Wednesday 7 August 2019

ಓದಲೇಬೇಕಾದ ಸಣ್ಣಕಥೆಗಳು

ಕನ್ನಡದ ಟಾಪ್ 100 ಕಥೆಗಳ ಅಥವಾ ಕಥೆಗಾರರ ಪಟ್ಟಿ ಮಾಡಬಹುದೇ ಅಂತೊಮ್ಮೆ ಯೋಚಿಸಿದ್ದೆ. ಇಂಥದ್ದನ್ನು ಮಾಡಹೊರಟಾಗ, "ನಿಮ್ಮ ಮಾನದಂಡಗಳೇನು", "ಓ ಇಂಥವರ ಕಥೆಗಳು ಯಾಕಿಲ್ಲ?", "ಓ ಇವರ ಕಥೆಗಳು ಯಾಕಿವೆ?!!", "ಶ್ರೀಯುತರು ಕ್ರಿಸ್ತಪೂರ್ವ ಮುನ್ನೂರ ಅರುವತ್ತೆಂಟನೇ ಇಸವಿಯಲ್ಲಿ ಪ್ರಕಟಿಸಿದ ಕಥೆಯೊಂದನ್ನು ಮರೆತೇ ಬಿಟ್ಟಿದ್ದೀರಿ!!" ಎಂದು ಮುಂತಾಗಿ ಹೇಳುವವರು ಯಾರಾದರೂ ಇದ್ದೇ ಇರುತ್ತಾರಲ್ಲ ! ಆದರೇನಂತೆ ! ಸಾಫ್ಟ್ವೇರ್ ಎಂಜಿನಿಯರುಗಳಿಗೆ ಇಂಥದನ್ನೆಲ್ಲ ನಿಭಾಯಿಸುವ ಚಾಲಾಕಿ ಇರುವುದಿಲ್ಲವೇ?! ಇಂಥದ್ದರಿಂದ ಪಾರಾಗಲಿಕ್ಕೂ ಒಂದು ಉಪಾಯ ಹುಡುಕಿದೆ. ಈಗಾಗಲೇ ದೊಡ್ಡವರು,ಅಧ್ಯಯನಶೀಲರು ಮಾಡಿಕೊಟ್ಟಿರುವ ಒಂದಷ್ಟು ಕಥಾಸಂಕಲನಗಳಿಂದ ಕಥೆಗಳನ್ನು ಆಯ್ದರಾಯಿತಲ್ಲ.  

ಹೀಗಾಗಿ, ಶೇಕಡಾ ತೊಂಬತ್ತರಷ್ಟು ಕಥೆಗಳನ್ನು ಈ ಕೆಳಗಿನ ಕಥಾಸಂಕಲನಗಳಿಂದ ಹೆಕ್ಕಿಕೊಂಡಿದ್ದೇನೆ. ಒಂದಷ್ಟನ್ನು ನಾನು ಸೇರಿಸಿದ್ದೇನೆ. ಆಸಕ್ತರು ಓದಲೇಬೇಕಾದ ಸಣ್ಣಕಥೆಗಳು ಯಾವುವು, ಓದಬೇಕಾದ ಕಥೆಗಾರರು ಯಾರು ಎಂದು ತಿಳಿಸುವ ಪ್ರಯತ್ನವಿದು. ಹಲವು ಹೊಸಬರ,ಹಳಬರ ಹೆಸರುಗಳು ಈ ಪಟ್ಟಿಗೆ ಸೇರಬೇಕು, ಸೇರಲಿವೆ, ನೀವೂ ಸೇರಿಸಬಹುದು(ಎಲ್ಲ ನಾನೇ ಮಾಡಿದರೆ ನಿಮಗೇನು ಕೆಲಸ?).ಪಟ್ಟಿಯಲ್ಲಿರುವ ಕಥೆಗಾರರ ಎಷ್ಟೋ ಒಳ್ಳೆಯ ಕಥೆಗಳೂ ಪಟ್ಟಿಯಲ್ಲಿಲ್ಲ. ಆದರೂ ಟಾಪ್ 100 ಕಥೆಗಳ ಪಟ್ಟಿ ಹೋಗಿ ಸುಮಾರು 225 ಮುಖ್ಯ ಕಥೆಗಾರರ ಹಂತಿಯಾಗಿದೆ.    
   
ನಾನು ನೋಡಿರುವ ಕೆಲವು ಪ್ರಮುಖ ಸಂಕಲನಗಳು:
ಓಬೀರಾಯನ ಕಾಲದ ಕತೆಗಳು - ಸಂಪಾದಕ: ಬಿ. ಜನಾರ್ದನ ಭಟ್ (ಕೃಪೆ - ಕೆಂಡಸಂಪಿಗೆ ವೆಬ್ ಸೈಟ್)
ಮರೆಯಬಾರದ ಹಳೆಯ ಕಥೆಗಳು - ಸಂಪಾದಕ: ಗಿರಡ್ಡಿ ಗೋವಿಂದರಾಜು 
ನವಿಲುಗರಿ - ಸಂಪಾದಕರು: ಬೆಟಗೇರಿ ಕೃಷ್ಣ ಶರ್ಮ ಮತ್ತು ಜಿ.ಬಿ. ಜೋಶಿ   
ಅತ್ಯುತ್ತಮ ಸಣ್ಣ ಕಥೆಗಳು (ಮೂರನೆಯ ಸಂಪುಟ) - ಸಂಪಾದಕ: ಕೆ. ನರಸಿಂಹಮೂರ್ತಿ
ಕನ್ನಡ ಸಣ್ಣ ಕಥೆಗಳು - ಸಂಪಾದಕ: ಎಲ್.ಎಸ್. ಶೇಷಗಿರಿ ರಾವ್
ಕನ್ನಡ ಸಣ್ಣ ಕತೆಗಳು - ಸಂಪಾದಕ: ಜಿ ಎಚ್ ನಾಯಕ  
ಹೊನ್ನಕಣಜ - ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಣ್ಣಕಥೆಗಳ ಸಂಕಲನ
ಸಮಕಾಲೀನ ಕನ್ನಡ ಸಣ್ಣ ಕಥೆಗಳು - ಸಂಪಾದಕ: ರಾಮಚಂದ್ರ ಶರ್ಮ 
ಬಂಡಾಯದ ಕತೆಗಳು - ಸಂಪಾದಕರು : ಚಂದ್ರಶೇಖರ ಆಲೂರು ಮತ್ತು ರಂಜಾನ್ ದರ್ಗಾ 
ಶತಮಾನದ ಸಣ್ಣ ಕತೆಗಳು - ಸಂಪಾದಕರು: ಎಸ್. ದಿವಾಕರ್    
ಪ್ರಿಸಂ ಬುಕ್ ಹೌಸ್ ಪ್ರಕಟಿಸಿದ ವೈಜ್ಞಾನಿಕ ಕತೆಗಳು - ಸಂಪಾದಕಿ: ಸುಭಾಷಿಣಿ 
ಕಥೆಗಾರರು ಮತ್ತು ಕಥೆಗಳ ಪಟ್ಟಿ ನೋಡಿ, ಇಷ್ಟೊಂದು ಕಥೆಗಳಿವೆಯೇ ಅಂತ ತಲೆಬಿಸಿಯಾಗಬೇಕಾದರೆ ನೀವು ಈ ಪಟ್ಟಿಯನ್ನೇ ನೋಡಬೇಕು:  

ಕಥೆಗಾರರು ಮತ್ತು ಕಥೆಗಳು :

  1. ಪಂಜೆ ಮಂಗೇಶರಾಯ - ಕಮಲಪುರದ ಹೊಟ್ಲಿನಲ್ಲಿ, ನನ್ನ ಚಿಕ್ಕ ತಂದೆ, ಭಾರತ ಶ್ರವಣ, ನನ್ನ ಚಿಕ್ಕ ತಂದೆಯವರ ಉಯಿಲ್, ವೈದ್ಯರ ಒಗ್ಗರಣೆ, ನನ್ನ ಚಿಕ್ಕತಾಯಿ, ನನ್ನ ಹೆಂಡತಿ    
  2. ಬೇಕಲ ರಾಮನಾಯಕ - ದೊಡ್ಡಮನೆ ಈಶ್ವರಯ್ಯ, ಬಾಳಿದ ಹೆಸರು, ಉಳ್ಳಾಲದ ರಾಣಿ, ಕೂಡಲು ಸುಬ್ಬಯ್ಯ ಶಾನಭಾಗ,ತಿಮ್ಮನಾಯಕನ ಫಿತೂರಿ,ಕರಣಿಕ ದೇವಪ್ಪಯ್ಯ
  3. ಎ ಆರ್ ಕೃಷ್ಣಶಾಸ್ತ್ರಿ - ಗುರುಗಳ ಮಹಿಮೆ, ಬಂಗಲಿಯ ವಾಸ   
  4. ಕೆರೂರ ವಾಸುದೇವಾಚಾರ್ಯ - ಮಲ್ಲೇಶಿಯ ನಲ್ಲೆಯರು, ತೊಳೆದ ಮುತ್ತು 
  5. ಎಂ.ಎನ್.ಕಾಮತ್ - ಕದ್ದವರು ಯಾರು,ಬೊಗ್ಗು ಮಹಾಶಯ 
  6. ಎಸ್. ಜಿ. ಶಾಸ್ತ್ರಿ - ಹಬ್ಬದ ಉಡುಗೊರೆ, ಪರಪುರುಷ, ತುಂಟಮರಿ 
  7. ಕುಲಕರ್ಣಿ ಶ್ರೀನಿವಾಸ - ಹೊಸಬಾಯಿ 
  8. ಮಾಸ್ತಿ ವೆಂಕಟೇಶ ಐಯ್ಯಂಗಾರ್ -  ಮೊಸರಿನ ಮಂಗಮ್ಮ, ರಂಗಪ್ಪನ ದೀಪಾವಳಿ, ಜೋಗ್ಯೋರ ಅಂಜಪ್ಪನ ಕೋಳಿ ಕತೆ, ಪಂಡಿತನ ಮರಣಶಾಸನ, ಇಲ್ಲಿಯ ತೀರ್ಪು, ಇಂದಿರೆಯೋ ಅಲ್ಲವೋ?, ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು,ವೆಂಕಟಿಗನ ಹೆಂಡತಿ, ರಂಗಸ್ವಾಮಿಯ ಅವಿವೇಕ
  9. ಆನಂದ - ನಾನು ಕೊಂದ ಹುಡುಗಿ
  10. ಕೊರಡ್ಕಲ್ ಶ್ರೀನಿವಾಸ ರಾವ್ - ಧನಿಯರ ಸತ್ಯನಾರಾಯಣ   
  11. ಸೇಡಿಯಾಪು ಕೃಷ್ಣ ಭಟ್ಟ - ನಾಗರಬೆತ್ತ
  12. ತುದಿಯಡ್ಕ ವಿಷ್ಣ್ವಯ್ಯ - ಶ್ಯಾನುಭಾಗ ಶ್ಯಾಮಣ್ಣನವರು, ದೊರೆಯ ಪರಾಜಯ
  13. ಬನ್ನಂಜೆ ರಾಮಾಚಾರ್ಯ - ರೋಬರ್ಟ್ಸ್ ದೊರೆಯ ದಿನಚರಿಯಿಂದ
  14. ಸಿರಿಬಾಗಿಲು ವೆಂಕಪ್ಪಯ್ಯ - ಗುಲ್ಲು ಬಂತೋ ಗುಲ್ಲು
  15. ಸಾಂತ್ಯಾರು ವೆಂಕಟರಾಜ - ಬರ್ಸಲೋರ್ ಬಾಬ್ರಾಯ 
  16. ಎಂ.ವಿ ಹೆಗಡೆ - ದೊರ್ಸಾನಿ
  17. ಗಣಪತಿ ಮೊಳೆಯಾರ - ಸಿಡಿಲು ಮರಿ
  18. ಹುರುಳಿ ಭೀಮರಾವ್ - ಮಾರಯ್ಯನ ಕವಾತು, ಮುರುಕು ದಂಬೂಕು
  19. ಎ. ಆರ್. ಶಗ್ರಿತ್ತಾಯ - ಕಲ್ಯಾಣಪ್ಪನ ಕಾಟುಕಾಯಿ
  20. ಪೇಜಾವರ ಸದಾಶಿವರಾವ್ - ಬಿರುಸು
  21. ಯಂ. ಆರ್. ಶಾಸ್ತ್ರಿ - ರಂಗಪ್ಪನ ಪಠೇಲಿಕೆ
  22. ಕಡಂಗೋಡ್ಲು ಶಂಕರಭಟ್ಟ - ಅದ್ದಿಟ್ಟು , ಚೂರಿ, ಹೊಡೆಯುವ ಗಡಿಯಾರ 
  23. ಕೃಷ್ಣಕುಮಾರ ಕಲ್ಲೂರ - ಗುಬ್ಬಿಗಳ ಸಂಸಾರ, ಜೀವನ 
  24. ಪಡುಕೋಣೆ ರಮಾನಂದರಾಯ - ಬಾಳ್ವೆಯ ಮಸಾಲೆ 
  25. ಯರ್ಮುಂಜ ರಾಮಚಂದ್ರ - ಎಂಕಪ್ಪುವಿನ ದ್ವೇಷಾಗ್ನಿ,ಚೆನ್ನಪ್ಪ ಒಡೆದ ಮೂರ್ತಿ 
  26. ಬಾಗಲೋಡಿ ದೇವರಾಯ - ಪವಾಡಪುರುಷ, ಹುಚ್ಚ ಮುನಸೀಫ, ಅವರವರ ಸುಖ ದುಃಖ,ಶುಕ್ರಾಚಾರ್ಯ  
  27. ಕುವೆಂಪು - ಯಾರೂ ಅರಿಯದ ವೀರ, ಮೀನಾಕ್ಷಿಯ ಮನೆ ಮೇಷ್ಟ್ರುಧನ್ವಂತರಿಯ ಚಿಕಿತ್ಸೆ  
  28. ದ.ರಾ. ಬೇಂದ್ರೆ - ಪಾಲಾ ಫೂ,ನಿರಾಭರಣ ಸುಂದರಿ, ಮಗುವಿನ ಕರೆ 
  29. ವಿಜಿ ಶ್ಯಾನಭಾಗ - ದೇವದಾಸಿ 
  30. ಶ್ರೀ ಸ್ವಾಮಿ - ಬೇಬಿ ನಾಚ್ಚಿಯಾರ್,  ಪುಷ್ಪಮಾಲೆ, ನಂಜಮ್ಮ, ಗೋಧೂಳೀ ಲಗ್ನ 
  31. ಕ್ಷೀರಸಾಗರ - ನಮ್ಮೂರಿನ ಪಶ್ಚಿಮಕ್ಕೆ 
  32. ಹ. ಪೀ. ಜೋಶಿ - ಕಿಚ್ಚಿನ ಕಾವಲು , ಅಪೂರ್ಣಾ  
  33. ನವರತ್ನ ರಾಮರಾಯ - ತಾವರೆಕೋಟೆ, ಲಕ್ಷ್ಮಣರಾಯರ ಭಾಗ್ಯ, ಹೆಣ್ಣು ಹೃದಯ  
  34. ಟೇಂಗ್ಸೆ ಗೋವಿಂದರಾಯ - ಗಂಗೆಯ ಗುತ್ತಿಗೆ, ಛಪ್ಪರಬಂದ್  
  35. ಹೊಯಿಸಳ - ಭಯ ನಿವಾರಣೆ 
  36. ಮೇವುಂಡಿ ಮಲ್ಲಾರಿ - ಸುರಸುಂದರಿ 
  37. ಟಿ. ಎಸ್. ಸಂಜೀವರಾವ್ - ಸೀದ ಒಗ್ಗರಣೆ   
  38. ರಂ.ಶ್ರೀ.ಮುಗಳಿ -  ವಿತಂತು ವೇಶ್ಯೆ
  39. ಗೊರೂರು ರಾಮಸ್ವಾಮಿ ಅಯ್ಯಂಗಾರ್ -  ಹಾರುವಯ್ಯ ಹಜಾಮನಾದದ್ದು, ಆಚಾರ ಕೆಟ್ಟರೂ ಆಕಾರ ಕೆಡಬಾರದು, ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು, ಬೂತಯ್ಯನ ಮಗ ಅಯ್ಯು, ಡೊಂಕು ಬಾಲ    
  40. ಭಾರತೀಪ್ರಿಯ - ಒಂದು ಹಳೆಯ ಕತೆ, ಮೋಚಿ,ವೀಣೆ
  41. ಕೆ ಗೋಪಾಲಕೃಷ್ಣ ರಾವ್ - ಡಾಕ್ಟರ್ ಸುಶೀಲಾ ಸಂಕೇತ್ 
  42. ಎಂ. ವಿ. ಸೀತಾರಾಮಯ್ಯ - ಕರುಣೆ, ಹುಟ್ಟಿನ ಹಂಬಲು
  43. ಜಡಭರತ - ಡೂಗಜ್ಜನ ಬಹಿಷ್ಕಾರ
  44. ಕೊಡಗಿನ ಗೌರಮ್ಮ - ವಾಣಿಯ ಸಮಸ್ಯೆ, ಆಹುತಿ, ಅಪರಾಧಿ ಯಾರು  
  45. ಬಸವರಾಜ ಕಟ್ಟೀಮನಿ - ಅಜ್ಞಾತವಾಸಿ, ಗಿರಿಜಾ ಕಂಡ ಸಿನಿಮಾ, ಬೂಟ್ ಪಾಲಿಷ್, ರಕ್ತಧ್ವಜ, ನೀಲಗಂಗಾ ನಾಗರಪಂಚಮಿಗೆ ಬಂದದ್ದು , ಜೀವನ ಕಲೆ  
  46. ಪೂರ್ಣಚಂದ್ರ ತೇಜಸ್ವಿ- ಅಬಚೂರಿನ ಪೋಸ್ಟಾಫೀಸು, ಲಿಂಗ ಬಂದ, ಕಿರಗೂರಿನ ಗಯ್ಯಾಳಿಗಳು, ಅವನತಿ, ಮಾಯಾಮೃಗ 
  47. ಯಶವಂತ ಚಿತ್ತಾಲ - ಅಬೋಲಿನ, ಕತೆಯಾದಳು ಹುಡುಗಿ, ಸೆರೆ, ಕತೆಯಲ್ಲಿ ಬಂದಾತ ಮನೆಗೂ ಬಂದು ಕದತಟ್ಟಿದ,ಮುಖಾಮುಖಿ
  48. ಯು.ಆರ್. ಅನಂತಮೂರ್ತಿ - ಕ್ಲಿಪ್ ಜಾಯಿಂಟ್,ಸೂರ್ಯನ ಕುದುರೆ,ನವಿಲುಗಳು
  49. ಪಿ. ಲಂಕೇಶ್ - ಉಮಾಪತಿಯ ಸ್ಕಾಲರ್’ಶಿಪ್ ಯಾತ್ರೆ, ಮುಟ್ಟಿಸಿಕೊಂಡವನು,ಸಹಪಾಠಿ, ಕಲ್ಲು ಕರಗುವ ಸಮಯ,ರೊಟ್ಟಿ, ನಿವೃತ್ತರು, ನಾನಲ್ಲ  
  50. ದೇವನೂರು ಮಹಾದೇವ - ಡಾಂಬರು ಬಂದುದು,ಮಾರಿಕೊಂಡವರು, ಅಮಾಸ
  51. ರಾಘವೇಂದ್ರ ಖಾಸನೀಸ - ತಬ್ಬಲಿಗಳು, ಅಶ್ವಾರೋಹಿ
  52. ಶಾಂತಿನಾಥ ದೇಸಾಯಿ - ಕ್ಷಿತಿಜ, ರಾಕ್ಷಸ,ದಿಗ್ಭ್ರಮೆ 
  53. ಜಿ ಎಸ್ ಸದಾಶಿವ - ಹ್ಯಾಂಗೋವರ್, ಮೀಸೆಯವರು  
  54. ಕೆ.ಸದಾಶಿವ - ನಲ್ಲಿಯಲ್ಲಿ ನೀರು ಬಂತು, ರಾಮನ ಸವಾರಿ ಸಂತೆಗೆ ಹೋದದ್ದು
  55. ಅ. ನ. ಕೃಷ್ಣರಾವ್ - ಮಣ್ಣಿನ ಮಗ 
  56. ತರಾಸು - 0-0 = 0, ಇನ್ನೊಂದು ಮುಖ, ಎಕ್ಸ್
  57. ಬೆಟಗೇರಿ ಕೃಷ್ಣಶರ್ಮ(ಆನಂದಕಂದ) - ಮಾತನಾಡುವ ಕಲ್ಲು,  ಮಾಲ್ಕೀ ಹಕ್ಕು, ನೀನು ಪುಟ್ಟನ ತಾಯಿ 
  58. ಜಯಂತ ಕಾಯ್ಕಿಣಿ- ಹಾಲಿನ ಮೀಸೆ, ಸುಗ್ಗಿ , ಅಮೃತಬಳ್ಳಿ ಕಷಾಯ,ಸೇವಂತಿ ಹೂವಿನ ಟ್ರಕ್ಕು,ಕನ್ನಡಿ ಇಲ್ಲದ ಊರಲ್ಲಿ, ಮಧ್ಯಂತರ, ಕಣ್ಣಿಗೊಂದು ಕ್ಷಿತಿಜ, ದಗಡೂ ಪರಬನ ಅಶ್ವಮೇಧ 
  59. ಜೋಗಿ - ಕುಮಾರ ದಿವಂಗತ, ಸುಬ್ಬಣ್ಣ, ಕನ್ನಡಿಯಲ್ಲಿ ಗಳಗನಾಥರಿರಲಿಲ್ಲ, ಗೋವಿಂದ ವಿಠ್ಠಲ .. ಹರಿಹರಿ ವಿಠ್ಠಲ .. ,ರಾಂಗ್ ನಂಬರ್ 
  60. ಬೆಸಗರಹಳ್ಳಿ ರಾಮಣ್ಣ - ಸುಗ್ಗಿ , ಕಕ್ಕರನ ಯುಗಾದಿ,ಗಾಂಧಿ, ನೆಲದ ಒಡಲು, ಗರ್ಜನೆ, ಹರಕೆಯ ಹಣ 
  61. ವ್ಯಾಸರಾಯ ಬಲ್ಲಾಳ - ಮುಸ್ಸಂಜೆ, ಭಾವಬಂಧನ,ಬಂಧ 
  62. ಆಲನಹಳ್ಳಿ ಶ್ರೀಕೃಷ್ಣ - ಗೀಜಗನ ಗೂಡು, ಫೀನಿಕ್ಸ್, ಗೋಡೆ, ಸಂಬಂಧ, ತೊರೆ ಬತ್ತಿರಲಿಲ್ಲ,ಆಗಂತುಕ  
  63. ಅಮರೇಶ ನುಗಡೋಣಿ - ತಮಂಧದ ಕೇಡು, ಹೊತ್ತು ಮೂಡುವ ಸಮಯ 
  64. ಭಾರತೀಸುತ - ಜೇನು ಕಹಿ 
  65. ವೈದೇಹಿ - ಅಕ್ಕು, ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು, ಒಂದು ಅಪರಾಧದ ತನಿಖೆ 
  66. ಟಿಜಿ ರಾಘವ - ಶ್ರಾದ್ಧ, ಜ್ವಾಲೆ ಆರಿತು,ಸಂಕರ 
  67. ಎಸ್ ಎನ್ ಸೇತುರಾಮ್ - ನಾವಲ್ಲ
  68. ವಸುಧೇಂದ್ರ - ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ, ನಮ್ಮ ವಾಜೀನೂ ಆಟಕ್ಕೆ ಸೇರಿಸ್ಕೊಳ್ರೋ, ಅಪಸ್ವರದಲ್ಲೊಂದು ಆರ್ತನಾದ, ಕೆಂಪುಗಿಣಿ
  69. ಅಶ್ವತ್ಥ - ಧರ್ಮಕೊಂಡದ ಕತೆ, ವ್ಯಭಿಚಾರ 
  70. ಚದುರಂಗ - ನಾಲ್ಕು ಮೊಳ ಭೂಮಿ, "ತುಚೀಪ್, ತುದಾಂಡ್, ತುಬದ್ - ರೆಡಿ", ಶವದ ಮನೆ , ನಾಲ್ಕು ಮನೆಯ ನಂದಾದೀಪ   
  71. ನಿರಂಜನ - ಕೊನೆಯ ಗಿರಾಕಿ
  72. ಎಸ್ ದಿವಾಕರ್ - ಇತಿಹಾಸ, ಕ್ರೌರ್ಯ
  73. ದೊಡ್ಡೇರಿ ವೆಂಕಟಗಿರಿ ರಾವ್ - ತುಂಬಿದ ಕೊಡ 
  74. ವಿವೇಕ ಶಾನಭಾಗ - ಹುಲಿಸವಾರಿ, ಗುರುತು,ಲಂಗರು, ನಮ್ಮ ಪಾಡಿಗೆ ನಾವು   
  75. ಕಾಳೇಗೌಡ ನಾಗವಾರ - ಅಲೆಗಳು, ಮಾಯೆ  
  76. ರಾಜಶೇಖರ ನೀರಮಾನ್ವಿ - ಹಂಗಿನರಮನೆಯ ಹೊರಗೆ 
  77. ಕೋ. ಚೆನ್ನಬಸಪ್ಪ - ಮುಕ್ಕಣ್ಣನ ಮುಕ್ತಿ, ನಮ್ಮೂರಿನ ದೀಪ,  ಆ ಕಥೆಯ ಹಿಂದೆ, ಉಂಗುರದ ಉರುಲು 
  78. ಕುಂ.ವೀ - ಕುಪ್ಪಸ, ಕಿವುಡ ನಾಯಿಯಾದ ಕತೆ, ರುದ್ರಪ್ಪನ ಖಡ್ಗ, ಎಲುಗನೆಂಬ ಕೊರಚನೂ ಚೌಡನೆಂಬ ಹಂದಿಯೂ, ದೇವರ ಹೆಣ
  79. ಬೊಳುವಾರು ಮಹಮ್ಮದ್ ಕುಂಞಿ - ಅಂಕ, ಒಂದು ತುಂಡು ಗೋಡೆ, ಕಪ್ಪು ಕಲ್ಲಿನ ಸೈತಾನ, ದೇವರುಗಳ ರಾಜ್ಯದಲ್ಲಿ   
  80. ಕೆಟಿ ಗಟ್ಟಿ - ಮೌಲ್ಯ, ಬಂಡೆ  
  81. ರವಿ ಬೆಳಗೆರೆ -  ಪಾ.ವೆಂ. ಹೇಳಿದ ಕಥೆ, ನೆರಳು, ಮೈಕು, ವಂಧ್ಯ 
  82. ತ್ಯಾಮಗೊಂಡ್ಲು ಅಂಬರೀಶ್ - ಲೆಕ್ಕಾಚಾರ
  83. ದೇಶಪಾಂಡೆ ಸುಬ್ಬರಾಯ - ಕ್ರಿಯಾಕಾಂಡ 
  84. ಅಬ್ದುಲ್ ರಶೀದ್ - ಹಾಲು ಕುಡಿದ ಹುಡುಗಾ, ಕಪ್ಪು ಹುಡುಗನ ಹಾಡು  
  85. ಬಿಸಿ ರಾಮಚಂದ್ರ ಶರ್ಮ - ಯಾರು ಹಿತವರು ನಿನಗೆ, ಸೆರಗಿನ ಕೆಂಡ, ಬೆಳಗಾಯಿತು,ಮಾಗಿ 
  86. ನಾ.ಮೊಗಸಾಲೆ - ಕಿಡ್ನಿ 
  87. ಬಿ.ಎಲ್.ವೇಣು - ಸುಡುಗಾಡು ಸಿದ್ದನ ಪ್ರಸಂಗ
  88. ಪ್ರಹ್ಲಾದ ಅಗಸನಕಟ್ಟೆ- ತಾಜಮಹಲ್
  89. ಕಲಿಗಣನಾಥ ಗುಡದೂರು - ಉಡಿಯಲ್ಲಿಯ ಉರಿ
  90. ಎಂ ಎಸ್ ಕೆ ಪ್ರಭು - ಮುಖಾಬಿಲೆ, ಎರಡು ತೆಂಗಿನ ಮರದುದ್ದದ ಮನುಷ್ಯ 
  91. ಎಂ ಎನ್ ವ್ಯಾಸರಾವ್ - ಅಕ್ವೇರಿಯಂ 
  92. ಅಶೋಕ್ ಹೆಗಡೆ - ಒಳ್ಳೆಯವನು, ಯಾವ ಸೀಮೆಯ ಹುಡುಗ ನೀನು 
  93. ಎಂ ಎಸ್ ಶ್ರೀರಾಮ್ - ಕಪಾಟಿನೊಳಗಿನ ನೆನಪುಗಳು  
  94. ಡಾ. ವಿನಯಾ - ಕಡಿತನಕಾ ಕಾಯೋ ಅಭಿಮಾನ
  95. ಭಾಸ್ಕರ್ ಹೆಗಡೆ - ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ
  96. ರಘು ಅಪಾರ - ಸಾರಿ ಪದ್ಮಿನಿ, ಮಾಸ್ಟರ್ ಸೈಕಲ್ಲಿನ ಬೇಬಿ ಸೀಟ್
  97. ಮೊಗಳ್ಳಿ ಗಣೇಶ - ಒಂದು ಹಳೇ ಚಡ್ಡಿ 
  98. ರಾಜೇಂದ್ರ ಚೆನ್ನಿ - ಏಡಿಹುಣ್ಣು, ದೊಡ್ಡಮರ  
  99. ಸಿ ಬಸವಲಿಂಗಯ್ಯ - ಗಾಳಿಪಟ 
  100. ರಾಮಚಂದ್ರದೇವ - ದೂರ ನಿಂತವರು , ದಂಗೆಯ ಪ್ರಕರಣ
  101. ಟಿ ಎನ್ ಸೀತಾರಾಮ್ - ನಾನು ಪೊಲೀಸರಿಗೆ ಬೇಕಾದೆ 
  102. ಬೈರಪ್ಪ - ಗತಜನ್ಮ
  103. ನಾಗವೇಣಿ ಎಚ್ - ಒಡಲು 
  104. ಬಿ.ಸಿ.ದೇಸಾಯಿ - ಸಾವು
  105. ಶಿವೇಶ್ವರ ದೊಡ್ಡಮನಿ - ರಾಜಮಾ 
  106. ಹವೆಂ ನಾಗರಾಜರಾವ್ - ರಂಗಶಾಮಿ
  107. ಸಮೀತನಹಳ್ಳಿ ರಾಮರಾಯ - ತಾಯಿ 
  108. ಅನುಪಮಾ - ದೇವರೇ ಬರಲಿಲ್ಲ 
  109. ಅಶೋಕ ಹೆಗಡೆ-ಯಾವ ಸೀಮೆಯ ಹುಡುಗ ನೀನು, ತದಡಿಗೆ ಬಂದ ಹಡಗು
  110. ವೀಣಾ ಶಾಂತೇಶ್ವರ - ಕೊನೆಯ ದಾರಿ,ತಿರುಗಿ ಹೋದಳು 
  111. ಗೋಪಾಲಕೃಷ್ಣ ಮಧ್ಯಸ್ತ - ಮೌಲ್ಯಗಳು 
  112. ಶ್ರೀಕಾಂತ - ಪ್ರತಿಮೆಗಳು 
  113. ತ್ರಿವೇಣಿ - ಬೆಡ್ ನಂಬರ್ ಏಳು, ಚಂಪಿ,ನರಬಲಿ 
  114. ಹಿರೇಮಲ್ಲೂರ ಈಶ್ವರನ್ - ಪೂವಮ್ಮ 
  115. ವರಗಿರಿ - ದ್ಯಾವಮ್ಮ - ಕೆಂಚಿ 
  116. ಅಲಕಾ ಕೆ. - ಎರವಿನೊಡವೆ 
  117. ಸಾರಾ ಅಬೂಬಕರ್ - ಬಿಸಿಲ್ಗುದುರೆಯ ಬೆನ್ನುಹತ್ತಿ, ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು, ಚಪ್ಪಲಿಗಳು, ನಿಯಮ ನಿಯಮಗಳ ನಡುವೆ  
  118. ನಾ. ಡಿಸೋಜಾ - ತಂತ್ರ, ಬಣ್ಣ
  119. ಬಿ. ಜನಾರ್ದನ ಭಟ್ - ಕಾಟಕಾಯಿ
  120. ಸ್ವಾಮಿ ಪೊನ್ನಾಚಿ - ಭೂಮಿಗೀತ 
  121. ಚಿದಾನಂದ ಸಾಲಿ - ಕಾಗೆಯೊಂದಗುಳ ಕಂಡರೆ
  122. ಎನ್.ಎಸ್. ಶಂಕರ್ - ರೂಢಿ
  123. ಮಂಜುನಾಥ್ ಲತಾ - ಒಳಗಲ ಜ್ಯೋತಿಯು  
  124. ಪೆಪ್ಪರ್ಮೆಂಟು - ಟಿ.‌ ಎಸ್. ಗೊರವರ 
  125. ಜಯಶ್ರೀ ದೇಶಪಾಂಡೆ - ಘಟಿತ
  126. ಕಸ್ತೂರಿ ಬಾಯಿರಿ - ದಿಂಡೀ
  127. ನೇಮಿಚಂದ್ರ - ಮತ್ತೆ ಬರೆದ ಕವನಗಳು, ನನ್ನದಲ್ಲದ ಬದುಕಿಗಾಗಿ, ಹೊಸ ಹುಟ್ಟು
  128. ಫಕೀರ್ ಮಹಮ್ಮದ್ ಕಟ್ಪಾಡಿ - ಹತ್ಯೆ 
  129. ಕರೀಗೌಡ ಬೀಚನಹಳ್ಳಿ - ಅವಶೇಷ, ಒಂದು ಅಪೂರ್ವ ಸಂಸಾರ 
  130. ರಾಘವೇಂದ್ರ ಪಾಟೀಲ - ಬೆಳ್ಳಕ್ಕಿಗಳ ಲೋಕದಲ್ಲಿ,ದೇಸಗತಿ 
  131. ಮಹಾಬಲಮೂರ್ತಿ ಕೊಡ್ಲೆಕೆರೆ - ತೆರೆದುಕೊಳ್ಳುವ ಲೋಕ 
  132. ಕಮಲಾ ಸುಬ್ರಹ್ಮಣ್ಯಂ - ಕೃಷ್ಣಾ ಮೂರ್ತಿ ಕಣ್ಣಾಮುಂದೆ
  133. ಕವಿತಾ ರೈ - ನಾಟಿ ಓಟ
  134. ಜಯಶ್ರೀ ದಿವಾಕರ್ - ನೆಲೆ ಕಾಣದ ನೆರಳು 
  135. ಪ್ರತಿಭಾ ನಂದಕುಮಾರ್ - ಬೆಳಕು 
  136. ಇಂದ್ರಕುಮಾರ ಎಚ್.‌ಬಿ - ಚಾಕರಿಯಮ್ಮ 
  137. ಕೆ.ಎಂ.ರಶ್ಮಿ - ಅದು 
  138. ಅಲಕ ತೀರ್ಥಹಳ್ಳಿ - ಈ ಕಥೆಗಳ ಸಹವಾಸವೇ ಸಾಕು 
  139. ಶಾಂತಿ ಕೆ ಅಪ್ಪಣ್ಣ - ಬಾಹುಗಳು
  140. ವರದರಾಜ ಹುಯಿಲಗೋಳ - ಬಾಗಿಲು ತೆರೆದಿತ್ತು 
  141. ಎ.ಕೆ.ರಾಮಾನುಜನ್  - ಅಣ್ಣಯ್ಯನ ಮಾನವಶಾಸ್ತ್ರ
  142. ಎಸ್ ಅನಂತನಾರಾಯಣ - ಮಾನವಪ್ರೇಮ 
  143. ಕುಲಕರ್ಣಿ ಬಿಂದುಮಾಧವ - ಗುಡಿ
  144. ನಾಗಮಂಗಲ ಕೃಷ್ಣಮೂರ್ತಿ - ಡವ್ ಕೋಟ್ 
  145. ಟಿಕೆ ದಯಾನಂದ - ನಾಯಿಬೇಟೆ  
  146. ಉಷಾದೇವಿ - ಫರ್ಲಾಂಗಮ್ಮ 
  147. ಪ್ರಜ್ಞಾ ಮತ್ತಿಹಳ್ಳಿ - ತುದಿಬೆಟ್ಟದ ನೀರಹಾಡು 
  148. ರಾಜು ಹೆಗಡೆ - ಕತ್ತಲೆ ಮೌನ ಮತ್ತು 
  149. ಕ.ವೆಂ. ರಾಜಗೋಪಾಲ್ - ಆಶೆಯ ಶಿಶು 
  150. ನಾರಂಗಿಭಟ್ಟ - ಕುಥಭರ್ಟರ ಅಕಾಲಮರಣ 
  151. ನರೇಂದ್ರಬಾಬು - ರೇವು 
  152. ಗೀತಾ ಕುಲಕರ್ಣಿ - ತೇಲಿ ಹೋದ ಮೋಡ 
  153. ಎಚ್. ವಿ. ಸಾವಿತ್ರಮ್ಮ - ಮರುಮದುವೆ  
  154. ಎಸ್ ಆರ್ ಶಂಕರನಾರಾಯಣ ರಾವ್ - ತ್ಯಾಗ 
  155. ಶ್ರೀನಿವಾಸ ಹಾವನೂರ - ಶೂರ್ಪನಖಿ 
  156. ಬಿ.ಟಿ ಜಾಹ್ನವಿ - ವ್ಯಭಿಚಾರ 
  157. ಶ್ರೀಕಂಠ ಪುತ್ತೂರು - ಕ್ರಿಮಿಗಳು 
  158. ಎಲ್ ಎಸ್ ಶೇಷಗಿರಿ ರಾವ್ - ಮುಯ್ಯಿ 
  159. ನಟರಾಜ್ ಹುಳಿಯಾರ್ - ಮಾಯಾಕಿನ್ನರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು,ನೆತ್ತರು ಮತ್ತು ಗುಲಾಬಿ
  160. ಹನುಮಂತ ಹಾಲಿಗೇರಿ - ಮಠದ ಹೋರಿ, ಊರು ಸುಟ್ಟರೂ ಹನುಮಪ್ಪ ಹೊರಗೆ
  161. ಎಲ್ ಡಿ ಸಭಾಹಿತ - ಯಕ್ಷಪ್ರಶ್ನೆ 
  162. ರಾಮಚಂದ್ರ ಕೊಟ್ಟಲಗಿ - ಒಂದೇ ದೇಟಿನ ಕಾಯಿಗಳು
  163. ಬಿ.ಪ್ರಭಾಕರ ಶಿಶಿಲ - ಕೊಡಗರ ಕಾಟಕಾಯಿ, ಬೇಟೆ (ಕನ್ನಡ ಅರೆಭಾಷೆಯ ಸಣ್ಣಕಥೆ) 
  164. ದ. ಬಾ. ಕುಲಕರ್ಣಿ - ಜಾಗೀರಿಯ ದಿಂಬು 
  165. ಬರಗೂರು ರಾಮಚಂದ್ರಪ್ಪ - ಕ್ಷಾಮ,ಬಯಲಾಟದ ಭೀಮಣ್ಣ 
  166. ಕೇಶವ ಮಳಗಿ - ಪತ್ರೋಳಿ
  167. ಕೇಶವರೆಡ್ಡಿ ಹಂದ್ರಾಳ - ಪಂಚರಂಗಿ
  168. ಚೆನ್ನಣ್ಣ ವಾಲೀಕಾರ - ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು 
  169. ಚಂದ್ರಕಾಂತ ವಡ್ಡು - ನೇಪಥ್ಯದ ನೋವು 
  170. ಕಾ.ತ. ಚಿಕ್ಕಣ್ಣ - ಒಡಲುರಿ, ಓಡುವ ಗಿಡಮರಗಳೊಂದಿಗೆ
  171. ಜಾಣಗೆರೆ ವೆಂಕಟರಾಮಯ್ಯ - ಬಿಳೀ ಹಾಳೆಯ ಕಪ್ಪು ನ್ಯಾಯ 
  172. ಆರ್.ಜಿ. ಹಳ್ಳಿ ನಾಗರಾಜ್ - ಹೊಗೆ 
  173. ಬಾನು ಮುಸ್ಥಾಕ್ - ಸರಿದ ಕಾರ್ಮೋಡ 
  174. ಸ್ವರ್ಣಲತಾ ಆಲೂರು - ಆಧಾರ 
  175. ರಾಮಚಂದ್ರ ಮಾಗಡಿ - ಪ್ರಾಣಿಗಳು 
  176. ಬಿ.ಟಿ. ಲಲಿತಾನಾಯಕ - ತಾಯಿ ಸಾಕೀಬಾಯಿ  
  177. ಮಿರ್ಜಿ ಅಣ್ಣಾರಾಯ - ನಮ್ಮೂರ ನಾಯಕರು 
  178. ವಿಜಿ ಭಟ್ಟ - ರಾಮರಾಜ್ಯ, ಅನುಭವಾಮೃತ, ಗುಪ್ತಚಾರ 
  179. ರಾ. ವೆಂ. ಶ್ರೀನಿವಾಸ - ದುಃಖಸೇತು 
  180. ರಾಜಲಕ್ಷ್ಮಿ ಎನ್. ರಾವ್  - ಆವೇ ಮರೀಯಾ, ಫೀಡ್ರಾ
  181. ಸುಮತೀಂದ್ರ ನಾಡಿಗ - ಸುಟ್ಟ ಬೆರಳು,ಹಂಚಿಕೆ 
  182. ಪಿ.ವಿ. ನಂಜರಾಜ ಅರಸು - ಅದೃಶ್ಯ ಪಾಠ 
  183. ಟಿ. ಎನ್. ಕೃಷ್ಣರಾಜು - ಶನಿ ಹಿಡಿದದ್ದು, ಮಾಡು ಸಿಕ್ಕದಲ್ಲಾ 
  184. ವೀರಭದ್ರ - ಕೈ ಬೀಸಿತು ಹೆಣ, ಓ ಹೆಣ್ಣೇ ನಿನ್ನದಿದೇ ಕಥೆಯೇನೇ ?
  185. ಜಿ.ಕೆ. ಗೋವಿಂದರಾವ್ - ಪೊರೆ ಬಿಟ್ಟ ಹಾವು 
  186. ಮಿತ್ರಾ ವೆಂಕಟ್ರಾಜ್ - ಒಂದು ಒಸಗೆ ಒಯ್ಯುವುದಿತ್ತು 
  187. ಜಯಪ್ರಕಾಶ ಮಾವಿನಕುಳಿ - ಅನುಗಾಲವು ಚಿಂತೆ ಜೀವಕೆ, ...ಅಧಿನಾಯಕ ಜಯ ಹೇ  
  188. ಕೆ ಸತ್ಯನಾರಾಯಣ - ಸೀತೆ ಹೇಳಿದ ರಾಮನ ಗುರುತು,ಮುದುಕಿ ಹೇಳಿದ ಸರ್ ಎಂ.ವಿ ಕತೆ ಸರ್ ಎಂ.ವಿ ಕೇಳಿದ ಮುದುಕಿ ಕತೆ 
  189. ಸುಧಾಕರ - ಕಣ್ಣಿ ಕಿತ್ತ ಹಸು   
  190. ಶ್ರೀಕಾಂತ - ಭೂಮಿ ಕಂಪಿಸಲಿಲ್ಲ 
  191. ಮಹಾಂತೇಶ ನವಲಕಲ್ - ಬುದ್ಧ ಗಂಟೆಯ ಸದ್ದು  
  192. ವೈ.ಎಸ್ . ಲೂಯಿಸ್ - ರಾಗ ತರಂಗ 
  193. ನಳಿನಿ ಮೂರ್ತಿ - ರತ್ನಗರ್ಭ ವಸುಂಧರಾ 
  194. ರಾಜಶೇಖರ ಭೂಸನೂರಮಠ - ಪಾಡನ್ ಕಾಡಿನ ಪ್ರಸಂಗ 
  195. ಎಚ್ ರಾಮಚಂದ್ರ ಸ್ವಾಮಿ - ಅಮಾನವರು
  196. ಶೈಲಜಾ ರಾಜಶೇಖರ ಭೂಸನೂರಮಠ - ತಾಯಿ ಯಾರು  
  197. ಮನು - ಸುದರ್ಶನ ಯಾನ 
  198. ನಾಗೇಶ್ ಹೆಗಡೆ - ಡಿಲೇ ವಿಷನ್ 
  199. ಹ.ಶಿ.ಭೈರನಟ್ಟಿ - ಸಮೂಹ ಸಂಮೋಹಿನಿ 
  200. ವಜ್ರಗಳು,ವಣಖೊಬ್ರಿ ಮತ್ತು E = mc2
  201. ವಿರೂಪಾಕ್ಷ ಬಣಕಾರ - ಕೊನೆಯ ಸಂದೇಶ 
  202. ಕನಕಮಾಲಿನಿ ಜೋಶಿ - ಅನೂಹ್ಯ 
  203. ಸುಭಾಷಿಣಿ - ಮಿನುಗೆಲೇ ಮಿಂಚುಳ್ಳಿ 
  204. ದೇವುಡು - ಮೂರು ಕನಸು 
  205. ಕೆವಿ ಅಯ್ಯರ್ - ಅನಾಥ ಅನಸೂಯೆ 
  206. ಕ ವೆಂ ರಾಜಗೋಪಾಲ - ಅನಾಥ ಮೇಷ್ಟರ ಸ್ವಗತ ಸಂಪ್ರದಾಯ       
  207. ಶಾಂತರಸ - ನೀಲಗಂಗಾ ಗುರುಪಾದ ಮತ್ತು ಒಂದು ರೂಪಾಯಿ 
  208. ಶಂಕರ ಮೊಕಾಶಿ ಪುಣೇಕರ - ಬಿಲಾಸಖಾನ 
  209. ವೆಂಕಟರಾಜ ಪಾನಸೆ - ಸಮಾನತೆಯ ಸುಳಿಯಲ್ಲಿ 
  210. ಪರಂಜ್ಯೋತಿ -  ಶೂನ್ಯ
  211. ಗಿರಡ್ಡಿ ಗೋವಿಂದರಾಜು - ನಮ್ಮೂರಿನಲ್ಲೊಬ್ಬ ತಲಾಠಿ 
  212. ಕೆವಿ ತಿರುಮಲೇಶ್ - ನೆಳಲೆಮಠದ ಶ್ರೀಗಳು 
  213. ಎ ಎನ್ ಪ್ರಸನ್ನ - ಹೊಳೆಗೆ ಹೋದದ್ದು 
  214. ಮಾವಿನಕೆರೆ ರಂಗನಾಥನ್ - ಉಳಿದದ್ದು ಆಕಾಶ        
  215. ಮಲ್ಲಿಕಾರ್ಜುನ ಹಿರೇಮಠ - ಅಮೀನಪುರದ ಸಂತೆ 
  216. ಈಶ್ವರಚಂದ್ರ - ಕೊಂಪೆಯಲ್ಲಿ ಕಟ್ಟುತ್ತಿರುವ ಬಂಗಲೆ 
  217. ಶಾಂತಾರಾಮ ಸೋಮಯಾಜಿ - ನೀರಮೇಲೆ ನಡೆಯುವವನು    
  218. ಎಸ್ ಎಫ್ ಯೋಗಪ್ಪನವರ್ - ಆರಾಮಕುರ್ಚಿ


ಛಂದ ಪುಸ್ತಕವು ಗುರುತಿಸಿರುವ ಕಥೆಗಾರರು ಮತ್ತು ಕಥಾಸಂಕಲನಗಳು:

  1. ಸುಮಂಗಲಾ - ಜುಮುರು ಮಳೆ,ಕಾಲಿಟ್ಟಲ್ಲಿ ಕಾಲುದಾರಿ
  2. ಗುರುಪ್ರಸಾದ್ ಕಾಗಿನೆಲೆ - ಶಕುಂತಳಾ
  3. ಡಾ. ಕೆ. ಎನ್. ಗಣೇಶಯ್ಯ - ಶಾಲಭಂಜಿಕೆ
  4. ಸಚ್ಚಿದಾನಂದ ಹೆಗಡೆ - ಕಾರಂತಜ್ಜನಿಗೊಂದು ಪತ್ರ
  5. ನಾಗರಾಜ ವಸ್ತಾರೆ - ಹಕೂನ ಮಟಾಟ
  6. ಸುರೇಂದ್ರನಾಥ್ ಎಸ್. -  ಕಟ್ಟು ಕತೆಗಳು
  7. ಕರ್ಕಿ ಕೃಷ್ಣಮೂರ್ತಿ - ಗಾಳಿಗೆ ಮೆತ್ತಿದ ಬಣ್ಣ
  8. ಪದ್ಮನಾಭ ಭಟ್ ಶೇವ್ಕಾರ - ಕೇಪಿನ ಡಬ್ಬಿ
  9. ವಿಕ್ರಮ ಹತ್ವಾರ- ಝೀರೋ ಮತ್ತು ಒಂದು
  10. ಲೋಕೇಶ ಅಗಸನಕಟ್ಟೆ - ಹಟ್ಟಿಯೆಂಬ ಭೂಮಿಯ ತುಣುಕು
  11. ಡಾ. ವಿನಯಾ - ಊರ ಒಳಗಣ ಬಯಲು
  12. ಸುನಂದಾ ಪ್ರಕಾಶ ಕಡಮೆ - ಪುಟ್ಟ ಪಾದದ ಗುರುತು
  13. ಅಲಕ ತೀರ್ಥಹಳ್ಳಿ - ಈ ಕತೆಗಳ ಸಹವಾಸವೇ ಸಾಕು
  14. ಸಂದೀಪ ನಾಯಕ - ಗೋಡೆಗೆ ಬರೆದ ನವಿಲು
  15. ಕಣಾದ ರಾಘವ - ಮೊದಲ ಮಳೆಯ ಮಣ್ಣು
  16. ಬಸವಣ್ಣೆಪ್ಪಾ ಕಂಬಾರ - ಆಟಿಕೆ
  17. ದಯಾನಂದ - ದೇವರು ಕಚ್ಚಿದ ಸೇಬು
  18. ಮೌನೇಶ್ ಎಲ್. ಬಡಿಗೇರ್ - ಮಾಯಾ ಕೋಲಾಹಲ
  19. ಸ್ವಾಮಿ ಪೊನ್ನಾಚಿ - ಧೂಪದ ಮಕ್ಕಳು


ಅಂಕಿತ ಪುಸ್ತಕದ "ಅಂಕಿತ ಪ್ರತಿಭೆ" ಸರಣಿಯಲ್ಲಿ ಬಂದ ಕಥಾ ಸಂಕಲನಗಳು :

  1. ವಿಕಾಸ್ ನೇಗಿಲೋಣಿ - ಮಳೆಗಾಲ ಬಂದು ಬಾಗಿಲು ತಟ್ಟಿತು
  2. ಸಿಂಧು ರಾವ್ - ಸರ್ವಋತು ಬಂದರು
  3. ಸಚಿನ್ ತೀರ್ಥಹಳ್ಳಿ - ನವಿಲು ಕೊಂದ ಹುಡುಗ


A compilation of Best Kannada short stories by Sharath Bhat Seraje