇದು:"The Soul Selects Her Own Society: Invasion and Repulsion: A Chronological Reinterpretation of Two of Emily Dickinson's Poems: A Wellsian Perspective". ಈ ಕಥೆಯ ಅಭಿಮಾನಿಗಳು ಯಾರಾದರೂ ಇದ್ದರೆ ಅವರ ಗತಿಯೇನು? ನಿಮ್ಮ ಫೇವರಿಟ್ ಕಥೆ ಯಾವುದು ಅಂತ ಯಾರಾದರೂ ಕೇಳಿದರೆ ಅವರು ಪಾಪ, "ಒಂದಿದೆ, ಹೆಸರು ನೋಡಿ ಹೇಳ್ತೇನೆ" ಎನ್ನಬೇಕಾದೀತೇನೋ ! </div><div dir="auto" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">ಇದಾದರೂ ಆದೀತು, Shirley Jackson ಎಂಬಾಕೆ ಬರೆದಿರುವ ಕವನವೊಂದರ ಶೀರ್ಷಿಕೆಯನ್ನು ನೋಡಿ: "Song for all editors, writers, theorists, political economists, idealists, communists, liberals, reactionaries, bruce bliven, marxist critics, reasoners, and postulators, any and all splinter groups, my father, religious fanatics, political fanatics, men on the street, fascists, ernest hemingway, all army members and advocates of military training, not excepting those too old to fight, the r.o.t.c. and the boy scouts, walter winchell, the terror organizations, vigilantes, all senate committees and my husband." ಈ ಕವನದ ಪೂರ್ಣಪಾಠ ಇಷ್ಟೇ:</div><div dir="auto" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">I would not drop dead from the lack of you— </div><div dir="auto" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">My cat has more brains than the pack of you</div><div dir="auto" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; white-space: pre-wrap;">ನನ್ನ ಹೆಸರೆತ್ತಿದರೆ ಜನ ಹೆದರುತ್ತಾರೆ ಅಂತ ಈ ಕವಿತೆಗೆ ಹೇಳಿಕೊಂಡು ಓಡಾಡಲಿಕ್ಕೆ ಅಡ್ಡಿಯಿಲ್ಲ. ಏನಂತೀರಿ ?</div>Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-39830761712075542122019-08-07T01:58:00.005-07:002021-07-27T23:20:22.728-07:00ಓದಲೇಬೇಕಾದ ಸಣ್ಣಕಥೆಗಳು<div dir="ltr" style="text-align: left;" trbidi="on"><div dir="ltr" trbidi="on">ಕನ್ನಡದ ಟಾಪ್ 100 ಕಥೆಗಳ ಅಥವಾ ಕಥೆಗಾರರ ಪಟ್ಟಿ ಮಾಡಬಹುದೇ ಅಂತೊಮ್ಮೆ ಯೋಚಿಸಿದ್ದೆ. ಇಂಥದ್ದನ್ನು ಮಾಡಹೊರಟಾಗ, "ನಿಮ್ಮ ಮಾನದಂಡಗಳೇನು", "ಓ ಇಂಥವರ ಕಥೆಗಳು ಯಾಕಿಲ್ಲ?", "ಓ ಇವರ ಕಥೆಗಳು ಯಾಕಿವೆ?!!", "ಶ್ರೀಯುತರು ಕ್ರಿಸ್ತಪೂರ್ವ ಮುನ್ನೂರ ಅರುವತ್ತೆಂಟನೇ ಇಸವಿಯಲ್ಲಿ ಪ್ರಕಟಿಸಿದ ಕಥೆಯೊಂದನ್ನು ಮರೆತೇ ಬಿಟ್ಟಿದ್ದೀರಿ!!" ಎಂದು ಮುಂತಾಗಿ ಹೇಳುವವರು ಯಾರಾದರೂ ಇದ್ದೇ ಇರುತ್ತಾರಲ್ಲ ! ಆದರೇನಂತೆ ! ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇಂಥದನ್ನೆಲ್ಲ ನಿಭಾಯಿಸುವ ಚಾಲಾಕಿ ಇರುವುದಿಲ್ಲವೇ?! ಇಂಥದ್ದರಿಂದ ಪಾರಾಗಲಿಕ್ಕೂ ಒಂದು ಉಪಾಯ ಹುಡುಕಿದೆ. ಈಗಾಗಲೇ ದೊಡ್ಡವರು,ಅಧ್ಯಯನಶೀಲರು ಮಾಡಿಕೊಟ್ಟಿರುವ ಒಂದಷ್ಟು ಕಥಾಸಂಕಲನಗಳಿಂದ ಕಥೆಗಳನ್ನು ಆಯ್ದರಾಯಿತಲ್ಲ. </div><div dir="ltr" trbidi="on"><br /></div><div dir="ltr" trbidi="on">ಹೀಗಾಗಿ, ಶೇಕಡಾ ತೊಂಬತ್ತರಷ್ಟು ಕಥೆಗಳನ್ನು ಈ ಕೆಳಗಿನ ಕಥಾಸಂಕಲನಗಳಿಂದ ಹೆಕ್ಕಿಕೊಂಡಿದ್ದೇನೆ. ಒಂದಷ್ಟನ್ನು ನಾನು ಸೇರಿಸಿದ್ದೇನೆ. ಆಸಕ್ತರು ಓದಲೇಬೇಕಾದ ಸಣ್ಣಕಥೆಗಳು ಯಾವುವು, ಓದಬೇಕಾದ ಕಥೆಗಾರರು ಯಾರು ಎಂದು ತಿಳಿಸುವ ಪ್ರಯತ್ನವಿದು. ಹಲವು ಹೊಸಬರ,ಹಳಬರ ಹೆಸರುಗಳು ಈ ಪಟ್ಟಿಗೆ ಸೇರಬೇಕು, ಸೇರಲಿವೆ, ನೀವೂ ಸೇರಿಸಬಹುದು(ಎಲ್ಲ ನಾನೇ ಮಾಡಿದರೆ ನಿಮಗೇನು ಕೆಲಸ?).ಪಟ್ಟಿಯಲ್ಲಿರುವ ಕಥೆಗಾರರ ಎಷ್ಟೋ ಒಳ್ಳೆಯ ಕಥೆಗಳೂ ಪಟ್ಟಿಯಲ್ಲಿಲ್ಲ. ಆದರೂ ಟಾಪ್ 100 ಕಥೆಗಳ ಪಟ್ಟಿ ಹೋಗಿ ಸುಮಾರು 225 ಮುಖ್ಯ ಕಥೆಗಾರರ ಹಂತಿಯಾಗಿದೆ. </div><div dir="ltr" trbidi="on"> </div><div dir="ltr" trbidi="on">ನಾನು ನೋಡಿರುವ ಕೆಲವು ಪ್ರಮುಖ ಸಂಕಲನಗಳು:</div><div dir="ltr" trbidi="on">ಓಬೀರಾಯನ ಕಾಲದ ಕತೆಗಳು - ಸಂಪಾದಕ: ಬಿ. ಜನಾರ್ದನ ಭಟ್ (ಕೃಪೆ - ಕೆಂಡಸಂಪಿಗೆ ವೆಬ್ ಸೈಟ್)</div><div dir="ltr" trbidi="on">ಮರೆಯಬಾರದ ಹಳೆಯ ಕಥೆಗಳು - ಸಂಪಾದಕ: ಗಿರಡ್ಡಿ ಗೋವಿಂದರಾಜು </div><div dir="ltr" trbidi="on">ನವಿಲುಗರಿ - ಸಂಪಾದಕರು: ಬೆಟಗೇರಿ ಕೃಷ್ಣ ಶರ್ಮ ಮತ್ತು ಜಿ.ಬಿ. ಜೋಶಿ </div><div dir="ltr" trbidi="on">ಅತ್ಯುತ್ತಮ ಸಣ್ಣ ಕಥೆಗಳು (ಮೂರನೆಯ ಸಂಪುಟ) - ಸಂಪಾದಕ: ಕೆ. ನರಸಿಂಹಮೂರ್ತಿ</div><div dir="ltr" trbidi="on">ಕನ್ನಡ ಸಣ್ಣ ಕಥೆಗಳು - ಸಂಪಾದಕ: ಎಲ್.ಎಸ್. ಶೇಷಗಿರಿ ರಾವ್</div><div dir="ltr" trbidi="on">ಕನ್ನಡ ಸಣ್ಣ ಕತೆಗಳು - ಸಂಪಾದಕ: ಜಿ ಎಚ್ ನಾಯಕ </div><div dir="ltr" trbidi="on">ಹೊನ್ನಕಣಜ - ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ</div><div dir="ltr" trbidi="on">ಸಮಕಾಲೀನ ಕನ್ನಡ ಸಣ್ಣ ಕಥೆಗಳು - ಸಂಪಾದಕ: ರಾಮಚಂದ್ರ ಶರ್ಮ </div><div dir="ltr" trbidi="on">ಬಂಡಾಯದ ಕತೆಗಳು - ಸಂಪಾದಕರು : ಚಂದ್ರಶೇಖರ ಆಲೂರು ಮತ್ತು ರಂಜಾನ್ ದರ್ಗಾ </div><div dir="ltr" trbidi="on">ಶತಮಾನದ ಸಣ್ಣ ಕತೆಗಳು - ಸಂಪಾದಕರು: ಎಸ್. ದಿವಾಕರ್ </div><div dir="ltr" trbidi="on">ಪ್ರಿಸಂ ಬುಕ್ ಹೌಸ್ ಪ್ರಕಟಿಸಿದ ವೈಜ್ಞಾನಿಕ ಕತೆಗಳು - ಸಂಪಾದಕಿ: ಸುಭಾಷಿಣಿ </div><div dir="ltr" trbidi="on">ಕಥೆಗಾರರು ಮತ್ತು ಕಥೆಗಳ ಪಟ್ಟಿ ನೋಡಿ, ಇಷ್ಟೊಂದು ಕಥೆಗಳಿವೆಯೇ ಅಂತ ತಲೆಬಿಸಿಯಾಗಬೇಕಾದರೆ ನೀವು ಈ ಪಟ್ಟಿಯನ್ನೇ ನೋಡಬೇಕು: </div>
<br />
ಕಥೆಗಾರರು ಮತ್ತು ಕಥೆಗಳು :<br />
<br />
<ol style="text-align: left;">
<li>ಪಂಜೆ ಮಂಗೇಶರಾಯ - ಕಮಲಪುರದ ಹೊಟ್ಲಿನಲ್ಲಿ, ನನ್ನ ಚಿಕ್ಕ ತಂದೆ, ಭಾರತ ಶ್ರವಣ, ನನ್ನ ಚಿಕ್ಕ ತಂದೆಯವರ ಉಯಿಲ್, ವೈದ್ಯರ ಒಗ್ಗರಣೆ, ನನ್ನ ಚಿಕ್ಕತಾಯಿ, ನನ್ನ ಹೆಂಡತಿ </li>
<li>ಬೇಕಲ ರಾಮನಾಯಕ - ದೊಡ್ಡಮನೆ ಈಶ್ವರಯ್ಯ, ಬಾಳಿದ ಹೆಸರು, ಉಳ್ಳಾಲದ ರಾಣಿ, ಕೂಡಲು ಸುಬ್ಬಯ್ಯ ಶಾನಭಾಗ,ತಿಮ್ಮನಾಯಕನ ಫಿತೂರಿ,ಕರಣಿಕ ದೇವಪ್ಪಯ್ಯ</li>
<li>ಎ ಆರ್ ಕೃಷ್ಣಶಾಸ್ತ್ರಿ - ಗುರುಗಳ ಮಹಿಮೆ, ಬಂಗಲಿಯ ವಾಸ </li>
<li>ಕೆರೂರ ವಾಸುದೇವಾಚಾರ್ಯ - ಮಲ್ಲೇಶಿಯ ನಲ್ಲೆಯರು, ತೊಳೆದ ಮುತ್ತು </li>
<li>ಎಂ.ಎನ್.ಕಾಮತ್ - ಕದ್ದವರು ಯಾರು,ಬೊಗ್ಗು ಮಹಾಶಯ </li>
<li>ಎಸ್. ಜಿ. ಶಾಸ್ತ್ರಿ - ಹಬ್ಬದ ಉಡುಗೊರೆ, ಪರಪುರುಷ, ತುಂಟಮರಿ </li>
<li>ಕುಲಕರ್ಣಿ ಶ್ರೀನಿವಾಸ - ಹೊಸಬಾಯಿ </li>
<li>ಮಾಸ್ತಿ ವೆಂಕಟೇಶ ಐಯ್ಯಂಗಾರ್ - ಮೊಸರಿನ ಮಂಗಮ್ಮ, ರಂಗಪ್ಪನ ದೀಪಾವಳಿ, ಜೋಗ್ಯೋರ ಅಂಜಪ್ಪನ ಕೋಳಿ ಕತೆ, ಪಂಡಿತನ ಮರಣಶಾಸನ, ಇಲ್ಲಿಯ ತೀರ್ಪು, ಇಂದಿರೆಯೋ ಅಲ್ಲವೋ?, ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು,ವೆಂಕಟಿಗನ ಹೆಂಡತಿ, ರಂಗಸ್ವಾಮಿಯ ಅವಿವೇಕ</li>
<li>ಆನಂದ - ನಾನು ಕೊಂದ ಹುಡುಗಿ</li>
<li>ಕೊರಡ್ಕಲ್ ಶ್ರೀನಿವಾಸ ರಾವ್ - ಧನಿಯರ ಸತ್ಯನಾರಾಯಣ </li>
<li>ಸೇಡಿಯಾಪು ಕೃಷ್ಣ ಭಟ್ಟ - ನಾಗರಬೆತ್ತ</li>
<li>ತುದಿಯಡ್ಕ ವಿಷ್ಣ್ವಯ್ಯ - ಶ್ಯಾನುಭಾಗ ಶ್ಯಾಮಣ್ಣನವರು, ದೊರೆಯ ಪರಾಜಯ</li>
<li>ಬನ್ನಂಜೆ ರಾಮಾಚಾರ್ಯ - ರೋಬರ್ಟ್ಸ್ ದೊರೆಯ ದಿನಚರಿಯಿಂದ</li>
<li>ಸಿರಿಬಾಗಿಲು ವೆಂಕಪ್ಪಯ್ಯ - ಗುಲ್ಲು ಬಂತೋ ಗುಲ್ಲು</li>
<li>ಸಾಂತ್ಯಾರು ವೆಂಕಟರಾಜ - ಬರ್ಸಲೋರ್ ಬಾಬ್ರಾಯ </li>
<li>ಎಂ.ವಿ ಹೆಗಡೆ - ದೊರ್ಸಾನಿ</li>
<li>ಗಣಪತಿ ಮೊಳೆಯಾರ - ಸಿಡಿಲು ಮರಿ</li>
<li>ಹುರುಳಿ ಭೀಮರಾವ್ - ಮಾರಯ್ಯನ ಕವಾತು, ಮುರುಕು ದಂಬೂಕು</li>
<li>ಎ. ಆರ್. ಶಗ್ರಿತ್ತಾಯ - ಕಲ್ಯಾಣಪ್ಪನ ಕಾಟುಕಾಯಿ</li>
<li>ಪೇಜಾವರ ಸದಾಶಿವರಾವ್ - ಬಿರುಸು</li>
<li>ಯಂ. ಆರ್. ಶಾಸ್ತ್ರಿ - ರಂಗಪ್ಪನ ಪಠೇಲಿಕೆ</li>
<li>ಕಡಂಗೋಡ್ಲು ಶಂಕರಭಟ್ಟ - ಅದ್ದಿಟ್ಟು , ಚೂರಿ, ಹೊಡೆಯುವ ಗಡಿಯಾರ </li>
<li>ಕೃಷ್ಣಕುಮಾರ ಕಲ್ಲೂರ - ಗುಬ್ಬಿಗಳ ಸಂಸಾರ, ಜೀವನ </li>
<li>ಪಡುಕೋಣೆ ರಮಾನಂದರಾಯ - ಬಾಳ್ವೆಯ ಮಸಾಲೆ </li>
<li>ಯರ್ಮುಂಜ ರಾಮಚಂದ್ರ - ಎಂಕಪ್ಪುವಿನ ದ್ವೇಷಾಗ್ನಿ,ಚೆನ್ನಪ್ಪ ಒಡೆದ ಮೂರ್ತಿ </li>
<li>ಬಾಗಲೋಡಿ ದೇವರಾಯ - ಪವಾಡಪುರುಷ, ಹುಚ್ಚ ಮುನಸೀಫ, ಅವರವರ ಸುಖ ದುಃಖ,ಶುಕ್ರಾಚಾರ್ಯ </li>
<li>ಕುವೆಂಪು - ಯಾರೂ ಅರಿಯದ ವೀರ, ಮೀನಾಕ್ಷಿಯ ಮನೆ ಮೇಷ್ಟ್ರುಧನ್ವಂತರಿಯ ಚಿಕಿತ್ಸೆ </li>
<li>ದ.ರಾ. ಬೇಂದ್ರೆ - ಪಾಲಾ ಫೂ,ನಿರಾಭರಣ ಸುಂದರಿ, ಮಗುವಿನ ಕರೆ </li>
<li>ವಿಜಿ ಶ್ಯಾನಭಾಗ - ದೇವದಾಸಿ </li>
<li>ಶ್ರೀ ಸ್ವಾಮಿ - ಬೇಬಿ ನಾಚ್ಚಿಯಾರ್, ಪುಷ್ಪಮಾಲೆ, ನಂಜಮ್ಮ, ಗೋಧೂಳೀ ಲಗ್ನ </li>
<li>ಕ್ಷೀರಸಾಗರ - ನಮ್ಮೂರಿನ ಪಶ್ಚಿಮಕ್ಕೆ </li>
<li>ಹ. ಪೀ. ಜೋಶಿ - ಕಿಚ್ಚಿನ ಕಾವಲು , ಅಪೂರ್ಣಾ </li>
<li>ನವರತ್ನ ರಾಮರಾಯ - ತಾವರೆಕೋಟೆ, ಲಕ್ಷ್ಮಣರಾಯರ ಭಾಗ್ಯ, ಹೆಣ್ಣು ಹೃದಯ </li>
<li>ಟೇಂಗ್ಸೆ ಗೋವಿಂದರಾಯ - ಗಂಗೆಯ ಗುತ್ತಿಗೆ, ಛಪ್ಪರಬಂದ್ </li>
<li>ಹೊಯಿಸಳ - ಭಯ ನಿವಾರಣೆ </li>
<li>ಮೇವುಂಡಿ ಮಲ್ಲಾರಿ - ಸುರಸುಂದರಿ </li>
<li>ಟಿ. ಎಸ್. ಸಂಜೀವರಾವ್ - ಸೀದ ಒಗ್ಗರಣೆ </li>
<li>ರಂ.ಶ್ರೀ.ಮುಗಳಿ - ವಿತಂತು ವೇಶ್ಯೆ</li>
<li>ಗೊರೂರು ರಾಮಸ್ವಾಮಿ ಅಯ್ಯಂಗಾರ್ - ಹಾರುವಯ್ಯ ಹಜಾಮನಾದದ್ದು, ಆಚಾರ ಕೆಟ್ಟರೂ ಆಕಾರ ಕೆಡಬಾರದು, ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು, ಬೂತಯ್ಯನ ಮಗ ಅಯ್ಯು, ಡೊಂಕು ಬಾಲ </li>
<li>ಭಾರತೀಪ್ರಿಯ - ಒಂದು ಹಳೆಯ ಕತೆ, ಮೋಚಿ,ವೀಣೆ</li>
<li>ಕೆ ಗೋಪಾಲಕೃಷ್ಣ ರಾವ್ - ಡಾಕ್ಟರ್ ಸುಶೀಲಾ ಸಂಕೇತ್ </li>
<li>ಎಂ. ವಿ. ಸೀತಾರಾಮಯ್ಯ - ಕರುಣೆ, ಹುಟ್ಟಿನ ಹಂಬಲು</li>
<li>ಜಡಭರತ - ಡೂಗಜ್ಜನ ಬಹಿಷ್ಕಾರ</li>
<li>ಕೊಡಗಿನ ಗೌರಮ್ಮ - ವಾಣಿಯ ಸಮಸ್ಯೆ, ಆಹುತಿ, ಅಪರಾಧಿ ಯಾರು </li>
<li>ಬಸವರಾಜ ಕಟ್ಟೀಮನಿ - ಅಜ್ಞಾತವಾಸಿ, ಗಿರಿಜಾ ಕಂಡ ಸಿನಿಮಾ, ಬೂಟ್ ಪಾಲಿಷ್, ರಕ್ತಧ್ವಜ, ನೀಲಗಂಗಾ ನಾಗರಪಂಚಮಿಗೆ ಬಂದದ್ದು , ಜೀವನ ಕಲೆ </li>
<li>ಪೂರ್ಣಚಂದ್ರ ತೇಜಸ್ವಿ- ಅಬಚೂರಿನ ಪೋಸ್ಟಾಫೀಸು, ಲಿಂಗ ಬಂದ, ಕಿರಗೂರಿನ ಗಯ್ಯಾಳಿಗಳು, ಅವನತಿ, ಮಾಯಾಮೃಗ </li>
<li>ಯಶವಂತ ಚಿತ್ತಾಲ - ಅಬೋಲಿನ, ಕತೆಯಾದಳು ಹುಡುಗಿ, ಸೆರೆ, ಕತೆಯಲ್ಲಿ ಬಂದಾತ ಮನೆಗೂ ಬಂದು ಕದತಟ್ಟಿದ,ಮುಖಾಮುಖಿ</li>
<li>ಯು.ಆರ್. ಅನಂತಮೂರ್ತಿ - ಕ್ಲಿಪ್ ಜಾಯಿಂಟ್,ಸೂರ್ಯನ ಕುದುರೆ,ನವಿಲುಗಳು</li>
<li>ಪಿ. ಲಂಕೇಶ್ - ಉಮಾಪತಿಯ ಸ್ಕಾಲರ್’ಶಿಪ್ ಯಾತ್ರೆ, ಮುಟ್ಟಿಸಿಕೊಂಡವನು,ಸಹಪಾಠಿ, ಕಲ್ಲು ಕರಗುವ ಸಮಯ,ರೊಟ್ಟಿ, ನಿವೃತ್ತರು, ನಾನಲ್ಲ </li>
<li>ದೇವನೂರು ಮಹಾದೇವ - ಡಾಂಬರು ಬಂದುದು,ಮಾರಿಕೊಂಡವರು, ಅಮಾಸ</li>
<li>ರಾಘವೇಂದ್ರ ಖಾಸನೀಸ - ತಬ್ಬಲಿಗಳು, ಅಶ್ವಾರೋಹಿ</li>
<li>ಶಾಂತಿನಾಥ ದೇಸಾಯಿ - ಕ್ಷಿತಿಜ, ರಾಕ್ಷಸ,ದಿಗ್ಭ್ರಮೆ </li>
<li>ಜಿ ಎಸ್ ಸದಾಶಿವ - ಹ್ಯಾಂಗೋವರ್, ಮೀಸೆಯವರು </li>
<li>ಕೆ.ಸದಾಶಿವ - ನಲ್ಲಿಯಲ್ಲಿ ನೀರು ಬಂತು, ರಾಮನ ಸವಾರಿ ಸಂತೆಗೆ ಹೋದದ್ದು</li>
<li>ಅ. ನ. ಕೃಷ್ಣರಾವ್ - ಮಣ್ಣಿನ ಮಗ </li>
<li>ತರಾಸು - 0-0 = 0, ಇನ್ನೊಂದು ಮುಖ, ಎಕ್ಸ್</li>
<li>ಬೆಟಗೇರಿ ಕೃಷ್ಣಶರ್ಮ(ಆನಂದಕಂದ) - ಮಾತನಾಡುವ ಕಲ್ಲು, ಮಾಲ್ಕೀ ಹಕ್ಕು, ನೀನು ಪುಟ್ಟನ ತಾಯಿ </li>
<li>ಜಯಂತ ಕಾಯ್ಕಿಣಿ- ಹಾಲಿನ ಮೀಸೆ, ಸುಗ್ಗಿ , ಅಮೃತಬಳ್ಳಿ ಕಷಾಯ,ಸೇವಂತಿ ಹೂವಿನ ಟ್ರಕ್ಕು,ಕನ್ನಡಿ ಇಲ್ಲದ ಊರಲ್ಲಿ, ಮಧ್ಯಂತರ, ಕಣ್ಣಿಗೊಂದು ಕ್ಷಿತಿಜ, ದಗಡೂ ಪರಬನ ಅಶ್ವಮೇಧ </li>
<li>ಜೋಗಿ - ಕುಮಾರ ದಿವಂಗತ, ಸುಬ್ಬಣ್ಣ, ಕನ್ನಡಿಯಲ್ಲಿ ಗಳಗನಾಥರಿರಲಿಲ್ಲ, ಗೋವಿಂದ ವಿಠ್ಠಲ .. ಹರಿಹರಿ ವಿಠ್ಠಲ .. ,ರಾಂಗ್ ನಂಬರ್ </li>
<li>ಬೆಸಗರಹಳ್ಳಿ ರಾಮಣ್ಣ - ಸುಗ್ಗಿ , ಕಕ್ಕರನ ಯುಗಾದಿ,ಗಾಂಧಿ, ನೆಲದ ಒಡಲು, ಗರ್ಜನೆ, ಹರಕೆಯ ಹಣ </li>
<li>ವ್ಯಾಸರಾಯ ಬಲ್ಲಾಳ - ಮುಸ್ಸಂಜೆ, ಭಾವಬಂಧನ,ಬಂಧ </li>
<li>ಆಲನಹಳ್ಳಿ ಶ್ರೀಕೃಷ್ಣ - ಗೀಜಗನ ಗೂಡು, ಫೀನಿಕ್ಸ್, ಗೋಡೆ, ಸಂಬಂಧ, ತೊರೆ ಬತ್ತಿರಲಿಲ್ಲ,ಆಗಂತುಕ </li>
<li>ಅಮರೇಶ ನುಗಡೋಣಿ - ತಮಂಧದ ಕೇಡು, ಹೊತ್ತು ಮೂಡುವ ಸಮಯ </li>
<li>ಭಾರತೀಸುತ - ಜೇನು ಕಹಿ </li>
<li>ವೈದೇಹಿ - ಅಕ್ಕು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಒಂದು ಅಪರಾಧದ ತನಿಖೆ </li>
<li>ಟಿಜಿ ರಾಘವ - ಶ್ರಾದ್ಧ, ಜ್ವಾಲೆ ಆರಿತು,ಸಂಕರ </li>
<li>ಎಸ್ ಎನ್ ಸೇತುರಾಮ್ - ನಾವಲ್ಲ</li>
<li>ವಸುಧೇಂದ್ರ - ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ, ನಮ್ಮ ವಾಜೀನೂ ಆಟಕ್ಕೆ ಸೇರಿಸ್ಕೊಳ್ರೋ, ಅಪಸ್ವರದಲ್ಲೊಂದು ಆರ್ತನಾದ, ಕೆಂಪುಗಿಣಿ</li>
<li>ಅಶ್ವತ್ಥ - ಧರ್ಮಕೊಂಡದ ಕತೆ, ವ್ಯಭಿಚಾರ </li>
<li>ಚದುರಂಗ - ನಾಲ್ಕು ಮೊಳ ಭೂಮಿ, "ತುಚೀಪ್, ತುದಾಂಡ್, ತುಬದ್ - ರೆಡಿ", ಶವದ ಮನೆ , ನಾಲ್ಕು ಮನೆಯ ನಂದಾದೀಪ </li>
<li>ನಿರಂಜನ - ಕೊನೆಯ ಗಿರಾಕಿ</li>
<li>ಎಸ್ ದಿವಾಕರ್ - ಇತಿಹಾಸ, ಕ್ರೌರ್ಯ</li>
<li>ದೊಡ್ಡೇರಿ ವೆಂಕಟಗಿರಿ ರಾವ್ - ತುಂಬಿದ ಕೊಡ </li>
<li>ವಿವೇಕ ಶಾನಭಾಗ - ಹುಲಿಸವಾರಿ, ಗುರುತು,ಲಂಗರು, ನಮ್ಮ ಪಾಡಿಗೆ ನಾವು </li>
<li>ಕಾಳೇಗೌಡ ನಾಗವಾರ - ಅಲೆಗಳು, ಮಾಯೆ </li>
<li>ರಾಜಶೇಖರ ನೀರಮಾನ್ವಿ - ಹಂಗಿನರಮನೆಯ ಹೊರಗೆ </li>
<li>ಕೋ. ಚೆನ್ನಬಸಪ್ಪ - ಮುಕ್ಕಣ್ಣನ ಮುಕ್ತಿ, ನಮ್ಮೂರಿನ ದೀಪ, ಆ ಕಥೆಯ ಹಿಂದೆ, ಉಂಗುರದ ಉರುಲು </li>
<li>ಕುಂ.ವೀ - ಕುಪ್ಪಸ, ಕಿವುಡ ನಾಯಿಯಾದ ಕತೆ, ರುದ್ರಪ್ಪನ ಖಡ್ಗ, ಎಲುಗನೆಂಬ ಕೊರಚನೂ ಚೌಡನೆಂಬ ಹಂದಿಯೂ, ದೇವರ ಹೆಣ</li>
<li>ಬೊಳುವಾರು ಮಹಮ್ಮದ್ ಕುಂಞಿ - ಅಂಕ, ಒಂದು ತುಂಡು ಗೋಡೆ, ಕಪ್ಪು ಕಲ್ಲಿನ ಸೈತಾನ, ದೇವರುಗಳ ರಾಜ್ಯದಲ್ಲಿ </li>
<li>ಕೆಟಿ ಗಟ್ಟಿ - ಮೌಲ್ಯ, ಬಂಡೆ </li>
<li>ರವಿ ಬೆಳಗೆರೆ - ಪಾ.ವೆಂ. ಹೇಳಿದ ಕಥೆ, ನೆರಳು, ಮೈಕು, ವಂಧ್ಯ </li>
<li>ತ್ಯಾಮಗೊಂಡ್ಲು ಅಂಬರೀಶ್ - ಲೆಕ್ಕಾಚಾರ</li>
<li>ದೇಶಪಾಂಡೆ ಸುಬ್ಬರಾಯ - ಕ್ರಿಯಾಕಾಂಡ </li>
<li>ಅಬ್ದುಲ್ ರಶೀದ್ - ಹಾಲು ಕುಡಿದ ಹುಡುಗಾ, ಕಪ್ಪು ಹುಡುಗನ ಹಾಡು </li>
<li>ಬಿಸಿ ರಾಮಚಂದ್ರ ಶರ್ಮ - ಯಾರು ಹಿತವರು ನಿನಗೆ, ಸೆರಗಿನ ಕೆಂಡ, ಬೆಳಗಾಯಿತು,ಮಾಗಿ </li>
<li>ನಾ.ಮೊಗಸಾಲೆ - ಕಿಡ್ನಿ </li>
<li>ಬಿ.ಎಲ್.ವೇಣು - ಸುಡುಗಾಡು ಸಿದ್ದನ ಪ್ರಸಂಗ</li>
<li>ಪ್ರಹ್ಲಾದ ಅಗಸನಕಟ್ಟೆ- ತಾಜಮಹಲ್</li>
<li>ಕಲಿಗಣನಾಥ ಗುಡದೂರು - ಉಡಿಯಲ್ಲಿಯ ಉರಿ</li>
<li>ಎಂ ಎಸ್ ಕೆ ಪ್ರಭು - ಮುಖಾಬಿಲೆ, ಎರಡು ತೆಂಗಿನ ಮರದುದ್ದದ ಮನುಷ್ಯ </li>
<li>ಎಂ ಎನ್ ವ್ಯಾಸರಾವ್ - ಅಕ್ವೇರಿಯಂ </li>
<li>ಅಶೋಕ್ ಹೆಗಡೆ - ಒಳ್ಳೆಯವನು, ಯಾವ ಸೀಮೆಯ ಹುಡುಗ ನೀನು </li>
<li>ಎಂ ಎಸ್ ಶ್ರೀರಾಮ್ - ಕಪಾಟಿನೊಳಗಿನ ನೆನಪುಗಳು </li>
<li>ಡಾ. ವಿನಯಾ - ಕಡಿತನಕಾ ಕಾಯೋ ಅಭಿಮಾನ</li>
<li>ಭಾಸ್ಕರ್ ಹೆಗಡೆ - ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ</li>
<li>ರಘು ಅಪಾರ - ಸಾರಿ ಪದ್ಮಿನಿ, ಮಾಸ್ಟರ್ ಸೈಕಲ್ಲಿನ ಬೇಬಿ ಸೀಟ್</li>
<li>ಮೊಗಳ್ಳಿ ಗಣೇಶ - ಒಂದು ಹಳೇ ಚಡ್ಡಿ </li>
<li>ರಾಜೇಂದ್ರ ಚೆನ್ನಿ - ಏಡಿಹುಣ್ಣು, ದೊಡ್ಡಮರ </li>
<li>ಸಿ ಬಸವಲಿಂಗಯ್ಯ - ಗಾಳಿಪಟ </li>
<li>ರಾಮಚಂದ್ರದೇವ - ದೂರ ನಿಂತವರು , ದಂಗೆಯ ಪ್ರಕರಣ</li>
<li>ಟಿ ಎನ್ ಸೀತಾರಾಮ್ - ನಾನು ಪೊಲೀಸರಿಗೆ ಬೇಕಾದೆ </li>
<li>ಬೈರಪ್ಪ - ಗತಜನ್ಮ</li>
<li>ನಾಗವೇಣಿ ಎಚ್ - ಒಡಲು </li>
<li>ಬಿ.ಸಿ.ದೇಸಾಯಿ - ಸಾವು</li>
<li>ಶಿವೇಶ್ವರ ದೊಡ್ಡಮನಿ - ರಾಜಮಾ </li>
<li>ಹವೆಂ ನಾಗರಾಜರಾವ್ - ರಂಗಶಾಮಿ</li>
<li>ಸಮೀತನಹಳ್ಳಿ ರಾಮರಾಯ - ತಾಯಿ </li>
<li>ಅನುಪಮಾ - ದೇವರೇ ಬರಲಿಲ್ಲ </li>
<li>ಅಶೋಕ ಹೆಗಡೆ-ಯಾವ ಸೀಮೆಯ ಹುಡುಗ ನೀನು, ತದಡಿಗೆ ಬಂದ ಹಡಗು</li>
<li>ವೀಣಾ ಶಾಂತೇಶ್ವರ - ಕೊನೆಯ ದಾರಿ,ತಿರುಗಿ ಹೋದಳು </li>
<li>ಗೋಪಾಲಕೃಷ್ಣ ಮಧ್ಯಸ್ತ - ಮೌಲ್ಯಗಳು </li>
<li>ಶ್ರೀಕಾಂತ - ಪ್ರತಿಮೆಗಳು </li>
<li>ತ್ರಿವೇಣಿ - ಬೆಡ್ ನಂಬರ್ ಏಳು, ಚಂಪಿ,ನರಬಲಿ </li>
<li>ಹಿರೇಮಲ್ಲೂರ ಈಶ್ವರನ್ - ಪೂವಮ್ಮ </li>
<li>ವರಗಿರಿ - ದ್ಯಾವಮ್ಮ - ಕೆಂಚಿ </li>
<li>ಅಲಕಾ ಕೆ. - ಎರವಿನೊಡವೆ </li>
<li>ಸಾರಾ ಅಬೂಬಕರ್ - ಬಿಸಿಲ್ಗುದುರೆಯ ಬೆನ್ನುಹತ್ತಿ, ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು, ಚಪ್ಪಲಿಗಳು, ನಿಯಮ ನಿಯಮಗಳ ನಡುವೆ </li>
<li>ನಾ. ಡಿಸೋಜಾ - ತಂತ್ರ, ಬಣ್ಣ</li>
<li>ಬಿ. ಜನಾರ್ದನ ಭಟ್ - ಕಾಟಕಾಯಿ</li>
<li>ಸ್ವಾಮಿ ಪೊನ್ನಾಚಿ - ಭೂಮಿಗೀತ </li>
<li>ಚಿದಾನಂದ ಸಾಲಿ - ಕಾಗೆಯೊಂದಗುಳ ಕಂಡರೆ</li>
<li>ಎನ್.ಎಸ್. ಶಂಕರ್ - ರೂಢಿ</li>
<li>ಮಂಜುನಾಥ್ ಲತಾ - ಒಳಗಲ ಜ್ಯೋತಿಯು </li>
<li>ಪೆಪ್ಪರ್ಮೆಂಟು - ಟಿ. ಎಸ್. ಗೊರವರ </li>
<li>ಜಯಶ್ರೀ ದೇಶಪಾಂಡೆ - ಘಟಿತ</li>
<li>ಕಸ್ತೂರಿ ಬಾಯಿರಿ - ದಿಂಡೀ</li>
<li>ನೇಮಿಚಂದ್ರ - ಮತ್ತೆ ಬರೆದ ಕವನಗಳು, ನನ್ನದಲ್ಲದ ಬದುಕಿಗಾಗಿ, ಹೊಸ ಹುಟ್ಟು</li>
<li>ಫಕೀರ್ ಮಹಮ್ಮದ್ ಕಟ್ಪಾಡಿ - ಹತ್ಯೆ </li>
<li>ಕರೀಗೌಡ ಬೀಚನಹಳ್ಳಿ - ಅವಶೇಷ, ಒಂದು ಅಪೂರ್ವ ಸಂಸಾರ </li>
<li>ರಾಘವೇಂದ್ರ ಪಾಟೀಲ - ಬೆಳ್ಳಕ್ಕಿಗಳ ಲೋಕದಲ್ಲಿ,ದೇಸಗತಿ </li>
<li>ಮಹಾಬಲಮೂರ್ತಿ ಕೊಡ್ಲೆಕೆರೆ - ತೆರೆದುಕೊಳ್ಳುವ ಲೋಕ </li>
<li>ಕಮಲಾ ಸುಬ್ರಹ್ಮಣ್ಯಂ - ಕೃಷ್ಣಾ ಮೂರ್ತಿ ಕಣ್ಣಾಮುಂದೆ</li>
<li>ಕವಿತಾ ರೈ - ನಾಟಿ ಓಟ</li>
<li>ಜಯಶ್ರೀ ದಿವಾಕರ್ - ನೆಲೆ ಕಾಣದ ನೆರಳು </li>
<li>ಪ್ರತಿಭಾ ನಂದಕುಮಾರ್ - ಬೆಳಕು </li>
<li>ಇಂದ್ರಕುಮಾರ ಎಚ್.ಬಿ - ಚಾಕರಿಯಮ್ಮ </li>
<li>ಕೆ.ಎಂ.ರಶ್ಮಿ - ಅದು </li>
<li>ಅಲಕ ತೀರ್ಥಹಳ್ಳಿ - ಈ ಕಥೆಗಳ ಸಹವಾಸವೇ ಸಾಕು </li>
<li>ಶಾಂತಿ ಕೆ ಅಪ್ಪಣ್ಣ - ಬಾಹುಗಳು</li>
<li>ವರದರಾಜ ಹುಯಿಲಗೋಳ - ಬಾಗಿಲು ತೆರೆದಿತ್ತು </li>
<li>ಎ.ಕೆ.ರಾಮಾನುಜನ್ - ಅಣ್ಣಯ್ಯನ ಮಾನವಶಾಸ್ತ್ರ</li>
<li>ಎಸ್ ಅನಂತನಾರಾಯಣ - ಮಾನವಪ್ರೇಮ </li>
<li>ಕುಲಕರ್ಣಿ ಬಿಂದುಮಾಧವ - ಗುಡಿ</li>
<li>ನಾಗಮಂಗಲ ಕೃಷ್ಣಮೂರ್ತಿ - ಡವ್ ಕೋಟ್ </li>
<li>ಟಿಕೆ ದಯಾನಂದ - ನಾಯಿಬೇಟೆ </li>
<li>ಉಷಾದೇವಿ - ಫರ್ಲಾಂಗಮ್ಮ </li>
<li>ಪ್ರಜ್ಞಾ ಮತ್ತಿಹಳ್ಳಿ - ತುದಿಬೆಟ್ಟದ ನೀರಹಾಡು </li>
<li>ರಾಜು ಹೆಗಡೆ - ಕತ್ತಲೆ ಮೌನ ಮತ್ತು </li>
<li>ಕ.ವೆಂ. ರಾಜಗೋಪಾಲ್ - ಆಶೆಯ ಶಿಶು </li>
<li>ನಾರಂಗಿಭಟ್ಟ - ಕುಥಭರ್ಟರ ಅಕಾಲಮರಣ </li>
<li>ನರೇಂದ್ರಬಾಬು - ರೇವು </li>
<li>ಗೀತಾ ಕುಲಕರ್ಣಿ - ತೇಲಿ ಹೋದ ಮೋಡ </li>
<li>ಎಚ್. ವಿ. ಸಾವಿತ್ರಮ್ಮ - ಮರುಮದುವೆ </li>
<li>ಎಸ್ ಆರ್ ಶಂಕರನಾರಾಯಣ ರಾವ್ - ತ್ಯಾಗ </li>
<li>ಶ್ರೀನಿವಾಸ ಹಾವನೂರ - ಶೂರ್ಪನಖಿ </li>
<li>ಬಿ.ಟಿ ಜಾಹ್ನವಿ - ವ್ಯಭಿಚಾರ </li>
<li>ಶ್ರೀಕಂಠ ಪುತ್ತೂರು - ಕ್ರಿಮಿಗಳು </li>
<li>ಎಲ್ ಎಸ್ ಶೇಷಗಿರಿ ರಾವ್ - ಮುಯ್ಯಿ </li>
<li>ನಟರಾಜ್ ಹುಳಿಯಾರ್ - ಮಾಯಾಕಿನ್ನರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು,ನೆತ್ತರು ಮತ್ತು ಗುಲಾಬಿ</li>
<li>ಹನುಮಂತ ಹಾಲಿಗೇರಿ - ಮಠದ ಹೋರಿ, ಊರು ಸುಟ್ಟರೂ ಹನುಮಪ್ಪ ಹೊರಗೆ</li>
<li>ಎಲ್ ಡಿ ಸಭಾಹಿತ - ಯಕ್ಷಪ್ರಶ್ನೆ </li>
<li>ರಾಮಚಂದ್ರ ಕೊಟ್ಟಲಗಿ - ಒಂದೇ ದೇಟಿನ ಕಾಯಿಗಳು</li>
<li>ಬಿ.ಪ್ರಭಾಕರ ಶಿಶಿಲ - ಕೊಡಗರ ಕಾಟಕಾಯಿ, ಬೇಟೆ (ಕನ್ನಡ ಅರೆಭಾಷೆಯ ಸಣ್ಣಕಥೆ) </li>
<li>ದ. ಬಾ. ಕುಲಕರ್ಣಿ - ಜಾಗೀರಿಯ ದಿಂಬು </li>
<li>ಬರಗೂರು ರಾಮಚಂದ್ರಪ್ಪ - ಕ್ಷಾಮ,ಬಯಲಾಟದ ಭೀಮಣ್ಣ </li>
<li>ಕೇಶವ ಮಳಗಿ - ಪತ್ರೋಳಿ</li>
<li>ಕೇಶವರೆಡ್ಡಿ ಹಂದ್ರಾಳ - ಪಂಚರಂಗಿ</li>
<li>ಚೆನ್ನಣ್ಣ ವಾಲೀಕಾರ - ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು </li>
<li>ಚಂದ್ರಕಾಂತ ವಡ್ಡು - ನೇಪಥ್ಯದ ನೋವು </li>
<li>ಕಾ.ತ. ಚಿಕ್ಕಣ್ಣ - ಒಡಲುರಿ, ಓಡುವ ಗಿಡಮರಗಳೊಂದಿಗೆ</li>
<li>ಜಾಣಗೆರೆ ವೆಂಕಟರಾಮಯ್ಯ - ಬಿಳೀ ಹಾಳೆಯ ಕಪ್ಪು ನ್ಯಾಯ </li>
<li>ಆರ್.ಜಿ. ಹಳ್ಳಿ ನಾಗರಾಜ್ - ಹೊಗೆ </li>
<li>ಬಾನು ಮುಸ್ಥಾಕ್ - ಸರಿದ ಕಾರ್ಮೋಡ </li>
<li>ಸ್ವರ್ಣಲತಾ ಆಲೂರು - ಆಧಾರ </li>
<li>ರಾಮಚಂದ್ರ ಮಾಗಡಿ - ಪ್ರಾಣಿಗಳು </li>
<li>ಬಿ.ಟಿ. ಲಲಿತಾನಾಯಕ - ತಾಯಿ ಸಾಕೀಬಾಯಿ </li>
<li>ಮಿರ್ಜಿ ಅಣ್ಣಾರಾಯ - ನಮ್ಮೂರ ನಾಯಕರು </li>
<li>ವಿಜಿ ಭಟ್ಟ - ರಾಮರಾಜ್ಯ, ಅನುಭವಾಮೃತ, ಗುಪ್ತಚಾರ </li>
<li>ರಾ. ವೆಂ. ಶ್ರೀನಿವಾಸ - ದುಃಖಸೇತು </li>
<li>ರಾಜಲಕ್ಷ್ಮಿ ಎನ್. ರಾವ್ - ಆವೇ ಮರೀಯಾ, ಫೀಡ್ರಾ</li>
<li>ಸುಮತೀಂದ್ರ ನಾಡಿಗ - ಸುಟ್ಟ ಬೆರಳು,ಹಂಚಿಕೆ </li>
<li>ಪಿ.ವಿ. ನಂಜರಾಜ ಅರಸು - ಅದೃಶ್ಯ ಪಾಠ </li>
<li>ಟಿ. ಎನ್. ಕೃಷ್ಣರಾಜು - ಶನಿ ಹಿಡಿದದ್ದು, ಮಾಡು ಸಿಕ್ಕದಲ್ಲಾ </li>
<li>ವೀರಭದ್ರ - ಕೈ ಬೀಸಿತು ಹೆಣ, ಓ ಹೆಣ್ಣೇ ನಿನ್ನದಿದೇ ಕಥೆಯೇನೇ ?</li>
<li>ಜಿ.ಕೆ. ಗೋವಿಂದರಾವ್ - ಪೊರೆ ಬಿಟ್ಟ ಹಾವು </li>
<li>ಮಿತ್ರಾ ವೆಂಕಟ್ರಾಜ್ - ಒಂದು ಒಸಗೆ ಒಯ್ಯುವುದಿತ್ತು </li>
<li>ಜಯಪ್ರಕಾಶ ಮಾವಿನಕುಳಿ - ಅನುಗಾಲವು ಚಿಂತೆ ಜೀವಕೆ, ...ಅಧಿನಾಯಕ ಜಯ ಹೇ </li>
<li>ಕೆ ಸತ್ಯನಾರಾಯಣ - ಸೀತೆ ಹೇಳಿದ ರಾಮನ ಗುರುತು,ಮುದುಕಿ ಹೇಳಿದ ಸರ್ ಎಂ.ವಿ ಕತೆ ಸರ್ ಎಂ.ವಿ ಕೇಳಿದ ಮುದುಕಿ ಕತೆ </li>
<li>ಸುಧಾಕರ - ಕಣ್ಣಿ ಕಿತ್ತ ಹಸು </li>
<li>ಶ್ರೀಕಾಂತ - ಭೂಮಿ ಕಂಪಿಸಲಿಲ್ಲ </li>
<li>ಮಹಾಂತೇಶ ನವಲಕಲ್ - ಬುದ್ಧ ಗಂಟೆಯ ಸದ್ದು </li>
<li>ವೈ.ಎಸ್ . ಲೂಯಿಸ್ - ರಾಗ ತರಂಗ </li>
<li>ನಳಿನಿ ಮೂರ್ತಿ - ರತ್ನಗರ್ಭ ವಸುಂಧರಾ </li>
<li>ರಾಜಶೇಖರ ಭೂಸನೂರಮಠ - ಪಾಡನ್ ಕಾಡಿನ ಪ್ರಸಂಗ </li>
<li>ಎಚ್ ರಾಮಚಂದ್ರ ಸ್ವಾಮಿ - ಅಮಾನವರು</li>
<li>ಶೈಲಜಾ ರಾಜಶೇಖರ ಭೂಸನೂರಮಠ - ತಾಯಿ ಯಾರು </li>
<li>ಮನು - ಸುದರ್ಶನ ಯಾನ </li>
<li>ನಾಗೇಶ್ ಹೆಗಡೆ - ಡಿಲೇ ವಿಷನ್ </li>
<li>ಹ.ಶಿ.ಭೈರನಟ್ಟಿ - ಸಮೂಹ ಸಂಮೋಹಿನಿ </li>
<li>ವಜ್ರಗಳು,ವಣಖೊಬ್ರಿ ಮತ್ತು E = mc2</li>
<li>ವಿರೂಪಾಕ್ಷ ಬಣಕಾರ - ಕೊನೆಯ ಸಂದೇಶ </li>
<li>ಕನಕಮಾಲಿನಿ ಜೋಶಿ - ಅನೂಹ್ಯ </li>
<li>ಸುಭಾಷಿಣಿ - ಮಿನುಗೆಲೇ ಮಿಂಚುಳ್ಳಿ </li><li></li><li>ದೇವುಡು - ಮೂರು ಕನಸು </li><li>ಕೆವಿ ಅಯ್ಯರ್ - ಅನಾಥ ಅನಸೂಯೆ </li><li>ಕ ವೆಂ ರಾಜಗೋಪಾಲ - ಅನಾಥ ಮೇಷ್ಟರ ಸ್ವಗತ ಸಂಪ್ರದಾಯ </li><li>ಶಾಂತರಸ - ನೀಲಗಂಗಾ ಗುರುಪಾದ ಮತ್ತು ಒಂದು ರೂಪಾಯಿ </li><li>ಶಂಕರ ಮೊಕಾಶಿ ಪುಣೇಕರ - ಬಿಲಾಸಖಾನ </li><li>ವೆಂಕಟರಾಜ ಪಾನಸೆ - ಸಮಾನತೆಯ ಸುಳಿಯಲ್ಲಿ </li><li>ಪರಂಜ್ಯೋತಿ - ಶೂನ್ಯ</li><li>ಗಿರಡ್ಡಿ ಗೋವಿಂದರಾಜು - ನಮ್ಮೂರಿನಲ್ಲೊಬ್ಬ ತಲಾಠಿ </li><li>ಕೆವಿ ತಿರುಮಲೇಶ್ - ನೆಳಲೆಮಠದ ಶ್ರೀಗಳು </li><li>ಎ ಎನ್ ಪ್ರಸನ್ನ - ಹೊಳೆಗೆ ಹೋದದ್ದು </li><li>ಮಾವಿನಕೆರೆ ರಂಗನಾಥನ್ - ಉಳಿದದ್ದು ಆಕಾಶ </li><li>ಮಲ್ಲಿಕಾರ್ಜುನ ಹಿರೇಮಠ - ಅಮೀನಪುರದ ಸಂತೆ </li><li>ಈಶ್ವರಚಂದ್ರ - ಕೊಂಪೆಯಲ್ಲಿ ಕಟ್ಟುತ್ತಿರುವ ಬಂಗಲೆ </li><li>ಶಾಂತಾರಾಮ ಸೋಮಯಾಜಿ - ನೀರಮೇಲೆ ನಡೆಯುವವನು </li><li>ಎಸ್ ಎಫ್ ಯೋಗಪ್ಪನವರ್ - ಆರಾಮಕುರ್ಚಿ</li>
</ol>
<br />
<br />
ಛಂದ ಪುಸ್ತಕವು ಗುರುತಿಸಿರುವ ಕಥೆಗಾರರು ಮತ್ತು ಕಥಾಸಂಕಲನಗಳು:<br />
<br />
<ol style="text-align: left;">
<li>ಸುಮಂಗಲಾ - ಜುಮುರು ಮಳೆ,ಕಾಲಿಟ್ಟಲ್ಲಿ ಕಾಲುದಾರಿ<span style="white-space: pre;"> </span></li>
<li>ಗುರುಪ್ರಸಾದ್ ಕಾಗಿನೆಲೆ - ಶಕುಂತಳಾ<span style="white-space: pre;"> </span></li>
<li>ಡಾ. ಕೆ. ಎನ್. ಗಣೇಶಯ್ಯ - ಶಾಲಭಂಜಿಕೆ<span style="white-space: pre;"> </span></li>
<li>ಸಚ್ಚಿದಾನಂದ ಹೆಗಡೆ - ಕಾರಂತಜ್ಜನಿಗೊಂದು ಪತ್ರ<span style="white-space: pre;"> </span></li>
<li>ನಾಗರಾಜ ವಸ್ತಾರೆ - ಹಕೂನ ಮಟಾಟ<span style="white-space: pre;"> </span></li>
<li>ಸುರೇಂದ್ರನಾಥ್ ಎಸ್. - ಕಟ್ಟು ಕತೆಗಳು</li>
<li>ಕರ್ಕಿ ಕೃಷ್ಣಮೂರ್ತಿ - ಗಾಳಿಗೆ ಮೆತ್ತಿದ ಬಣ್ಣ <span style="white-space: pre;"> </span></li>
<li>ಪದ್ಮನಾಭ ಭಟ್ ಶೇವ್ಕಾರ - ಕೇಪಿನ ಡಬ್ಬಿ</li>
<li>ವಿಕ್ರಮ ಹತ್ವಾರ- ಝೀರೋ ಮತ್ತು ಒಂದು</li>
<li>ಲೋಕೇಶ ಅಗಸನಕಟ್ಟೆ - ಹಟ್ಟಿಯೆಂಬ ಭೂಮಿಯ ತುಣುಕು<span style="white-space: pre;"> </span></li>
<li>ಡಾ. ವಿನಯಾ - ಊರ ಒಳಗಣ ಬಯಲು<span style="white-space: pre;"> </span></li>
<li>ಸುನಂದಾ ಪ್ರಕಾಶ ಕಡಮೆ - ಪುಟ್ಟ ಪಾದದ ಗುರುತು<span style="white-space: pre;"> </span></li>
<li>ಅಲಕ ತೀರ್ಥಹಳ್ಳಿ - ಈ ಕತೆಗಳ ಸಹವಾಸವೇ ಸಾಕು<span style="white-space: pre;"> </span></li>
<li>ಸಂದೀಪ ನಾಯಕ - ಗೋಡೆಗೆ ಬರೆದ ನವಿಲು<span style="white-space: pre;"> </span></li>
<li>ಕಣಾದ ರಾಘವ - ಮೊದಲ ಮಳೆಯ ಮಣ್ಣು<span style="white-space: pre;"> </span></li>
<li>ಬಸವಣ್ಣೆಪ್ಪಾ ಕಂಬಾರ - ಆಟಿಕೆ</li>
<li>ದಯಾನಂದ - ದೇವರು ಕಚ್ಚಿದ ಸೇಬು</li>
<li>ಮೌನೇಶ್ ಎಲ್. ಬಡಿಗೇರ್ - ಮಾಯಾ ಕೋಲಾಹಲ</li>
<li>ಸ್ವಾಮಿ ಪೊನ್ನಾಚಿ - ಧೂಪದ ಮಕ್ಕಳು</li>
</ol>
<br />
<br />
ಅಂಕಿತ ಪುಸ್ತಕದ "ಅಂಕಿತ ಪ್ರತಿಭೆ" ಸರಣಿಯಲ್ಲಿ ಬಂದ ಕಥಾ ಸಂಕಲನಗಳು :<br />
<br />
<ol style="text-align: left;">
<li>ವಿಕಾಸ್ ನೇಗಿಲೋಣಿ - ಮಳೆಗಾಲ ಬಂದು ಬಾಗಿಲು ತಟ್ಟಿತು</li>
<li>ಸಿಂಧು ರಾವ್ - ಸರ್ವಋತು ಬಂದರು</li>
<li>ಸಚಿನ್ ತೀರ್ಥಹಳ್ಳಿ - ನವಿಲು ಕೊಂದ ಹುಡುಗ</li>
</ol>
<br />
<br />
A compilation of Best Kannada short stories by Sharath Bhat Seraje</div>
Sharath Bhat serajehttp://www.blogger.com/profile/11873783107861311555noreply@blogger.com1tag:blogger.com,1999:blog-1843393932875644623.post-91861096435731294092019-07-09T03:09:00.001-07:002019-07-09T03:09:27.276-07:00ಪುನರ್ವಸು ಕಾದಂಬರಿಯ ಬಗ್ಗೆ <div dir="ltr" style="text-align: left;" trbidi="on">
<div style="background-color: white; color: #1c1e21; font-family: Helvetica, Arial, sans-serif; font-size: 14px; margin-bottom: 6px;">
ಡಾ.ಗಜಾನನ ಶರ್ಮರ ಪುನರ್ವಸು ಹಲವು ಕಾರಣಗಳಿಗೆ ಗಮನಾರ್ಹವಾದ ಕಾದಂಬರಿ. ಸುಮಾರು 540 ಪುಟಗಳಲ್ಲಿ ಬಿಚ್ಚಿಕೊಳ್ಳುವ ಕಥಾನಕವಾದರೂ, ಕರಗಿಸಬಹುದಾದ ಬೊಜ್ಜು ಇದರಲ್ಲಿಲ್ಲ. ಇರುವುದೆಲ್ಲವೂ ಮನನೀಯ, ಬೋಧಪ್ರದ.</div>
<div style="background-color: white; color: #1c1e21; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ Planet Earthನಂಥಾ ಕೆಲವು ಸಾಕ್ಷ್ಯಚಿತ್ರಗಳನ್ನು ಮುಗಿಸಲಿಕ್ಕೆ ಐದು ವರ್ಷಗಳೇ ಬೇಕಾಗಿದ್ದವಂತೆ ಅಂತೆಲ್ಲ ಶ್ಲಾಘಿಸಿ, "ನಮ್ಮಲ್ಲಿ ಇಷ್ಟೆಲ್ಲ ಕಷ್ಟ ಪಡುವವರು ಯಾರಿದ್ದಾರೆ" ಅಂತ ನಾವೆಲ್ಲ ಪೇಚಾಡುವುದುಂಟು. ಹಾಗಂತ ವರ್ಷಗಟ್ಟಲೆ ರಿಸರ್ಚು, ಮಾಹಿತಿಯ ಸಂಗ್ರಹ ಇವೆಲ್ಲ ನಮ್ಮಲ್ಲಿ ಇಲ್ಲವೆಂದಲ್ಲ. ಹಳಗನ್ನಡದ ಮೇಲೆ ಕೆಲಸ ಮಾಡುವವರು, ವ್ಯಾಕರಣ ಶಾ<span class="text_exposed_show" style="display: inline; font-family: inherit;">ಸ್ತ್ರದ ಆಳಕ್ಕೆ ಇಳಿದವರು, ಶಬ್ದಾರ್ಥ ಶೋಧನೆಗೆ/ನಿಘಂಟುಗಳ ರಚನೆಗೆ ತೆತ್ತುಕೊಂಡವರು, ನೂರಾರು ಶಾಸನಗಳ ಬೆನ್ನಟ್ಟುವವರು, ತಾಳೆಗರಿಗಳನ್ನು ಕಲೆಹಾಕಿ ಗ್ರಂಥಸಂಪಾದನೆ ಮಾಡಲು ಹೊರಡುವವರು - ಹೀಗೆ ಪಾಂಡಿತ್ಯ, ಸಂಶೋಧನೆಯ ಕ್ಷೇತ್ರಗಳಲ್ಲಿ ಇರುವವರು - ಇವರೆಲ್ಲರೂ ಎಲ್ಲೆಲ್ಲಿಂದಲೋ ವಿಷಯಗಳನ್ನು ಸಂಚಯಿಸುವ ಶ್ರಮಸಾಧ್ಯವಾದ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಕಥೆ ಕಾದಂಬರಿ ಬರೆಯುವವರು, ಚಲನಚಿತ್ರ ರಂಗದವರು ಎಲ್ಲ ರಿಸರ್ಚು ಮಾಡುವುದು ಕಡಮೆ.</span></div>
<div class="text_exposed_show" style="background-color: white; color: #1c1e21; display: inline; font-family: Helvetica, Arial, sans-serif; font-size: 14px;">
<div style="font-family: inherit; margin-bottom: 6px;">
ಚಿತ್ರದುರ್ಗದ ಕಥೆ ಹೇಳಲು ತರಾಸು ಅವರು ಇತಿಹಾಸವನ್ನು ಕೆದಕಿದ್ದು, ಕೊರಟಿ ಶ್ರೀನಿವಾಸ ರಾವ್ ಅವರು ವಿಜಯನಗರದ ಇತಿಹಾಸವನ್ನು ಹೆಕ್ಕಿ ಗುಡ್ಡೆ ಹಾಕಿ ಕಥೆಗಳನ್ನು ಹೆಣೆದದ್ದು, ಭೈರಪ್ಪನವರು ಒಂದೊಂದು ಕೃತಿಗೆ ಮೊದಲೂ ಎಂಟೋ ಹತ್ತೋ ತಿಂಗಳು ಸಂಶೋಧನೆಗೆ ತೊಡಗುವುದು, ಕೆ.ಎನ್. ಗಣೇಶಯ್ಯನವರು ವಿಜ್ಞಾನ, ಇತಿಹಾಸಗಳ ಅಚ್ಚರಿಗಳ ಹುಡುಕಾಟವನ್ನು ಮತ್ತು ತನ್ನ ಕ್ಷೇತ್ರಕಾರ್ಯಗಳನ್ನೇ ಕಥೆಗಳನ್ನಾಗಿಸುವುದು ಹೀಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ಇದೀಗ ಈ ಕೂಟದ ಇತ್ತೀಚಿನ ಸದಸ್ಯರಾಗಿ ಪುನರ್ವಸು ಕಾದಂಬರಿಯ ಗಜಾನನ ಶರ್ಮರು ಸೇರಿಕೊಂಡಿದ್ದಾರೆ. ಅವರು ಹೇಳುತ್ತಿರುವುದು ಜೋಗದ ಸಿರಿಬೆಳಕಿನ, ಆ ಬೆಳಕಿನಿಂದ ಕತ್ತಲೆಗೆ ದೂಡಲ್ಪಟ್ಟ ಶರಾವತಿಯ ಆಚೀಚೆ ದಂಡೆಯ ಹಳ್ಳಿಗಳ ಕಥೆ. ನಮ್ಮಲ್ಲಿ ಕೈಗಾರಿಕೆಗಳು, ಉದ್ದಿಮೆಗಳು ಬರದಿದ್ದರೆ ಬಡತನ, ನಿರುದ್ಯೋಗಗಳು ತೊಲಗುವುದಿಲ್ಲ ಎಂಬ ಸರ್ ಎಂ. ವಿಶ್ವೇಶ್ವರಯ್ಯನವರ ನಿಲುವಿನಿಂದ ಶುರುವಾಗುವ ಜೋಗದ ಪ್ರಾಜೆಕ್ಟ್ ಮತ್ತು ಅದರಿಂದಾಗಿ ಮುಳುಗಿದ ಊರುಗಳ ಕಥೆಯಿದು.</div>
<div style="font-family: inherit; margin-bottom: 6px; margin-top: 6px;">
ಉಪೇಂದ್ರ ಒಂದೊಮ್ಮೆ ಶೂಟಿಂಗ್ಗೆ ಒಂದುಕಡೆಗೆ ಹೋಗಿದ್ದಾಗ ಅವರ ಸ್ನೇಹಿತರು, 'ನೋಡು, ಈ ಏರಿಯಾ ಇನ್ನೂ ಡೆವಲಪ್ ಆಗಿಲ್ಲ. ಬರೀ ಕಾಡು, ಗುಡಿಸಲಿನಲ್ಲೇ ಜನ ವಾಸ ಮಾಡುತ್ತಿದ್ದಾರೆ' ಎಂದರಂತೆ. ಆಗ ಉಪ್ಪಿ, 'ನಿಮ್ಮ ಪ್ರಕಾರ, ಡೆವಲಪ್ಮೆಂಟ್ ಅಂದ್ರೆ ಏನು? ಈ ಏರಿಯಾದಲ್ಲಿನ ಕಾಡು ಕಡಿದು, ನಾಲ್ಕು ದೊಡ್ಡ ಬಿಲ್ಡಿಂಗ್ ಬಂದು ಜನ ಅಲ್ಲಿ ಐಷಾರಾಮಿಯಾಗಿ ವಾಸಿಸುತ್ತಿದ್ದರೆ ಅದು ಡೆವಲಪ್ಮೆಂಟಾ? ಕಡೆಗೆ ಏನ್ಮಾಡ್ತಾರೆ, ಆ ಬಿಲ್ಡಿಂಗ್ ಸಹವಾಸ ಬೋರಾಗಿ ಮತ್ತೆ ಎಲ್ಲೋ ತೋಟದ ಮನೆ ತೆಗೆದುಕೊಂಡು ಅಲ್ಲಿ ಹಾಯಾಗಿ ವಾಸಿಸುತ್ತಾರೆ. ಆದರೆ ಇಲ್ಲಿ ಹುಟ್ಟುವಾಗಲೇ ಪ್ರಕೃತಿಯ ಮಡಿಲಿನಲ್ಲಿ ಹುಟ್ಟಿ ಅದನ್ನೇ ಅನುಭವಿಸಿ ಖುಷಿಯ ಜೀವನ ನಡೆಸುತ್ತಿದ್ದಾರೆ. ಮನುಷ್ಯನಿಗೆ ಅಂತಿಮವಾಗಿ ಬೇಕಾಗೋದು ನೆಮ್ಮದಿಯ ವಾತಾವರಣವೇ ಹೊರತು ಡೆವಲಪ್ಮೆಂಟ್, ಐಷಾರಾಮಿ ಮನೆಯಲ್ಲ. ಅದೇ ಕಾರಣಕ್ಕೆ ದೊಡ್ಡ ಶ್ರೀಮಂತರು ತಮ್ಮ ಕೊನೆಗಾಲದಲ್ಲಿ ಎಲ್ಲೋ ಒಂದು ಚಿಕ್ಕ ಫಾರ್ಮ್ ಹೌಸಿನಲ್ಲಿ ವಾಸಿಸುತ್ತಾರೆ' ಎಂದಿದ್ದರಂತೆ. ಪುನರ್ವಸುವಿನಲ್ಲಿ ವಿಶ್ವೇಶ್ವರಯ್ಯ,ಕೃಷ್ಣರಾವ್, ಎಸ್ ಜಿ ಫೋರ್ಬ್ಸ್, ಎಸ್ ಕಡಾಂಬಿ, ಮೊಹಮದ್ ಹಯಾತ್, ಸರ್ ಮಿರ್ಜಾ ಇಸ್ಮಾಯಿಲ್ ಮುಂತಾದ ದೀವಾನರು, ದಕ್ಷ ಎಂಜಿನಿಯರುಗಳು ಎಲ್ಲ ಪ್ರಗತಿಯ ಬಗ್ಗೆ ಎಷ್ಟೆಲ್ಲ ವಾದಗಳನ್ನು ಹೂಡಿದರೂ, ಕೃತಿಕಾರನ ಒಲವಿರುವುದು ಉಪ್ಪಿ ಹೇಳಿದ ಸಿದ್ಧಾಂತದ ಕಡೆಗೇ.</div>
<div style="font-family: inherit; margin-bottom: 6px; margin-top: 6px;">
ಲಿಂಗನಮಕ್ಕಿ ಜಲಾಶಯದ ಹಿಂದಿನ ಕಥೆ,ವ್ಯಥೆ, ಅಲ್ಲಿನ ಹಳ್ಳಿಗಾಡಿನ ಶ್ರೀಮಂತ ಸಂಸ್ಕೃತಿ, ಜೋಗದ ಬಗ್ಗೆ ಗೊತ್ತಿಲ್ಲದ ಸಂಗತಿಗಳು ಇವೆಲ್ಲವನ್ನು ಡೇವಿಡ್ ಅಟೆನ್ಬರೋ ಬಿಬಿಸಿಗೆ ಮಾಡಿಕೊಟ್ಟ ಸಾಕ್ಷ್ಯಚಿತ್ರವೊಂದರಂತೆ ಹೃದಯಹಾರಿಯಾಗಿ ತೋರಿಸಿದ್ದಕ್ಕೆ ಗಜಾನನ ಶರ್ಮರಿಗೆ ಅಭಿನಂದನೆಗಳು.</div>
<div style="font-family: inherit; margin-bottom: 6px; margin-top: 6px;">
<br /></div>
<div style="font-family: inherit; margin-bottom: 6px; margin-top: 6px;">
---> Sharath Bhat Seraje</div>
</div>
</div>
Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-66088206527417571182019-07-09T03:08:00.001-07:002019-07-09T03:09:44.349-07:00ಜೋಗಿಯವರ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು<div dir="ltr" style="text-align: left;" trbidi="on">
Analysis of the novel "L" by Jogi by Sharath Bhat Seraje<br />
<br />
<div class="_1dwg _1w_m _q7o" style="font-family: inherit; padding: 12px 12px 0px;">
<div style="font-family: inherit;">
<div class="_5pbx userContent _3ds9 _3576" data-ft="{"tn":"K"}" data-testid="post_message" id="js_c" style="border-bottom: none; font-family: inherit; font-size: 14px; line-height: 1.38; margin-top: 6px; padding-bottom: 12px;">
<div style="font-family: inherit; margin-bottom: 6px;">
ಜೋಗಿಯವರ ಹೊಸ ಕಾದಂಬರಿ 'L', ನನ್ನ ಬೊಗಸೆಗೆ ಸಿಕ್ಕಿದಷ್ಟು, ಬೊಗಸೆಯಿಂದ ಸೋರದೆ ಉಳಿದಷ್ಟು: ಅನ್ಯರೊರೆದುದನೆ ಬರೆದುದನೆ ಬರೆಬರೆದು ಓದುಗರನ್ನು ದಣಿಸುವ ಜಾಯಮಾನ ಜೋಗಿಯವರದ್ದಲ್ಲ ಎನ್ನುವುದು ಅವರ ಕಥೆಗಳನ್ನೋದುವರಿಗೆಲ್ಲ ಗೊತ್ತಿರುವ ವಿಚಾರವೇ. ಅವರದ್ದು ಕಥೆಗಳಿಗೆ ತೆರೆದಷ್ಟೇ ಬಾಗಿಲು; ಪ್ರಯೋಗಕ್ಕೆ ತೆರೆದೇ ಇರುವ ಬಾಗಿಲು. ಸ್ವರೂಪದಲ್ಲೂ,ಜೋಡಣೆಯಲ್ಲೂ, ಕೊನೆಗೆ ಹುರುಳಿನಲ್ಲೂ As clever as they come ಅಂತನ್ನಿಸುವ ಜಾಣತನ,ವಿನೋದಸ್ವಭಾವ, ಚಮತ್ಕಾರಪ್ರಿಯತೆ ಇವೆಲ್ಲ ಜೋಗಿಯವರ ಟ್ರೇಡ್ ಮಾರ್ಕುಗಳು. ಅಂಥದ್ದೊಂದು ಚತುರಸೃಷ್ಟಿಯ "ದೊಡ್ಡ ಸಣ್ಣಕಥೆ"ಯಾಗಿ ಜಕ್ಕುಳಿಸಿ, ರಂಜಿಸಿ, ತಲೆದೂಗಿಸಿದ್ದು ಜೋಗಿಯವರ "ಸಲಾಂ ಬೆಂಗಳೂರು". ತಂತ್ರಗಾರಿಕೆಯ ದೃಷ್ಟಿಯಿಂದ ಈ ಕಾದಂಬರಿಯೂ ಸಲಾಂ ಬೆಂಗಳೂರಿನ ಚಿಕ್ಕಪ್ಪನ ಮಗನಂತಹದ್ದು, ಮನೋಭಾವ ಮತ್ತು toneನಲ್ಲಿ ಕಿಶೋರ್ ಕುಮಾರನ ಚೆಲ್ಲಾಟಕ್ಕೂ ಮುಕೇಶನ ವಿಷಾದಗೀತೆಗಳಿಗೂ ಇರುವಂತಹ ಅಂತರ. ಹಾಗಾಗಿ ಇವೆರಡೂ ಕೃತಿಗಳು ಹತ್ತಿರವಿದ್ದೂ ದೂರ.</div>
<div style="font-family: inherit; margin-bottom: 6px; margin-top: 6px;">
ಕಾವ್ಯ ಅಂದರೆ ಏನು ? ಕಾವ್ಯದ ಲಕ್ಷಣಗಳು ಯಾವುವು? ಕಾವ್ಯಕ್ಕೆ ಸೌಂದರ್ಯ ಹೇಗೆ ಬರುತ್ತದೆ? ಕವಿಯು ಹೇಗಿರುತ್ತಾನೆ, ಅವನ ಯೋಚನೆಯ ಪರಿಯೇನು ? ಅವನು ಯಾವ ಪರಿಕರಗಳನ್ನು ಬಳಸಿ ಕಾವ್ಯವನ್ನು ರಚಿಸುತ್ತಾನೆ? ಕಾವ್ಯದ ಪ್ರಯೋಜನ ಏನು? ಇಂತಹಾ ಮೂಲಭೂತವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಶಾಸ್ತ್ರಕ್ಕೆ ಕಾವ್ಯಮೀಮಾಂಸೆ ಅಂತ ಹೆಸರು. ಈ ಅರ್ಥದಲ್ಲಿ 'L' ಕಾದಂಬರಿಯ ನಾಯಕ ಲಕ್ಷ್ಮಣನೂ ಕಾವ್ಯಮೀಮಾಂಸೆಗೆ ಕೈ ಹಾಕಿದವನು. ತನ್ನ ಬವಣೆ, ಬೇಗುದಿಗಳಿಗೂ ತನ್ನ ಕಾವ್ಯಕ್ಕೂ ಎಷ್ಟು ಹತ್ತಿರದ ಸಂಬಂಧ ಅಂತ ಹುಡುಕುವವನು. ಅವನು ವಿದ್ವಾಂಸನಲ್ಲ, ಸಿದ್ಧಾಂತಿಯಲ್ಲ. ಅವನು ನಮ್ಮ ಭಾಮಹ, ದಂಡಿ, ವಾಮನ,ಕುಂತಕ, ಆನಂದವರ್ಧನ, ಅಭಿನವಗುಪ್ತರಂತೆ ಉದ್ದುದ್ದ ಸಿದ್ಧಾಂತಗಳನ್ನು ಮಂಡಿಸುವವನಲ್ಲ. ಅವನೊಬ್ಬ badass. ಸಿನಿಕನೂ.</div>
<div style="font-family: inherit; margin-bottom: 6px; margin-top: 6px;">
Raymond Chandlerನ ಕಾದಂಬರಿಗಳಲ್ಲಿ ಬರುವ ಪತ್ತೆದಾರ Philip Marloweನ ಬಗ್ಗೆ ಒಬ್ಬರು ಹೀಗೆ ಹೇಳಿದ್ದಾರೆ : wisecracking, whiskey-drinking, tough-as-an-old-boot , Marlowe never minces his words or beats around the bush. He is blunt, terse, direct, sometimes dismissive and frequently rude. He talks tough and he talks smart. ನಮ್ಮ ಲಕ್ಷ್ಮಣನೂ ಇದೇ ಎರಕದವನು. ಹಳೇ ಚಿತ್ರಗಳಲ್ಲಿ ಬರುವ Humphrey Bogart, Robert Mitchum, Clint Eastwood, ನಾನಾ ಪಾಟೇಕರ್ ಮುಂತಾದವರಂತೆ. ಅವನ ಅನುಭವಗಳು ಕಹಿ, ಮಾತು ಕಟು - He is blunt, terse, direct, sometimes dismissive and frequently rude. He talks tough and he talks smart !!</div>
<div style="font-family: inherit; margin-bottom: 6px; margin-top: 6px;">
ನಮ್ಮಲ್ಲಿ ಕಾವ್ಯ ಕಟ್ಟುವ ಕ್ರಿಯೆಯ ಬಗ್ಗೆಯೇ ಕಾವ್ಯ ಕಟ್ಟಿದವರಿದ್ದಾರೆ (ಬೇಂದ್ರೆಯವರ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”), ಕಾವ್ಯ ಬರೆಯಲಾಗುತ್ತಿಲ್ಲ ಅನ್ನುವುದರ ಬಗ್ಗೆಯೇ ಕಾವ್ಯ ಬರೆದವರಿದ್ದಾರೆ(ಅಡಿಗರ ಕೂಪಮಂಡೂಕ) ! "English398: Fiction Workshop" ಅಂತೊಂದು ಕಥೆಯಿದೆ, ಕಥೆ ಬರೆಯುವ Workshopನಲ್ಲಿ ಹೇಳಿಕೊಡುವ ತಂತ್ರಗಳು ಆ ಕಥೆಯಲ್ಲಿಯೇ ಬರುತ್ತವೆ. ಇಂಥದ್ದನ್ನು metafiction ಅನ್ನುತ್ತಾರೆ, ಸಲಾಂ ಬೆಂಗಳೂರಿನಲ್ಲೂ metafiction ಇತ್ತು, L ಕೂಡಾ ಮೆಟಾ ಫಿಕ್ಷನ್ನೇ ಆದರೂ ಲಕ್ಷ್ಮಣನದು ಇನ್ನೊಂದೇ ಬಗೆಯ ಅನ್ವೇಷಣೆ. “ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ ಒಂದು ಕವನ” ಎನ್ನುವುದು ಕೆ. ಎಸ್. ನರಸಿಂಹಸ್ವಾಮಿಗಳ ಸಾಲು. ಬಡತನದಲ್ಲಿ ಬಳಲಿ, ಅಪ್ಪನಂತಿರದ ಅಪ್ಪನೊಂದಿಗೆ ಹೆಣಗಿ, ಪ್ರೇಮದಂತಿರದ ಪ್ರೇಮಜ್ವರದಲ್ಲಿ ತೊಳಲಿ, ಕಾವ್ಯವಾಗದ ಕಾವ್ಯದೊಂದಿಗೆ ಸೆಣಸಿ, ಉತ್ಸಾಹಗುಂದಿದ, ಕಠೋರ ಮನಸ್ಸಿನ, ಬಿರುಸು ಮಾತಿನ wisecracking ದೋಷದರ್ಶಿ ಇವನು. "ನೀನು ಸಿನಿಕ ಕಣಯ್ಯಾ" ಅಂತ ಯಾರಾದರೂ ಹೇಳಿದರೆ, 'A cynic is a man who, when he smells flowers, looks around for a coffin.' ಅಂತ ಹೇಳಿ, "ನನ್ನ ಜೀವನದಲ್ಲಿ ಮಾತ್ರ ಹೆಣದ ಪೆಟ್ಟಿಗೆ ಹತ್ತಿರವಿರದೆ, 'ಹೂವು ಮಾತ್ರ' ಅಂತ ಇರಲೇ ಇರಲಿಲ್ಲವಲ್ಲ" ಅಂತ ವಿಲವಿಲನೆ ಒದ್ದಾಡುತ್ತ ಇರಬಲ್ಲವನು. ಚುಚ್ಚುನುಡಿ ಮತ್ತು ಕಡುಮುಳಿಸು ಅವನ ಸ್ವಭಾವ, ಗಾಢವಾದ ವಿಷಾದ ಅವನಿಗೆ ನಿತ್ಯಸತ್ಯ, ನಾಟುನುಡಿ ಅವನಿಗೆ ಬಿಡುಗಡೆಗೆ/ಮುಕ್ತಿಗೆ ದಾರಿ.</div>
<div style="font-family: inherit; margin-bottom: 6px; margin-top: 6px;">
ಇಂಥವನೊಬ್ಬ, "ಆಳದನುಭವವನ್ನು ಮಾತು ಕೈ ಹಿಡಿದಾಗ, ಕಾವು ಬೆಳಕಾದಾಗ" ಒಂದು ಕವನ ಆಗುತ್ತದೆಯೇ ಅಂತ ಅನ್ವೇಷಣೆ ಮಾಡಿದರೆ ಹೇಗಿರಬಹುದು ?! ಇಷ್ಟಕ್ಕೂ ಅನುಭವವು ಆಳ ಅಂತಾಗುವುದು ಯಾವಾಗ? ಅದು ಆಳದ ಅನುಭವ ಅಂತ ಗೊತ್ತಾಗುವುದು ಹೇಗೆ? ಅನುಭವವನ್ನು ಮಾತು ಕೈ ಹಿಡಿಯದಿದ್ದರೆ ಯಾವ ಗೋಡೆಗೆ ತಲೆ ಚಚ್ಚುವುದು? ಕಾವು ಬೆಳಕಾಗದಿದ್ದರೆ ಎಲ್ಲಿಗೆ ಹೋಗುವುದು ? ಲಕ್ಷ್ಮಣನಂಥವರಿಗೆ ಇವು ಅವನನ್ನು ಅಲ್ಲಾಡಿಸಿಬಿಡಬಹುದಾದ ಪ್ರಶ್ನೆಗಳು. ಹೀಗಾಗಿಯೇ ಆತ ತನ್ನ ನೆನಪುಗಳ ಸುರುಳಿ ಬಿಚ್ಚುತ್ತ ಹೋಗುತ್ತಾನೆ, ಅಲ್ಲಿ ಉತ್ತರಗಳನ್ನು ಕಾಣ ಹೊರಡುತ್ತಾನೆ. ಬಾಳಿಗೂ ಬರೆಹಕ್ಕೂ ನಂಟಿನ ಅಂಟು ಉಂಟೇ ಅಂತ ’ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’ ಪ್ರಶ್ನೆಗಳ ಬಲೆ ಹೆಣೆಯುತ್ತ, ಹೋಗುತ್ತಾನೆ. ಪ್ರತೀ ಅಧ್ಯಾಯದಲ್ಲೂ ಕಾವ್ಯದ ಬಗ್ಗೆ ಸೂತ್ರರೂಪದ ಹೇಳಿಕೆಯೊಂದನ್ನು ಲಕ್ಷ್ಮಣ ಅಧ್ಯಾಯದ ಮೊದಲಲ್ಲೋ ಕೊನೆಯಲ್ಲೋ ಹೇಳುತ್ತಾನೆ. ಆ ಅಧ್ಯಾಯದಲ್ಲಿ ಬರುವ ಲಕ್ಷ್ಮಣನ ಜೀವನದ ಘಟನೆಗಳು ಈ ಸೂತ್ರರೂಪದ ಹೇಳಿಕೆಗೆ ಕಾರಣವಾಗುವಂತೆ ಇರುತ್ತವೆ. ಈ ಜಾಣ್ಣುಡಿಯಂಥ ಹೇಳಿಕೆಯನ್ನು ಸಚಿತ್ರವಾಗಿ ವಿವರಿಸುವಂತೆ, ಬೆಳೆಸುವಂತೆ,ವಿಶದಗೊಳಿಸುವಂತೆ, ಚತುರೋಕ್ತಿಯನ್ನು ಪರೀಕ್ಷೆಗೆ ಒಡ್ಡಿ ಅದರ ಸತ್ಯಾಸತ್ಯತೆಯನ್ನು ತೋರಿಸಿ ಕೊಡುವಂತೆ ಆ ಅಧ್ಯಾಯದಲ್ಲಿ ಪಾತ್ರಗಳು ವರ್ತಿಸುತ್ತವೆ. ಇದು ಒಂದು ತಂತ್ರವಾಗಿ ಕುತೂಹಲಕಾರಿಯಾಗಿದೆ. ಹೀಗಿರುವುದರಿಂದ, ಈ ವಾಕ್ಯದ ಎರಡು ಪಾಲು ಉದ್ದ ಮಾತ್ರವಿರುವ ಅಧ್ಯಾಯಗಳೂ ಇಲ್ಲಿವೆ !!</div>
<div style="font-family: inherit; margin-bottom: 6px; margin-top: 6px;">
ಸಲಾಂ ಬೆಂಗಳೂರಿನಲ್ಲಿ ಒಂದು ಚೇಸ್ ಥ್ರಿಲ್ಲರಿಗೆ ಆಗುವಂತಹಾ ಕಥೆಯಿತ್ತು, ಇಲ್ಲಿ ಅಂತಹಾ ಕಥೆಯೇನೂ ಇಲ್ಲ. ಹೇಳಬೇಕಾದ್ದನ್ನು ಕಥೆಯಲ್ಲಿ ಬುದ್ಧಿವಂತಿಕೆಯಿಂದ ಅಡಗಿಸುವ ಸಲಾಂ ಬೆಂಗಳೂರಿನ ಕಲೆಗಾರಿಕೆ ಇಲ್ಲಿಲ್ಲವಾದ್ದರಿಂದ ನನಗೆ ಇದಕ್ಕಿಂತ ಅದೇ ಹೆಚ್ಚು ಇಷ್ಟವಾಯಿತು. ಷೇಕ್ಸಪಿಯರನ ಬ್ರೂಟಸ್ ಹೇಳುವ, "If there be any in this assembly, any dear friend of Caesar's, to him I say that Brutus' love to Caesar was no less than his. If then that friend demand why Brutus rose against Caesar, this is my answer: not that I loved Caesar less, but that I loved Rome more" ಎಂಬ ಮಾತಿನಂತೆ, ನನಗೆ L ಇಷ್ಟವಾಗಲಿಲ್ಲ ಅಂತಲ್ಲ, ಸಲಾಂ ಹೆಚ್ಚು ಹಿಡಿಸಿತು ಅಷ್ಟೇ ಅಂತ ಹೇಳಿಬಿಡುತ್ತೇನೆ</div>
<div style="font-family: inherit; margin-bottom: 6px; margin-top: 6px;">
ತಮ್ಮ ಬಾಲ್ಯದ ನೆನಪುಗಳು, ತಮ್ಮ ಊರಿನ/ಹಳ್ಳಿಯ ವಿವರಗಳು, ತಾವು ಕಂಡ ವ್ಯಕ್ತಿಗಳು ಇವರನ್ನೆಲ್ಲ ತಮ್ಮ ಕಥೆಗಳಲ್ಲಿ ಬಲವಂತವಾಗಿ ಎಳೆದು ತರುವ ಚಪಲ ಎಲ್ಲರಿಗೂ ಇದ್ದದ್ದೇ. ಅವುಗಳಿಗೆ ಸಾಹಿತ್ಯಿಕ ಮೌಲ್ಯ ಇದೆಯೇ, ಕಥೆಗೆ ಇದೆಲ್ಲ ಬೇಕೇ ಅಂತ ಯೋಚಿಸದೆ, ನನ್ನ ಬಾಲ್ಯದ, ನಮ್ಮೂರಿನ ಸಂಗತಿಗಳನ್ನು ಹೇಗಾದರೂ ತಂದುಬಿಡಬೇಕು ಅಂತಿರುವವರು ನಮ್ಮಲ್ಲಿ ಹಲವರಿದ್ದಾರೆ. ನಾಸ್ಟಾಲ್ಜಿಯಾವೇ ಕಥೆಗೆ ಭಾರವಾಗುವಂತೆ ಬರೆಯುವವರೂ ಇಲ್ಲದಿಲ್ಲ.</div>
<div style="font-family: inherit; margin-bottom: 6px; margin-top: 6px;">
"ನೀವು rationalist ಆದರೂ ನಿಮ್ಮ ಪಾತ್ರಗಳು ಸಂಪ್ರದಾಯ ಶರಣರು. ಹೀಗೇಕೆ?", ಅಂತ ಶಿವರಾಮ ಕಾರಂತರನ್ನು ಕೇಳಿದಾಗ, "ನಾನು ಬರೆದದ್ದು ಕಾದಂಬರಿ, ಆತ್ಮಕಥೆಯಲ್ಲ" ಅಂತ ಅವರು ಗುಡುಗಿದ್ದರು! ಜಯಂತ ಕಾಯ್ಕಿಣಿಯವರು ಒಂದು ಹೋಟೆಲಿಗೆ ಹೋಗಿದ್ದಾಗ, ಅವರ ಚಿತ್ರಗೀತೆಗಳ ಅಭಿಮಾನಿಯೊಬ್ಬ, "ನಿಮ್ದು ಲವ್ ಫೇಲ್ಯೂರ್ ಕೇಸಾ ಸರ್?" ಅಂತ ಕೇಳಿದ್ದನಂತೆ! "ನಾಸ್ತಿಕರಾದ ನೀವು ಕೃಷ್ಣನ ಬಗ್ಗೆ ಇಷ್ಟು ಪ್ರೀತಿಯಿಂದ ಹೇಗೆ ಬರೆದಿರಿ, ಅಷ್ಟೊಳ್ಳೆ ಭಜನ್ ಗಳನ್ನು ಹೇಗೆ ಬರೆದಿರಿ, ಆಸ್ತಿಕರಲ್ಲದವರು, ಹಿಂದೂಧರ್ಮದ ಅನುಯಾಯಿಗಳಲ್ಲದವರು ಹೀಗೆ ಬರೆಯಲು ಸಾಧ್ಯವೇ?" ಅಂತೊಬ್ಬರು ಜಾವೇದ್ ಅಕ್ತರರನ್ನು ಕೇಳಿದ್ದರಂತೆ. ಅದಕ್ಕವರು, "ನನ್ನ ಪುಣ್ಯಕ್ಕೆ ನೀವು ಗಬ್ಬರ್ ಸಿಂಗನ ಡೈಲಾಗ್ ಬರೆದವರು ಡಕಾಯಿತರೇ ಆಗಿರಬೇಕು ಅನ್ನಲಿಲ್ಲವಲ್ಲ" ಅಂದಿದ್ದರಂತೆ! ಎಲ್ ಕಾದಂಬರಿಯ ನಾಯಕ ಈ ವಿಚಾರಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು? ಕಥೆಯಲ್ಲಿ ಕಥೆಗಾರ ಎಷ್ಟು ಕಾಣಿಸಿಕೊಳ್ಳಬೇಕು, ಅವನ ಜೀವನ ಎಷ್ಟು ಬರಬೇಕು ಎಂಬ ಪ್ರಶ್ನೆ L ಕಾದಂಬರಿಯದ್ದೂ ಆಗಿದೆ ಅಂದುಕೊಂಡು ಇಷ್ಟು ಕೊರೆದೆ.</div>
<div style="font-family: inherit; margin-bottom: 6px; margin-top: 6px;">
ಸು.ರಂ. ಎಕ್ಕುಂಡಿಯವರ "ಇಬ್ಬರು ರೈತರು" ಎಂಬ ಕವಿತೆಯಲ್ಲಿ ಕಾವ್ಯಕ್ಕೂ ಬದುಕಿಗೂ ಇರುವ ನಂಟನ್ನು ಇನ್ನೊಂದು ತರದಲ್ಲಿ ನೋಡಲಾಗಿದೆ. ಅದರಲ್ಲಿ ಇಬ್ಬರು ರೈತರು ಉಜ್ಜಯಿನಿಗೆ ಬರುತ್ತಾರೆ. ಅದು ಕಾಳಿದಾಸನ ಊರು. ಅವನ ಮನೆಗೇ ಬರುತ್ತಾರೆ. ಹೇಳಿ ಕೇಳಿ ಒಬ್ಬ ಕವಿಯ ಮನೆಗೆ ಯಾಕೆ ಬರುತ್ತಾರೆ ಅನ್ನುವುದು ಇಂಟೆರೆಸ್ಟಿಂಗ್ ಆಗಿದೆ. ಕವಿಯು ಕಾವ್ಯಗಳಲ್ಲಿ, ಪಾತ್ರಗಳನ್ನು ಸಂಕಷ್ಟಗಳಿಂದ ಪಾರು ಮಾಡಿದವನು( "ಕಣ್ವಪುತ್ರಿಯ ದೊರೆಗೆ ಒಪ್ಪಿಸಿದಿರಿ/ಅಂದು ಶಾಪಗ್ರಸ್ತಬಲೆಗಿದಿರಾಗಿದ್ದ ಅನಾಹುತವ, ಉಂಗುರದಿ ತಪ್ಪಿಸಿದಿರಿ"). ಇಂಥದ್ದು ನಿಜಜೀವನದಲ್ಲೂ ಯಾಕಾಗಬಾರದು ಅನ್ನುವುದು ಮುಗ್ಧ ರೈತರ ನಿಲುವು. ಕಾಳಿದಾಸನ ಮೇಘದೂತ ಕಾವ್ಯದಲ್ಲಿ ಯಕ್ಷನೊಬ್ಬನು ಒಂದು ಮೋಡದ ಹತ್ತಿರ ಮಾತಾಡಿ, ದೂರದಲ್ಲಿ ಅಲಕಾನಗರಿಯಲ್ಲಿದ್ದ ಯಕ್ಷಿಯ ಕಡೆಗೆ ಆ ಮೋಡವನ್ನು ಸಂದೇಶವಾಹಕನಾಗಿ ಕಳಿಸಿಕೊಟ್ಟವನು. ಹಾಗಾಗಿ ಕವಿಯ ಮಾತನ್ನು ಮೋಡವೂ ಕೇಳೀತು ಅಂತ ಆ ರೈತರ ನಂಬುಗೆ !! ಮೋಡಕ್ಕೆ ಸ್ವಲ್ಪ influence ಮಾಡಿಸಿ, ದಾರಿಯಲ್ಲಿ ನಮ್ಮ ಹೊಲಗಳಲ್ಲಿ ಬಾಯಾರಿ ಒಣಗಿನಿಂತ ಪೈರಿಗೆ ನೀರು ಸುರಿಸಲು ಹೇಳ್ತೀರಾ" ಅಂತ ರೈತರು ಕೋರಿಕೊಳ್ಳುವಲ್ಲಿಗೆ ಎಕ್ಕುಂಡಿಯವರ ಕವನ ನಿಲ್ಲುತ್ತದೆ. ಎಲ್ ಕಾದಂಬರಿಯ ನಾಯಕನಿಗೆ ಈ ಕವಿತೆ ಇಷ್ಟವಾಗುತ್ತಿತ್ತೆಂದು ಕಾಣುತ್ತದೆ. ನೇಮಿಚಂದ್ರನು ಬರೆದ, ಕಪಿ ಸಂತತಿಯು ಕಡಲಿನಲ್ಲಿ ಸೇತುವೆ ಕಟ್ಟಿತೋ ಬಿಟ್ಟಿತೋ ಗೊತ್ತಿಲ್ಲ, ಕವಿಯಂತೂ ತನ್ನ ಕಾವ್ಯಬಂಧದಲ್ಲಿ ಅದನ್ನು ಕಟ್ಟಿಬಿಟ್ಟಿದ್ದಾನೆ(ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ..... ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್) ಎಂಬ ಸಾಲನ್ನು ಎಲ್ ಕಾದಂಬರಿಯ ಲಕ್ಷ್ಮಣ ಒಪ್ಪುತ್ತಾನೋ ಬಿಡುತ್ತಾನೋ ಗೊತ್ತಿಲ್ಲ. ಜೀವನ ಕಲೆಯನ್ನು ಅನುಸರಿಸುತ್ತದೆಯೇ, ಕಲೆ ಜೀವನವನ್ನೋ ಎನ್ನುವ ಪ್ರಶ್ನೆಗೆ ವುಡಿ ಅಲನ್ ಒಂದು ತಮಾಷೆಯ ಉತ್ತರ ಕೊಟ್ಟಿದ್ದಾನೆ : 'Life doesn't imitate art, it imitates bad television.'</div>
<div style="display: inline; font-family: inherit; margin-top: 6px;">
ಹರೀಶ್ ಕೇರ ಅವರು ಗುರುತಿಸಿದಂತೆ "ಕವಿ ನಿಜಕ್ಕೂ ತನ್ನನ್ನೇ ಮಥಿಸಿಕೊಳ್ಳಲು ಹೊರಟರೆ ಏನಾಗುತ್ತದೆ?" ಎಂಬುದನ್ನು ಹೇಳುವ ಕಾದಂಬರಿಯಿದು. ಜೋಗಿಯವರು ಬರೆಯುವವರ ಸಂಕಟಗಳನ್ನು ತಮಗೇ ವಿಶಿಷ್ಟವಾದ witty ಶೈಲಿಗೆ ವಿಷಾದ, ಉತ್ಕಟತೆ, ವ್ಯಥೆಗಳಲ್ಲಿ ಅದ್ದಿ ಹೇಳಿರುವ ಕಥೆಯಿದು. ಇಂಗ್ಲೀಷಿನಲ್ಲಿ ಹೇಳುವಂತೆ ಜೋಗಿ ಮೀಟ್ಸ್ ಎಂ ವ್ಯಾಸ, ಚಿತ್ತಾಲ and ಖಾಸನೀಸ ಅಂತಲೂ ಹೇಳಬಹುದು. ಕಾಡುವುದು ಖಚಿತ.</div>
</div>
<div class="_3x-2" data-ft="{"tn":"H"}" style="font-family: inherit;">
<div data-ft="{"tn":"H"}" style="font-family: inherit;">
</div>
</div>
<div style="font-family: inherit;">
</div>
</div>
</div>
<div style="font-family: inherit;">
<form action="https://www.facebook.com/ajax/ufi/modify.php" class="commentable_item" data-ft="{"tn":"]"}" id="u_0_10" method="post" rel="async" style="margin: 0px; padding: 0px;">
<div class="_4299" style="border-radius: 0px 0px 3px 3px; color: #1c1e21; display: flex; flex-direction: column; font-family: inherit; font-size: 13px; width: 500px;">
<div class="_5vsi" style="font-family: inherit; margin-top: 0px;">
</div>
<div class="_78bu" style="font-family: inherit;">
<div class="_68wo" data-testid="fbFeedStoryUFI/feedbackSummary" style="font-family: inherit; position: relative;">
<div class="_3vum" style="align-items: center; border-bottom: 1px solid rgb(218, 221, 225); color: #606770; display: flex; font-family: inherit; line-height: 20px; margin: -2px 12px 0px; padding: 0px 0px 10px;">
<div class="_66lg" style="align-items: center; display: flex; flex-grow: 1; font-family: inherit; overflow: hidden;">
<span aria-label="See who reacted to this" class="_1n9r _66lh" role="toolbar" style="background-color: white; display: flex; font-family: "helvetica" , "arial" , sans-serif; margin-bottom: -2px; margin-right: 2px; margin-top: -2px;"><span class="_1n9k" data-hover="tooltip" data-testid="UFI2TopReactions/tooltip_LIKE" style="border-radius: 12px; display: inline-block; font-family: inherit; font-size: 11px; line-height: 16px; margin: 0px 0px 0px -2px; outline: none; padding: 2px; position: relative; z-index: 3;" tabindex="-1"><a ajaxify="/ufi/reaction/profile/dialog/?ft_ent_identifier=ZmVlZGJhY2s6MTAxNjE3MjIyOTU5MDAxNjc%3D&reaction_type=1&av=590310166" aria-label="59 Like" class="_1n9l" href="https://www.facebook.com/ufi/reaction/profile/browser/?ft_ent_identifier=ZmVlZGJhY2s6MTAxNjE3MjIyOTU5MDAxNjc%3D&av=590310166" rel="dialog" role="button" style="color: #385898; cursor: pointer; font-family: inherit; text-decoration-line: none;" tabindex="0"><span class="_9zc _19kl _1n9q" style="display: inline-block; font-family: inherit; height: 18px; position: relative; vertical-align: top; width: 18px;"><i class="_3j7l _2p78 _19kl" style="background-image: url("/rsrc.php/v3/ym/r/N2Pc61w97eJ.png"); background-position: -49px -1037px; background-repeat: no-repeat; background-size: auto; display: block; height: 18px; left: 9px; margin-left: -9px; margin-top: -9px; position: absolute; top: 9px; transform: none; width: 18px;"></i></span></a></span><span class="_1n9k" data-hover="tooltip" data-testid="UFI2TopReactions/tooltip_LOVE" style="border-radius: 12px; display: inline-block; font-family: inherit; font-size: 11px; line-height: 16px; margin: 0px 0px 0px -4px; outline: none; padding: 2px; position: relative; z-index: 2;" tabindex="-1"><a ajaxify="/ufi/reaction/profile/dialog/?ft_ent_identifier=ZmVlZGJhY2s6MTAxNjE3MjIyOTU5MDAxNjc%3D&reaction_type=2&av=590310166" aria-label="17 Love" class="_1n9l" href="https://www.facebook.com/ufi/reaction/profile/browser/?ft_ent_identifier=ZmVlZGJhY2s6MTAxNjE3MjIyOTU5MDAxNjc%3D&av=590310166" rel="dialog" role="button" style="color: #385898; cursor: pointer; font-family: inherit; text-decoration-line: none;" tabindex="-1"><span class="_9zc _19kl _1n9q" style="display: inline-block; font-family: inherit; height: 18px; position: relative; vertical-align: top; width: 18px;"><i class="_3j7m _2p78 _19kl" style="background-image: url("/rsrc.php/v3/ym/r/N2Pc61w97eJ.png"); background-position: -68px -1037px; background-repeat: no-repeat; background-size: auto; display: block; height: 18px; left: 9px; margin-left: -9px; margin-top: -9px; position: absolute; top: 9px; transform: none; width: 18px;"></i></span></a></span></span><a ajaxify="/ufi/reaction/profile/dialog/?ft_ent_identifier=ZmVlZGJhY2s6MTAxNjE3MjIyOTU5MDAxNjc%3D&av=590310166" class="_3dlf" data-testid="UFI2ReactionsCount/root" href="https://www.facebook.com/ufi/reaction/profile/browser/?ft_ent_identifier=ZmVlZGJhY2s6MTAxNjE3MjIyOTU5MDAxNjc%3D&av=590310166" rel="dialog" role="button" style="background-color: white; cursor: pointer; display: block; font-family: Helvetica, Arial, sans-serif; line-height: 16px; max-height: 16px; overflow: hidden;" tabindex="0"></a></div>
</div>
</div>
</div>
</div>
</form>
</div>
</div>
Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-88036865817184707752019-07-09T03:06:00.001-07:002019-07-09T03:06:17.046-07:00Kavaludaari movie<div dir="ltr" style="text-align: left;" trbidi="on">
<div style="background-color: white; color: #1c1e21; font-family: Helvetica, Arial, sans-serif; font-size: 14px; margin-bottom: 6px;">
Watched Kavaludaari last Saturday. It wasn't as good as GBSM and it wasn't what I expected it to be. It Still was intriguing and pretty darn good. Good as in slowly sinking into the world of a novel or sitting back and digging into a Slow burning TV series.</div>
<div style="background-color: white; color: #1c1e21; font-family: Helvetica, Arial, sans-serif; font-size: 14px; margin-bottom: 6px; margin-top: 6px;">
Regarding the genre: The interesting thing is that it is not structured like a typical suspense thriller. A suspense thriller would make every attempt to milk the suspense about what next and who the killer is going to b<span class="text_exposed_show" style="display: inline; font-family: inherit;">e.</span></div>
<div class="text_exposed_show" style="background-color: white; color: #1c1e21; display: inline; font-family: Helvetica, Arial, sans-serif; font-size: 14px;">
<div style="font-family: inherit; margin-bottom: 6px;">
Every scene would try to build and increase the tension, it would also have 4-5 possible suspects and would place red herrings and all.<br />Peak point of the suspense thriller is when the killer's name and method are revealed. This movie isn't structured like that. That is probably why Hemanth called it as police drama instead of suspense thriller.</div>
<div style="font-family: inherit; margin-bottom: 6px; margin-top: 6px;">
Tamil movie Ratsasan is an example of a traditionally structured suspense movie. I don't mean to suggest that one is superior to the other, just that one sticks to the rules of game and the other not so much.</div>
<div style="font-family: inherit; margin-bottom: 6px; margin-top: 6px;">
Since the culprits are revealed half an hour before the end, it just goes on and on while we wait for the predictable finish (or shall we call it the commercial ending, an ending where the bad guy loses and the good prevails). Hence not sticking to the rules of the suspense genre. That's deliberately done I think.</div>
<div style="font-family: inherit; margin-bottom: 6px; margin-top: 6px;">
I was a little disappointed with the way Ananth Nag's character was written. Clichéd, formulaic. He delivers a classy performance alright, but wasn't his potential wasted? Couldn't his character have been more complex, nuanced and therefore more fascinating? Writing didn't take him to the level he is capable of going. It was like hiring Elon musk to run TCS. He will do good there but he is meant to do something greater.</div>
<div style="font-family: inherit; margin-bottom: 6px; margin-top: 6px;">
Some things that were wow for me: That scene where Achyuth scolds that MLA candidate at night, only in climax do we get to know what actually was going on. And that scene when the goons approach Ananth's house and he keeps that cop aagidda photo - superb build up without even uttering a word of build up. Khaki dialogue and the climactic Holi scene worked well by the way.</div>
<div style="font-family: inherit; margin-bottom: 6px; margin-top: 6px;">
A film worth watching.</div>
</div>
</div>
Sharath Bhat serajehttp://www.blogger.com/profile/11873783107861311555noreply@blogger.com1tag:blogger.com,1999:blog-1843393932875644623.post-22516286929815461512019-07-09T03:05:00.002-07:002019-07-09T03:05:33.372-07:00Fun at Amazon<div dir="ltr" style="text-align: left;" trbidi="on">
<div style="background-color: white; color: #1c1e21; font-family: Helvetica, Arial, sans-serif; font-size: 14px; margin-bottom: 6px;">
Amazon can be a funny place. Here is a compilation of some hilarious stuff from their review and Q&A section.<br />SanDisk Ultra Dual Pen Drive:<br />Q: Can it be used for storage purpose?<br />Ans: No. It's only used for hunting rabbits.</div>
<div class="text_exposed_show" style="background-color: white; color: #1c1e21; display: inline; font-family: Helvetica, Arial, sans-serif; font-size: 14px;">
<div style="font-family: inherit; margin-bottom: 6px;">
Wakefit Memory Foam Mattress:<br />Q: Does this come with bed-frame too or is it just the mattress? The picture shows both?<br />Ans: Does it come with house too? It shows walls in the background</div>
<div style="font-family: inherit; margin-bottom: 6px; margin-top: 6px;">
Shure Sound Isolating Earphones (Prices from Rs 119,999.00)<br />Question: What are the cables and connectors provided as Standard?<br />Answer: R u gonna buy this??<br />Reviews:<br />- Totally recommended....these are simply magical, just put these on...no need to connect the headphones to any source device, and you just think of a song and it start playing . What a sound quality, although had to sell of my car, but totally worth it, guys if there are any more products coming up in a similar or a higher price range, do let me know. I just realized I had two kidneys, don't need the second one.</div>
<div style="font-family: inherit; margin-bottom: 6px; margin-top: 6px;">
- Just added it to CART, can't tell you, how much my self-esteem got boosted!</div>
<div style="font-family: inherit; margin-bottom: 6px; margin-top: 6px;">
- I robbed a bank to buy this one.....now listening to songs in jail, a must have headphones</div>
<div style="font-family: inherit; margin-bottom: 6px; margin-top: 6px;">
- I sold my laptop, iPod, TV, phone and my cochlea to buy this. The problem now is I don't have any device and the organ to try it out now.</div>
<div style="font-family: inherit; margin-bottom: 6px; margin-top: 6px;">
Uranium Ore(bottle) by Images SI<br />Q: If I opt for air mail does it get delivered by Amazon Prime Air or CIA drones?<br />Ans: No sir, just give us your coordinates and we will deliver it via intercontinental missile in less than an hour, guaranteed speed.<br />Reviews:<br />- I got a free cat in the box with this purchase but I'm not sure if I should open it to see if the cat is ok.<br />- I purchased this product 4.47 Billion Years ago and when I opened it today, it was half empty.<br />- This is NOT, repeat, NOT a woman from the Ukraine. Very disappointed but can only blame myself. Please read description when sober.</div>
<div style="font-family: inherit; margin-bottom: 6px; margin-top: 6px;">
How to Avoid Huge Ships(Book)<br />Review: Read this book before going on vacation and I couldn't find my cruise liner in the port. Vacation ruined.<br />---------------------------------------------------------------------------<br />Lastly, reviews of a book that had the leftists excited:<br />At first, I was skeptical. It seemed difficult to believe a cogent argument could be made in such a short tome. As I read, however, I become more and more engrossed in the text. The prose is elegant and to-the-point. There is very little fluff in the language, and every word is chosen very carefully. By the end, I was fully convinced. This author can definitely convey his ideas fully and articulately.</div>
<div style="font-family: inherit; margin-bottom: 6px; margin-top: 6px;">
Best book I ever read. Once I started I couldn’t put it down until I finished. Straight to the point no nonsense literature.</div>
<div style="font-family: inherit; margin-bottom: 6px; margin-top: 6px;">
Thinking as to what exactly is so funny about these 2 reviews? Here is the thing. Title of the book is: “Why Socialism Works”. And the entire book has just 2 words: “It doesn’t”</div>
<div style="font-family: inherit; margin-bottom: 6px; margin-top: 6px;">
Share your favorite ones too</div>
</div>
</div>
Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-11348222887754414532019-07-09T03:04:00.002-07:002019-07-09T03:04:35.457-07:00ಕುಮಾರವ್ಯಾಸನ ಉದ್ಯೋಗ ಪರ್ವ <div dir="ltr" style="text-align: left;" trbidi="on">
ಇದನ್ನೊಂದು ಲೇಖನವೆಂದು ಬರೆದದ್ದಲ್ಲ, ಋತುಮಾನ ಸೈಟಿಗೆ, ಕಂಚಿನ ಕಂಠದ ಚಂದ್ರಶೇಖರ ಕೆದಿಲಾಯರು ಮಾಡಿಕೊಟ್ಟ ಗಮಕವಾಚನಕ್ಕೆ ಪೀಠಿಕೆಯಾಗಿ, ಸ್ವಲ್ಪ ಅರ್ಜೆಂಟಿನಲ್ಲೇ ಬರೆದಿದ್ದ ಪುಟ್ಟ ಟಿಪ್ಪಣಿ :<br />
ಕರ್ಣಭೇದನವು ಹಲವು ಕಾರಣಗಳಿಗೆ ಪ್ರಸಿದ್ದವಾದ ಪ್ರಸಂಗ. ಯಕ್ಷಗಾನದಲ್ಲಿಯೂ, ಯಕ್ಷಗಾನ ತಾಳಮದ್ದಳೆಯಾಗಿಯೂ ಹೆಸರು ಮಾಡಿರುವ ಪ್ರಸಂಗವಿದು . ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ, ಹತ್ತನೇ ಸಂಧಿಯಲ್ಲಿ ಇದು ಬರುತ್ತದೆ. ಕೃಷ್ಣನ ರಾಜಕೀಯದ ಪಟ್ಟುಗಳು, ಲಾಭ ಕುದುರಿಸಲಿಕ್ಕೆ ಹೊರಟ Corporate management ಅನ್ನು ಹೋಲಬಹುದಾದ ಸಮಾಲೋಚನೆಯ ಶೈಲಿ, ಕರ್ಣನನ್ನು ಭಾವನೆಯ ಬಲೆಯಲ್ಲಿ ಬಂಧಿಸಿ ಅವನ ಸ್ವಾಮಿನಿಷ್ಠೆಯನ್ನು ಪರೀಕ್ಷಿಸುವುದು ಎಲ್ಲ ಅತ್ಯಂತ ನಾಟಕೀಯವಾಗಿದೆ. ಸಂಧಾನಕ್ಕೆಂದು ಹೋಗಿದ್ದ ಕೃಷ್ಣ, ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರನಡೆದ ಮೇಲೆ ಘಟಿಸುವ ಘಟನೆಯಿದು. ಕರ್ಣನನ್ನು ಏಕಾಂತಕ್ಕೆ ಕರೆದುಕೊಂಡುಹೋಗಿ, ಅವನ ಹುಟ್ಟಿನ ವಿವರಗಳನ್ನು ಅವನಿಗೆ ತಿಳಿಸಿ, ಅವನನ್ನು ಒಲಿಸಿಕೊಳ್ಳುವ, ಯುದ್ಧವನ್ನೇ ಮಾಡದೆ ಸೋಲಿಸುವ ಪ್ರಯತ್ನವೇ ಈ ಪ್ರಸಂಗದ ತಿರುಳು.<br />
<br />
ಕುಮಾರವ್ಯಾಸನ ಕೃಷ್ಣನಂತೂ ನುರಿತ ಮನೋವಿಜ್ಞಾನಿಯಂತೆ, ಪಳಗಿದ ಸೇಲ್ಸ್ ಮ್ಯಾನ್ ಒಬ್ಬನಂತೆ ಆಕರ್ಷಕವಾದ ಮಾತು, ನಡೆಗಳ ಮೂಲಕ ಕರ್ಣನನ್ನು ಒಳಗೊಳಗೇ ಕುಸಿಯುವಂತೆ ಮಾಡುತ್ತಾನೆ. ಕುಮಾರವ್ಯಾಸನ ಕೃಷ್ಣನು, ಇನತನೂಜನ ಕೂಡೆ ಮೈದುನತನದ ಸರಸವನೆಸಗಿ ವಿಷಯ ಶುರುಮಾಡುತ್ತಾನೆ. (ಶತ್ರುಪಾಳಯದವನಾದ ಕರ್ಣ ಕುಂತಿಯ ಮಗನಾಗಿದ್ದದ್ದು ಇಷ್ಟು ದಿನ ನೆನಪಿಗೆ ಬರದೇ ಈಗ ಬರುತ್ತದೆ !) ಯಾದವ ಕುಲ ತಿಲಕನಾದ ಕೃಷ್ಣನು ಸೂತಪುತ್ರನಾದ ಕರ್ಣನನ್ನು ಬರಸೆಳೆದು, ತೊಡೆ ಸೋಂಕಿನಲಿ ಕುಳ್ಳಿರಿಸಿ ತಬ್ಬಿಬ್ಬಾಗಿಸುತ್ತಾನೆ. ಕೀರ್ತಿನಾಥ ಕುರ್ತಕೋಟಿಯವರ ಮಾತಿನಲ್ಲಿ ಹೇಳುವುದಾದರೆ : "ಕರ್ಣನ ಮನಃಸ್ಥಿತಿ ಹೇಗಿತ್ತೆಂದರೆ, ಯಾರಾದರೂ ಅವನಿಗೆ ಸೂತಪುತ್ರ ಎನ್ನಬೇಕು , ಆಗ ಸಿಟ್ಟಿನಿಂದ ಅವನ ಪರಾಕ್ರಮ ಹೆಚ್ಚಾಗಬೇಕು, ತಾನು ಸೂತಪುತ್ರ ಅಲ್ಲ ಅಂತ ತೋರಿಸಬೇಕು. ಅವನಿಗೆ ಯಾವಾಗಲೂ ತನ್ನ ಅಸ್ಮಿತೆಯ ಬಗ್ಗೆ ಎಚ್ಚರ. ಕೃಷ್ಟ ಅಂಥದ್ದೇನೂ ಮಾಡಲಿಲ್ಲ". ಬೈಯ್ಯದೆ, ಬಡಿಯದೆ, ಒಳ್ಳೆಯ ಮಾತುಗಳಲ್ಲಿ ಹೊಗಳಿ ಕೆಡವುವುದು ಅಂದರೆ ಇದೇ ತಾನೇ ! ಅಷ್ಟೇ ಅಲ್ಲ , ಅವನ ಕರದೊಳು ಕರತಳವನಿಕ್ಕಿ, ನಿನ್ನಯ ಕುಲವನರಿ, ವೃಥಾ ಸೇವಕತನದಲಿ ಇಹುದು ಉಚಿತವಲ್ಲ ಅಂತ ಅವನ ಹಿತೈಷಿಯಂತೆ ಮಾತಾಡುತ್ತಾನೆ, "ಇಷ್ಟು ಟ್ಯಾಲೆಂಟ್ ಇದ್ರೂ ನಿನಗೆ ಸರಿಯಾಗಿ salary hike ಯಾಕೆ ಆಗಿಲ್ಲ" ಎಂದು ಹಿತಚಿಂತನೆಗೆ ತೊಡಗುವ ಕಾರ್ಪೊರೇಟು recruiterನಂತೆ.<br />
<br />
ಕರ್ಣ ಮನಸ್ಸು ಮಾಡಿದರೆ, ಕುರುಕ್ಷೇತ್ರದ ಯುದ್ಧವೇ ನಡೆಯುವುದಿಲ್ಲ. ಆಗ ಹಿರಿಯನಾದ ಕರ್ಣನಿಗೆ ಪಟ್ಟಕಟ್ಟಿ ಕೌರವ ಪಾಂಡವ ಮತ್ತಿತರರು ಒಟ್ಟಿಗೇ ಕೂತರೆ ಆ ಚಿತ್ರ ಹೇಗಿರುತ್ತದೆ? “ಎಡದ ಮೈಯಲಿ ಕೌರವೇಂದ್ರರ ಗಡಣ. ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳು !” ಅಂತ ಆಮಿಷ ಒಡ್ಡುತ್ತಾನೆ. ನೀನು ನಮ್ಮಲ್ಲೇ ಉಳಿದರೆ, ಈ ಸರ್ತಿ ಪ್ರಮೋಷನ್ ಗ್ಯಾರಂಟಿ ಎನ್ನುವವನಂತೆ. “ಒಪ್ಪುವ ಕಡುವಿಲಾಸವ ಬಿಸುಟು, ಕುರುಪತಿ ನುಡಿಸೆ,ಜೀಯ ಹಸಾದವೆಂಬುದು ಕಷ್ಟ ನಿನಗೆ !” ಅಂತ ಒಗ್ಗರಣೆ ಹಾಕುತ್ತಾನೆ.<br />
<br />
ಈ ತಂತ್ರಗಾರಿಕೆಗೆ ಕರ್ಣನ ಕೊರಳ ಸೆರೆ ಹಿಗ್ಗುತ್ತದೆ, ದೃಗುಜಲ ಉರವಣಿಸುತ್ತದೆ, ಅವನು ಕಡುನೊಂದನು ಎನ್ನುತ್ತಾನೆ ಕವಿ. ಕರ್ಣನೇನು ಕೃಷ್ಣನ ಜಾಣ್ಮೆಯ ಅರಿವಾಗದಷ್ಟು ದಡ್ಡನಲ್ಲ. ಹೀಗಾಗಿ "ಭೇದದಲಿ ಹೊಕ್ಕಿರಿದನೋ ಮಧುಸೂದನನು", "ನೀನು ಕೌರವೇಂದ್ರನ ಕೊಂದೆ" ಅಂತೆಲ್ಲ ಹೇಳಿ ತಾನೇಕೆ ಕೌರವಪಕ್ಷವನ್ನು ತೊರೆಯಲಾರೆ ಅಂತ ಹೇಳುವುದನ್ನು ಕುಮಾರವ್ಯಾಸ ಸೊಗಸಾಗಿ ಚಿತ್ರಿಸಿದ್ದಾನೆ. ಕಡುಕಾವಲು ಇರುತ್ತಿದ್ದ ರಾಜರ ಅಂತಃಪುರಗಳಿಗೆ ಕಪಟದಿಂದ ಹೊಕ್ಕು ಇರಿಯುವ, ಕೊಲೆಯ ಪ್ರಯತ್ನಗಳನ್ನು ಮಾಡುವವರು ಕುಮಾರವ್ಯಾಸನ ಕಾಲದಲ್ಲಿ ಇದ್ದಿರಬೇಕು, ಆದರೆ ಇಲ್ಲಿ ಭೇದೋಪಾಯದಿಂದ ಹೊಕ್ಕದ್ದು ಮನಸ್ಸಿಗೆ, ಅದಕ್ಯಾವ ರಕ್ಷಣೆ ? ಇರಿದದ್ದು ಭಾವವನ್ನು, ಅದನ್ಯಾರು ಕಾಪಿಡುವವರು? "ಕೌರವೇಂದ್ರನ ಕೊಂದೆ" ಎಂಬ ಮಾತು ಎಷ್ಟು ಮಾರ್ಮಿಕ ನೋಡಿ, ಒಬ್ಬನ ಹುಟ್ಟಿನ ಗುಟ್ಟನ್ನು ಬಿಚ್ಚಿದರೆ ಮತ್ತೊಬ್ಬನನ್ನು ಕೊಂದಂತೆ ಆಗುತ್ತದೆ. ತನ್ನ ಜನ್ಮವೃತ್ತಾಂತ ಹೊರಗೆ ಬಂತು ಎನ್ನುವುದಕ್ಕಿಂತ ಕುರುಪತಿಗೆ ಕೇಡಾಯಿತಲ್ಲಾ ಅಂತ ಕರ್ಣ ಮರುಗುತ್ತಾನೆ<br />
<br />
ಗಮಕವಾಚನ ಇಲ್ಲಿದೆ :<br />
https://youtu.be/tqBQz8egQT8 </div>
Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-64455020066589460182019-07-09T03:03:00.002-07:002020-12-19T08:52:42.887-08:00ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 3<div dir="ltr" style="text-align: left;" trbidi="on">
ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):<br />
<br />
ವಿಷ್ಣು ಭಟ್, ಹೊಸ್ಮನೆ ಅವರು ನನ್ನ ಪುಸ್ತಕವನ್ನೋದಿ ಬರೆದಿರುವ ಸಾಲುಗಳು :<br />
ಅಬ್ಬಾ! ವೈಚಾರಿಕ ಪ್ರಬಂಧಗಳನ್ನು ಹೀಗೂ ಬರೆಯಬಹುದೇ? ಎಂದು ಹುಬ್ಬೇರುವಂತೆ ಮಾಡುವ ಈ ಸೇಸಮ್ಮ ಬಾಗಿಲು ಹಾಕಿ ಕುಂತಿದ್ದಾದರೂ ಯಾಕೆ? ಎಂಬುದನ್ನು ತಿಳಿದುಕೊಳ್ಳಲು ಪುಸ್ತಕ ಓದಲೇ ಬೇಕು. ಶರತ್ ಭಟ್ ಸೇರಾಜೆಯವರ ಜ್ಞಾನ ಇಲ್ಲಿ ಹರಿದ ಬಗೆ ನದಿಯ ನೀರಿನಂತೆ. ಯಾಕೆಂದರೆ ನದಿಯ ನೀರು ಸಮುದ್ರದ ನೀರಿನಂತಲ್ಲ! ಸಮುದ್ರದ ನೀರಿಗೆ ಹೋಲಿಸಿದರೆ ನದಿಯ ನೀರು ಅಳತೆಯಲ್ಲಿ ಎಷ್ಟೂ ಅಲ್ಲದೇ ಇರಬಹುದು. ಆದರೆ ನದಿಯ ನೀರು ಹರಿಯುವಷ್ಟು ಪ್ರದೇಶಗಳನ್ನು ಸಮುದ್ರ ನೋಡುವುದೇ ಇಲ್ಲ. ನದಿಯ ನೀರು ಎಲ್ಲವುದರ ಮೇಲೂ ಹರಿದುಕೊಂಡು ಬರುತ್ತದೆ. ಮುಳ್ಳು, ಕಲ್ಲು, ಗಿಡ, ಮರ ಎಲ್ಲವನ್ನೂ ಸವರಿಕೊಂಡು ಸಾಗುತ್ತದೆ. ಕಂದಕಗಳಿಗೆ ಧುಮುಕುತ್ತದೆ. ಅಲ್ಲೊಂದು ಜಲಪಾತವಾಗಿ ರಂಜಿಸುತ್ತದೆ. ಕೆಲವೆಡೆ ವಿಶಾಲವಾಗಿ ಹರಡಿಕೊಂಡು, ಇನ್ನು ಕೆಲವೆಡೆ ಚಿಕ್ಕದಾಗಿ ಇರುವಷ್ಟೇ ದಾರಿಯಲ್ಲಿ ಹರಿಯುತ್ತದೆ. ನಿಧಾನವಾಗಿ ದಾರಿ ಮಾಡಿಕೊಳ್ಳುವ, ಎಲ್ಲ ಸೂಕ್ಷ್ಮಗಳನ್ನು ಹೊಕ್ಕು ಹೊರಬೀಳುವ ಜಾಣ್ಮೆ ಈ ನದಿಯ ನೀರಿಗಿದೆ. ಅಂತಹ ಹರಿವ ನದಿಯೇ ಈ ಪ್ರಬಂಧಗಳು. ಎಲ್ಲಾ ವಿಷಯಗಳನ್ನೂ ಒಂದೊಂದಾಗಿ ತೆರೆದಿಟ್ಟಿರುವ ಶರತ್ ಭಟ್ಟರು ನಮ್ಮೊಳಗಿನ ಪ್ರಶ್ನೆಯನ್ನು ತಾವೇ ಕೇಳುತ್ತ, ಉತ್ತರಿಸುತ್ತ ಕೊನೆಯಲ್ಲಿ ಹೊಸದೊಂದು ವೈಚಾರಿಕ ಲೋಕಕ್ಕೆ ನೇರವಾಗಿ ಎಳೆದು ಬಿಡುತ್ತಾರೆ. ಇದು ಅವರ ಶಕ್ತಿಯೋ ಯುಕ್ತಿಯೋ? ಎಂದು ಕೇಳಿದರೆ ಎರಡೂ ಸರಿಯಾದ ಉತ್ತರವೇ.<br />
<br />
ಅಲೆ ಅಲೆ ಎನ್ನುತ್ತ ಕೊನೆಗೆ ನಮ್ಮ ತಲೆ, ತಲೆಹರಟೆಯ ತನಕ ಪೋಣಿಸಿಟ್ಟ ಅಕ್ಷರಗಳಲ್ಲಿ ಗಂಭೀರ ವಿಚಾರಗಳಿವೆ, ಹಾಸ್ಯವಿದೆ, ಜ್ಞಾನವಿದೆ, ಯೋಚನೆಗಳಿವೆ ಮತ್ತು ಓದುಗನ ತಲೆಯೊಳಗೇ ಓಡಾಡುವ ಯೋಚನಾಹುಳುಗಳೂ ಇವೆ! ಹದಿನೈದು ವಿಭಿನ್ನ ವಿಚಾರಗಳನ್ನು ಸೇಸಮ್ಮ ಹೊತ್ತು ತಂದಿದ್ದಾಳೆ. ಅವುಗಳನ್ನು ಓದಿ ನಗುವುದಕ್ಕಿದೆ, ನಾವು ಮಾಡುವ ತಪ್ಪುಗಳನ್ನೂ ಸರಿ ಪಡಿಸಿಕೊಳ್ಳುವುದಕ್ಕಿದೆ, ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಕ್ಕಿದೆ, ಗಂಭೀರವಾದ ನಿರ್ಧಾರಕ್ಕೆ ಬರಬೇಕಾದ ವಿಷಯಗಳೂ ಇವೆ. ಇಷ್ಟೆಲ್ಲವನ್ನೂ ಹೇಗೆ? ಎಲ್ಲಿಂದ ತಂದಿರಿ? ಎಂಬ ಪ್ರಶ್ನೆಗೆ ಶರತ್ ಭಟ್ ಅವರೇ ಉತ್ತರಿಸಬೇಕು.<br />
<br />
ಎಲ್ಲರೂ ಓದ ಬೇಕಾದ ತುಂಬಾ ಚಂದದ ಪುಸ್ತಕ. ಅಂಕಿತ ಪ್ರಕಾಶನಕ್ಕೂ ಅಂಕಿತ ಪ್ರತಿಭೆ ಮಾಲಿಕೆಯ ಸಂಕಲನಕಾರರಾದ ಜೋಗಿಯವರಿಗೂ ವಂದನೆಗಳು. ಶರತ್ ಭಟ್ಟರಿಗೆ ನಮೋನ್ನಮಹಃ||<br />
<br />
ಪುಸ್ತಕದ ಮುಖಪುಟದಲ್ಲಿ ಬಾಗಿಲು ಹಾಕಿದೆ, ಕೆಲವು ಬೀಗಗಳೂ ಹಾಕಿಕೊಂಡಿವೆ. ಬಾಗಿಲು ತೆರೆಯೇ ಸೇಸಮ್ಮ ಎಂದು ಒಳಹೋಗುವವರು ಕೇಳುವುದಲ್ಲ, ಒಳಗಿದ್ದವರು ಕೇಳುವುದು. ಪುಸ್ತಕದ ಒಳಗೆ ಹೊಕ್ಕರೆ ಹೊರಬರಲು ಖಂಡಿತವಾಗಿಯೂ ಆ ಹದಿನೈದು ಬೀಗಳನ್ನು ತೆಗೆಯಲೇ ಬೇಕು. ಒಳಗೆ ಹೋಗಿ ನೋಡಿ!<br />
<br />
ಒದುಗ ಇನ್ನೂ ಒಳಗೇ ಇದ್ದಾನೆ..ಬಾಗಿಲು ತೆರೆಯೇ ಸೇಸಮ್ಮ ಪ್ಲೀಸ್..<br />
ಅಂಕಿತ ಪುಸ್ತಕ, ಗಾಂಧೀಬಜಾರಿನಲ್ಲಿ ಪುಸ್ತಕದ ಪ್ರತಿಗಳು ಸಿಗುತ್ತವೆ.<br />
--------------------------------------------------------<br />
ಅಜಿತ್ ಹೆಗ್ಡೆ ಹರೀಶಿ ಅವರ ಸಾಲುಗಳು<br />
ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ.<br />
<br />
ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ.<br />
<br />
ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ.<br />
<br />
ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ.<br />
<br />
ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ.<br />
<br />
ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ.<br />
<br />
ಬಾಗಿಲು ತೆರೆಯೇ ಸೇಸಮ್ಮ - ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.<br />
ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ.<br />
<br />
ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.<br />
ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ.<br />
<br />
ಲೆಕ್ಕ ಹಾಕಿ ಸುಳ್ಳು ಹೇಳಿ - ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.<br />
ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ.<br />
<br />
ಕಾರಂತಜ್ಜನ ಕಥೆಗಳು - ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ.<br />
<br />
ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ.<br />
<br />
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.<br />
-------------------------------------------------------<br />
ಹಿರಿಯರೂ,ಸಂವೇದನಾಶೀಲರೂ ಆದ ಪಿ ಎಸ್ ನಾಯಕ್ ಸರ್ ನನ್ನ ಪುಸ್ತಕವನ್ನೋದಿ, ಯಕ್ಷಗಾನ ತಾಳಮದ್ದಳೆಯ ಹಂಚಿಕೆ, ಚರ್ಚೆಗಳಿಗಾಗಿ ಸುಧಾಕರ ಜೈನರು ಹುಟ್ಟುಹಾಕಿದ ಅರ್ಥಾಂಬುಧಿ ಎನ್ನುವ ಗ್ರೂಪಿನಲ್ಲಿ ಬರೆದದ್ದು:<br />
ಇದೊಂದು ವೈಚಾರಿಕ ಲಲಿತ ಪ್ರಬಂಧಗಳ ಸಂಕಲನ. ಲೇಖಕರು ಶ್ರೀಯುತ ಶರತ್ ಸೇರಾಜೆ, ನಮ್ಮ ಬಳಗದ ಬಂಧು.<br />
<br />
ಸೇರಾಜೆ ಎಂದಾಗ ಎರಡರ್ಥದಲ್ಲಿ ಸ್ಪೂರ್ತಿದಾಯಕ- ಒಂದು, ಸೀತಾರಾಮಯ್ಯರಂತಹ ಮೇರು ಯಕ್ಷ ಕಲಾವಿದ, ಲೇಖಕ, ಚಿಂತಕರಿಗೆ ಜನ್ಮ ನೀಡಿದ ದೇರಾಜೆ(ಚೊಕ್ಕಾಡಿ)ಯೊಂದಿಗೆ ಹೊಂದಿದ ಧ್ವನಿ ಸಾಮ್ಯತೆ. ಇನ್ನೊಂದು, ಸೇರಾಜೆ ಮನೆತನ ಕುರಿಯ ವಿಟ್ಠಲ ಶಾಸ್ತ್ರಿಯವರ ಕುಟುಂಬಕ್ಕೂ ಪದ್ಯಾಣ ಕುಟುಂಬಕ್ಕೂ ಬೆಸೆದ ಯಕ್ಷಗಾನೀಯ ಬಾಂಧವ್ಯ.<br />
<br />
ಸುಮಾರು ಒಂದು ವರ್ಷದ ಹಿಂದೆ(ಈ ಪುಸ್ತಕ ಬಿಡುಗಡೆಯ ಮೊದಲು) ಶರತ್ ಇವರ "ಸರಿಗನ್ನಡಂ ಗೆಲ್ಗೆ" ಲೇಖನ(ಸಂಖ್ಯೆ ೧೨-ಪುಟ ೯೭) ಇದೇ ಬಳಗದಲ್ಲಿ ಪ್ರಸಾರವಾಗಿತ್ತು. ಕನ್ನಡ ಭಾಷೆಯ ಬಳಕೆಯಲ್ಲಿ ಕಂಡುಬರುವ ತಪ್ಪುಗಳನ್ನು ಕ್ರೋಡೀಕರಿಸಿ ಅವುಗಳ ಸರಿಯಾದ ರೂಪವನ್ನು ತಿಳಿಸುವ ಒಂದು ಸುಂದರ ಲೇಖನ.<br />
<br />
ಶರತ್ ರ ಲೇಖನಿಯ ಮೊನಚು, ಸರಿಯನ್ನು ಸರಿಯೆಂದು ಹೇಳುವ ಛಾತಿ, ರೇಷ್ಮೆಯಂತೆ ನುಣುಪಾದ ಶೈಲಿ, ಎಲ್ಲವೂ ನನ್ನನ್ನು ಸೆರೆಹಿಡಿದಿದ್ದವು.<br />
<br />
ಇಂತಹ ೧೪ (ಒಟ್ಟಿಗೆ ೧೫) ಲೇಖನಗಳನ್ನೊಳಗೊಂಡ ೧೩೨ ಪುಟಗಳ "ಬಾಗಿಲು ತೆರೆಯೇ ಸೇಸಮ್ಮ" ಬಿಡುಗಡೆಗೆ ಸಜ್ಜಾಗಿದೆ ಎನ್ನುವದನ್ನು ಅವರಿಂದ ತಿಳಿದ ಕೂಡಲೇ ನನಗಾಗಿ ಒಂದು ಪ್ರತಿಯನ್ನು ಕಳುಹಿಸುವಂತೆ ಬಿನ್ನವಿಸಲಾಗಿ ಎರಡು ತಿಂಗಳ ಹಿಂದೆ ನನ್ನ ಮನೆಗೆ ತನ್ನ ಚೊಚ್ಚಲ(?) ಕೃತಿಯನ್ನು ತಪ್ಪದೆ ಕಳುಹಿಸಿದ ಶರತ್ ಗೆ ನನ್ನ ಬೇಶರತ್ ಅಭಿನಂದನೆ(ಸಂಪಾದಕ ಜೋಗಿಯವರನ್ನು ಉದ್ಧರಿಸಿ).<br />
<br />
ಬೀಸ ಬೀಸ ಓದಿರಿ ಎಂದು ಕಳುಹಿಸಿದ ಪುಸ್ತಕ ನನ್ನೂರು ಮುಟ್ಟುವಾಗ ನಾನು ಅವರ ಊರಿಗೆ ಹೋಗಬೇಕೇ? Don't bite more than what you can chew ಎನ್ನುವಂತೆ, ಅರೆಯುವಷ್ಟನ್ನೇ ಅಗೆಯುವ ಜಾಯಮಾನದ ನನಗೆ ಇಡೀ ಪುಸ್ತಕವನ್ನು ಓದಲು ಎರಡು ವಾರಗಳೇ ಬೇಕಾದವು.<br />
<br />
ಇಷ್ಟಕ್ಕೂ ಯಾರೀ ಸೇಸಮ್ಮ? ಕದವ ತಟ್ಟುವವರಾರು? ಯಾಕಾಗಿ? ಯಾರಿಗಾಗಿ?<br />
<br />
ಕುತೂಹಲವೇ ಕಾರಣವಾಗಿ, ನಾನು ಓದಿದ ಮೊದಲ ಲೇಖನ ಪುಸ್ತಕದ ಶೀರ್ಷಿಕೆಯ "ಬಾಗಿಲು ತೆರೆಯೇ ಸೇಸಮ್ಮ"(ಸಂಖ್ಯೆ ೫, ಪುಟ ೪೮). ಪ್ರವೃತ್ತಿಯಲ್ಲಿ ಲೇಖಕರಾದರೂ ವೃತ್ತಿಯಲ್ಲಿ ಒಬ್ಬ ಮಾಹಿತಿತಂತ್ರಜ್ಞಾನ(Information Technology) ಹೊಂದಿರುವವರು ಎನ್ನುವುದು ಈ ಲೇಖನದಲ್ಲಿ ನಿಚ್ಚಳವಾಗುತ್ತದೆ.<br />
<br />
"ಕಂಪ್ಯೂಟರ್ ಜ್ಞಾನವೇ ಜ್ಞಾನ" ಎನ್ನುವ ಯುಗದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡುಗಳ ಪಿನ್ನುಗಳು, ಫೇಸ್ ಬುಕ್, ಈ ಮೈಲ್ ಗಳಲ್ಲಿ ಬಳಸಬೇಕಾದ "ಗುಪ್ತ ಸಂಖ್ಯೆ(password)" ಎನ್ನುವ ರಹಸ್ಯಮಂತ್ರಗಳ ಬಳಕೆಯಲ್ಲಿರಬೇಕಾದ ಎಚ್ಚರ, ತಪ್ಪಿದಲ್ಲಿ ಆಗುವ ಅನಾಹೂತ ಅನಾಹುತ.... ಎಲ್ಲವನ್ನೂ ಎಳೆ ಎಳೆಯಾಗಿ ಎಳೆದುತಂದಿದ್ದಾರೆ.<br />
<br />
ಲೇಖಕರ ಅಧ್ಯಯನಶೀಲತೆಯನ್ನು ಮನಂಬುಗಬೇಕಾದರೆ "ಅಲೆ ಅಲೆ ಅಲೆ ಗುರುತ್ವದ ಅಲೆಯೋ??!" ; "ಲೆಕ್ಕ ಹಾಕಿ ಸುಳ್ಳು ಹೇಳಿ"; ಲೇಖನಗಳನ್ನೋ, ಸಾಹಿತ್ಯ(ಕಲೆ)ದ bent of mind ತಿಳಿಯಲು "ಮೋಹನ ಮುರಲಿ ನಾನು ಕಂಡಂತೆ ನನಗೆ ಕಂಡಷ್ಟು"; ಭಾಷಾಪ್ರಯೋಗದ ವಿಚಾರದಲ್ಲಿ "ಅರ್ಥವೆಂಬ ಊಸರವಳ್ಳಿ"; "ಸರಿಗನ್ನಡಂ ಗೆಲ್ಗೆ" ....<br />
<br />
ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣ.<br />
<br />
೧೫ ಲೇಖನಗಳಲ್ಲಿ ಎದ್ದುಕಾಣುವುದು ಸರಳ ಶೈಲಿ ಮತ್ತು ನಿರೂಪಣೆ. Shakespeare ನ ಭಾಷೆಯ ಕಬ್ಬಿಣದ ಕಡಲೆ, ರನ್ನ ಪಂಪರ ಪೆಂಪು ಸೊಂಪುಗಳಿಂದ ಮಾರುದೂರ.<br />
ಜೋಗಿಯವರ ಮುನ್ನುಡಿ, ಗಣೇಶ್ ಭಟ್ ನೆಲಮಾಂವ್ ಇವರ ಬೆನ್ನುಡಿ ತಿಲಕವಿಟ್ಟಂತಿವೆ.<br />
ಅಂದವಾದ ಮುದ್ರಣ, ಕೈಗೆಟಕುವ ಬೆಲೆ( ರೂಪಾಯಿ ೧೨೦/=) ಗ್ರಂಥವನ್ನೂ ಗ್ರಂಥಕರ್ತರನ್ನೂ ಇನ್ನೂ ಹತ್ತಿರವಾಗಿಸಿವೆ.<br />
ಇದು ಹೊತ್ತಗೆಯ ಹೊತ್ತು. ಇನ್ನೂ ಏಕೆ ಹೊತ್ತು? ನೀವೂ ಓದಿ<br />
--------------------------------------------------------------------<br />
Chandrashekhar Madabhavi ಅವರ ಸಾಲುಗಳು<br />
ಇದರ ಸಂಪಾದಕರು ಜೋಗಿ, ಪುಸ್ತಕ ಚೆನ್ನಾಗಿರುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ<br />
<br />
ಅಂಕಿತ ಪುಸ್ತಕ ಹೊಸಬರಿಗೆ ಅವಕಾಶ ಕೊಟ್ಟಿದ್ದಾರೆ ಅವರಿಗೆ ಚಪ್ಪಾಳೆ<br />
<br />
ತುಂಬಾ ಒಳ್ಳೆಯ ಲೇಖನಗಳ ಪುಸ್ತಕ.<br />
ಇದರಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯದ ಲೇಖನಗಳಿವೆ. ಲೇಖನಗಳ ಪ್ರುಟ್ ಸಲಾಡ್ ಅಥವಾ ಹೂಗುಚ್ಚ ಎನ್ನಬಹುದು<br />
<br />
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಲೇಖಕರು ಹಲವು ವಿಷಯಗಳ ಬಗ್ಗೆ ಲೇಖಗಳನ್ನು ಬರೆದಿದ್ದಾರೆ<br />
<br />
ಕಠಿಣ ವಿಷಯಗಳನ್ನು ಸರಳೀಕರಿಸಿ ಸಾಮಾನ್ಯರಿಗೆ ಅರ್ಥವಾಗುವಂತೆ ಹೇಗೆ ಬರೆಯಬೇಕು ಎಂದು ತಿಳಿದುಕೊಳ್ಳಬೇಕು ಎಂದರೆ ಇದನ್ನು ಓದಲೇಬೇಕು.<br />
<br />
ನನಗಂತೂ ಲೇಖನಗಳನ್ನು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು<br />
<br />
ಲೇಖಕರು ಪತ್ರಿಕೆಗಳಲ್ಲಿ ಕಾಲಂ ಬರೆಯಬಲ್ಲರು. ಅವರಿಗಾಗಲೆ ಕಾಲಂ ಬರೀತಾ ಇಲ್ಲ ಅಂದ್ರೆ , ಬರೆಯಲಿ.<br />
ನೀವೂ ಈ ಪುಸ್ತಕವನ್ನು ಕೊಂಡು ಓದಿ<br />
<br />
--------------------------------------<br />
ಸುಹಾನ್ ಶೇಕ್ ಅವರು ಹೇಳಿದ್ದು:<br />
#ಕೃತಿ: ಬಾಗಿಲು ತೆರೆಯೇ ಸೇಸಮ್ಮ<br />
#ಲೇಖಕರು: Sharath Bhat Seraje<br />
#ಓದಿ ಮುಗಿಸಿದ ಅವಧಿ : ಅಂದಾಜು 3 ಗಂಟೆ ಮೂವತ್ತು ನಿಮಿಷ<br />
#ಪುಟಗಳು: 132<br />
<br />
ಬಾಗಿಲು ತೆರಯೇ ಸೇಸಮ್ಮ. ಪುಟಗಳನ್ನು ತಿರುವುತ್ತಾ ಹೋದಂತೆ ಲೇಖಕರು ತನ್ನ ಪ್ರಬಂಧಗಳಲ್ಲಿ ತಿಳಿ ಹಾಸ್ಯವನ್ನು ಬೆರೆಸಿ ಉದಾಹರಣೆಯನ್ನು ಕೊಡುತ್ತಾ ಒಂದೊಂದೆ ಮಾಹಿತಿಯನ್ನು ಓದುಗರಿಗೆ ಉಣಬಡಿಸಿದ್ದಾರೆ.ಸೋನಿಯಾ ಗಾಂಧಿಯಿಂದಿಡಿದು ಟ್ರಂಪ್ ,ರಜನಿಕಾಂತ್,ಕ್ರಿಕೆಟ್ ,ಚೆಸ್ ಹೀಗೆ ಎಲ್ಲದರಲ್ಲಿ ವ್ಯಂಗ್ಯವಾಗಿ ಬರಹದ ಶೈಲಿಯನ್ನು ಬಣಿಸಿ ಓದುಗರ ತಲೆಗೆ ಹೊಕ್ಕುವಾಗೆ ಮಾಡಿರೋದು ಶರತ್ ರವರ ಸ್ಪೆಶಲಿಟಿ.<br />
<br />
ಅಂದಹಾಗೆ ಗಣಿತವನ್ನು ಕಬ್ಬಿಣದ ಕಡಲೆಕಾಯಿ ಅನ್ನಬೇಡಿ.ಆ ಕಡಲೆಕಾಯಿಯನ್ನೂ ನಿಧಾನವಾಗಿ ಅಗೆದು ತಿನ್ನುವ ವಿಧಾನವನ್ನು ಹೇಳಿದ್ದಾರೆ. (ಸುಮ್ಮನೆ ಓದಿ, ಗಣಿತದ ತರ್ಕ ತಿಳಿದುಕೊಂಡ್ರೆ ನಿಮಗೆ ಜೀರ್ಣಿಸಿಕೊಳ್ಳಲಾಗದು) ಉದಾಹರಣೆಗೆಗಳ ಪಟ್ಟಿ ಒಂದಿಷ್ಟು ಕಮ್ಮಿಯಾದ್ರೆ ಒಳಿತು ಸರ್.<br />
<br />
ಇನ್ನುಳಿದಂತೆ ವ್ಯಾಕರಣ ಬೋಧಿಸುವ ಮೇಸ್ಟ್ರಾಗಿ,ವೈಜ್ಞಾನಿಕ ಮತ್ತು ತಾಂತ್ರಿಕ ವಿಷಯಗಳನ್ನು ಬೋರಾಗಿಸದೆ ವ್ಯಂಗ್ಯವಾಗಿ ಉದಾಹರಣೆಗಳನ್ನು ಕೊಟ್ಟು ವಿಶ್ಲೇಷಣೆ ಮಾಡುವ ಶರತ್ ಭಟ್ ಸೇರಾಜೆ ರವರ ಬರಹ ಫೇಸ್ಬುಕ್ ಗೋಡೆಗಳಿಂದ ಎರವಲಾಗಿದ್ರು ನನ್ನಗಿದ್ದು, ಹೊಸ ಓದಿನ ಅನುಭವ.</div><div dir="ltr" style="text-align: left;" trbidi="on">-----------------------------------------------------------------</div><div dir="ltr" style="text-align: left;" trbidi="on"><h2 class="gmql0nx0 l94mrbxd p1ri9a11 lzcic4wl aahdfvyu hzawbc8m" dir="auto" id="jsc_c_25" style="background-color: white; color: #65676b; font-family: "Segoe UI Historic", "Segoe UI", Helvetica, Arial, sans-serif; font-size: inherit; font-weight: inherit; margin: 4px 0px 0px; outline: none; padding: 0px;"><span style="font-weight: 600;"><span style="font-family: inherit;"><a class="oajrlxb2 g5ia77u1 qu0x051f esr5mh6w e9989ue4 r7d6kgcz rq0escxv nhd2j8a9 nc684nl6 p7hjln8o kvgmc6g5 cxmmr5t8 oygrvhab hcukyx3x jb3vyjys rz4wbd8a qt6c0cv9 a8nywdso i1ao9s8h esuyzwwr f1sip0of lzcic4wl oo9gr5id gpro0wi8 lrazzd5p" href="https://www.facebook.com/Supreethavenkat?__cft__[0]=AZWvxGSclO_F1LbYqlJIE5ItjdD0uZx-Q3rTpUjsfgnDAt9N3x-qY5ma5sRK_QsRxTw1QjMoAzfYoD1LpMvC9MltdGaPSnVKHe-zeoS_8iMd20BWYumYXqNQR8jDkUBv3Jo&__tn__=-]C%2CP-R" role="link" style="-webkit-tap-highlight-color: transparent; background-color: transparent; border-color: initial; border-style: initial; border-width: 0px; box-sizing: border-box; cursor: pointer; display: inline; font-family: inherit; list-style: none; margin: 0px; outline: none; padding: 0px; text-align: inherit; text-decoration-line: none; touch-action: manipulation;" tabindex="0"><div class="nc684nl6" style="display: inline; font-family: inherit;">Supreetha Venkat</div></a></span></span> :</h2><div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಈ ಪುಸ್ತಕ ಬಿಡುಗಡೆಯಾಗಿ ಒಂದು ವರ್ಷವಾಯಿತು, ನನ್ನ ಪುಸ್ತಕ ಭಂಡಾರಕ್ಕೆ ಸೇರ್ಪಡೆಯಾಗಿ ಕೆಲವು ತಿಂಗಳುಗಳಾಯಿತು, ಆದರೆ ಓದಲು ಈಗ ಕಾಲ ಕೂಡಿ ಬಂತು! ಶರತ್ ಭಟ್ ಅವರ ಕೆಲವು ಬರಹಗಳನ್ನು ಅವರ ಫೇಸ್ಬುಕ್ ಪ್ರೊಫೈಲ್ ಅಲ್ಲಿ ಓದಿದ್ದೆ, ಸಣ್ಣದ್ದನ್ನೂ ಸವಿಸ್ತಾರವಾಗಿ ಬರೆಯುವ ಅವರು, ಅವರ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ ಅದನ್ನು ಓದುವ ಕುತೂಹಲ ತನ್ನಿಂದಾತಾನೆ ಹುಟ್ಟಿತ್ತು. ಪುಸ್ತಕದ ಬಗ್ಗೆ ಪುಟ್ಟದಾದ ಅನಿಸಿಕೆ ಬರೆಯುತ್ತಿದ್ದೇನೆ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಲೈಫ್ ಅನ್ನು ಸೀರಿಯಸ್ ಆಗಿ ತಗೋ ಕೆಲವರಂದರೆ, ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದೆನ್ನುತ್ತಾರೆ ಹಲವರು. ಎಲ್ಲವೂ ಎಲ್ಲರಿಗೆ ಅರ್ಥವಾಗೋಲ್ಲ (ವಾಸ್ತವ?), ಎಲ್ಲವನ್ನೂ ಎಲ್ಲರಿಗೂ ಅರ್ಥಪಡಿಸೋಕ್ಕಾಗೋಲ್ಲ (ವೇದಾಂತ?). ಅದೇನೇ ಇರಲಿ ಒಂದು </div><div dir="auto" style="font-family: inherit;">ವಿಷಯವನ್ನು ಪರಿಗಣಿಸಿ ಅದನ್ನು ಸರಳವಾಗಿಸಿ, ಉದಾಹರಣೆಗಳ ಮೂಲಕ ಬರೆದಿದ್ದಾರೆ ಶರತ್ ಅವರು. ಓದುವಿಕೆಯಲ್ಲಿ ಆಸಕ್ತಿ ಬರಬೇಕಾದರೆ ಕೇವಲ ಬರಹದ ವಿಷಯ ಆಸಕ್ತಿದಾಯಕವಾಗಿದ್ದರೆ ಸಾಲದು, ಬರಹದ ಶೈಲಿ ಸ್ವಾರಸ್ಯಕರವಾಗಿ ಇದ್ದರೆ ಓದುಗರನ್ನು ಬಹುಬೇಗನೆ ತಲುಪುವುದು. ಇಂತಹದ್ದೊಂದು ಪ್ರಯತ್ನ ಪಟ್ಟಿದ್ದಾರೆ ಲೇಖಕರು. ಸಮೀಪದ ವಸ್ತುವಿಷಯದಿಂದ ಹಿಡಿದು ಅತೀ ದೂರದ ವಸ್ತುವಿಷಯಗಳಿವೆ. ಹಾಗಂದ್ರೇನು ಅಂತೀರಾ? ಕನ್ನಡ ಭಾಷೆಯ ಬಗೆಗೆ ಪ್ರೀತಿಯಿದೆ, ಇಂಗ್ಲೀಷ್ ನಡುವೆ ನಲುಗುತ್ತಿರುವ ಕನ್ನಡದ ಬಗ್ಗೆ ಕಳಕಳಿಯಿದೆ, ಕನ್ನಡ ಸಾಹಿತ್ಯದ, ಬರಹಗಾರರ, ಬರವಣಿಗೆಗಳ ಉಲ್ಲೇಖವಿದೆ, ಮಾತುಗಾರಿಕೆ ಎಂಬ ಕೌಶಲ್ಯದ ಮಾತುಗಳಿವೆ, ಅಷ್ಟೇ ಯಾಕೆ ಗಣಿತವಿದೆ, ವಿಜ್ಞಾನವಿದೆ, ಇತಿಹಾಸ, ಖಗೋಳ ಶಾಸ್ತ್ರವೂ ಬಂದು ಹೋಗುತ್ತದೆ. ಏನಿಲ್ಲ, ಏನಿದೆ? ಎಲ್ಲವೂ ಇವೆ. ಯಾವುದೇ ಒಂದು ಟಾಪಿಕ್'ಗೆ ಸ್ಟಿಕ್ ಆಗದೆ, ಓದುಗರಿಗೆ ಬೋರ್ ಹೊಡಿಸದೆ ಇರುವ ಈ ಪುಸ್ತಕವನ್ನು ಓದಿ ನೋಡಿ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: "Segoe UI Historic", "Segoe UI", Helvetica, Arial, sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಸುಪ್ರೀತಾ ವೆಂಕಟ್</div></div></div>
<br /></div>
Sharath Bhat serajehttp://www.blogger.com/profile/11873783107861311555noreply@blogger.com0tag:blogger.com,1999:blog-1843393932875644623.post-73021479657854628472019-01-07T01:05:00.002-08:002019-07-09T02:57:54.716-07:00ನನ್ನ ಬಾಗಿಲು ತೆರೆಯೇ ಸೇಸಮ್ಮ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು Part 2<div dir="ltr" style="text-align: left;" trbidi="on">
ನನ್ನ ಪುಸ್ತಕಕ್ಕೆ ಬಂದ ಪ್ರತಿಕ್ರಿಯೆಗಳು/ವಿಮರ್ಶೆಗಳು(Baagilu Tereye Sesamma - Sharath Bhat Seraje - Book reviews):<br />
<br />
<b>ಮಾಕೋನಹಳ್ಳಿ ವಿನಯ್ ಮಾಧವ</b>:<br />
ಆ ಪ್ರಶ್ನೆಗೆ ಉತ್ತರ ಇದೇನಾ?...<br />
<br />
A Brief History of Timeನ ಮುನ್ನುಡಿಯಲ್ಲಿ, 1973 ರಲ್ಲಿ ಪ್ರಕಟವಾಗಿದ್ದ ತನ್ನ ಪುಸ್ತಕ – `The Large Scale Structure of Spacetime’ ಕುರಿತು ಸ್ಟೀಫನ್ ಹಾಕಿಂಗ್ ಹೀಗೆ ಹೇಳುತ್ತಾನೆ.<br />
<br />
`I would not advise readers of this book to consult that book for further information: it is highly technical, and quiet unreadable. I hope that since then I have learned how to write in a manner that is easier to understand’.<br />
<br />
ವಿಜ್ಞಾನವನ್ನು ಸರಳವಾಗಿ ಬರೆಯುವುದು ಕಲೆಯಲ್ಲ, ಅದೊಂಥರ ತಪಸ್ಸು ಅಂತ ನಾನು ನಂಬಿದ್ದೆ. `ಬಾಗಿಲು ತೆರೆಯೇ ಸೇಸಮ್ಮ’ ಪುಸ್ತಕ ಓದುವವರೆಗೆ. ಸರಿಯಾಗಿ ಅರ್ಥ ಮಾಡಿಕೊಂಡರೆ, ಅದನ್ನು `ಲಲಿತ ಪ್ರಬಂಧವಾಗಿ’ ಬರೆಯಬಹುದು ಅಂತ ಒಪ್ಪಲೇಬೇಕಾಯ್ತು. ಅದಕ್ಕೆ ಮೊದಲು, ಹತ್ತು ವರ್ಷಗಳಿಂದ ನನ್ನ ಮನೆಯವರಿಗೆ ಮತ್ತು ಮಗಳಿಗೆ ಮನವರಿಕೆ ಮಾಡಲು ನಾನು ಸೋತಿರುವ `ಇಂಗ್ಲಿಶ್ ಎನೆ ಕುಣಿದಾಡುವುದೆನ್ನೆದೆ’ ಅನ್ನುವ ಪ್ರಬಂಧವನ್ನು ಓದಬೇಕು. ಮಾತೃ ಭಾಷೆಯನ್ನು ಅಲಕ್ಷಿಸಿದವರು ಯಾರೂ ಜೀವನವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಎನ್ನುವುದು ನನ್ನ ನಂಬಿಕೆ.<br />
<br />
ನನಗೆ, ಶರತ್ ಭಟ್ ಸೇರಾಜೆ ಫೇಸ್ ಬುಕ್ ನಲ್ಲಿ ಗೆಳೆಯ. ಆದರೆ, ಮೊಬೈಲ್ ಫೋನ್ ನಲ್ಲಿ ಹೆಚ್ಚು ಓದುವುದು ನನಗೆ ಯಾಕೋ ಇಷ್ಟವಾಗುವುದಿಲ್ಲ. ಪುಸ್ತಕ ನನ್ನ ಕೈಗೆ ಬಂದು ಮೂರ್ನಾಲ್ಕು ವಾರಗಳಾಗಿರಬೇಕು. ಕೈಗೆತ್ತಿಕೊಂಡಾಗಲೆಲ್ಲ ಏನಾದರೊಂದು ಅಡ್ಡ ಬರುತ್ತಿತ್ತು. ಅಂತೂ, ಓದಿ ಮುಗಿಸಿದೆ.<br />
<br />
ಈ ಪುಸ್ತಕದ ಬಗ್ಗೆ ಏನು ಬರೆಯಲೀ? ಮುನ್ನುಡಿಯಲ್ಲಿ ಜೋಗಿ, ಪ್ರಕಾಶ್ ಕಂಬತ್ತಳ್ಳಿ ಮತ್ತು ಹಿನ್ನುಡಿಯಲ್ಲಿ ಗಣೇಶ್ ಭಟ್ ನೆಲೆಮಾಂವ್ ಎಲ್ಲವನ್ನೂ ಬರೆದಿದ್ದಾರೆ. ನನಗೇನೂ ಉಳಿಸಿಲ್ಲವಾದರೂ, ಕೆಲವು ಇಷ್ಟವಾದ ವಿಷಯಗಳನ್ನು ಹೇಳಲೇ ಬೇಕು.<br />
<br />
ಕಪ್ಪುಕುಳಿಗಳ (Black Hole) ಅನಂತ ಅಂತರಿಕ್ಷ ಲೋಕದಲ್ಲಿ, ರಜನಿ ಕಾಂತ್ ಮತ್ತು ಇತರ ತಮಿಳು, ತೆಲುಗು ಸಿನೆಮಾ ನಟರು ಉಪಮೇಯಗಳಾಗಿ ಬಂದು, ಅದೇನೂ ಬ್ರಹ್ಮವಿದ್ಯೆಯಲ್ಲ ಅಂತ ಅನ್ನಿಸಿದರೆ, ಮುಂದಿನ ಪ್ರಬಂಧ ಗೋಪಾಲಕೃಷ್ಣ ಅಡಿಗರ `ಯಾವ ಮೋಹನ ಮುರಳಿ ಕರೆಯಿತು’ ಪದ್ಯದ ವಿಶ್ಲೇಷಣೆಯೊಂದಿಗೆ, ಪ್ರೇಮಲೋಕಕ್ಕೆ ಕರೆದೊಯ್ಯುತ್ತದೆ. ಬಾಗಿಲು ತೆರೆಯೇ ಸೇಸಮ್ಮ, ಲೆಖ್ಖ ಮತ್ತು ನಮ್ಮ ಪಾಸ್ ವರ್ಡುಗಳಿಗಿರು ಸಂಬಂಧವನ್ನು, ಎರಡನೇ ಅಥವಾ ಐದನೇ ಮಗ್ಗಿಯಷ್ಟೇ ಸುಲಭ ಅಂತ ಅನ್ನಿಸುವಂತೆ ಮಾಡಿದರೆ, ನಾನು ಹೇಳುವ `Statistical Jugglery’ ಎನ್ನುವ ಪದವನ್ನು `ಲೆಕ್ಕ ಹಾಕಿ ಸುಳ್ಳು ಹೇಳಿ’ ಎಂಬ ಪ್ರಬಂಧದಲ್ಲಿ ಸೊಗಸಾಗಿ ವರ್ಣಿಸಿದೆ.<br />
<br />
`ಪೂರ್ವಾಗ್ರಹ’ ಪೀಡಿತನಾಗಿ, `ಸಿರಿಗನ್ನಡಂ ಗೆಲ್ಗೆ’ ಎಂದು ಓದಲು ಶುರುಮಾಡಿದ ಪ್ರಬಂಧ, `ಪೂರ್ವಗ್ರಹ’ ವನ್ನು ಹಿಂದುರುಗಿ ನೋಡಿದಾಗ ತಿಳಿಯಿತು – ಅದು `ಸರಿಗನ್ನಡಂ ಗೆಲ್ಗೆ’ ಅಂತ. ನನ್ನ ಕನ್ನಡ ಭಾಷೆ ಎಷ್ಟು ಸುಧಾರಿಸಬೇಕಿದೆ ಎನ್ನುವ ಅರಿವೂ ಆಯಿತು.<br />
<br />
ಎಲ್ಲಾ ಪ್ರಬಂಧಗಳ ಬಗ್ಗೆ ಬರೆಯುವುದಿಲ್ಲ. ಅವುಗಳ ಬಗ್ಗೆ ಬರೆಯೋಕೆ, ನಾನೂ ಒಂದು ಪ್ರಬಂಧ ಬರೆಯಬೇಕಾಗುತ್ತದೆ, ಅಷ್ಟೆ. ಆದರೆ, `ಬಲಿ ಚಕ್ರವರ್ತಿಯ ತ್ರಿವಿಕ್ರಮ’ ಪ್ರಬಂಧ ಓದುವಾಗ, ಯಂಡಮೂರಿ ವೀರೇಂದ್ರನಾಥರ `ಬೆಳದಿಂಗಳ ಬಾಲೆ’ ಓದಿದಷ್ಟೇ ಖುಷಿ ಕೊಟ್ಟಿತು.<br />
<br />
ಕಾರಂತಜ್ಜನ ಕಥೆಗಳು ಮತ್ತು ಮರ್ಯಾದೆ ತೆಗೆಯುವ ಕಲೆ ಎನ್ನುವ ಎರಡು ಪ್ರಬಂಧಗಳನ್ನು ಓದುವಾಗ, ಕೆಲವು ವಿಷಯಗಳು ನನಗೆ ನೆನಪಾದವು. ಅದು ಶರತ್ ಗೆ ಗೊತ್ತೋ, ಇಲ್ಲವೋ.<br />
<br />
ಕುಡಿತದ ಬಗ್ಗೆ ಕಾರಂತರು ಹೇಳಿದ ಒಂದು ಮಾತು ನನಗೆ ಬಹಳ ಇಷ್ಟವಾಗಿತ್ತು: `ಅಸಂಬದ್ದವಾಗಿ ಮಾತನಾಡಲು ಕುಡಿಯುವುದು ಏಕೆ? ಹಾಗೆಯೇ ಮಾತನಾಡಬಹುದಲ್ಲ?’<br />
<br />
ಹಾಗೆಯೇ, ಲಂಕೇಶರು ಮರ್ಯಾದೆ ತೆಗೆಯುತಿದ್ದ ಪರಿಯ ಬಗ್ಗೆಯೂ ಕೆಲವು ವಿಷಯಗಳು ಪ್ರಸ್ತಾಪವಾಗಿದೆ. ಸಿ ಅಶ್ವಯಥ್ ರನ್ನು, ಕರ್ನಾಟಕ ಸರ್ಕಾರವು, ಅಮೆರಿಕಾದಲ್ಲಿ ನೆಡೆಯುತ್ತಿದ್ದ ಅಕ್ಕ ಸಮ್ಮೇಳನಕ್ಕೆ ಕಳುಹಿಸಲು ನಿರ್ಧರಿಸಿತ್ತು. ಲಂಕೇಶರು, ತಮ್ಮ ಪತ್ರಿಕೆಯಲ್ಲಿ, `ಅಶ್ವಥ್ ರನ್ನು ಅಮೇರಿಕಾಗೆ ಕಳುಹಿಸುವ ಸರ್ಕಾರದ ನಿರ್ಧಾರ ತಿಳಿದ, ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿನ ಭಿಕ್ಷುಕರೆಲ್ಲ, ನಮ್ಮ ರಾಗದಲ್ಲೇನು ದೋಷ, ಅಂಬೋ ಅಂದರಂತೆ,’ ಎನ್ನುವ ಚುಟುಕು ಕವನ ಬರೆದು, ಪ್ರಕಟಿಸಿಯೇ ಬಿಟ್ಟರು. ಈ ವಿಷಯ, ಹೊಡೆದಾಟದ ಹತ್ತಿರದವರೆಗೆ ಹೋಗಿ, ಬೇರೆಯವರ ಮಧ್ಯಸ್ಥಿಕೆಯಲ್ಲಿ ನಿಂತಿತ್ತು.<br />
<br />
ಜಾರ್ಜ್ ಬರ್ನಾರ್ಡ್ದ ಶಾ, ವಿಚಿತ್ರ ವ್ಯಕ್ತಿ. ಒಮ್ಮೆ ಪಾರ್ಟಿಯೊಂದರಲ್ಲಿ, ಇಂಗ್ಲೆಂಡ್ ನ ಖ್ಯಾತ ರೂಪದರ್ಶಿಯೊಬ್ಬಳು ಬಂದು ಶಾ ರನ್ನು ಕೇಳಿದಳಂತೆ: `imagine if a child is born with my beauty and your intelligence’.<br />
ರಪ್ಪನೆ ಶಾ ಉತ್ತರಿಸಿದರಂತೆ: `imagine its fate, if it is born with my beauty and your intelligence’.<br />
ಈ ಘಟನೆಯ ನಂತರ ಶಾ ರವರು ಕುಳಿತು ರಚಿಸಿದ ನಾಟಕದ ಹೆಸರು `ಪಿಗ್ಮಲಿಯನ್’. ಮುಂದೆ ಅದು, `ಮೈ ಫೇರ್ ಲೇಡಿ’ ಎಂಬ ಹೆಸರಿನೊಂದಿಗೆ ಜಗತ್ಪ್ರಸಿದ್ದವಾಯಿತು. ಎಷ್ಟು ನಿಜವೋ, ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ.<br />
<br />
ಚಿಕ್ಕಂದಿನಲ್ಲಿ ಚಂದ ಮಾಮ, ಅಮರ ಚಿತ್ರ ಕಥೆ, ಪಂಚ ತಂತ್ರ, ಅರೆಬಿಯನ್ ನೈಟ್ಸ್, ಈಸೋಪನ ನೀತಿ ಕಥೆಗಳು ಮುಂತಾದ ಪುಸ್ತಕಗಳನ್ನು ಓದಿದಷ್ಟೇ ವಿಸ್ಮಯದಿಂದ ಈ ಪುಸ್ತಕವನ್ನೂ ಓದಿ ಮುಗಿಸಿದೆ. ವಿಜ್ಞಾನ, ಗಣಿತ, ಕಥೆ, ಸಾಹಿತ್ಯ, ಪರಂಪರೆ, ಸಮಕಾಲೀನ ವಿಷಯಗಳನ್ನು, ಮನಸ್ಸಿಗೆ ನಾಟುವಂತೆ, ಪ್ರಬಂಧದಲ್ಲಿ ಪಾತ್ರವಾಗುವಂತೆ ಬರೆಯುವುದು ಕಲೆಯೋ ಅಥವಾ ತಪಸ್ಸೋ ಎಂಬ ಜಿಜ್ಞಾಸೆ ಮತ್ತು ಶುರುವಾಯಿತು.<br />
<br />
ಓದುತ್ತಾ, ನನ್ನ ಮತ್ತು ಪ್ರದೀಪ್ ಕೆಂಜಿಗೆಯವರ ನಡುವೆ ನೆಡೆದ ಸಂಭಾಷಣೆ ನೆನಪಾಯಿತು. ಪ್ರದೀಪ್ ರವರು ತೇಜಸ್ವಿಯವರು ಇಷ್ಟ ಪಡುತ್ತಿದ್ದ ವಿಷಯಗಳನ್ನೆಲ್ಲ ಹೇಳುತ್ತಿದ್ದಾಗ, `ಹಾಗಾದರೆ, ಸ್ಟೀಫನ್ ಹಾಕಿಂಗ್ ನ `A Brief History of Time’ ಅವರ ಇಷ್ಟದ ಪುಸ್ತಕಗಳಲ್ಲಿ ಒಂದಿರಬೇಕು, ಎಂದೆ.<br />
<br />
`ಅದನ್ನು ಅವರು ಯಾವಾಗಲೋ ತರಿಸಿ ಓದಿದ್ದರು. ಅದನ್ನು ಕನ್ನಡಕ್ಕೆ ಟ್ರಾನ್ಸ ಲೇಟ್ ಮಾಡಬೇಕು ಅಂತ ಹೇಳುತ್ತಿದ್ದರು. ಅದನ್ನ ಹ್ಯಾಗ್ರೀ ಟ್ರಾನ್ಸ ಲೇಟ್ ಮಡೋದು? ಆ ಸಬ್ಜೆಕ್ಟ್ ನೋಡಿ, ಅದನ್ನ ಅರ್ಥ ಮಾಡಿಕೊಂಡು, ಎಲ್ಲರಿಗೂ ಅರ್ಥವಾಗುವ ಹಾಗೆ ಕನ್ನಡದಲ್ಲಿ ಬರೆಯೋಕೆ ನಮ್ಮ ಕೈಲಿ ಸಾಧ್ಯಾನಾ?,’ ಅಂತ ಪ್ರದೀಪ್ ಕೇಳಿದರು.<br />
<br />
`ಅದು ಯಾರ ಕೈಲಾದ್ರೂ ಸಾಧ್ಯಾನಾ?’ ಅನ್ನೋ ಪ್ರಶ್ನೆ ನನ್ನನ್ನು ಬಹಳ ಕಾಲ ಕಾಡುತ್ತಿತ್ತು. ಯಾಕೋ, ಉತ್ತರ ಸಿಕ್ಕಿದೆ ಅನ್ನಿಸ್ತಾ ಇದೆ.<br />
<br />
ಮಾಕೋನಹಳ್ಳಿ ವಿನಯ್ ಮಾಧವ<br />
============================================<br />
<b>ಪ್ರಶಾಂತ್ ಭಟ್</b> :<br />
ಬಾಗಿಲು ತೆರೆಯೇ ಸೇಸಮ್ಮ - ಶರತ್ ಭಟ್ ಸೇರಾಜೆ<br />
<br />
ಗಹನ ವಿಷಯಗಳ ಸರಳವಾಗಿ ಮನಮುಟ್ಟುವಂತೆ ಹೇಳುವುದು ಒಂದು ಕಲೆ. ಶರತ್ ಇಲ್ಲಿ ಹೇಳಿದ ವಿಷಯಗಳು ನಾವಾಗೇ ಗೂಗಲಿಸಿ ಅಥವಾ ಓದಲು ಹೊರಟರೆ ತಲೆಯ ಮೇಲಿಂದ ಹಾರುವಂತಹವು. ಗುರುತ್ವದಂತಹ ವಿಷಯವನ್ನು ಮಣಿಶಂಕರ್ ಅಯ್ಯರ್,ದಿಗ್ವಿಜಯ ಸಿಂಗ್,ಸೋನಿಯಾ ಗಾಂಧಿ ಉದಾಹರಣೆ ಕೊಟ್ಟು ಕಚಗುಳಿ ಇಡಿಸಿ ವಿವರಿಸುವ ಅವರ ಶೈಲಿ ಅನನ್ಯ.<br />
<br />
ಮಧ್ಯಾಹ್ನದ ನಿದ್ದೆ ಆದ ಬಳಿಕ ಸಂಜೆ ಚಾ ಕುಡಿಯುವಾಗ ಮನೆಗೆ ನೆಂಟರು ಬಂದರೆ ಅವರ ಜೊತೆ ಪಟ್ಟಾಂಗ ಹಾಕುವ ಶೈಲಿಯ ಇವರ ಲೇಖನಗಳು,ಸಿನಿಮಾದಂತೆ ಮಧ್ಯಂತರವೂ ಹೊಂದಿದೆ. ಅದಲ್ಲದೆ ಉದಾಹರಣೆಗೆ ನಾವು ದಿನನಿತ್ಯ ಅನುಭವಿಸಿದ್ದನ್ನೇ ತರುವ ಕಾರಣ ವಿಷಯಗಳು ಸರಳವಾಗಿ ಒಳಗಿಳಿಯುತ್ತವೆ.<br />
ಇಲ್ಲಿನ ಹಲ ಲೇಖನಗಳ ಅವರ ಫೇಸ್ಬುಕ್ ಗೋಡೆಯ ಮೇಲೆ ಓದಿದ್ದೆ.ಮೆಚ್ಚಿದ್ದೆ.<br />
ನಂಗಿರೋ ಒಂದೇ ಒಂದು ಸಂಶಯ ಎಂದರೆ ಶರತ್ಗೆ ತಾನು ಅನಗತ್ಯವಾಗಿ ಲಂಬಿಸುತ್ತೇನೋ ಎಂಬ ಅನುಮಾನವಿದೆ.ಹಾಗಾಗಿ ನಡು ನಡುವೆ ವಾಚಕ ಮಹಾಶಯರ ಮತ್ತೆ ಮೊದಲ ಸಾಲಿನ ಕಡೆಗೆ ಕರೆದೊಯ್ದು ಬರುತ್ತಾರೆ. ಇದು ಕೆಲ ಕಡೆ ಓದಿನ ರುಚಿ ಹೆಚ್ಚಿಸಿದರೆ ಕೆಲಕಡೆ ಬೇಡ ಅನಿಸುತ್ತದೆ. ಆದರೆ ಇದು ಗಬ ಗಬನೆ ಓದುವವರಿಗೆ ಮಾತ್ರ ಆಗುವ ಅನಿಸಿಕೆ. ಒಂದು ಲೇಖನ ಸಾವಧಾನದಿಂದ ಓದುವ ಓದುಗ ಇದನ್ನು ಎಂಜಾಯ್ ಮಾಡೇ ಮಾಡ್ತಾನೆ.<br />
<br />
ಪುಸ್ತಕ ನಂಗೆ ಬಹಳ ಹಿಡಿಸಿತು. ಬಹುಶಃ ಅವರ ಗೆಳೆಯರ ಬಳಗದಲ್ಲಿ ನೀವಿಲ್ಲದೆ ಇದ್ದರೆ ಇದನ್ನು ಓದಲು ಸಕಾಲ. ಸದ್ಯದಲ್ಲಿ ನಾನು ಓದಿದ ಅತ್ಯುತ್ತಮ ಜ್ಞಾನ ಮತ್ತು ಮನಸಿಗೆ ಹಾಯೆನಿಸಿದ ಪುಸ್ತಕಗಳಲ್ಲಿ ಇದೂ ಒಂದು.<br />
ಮರೆಯದೆ ಓದಿ. ಓದಿಸಿ<br />
================================================<br />
<br />
<b>ಸುಬ್ರಹ್ಮಣ್ಯ ಹೆಚ್.ಎನ್</b>:<br />
<u>ಹೊಳಪಿನ ಪ್ರಬಂಧಗಳು</u><br />
ಇಷ್ಟಲೇಖಕರಾದ ಜೋಗಿಸರ್ ತನ್ನ ಗೋಡೆಯಲ್ಲಿ ಈ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಲಗತ್ತಿಸಿದ್ದರಿಂದಾಗಿ 'ಸೇಸಮ್ಮ.....' ನನ್ನು ಓದುವ ಆಸೆ ಹುಟ್ಟಿತು. ಯಾವುದಕ್ಕೂ ಜೋಗಿಸರ್ಗೆ ಒಂದು ಕೃತಜ್ಞತೆ ಅರ್ಪಿಸಲೇ ಬೇಕು.<br />
<br />
ಪತ್ರಿಕೆಯಲ್ಲಿ ಪ್ರಕಟವಾಗುವ ನಗೆಬರಹಗಳು ಗೊತ್ತು. ಗೋರೂರರು ಬರೆಯುವಂತಹ ರಸಮಯ ಪ್ರಬಂಧಗಳೂ ಗೊತ್ತಿವೆ. ವಸುಧೇಂದ್ರರ ಸುಲಲಿತ ಪ್ರಬಂಧಗಳನ್ನು ಕೂಡ ಓದಿರುವೆ. ಇವುಗಳ ನಡುವೆ ಇದೆಂತೆಹದಪ್ಪ .. ವೈಚಾರಿಕ ಲಲಿತ ಪ್ರಬಂಧಗಳು !? ರಾಶಿ ಕುತೂಹಲ ಇಟ್ಟುಕೊಂಡೇ ಓದಲು ಕೂಡ ಬೇಕಾಯ್ತು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಹೂರಣ ಈ ಕೃತಿಯಲ್ಲಿ ಸಿಕ್ಕಿತು. ಮಹತ್ತರವಾದ ಸಂಗತಿಗಳನ್ನು ರಸಮಯವಾಗಿ, ಶಾಲೆಯಲ್ಲಿ ಮೇಷ್ಟ್ರು ಮನದಟ್ಟಾಗುವಂತೆ (ಆಗ ಆಸಕ್ತಿ ಇರುವುದಿಲ್ಲ ಬಿಡಿ) ಉದಾಹರಣೆಗಳ ಮುಖಾಂತರ ಪಾಠ ಒಪ್ಪಿಸುವ ರೀತಿ ಹೇಳುವ ಶರತ್ರ ಶೈಲಿ ಅನನ್ಯ. ಅವರ ಪುಸ್ತಕ ಓದಿದ ಯಾರಿಗಾದರೂ ಅವರ ಆಸಕ್ತಿಯ ವಿಶಾಲ ಹರವು; ಗಣಿತ, ವಿಜ್ಞಾನ, ಸಾಹಿತ್ಯ, ರನ್ನ, ಪಂಪ, ಅಡಿಗರ ಕುರಿತಾದ ಅಗಾಧ ಜ್ಞಾನ ಬೆರಗು ಮೂಡದೇ ಇರದು.<br />
<br />
ತೆಂಕು ತಿಟ್ಟು ಯಕ್ಷಗಾನವನ್ನು ಯಕ್ಷಗಾನವೇ ಅಲ್ಲವೆಂದು ಜರಿದ ಕಾರಂತರಿಗೆ, ವೇದಿಕೆಯಲ್ಲಿ ಶ್ರೇಣಿ ಗೋಪಾಲಕೃಷ್ಣ ಭಟ್ಟರು ಉತ್ತರಿಸಿದ ಅಪರೂಪದ ಪ್ರಸಂಗ, ನಾವು ಆಗಾಗ ಆಡುವ, ಬರೆಯುವ ತಪ್ಪು ತಪ್ಪು ಕನ್ನಡ, ಇಂಗ್ಲೀಷೇ ಪರಮ ಶ್ರೇಷ್ಠ ಭಾಷೆಯೆಂಬ ಮೂಢನಂಬುಗೆ ಇದನ್ನೆಲ್ಲಾ ತರ್ಕಗಳ ಮುಖಾಂತರ ಸರಳವಾಗಿ ತಿಳಿಸುತ್ತಾ ಹೋಗುತ್ತಾರೆ. ಲೇಖಕರು ಅಡಿಗರ 'ಯಾವ ಮೋಹನ ಮುರಳಿ ಕರೆಯಿತು.....' ಕವನದ ಅರ್ಥ ವಿವರಿಸುವಾಗ ಅಡಿಗರು ಬರೆದಿರುವ ಕಾದಂಬರಿಯ ಸಾಲೊಂದನ್ನು ಉಲ್ಲೇಖಿಸುತ್ತಾರೆ. ಅದನ್ನು ನಾನಿಲ್ಲಿ ಹೇಳಲೇ ಬೇಕು. "ಅರಬ್ಬೀ ಸಮುದ್ರಕ್ಕೆ ಬಿಡುವಿಲ್ಲ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ - ಹಗಲು, ಇರುಳು, ಪ್ರತಿ ನಿಮಿಷಗಳೂ, ಅದು ಹುಚ್ಚೆದ್ದು ಕೂಗಿ, ರೇಗಿ ಸಾವಿರ ಸಿಂಹಗಳ ಗರ್ಜನೆಯಂತೆ, ಸಹಸ್ರಾರು ಆನೆಗಳು ಘೀಳಿಟ್ಟ ಹಾಗೆ ಮೊರೆಯುತ್ತದೆ, ಬೊಬ್ಬಿಡುತ್ತದೆ, ಹೂಂಕರಿಸುತ್ತದೆ. ಈ ಬೊಬ್ಬಾಟಕ್ಕೆ ಕೊನೆಮೊದಲಿಲ್ಲ. ಯಾವ ದುಃಖ ಬಡಿದಿದೆ ಈ ಕಡಲಿಗೆ? ಯಾವ ಆಕ್ರೋಶ? ಯಾವ ನೋವು? ಯಾರ ಚಿತ್ರಹಿಂಸೆ? ಅಗೋ ಈಗ ವಿಕಟಟ್ಟಾಹಾಸ -ಅಲ್ಲಲ್ಲ ಚೀತ್ಕಾರ- ಪೂತ್ಕಾರ !". ಇದನ್ನೆಲ್ಲಾ ಓದುವ ಭಾಗ್ಯವಾದರೂ ಎಲ್ಲಿತ್ತು!?<br />
<br />
ಕೃತಿಯಲ್ಲಿ ಹೇಳ ಹೊರಟರೆ ಸಾವಿರ ಸವಿಗಳಿವೆ. ಕತೆ, ಕಾದಂಬರಿ, ಕವಿತೆಯ ನಡುವೆ ಸೇಸಮ್ಮನಿಗೂ ನಿಮ್ಮ ಕಪಾಟಿನಲ್ಲಿ ಜಾಗ ಕೊಡಿ. 'ಲೆಕ್ಕ ಹಾಕಿ ಸುಳ್ಳು ಹೇಳಿ', 'ಪರಂಪರೆಯ ಬೇರುಗಳು', 'ನಮ್ಮ ತಲೆಯೂ ನಮ್ಮ ಹರಟೆಯೂ' ಪ್ರಬಂಧಗಳಿರುವ ಪುಟಗಳ ಕಿವಿ ಮಡಿಚಿಟ್ಟಿದ್ದೇನೆ ಮತ್ತೆ ಮತ್ತೆ ಓದಲು.<br />
<br />
ಸುಬ್ರಹ್ಮಣ್ಯ ಹೆಚ್.ಎನ್.<br />
====================================================<br />
<b>ಸ್ಮಿತಾ ಭಟ್</b>:<br />
ನಮಸ್ತೇ ಸೇರಾಜೆಯವರಿಗೆ,<br />
<br />
ನಿಮ್ಮಹಾಸ್ಯಮಿಶ್ರಿತ ಲೇಖನ ಶೈಲಿಯು ತುಂಬಾ ಇಷ್ಟವಾಯಿತು.ದ.ಕ/ ಉಡುಪಿ ಕನ್ನಡದ ಸೊಗಡಿರುವ ಭಾಷೆ, ಅಲ್ಲಲ್ಲಿ ಸಖ್ತ್ ಪಂಚ್ ಗಳು ,ಪುಸ್ತಕವನ್ನು ೨ ಘಂಟೆಗಳಲ್ಲಿ ಒದಿ ಮುಗಿಸಿ ಅಚ್ಚರಿಯ ನಿಟ್ಟುಸಿರು ಬಿಡುವಂತೆ ಮಾಡಿತು.<br />
ಅಡಿಗರ ಕವನವನ್ನು explain ಮಾಡಿದ ರೀತಿಯಂತು ನಮ್ಮ ಕನ್ನಡ lecturer ಅನ್ನು ಜ್ಞಾಪಿಸಿತು. ಯಾರೋ lecture ಕೊಡುತ್ತಿದ್ದಾರೆಂದು feel ಮಾಡಿಕೊಂಡು ಓದಿದೆ. ಆ ಕವಿತೆಗೊಂದು ಅಧ್ಯಾತ್ಮದ touch ಇದೆ ಎಂದು ಗಮನಿಸಿಯೇ ಇರಲಿಲ್ಲ.ಇನ್ನು ಮೇಲೆ ಎಲ್ಲಾ ಕವಿತೆಗಳನ್ನೂ deep ಆಗಿ analyze ಮಾಡಬೇಕು ಅಂತ ಅನಿಸ್ತಾ ಇದೆ.<br />
ಕೆಲವೊಂದು lines ಗಳನ್ನು ನೀವು ಹೇಗೆ explain ಮಾಡಬಹುದು ಅಂತ ಕುತೂಹಲ develope ಆಗಿತ್ತು. ತನಗೂ ,ಇತರರಿಗೂ ಮುಜುಗರವಾಗದಂತೆ ಹಾಸ್ಯಮಯವಾಗಿ ಹೇಳಿದ್ದೀರಿ.<br />
'ಮರ್ಯಾದೆ ತೆಗೆಯುವ ಕಲೆ', 'ಕಾರಂತಜ್ಜನ ಕಥೆಗಳು' ಖುಷಿಯಲ್ಲಿ ಓದಿಸಿಕೊಂಡು, ಓಡಿಸಿಕೊಂಡು ಹೋಯಿತು. 'ಸರಿಗನ್ನಡಂ ಗೆಲ್ಗೆ ' bore ಹೊಡೆಸಿದ್ದಕ್ಕೆ ಕಾರಣ fb ಯಲ್ಲಿ ಇತ್ತೀಚಿಗೆ ನಡೆದ ಚರ್ಚೆ. ಓದಿದ್ದನ್ನೇ ಮತ್ತೆ ಮತ್ತೆ ಓದಿ ವಾಕರಿಕೆ ಬಂದಂತಾಗಿದೆ.( ನಿಮ್ಮ ಲೇಖನದ mistake ಅಲ್ಲ ಬಿಡಿ).<br />
'ಸಿನಿಮಾ ಮತ್ತು ಕಳ್ಳತನ 'ಈ ಲೇಖನಕ್ಕೆ ಒಂದು ಅತ್ಯುತ್ತಮ ಉದಾಹರಣೆಯಂದರೆ ನಿಮ್ಮದೇ ಇನ್ನೊಂದು ಲೇಖನ AI ಬಗೆಗಿನದು. Artificial intelligence ಬಗ್ಗೆ ಇತ್ತೀಚಿಗೆ ಒಂದು ಲೇಖನ ಓದಿದ್ದೆ ಕನ್ನಡ ದಿನಪತ್ರಿಕೆಯೊಂದರಲ್ಲಿ. ನೀವು ಅದೇ same old ingredients ಇಟ್ಟುಕೊಂಡು ಹೊಸ ರುಚಿ ಹೇಗೆ ತಯಾರಿಸಿದ್ದೀರಿ ಎನ್ನುವ ಕುತೂಹಲದೊಂದಿಗೆ ಅತೀ ವೇಗದಲ್ಲಿಓದಿದೆ. ಕಣ್ಣು ಗಳು ಓದುತ್ತಿದ್ದರೂ ಮೆದುಳಿಗೆ process ಮಾಡಲುಕಷ್ಟ ವಾಗುವಂತಹ speed ಅದು.<br />
Here ingredients are -<br />
1) what is AI in common man's language.<br />
2) about Turing test or loebner prize.<br />
3) can robots take over humans in future?<br />
<br />
With the same ingredients the final dish prepared by you at the end is totally different and you named it..!!<br />
<br />
ಬಾಗಿಲು ತೆಗೆಯೇ ಸೇಸಮ್ಮ ಲೇಖನದಲ್ಲಿ encryption and decryption ಬಗ್ಗೆ ಇನ್ನೂ ಆಳವಾಗಿ ವಿವರಿಸಬೇಕಿತ್ತು ಎಂದು ಅನಿಸಿತು.<br />
"Password ಅನ್ನು ಒತ್ತಿ, ತಿರುಚಿ, ಹಿಸುಕಿ,ಜಜ್ಜಿ, ಮುದ್ದೆ ಮಾಡಿ ಬಾಗಿಸಿ,ಗುದ್ದಿ ,ನುಲಿದು,ನಜ್ಜುಗುಜ್ಜು ಮಾಡಿದರೆ ...." ಎನ್ನುವ ಬದಲಿಗೆ ಸುಮ್ಮನೆ cipher keys ಬಗ್ಗೆ, encryption algorithm ಗಳ ಬಗ್ಗೆ ಒಂದೆರಡು ಸಾಲು ಬರೆದಿದ್ದರೆ ಚೆನ್ನಾಗಿತ್ತೇನೋ.!<br />
ಇನ್ನು ಸಿನಿಮಾ ಮತ್ತು ಕಳ್ಳತನ ಲೇಖನದ ಬಗ್ಗೆಯೂ ಸುಮಾರು ವಿಷಯಗಳನ್ನು ಹಂಚಿಕೊಳ್ಳುವ ಆಸೆ ಇದೆ.<br />
<br />
ಇನ್ನೂ ಕೂಡಾ ಸಾಲುಸಾಲಾಗಿ ಪುಸ್ತಕಗಳನ್ನು ಬರೆಯಿರಿ. ನಿಮ್ಮ ಕೆಲವು ವಾಕ್ಯಗಳು ಬುದ್ಧಿವಂತರಿಗೆ ಮಾತ್ರ ವೆಂದೆನಿಸುತ್ತದೆ. " ಬರವಣಿಗೆ ಶುರುವಾದ ಮೇಲೆ ಭೂಮಿತಾಯಿ ಪ್ರಸನ್ನಳಾಗಿ ನನ್ನನ್ನು ೨-೩ ಸಲ ಸೂರ್ಯನ ಸುತ್ತ ಸುತ್ತುವ ಪ್ಯಾಕೇಜ್ ಟ್ರಿಪ್ಪಿನಲ್ಲಿ ಕರೆದುಕೊಂಡು ಹೋಗಿದ್ದಾಳೆ" ಈ ವಾಕ್ಯದ ಅರ್ಥ ನಾನು ಬರವಣಿಗೆ ಶುರು ಮಾಡಿ ೨-೩ ವರ್ಷ ಆಯ್ತೆಂದಲ್ಲವೇ? ಅರ್ಥ ಆದಾಗ ತುಂಬಾ ನಗು ಬಂತು. ನೀವು ಗೂಢಾರ್ಥಗಳನ್ನು ಮತ್ತು ಅಲಂಕಾರ, ಉಪಮೆಗಳನ್ನು ಬಳಸುವ ರೀತಿ ಚೆನ್ನಾಗಿದೆ. ನೀವು ಒಬ್ಬ ಉತ್ತಮ ಹರಟೆ ಲೇಖಕರೂ ಹೌದು, ವಿಜ್ಞಾನ ಬರಹಗಳ ಲೇಖಕರೂ ಹೌದು.<br />
<br />
....ಧನ್ಯವಾದಗಳೊಂದಿಗೆ,<br />
ಸ್ಮಿತಾ ಭಟ್.<br />
=======================================================<br />
# Baagilu Tereye Sesamma Book reviews</div>
Sharath Bhat serajehttp://www.blogger.com/profile/11873783107861311555noreply@blogger.com0