Friday 2 December 2016

Best of foreign war films

Preparing a movie list after a long time. This time I am going for the foreign war films. There are people who have already watched films like Saving Private Ryan, Enemy at the gates, Full metal jacket, Platoon, A bridge too far, The big red ones and such. If you are one such movie buff and if you are looking for what else is out there, this list is for you.
Tae Guk Gi: The Brotherhood of War (2004): Korean. One of the most intense and bloodiest war movies out there. The war scenes are unflinchingly visceral, gruesome,frenetic and harrowing. That said, at the core of it is an emotional story of brothers that will pull your heartstrings.
Assembly (2007): A Chinese film showing the Chinese civil war. It starts with gritty and riveting battle sequences and goes one step further, it shows what happens once the war is over. It changes gears and becomes a moving tale of honor, heroism, and sacrifice.
The Front Line (2011): It is Set during the closing weeks of the war between South and North Korea, it follows a platoon of soldiers from the south as they try to take an important hill. It starts off as a mystery themed character piece and slowly turns into an intense, unrelenting survival story of brotherhood in the midst of a chaotic battle.
A Very Long Engagement (2004): Take one spoon of Raju Hirani, add two spoons of Terry Gilliam, sprinkle it with surrealism and you get Jean Pierre Jeunet. This French filmmaker is known for his dazzling visual style, whimsical,quirky characters and crazy colour palette. This film is no exception. Set during World War I, it is the story of one girl's search for her missing fiancee. Has war scenes set in the muddy trenches of World War I-era France.
The Tour (2008): A Serbian film about a troupe of goofy actors travelling in the war-torn regions of Bosnia and Serbia(Bosnian war). Part black comedy part horrors of war. That mixing of comedy and tragedy is what makes it interesting.
9th Company (2005): This provides a glimpse into the tragic Soviet occupation of Afghanistan through the eyes of a handful Russian soldiers. It is a bit like Full metal jacket blended with The Platoon set in the unforgiving landscapes of Afghanistan. A rousing combat film filled with action.
Come and See - The destruction of a Russian village seen through the eyes of a peasant boy. It is bizarre, disturbing, and haunting
The Brest Fortress (2010): About desperate Russians trying to protect their place from the invading troops. A good one time watch.
71 into the fire: is a South Korean film about a bunch of students trying to defend a strategically important territory. There is drama,rivalry,tension, a fairly decent battle choreography and all that. Nothing extraordinary, just an interesting watch.
Days of Glory (2006): About the journey of Africans who join the French army to fight against the Nazis. The film is about their struggles with discrimination and stuff. Nothing great but manages to show the world war from a completely different perspective. It is not an out and out action film, but there is action. Climactic battle is well choreographed and executed.
Red Cliff(Released as part 1 and part 2): This Chinese historical war movie is a grand, sweeping spectacle. The tactics, strategies, counter-moves,formations and stuff is what makes it special. It is flashy and breathtakingly massive. This was one of the primary inspirations for Bahubali.
The Admiral - Roaring Currents (2014): This one broke all the box office records in Korea, if you watch it you will know why. This is a period film showing Naval battle. The sea battles are rousing and epic. The scale is huge and magnificent. Drink some water if you have to in advance, you will not blink or get up for the last 30-40 minutes, the climactic battle goes on for 30-40 minutes, it is incredible and epic.
Ran: Akira Kurosawa's take on King Lear set in the 16th century feudal Japan. This must be one of the most visually arresting war films ever made, the battle scenes are colourful and electrifying. The film is grand-scaled, bleak, evocative and magnificent.

Some good films about soldiers/the ones set in the war zones that are not action films,ones that do not show combat/battle:
Black book
No man's land
The Burmese Harp (1956)
Welcome to Dongmakgol (2005)
J.S.A. (2000)
Suggestions are welcome 

ಸರಿಗನ್ನಡಂ ಗೆಲ್ಗೆ

ಕಳೆದ ಸಲ ನಾಡಹಬ್ಬಕ್ಕೆ ಇದೇ ವಿಷಯವಾಗಿ ನಾನು ಬರೆದಿದ್ದ ಲೇಖನ ನಿಮ್ಮ ನೆನಪಿನಲ್ಲಿ ಹಸುರಾಗಿ (ಹಸಿರಾಗಿ ಅಲ್ಲ) ಉಳಿದಿರಬಹುದು,ಇರಲಿ, ಈ ಬಗ್ಗೆ ಎಷ್ಟು ಬರೆದರೂ ಕಡಮೆಯೇ (ಕಡಿಮೆ ಅಲ್ಲ ) ಆಗ ಬರೆದದ್ದನ್ನೇ ಅನಂತರ ಸ್ವಲ್ಪ ಬದಲಾಯಿಸಿ,ಎಳೆದು ಬರೆದಿದ್ದೇನೆ ( ನಾನು ಅದನ್ನು ಬದಲಾಯಿಸಿದ್ದು ಮೊದಲ ಆವೃತ್ತಿಯನ್ನು ತಂದ "ಅನಂತರ", ಬರೆದ "ನಂತರ" ಅಲ್ಲ ). 
ಇಂಗ್ಲೀಷಿನಲ್ಲಿ "Mistakes we make while speaking English" ಎಂದೋ "Common English bloopers" ಅಂತಲೋ ಲೇಖನಗಳು ಆಗೀಗ ಬರುವುದುಂಟು, ಇನ್ನು grammar Nazi ಗಳು ಅಂತ ಕರೆಸಿಕೊಂಡವರಂತೂ ಅನ್ನ ನೀರಾದರೂ ಬಿಟ್ಟಾರು, ಇನ್ನೊಬ್ಬರು ಇಂಗ್ಲೀಷಿನ ಬಳಕೆಯಲ್ಲಿ ಮಾಡುವ ತಪ್ಪುಗಳನ್ನು ಮಾತ್ರ ಸುಮ್ಮನೆ ಬಿಡಲಾರರು. ಅದೇ ರೀತಿ ಕನ್ನಡದ ಬಳಕೆಯಲ್ಲಿ ಆಗುವ ತಪ್ಪುಗಳ ಬಗ್ಗೆ ಒಂದಷ್ಟು ಪುಟ್ಟ ಟಿಪ್ಪಣಿಗಳನ್ನು ಪೋಣಿಸಿ ಮಾಡಿದ ಟಿಪ್ಪಣಿ ಮಾಲೆಯಿದು.
ಟೀವಿ ವಾಹಿನಿಗಳಲ್ಲಿ ಬರುವ ಕನ್ನಡವನ್ನು, ಪತ್ರಿಕೆಗಳಲ್ಲಿ, ಜಾಹೀರಾತುಗಳಲ್ಲಿ(ಇದನ್ನೂ ಹಲವರು ಜಾಹಿರಾತು ಅಂತ ಮೊಟಕು ಮಾಡುತ್ತಾರೆ) ಬರುವ ಎಲ್ಲ ಭಾಷಾಸ್ಖಾಲಿತ್ಯದ ಅಂಶಗಳನ್ನು ಎತ್ತಿ ಆಡುವ, ಅವನ್ನು ತಿದ್ದುವ ಎಂಟೆದೆ ನನಗಂತೂ ಇಲ್ಲ, ಅದು ಅಷ್ಟು ಬೇಗ ಮಾಡಿ ಮುಗಿಸಬಹುದಾದ ಕೆಲಸವೂ ಅಲ್ಲ,ಇನ್ನು "ಶೀಲಾನ್ಯಾಸ", "ಹಾರ್ಧಿಕ","ಅಸಮಾರ್ಥ್ಯ", "ನೆರೆವೇರಿಸು", "ಮರೆತು ಬೀಡಿ" ಯಂತಹ ಪ್ರಯೋಗಗಳನ್ನು ಹುಡುಕಿ ತಿದ್ದುತ್ತಾ ಕುಳಿತರೆ ಅವರು ನಮಗೆ ತಿಂಗಳಿಗೆ ಇಷ್ಟು ಅಂತ ಕೊಡಬೇಕಾದೀತು. ಇಂತಿಪ್ಪ ಚಿತ್ರ ವಿಚಿತ್ರ ಭಾಷಾಪ್ರಯೋಗಗಳ ಕತ್ತಲು ಮುಸುಕಿರುವ ಅಪರರಾತ್ರಿಯಲ್ಲಿ (ಅದು ಅಪರಾತ್ರಿಯಲ್ಲ - ಅಪರರಾತ್ರಿ, ಅಂದರೆ ರಾತ್ರಿಯ second ಹಾಫ್, ಅಪರಾಹ್ಣ ಇದ್ದಂತೆ) ಕವಿದಿರುವ ಅಂಧಕಾರವನ್ನು ಓಡಿಸುವ (ಅಂಧಃಕಾರ ಅನ್ನಬೇಡಿ ಮತ್ತೆ !) ಧೈರ್ಯ ನನಗಿಲ್ಲ. ಹೆಚ್ಚೆಂದರೆ ಇದರ ಬಗ್ಗೆ ಅಲವತ್ತುಕೊಂಡು "ಅವಲತ್ತು" ಅನ್ನುವ ಅಸಂಬದ್ದ ರೂಪದ ಕಡೆ ಬೆರಳು ತೋರಿಸಬಹುದಷ್ಟೇ. ಒಂದು ಕಿರುಹಣತೆಯನ್ನು ಹಚ್ಚಿ ತೋರಿಸಬಹುದಷ್ಟೇ. ಇರಲಿ. 
ಮೊತ್ತ ಮೊದಲಿಗೆ (ಯಾರಲ್ಲಿ... ... ಇದನ್ನು "ಮೊಟ್ಟ ಮೊದಲು" ಅಂತ ತಪ್ಪು ತಪ್ಪಾಗಿ ಹೇಳುವವರನ್ನು ಎಳೆದು ತನ್ನಿ, ಅವರನ್ನು ಬೆಟ್ಟವೊಂದರ ತುಟ್ಟ ತುದಿಗೆ ... ಅಲ್ಲಲ್ಲ ... ತುತ್ತ ತುದಿಗೆ ಕೊಂಡೊಯ್ದು, ಅಲ್ಲಿಂದ ನೂಕುತ್ತೇವೆ ಅಂತ ಹೆದರಿಸಿ ಕಟ್ಟ ಕಡೆಗೆ ಅವರನ್ನು ಬಿಟ್ಟು ಬಿಡಿ !!) ಆಯಿತೇ ? ಈಗ ಪುನೀತ್ ಅವರ ಅಭಿಮಾನಿಗಳಿಗೆ ಒಂದು ಪ್ರಶ್ನೆ. ಅವರು ನಡೆಸಿ ಕೊಡುತ್ತಿದ್ದ ಕಾರ್ಯಕ್ರಮದ ಹೆಸರು ಹೇಳಿ ನೋಡೋಣ! ಏನಂದ್ರಿ ? ಕನ್ನಡದ "ಕೋಟ್ಯಾಧಿಪತಿ" ಅಂದ್ರಾ ? ಹಹಹಾ !! ಸಿಕ್ಕಿ ಹಾಕ್ಕೊಂಡ್ರಿ ನೋಡಿ. ಅದು ಕೋಟ್ಯಧಿಪತಿ ಆಗಬೇಕಿತ್ತು ,ಕೋಟ್ಯಾಧಿಪತಿ ಅಲ್ಲ. ಕೋಟಿ + ಅಧಿಪತಿ = ಕೋಟ್ಯಧಿಪತಿ. ಕಾರ್ಯಕ್ರಮ ಹೆಚ್ಚು ದೀರ್ಘವಾಗಿ ಇರ್ಲಿಲ್ಲ, ಹಾಗಾಗಿ ದೀರ್ಘ ಬೇಡ!
ಇದೇ ಜಾತಿಗೆ ಸೇರಿದ ಮತ್ತೊಂದು "ಜಾತ್ಯಾತೀತ", ನೀವು ಏನು ಬೇಕಾದರೂ ಅಂದುಕೊಳ್ಳಿ, ನಾನಂತೂ ಜಾತ್ಯಾತೀತನಲ್ಲ. ಹೌದು ಸ್ವಾಮೀ ! ನಾನು ಜಾತ್ಯಾತೀತನಲ್ಲ ! ಮತ್ತೇನು ಹಾಗಾದರೆ ? ನಿಮ್ಮದೂ ಒಂದು ನಾಗರಿಕತೆಯೇ ( ಇಲ್ಲಿನ "ರಿ" ಅಕ್ಷರಕ್ಕೂ ದೀರ್ಘ ಕೊಟ್ಟು "ನಾಗರೀಕತೆ" ಮಾಡಬಾರದು, ನಗರ --> ನಾಗರಿಕ --> ನಾಗರಿಕತೆ)  ಅಂತ ಕಣ್ಣು ಹೊರಳಿಸಿದರೆ, "ನಾನು ಜಾತ್ಯತೀತ" ಅಂತ ದೀರ್ಘ ಇಲ್ಲದೆ ಹೇಳಿ ದೀರ್ಘವಾದ ಉಸಿರು ಬಿಡುತ್ತೇನೆ. ಆಧ್ಯಾತ್ಮ ಎಂಬಲ್ಲಿಯೂ ಉದ್ದ ಎಳೆಯದೆ, ಅಧಿ + ಆತ್ಮ  = "ಅಧ್ಯಾತ್ಮ" ಎಂದರೆ ಸಾಕು. ನಗರ --> ನಾಗರಿಕ ಆಗುವಂತೆ ಅಧ್ಯಾತ್ಮ --> ಆಧ್ಯಾತ್ಮಿಕ ಆಗುವಾಗ ದೀರ್ಘ ಥಟ್ಟನೆ ಹಾಜರಾಗುತ್ತದೆ. ಈ ಅಧ್ಯಾತ್ಮದ ಕಥೆ ಕೇಳಿ ಜೀವನದಲ್ಲಿ ಜಿಗುಪ್ಸೆ ಬಂತೇ ? ಅಯ್ಯಯ್ಯೋ ! ಹೇಗೂ ಬರುವುದೇ ಆದರೆ "ಜುಗುಪ್ಸೆ"ಯೇ ಬರಲಿ, ಜಿಗುಪ್ಸೆ ಬೇಡ.

ಈ ದೀರ್ಘವು "ಪ್ರಕಾರ" ಅನ್ನುವ ಶಬ್ದವನ್ನಂತೂ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿದೆ. ಪ್ರಕಾರ ಅನ್ನಬೇಕಾದಲ್ಲಿ ಸುಮ್ಮನೆ ದೀರ್ಘವನ್ನು "ಎಳೆದು" ತಂದು "ಪ್ರಾಕಾರ" ನಿರ್ಮಾಣ ಮಾಡುವವರಿದ್ದಾರೆ. ಉದಾ : ಯಕ್ಷಗಾನ ಒಂದು ಕಲಾ ಪ್ರಕಾರ, ಪ್ರಾಕಾರ ಅಲ್ಲ. ಪ್ರಾಕಾರ ಅಂದರೆ ಸುತ್ತಲೂ ಆವರಿಸಿ ಇರುವ ಸುತ್ತುಗೋಡೆ. ಕೋಟೆಗಳಲ್ಲಿ ಪ್ರಾಕಾರಗಳು ಇದ್ದವು, ದೇವಸ್ಥಾನಗಳಲ್ಲಿ ಗರ್ಭ ಗುಡಿಯ ಸುತ್ತ ಪ್ರಾಕಾರಗಳು ಇರುತ್ತವೆ, ಹೀಗೆ. ಇನ್ನೊಮ್ಮೆ ಪ್ರಕಾರ ಅಂತ ಹೇಳಬೇಕಾದಲ್ಲಿ "ಪ್ರಾಕಾರ" ಅಂತ ಹೇಳಿದರೆ ಆ ಸೊಲ್ಲು ತನ್ನ ದುರದೃಷ್ಟ (ಇಲ್ಲಿಯೂ ಅದೇ ಕತೆ ,ಅದು ದುರಾದೃಷ್ಟ ಅಲ್ಲ, ದುರ್ + ಅದೃಷ್ಟ = ದುರದೃಷ್ಟ) ವನ್ನು ನೆನೆದು ಮಮ್ಮಲ ಮರುಗಿ ಯಾವುದಾದರೂ ಎತ್ತರದ ಪ್ರಾಕಾರದಿಂದ ಕೆಳಗೆ ಹಾರಿ ಪ್ರಾಣಬಿಟ್ಟೀತು, ಎಚ್ಚರ !
ಹಾಗೆಯೇ "ಪೂರ್ವಾಗ್ರಹ", ಇರುವಂತೆ ಕಾಣುವುದಿಲ್ಲ ,ಇದು ಪೂರ್ವ+ ಆಗ್ರಹ ಅಲ್ಲ, ಪೂರ್ವ + ಗ್ರಹ (ಗ್ರಹಿಕೆ) ಎಂದರೆ ವಿಷಯ ತಿಳಿಯದೆ ಮನಸ್ಸಿನಲ್ಲಿ ಮೊದಲೇ ಮಾಡಿಕೊಂಡ ಅಭಿಪ್ರಾಯ, ಹಾಗಾಗಿ ಪೂರ್ವಗ್ರಹ ಅಂದರೆ ಸೂಕ್ತವೇನೋ.

ಇಷ್ಟು ಹೇಳಿದೆ ಅಂತ ಎಲ್ಲೆಡೆಯಲ್ಲಿಯೂ ದೀರ್ಘ ಉಳಿಸಿ ಜಿಪುಣರಾಗಬೇಡಿ ಮತ್ತೆ. ದೀರ್ಘ ಬೇಕಾದಲ್ಲಿ ದೀರ್ಘ ಹಾಕದೆ ಇರುವುದನ್ನ ನೋಡಬೇಕಾದರೆ ಇಲ್ಲೊಂದು  ಹೋಟೆಲಿಗೆ ಬನ್ನಿ. ಅಲ್ಲಿ "ಉಪಹಾರ ದರ್ಶಿನಿ" ಅನ್ನುವ ಬೋರ್ಡು ಕಣ್ಣಿಗೆ ರಾಚುತ್ತದೆ. ಅಲ್ಲಿ ನಿಮಗೆ ಯಾರೂ ಹಾರ ಹಾಕುವುದಿಲ್ಲ. ಅಲ್ಲಿ ನಿಜವಾಗಿಯೂ ಸಿಗುವುದು ಉಪ + ಆಹಾರ = ಉಪಾಹಾರ. ಇನ್ನು ಸಸ್ಯಹಾರ, ಮಾಂಸಹಾರ ಬೇಡವೇ ಬೇಡ. ಚಿನ್ನದ ಹಾರ, ಮುತ್ತಿನ ಹಾರ , ರತ್ನದ ಹಾರ ಎಲ್ಲ ಇರುವಾಗ ಸುಮ್ನೆ ಮಾಂಸದ ಹಾರ ಯಾಕೆ ಹಾಕಿಕೊಳ್ತೀರಿ! ಮಾಂಸಹಾರ ಬಿಟ್ಟು ಮಾಂಸ + ಆಹಾರ = ಮಾಂಸಾಹಾರ ತಿನ್ನಿ( ನೀವು ಮಾಂಸಾಹಾರಿ ಆಗಿದ್ದರೆ! ), ಹಾರ ಅನ್ನುವುದಕ್ಕೆ ಅರ್ಪಣೆ, ನೈವೇದ್ಯ ಅನ್ನುವ ಅರ್ಥ ಸಂಸ್ಕೃತದಲ್ಲಿ ಉಂಟಾದರೂ ಆಹಾರ ಅನ್ನುವುದು ಸಹಜ ಮತ್ತು intuitive ಅಂತ ನನಗನ್ನಿಸುತ್ತದೆ, ಮೇಲಾಗಿ ಹಾರ ಅಂದರೆ ಬಲಿ ಅಂತಲೂ ಆಗುತ್ತದೆ(ಕೆರೆಗೆ ಹಾರ ಅಂತ ಒಂದು ನಾಟಕ ಉಂಟಲ್ಲ). ಹಾಗೆಯೇ "ಸತ್ಯಮೇವ ಜಯತೇ" ಅನ್ನುವ ಘೋಷ ವಾಕ್ಯ ಸರಿ, "ಜಯತೆ" ಅನ್ನಬಾರದು, ದೀರ್ಘ ಸೇರಿಸಿ "ಜಯತೇ" ಅನ್ನಬೇಕು. ಇನ್ನು ಆಗಾಗ ನಮ್ಮಲ್ಲಿ ಮಧ್ಯಂತರ ಚುನಾವಣೆಗಳು ಬರುತ್ತವೆ, ಆದರೆ ಮಧ್ಯ + ಅಂತರ = ಮಧ್ಯಾಂತರ ಎಂಬುದೇ ಸರಿಯಾದ ರೂಪ (ದೇಶಾಂತರ, ಪಕ್ಷಾಂತರಗಳನ್ನು ನೆನಪು ಮಾಡಿಕೊಳ್ಳಿ). ವರ್ಷಧಾರೆ/ವರ್ಷಕಾಲ, ಸುನಿಲ ಇಂತಹಾ ಪ್ರಯೋಗಗಳಿಗೆ ಧೀರ್ಘ ಹಾಕಿ ವರ್ಷಾಧಾರೆ, ಸುನೀಲ ಅಂತ ಮಾಡಿಕೊಂಡರೆ ವ್ಯಾಕರಣ ಹೇಳಿಕೊಡುವ ಮಾಷ್ಟ್ರುಗಳು ನಿಮ್ಮ ಬೆನ್ನು ತಟ್ಟಿಯಾರು.
ಹೋಟೆಲು ಅಂದಾಗ ನೆನಪಾಯಿತು, ನೀವು ಶಾಖಾಹಾರಿ ಹೋಟೆಲ್ಗಳನ್ನು ನೋಡಿದ್ದೀರಾ ? 'ಶಾಖ’ ಎಂದರೆ ಬಿಸಿಯಾದದ್ದು. ಆದ್ದರಿಂದ ‘ಶಾಖಾಹಾರ’ ಅಂದರೆ ‘ಬಿಸಿಯಾದ ಅಡುಗೆ’ ಎಂದಾಗಬಹುದು ಮತ್ತು ಇಂತಹ ಹೋಟೆಲುಗಳಲ್ಲಿ ತಣಿದ ಆಹಾರವೇ ಸಿಗುತ್ತದೆ! ಶಾಕ = ತರಕಾರಿ(ಶಾಕಾಂಬರಿ ದೇವಿಯನ್ನು ನೆನೆಯಿರಿ), ನೀವು ಒಂದು ಹೊಸ ಹೋಟೆಲು ತೆರೆದರೆ ಶಾಕಾಹಾರಿ ಅಂತಲೇ ಬರೆಸಿ.
ಮಹಾಪ್ರಾಣದಲ್ಲಿ ಹೇಳಿದರೆ ಗೌರವ ಹೆಚ್ಚು ಅಂತ ನಮ್ಮ ಜನ ಭಾವಿಸುವುದರಿಂದ ಹೀಗೆ ಪ್ರಯೋಗ ಮಾಡುತ್ತಾರೆ. ಶಾಖ ಅಂದರೆ ಮರ್ಯಾದೆ ಜಾಸ್ತಿ, ಶಾಕ ಅಂದರೆ ಕಡಿಮೆ ಅನ್ನುವ ಭಾವನೆ! ಹುಲಿ, ಸಿಂಹಗಳೇನೋ ಮಹಾಪ್ರಾಣಿಗಳೇ, ಆದರೆ ಅವುಗಳ ಕೂಗಿನ ಮೊದಲಕ್ಷರ ಮಹಾಪ್ರಾಣವಲ್ಲ. ಘರ್ಜನೆ ಅನ್ನುವ ಶಬ್ದ ಇಲ್ಲ, ಅದನ್ನು ಗರ್ಜನೆ ಅಂದರೆ ಸಾಕು.

ನನ್ನ ಮೇಲೆ ಸಿಟ್ಟು ಬಂದರೆ, ಆ ಸಿಟ್ಟನ್ನು ಕ್ರೋಢೀಕರಿಸಬೇಡಿ, ಬಾಲ ಇಲ್ಲದೆ "ಕ್ರೋಡೀಕರಿಸಿ"ದರೆ ಸಾಕು, "ದಾಳಿ" ಮಾಡಿ , "ಧಾಳಿ" ಬೇಡ. ಇನ್ನೂ ನಿಮ್ಮ ಕೋಪಾಗ್ನಿ ಕೊತ ಕೊತ ಕುದಿದರೆ, ಬೇಕಾದರೆ ನ್ಯಾಯಾಲಯಕ್ಕೆ ಹೋಗಿ. ಆದರೆ ಉಚ್ಚ ನ್ಯಾಯಾಲಯಕ್ಕೆ ಹೋದರೆ ಸಾಕು, ಉಚ್ಛ ನ್ಯಾಯಾಲಯ ಬೇಡ. 'ಚ' ಒತ್ತು ಸಾಕು. 'ಛ' ಒತ್ತು ಬೇಡ. 'ಅವಘಡ'ದಲ್ಲಿ 'ಘ' ಮತ್ತು 'ಢ' ಎರಡನ್ನೂ ಮಹಾಪ್ರಾಣ ಮಾಡುವವರಿದ್ದಾರೆ. ಇಲ್ಲಿಯೂ ನೀವು ಊಹಿಸಿರಬಹುದಾದಂತೆ 'ಅವಗಡ' ಪದ ಸರಿಯಾದ ಬಳಕೆ. ಅವಗಡ ಅಂದರೆ ವಿಪತ್ತು, ಅಪಘಾತ. ಮಹಾಪ್ರಾಣದ ವ್ಯಾಮೋಹಕ್ಕೆ ಕಡೇ ಉದಾಹರಣೆ: ಕುಂಕುಮಕ್ಕೆ ಇರುವ ಶಬ್ದ. ಸಿಂದೂರ ಅಂದರೆ ಕುಂಕುಮ (ಬಾಲ ಇಲ್ಲ). ಸಿಂಧುರ ಅಂದರೆ ಆನೆ (ಬಾಲ ಇದೆ, ಹಾಗಾಗಿ ಆನೆ ಅನ್ನಿ!), ಸಿಂಧೂರ ಅಂದರೆ ಏನೂ ಅಲ್ಲ, ಆದರೆ ಪಕ್ಕನೆ ಅದು ಸಿಂಧುರ (ಆನೆ) ಎಂಬಂತೆ ನಿಮ್ಮ ರಮಣೀಮಣಿಗೆ ಕೇಳಿ ನೀವು ಬೈಸಿಕೊಳ್ಳುವಂತಾದರೆ ನಾನು ಜನ ಅಲ್ಲ, ಈಗಲೇ ಹೇಳಿಬಿಟ್ಟಿದ್ದೇನೆ! ಕವಿ ಮುದ್ದಣನು ಲಲನೆಯೊಬ್ಬಳನ್ನು "ಸಿಂಧುರ ಬಂಧುರ ಯಾನೆ" ಅಂದರೆ ಆನೆಯಂತೆ ಗತ್ತಿನಿಂದ ನಡೆಯುವವಳು ಅಂದದ್ದನ್ನು ಮರೆಯಬೇಡಿ. 
ವಿದ್ಯಾಭ್ಯಾಸ ಮಾಡಿದವರೂ, ತಿಳಿವಳಿಕೆ ಇದ್ದವರೂ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಅದನ್ನೆಲ್ಲಾ ಬಿಡಿ. "ವಿದ್ಯಾಭ್ಯಾಸ" ಅನ್ನುವ ಶಬ್ದವನ್ನೇ ತಪ್ಪಾಗಿ "ವಿಧ್ಯಾಬ್ಯಾಸ" ಅಂತ ಬರೆಯುವವರು ಎಷ್ಟು ಜನ ಇಲ್ಲ! ನೀವು ಅದೇನು ಕಲಿತು ಗುಡ್ಡೆ ಹಾಕಿದರೂ ಅದು ವಿದ್ಯೆ(ಬಾಲ ಇಲ್ಲ ) ವಿಧ್ಯೆ ಅಲ್ಲ. ವಿದ್ಯೆ ಕಲಿತರೆ ಕೆಲವರಿಗೆ ಕೋಡು ಬರುವ ಹಾಗೆ ವಿದ್ಯೆಗೆ ಬಾಲ ಬಂದು ವಿಧ್ಯಾ ಆಗುವುದು ಬೇಡ. ಅಭ್ಯಾಸವನ್ನ ಅಬ್ಯಾಸ ಮಾಡಿದರೆ ಅದೂ ಆಭಾಸವೇ, ಈ ಅಭ್ಯಾಸ ಬಿಟ್ಟು ಬಿಡಿ. ತಿಳಿಯಿತೇ ? ಈಗ "ತಿಳುವಳಿಕೆ" ಬಂತು ಅನ್ನದಿರಿ, ತಿಳಿ --> ತಿಳಿವಳಿಕೆ, ತಿಳು ಅಂತ ಪ್ರಯೋಗ ಇಲ್ಲ. ಇದೇ ಜಾತಿಯದ್ದು ಬರೆ --> ಬರೆವಣಿಗೆ, ಆದರೆ ಪ್ರಯೋಗದ ಬಲದಿಂದ ಈಗೀಗ ಬರವಣಿಗೆ ಅನ್ನುವುದನ್ನೂ ಸಾಧು ರೂಪ ಅಂತ ಮಾನ್ಯ ಮಾಡುತ್ತಾರೆ. ಇರಲಿ. ತಿಳಿ ಮತ್ತು ತಿಳು ತರದ್ದೇ ಮತ್ತೊಂದು ಮಡಕೆ ಮತ್ತು ಮಡಿಕೆ, ಮಡಕೆ ಅಂದರೆ ಮಣ್ಣಿನ ಪಾತ್ರೆ,ಗಡಿಗೆ. ಮಡಿಕೆ ಅಂದರೆ ನೆರಿಗೆ, ಮಡಿಸಿದ್ದು, ಪದರ ಅಂತೆಲ್ಲ ಅರ್ಥಗಳು. ಇದೆಲ್ಲ ಗೊತ್ತಿರಲಿಕ್ಕೆ ನಾನೇನೂ ಪರಿಣಿತನಲ್ಲ ಅನ್ನುವ ಬದಲು "ಪರಿಣತ" ಅನ್ನುವ ಶಬ್ದ ಪ್ರಯೋಗ ಮಾಡಿ ನಿಜಕ್ಕೂ ಪರಿಣತರಾಗಿ.
ಹೀಗೆಯೇ ಅರಳು-ಮರುಳು, ಇದನ್ನು ಹಲವರು ಅರಳು-ಮರಳು ಅಂತ ಪ್ರಾಸಬದ್ಧವಾಗಿಯೇ ಅಬದ್ಧ ಪ್ರಯೋಗ ಮಾಡುತ್ತಾರೆ, ಮರಳು ಅಂದರೆ ಹೊಯಿಗೆ, sand. ಮರುಳು ಅಂದರೆ ಹುಚ್ಚು. ಹೀಗೆ ಪ್ರಯೋಗ ಮಾಡಿ ಮರಳಿಗಾಗಿ ಮರುಳರಾಗುವ ನಮ್ಮ ಸ್ಯಾಂಡ್ ಮಾಫಿಯಾದವರಿಗೆ ಸಿಟ್ಟು ಬರಿಸಹೋಗಬೇಡಿ  ಬೆಳಗು, ಬೆಳಗಾಗು ಇಂತಹಾ ಪ್ರಯೋಗಗಳಿಂದ ಬೆಳಗ್ಗೆ ಬಂದಿದೆ, ಇದು ಜನರ ಬಾಯಿಗೆ ಸಿಕ್ಕಿ ಬೆಳಗ್ಗೆಯೇ "ಬೆಳಿಗ್ಗೆ" ಅಂತ ಆಗುವುದೂ ಮಾಮೂಲಿಯೇ.

ಇನ್ನು ಭಾಷೆಯನ್ನು ಒಲಿಸಿಕೊಂಡಿರುವ ಸಾಹಿತಿಗಳೂ ಒಮ್ಮೊಮ್ಮೆ ತಪ್ಪು ಮಾಡುತ್ತಾರೆ. ಖ್ಯಾತನಾಮರೊಬ್ಬರ ಒಂದು ಪುಸ್ತಕದ ಹೆಸರೇ ಸಮಕ್ಷಮ(ಸಮಕ್ಷ ಅನ್ನುವ ಶಬ್ದದ ತಪ್ಪು ರೂಪ, ಅಕ್ಷ = ಕಣ್ಣು, ಸಮಕ್ಷ = ಕಣ್ಣಿನ ಮುಂದೆ). ನಮ್ಮಲ್ಲಿ ಒಂದು ಕಾಲದಲ್ಲಿ ಬರೆಯುತ್ತಿದ್ದ ಒಂದಷ್ಟು  ಲೇಖಕರನ್ನು ಪ್ರಗತಿಶೀಲರು ಅಂತ ಕರೆಯುವ ಪರಿಪಾಠ ಇದೆ, ಪ್ರಗತಿಶೀಲರು ಅಂದರೆ ಪ್ರಗತಿ ಹೊಂದುವ ಸ್ವಭಾವದವರು (ಶೀಲ = ಸ್ವಭಾವ, ಸುಶೀಲ = ಒಳ್ಳೆಯ ಸ್ವಭಾವದವಳು),  ಈ ಲೇಖಕರೋ ಪಾಪ ಸಮಾಜದಲ್ಲಿ ಪ್ರಗತಿಯಾಗಲಿ ಅಂತ ಬಯಸಿದವರು, ಅವರನ್ನು ಪ್ರಗತಿಪರರು ಅನ್ನಬೇಕಿತ್ತು.ಸೃಜನಶೀಲ ಅನ್ನುವುದೂ ಸರ್ಜನಶೀಲ ಅನ್ನುವ ಶಬ್ದದ ಅಶುದ್ಧ ರೂಪವೇ, ಇದನ್ನಿನ್ನು ಬದಲಾಯಿಸುವುದು ಕಷ್ಟ. ಡಿ ಎಲ್ ನರಸಿಂಹಾಚಾರ್ಯರು "ವಿದ್ವತ್ಪೂರ್ಣವಾದ ಲೇಖನಗಳನ್ನು ಬರೆದಿದ್ದಾರೆ" ಅಂತ ಬರೆಯುವವರಿದ್ದಾರೆ. ವಿದ್ವತ್ = ಪಂಡಿತ (ವಿದ್ವತ್ಸಭೆ = ಪಂಡಿತರ ಸಭೆ). ಹೀಗಾಗಿ ವಿದ್ವತ್ಪೂರ್ಣ = ಪಂಡಿತರಿಂದ ತುಂಬಿದ, ವಿದ್ವತ್ತಾಪೂರ್ಣ = ಪಾಂಡಿತ್ಯದಿಂದ ತುಂಬಿದ ಅಂತಾಗುತ್ತದೆ. ದೇಶಕಾಲ ಅನ್ನುವ ಪದವನ್ನೂ ನಮ್ಮ ಸಾಹಿತಿಗಳು ಅರ್ಥಮಾಡಿಕೊಂಡಂತಿಲ್ಲ. Space ಮತ್ತು time ಒಂದಕ್ಕೊಂದು ಹೆಣೆದುಕೊಂಡಿರುತ್ತದೆ ಬರೀ ಸ್ಪೇಸ್ ಅನ್ನುವುದಕ್ಕೂ ಬರೀ ಟೈಮ್ ಅನ್ನುವುದಕ್ಕೂ ಅರ್ಥ ಇರುವುದಿಲ್ಲ, ಅವೆರಡನ್ನೂ ಜೊತೆ ಜೊತೆಯಾಗಿಯೇ ಹೇಳಬೇಕು(spacetime continuum) ಅಂತ ಐನ್ ಸ್ಟೀನ್ ಹೇಳಿದ್ದಾರೆ. ಹೀಗಾಗಿ, ಎಪ್ಪತ್ತರ ದಶಕದ ರಶಿಯಾ, ಮುಗಾಬೆಯ ಕಾಲದ ಜಿಂಬಾಬ್ವೆ, ಚಾಲುಕ್ಯರ ಕಾಲದ ಕರ್ನಾಟಕ ಅನ್ನುವ ಪ್ರಯೋಗಗಳಲ್ಲಿ ಕಾಣುವ ಹಾಗೆ ಅರ್ಥ ಬರಬೇಕಾದರೆ ದೇಶ ಮತ್ತು ಕಾಲ ಎಂಬ ಪದಗಳ  ನಡುವೆ ಸ್ಪೇಸ್ ಕೊಟ್ಟು ಬೇರೆಬೇರೆಯಾಗಿ ಬರೆಯಬೇಕು.  

ಬೊಂಬೆಯಾಟವಯ್ಯ ಹಾಡು ಕೇಳಿದ್ದೀರಲ್ಲ ? ಆ ಚಿತ್ರದಲ್ಲಿ ನಮ್ಮ ಕಣ್ಣೀರು ಸ್ಪೆಷಲಿಸ್ಟ್ ಶೃತಿ ನಟಿಸಿದರೆ ಅದನ್ನು ಏನಂತ ಹೇಳಬಹುದಿತ್ತು? ಶ್ರುತಿ ಸೇರಿದಾಗ ಚಿತ್ರದಲ್ಲಿ ಶೃತಿ ಸೇರಿದಾಗ!! ಶ್ರುತಿ ಅಂದರೆ ಸರಿ. ಶೃತಿ ಅಂದರೆ ಏನು ಅಂತ ಗೊತ್ತಾದರೆ ಆ ನಟಿ ಕಣ್ಣೀರು ಸುರಿಸಬಹುದೇನೋ( 'ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥ). ಇದೇ ರೀತಿ ಧ್ರುವ ಅಂದರೆ ಸರಿ, ಧೃವ ಅಂದರೆ ತಪ್ಪು.
ದೀಪಾವಳಿ, ರಾಜ್ಯೋತ್ಸವ ಎಲ್ಲ ಒಟ್ಟೊಟ್ಟಿಗೆ ಬಂತು ಅಂತ ಆನಂದತುಂದಿಲರಾಗಿ "ಶುಭಾಷಯ" ಎಂದು ತಪ್ಪಾಗಿ ಶುಭ ಹಾರೈಸಬೇಡಿ. ಶುಭ + ಆಶಯ = ಶುಭಾಶಯ ಅಂದರೆ ಸಾಕು. ಈ ಹಬ್ಬಗಳ ಪ್ರಾಧಾನ್ಯತೆ, ಪಾವಿತ್ರ್ಯತೆಯನ್ನು ಕೊಂಡಾಡಿ, ಎಲ್ಲರೂ ಜೊತೆ ಸೇರಿ ನಮ್ಮ ಐಕ್ಯತೆ, ಸೌಹಾರ್ದತೆ ಹೆಚ್ಚುತ್ತದೆ ಅನ್ನಬೇಡಿ. ಪ್ರಧಾನ --> ಪ್ರಾಧಾನ್ಯ ಅಥವಾ ಪ್ರಧಾನತೆ, ಇಷ್ಟು ಸಾಕು. ಕಡೆಗೆ ಒಂದು ಕೊಂಡರೆ ಒಂದು ಉಚಿತ ಅನ್ನುವಂತೆ "ತೆ" ಸೇರಿಸಿ ಪಾವಿತ್ರ್ಯವನ್ನು ಪಾವಿತ್ರ್ಯತೆ, ಪ್ರಾವೀಣ್ಯವನ್ನು ಪ್ರಾವೀಣ್ಯತೆ ಮಾಡಿ ಕನ್ನಡ ಮೇಷ್ಟ್ರುಗಳ ಹತ್ತಿರ ಬೈಸಿಕೊಳ್ಳಬೇಡಿ. ಇನ್ನು ರಸ್ತೆ ಡಾಮರೀಕರಣ, ಅಗಲೀಕರಣ ಎಲ್ಲ ಹೇಗೂ ಬೇಡ. ಹೀಗೇ ಸಿಕ್ಕ ಸಿಕ್ಕಲ್ಲಿ "ಕರಣ" ಸೇರಿಸಿದರೆ ಮುಂದೆ ಹಬ್ಬ ಆಚರಿಸೀಕರಣ, ತಿಂಡಿ ತಿನ್ನೀಕರಣ ಎಲ್ಲ ಬಂದರೂ ಬಂದೀತು, ಜೋಕೆ!
ಇದನ್ನು ಓದಿ ಸುಸ್ತಾದೆ, ನಿಶ್ಯಕ್ತಿ ಆಗಿದೆ ಅನ್ನಬೇಡಿ. ಅದು ಶ್ಯಕ್ತಿ ಅಲ್ಲ, ಶಕ್ತಿ. ನಿಃ + ಶಕ್ತಿ = ನಿಶ್ಶಕ್ತಿ ('ಯ' ಒತ್ತು ಅಲ್ಲ 'ಶ' ಒತ್ತು). ಮಹಾಭಾರತದಲ್ಲಿ ಬರುವುದು ದುಶ್ಯಾಸನ ಅಲ್ಲ, ಅವನು ದುಶ್ಶಾಸನ . "ಅನಾವಶ್ಯಕ" ಇಷ್ಟು ಉದ್ದ ಬರ್ದಿದ್ದಾನೆ ಅಂದಿರಾ ? ನೋಡಿ ಅದೂ ಸರಿಯಲ್ಲ, ಇದರ ಬಗ್ಗೆ ವಿವರಣೆ ಅನವಶ್ಯಕ!! ನೀವು ಹೇಳಿದ್ದನ್ನೆಲ್ಲ ಕರಾರುವಕ್ಕಾಗಿ ಪಾಲಿಸುತ್ತೇವೆ ಅಂದುಬಿಟ್ಟೀರಿ ಮತ್ತೆ! ಕರಾರುವಾಕ್= ಕರಾರು + ವಾಕ್ (ವಾಕ್=ಮಾತು) ಅಂದರೆ ಕರಾರಿನ ಮಾತಿನಂತೆ, ಒಪ್ಪಂದದ ಮಾತಿನಂತೆ, ನಿರ್ದಿಷ್ಟವಾಗಿ ಅನ್ನುವ ಅರ್ಥ. 

ಮೊನ್ನೆ ಯಕ್ಷಗಾನದ ಕರೆಯೋಲೆಯೊಂದರಲ್ಲಿ, "ಈ ವೇದಿಕೆಯಲ್ಲಿ ಅಪಘಾತಕ್ಕೊಳಗಾದ ಕಲಾವಿದನಿಗೆ ಸನ್ಮಾನ ಮಾಡಲಾಗುವುದು" ಅಂತ ಬರೆದದ್ದನ್ನು ನೋಡಿ ಮಂಡೆಬಿಸಿಯಾಯಿತು, ವೇದಿಕೆಯಲ್ಲಿ ಅಪಘಾತವಾಯಿತೇ ಅಂದುಕೊಂಡೆ. ಆಮೇಲೆ ಗೊತ್ತಾಯಿತು, ಅಪಘಾತ ಆದದ್ದು ಬೇರೆಕಡೆ, ಸನ್ಮಾನ ಆಗಲಿರುವುದು ವೇದಿಕೆಯಲ್ಲಿ ಅಂತ ! ಇದೇ ರೀತಿ ಇನ್ನೊಬ್ಬರು, "ದೇವರ ನಾಮ ಸ್ಮರಣೆಯಿಂದ ಬರಬಹುದಾದ ಆಪತ್ತುಗಳು ತೊಲಗುತ್ತವೆ" ಅಂದಾಗ, ದೇವರ ನಾಮಸ್ಮರಣೆಯಿಂದ ಆಪತ್ತು ಬರುತ್ತದೆಯೇ ಅಂತ ಅವಾಕ್ಕಾಗಿದ್ದೆ. X ಅನ್ನುವುದು Y ಅನ್ನುವುದನ್ನು ವಿವರಿಸುತ್ತದೆ ಅಂತಾದರೆ X ದಿಲ್ಲಿಯಲ್ಲಿಯೂ Y ಕನ್ಯಾಕುಮಾರಿಯಲ್ಲಿಯೂ ಇದ್ದರೆ ಹೀಗಾಗುತ್ತದೆ. ಅವೆರಡು ಹತ್ತಿರಹತ್ತಿರ ಇದ್ದರೆ ಕನ್ನಡ ಶಿಕ್ಷಕರು ನಿಮ್ಮ ಬಾಯಿಗೆ ಕಲ್ಲುಸಕ್ಕರೆ ಹಾಕುತ್ತಾರೆ. "ಹೊಸ ನೇತ್ರರೋಗದ ಆಸ್ಪತ್ರೆ" , ಒಂದು ಎಕರೆ ಬೆಲೆಬಾಳುವ ಸ್ಥಳ", "ಡೈನಿಂಗ್ ಹಾಲಿನಲ್ಲಿ ಸ್ನಾನ ಮಾಡಿ ಊಟಕ್ಕೆ ಕೂತಿದ್ದೆ"  ಅಂತೆಲ್ಲ ವಾಕ್ಯ ರಚನೆ ಮಾಡಿ X ಯಾವುದು, Y ಯಾವುದು ಅಂತ ಕಕ್ಕಾಬಿಕ್ಕಿಯಾಗುವಂತೆ ಮಾಡಿದರೆ, ನಿಮ್ಮ ಬಾಯಿಗೇ ಕೈ ಹಾಕಿ, ಮೊದಲು ಹಾಕಿದ ಕಲ್ಲುಸಕ್ಕರೆಯನ್ನು ಕಿತ್ತುಕೊಳ್ಳುವುದಾಗಿ ನನ್ನ ಗುರ್ತದ ಕನ್ನಡ ಪಂಡಿತರೊಬ್ಬರು ಹೇಳಿದ್ದಾರೆ ! 
ಇಲ್ಲಿ ಹೇಳಿರುವ ಎಲ್ಲ "ಪ್ರಕಾರ"ದ ತಪ್ಪುಗಳನ್ನು "ಕೂಲಂಕಷ"ವಾಗಿ ಪರಿಶೀಲಿಸಿ ನೀವು ಹೇಳಿದ್ದನ್ನು "ಕರಾರುವಾಕ್ಕಾಗಿ" ಪಾಲಿಸುತ್ತೇನೆ ಅಂತ ಭರವಸೆ ಕೊಟ್ಟರೆ ನಾನೂ ಇಂತದ್ದನ್ನೆಲ್ಲ ಬರೆಯುವುದನ್ನು ನಿಲ್ಲಿಸುತ್ತೇನೆ ! 

The secret life of Passwords

I am writing on a math related topic yet again. We will talk about passwords.
Promise me that you would not inform the police, CBI,RAW,FBI,CIA,KGB, Mossad etc. about this and I will share a secret with you! Well, here is the thing. I know passwords that other people use -- At least 1 lakh of them and just for kicks I collected some 7 lakh + credit/debit card pin numbers as well. I am not lying. And I am not in touch with Ajith Doval or Tiger or any other ex spy. How on earth can I make such lofty claims then?
Every once in a while hackers steal passwords and post them publicly. There was this news about the LinkedIn Data breach, there was this hullabaloo about the Dropbox, Yahoo mail and Adobe data breaches. And people have analysed such publicly available data. These analyses have time and again revealed that Einstein was right when he said this: Two things are infinite: the universe and human stupidity; and I'm not sure about the universe.
If your password is 123456 or "password" or 12345678 or welcome or abc123, Congratulations to you! You have made Einstein proud. These are the top candidates in the pile of the most popular ones and as you might have guessed, these passwords are very easy to guess. Those geniuses with "iloveyou",monkey,123123,princess and qwerty can stop smiling now. There are probably more than 2 lakh people who use one of these! Analysis on Credit card PINs was even more surprising. Of the 35 lakh numbers analysed nearly 11% were "1234"!! 1111 is the 2nd most popular one with 0000 taking the Bronze medal. If you know these 3 numbers you know the PINs for at least 7 lakh credit cards!! Many among these 11% people were probably thinking that 1234 is one of those incredibly difficult numbers to predict. Human beings are so very predictable when it comes to numbers and maths.
All that leads us to other interesting questions. How exactly are these passwords stored and how hackers crack them? You type your password every time you login into Facebook, it lets you in if the password is correct. So, Facebook probably knows what your password is, how else can it decide if your password is correct, right? Wrong! Facebook or Gmail or any sophisticated site does not store your password. Or else those software engineers sitting inside Facebook can randomly pick profiles, read their passwords and play pranks and those working in the banks can go shopping more often. Worse still, imagine a data breach. Hackers can happily walk away with all the passwords in one shot. If the password is not stored, how the heck does facebook know if the password that you entered is correct? To answer that let us dig a little deeper.
What if they create a file called facebookrocks.txt and have entries like this in it: user: Sharath, password: genius. There will be 1 billion entries like this in it, any self respecting small-time thief can steal this file and he will have entire Facebook under his control. It should be obvious that that is not how things are done. What if we get clever and do a little more of spy stuff? What if we say a = 1, b = 2, c = 3, d = 4 and so on and take all the numbers for the letters in my password? if the password is "cab" then he numbers are 3,1 and 2. We can do some high school level math shit here. We can multiply them together and add 4 to it, we get 3*1*2 + 4 = 10. Now in the file we can store numbers like this instead of the original passwords. This type of thing is called as encryption. This way even if there is a breach the thief will only see numbers. The problem with this approach is that we are underestimating the thieves. All the thieves need is your approach, they just have to do the reverse. Hackers are good at maths and they will figure out the passwords by looking at numbers that you produced. You added 4, they can subtract 4 and get to 6, from 6 they can get 3,1,2 and arrive at your password. So, what you need is something that cannot be reversed.
Enter hashing. Imagine hashing entering like Kichcha Sudeepa in Kotigobba 2. Hashing is a bit like making Apple milkshakes. You take apple, sugar and milk and prepare the milkshake, but you cannot produce the apple, sugar and milk back from the milkshake. If your password is like the apple, hashing converts it into apple milkshake,something that can not be reversed. You can produce milkshake from the apple, but the reverse is not possible. There are mathematical ways of doing this.
Let us take the password "cab", what we can do is take the numbers corresponding to the letters(1 = 1, b = 2, g = 7, e = 5 etc. ), say we get the number 321, we can take the cube of it, multiply that by the 2nd prime number after 321 (Yes, mathematicians love prime numbers!), subtract 567 from it, divide that by 681, convert the resulting number to binary etc. In binary we only have 1s and 0s. The result might look like this: 110010010010001010, now just for fun we can flip every second bit of this number(Change 0 to 1 and 1 to 0), we can show off our mathematical prowess further by converting this number to Hexadecimal(In hexadecimal we count till 9 and then instead of 10 we start with letters A,B,C and all). After all this circus our password might look like this: 2ab96390c7dbe3439de74d0c9b0b1767.
In short, what we did was to take the password and do the mathematical equivalent of twisting,turning,squishing,crushing and garbling it to such an extent that it started looking really strange. Hashing is a one-way mangling process that is impossible to work backwards. If our password "cab" is the apple, 2ab96390c7dbe3439de74d0c9b0b1767 is the apple milkshake. This is the mathematical version of "You can get milkshake from the apple but you cannot get the apple back from milkshake". Facebook stores this weird looking number(the milkshake) instead of your actual password. Now every time you try to login Facebook will twist,turn,crush and garble your password. This garbled version is compared to the milkshake version that is already stored. The trick is that, given the same password, it will always spit out the same garbled version. Hence there will be a match.
Now let us say that our thieves hacked the database and they got this ugly looking number 2ab96390c7dbe3439de74d0c9b0b1767. It cannot be reversed. There is no way to get our password "cab" from this weird number. What do they do now? What they can do is to have a ready-made table called rainbow table. They can simply take the Oxford dictionary, take all the words in it starting from the 1st page and produce the hashes(milkshake) for these words. Probably the 927th word in the Oxford dictionary is "cab", so their 927th entry will be a hash that exactly looks like the weird number(milkshake) that Facebook stored. This is why you should try not to have meaningful English words as your password. If the Oxford dictionary has 1.7 lakh words, they can get your password within 1.7 lakh attempts. They simply have to create hashes for all words in the dictionary and compare it with the leaked list. This is called as dictionary attack. And passwords like 123456 and abc123 and "password1" will be the easiest victims of such an attack. If you can produce a hash for cab, you can always produce another for passwords like cab12. They are as predictable as the next Kejriwal tweet for a given issue.
To solve this problem what sites do is, add something random to your password before hashing/garbling it. This is called as salting. If your password is cab, they will first make it "cab7dbe3439" and then hash it, this is like adding some random fruit with apple before you turn it into milkshake. There is no word called "cab7dbe3439" in the dictionary and it is not easy to guess the random thing(Salt) that got added after "cab". Hence the dictionary attack will fail. All sophisticated sites use Salted hashing for this reason.
Attackers can do one more thing called brute forcing. A brute force attack tries every possible combination of characters. They can try aaa, aab,aac,aa1,aa2,aba,abb and so on. It is so goddamn expensive computationally, but they can still do it. Sites can make their life difficult by making the hashing slow, I just did 7 or 8 things to the password to garble it, sites can do many more crazy things, for instance there can be 252 steps of hashing. This will make hacker's life very difficult.
All said, What can you do? If your password is 12345678 or welcome or princess or anything in the popular 25 list, change it. There are many ways of creating good passwords. Indians can use a simple trick. Use some words or phrases from your mother tongue. One popular technique is to think of a phrase that is easy to remember, take first letters of it. For instance, your phrase can be: My Uncle Can Drink 8 Cups of Coffee Everyday. This will become "MUCD8COCE", this is a strong password that is easy for you and very difficult for the program's to guess. If the password is "IrhBBaoRS", it will really tax the hacker's software(The phrase I used was "I Really Hate Big Boss And Other Reality Shows" by the way!) One more thing you can do is to lie while answering the security questions. For instance, if the question is: who is your favourite singer? Your answer can be Himesh Reshammiya.

ಶಿವರಾಮ ಕಾರಂತರ ಕತೆಗಳು

ಶಿವರಾಮ ಕಾರಂತರ ಹುಟ್ಟು ಹಬ್ಬದ ನೆಪದಲ್ಲಿ ಮಾಡಿದ್ದ ಒಂದು ಪ್ರಯತ್ನ.
ಕೆಲವರಿಗೆ ಒಂದು ವಿಷಯದ ಬಗ್ಗೆ ಸರಿಯಾಗಿ ಗೊತ್ತಿದ್ದರೇ ಪುಣ್ಯ, ಎರಡೋ ಮೂರೋ ಗೊತ್ತಿದ್ದರಂತೂ ಸರಿಯೇ ಸರಿ, ಅಂತಾದ್ದರಲ್ಲಿ ಕಾರಂತಜ್ಜ ಕಡಿಮೆ ಎಂದರೂ ಸುಮಾರು ಹದಿನೈದು ವಿಷಯಗಳ ಬಗ್ಗೆಯಾದರೂ ಬರೆದಿರಬಹುದು/ಕೆಲಸ ಮಾಡಿರಬಹುದು. ಹೀಗಾಗಿ ಅವರನ್ನು ಕಡಲಿಗೆ, ಹಿಮಾಲಯಕ್ಕೆ, ಹೆಮ್ಮರಕ್ಕೆ ಎಲ್ಲ ಹೋಲಿಸಿ ಅವರ ಆಳ, ಎತ್ತರ, ವಿಸ್ತಾರ ,ಹರಹುಗಳ ಬಗ್ಗೆ ಹೇಳುವುದು ಮಾಮೂಲಿ.
ಬರೀ ಕಾರಂತಜ್ಜ ಅಂತಲ್ಲ, ತೇಜಸ್ವಿ, ಪಾವೆಂ ಆಚಾರ್ಯ, ವೈ ಎನ್ಕೆ ಇವರೆಲ್ಲ ಹೀಗೆ ಹತ್ತಾರು ಕಡೆ ಹುಡುಕಿ , ಹಲವಷ್ಟು ಬಗೆಯ ಖಾದ್ಯಗಳನ್ನು ಮಾಡಿ ಬಡಿಸಿದವರೇ. ಕನ್ನಡದ ಪಾಲಿಗೆ ಆಗಿನ ಕಾಲದ ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ ಮತ್ತು ಹಿಸ್ಟರಿ ಚಾನೆಲ್ ಎಲ್ಲವೂ ಇವರುಗಳೇ ಆಗಿದ್ದರು ಅನ್ನುವುದಕ್ಕೆ ಅಡ್ಡಿಯಿಲ್ಲ! ಆಮೇಲೆ ಬಂದ ನಾಗೇಶ್ ಹೆಗಡೆ, ಶ್ರೀವತ್ಸ ಜೋಶಿ, ರೋಹಿತ್ ಚಕ್ರತೀರ್ಥ ಇವರೂ ಈ ಹಾದಿಯಲ್ಲಿ ಸಾಗಿದ್ದಾರೆ ಅಂತ ಹೇಳಬಹುದು. ಇಂತಿಪ್ಪ ಕಾರಂತರನ್ನ ಒಂದಷ್ಟು anecdoteಗಳ ಮೂಲಕ ಹಿಡಿದರೆ ಹೇಗೆ ಅಂತ ತಲೆಗೆ ಬಂತು. ಇವುಗಳಲ್ಲಿ ಹೆಚ್ಚಿನವು ನಾನು ಕಿವಿಯಾರೆ ಕೇಳಿದ್ದು, ಬಹುಷಃ ಎಲ್ಲಿಯೂ ಬರಹ ರೂಪದಲ್ಲಿ ಬಂದಿರಲಿಕ್ಕಿಲ್ಲ.
ನಮ್ಮಲ್ಲಿ ಒಬ್ಬರು ಒಂದು ಪುಸ್ತಕ ಬರೆದರಂತೆ, ಕಾರಂತರು ಹೇಳಿಕೇಳಿ ದೊಡ್ಡ ಸಾಹಿತಿ , ಅವರು ಏನು ಹೇಳಿಯಾರು ನೋಡುವ ಅಂತ ಅವರನ್ನು ನೋಡಲು ಹೋದರಂತೆ. ಸರಿ. ಪುಸ್ತಕ ತೆಗೆದು, ಪುಟ ತಿರುಗಿಸಿ ನೋಡಿ, ಕಾರಂತರು ಇವರನ್ನೇ ದಿಟ್ಟಿಸಿ ನೋಡಿದರಂತೆ. ಇವರಿಗೆ ಮೊದಲೇ ಭಯ ಮಿಶ್ರಿತ ಗೌರವ, ಕಾರಂತರು ಉಗಿದು ಉಪ್ಪಿನ ಕಾಯಿ ಹಾಕಿದರೆ ಅಂತ ಒಳಗೊಳಗೇ ಕಟಿಪಿಟಿ. "ಮನೆಯಲ್ಲಿ ಕಪಾಟು ಉಂಟೋ ?", ಬೆಂಗಳೂರು ಟ್ರಾಫಿಕ್ಕಿನಲ್ಲಿ ಬೈಕೊಂದು ತೂರಿ ಬಂದ ಹಾಗೆ ಬಂತು ಕಾರಂತಜ್ಜನ ಪ್ರಶ್ನೆ! "ಕಪಾಟು .......... , ಒಂದುಂಟು ಸ್ವಾಮೀ", ಅಂದರು ಇನ್ನೇನು ಕಾದಿದೆಯೋ ಅಂತ ಹೆದರುತ್ತಾ. ಕಾರಂತಜ್ಜ ಮುಂದುವರೆಸಿದರು ,"ಹಾಗಾದರೆ ಇನ್ನೊಂದು ಮಾಡಿಸಿ, ಪುಸ್ತಕ ಎಲ್ಲ ಯಾರೂ ದುಡ್ಡು ಕೊಟ್ಟು ತಕೊಳ್ಳುದಿಲ್ಲ, ಒಂದು ಚಂದದ ಕಪಾಟು ಬೇಕಾಗ್ತದೆ ಸಾಲಾಗಿ ಜೋಡಿಸಿಡ್ಲಿಕ್ಕೆ".
ಇನ್ನೊಬ್ಬರು ಶಿಶು ಕವಿ, ಕವನ ಸಂಕಲನವನ್ನು ಕಾರಂತರಿಗೆ ಕಳಿಸಿದರು. ಕಾರಂತರಿಂದ ಉತ್ತರವಾಗಿ ಒಂದು ಪೋಸ್ಟು ಕಾರ್ಡು ಬಂತು, ನೋಡಿದರೆ ಒಂದೇ ಸಾಲು : ಮಕ್ಕಳ ಪದ್ಯಗಳು ವಿವರಿಸುವ ಹಾಗೆ ಇರಬಾರದು. ಒಂದು ಒಕ್ಕಣೆ, ಒಂದು ನಮಸ್ಕಾರ , ಇದು ಚೆನ್ನಾಗಿದೆ, ಇಲ್ಲಿ ಸರಿಯಿಲ್ಲ, ಇಷ್ಟು ಇಷ್ಟ ಆಯಿತು, ಇದನ್ನು ತಿದ್ದಿಕೊಳ್ಳಿ ಅಂತೆಲ್ಲ ಏನೂ ಇಲ್ಲ, ಬರೀ ಒಂದೇ ಸಾಲು! ಕಾರಂತರು ಇಷ್ಟು ದೊಡ್ಡ ಜನ ಆಗಿಯೂ ಪತ್ರ ಬರೆದು ಉತ್ತರಿಸಿದ್ದಾರೆ ಅಂತ ಖುಷಿ ಪಡಬೇಕೋ, ಹೀಗೆ ಬರೆದಿದ್ದಾರೆ ಅಂತ ಬೇಸರಿಸಬೇಕೋ ಗೊತ್ತಾಗದಂತ ಪರಿಸ್ಥಿತಿ!
ಇನ್ನೊಂದು ಕಥೆ ಸಾಹಿತಿ ಸಮಾಜ ಸೇವಕ ನೀರ್ಪಾಜೆ ಭೀಮ ಭಟ್ಟರು ಹೇಳಿದ್ದು. ಪಾರ್ತಿಸುಬ್ಬನನ್ನು ಯಕ್ಷಗಾನದ ಪಿತಾಮಹ ಅನ್ನುತ್ತಾರಷ್ಟೇ. ಈ ಪಾರ್ತಿಸುಬ್ಬನ ಊರು ಕುಂಬಳೆ ಅಂತ ಪ್ರತೀತಿ, ಅದು ಕುಂಬಳೆ ಅಲ್ಲ ಅಂತ ವಾದಿಸಿ ಕಾರಂತರು ಉದಯವಾಣಿಯಲ್ಲಿ ಬರೆದಿದ್ದರಂತೆ. ಅವರ ವಾದ ತಪ್ಪಿದೆ ಅಂತ ಭೀಮ ಭಟ್ಟರು ಸಾಕ್ಷಿ ಆಧಾರ ಒದಗಿಸಿ ಒಂದು ಉತ್ತರ ಕೊಟ್ಟರಂತೆ. ಆಮೇಲೆ ಉತ್ತರ, ಪ್ರತ್ಯುತ್ತರ, ವಾದ, ಪ್ರತಿವಾದ , ಮಂಡನೆ, ಖಂಡನೆ ಹೀಗೆ ಒಂದು ಎರಡು ತಿಂಗಳು ವಾಕ್ಸಮರವೇ ಆಯಿತಂತೆ. ಹೀಗಾಗಿ ಕಾರಂತರಿಗೂ ನೀರ್ಪಾಜೆಯವರಿಗೂ ಬಧ್ಧ ವೈರ ಇದೆ ಅಂತಲೇ ಜನ ಭಾವಿಸಿದ್ದರಂತೆ. ಆದರೆ ಮುಂದೆ ನೀರ್ಪಾಜೆಯವರನ್ನು ಸ್ನೇಹದಿಂದಲೇ ಕಂಡಿದ್ದರಂತೆ. ಆ ತರದ, ಸಿಧ್ಧಾಂತಕ್ಕೆ ಮಾತ್ರ ಸೀಮಿತವಾದ ಜಗಳಗಳು ಇದ್ದವು ಅಂತ ಎಡ ಬಲಗಳು ವಿಷ ಕಾರಿಕೊಂಡು, ವೈಯ್ಯಕ್ತಿಕ ದ್ವೇಷ ಸಾಧಿಸುವುದು ಹೆಚ್ಚಾಗಿರುವ ಈ ಕಾಲದಲ್ಲಿ ನೆನಪಿಸಲೇಬೇಕಾಗಿದೆ. ಮುಂದೆ ನೀರ್ಪಾಜೆಯವರ ಕೃತಿಗಳನ್ನು ಅವರು ಮೆಚ್ಚಿ ಆಡಿದ್ದೂ ಉಂಟಂತೆ. ನೀರ್ಪಾಜೆಯವರಿಗೆ ಆಗ ಸಣ್ಣ ಪ್ರಾಯ. "ನಿಮ್ಮ ವಾದ ಮಂಡನೆ, ವಿದ್ವತ್ತು ಇದನ್ನೆಲ್ಲ ನೋಡಿ ಅರುವತ್ತು ದಾಟಿರಬೇಕು ಅಂದುಕೊಂಡಿದ್ದೆ, ನಿಮಗೆ ಇಷ್ಟು ಸಣ್ಣ ಪ್ರಾಯವೇ" ಅಂತಲೂ ಕಾರಂತಜ್ಜ ಅಚ್ಚರಿ ಪಟ್ಟಿದ್ದರಂತೆ.
ಒಮ್ಮೆ ಒಬ್ಬರು ಕಾರಂತರ ಮನೆಗೆ ಹೋದರಂತೆ. "ಕಾರಂತರೇ ನಿಮ್ಮನ್ನು ಒಮ್ಮೆ ನೋಡಿ ಹೋಗುವ ಅಂತ ಬಂದೆ" ಎಂದರಂತೆ. "ನೋಡಿ ಆಯಿತಲ್ಲ, ಇನ್ನು ಹೊರಡಿ" ಎಂದರಂತೆ ಕಾರಂತರು ! ನನ್ನ ದೊಡ್ಡಪ್ಪ(ಜಿಕೆ ಭಟ್ ಸೇರಾಜೆ) ಒಂದು ಸಲ ಕಾರಂತರಲ್ಲಿಗೆ ಹೋಗಿದ್ದರಂತೆ. ಅವರೊಟ್ಟಿಗೆ ಸ್ವಲ್ಪ ಜಾಗ್ರತೆ ಅಂತ ಗೆಳೆಯರು ಹೇಳಿ ಕಳಿಸಿದ್ದರಂತೆ! ಯಕ್ಷಗಾನದ ಉದಂತಕಥೆಯೇ ಆಗಿದ್ದ ಕುರಿಯ ವಿಠ್ಠಲ ಶಾಸ್ತ್ರಿಗಳ ಅಳಿಯ ನಾನು ಅಂತ ಪರಿಚಯ ಮಾಡಿಕೊಂಡ ಮೇಲೆ ಕಾರಂತಜ್ಜ ಸುಮಾರು ಒಂದೂವರೆ ಘಂಟೆ ಮಾತಾಡಿದರಂತೆ, ಅವರ ಶ್ರೀಮತಿಯವರೂ ಬಂದು ಮಾತಾಡಿಸಿ, ತಿಂಡಿ ಕಾಫಿ ಎಲ್ಲ ತಂದು ಕೊಟ್ಟು ಸತ್ಕರಿಸಿದರಂತೆ.
ಮುಳಿಯ ತಿಮ್ಮಪ್ಪಯ್ಯ, ಮಂಜೇಶ್ವರ ಗೋವಿಂದ ಪೈಗಳು, ಸೇಡಿಯಾಪು ಕೃಷ್ಣ ಭಟ್ಟರು ಇವರೆಲ್ಲ ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೇ ಪಾಂಡಿತ್ಯದ ಮೇರು ಶಿಖರಗಳು. ಇವರದ್ದೆಲ್ಲ ಸಮಗ್ರ ಸಾಹಿತ್ಯ ಪುಸ್ತಕ ರೂಪದಲ್ಲಿ ಬರಬೇಕು ಅಂತ ಕಾರಂತರು ಯಾವಾಗಲೂ ಭಾಷಣಗಳಲ್ಲಿ ಹೇಳುತ್ತಿದ್ದರಂತೆ. ಗೋವಿಂದ ಪೈಗಳ ರಾಜಕೀಯ ನಿಲುವುಗಳು ಕಾರಂತರಿಗೆ ಆಗಿ ಬರುತ್ತಿರಲಿಲ್ಲ, ಅದನ್ನು ಖಂಡಿಸಿ ಲೇಖನವೂ ಬರೆದಿದ್ದರಂತೆ. ಆದರೂ ಮುಳಿಯ ತಿಮ್ಮಪ್ಪಯ್ಯ, ಗೋವಿಂದ ಪೈ ಇವರ ಸಮಗ್ರ ಸಾಹಿತ್ಯ ಬರಬೇಕು ಅಂತ ಹೇಳುತ್ತಲೇ ಇದ್ದರಂತೆ , ಮಾತ್ರವಲ್ಲ , ಗೋವಿಂದ ಪೈಗಳ ಸಂಶೋಧನೆಗಳ ಪುಸ್ತಕ ಬಂದಾಗ ಸಂತೋಷ ಪಟ್ಟು, ಅದನ್ನು ತಂದ ಮುರಳೀಧರ ಉಪಾಧ್ಯ ಹಿರಿಯಡಕ ಮತ್ತು ಹೆರಂಜೆ ಕೃಷ್ಣ ಭಟ್ಟರಿಗೆ ಇಪ್ಪತ್ತು ಸಾವಿರ ಕಿಸೆಯಿಂದ ತೆಗೆದು ಕೊಟ್ಟಿದ್ದರಂತೆ(ಹಿರಿಯಡಕ ಮುರಳೀಧರ ಉಪಾಧ್ಯರು ಸಂದರ್ಶನವೊಂದರಲ್ಲಿ ಹೇಳಿದ್ದು)
ವಿಮರ್ಶಕ ವಿಜಯ ಶಂಕರ್ ಹೇಳಿದ ಕಥೆ. ವಿಟ್ಲದ ಪ್ರೌಢ ಶಾಲೆಯ ಕಾರ್ಯಕ್ರಮ ಒಂದಕ್ಕೆ ಬರ್ತೇನೆ ಅಂತ ಎರಡು ತಿಂಗಳು ಮೊದಲೇ ಕಾರಂತರು ಒಪ್ಪಿದ್ದರಂತೆ. ಕಾರ್ಯಕ್ರಮಕ್ಕೆ ಇನ್ನು ಹದಿನೈದು ದಿನ ಇರುವಾಗ ಪೇಪರಿನಲ್ಲೊಂದು ಸುದ್ದಿ. ಡೆಲ್ಲಿಯಲ್ಲಿ ಯಾವುದೋ ದೊಡ್ಡ ಕಾರ್ಯಕ್ರಮ ಇದೆ, ಕಾರಂತರು ಅಲ್ಲಿರುತ್ತಾರೆ ಅಂತ. ದೊಡ್ಡ ಕಾರ್ಯಕ್ರಮ ಇರುವಾಗ ವಿಟ್ಲದ ಸಣ್ಣ ಕಾರ್ಯಕ್ರಮಕ್ಕೆ ಕಾರಂತರು ಬರುತ್ತಾರೆಯೇ ಅಂತ ಗಲಿಬಿಲಿ ಆಗಿ, ಸಂಶಯ ನಿವಾರಣೆಗೆ ಅವರಲ್ಲಿಗೇ ಓಡಿದರಂತೆ. "ನಿಮ್ಮಲ್ಲಿಗೆ ಬರ್ತೇನೆ ಅಂತ ಒಪ್ಪಿಕೊಂಡಿದ್ದೇನಲ್ಲ, ಮತ್ತೆ ಡೆಲ್ಲಿಗೆ ಯಾಕೆ ಹೋಗ್ತೇನೆ ? ನಿಮ್ಮಲ್ಲಿಗೇ ಬರುವುದು" ಅಂದರಂತೆ. ಇನ್ನೊಬ್ಬರು ಹೀಗೆ ಕರೆದಿದ್ದಾಗ ಕಾರಿನ ಡೀಸೆಲ್ ಖರ್ಚಿಗೆ ಇಷ್ಟು ಅಂತ ಕೊಟ್ಟಿದ್ದರಂತೆ ಕಾರಂತರಿಗೆ. ಸರಿ, ಬಂದದ್ದಾಯಿತು, ಹೋದದ್ದಾಯಿತು. ಒಂದು ವಾರದಲ್ಲಿ ಕಾರಂತರಿಂದ ಮನಿ ಆರ್ಡರ್! ಏನು ಅಂತ ನೋಡಿದರೆ : ಡೀಸೆಲ್ ಖರ್ಚಿಗೆ ಆಗಿ ಉಳಿದ ಹಣ ಇದು ಅಂತ ಒಕ್ಕಣೆ! ಚಿತ್ರ ನಟ ಅಶ್ವಥ್ ಕೂಡ ಹೀಗೆ ನಿರ್ಮಾಪಕರು ಕೊಟ್ಟ ದುಡ್ಡು ವಾಪಸ್ ಕೊಡುತ್ತಿದ್ದ ಅಪರೂಪದ ಮನುಷ್ಯ ಅಂತ ಕತೆ ಹೇಳುತ್ತಾರೆ.
ವಾಗ್ವಿಲಾಸ, ವಾಗಾಡಂಬರ, ವಾಗ್ವೈಭವ ಮುಂತಾದ ಶಬ್ದಗಳ ಅರ್ಥ ಗೊತ್ತಾಗಬೇಕಾದರೆ ಶೇಣಿಯವರ ಅರ್ಥ ಕೇಳಬೇಕು ಅನ್ನಿಸುವಷ್ಟು ದೊಡ್ಡ ಮಾತಿನ ಮಲ್ಲ ಆಗಿದ್ದವರು ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ಶೇಣಿ ಗೋಪಾಲಕೃಷ್ಣ ಭಟ್ಟರು. ಕಾರಂತರ ಜೊತೆ ಒಳ್ಳೆ ಒಡನಾಟ ಇದ್ದವರು ಇವರು . ಕಾರಂತರು ಒಮ್ಮೆ ಸಭೆಯಲ್ಲಿ ತೆಂಕು ತಿಟ್ಟು ಯಕ್ಷಗಾನ ಯಕ್ಷಗಾನವೇ ಅಲ್ಲ ಅಂತ ಹೇಳಿದಾಗ ವೇದಿಕೆಯಲ್ಲಿಯೇ ಅದನ್ನು ಖಂಡಿಸಿ ಶೇಣಿ ಉತ್ತರ ಕೊಟ್ಟಿದ್ದರಂತೆ. ಕಾರಂತರನ್ನು ಎದುರೆದುರೇ ಖಂಡಿಸುವಷ್ಟು ಧೈರ್ಯ ಮತ್ತು ಸಾಮರ್ಥ್ಯ ಇದ್ದ ಕೆಲವೇ ಕೆಲವರಲ್ಲಿ ಇವರು ಒಬ್ಬರು ಅನ್ನುತ್ತಾರೆ ಬಲ್ಲವರು. ಶೇಣಿ ಯಕ್ಷಗಾನ ಮೇಳದಲ್ಲಿಯೂ ಇದ್ದವರು. ಅವರು ಹೇಳಿದ ಕಥೆ. ಇವರು ಮಾತಾಡಿಸಲಿಕ್ಕೆ ಅಂತ ಒಮ್ಮೆ ಕಾರಂತರಲ್ಲಿಗೆ ಹೋದರಂತೆ. ಕಾರಂತರು ಏನೋ ಮಾಡುತ್ತಾ, ಅಂಗಳದಲ್ಲೇ ನಿಂತಿದ್ದರಂತೆ. ಇವರ ಮುಖ ದರ್ಶನವಾಯಿತು. ಕಾರಂತರು ನಾಟಕೀಯವಾಗಿ ಹೀಗೆ ಸ್ವಾಗತ ಮಾಡಿದರಂತೆ :
ಓ ಹೋ ಹೋ ! ಶೇಣಿಯವರು !! ಬರ್ಬೇಕು ಬರ್ಬೇಕು !!! ಮತ್ತೆ? ಸಮಾಚಾರ ಎಲ್ಲ ? ಹೇಗೆ ನಡೀತಾ ಉಂಟು ವ್ಯಾಪಾರ ?!!
(ಯಕ್ಷಗಾನ ಕಲೆಯಾಗಿ ಉಳಿದಿಲ್ಲ, ವ್ಯಾಪಾರದ ಹಾಗೆ ಆಗಿದೆ ಅಂತ ಮಾರ್ಮಿಕ ವ್ಯಂಗ್ಯ)

ಪರಂಪರೆಯ ಬೇರುಗಳು ಮತ್ತು ಹೊರಗಿನ ಗಾಳಿ ಬೆಳಕು!

ಈ ದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸ ಇದರ ಬಗ್ಗೆಯೆಲ್ಲ ನನಗೆ ತಕ್ಕ ಮಟ್ಟಿಗೆ ಗೊತ್ತಿದೆ ಅನ್ನುವವರು ಕೈ ಎತ್ತಿ ನೋಡೋಣ ! ಇದನ್ನು ಓದಿ ಮುಗಿಸಿ ಆದ ಮೇಲೂ ಕೈ ಅರ್ಧದಷ್ಟೂ ಕೆಳಗೆ ಹೋಗಲಿಲ್ಲ ಅನ್ನುವವರು ಆನಂತರ ಇನ್ನೊಂದು ಸಲ ಕೈ ಎತ್ತಿ ಪುನೀತರಾಗಬಹುದು.
ಒಂದೊಮ್ಮೆ ನಾನು ಅರ್ಜೆಂಟೀನಾದ Buenos Airesನಲ್ಲಿ ಇದ್ದೆ. ಎಲ್ಲಿಗೆ ಹೋದರೂ ನಮ್ಮ ಶೈಲಿಯ ಊಟ ಮಾಡದಿದ್ದರೆ ನನಗೆ ಮನಸು ಕೇಳುವುದಿಲ್ಲ, ಸರಿ, ಡೆಲ್ಲಿ ದರ್ಬಾರ್ ಅನ್ನುವ ಹೋಟೆಲು ಸಿಕ್ಕಿಯೂ ಬಿಟ್ಟಿತು. ನಮ್ಮೂರಿನ ತರದ ಚಾ ಹೇಳಿ, ಹಬೆಯಾಡುವ ಕಪ್ ಹಿಡಿದು ಸುರುಕ್ ಅಂತ ಎಳೆದು ಕುಡಿಯದೇ ಹೋದರೆ ಅದನ್ನೂ ಒಂದು ಹೋಟೆಲ್ ಭೇಟಿ ಅನ್ನುತ್ತಾರೆಯೇ ? ಒಂದು ಚಾ ಹೇಳಿದೆ, ವಿದೇಶ ಆದ್ದರಿಂದ ಸಕ್ಕರೆ ಹಾಕಿಯೇ ಮಾಡಿ ಅಂದಿದ್ದೆ. ಬಂತು. ಕುಡಿದು ನೋಡಿದರೆ ಸಕ್ಕರೆಯೇ ಹಾಕಿಲ್ಲ. ಅಮೇರಿಕಾದಲ್ಲಿ ಹಾಲು ಸಕ್ಕರೆ ಹಾಕದೆ, ಬರೀ ನೀರು ಮತ್ತು ಟೀ ಪುಡಿ ಇರುವ ಚಾ ಕುಡಿಯುವ ಕ್ರಮ ಇದೆ. ಅಲ್ಲಿನ ಇಂಡಿಯನ್ ಹೊಟೇಲುಗಳಲ್ಲಿ ಕೆಲವು ಕಡೆ ನೀನು ನಕ್ಕರೆ ಹಾಲು ಸಕ್ಕರೆ, ನಗದಿದ್ದರೂ ಹಾಲು ಸಕ್ಕರೆ ಅಂತ ಎಲ್ಲ ಹಾಕಿಯೇ ಕೊಡುತ್ತಾರೆ. ನನ್ನ ಸಹೋದ್ಯೋಗಿ Jamie ಅಂತೊಬ್ಬಳು ಇದನ್ನು ತುಂಬ ಇಷ್ಟ ಪಟ್ಟು, "ಐ ಲವ್ ಇಂಡಿಯನ್ ಚಾಯ್ ಟೀ" ಅಂತಲೇ ಹೇಳುತ್ತಿದ್ದದ್ದೂ ನೆನಪಿದೆ. ಇದೇನಿದು ಸಕ್ಕರೆ ಹಾಕಿ ಅಂದರೂ ಹಾಕಿಲ್ಲ ಅಂತ ಕೇಳಿದೆ. "ಅಯ್ಯೋ, ನಿಮ್ಮ ಚಾಕ್ಕೆ ನಾವು ಹೇಗೆ ಸಕ್ಕರೆ ಹಾಕಲು ಸಾಧ್ಯ" ಅನ್ನಬೇಕೆ. ಇದೇನು ಒಳ್ಳೆ ಅಮೆರಿಕದವರ ತರ ಮಾತಾಡ್ತಾರಲ್ಲ ಅಂದುಕೊಂಡು, "ನಾನೇ ಹೇಳ್ತಾ ಇದ್ದೇನಲ್ಲ, ಸಕ್ಕರೆ ಹಾಕಿ ಇಂಡಿಯನ್ ಟೀ ಮಾಡಿಕೊಡಿ, ನಿಮಗೆ ಎಷ್ಟು ಹಾಕ್ತೀರೋ ಅಷ್ಟೇ ಹಾಕಿ, ಸಕ್ಕರೆ ಹಾಕದಿದ್ರೆ ಇಂಡಿಯನ್ ಟೀ ಹೇಗಾಗ್ತದೆ" ಅಂತೆಲ್ಲ ಎಷ್ಟು ಬಡಕೊಂಡರೂ ಜಪ್ಪಯ್ಯ ಅನ್ನದೆ ಅದೇ ರಾಗ ಅದೇ ಹಾಡು ಅಪಶ್ರುತಿಯಲ್ಲಿಯೇ ಹಾಡಿ ಕಛೇರಿ ಮುಗಿಸಿದರು.
ಚೋದ್ಯ ಅದಲ್ಲ. ನಮಗೆ ಇಂಡಿಯನ್ ಟೀ ಅಂತ ಏನೆಲ್ಲ ಕಲ್ಪನೆಗಳು ಇದ್ದರೂ ಚಾ ನಮ್ಮ ದೇಶದ್ದಲ್ಲ. ಮಹಾಭಾರತದಲ್ಲಿ ಕೃಷ್ಣ ವಿದುರನ ಮನೆಗೆ ಹೋಗುತ್ತಾನಲ್ಲ, ಆವಾಗ ವಿದುರ ಬೇರೇನು ಹೇಳಿದನೋ ಗೊತ್ತಿಲ್ಲ. "ಓಹೋ ಕೃಷ್ಣ ದೇವರು, ಬನ್ನಿ ಬನ್ನಿ, ಚಾ ಮಾಡುದಾ ಅಲ್ಲ ಕಾಫಿ ತಗೋಳ್ತೀರಾ" ಅಂತ ಮಾತ್ರ ಹೇಳಿರಲಾರ. ಯಾಕಂದರೆ ಚಾ ಕಾಫಿ ಎರಡೂ ಆಗ ಇಲ್ಲಿ ಇರಲಿಲ್ಲ! ಕಾಫಿ ಅರೇಬಿಯಾದಿಂದ ಬಂದರೆ ಚಾ ಚೀನಾದಿಂದ ಬ್ರಿಟಿಷರ ಮೂಲಕ ಬಂತು. ಇನ್ನೊಂದು ತಮಾಷೆ ಅಂದರೆ ಕಾಡು ಗಿಡವಾಗಿ ಆಸ್ಸಾ೦ನ ಕಾಡುಗಳಲ್ಲಿ ಚಾ ಮೊದಲೇ ಇತ್ತಂತೆ, ಅಲ್ಲಿನ ಜನ ಅದನ್ನು ನೀರಲ್ಲಿ ಕುದಿಸಿ ಕುಡಿಯುತ್ತಲೂ ಇದ್ದರಂತೆ. ಅಲ್ಲಿಗೆ ಹಾಲು ಸಕ್ಕರೆ ಹಾಕದೆ ಕುಡಿಯುವುದೂ ಭಾರತೀಯ ಸಂಪ್ರದಾಯವೇ ಅಂತ ಆಯ್ತಲ್ಲ!
ನನ್ನ ಉತ್ತರ ಭಾರತದ ಸಹೋದ್ಯೋಗಿ ಒಬ್ಬ ದಿನಾ ಕೆಫೆಟೇರಿಯಾದಲ್ಲಿ ಆಲೂಗಡ್ಡೆ ಸಬ್ಜಿ ಬಿಟ್ಟರೆ ಬೇರೇನೂ ತಗೊಳ್ಳುತ್ತಿರಲಿಲ್ಲ. ವಾರಕ್ಕೆ ಹದಿನಾಲ್ಕು ದಿನವೂ ಬಟಾಟೆಯ ಧ್ಯಾನ. ಕೆಲವರು ಬೆಂಡೆಕಾಯಿ ಪದಾರ್ಥಕ್ಕೂ ಇರಲಿ ಅಂತ ಆಲೂಗಡ್ಡೆ ಸೇರಿಸುವುದು ಇದೆ. ನೀವು ಮಿಕ್ಸೆಡ್ ವೆಜ್ ಸಬ್ಜಿ ಅಂತ ಮಾಡಿದರೆ ಅದು ಆಲೂಗಡ್ಡೆ ಸಬ್ಜಿಯೇ ಆಗಿರುತ್ತದೆ ಅಂತ ಗೇಲಿ ಮಾಡುತ್ತಿದ್ದೆ. ಇಷ್ಟು ಭಾರತೀಯ ಆಗಿರುವ ಆಲೂಗಡ್ಡೆಯೂ ಇಲ್ಲಿನದ್ದಲ್ಲ, ದಕ್ಷಿಣ ಅಮೇರಿಕಾದಿಂದ ಬಂದದ್ದು ಅಂದರೆ ಆಶ್ಚರ್ಯ ಆಗಬಹುದು. ಟೊಮ್ಯಾಟೋ ನಮ್ಮದಲ್ಲ, ಕಡ್ಲೆ ಕಾಯಿ ಮ್ಮದಲ್ಲ, ಅಷ್ಟೇಕೆ ಮೆಣಸೂ ನಮ್ಮದಲ್ಲ. ಹಾಗಾದರೆ ಇಂತಾ ಖಾರ ಪ್ರಿಯರು, ಅದೂ ಆಂಧ್ರದ ಜನ ಏನು ಉಪವಾಸ ಕೂರುತ್ತಿದ್ದರೇ ಅಂತ ಕೇಳಬಹುದು. ಇಲ್ಲಿ ಮೆಣಸಿಗೆ ಬದಲಾಗಿ ಇದ್ದದ್ದು ಕಾಳು ಮೆಣಸು, ಗಾಂಧಾರಿ ಮೆಣಸು ಕೂಡ ಇತ್ತಂತೆ
ನಾನು ನೋಡಿದ ಯೂರೋಪಿನ ಚಿತ್ರವೊಂದರಲ್ಲಿ ಟರ್ಕಿಶ್ ಹೋಟೆಲೊಂದರ ಕತೆ ಇತ್ತು, ಅದರ ಹೆಸರು ಕೋಫ್ತಾ. ಅಲ್ಲಿಗೆ ಮಲಾಯಿ ಕೋಫ್ತಾದ ಕೋಫ್ತಾ ನಮ್ಮದಲ್ಲ ಅಂತಾಯಿತಲ್ಲ. ಜಿಲೇಬಿ, ಜಾಮೂನಿನಂತ ಪಕ್ಕಾ ಭಾರತೀಯ ಅನ್ನಿಸುವ ಖಾದ್ಯಗಳೂ ಪರ್ಷಿಯಾ ಕಡೆಯಿಂದಲೇ ಇಲ್ಲಿಗೆ ಬಂದಿದೆ. ಇನ್ನು ಪಲಾವು, ಬಿರಿಯಾನಿ, ಸಮೋಸ ಇವೆಲ್ಲ ಹೇಗೂ ಇಲ್ಲಿಯವು ಅಲ್ಲ. ಯಾರಾದರೂ ಸಿಕ್ಕಾಪಟ್ಟೆ ಹೈಫೈ ಲಲನೆಯರು ಐ ಲವ್ ಇಟಾಲಿಯನ್, ಐ ಲವ್ ಕಾಂಟಿನೆಂಟಲ್ ಅಂತೆಲ್ಲ ಸಾಲು ಸಾಲು ವಿದೇಶಿ ಹೆಸರುಗಳು ಹೇಳಿದರೆ, ನೀವೂ ಹೆದರದೆ, ಐ ಲವ್ ಜಾಮೂನ್ , ಐ ಲವ್ ಪಲಾವ್ ಅಂತ ಅಂದು ನೋಡಿ!
ಇನ್ನು ಧರ್ಮದ ವಿಷಯ. ವೇದಗಳೇ ಹಿಂದೂ ಧರ್ಮದ ಮೂಲ ಅನ್ನಬಹುದು. ವೇದಗಳಿಗೆ ಹೋದರೆ ಅಲ್ಲಿ ವಿಷ್ಣು, ಶಿವ, ಗಣಪತಿಯಂತ ದೇವರುಗಳ ಪ್ರಸ್ತಾಪವೇ ಇಲ್ಲವಂತೆ. ದೇವರುಗಳು ಬಂದಿರುವುದು ಆಮೇಲೆ ಹುಟ್ಟಿಕೊಂಡ ಪುರಾಣಗಳಲ್ಲಿ. ಅದರಲ್ಲೂ ಸ್ವಾರಸ್ಯಗಳಿವೆ ಈಗ ಕೃಷ್ಣ ಅಂದಾಗ ನಮಗೆ ಒಂದಷ್ಟು ವಿಷಯಗಳು ತಲೆಗೆ ಬರುತ್ತವೆ, ಮತ್ತು ಕೃಷ್ಣ ಅಂದರೆ ಮಹಾಭಾರತದ ಕೃಷ್ಣ ಅಂತಲೇ ಜನ ಭಾವಿಸುತ್ತಾರೆ. ಆದರೆ ಕೃಷ್ಣನ ಬಗ್ಗೆ ಚಾಲ್ತಿಯಲ್ಲಿರುವ ಅರ್ಧದಷ್ಟು ಕತೆಗಳು ಬಂದಿರುವುದು ಭಾಗವತ ಪುರಾಣ ಅನ್ನುವ ಇನ್ನೊಂದು ಪುರಾಣದಿಂದ. ರಾಮ ವಿಷ್ಣುವಿನ ಅವತಾರ ಅನ್ನುವ ಕಲ್ಪನೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಅಂತ ಕೆಲವರು ಹೇಳಿದ್ದಾರೆ. ಮಹಾಭಾರತದಲ್ಲಂತೂ ಹೀಗೆ ಆಮೇಲೆ ಸೇರಿಸಿದ ಕತೆಗಳ ರಾಶಿಯೇ ಇದೆ. ದ್ರೌಪದಿಯ ವಸ್ತ್ರ ಎಳೆದದ್ದೂ, ಕೃಷ್ಣ ಮುಗಿಯದಷ್ಟು ವಸ್ತ್ರ ಕೊಟ್ಟದ್ದೂ ಈಗ ಪ್ರಸಿದ್ಧ. ಈ ಅಕ್ಷಯ ಅಂಬರದ ಕತೆ ವ್ಯಾಸರ ಭಾರತದಲ್ಲಿ ಇಲ್ಲವಂತೆ. ಇದು ಯಾರೋ ಕೃಷ್ಣನ ಭಕ್ತರು, "ನಮ್ಮ ದೇವರು ಗ್ರೇಟ್" ಅಂತ ತೋರಿಸುವುದಕ್ಕೆ ಆಮೇಲೆ ಸೇರಿಸಿದ ಕತೆ.
ಸೀತೆಯನ್ನು ರಾಮ ಕಾಡಿಗೆ ಅಟ್ಟುವುದು, ಲವ ಕುಶರ ಕತೆ ಎಲ್ಲ ಮೂಲ ರಾಮಾಯಣದಲ್ಲಿ ಇಲ್ಲ. ಇನ್ನೊಂದು ವಿಶೇಷ ಅಂದರೆ , ಏನಿಲ್ಲ ಅಂದರೂ ಸುಮಾರು ಮುನ್ನೂರಕ್ಕೂ ಹೆಚ್ಚು ರಾಮಾಯಣಗಳು ದೇಶ ವಿದೇಶಗಳಲ್ಲಿ ಇವೆ, ಇವು ಮುನ್ನೂರು ತರದಲ್ಲಿಯೂ ಇವೆ! ಇನ್ನೊಂದು ಭಯಂಕರ ಪಾಯಿಂಟು ನೋಡಿ , ಶ್ರೀಲಂಕಾಕ್ಕೆ ಶ್ರೀಲಂಕಾ ಅನ್ನುವ ಹೆಸರು ಬಂದದ್ದು ಈಚೆಗೆ, ಅದರ ಹಳೇ ಹೆಸರು ಸಿಂಹಳ ದ್ವೀಪ, ಅಂದಮೇಲೆ ರಾಮಾಯಣ ಬರೆದವರು ಅದನ್ನು ಲಂಕಾ ಅನ್ನುವ ಹೊಸ ಹೆಸರಿಂದ ಆ ಹಳೇ ಕಾಲದಲ್ಲಿ ಹೇಗೆ ಕರೆದರು ಅಂತ ಪ್ರಶ್ನೆ ಬರುತ್ತದಲ್ಲ! ಹಾಗಾಗಿ ರಾವಣ ಇದ್ದದ್ದು ಈಗಿನ ಶ್ರೀಲಂಕಾದಲ್ಲಿ ಅಲ್ಲ, ಮಾಲ್ಡೀವ್ಸ್ ನ ಹತ್ತಿರ ಅಂದವರೂ ಇದ್ದಾರೆ! ಅಂತೂ ಈಗ ಚಾಲ್ತಿಯಲ್ಲಿ ಇರುವ ರಾಮಾಯಣ, ಮಹಾಭಾರತ ಓದಿದವರು ವ್ಯಾಸ, ವಾಲ್ಮೀಕಿಗಳ ಮೂಲ ಕಥೆಗಳನ್ನು ಓದಿದರೆ ಟಿವಿ ನೈನ್ ನ ಧಾಟಿಯಲ್ಲಿ, "ಹೀಗೂ ಉಂಟೆ" ಅನ್ನಬೇಕಾದೀತು.
ಹಿಂದೂಗಳು ಅಂದಮೇಲೆ ದೇವಾಲಯಗಳು ಬರುತ್ತವಲ್ಲ . ದೇವಾಲಯಗಳು ಬಂದದ್ದೂ ಸುಮಾರು ಮೂರು ಸಾವಿರ ವರ್ಷಗಳ ಮೊದಲಷ್ಟೇ . ಈ ಪುರಾಣಗಳಲ್ಲಿ ಬಂದಿರುವ ನಕ್ಷತ್ರಗಳ ಲೆಕ್ಕ ಮಾಡಿ ರಾಮಾಯಣದ ಕಾಲ ಕ್ರಿ ಪೂ 5000 ಇದ್ದೀತು ಅಂದವರು ಇದ್ದಾರೆ. ಹೀಗಾಗಿ ಒಂದು ಏಳು ಸಾವಿರ ವರ್ಷಗಳಿಂದ ಈ ಧರ್ಮ ಇದೆ ಅಂತ ಇಟ್ಟುಕೊಂಡರೆ, ಅದರಲ್ಲಿ ಸುಮಾರು ನಾಲ್ಕು ಸಾವಿರ ವರ್ಷ ದೇವಾಲಯಗಳೇ ಇರಲಿಲ್ಲ ಅಂದರೆ ಅಚ್ಚರಿಯ ವಿಷಯವೇ. ದೇವಾಲಯಗಳೂ ಮೊದ ಮೊದಲು ಜೇಡಿ ಮಣ್ಣಿನ, ಹುಲ್ಲು ಹಾಸು ಇರುವ ಕಟ್ಟಡಗಳಾಗಿ ಇದ್ದವಂತೆ. ಇನ್ನು ಸತ್ಯನಾರಾಯಣ ಪೂಜೆಯಂತೂ ತೀರ ಇನ್ನೂರು ಮುನ್ನೂರು ವರ್ಷ ಮೊದಲು ಹುಟ್ಟಿದ್ದು ಅಂತ ಶ್ರೀನಿವಾಸ ಹಾವನೂರರು ಹೇಳಿದ್ದಾರೆ.
ಕಲೆಗಳ ವಿಚಾರಕ್ಕೆ ಬರೋಣ. ಭರತ ನಾಟ್ಯ ನಮ್ಮ ಸಾಂಪ್ರದಾಯಿಕ ನಾಟ್ಯ, ಸರಿ ತಾನೇ ? ಇಲ್ಲಿ ಕೇಳಿ. ನಾವು ಈಗ ಭರತ ನಾಟ್ಯ ಅಂತ ಯಾವುದನ್ನು ಹೇಳುತ್ತೇವೋ ಅದು ಸುಮಾರು ಇನ್ನೂರು ವರ್ಷಕ್ಕೆ ಮೊದಲಷ್ಟೇ ಹುಟ್ಟಿದ್ದು. ಮೊದಲಿಂದ ಇದ್ದದ್ದು ದೇವದಾಸಿಯರು ದೇವಾಲಯಗಳಲ್ಲಿ ಮಾಡುತ್ತಿದ್ದ ನೃತ್ಯ, ರಾಜರ ಆಸ್ಥಾನಗಳಲ್ಲಿ ನರ್ತಕಿಯರ ನೃತ್ಯ, ಸಾದಿರ್ ನಾಟ್ಯ , ಭಾಗವತರ ಮೇಳ ಇಂತವು. ಇವನ್ನು ನೋಡಿ, ಮತ್ತು ತುಂಬಾ ಮೊದಲು ಭರತ ಮುನಿ ಬರೆದ ನಾಟ್ಯ ಶಾಸ್ತ್ರ ಪುಸ್ತಕ ಇಟ್ಟುಕೊಂಡು ಇತ್ತೀಚಿಗೆ ಚಾಲ್ತಿಗೆ ಬಂದ ನೃತ್ಯ ಪ್ರಕಾರ ಇದು. ಅದಕ್ಕೆ ಈಗಿನ ರೂಪ ಬಂದದ್ದು ಕಳೆದ ಎಂಬತ್ತು ವರ್ಷಗಳಲ್ಲಿ ಅಂದರೆ ಆಶ್ಚರ್ಯವೇ. ಹಾಗೆ ನೋಡಿದರೆ ನಮ್ಮ ಯಕ್ಷಗಾನ, ಕಥಕ್ ಇವಕ್ಕೆಲ್ಲ ಒಂದು 900 ವರ್ಷಗಳ ಇತಿಹಾಸವಾದರೂ ಇದೆ, ಭರತನಾಟ್ಯ ಮಾತ್ರ ಈಚೆಗಿನದು.
ವಾರಕ್ಕೆ ಏಳು ದಿನ ಅನ್ನುವ ಕಲ್ಪನೆಯೂ ಬಂದು ಬರೇ ಸಾವಿರದ ಇನ್ನೂರು ವರ್ಷ ಆಗಿರಬಹುದಷ್ಟೆ
ಶಾಸ್ತ್ರೀಯ ಸಂಗೀತ ಅಂದ ಕೂಡಲೇ ಹಾರ್ಮೋನಿಯಮ್ , ಪಿಟೀಲುಗಳು ನೆನಪಾಗುತ್ತವಲ್ಲ. ಪಕ್ಕಾ ಶಾಸ್ತ್ರೀಯ ಶೈಲಿಯಲ್ಲಿ ಯಾರಾದರೂ ಪಿಟೀಲು ನುಡಿಸುವುದು ನೋಡಿ ತಲೆ ಆಡಿಸಿರುತ್ತೀರಿ. ಆದರೆ ಅವೂ ಯೂರೋಪಿನಿಂದ ಬಂದವು ಅಂದರೆ ಹೌಹಾರುವಂತೆ ಆಗಬಹುದು. ತಂಬೂರಿಯೂ ಅರೇಬಿಯಾದ್ದು ಅಂತ ಪಾವೆಂ ಆಚಾರ್ಯರು ಹೇಳಿದ್ದಾರೆ, ತಂಬೂರಿ ಮೀಟಿದವ ಭವಾಬ್ದಿ ದಾಟಿದವ ಹಾಡನ್ನು ತಿದ್ದಿ ಬರೆಯಬೇಕಾದೀತು . ತಬಲಾ ಹೇಗೂ ನಮ್ಮದಲ್ಲ. ಇನ್ನು ಉಳಿದದ್ದು ಏನು ಅಂತ ಕೇಳಬೇಡಿ!
ಇನ್ನೊಂದು ವಿಚಿತ್ರ ಅಂದರೆ ನಮ್ಮ ಇತಿಹಾಸವನ್ನು ಅನೇಕ ಸಲ ವಿದೇಶಿಯರು ಬರೆದದ್ದರಿಂದ, ಅವರು ಅವರ ಮೂಗಿನ ನೇರಕ್ಕೆ ಬರೆದು, ಅದೆಷ್ಟೋ ತಲೆಬುಡ ಇಲ್ಲದ ವಿಷಯಗಳು ಸೇರಿ ಕಿಚ್ಡಿ ಆಗಿದೆ. ಉದಾಹರಣೆಗೆ ಸಾಮ್ರಾಟ ಅಶೋಕ ಅಂತಾ ಒಳ್ಳೆ ಮನುಷ್ಯ ಅನ್ನುವುದಕ್ಕೆ, ಶ್ರೇಷ್ಟಾತಿಶ್ರೇಷ್ಟ ರಾಜ ಅನ್ನುವುದಕ್ಕೆ ಸರಿಯಾದ ಸಾಕ್ಷಿ ಆಧಾರಗಳೇ ಇಲ್ಲ ಅಂತ ಹೇಳಬೇಕು. ಅಶೋಕ ಗ್ರೇಟ್ ಅಂತ ಆದದ್ದು ತೀರಾ ಇನ್ನೂರು ವರ್ಷ ಮೊದಲು ಆದ ಬೆಳವಣಿಗೆ. ಆರ್ಯನ್ invasion ಥಿಯರಿಯಂತ ಕಟ್ಟು ಕತೆ ಒಮ್ಮೆ ಚಾಲ್ತಿಗೆ ಬಂದ ಮೇಲೆ ತೆಗೆದು ಹಾಕುವುದಕ್ಕೆ ಬಡಿದಾಟವೇ ಆಗಬೇಕಾಗಿದೆ. ಇತಿಹಾಸವನ್ನು ಗೆದ್ದವರೇ ಬರೆಯುವುದರಿಂದ ಅವರಿಗೆ ಬೇಕಾದಂತೆ ಬರೆಯುವುದೂ ಮಾಮೂಲಿಯೇ. ದುಷ್ಟನೂ, ಮತಾಂಧನೂ ಆಗಿದ್ದ ಔರಂಗಜೇಬನಿಗೆ ಎಷ್ಟು ಪ್ರಚಾರ ಸಿಕ್ಕಿದೆ ನೋಡಿ , ತುಂಬಾ ಸಜ್ಜನನೂ ಹಿಂದೂ ಮುಸ್ಲಿಂ ಗೆಳೆತನದ ಪ್ರತೀಕವೂ ಆಗಿದ್ದ ದಾರಾ ಶಿಕೋವಿಗೆ ಅವನು ಔರಂಗಜೇಬನ ಅಣ್ಣನೇ ಆದರೂ ಅಷ್ಟು ಪ್ರಚಾರ ಸಿಕ್ಕಿಲ್ಲ. ಇಂತದ್ದು, ಇತಿಹಾಸ ಬಲಶಾಲಿಗಳ ಪರವಾಗಿ ಇರುವುದು ಬೇಕಾದಷ್ಟಿದೆ
ಹಲ್ಮಿಡಿಯ ಶಾಸನ ಕನ್ನಡದ ಅತ್ಯಂತ ಹಳೆಯ ಶಾಸನ ಅಂತ ಶಾಪ ಹಾಕಿ ಶಾಲೆಯಲ್ಲಿ ಬಾಯಿ ಪಾಠ ಮಾಡಿರ್ತೀರಿ. ನಿಮ್ಮನ್ನು ಅದರ ಮುಂದೆ ನಿಲ್ಲಿಸಿದರೆ ಎಷ್ಟು ಜನ ಓದಬಲ್ಲಿರಿ ಹೇಳಿ ನೋಡೋಣ. ಯಾಕೆ ಈ ಪ್ರಶ್ನೆ ಅಂತೀರಾ ? ಯಾಕೆಂದರೆ ನಾವು ಈಗ ಕನ್ನಡ ಅಂತ ಹೇಳುವ ಲಿಪಿಯಲ್ಲಿ ಅದು ಇಲ್ಲ! ಅಷ್ಟು ಸಾಲದು ಅಂತ ಸ್ಪೇಸ್ ಗಳ ಬಳಕೆಯೂ ಮಾಡದೆ ಎಲ್ಲ ಅಕ್ಷರಗಳನ್ನ ಮುದ್ದೆ ಮಾಡಿ ಗುಡ್ಡೆ ಹಾಕಿದ ತರ ಬರೆದಿದ್ದಾರೆ. ನಾವು ಈಗ ಬಳಸುತ್ತಿರುವ ಲಿಪಿ ಬಂದದ್ದು ಕದಂಬರ ಕಾಲದಲ್ಲಿ. ಒಂದು ಮೂರು ಸಾವಿರ ವರ್ಷಗಳಿಂದ ಕನ್ನಡ ಇದೆ ಅಂತ ಇಟ್ಟುಕೊಂಡರೆ ಈಗ ಇರುವ ಲಿಪಿ ಸುಮಾರು ಎರಡು ಸಾವಿರ ವರ್ಷ ಇರಲಿಲ್ಲ. ಬಲದಿಂದ ಎಡಕ್ಕೆ ಬರೆಯುವುದು ಅರೇಬಿಕ್ ಪದ್ಧತಿ ಅಂದುಕೊಂಡವರಿಗೂ ಒಂದು ಸುದ್ದಿ ಇದೆ, ಇಂತವು ನಮ್ಮಲ್ಲೂ ಇದ್ದವು. ಹರಪ್ಪಾ ಮೊಹೆಂಜೋದಾರೋ ದಲ್ಲಿ ಇದ್ದದ್ದು ಬಲದಿಂದ ಎಡಕ್ಕೆ ಬರೆಯುವ ಲಿಪಿ ಇರಬಹುದು ಅಂತ ಈಗ ಊಹಿಸಿದ್ದಾರೆ, ಕೆಳಗಿಂದ ಮೇಲೆ ಬರೆದಿರುವ ಶಾಸನಗಳೂ ನಮ್ಮಲ್ಲಿ ಸಿಕ್ಕಿವೆ. ಸುದೀಪ, ಪುನೀತ, ದರ್ಶನ , ಪ್ರವೀಣ ಹೀಗೆ ಬರೆಯುವುದು ಕನ್ನಡದ ಕ್ರಮ, ಈಗ ಹಿಂದಿ ಶೈಲಿಯಲ್ಲಿ ಇವು ಸುದೀಪ್, ಪುನೀತ್ , ದರ್ಶನ್ ಆಗಿವೆ, ಹೌದು ತಾನೇ ? ಈಗ ಒಮ್ಮೆ ಶ್ರೀಲಂಕಾಕ್ಕೆ ಹೋಗಿ ಬನ್ನಿ. ಅಲ್ಲಿ ಅರ್ಜುನ್ ರಣತುಂಗ್, ಕುಮಾರ್ ಧರಮ್ ಸೇನ್ ಗಳು ಇಲ್ಲ . ಅಲ್ಲಿರುವುದು ಅರವಿಂದ ಡಿಸಿಲ್ವ, ಕುಮಾರ ಧರ್ಮಸೇನ, ಅರ್ಜುನ ರಣತುಂಗದಂತ ಕನ್ನಡದ ಶೈಲಿಯ, ಅಕಾರ ಇರುವ ಹೆಸರುಗಳೇ!
ಮತ್ತೆ ಆಹಾರಕ್ಕೆ ಬರೋಣ. ಭಾರತೀಯ ಆಹಾರ ಪದ್ದತಿಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಬರೆದಿರುವ ವಿದ್ವಾಂಸ ಕೆಟಿ ಅಚಯ್ಯ ಅನ್ನುವವರು. ಅವರು ಹೇಳುವಂತೆ ಇಡ್ಲಿಯೂ ಇಲ್ಲಿಯದ್ದಲ್ಲವಂತೆ. ಅದು ಇಂಡೋನೇಷಿಯಾದಿಂದ ಬಂದಿದೆ ಅಂತ ಅವರು ಬರೆದಿದ್ದಾರೆ. ಇದು ಇಡ್ಲಿಪ್ರಿಯರ ವಲಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಡ್ಲಿಯೇ ನಮ್ಮದಲ್ಲ ಅಂತಾದ ಮೇಲೆ ಈ ಬಾಳುವೆ ಇದ್ದರೆಷ್ಟು ಹೋದರೆಷ್ಟು ಅನ್ನುವವರು ಇರಬಹುದು. ಕೆಲವರು ಇದು ತಪ್ಪು ಅಂತ ವಾದಿಸಿಯೂ ಇದ್ದಾರೆ . ದಕ್ಷಿಣ ಕನ್ನಡದ ಪತ್ರೊಡೆ, ಕೊಟ್ಟೆ ಇಡ್ಲಿ, ಕೊಟ್ಟಿಗೆ, ಉಂಡೆ(ಪುಂಡಿ) ಇವೆಲ್ಲ ಇಡ್ಲಿಯ ಹತ್ತಿರದ ಸಂಬಂಧಿಗಳೇ. ಹೀಗೆ ಹಬೆಯಲ್ಲಿ ಬೇಯಿಸುವ ಕ್ರಮ ನಮ್ಮಲ್ಲಿ ಮೊದಲೇ ಇತ್ತು ಅಂತ ನಿಟ್ಟುಸಿರು ಬಿಡಬಹುದು.
ಅಂತೂ ಸಂಪ್ರದಾಯ, ನಮ್ಮದು ಅನ್ನುವ ಕಲ್ಪನೆಗಳೆಲ್ಲ ಐನೂರು ವರ್ಷಕ್ಕೊಮ್ಮೆ ಹಲವು ವಿಷಯಗಳಲ್ಲಿ ಬದಲಾಗುತ್ತವೆ ಅನ್ನುವುದಕ್ಕೆ ಅಡ್ಡಿಯಿಲ್ಲ.