Friday, 2 December 2016

ಪರಂಪರೆಯ ಬೇರುಗಳು ಮತ್ತು ಹೊರಗಿನ ಗಾಳಿ ಬೆಳಕು!

ಈ ದೇಶದ ಸಂಸ್ಕೃತಿ, ಸಂಪ್ರದಾಯ, ಪರಂಪರೆ, ಇತಿಹಾಸ ಇದರ ಬಗ್ಗೆಯೆಲ್ಲ ನನಗೆ ತಕ್ಕ ಮಟ್ಟಿಗೆ ಗೊತ್ತಿದೆ ಅನ್ನುವವರು ಕೈ ಎತ್ತಿ ನೋಡೋಣ ! ಇದನ್ನು ಓದಿ ಮುಗಿಸಿ ಆದ ಮೇಲೂ ಕೈ ಅರ್ಧದಷ್ಟೂ ಕೆಳಗೆ ಹೋಗಲಿಲ್ಲ ಅನ್ನುವವರು ಆನಂತರ ಇನ್ನೊಂದು ಸಲ ಕೈ ಎತ್ತಿ ಪುನೀತರಾಗಬಹುದು.
ಒಂದೊಮ್ಮೆ ನಾನು ಅರ್ಜೆಂಟೀನಾದ Buenos Airesನಲ್ಲಿ ಇದ್ದೆ. ಎಲ್ಲಿಗೆ ಹೋದರೂ ನಮ್ಮ ಶೈಲಿಯ ಊಟ ಮಾಡದಿದ್ದರೆ ನನಗೆ ಮನಸು ಕೇಳುವುದಿಲ್ಲ, ಸರಿ, ಡೆಲ್ಲಿ ದರ್ಬಾರ್ ಅನ್ನುವ ಹೋಟೆಲು ಸಿಕ್ಕಿಯೂ ಬಿಟ್ಟಿತು. ನಮ್ಮೂರಿನ ತರದ ಚಾ ಹೇಳಿ, ಹಬೆಯಾಡುವ ಕಪ್ ಹಿಡಿದು ಸುರುಕ್ ಅಂತ ಎಳೆದು ಕುಡಿಯದೇ ಹೋದರೆ ಅದನ್ನೂ ಒಂದು ಹೋಟೆಲ್ ಭೇಟಿ ಅನ್ನುತ್ತಾರೆಯೇ ? ಒಂದು ಚಾ ಹೇಳಿದೆ, ವಿದೇಶ ಆದ್ದರಿಂದ ಸಕ್ಕರೆ ಹಾಕಿಯೇ ಮಾಡಿ ಅಂದಿದ್ದೆ. ಬಂತು. ಕುಡಿದು ನೋಡಿದರೆ ಸಕ್ಕರೆಯೇ ಹಾಕಿಲ್ಲ. ಅಮೇರಿಕಾದಲ್ಲಿ ಹಾಲು ಸಕ್ಕರೆ ಹಾಕದೆ, ಬರೀ ನೀರು ಮತ್ತು ಟೀ ಪುಡಿ ಇರುವ ಚಾ ಕುಡಿಯುವ ಕ್ರಮ ಇದೆ. ಅಲ್ಲಿನ ಇಂಡಿಯನ್ ಹೊಟೇಲುಗಳಲ್ಲಿ ಕೆಲವು ಕಡೆ ನೀನು ನಕ್ಕರೆ ಹಾಲು ಸಕ್ಕರೆ, ನಗದಿದ್ದರೂ ಹಾಲು ಸಕ್ಕರೆ ಅಂತ ಎಲ್ಲ ಹಾಕಿಯೇ ಕೊಡುತ್ತಾರೆ. ನನ್ನ ಸಹೋದ್ಯೋಗಿ Jamie ಅಂತೊಬ್ಬಳು ಇದನ್ನು ತುಂಬ ಇಷ್ಟ ಪಟ್ಟು, "ಐ ಲವ್ ಇಂಡಿಯನ್ ಚಾಯ್ ಟೀ" ಅಂತಲೇ ಹೇಳುತ್ತಿದ್ದದ್ದೂ ನೆನಪಿದೆ. ಇದೇನಿದು ಸಕ್ಕರೆ ಹಾಕಿ ಅಂದರೂ ಹಾಕಿಲ್ಲ ಅಂತ ಕೇಳಿದೆ. "ಅಯ್ಯೋ, ನಿಮ್ಮ ಚಾಕ್ಕೆ ನಾವು ಹೇಗೆ ಸಕ್ಕರೆ ಹಾಕಲು ಸಾಧ್ಯ" ಅನ್ನಬೇಕೆ. ಇದೇನು ಒಳ್ಳೆ ಅಮೆರಿಕದವರ ತರ ಮಾತಾಡ್ತಾರಲ್ಲ ಅಂದುಕೊಂಡು, "ನಾನೇ ಹೇಳ್ತಾ ಇದ್ದೇನಲ್ಲ, ಸಕ್ಕರೆ ಹಾಕಿ ಇಂಡಿಯನ್ ಟೀ ಮಾಡಿಕೊಡಿ, ನಿಮಗೆ ಎಷ್ಟು ಹಾಕ್ತೀರೋ ಅಷ್ಟೇ ಹಾಕಿ, ಸಕ್ಕರೆ ಹಾಕದಿದ್ರೆ ಇಂಡಿಯನ್ ಟೀ ಹೇಗಾಗ್ತದೆ" ಅಂತೆಲ್ಲ ಎಷ್ಟು ಬಡಕೊಂಡರೂ ಜಪ್ಪಯ್ಯ ಅನ್ನದೆ ಅದೇ ರಾಗ ಅದೇ ಹಾಡು ಅಪಶ್ರುತಿಯಲ್ಲಿಯೇ ಹಾಡಿ ಕಛೇರಿ ಮುಗಿಸಿದರು.
ಚೋದ್ಯ ಅದಲ್ಲ. ನಮಗೆ ಇಂಡಿಯನ್ ಟೀ ಅಂತ ಏನೆಲ್ಲ ಕಲ್ಪನೆಗಳು ಇದ್ದರೂ ಚಾ ನಮ್ಮ ದೇಶದ್ದಲ್ಲ. ಮಹಾಭಾರತದಲ್ಲಿ ಕೃಷ್ಣ ವಿದುರನ ಮನೆಗೆ ಹೋಗುತ್ತಾನಲ್ಲ, ಆವಾಗ ವಿದುರ ಬೇರೇನು ಹೇಳಿದನೋ ಗೊತ್ತಿಲ್ಲ. "ಓಹೋ ಕೃಷ್ಣ ದೇವರು, ಬನ್ನಿ ಬನ್ನಿ, ಚಾ ಮಾಡುದಾ ಅಲ್ಲ ಕಾಫಿ ತಗೋಳ್ತೀರಾ" ಅಂತ ಮಾತ್ರ ಹೇಳಿರಲಾರ. ಯಾಕಂದರೆ ಚಾ ಕಾಫಿ ಎರಡೂ ಆಗ ಇಲ್ಲಿ ಇರಲಿಲ್ಲ! ಕಾಫಿ ಅರೇಬಿಯಾದಿಂದ ಬಂದರೆ ಚಾ ಚೀನಾದಿಂದ ಬ್ರಿಟಿಷರ ಮೂಲಕ ಬಂತು. ಇನ್ನೊಂದು ತಮಾಷೆ ಅಂದರೆ ಕಾಡು ಗಿಡವಾಗಿ ಆಸ್ಸಾ೦ನ ಕಾಡುಗಳಲ್ಲಿ ಚಾ ಮೊದಲೇ ಇತ್ತಂತೆ, ಅಲ್ಲಿನ ಜನ ಅದನ್ನು ನೀರಲ್ಲಿ ಕುದಿಸಿ ಕುಡಿಯುತ್ತಲೂ ಇದ್ದರಂತೆ. ಅಲ್ಲಿಗೆ ಹಾಲು ಸಕ್ಕರೆ ಹಾಕದೆ ಕುಡಿಯುವುದೂ ಭಾರತೀಯ ಸಂಪ್ರದಾಯವೇ ಅಂತ ಆಯ್ತಲ್ಲ!
ನನ್ನ ಉತ್ತರ ಭಾರತದ ಸಹೋದ್ಯೋಗಿ ಒಬ್ಬ ದಿನಾ ಕೆಫೆಟೇರಿಯಾದಲ್ಲಿ ಆಲೂಗಡ್ಡೆ ಸಬ್ಜಿ ಬಿಟ್ಟರೆ ಬೇರೇನೂ ತಗೊಳ್ಳುತ್ತಿರಲಿಲ್ಲ. ವಾರಕ್ಕೆ ಹದಿನಾಲ್ಕು ದಿನವೂ ಬಟಾಟೆಯ ಧ್ಯಾನ. ಕೆಲವರು ಬೆಂಡೆಕಾಯಿ ಪದಾರ್ಥಕ್ಕೂ ಇರಲಿ ಅಂತ ಆಲೂಗಡ್ಡೆ ಸೇರಿಸುವುದು ಇದೆ. ನೀವು ಮಿಕ್ಸೆಡ್ ವೆಜ್ ಸಬ್ಜಿ ಅಂತ ಮಾಡಿದರೆ ಅದು ಆಲೂಗಡ್ಡೆ ಸಬ್ಜಿಯೇ ಆಗಿರುತ್ತದೆ ಅಂತ ಗೇಲಿ ಮಾಡುತ್ತಿದ್ದೆ. ಇಷ್ಟು ಭಾರತೀಯ ಆಗಿರುವ ಆಲೂಗಡ್ಡೆಯೂ ಇಲ್ಲಿನದ್ದಲ್ಲ, ದಕ್ಷಿಣ ಅಮೇರಿಕಾದಿಂದ ಬಂದದ್ದು ಅಂದರೆ ಆಶ್ಚರ್ಯ ಆಗಬಹುದು. ಟೊಮ್ಯಾಟೋ ನಮ್ಮದಲ್ಲ, ಕಡ್ಲೆ ಕಾಯಿ ಮ್ಮದಲ್ಲ, ಅಷ್ಟೇಕೆ ಮೆಣಸೂ ನಮ್ಮದಲ್ಲ. ಹಾಗಾದರೆ ಇಂತಾ ಖಾರ ಪ್ರಿಯರು, ಅದೂ ಆಂಧ್ರದ ಜನ ಏನು ಉಪವಾಸ ಕೂರುತ್ತಿದ್ದರೇ ಅಂತ ಕೇಳಬಹುದು. ಇಲ್ಲಿ ಮೆಣಸಿಗೆ ಬದಲಾಗಿ ಇದ್ದದ್ದು ಕಾಳು ಮೆಣಸು, ಗಾಂಧಾರಿ ಮೆಣಸು ಕೂಡ ಇತ್ತಂತೆ
ನಾನು ನೋಡಿದ ಯೂರೋಪಿನ ಚಿತ್ರವೊಂದರಲ್ಲಿ ಟರ್ಕಿಶ್ ಹೋಟೆಲೊಂದರ ಕತೆ ಇತ್ತು, ಅದರ ಹೆಸರು ಕೋಫ್ತಾ. ಅಲ್ಲಿಗೆ ಮಲಾಯಿ ಕೋಫ್ತಾದ ಕೋಫ್ತಾ ನಮ್ಮದಲ್ಲ ಅಂತಾಯಿತಲ್ಲ. ಜಿಲೇಬಿ, ಜಾಮೂನಿನಂತ ಪಕ್ಕಾ ಭಾರತೀಯ ಅನ್ನಿಸುವ ಖಾದ್ಯಗಳೂ ಪರ್ಷಿಯಾ ಕಡೆಯಿಂದಲೇ ಇಲ್ಲಿಗೆ ಬಂದಿದೆ. ಇನ್ನು ಪಲಾವು, ಬಿರಿಯಾನಿ, ಸಮೋಸ ಇವೆಲ್ಲ ಹೇಗೂ ಇಲ್ಲಿಯವು ಅಲ್ಲ. ಯಾರಾದರೂ ಸಿಕ್ಕಾಪಟ್ಟೆ ಹೈಫೈ ಲಲನೆಯರು ಐ ಲವ್ ಇಟಾಲಿಯನ್, ಐ ಲವ್ ಕಾಂಟಿನೆಂಟಲ್ ಅಂತೆಲ್ಲ ಸಾಲು ಸಾಲು ವಿದೇಶಿ ಹೆಸರುಗಳು ಹೇಳಿದರೆ, ನೀವೂ ಹೆದರದೆ, ಐ ಲವ್ ಜಾಮೂನ್ , ಐ ಲವ್ ಪಲಾವ್ ಅಂತ ಅಂದು ನೋಡಿ!
ಇನ್ನು ಧರ್ಮದ ವಿಷಯ. ವೇದಗಳೇ ಹಿಂದೂ ಧರ್ಮದ ಮೂಲ ಅನ್ನಬಹುದು. ವೇದಗಳಿಗೆ ಹೋದರೆ ಅಲ್ಲಿ ವಿಷ್ಣು, ಶಿವ, ಗಣಪತಿಯಂತ ದೇವರುಗಳ ಪ್ರಸ್ತಾಪವೇ ಇಲ್ಲವಂತೆ. ದೇವರುಗಳು ಬಂದಿರುವುದು ಆಮೇಲೆ ಹುಟ್ಟಿಕೊಂಡ ಪುರಾಣಗಳಲ್ಲಿ. ಅದರಲ್ಲೂ ಸ್ವಾರಸ್ಯಗಳಿವೆ ಈಗ ಕೃಷ್ಣ ಅಂದಾಗ ನಮಗೆ ಒಂದಷ್ಟು ವಿಷಯಗಳು ತಲೆಗೆ ಬರುತ್ತವೆ, ಮತ್ತು ಕೃಷ್ಣ ಅಂದರೆ ಮಹಾಭಾರತದ ಕೃಷ್ಣ ಅಂತಲೇ ಜನ ಭಾವಿಸುತ್ತಾರೆ. ಆದರೆ ಕೃಷ್ಣನ ಬಗ್ಗೆ ಚಾಲ್ತಿಯಲ್ಲಿರುವ ಅರ್ಧದಷ್ಟು ಕತೆಗಳು ಬಂದಿರುವುದು ಭಾಗವತ ಪುರಾಣ ಅನ್ನುವ ಇನ್ನೊಂದು ಪುರಾಣದಿಂದ. ರಾಮ ವಿಷ್ಣುವಿನ ಅವತಾರ ಅನ್ನುವ ಕಲ್ಪನೆ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ ಅಂತ ಕೆಲವರು ಹೇಳಿದ್ದಾರೆ. ಮಹಾಭಾರತದಲ್ಲಂತೂ ಹೀಗೆ ಆಮೇಲೆ ಸೇರಿಸಿದ ಕತೆಗಳ ರಾಶಿಯೇ ಇದೆ. ದ್ರೌಪದಿಯ ವಸ್ತ್ರ ಎಳೆದದ್ದೂ, ಕೃಷ್ಣ ಮುಗಿಯದಷ್ಟು ವಸ್ತ್ರ ಕೊಟ್ಟದ್ದೂ ಈಗ ಪ್ರಸಿದ್ಧ. ಈ ಅಕ್ಷಯ ಅಂಬರದ ಕತೆ ವ್ಯಾಸರ ಭಾರತದಲ್ಲಿ ಇಲ್ಲವಂತೆ. ಇದು ಯಾರೋ ಕೃಷ್ಣನ ಭಕ್ತರು, "ನಮ್ಮ ದೇವರು ಗ್ರೇಟ್" ಅಂತ ತೋರಿಸುವುದಕ್ಕೆ ಆಮೇಲೆ ಸೇರಿಸಿದ ಕತೆ.
ಸೀತೆಯನ್ನು ರಾಮ ಕಾಡಿಗೆ ಅಟ್ಟುವುದು, ಲವ ಕುಶರ ಕತೆ ಎಲ್ಲ ಮೂಲ ರಾಮಾಯಣದಲ್ಲಿ ಇಲ್ಲ. ಇನ್ನೊಂದು ವಿಶೇಷ ಅಂದರೆ , ಏನಿಲ್ಲ ಅಂದರೂ ಸುಮಾರು ಮುನ್ನೂರಕ್ಕೂ ಹೆಚ್ಚು ರಾಮಾಯಣಗಳು ದೇಶ ವಿದೇಶಗಳಲ್ಲಿ ಇವೆ, ಇವು ಮುನ್ನೂರು ತರದಲ್ಲಿಯೂ ಇವೆ! ಇನ್ನೊಂದು ಭಯಂಕರ ಪಾಯಿಂಟು ನೋಡಿ , ಶ್ರೀಲಂಕಾಕ್ಕೆ ಶ್ರೀಲಂಕಾ ಅನ್ನುವ ಹೆಸರು ಬಂದದ್ದು ಈಚೆಗೆ, ಅದರ ಹಳೇ ಹೆಸರು ಸಿಂಹಳ ದ್ವೀಪ, ಅಂದಮೇಲೆ ರಾಮಾಯಣ ಬರೆದವರು ಅದನ್ನು ಲಂಕಾ ಅನ್ನುವ ಹೊಸ ಹೆಸರಿಂದ ಆ ಹಳೇ ಕಾಲದಲ್ಲಿ ಹೇಗೆ ಕರೆದರು ಅಂತ ಪ್ರಶ್ನೆ ಬರುತ್ತದಲ್ಲ! ಹಾಗಾಗಿ ರಾವಣ ಇದ್ದದ್ದು ಈಗಿನ ಶ್ರೀಲಂಕಾದಲ್ಲಿ ಅಲ್ಲ, ಮಾಲ್ಡೀವ್ಸ್ ನ ಹತ್ತಿರ ಅಂದವರೂ ಇದ್ದಾರೆ! ಅಂತೂ ಈಗ ಚಾಲ್ತಿಯಲ್ಲಿ ಇರುವ ರಾಮಾಯಣ, ಮಹಾಭಾರತ ಓದಿದವರು ವ್ಯಾಸ, ವಾಲ್ಮೀಕಿಗಳ ಮೂಲ ಕಥೆಗಳನ್ನು ಓದಿದರೆ ಟಿವಿ ನೈನ್ ನ ಧಾಟಿಯಲ್ಲಿ, "ಹೀಗೂ ಉಂಟೆ" ಅನ್ನಬೇಕಾದೀತು.
ಹಿಂದೂಗಳು ಅಂದಮೇಲೆ ದೇವಾಲಯಗಳು ಬರುತ್ತವಲ್ಲ . ದೇವಾಲಯಗಳು ಬಂದದ್ದೂ ಸುಮಾರು ಮೂರು ಸಾವಿರ ವರ್ಷಗಳ ಮೊದಲಷ್ಟೇ . ಈ ಪುರಾಣಗಳಲ್ಲಿ ಬಂದಿರುವ ನಕ್ಷತ್ರಗಳ ಲೆಕ್ಕ ಮಾಡಿ ರಾಮಾಯಣದ ಕಾಲ ಕ್ರಿ ಪೂ 5000 ಇದ್ದೀತು ಅಂದವರು ಇದ್ದಾರೆ. ಹೀಗಾಗಿ ಒಂದು ಏಳು ಸಾವಿರ ವರ್ಷಗಳಿಂದ ಈ ಧರ್ಮ ಇದೆ ಅಂತ ಇಟ್ಟುಕೊಂಡರೆ, ಅದರಲ್ಲಿ ಸುಮಾರು ನಾಲ್ಕು ಸಾವಿರ ವರ್ಷ ದೇವಾಲಯಗಳೇ ಇರಲಿಲ್ಲ ಅಂದರೆ ಅಚ್ಚರಿಯ ವಿಷಯವೇ. ದೇವಾಲಯಗಳೂ ಮೊದ ಮೊದಲು ಜೇಡಿ ಮಣ್ಣಿನ, ಹುಲ್ಲು ಹಾಸು ಇರುವ ಕಟ್ಟಡಗಳಾಗಿ ಇದ್ದವಂತೆ. ಇನ್ನು ಸತ್ಯನಾರಾಯಣ ಪೂಜೆಯಂತೂ ತೀರ ಇನ್ನೂರು ಮುನ್ನೂರು ವರ್ಷ ಮೊದಲು ಹುಟ್ಟಿದ್ದು ಅಂತ ಶ್ರೀನಿವಾಸ ಹಾವನೂರರು ಹೇಳಿದ್ದಾರೆ.
ಕಲೆಗಳ ವಿಚಾರಕ್ಕೆ ಬರೋಣ. ಭರತ ನಾಟ್ಯ ನಮ್ಮ ಸಾಂಪ್ರದಾಯಿಕ ನಾಟ್ಯ, ಸರಿ ತಾನೇ ? ಇಲ್ಲಿ ಕೇಳಿ. ನಾವು ಈಗ ಭರತ ನಾಟ್ಯ ಅಂತ ಯಾವುದನ್ನು ಹೇಳುತ್ತೇವೋ ಅದು ಸುಮಾರು ಇನ್ನೂರು ವರ್ಷಕ್ಕೆ ಮೊದಲಷ್ಟೇ ಹುಟ್ಟಿದ್ದು. ಮೊದಲಿಂದ ಇದ್ದದ್ದು ದೇವದಾಸಿಯರು ದೇವಾಲಯಗಳಲ್ಲಿ ಮಾಡುತ್ತಿದ್ದ ನೃತ್ಯ, ರಾಜರ ಆಸ್ಥಾನಗಳಲ್ಲಿ ನರ್ತಕಿಯರ ನೃತ್ಯ, ಸಾದಿರ್ ನಾಟ್ಯ , ಭಾಗವತರ ಮೇಳ ಇಂತವು. ಇವನ್ನು ನೋಡಿ, ಮತ್ತು ತುಂಬಾ ಮೊದಲು ಭರತ ಮುನಿ ಬರೆದ ನಾಟ್ಯ ಶಾಸ್ತ್ರ ಪುಸ್ತಕ ಇಟ್ಟುಕೊಂಡು ಇತ್ತೀಚಿಗೆ ಚಾಲ್ತಿಗೆ ಬಂದ ನೃತ್ಯ ಪ್ರಕಾರ ಇದು. ಅದಕ್ಕೆ ಈಗಿನ ರೂಪ ಬಂದದ್ದು ಕಳೆದ ಎಂಬತ್ತು ವರ್ಷಗಳಲ್ಲಿ ಅಂದರೆ ಆಶ್ಚರ್ಯವೇ. ಹಾಗೆ ನೋಡಿದರೆ ನಮ್ಮ ಯಕ್ಷಗಾನ, ಕಥಕ್ ಇವಕ್ಕೆಲ್ಲ ಒಂದು 900 ವರ್ಷಗಳ ಇತಿಹಾಸವಾದರೂ ಇದೆ, ಭರತನಾಟ್ಯ ಮಾತ್ರ ಈಚೆಗಿನದು.
ವಾರಕ್ಕೆ ಏಳು ದಿನ ಅನ್ನುವ ಕಲ್ಪನೆಯೂ ಬಂದು ಬರೇ ಸಾವಿರದ ಇನ್ನೂರು ವರ್ಷ ಆಗಿರಬಹುದಷ್ಟೆ
ಶಾಸ್ತ್ರೀಯ ಸಂಗೀತ ಅಂದ ಕೂಡಲೇ ಹಾರ್ಮೋನಿಯಮ್ , ಪಿಟೀಲುಗಳು ನೆನಪಾಗುತ್ತವಲ್ಲ. ಪಕ್ಕಾ ಶಾಸ್ತ್ರೀಯ ಶೈಲಿಯಲ್ಲಿ ಯಾರಾದರೂ ಪಿಟೀಲು ನುಡಿಸುವುದು ನೋಡಿ ತಲೆ ಆಡಿಸಿರುತ್ತೀರಿ. ಆದರೆ ಅವೂ ಯೂರೋಪಿನಿಂದ ಬಂದವು ಅಂದರೆ ಹೌಹಾರುವಂತೆ ಆಗಬಹುದು. ತಂಬೂರಿಯೂ ಅರೇಬಿಯಾದ್ದು ಅಂತ ಪಾವೆಂ ಆಚಾರ್ಯರು ಹೇಳಿದ್ದಾರೆ, ತಂಬೂರಿ ಮೀಟಿದವ ಭವಾಬ್ದಿ ದಾಟಿದವ ಹಾಡನ್ನು ತಿದ್ದಿ ಬರೆಯಬೇಕಾದೀತು . ತಬಲಾ ಹೇಗೂ ನಮ್ಮದಲ್ಲ. ಇನ್ನು ಉಳಿದದ್ದು ಏನು ಅಂತ ಕೇಳಬೇಡಿ!
ಇನ್ನೊಂದು ವಿಚಿತ್ರ ಅಂದರೆ ನಮ್ಮ ಇತಿಹಾಸವನ್ನು ಅನೇಕ ಸಲ ವಿದೇಶಿಯರು ಬರೆದದ್ದರಿಂದ, ಅವರು ಅವರ ಮೂಗಿನ ನೇರಕ್ಕೆ ಬರೆದು, ಅದೆಷ್ಟೋ ತಲೆಬುಡ ಇಲ್ಲದ ವಿಷಯಗಳು ಸೇರಿ ಕಿಚ್ಡಿ ಆಗಿದೆ. ಉದಾಹರಣೆಗೆ ಸಾಮ್ರಾಟ ಅಶೋಕ ಅಂತಾ ಒಳ್ಳೆ ಮನುಷ್ಯ ಅನ್ನುವುದಕ್ಕೆ, ಶ್ರೇಷ್ಟಾತಿಶ್ರೇಷ್ಟ ರಾಜ ಅನ್ನುವುದಕ್ಕೆ ಸರಿಯಾದ ಸಾಕ್ಷಿ ಆಧಾರಗಳೇ ಇಲ್ಲ ಅಂತ ಹೇಳಬೇಕು. ಅಶೋಕ ಗ್ರೇಟ್ ಅಂತ ಆದದ್ದು ತೀರಾ ಇನ್ನೂರು ವರ್ಷ ಮೊದಲು ಆದ ಬೆಳವಣಿಗೆ. ಆರ್ಯನ್ invasion ಥಿಯರಿಯಂತ ಕಟ್ಟು ಕತೆ ಒಮ್ಮೆ ಚಾಲ್ತಿಗೆ ಬಂದ ಮೇಲೆ ತೆಗೆದು ಹಾಕುವುದಕ್ಕೆ ಬಡಿದಾಟವೇ ಆಗಬೇಕಾಗಿದೆ. ಇತಿಹಾಸವನ್ನು ಗೆದ್ದವರೇ ಬರೆಯುವುದರಿಂದ ಅವರಿಗೆ ಬೇಕಾದಂತೆ ಬರೆಯುವುದೂ ಮಾಮೂಲಿಯೇ. ದುಷ್ಟನೂ, ಮತಾಂಧನೂ ಆಗಿದ್ದ ಔರಂಗಜೇಬನಿಗೆ ಎಷ್ಟು ಪ್ರಚಾರ ಸಿಕ್ಕಿದೆ ನೋಡಿ , ತುಂಬಾ ಸಜ್ಜನನೂ ಹಿಂದೂ ಮುಸ್ಲಿಂ ಗೆಳೆತನದ ಪ್ರತೀಕವೂ ಆಗಿದ್ದ ದಾರಾ ಶಿಕೋವಿಗೆ ಅವನು ಔರಂಗಜೇಬನ ಅಣ್ಣನೇ ಆದರೂ ಅಷ್ಟು ಪ್ರಚಾರ ಸಿಕ್ಕಿಲ್ಲ. ಇಂತದ್ದು, ಇತಿಹಾಸ ಬಲಶಾಲಿಗಳ ಪರವಾಗಿ ಇರುವುದು ಬೇಕಾದಷ್ಟಿದೆ
ಹಲ್ಮಿಡಿಯ ಶಾಸನ ಕನ್ನಡದ ಅತ್ಯಂತ ಹಳೆಯ ಶಾಸನ ಅಂತ ಶಾಪ ಹಾಕಿ ಶಾಲೆಯಲ್ಲಿ ಬಾಯಿ ಪಾಠ ಮಾಡಿರ್ತೀರಿ. ನಿಮ್ಮನ್ನು ಅದರ ಮುಂದೆ ನಿಲ್ಲಿಸಿದರೆ ಎಷ್ಟು ಜನ ಓದಬಲ್ಲಿರಿ ಹೇಳಿ ನೋಡೋಣ. ಯಾಕೆ ಈ ಪ್ರಶ್ನೆ ಅಂತೀರಾ ? ಯಾಕೆಂದರೆ ನಾವು ಈಗ ಕನ್ನಡ ಅಂತ ಹೇಳುವ ಲಿಪಿಯಲ್ಲಿ ಅದು ಇಲ್ಲ! ಅಷ್ಟು ಸಾಲದು ಅಂತ ಸ್ಪೇಸ್ ಗಳ ಬಳಕೆಯೂ ಮಾಡದೆ ಎಲ್ಲ ಅಕ್ಷರಗಳನ್ನ ಮುದ್ದೆ ಮಾಡಿ ಗುಡ್ಡೆ ಹಾಕಿದ ತರ ಬರೆದಿದ್ದಾರೆ. ನಾವು ಈಗ ಬಳಸುತ್ತಿರುವ ಲಿಪಿ ಬಂದದ್ದು ಕದಂಬರ ಕಾಲದಲ್ಲಿ. ಒಂದು ಮೂರು ಸಾವಿರ ವರ್ಷಗಳಿಂದ ಕನ್ನಡ ಇದೆ ಅಂತ ಇಟ್ಟುಕೊಂಡರೆ ಈಗ ಇರುವ ಲಿಪಿ ಸುಮಾರು ಎರಡು ಸಾವಿರ ವರ್ಷ ಇರಲಿಲ್ಲ. ಬಲದಿಂದ ಎಡಕ್ಕೆ ಬರೆಯುವುದು ಅರೇಬಿಕ್ ಪದ್ಧತಿ ಅಂದುಕೊಂಡವರಿಗೂ ಒಂದು ಸುದ್ದಿ ಇದೆ, ಇಂತವು ನಮ್ಮಲ್ಲೂ ಇದ್ದವು. ಹರಪ್ಪಾ ಮೊಹೆಂಜೋದಾರೋ ದಲ್ಲಿ ಇದ್ದದ್ದು ಬಲದಿಂದ ಎಡಕ್ಕೆ ಬರೆಯುವ ಲಿಪಿ ಇರಬಹುದು ಅಂತ ಈಗ ಊಹಿಸಿದ್ದಾರೆ, ಕೆಳಗಿಂದ ಮೇಲೆ ಬರೆದಿರುವ ಶಾಸನಗಳೂ ನಮ್ಮಲ್ಲಿ ಸಿಕ್ಕಿವೆ. ಸುದೀಪ, ಪುನೀತ, ದರ್ಶನ , ಪ್ರವೀಣ ಹೀಗೆ ಬರೆಯುವುದು ಕನ್ನಡದ ಕ್ರಮ, ಈಗ ಹಿಂದಿ ಶೈಲಿಯಲ್ಲಿ ಇವು ಸುದೀಪ್, ಪುನೀತ್ , ದರ್ಶನ್ ಆಗಿವೆ, ಹೌದು ತಾನೇ ? ಈಗ ಒಮ್ಮೆ ಶ್ರೀಲಂಕಾಕ್ಕೆ ಹೋಗಿ ಬನ್ನಿ. ಅಲ್ಲಿ ಅರ್ಜುನ್ ರಣತುಂಗ್, ಕುಮಾರ್ ಧರಮ್ ಸೇನ್ ಗಳು ಇಲ್ಲ . ಅಲ್ಲಿರುವುದು ಅರವಿಂದ ಡಿಸಿಲ್ವ, ಕುಮಾರ ಧರ್ಮಸೇನ, ಅರ್ಜುನ ರಣತುಂಗದಂತ ಕನ್ನಡದ ಶೈಲಿಯ, ಅಕಾರ ಇರುವ ಹೆಸರುಗಳೇ!
ಮತ್ತೆ ಆಹಾರಕ್ಕೆ ಬರೋಣ. ಭಾರತೀಯ ಆಹಾರ ಪದ್ದತಿಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಬರೆದಿರುವ ವಿದ್ವಾಂಸ ಕೆಟಿ ಅಚಯ್ಯ ಅನ್ನುವವರು. ಅವರು ಹೇಳುವಂತೆ ಇಡ್ಲಿಯೂ ಇಲ್ಲಿಯದ್ದಲ್ಲವಂತೆ. ಅದು ಇಂಡೋನೇಷಿಯಾದಿಂದ ಬಂದಿದೆ ಅಂತ ಅವರು ಬರೆದಿದ್ದಾರೆ. ಇದು ಇಡ್ಲಿಪ್ರಿಯರ ವಲಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಡ್ಲಿಯೇ ನಮ್ಮದಲ್ಲ ಅಂತಾದ ಮೇಲೆ ಈ ಬಾಳುವೆ ಇದ್ದರೆಷ್ಟು ಹೋದರೆಷ್ಟು ಅನ್ನುವವರು ಇರಬಹುದು. ಕೆಲವರು ಇದು ತಪ್ಪು ಅಂತ ವಾದಿಸಿಯೂ ಇದ್ದಾರೆ . ದಕ್ಷಿಣ ಕನ್ನಡದ ಪತ್ರೊಡೆ, ಕೊಟ್ಟೆ ಇಡ್ಲಿ, ಕೊಟ್ಟಿಗೆ, ಉಂಡೆ(ಪುಂಡಿ) ಇವೆಲ್ಲ ಇಡ್ಲಿಯ ಹತ್ತಿರದ ಸಂಬಂಧಿಗಳೇ. ಹೀಗೆ ಹಬೆಯಲ್ಲಿ ಬೇಯಿಸುವ ಕ್ರಮ ನಮ್ಮಲ್ಲಿ ಮೊದಲೇ ಇತ್ತು ಅಂತ ನಿಟ್ಟುಸಿರು ಬಿಡಬಹುದು.
ಅಂತೂ ಸಂಪ್ರದಾಯ, ನಮ್ಮದು ಅನ್ನುವ ಕಲ್ಪನೆಗಳೆಲ್ಲ ಐನೂರು ವರ್ಷಕ್ಕೊಮ್ಮೆ ಹಲವು ವಿಷಯಗಳಲ್ಲಿ ಬದಲಾಗುತ್ತವೆ ಅನ್ನುವುದಕ್ಕೆ ಅಡ್ಡಿಯಿಲ್ಲ.

Thursday, 15 September 2016

Lying with Mathematics!!

I am posting on maths once again, providing one more chance for you to issue death threats to me. Okay, today we will talk about partial differential equations and 3-dimensional Euclidean space. Just joking!! The post is actually about how to lie with mathematics. Darwin's evolution made sure that the human brain has evolved to appreciate crappy reality shows and post bullshit in Facebook. If there is one thing for which the human brain was not meant to be, it is grasping maths. Think about it. You are a hunter-gatherer roaming in a jungle. You hear a rustle in the bushes. Last thing you want to do is sit with a pen and paper solving a fancy maths equation to compute the probability that it might be a tiger. The math was as simple as this: Heard a sound? Ready One,Two,Three. Run! it is then not surprising that anybody can fool people with numbers and math.

My imaginary friend recently conducted a survey and concluded that 80% of the people staying in Karnataka do not know Kannada. Looks suspicious isn't it? Turns out that this survey was done near Maratha Halli bridge and he spoke to only 20 people. The problem is that the Maratha Halli bridge does not represent the entire state. A much better survey would include at least 1000 people picked from at least 8-10 different districts. It should include HIndus, Muslims and christians, there should be rich, poor and the middle class people, north and south Karnataka should be included, Age of the people interviewed should be considered etc. etc. I made this one up but our real life is full of phony surveys like this. Take a look at this survey conducted by CNN-IBN, The Hindu and CSDS: http://www.thehindu.com/…/0…/The_Popularity_Stak_746936a.pdf
They claimed that 39000 people were interviewed and Rahul Gandhi was the most popular choice for PM!! Modi was 4th in the list. Either they drank one bottle of Maaza and randomly cooked up the numbers or they interviewed people like Rajdeep, Barkha and nutcases like Arundhati Roy. In US they conducted one survey on the sex lives of people. Results were surprising: An average male sleeps with 7 women and the average woman sleeps with 4 men. How on earth can that be? Simple. People lie. Men tend to exaggerate their sexual encounters and women tend to downplay it.

When a kid dies before the age of 1 and the cause of death can not be explained, it is called as Sudden infant death syndrome (SIDS). Sally Clark was an unfortunate soul who lost 2 of her babies like that. Trupti Patel was another who lost 3 of her babies like that. People thought that something was wrong with Sally and Trupti's cases and they were made to face the trial. Medically no evidence could have convicted them as there was nothing conclusive. And maths was used! Say you toss a coin thrice. What is the probability that all 3 will be heads? That is easy. There is a 50-50 chance every time of it being a head. One head? 50%. 2 heads? 50% of 50% or half of half or 1/2 X 1/2. 3 heads? Half of half of half. Or 1/2 X 1/2 X 1/2. Chance is 12.5% or 1/8. You multiply the probabilities to get the probability of 3 heads, multiply the individual probabilities of Independent events and you get the total probability. This mathematical idea was used. Expert witness said something like this: What is the chance that one kid will die of SIDS in a non-smoking family? It is 1 out of 8500 or 1/8500. So, what is the chance of 2 SIDS death in the same family? You multiply, remember? 1/8500 X 1/8500 gives something like 1 out of 7 Crore. So the possibility of 2 kids in the same family dying out of SIDS is 1 out of 7 crore. It is such a rare occurance, 1 out of 7 crore! So it must have been a murder! "One death is a tragedy, 2 is suspicious, 3 is murder" he said. Sally even went to jail.

Assume that you were CSP(<Insert your favorite lawyer from your favorite Tv serial here>). Math is clear. For independent events you can multiply the probabilties to get the total probability. How would you save Sally and Trupti? What is wrong with this argument? Think.
Read the math statement again. Did you notice the words "independent events"? That is the answer. Formula works only if 2 deaths are independent. What if some unknown mosquito bite caused the death? What if the same mosquito bit both the kids? What if some unknown genetic factor caused it? Then both deaths would have the same causes, they are related, they are not at all Independent events. Hence the 1 out of 7 crore figure might be rubbish. There is another problem. Even if the possibility is 1 out of 7 crore, that does not mean that chances of her innocence are 1 out of 7 crore. To understand this let us take an imaginary case.

You are walking in a street with no lights somewhere in Bengalooru. A red i10 car stops close to you. A fella gets out, tries to stab you, you punch back and he escapes. You didn't see his face properly. But you noticed that he shouted something like "Jai Hrithik" and he was six-foot tall. You tell this to the Police. And guess what? Next morning the police actually see a 6 foot tall man driving a red i10 car and he happens to be a Hrithik fan! Let us say that chance of one person driving an i10 car is 1 out of 2000 , 1 out of 10 people will be 6 foot tall and 1 out of 100 will be Hrithik fans. You mutiply the probabilities. 1/2000 X 1/10 X 1/100. That is 1/20 lakh. So the chance that a random i10 driver being a Hrithik fan and 6 foot tall is 1 out of 20 lakh. Makes sense so far. Now, tell me Mr Sherlock Holmes, what is the probabilty that he is guilty?

What is the chance of his innocence? It is not 1 out of 20 lakh! For that we need other numbers. How many people are there in Bengaluru? 1 Crore. When there are 1 crore people and the chances are 1 per 20 lakh, you can say that there might be
5 people who will be like that just by coincidence. Even if you are 1 in 1 crore, there will still be 125 people exactly like you since our population is 125 crores. So there might be 5 people like our dude. He might be one of the 5. Chance of his guilt is 1 out of 5, meaning probability of his innocence is 80%. Sally was eventually released but she died later. Trupti was acquitted. You can google for the case of Lucia De Berk, who was a nurse and was accused of 13 murders because of junk maths and faulty reasoning. Her life was also destroyed before better sense prevailed. There is a film called Lucia de B. based on her life.

Let us say that 2 coaching classes are offering IAS and MBA classes. Class A - 65% success rate, Class B - 55%. Which one is better? A you said? Wait!
Number of aspirants in Class A - MBA - 80(60 clear it) IAS - 20(5 crack it)
What about B? It has 90 IAS aspirants and 10 MBA. 45 have cracked IAS and all 10 have cracked MBA.
After splitting, success rate looks like this:
Class A - MBA - 75%, IAS - 25%
Class B - MBA - 100%, IAS - 50%
Total: Class A - 65%, Class B - 55%.
What ??!! Individually B has done better than A in both IAS and MBA, but in total Class A is better! Crazy? Yes. Reason? IAS is difficult to crack, MBA is easier. Class B had lots of IAS guys, class A has lots of MBA dudes. failure rate is higher in IAS. Another example will make it clear.

Say after witnessing Gopichand, Saina Nehwal and Sindhu you take a sudden interest in badminton. You offer a sum of 1 crore Rs for one upcoming talent's training. You have to select the best player. 100 people apply and finally 2 are selected, now you ask your secretary to select a winner. Here is some statistics about Soumya and radhika:
Monday: Soumya - 100% wins, Radhika - 80% wins
Tuesday: Soumya - 30% wins, Radhika - 0% wins
Who do you think is the better player? Soumya? Not so fast! What if I told you that on Monday Soumya played 1 match and Radhika 10? Soumya won one match that day, Radhika won 8 out of 10. Tuesday they reversed it. Tuesday, Soumya played 10 matches and won 3 out of 10, Radhika played only 1 match and lost. In total, Radhika - 8/11 and Soumya - 4/11. See! Numbers can be manipulated.

In an imaginary survey they found that 73% of people in Karnataka spend their afternoons watching TV serials. Well, this survey was done on weekdays, hence most men and working women were not available, only housewives were interviewed which distorted the numbers. If The Hindu publishes a study claiming that as per Indian Statistical Institute 59% people in India don't like sex, most people would believe it. A number does not mean anything unless you put it in a context.

Another study showed that 67% of the people who take frequent breaks in office get cancer and 71% of those who like Mint candy get cancer. So think twice before you take your next break or eat Mint candies! Turns out that many who take frequent breaks are using that time for smoking and most consume mint candies after smoking. It is the tobacco that is causing the Cancer, not breaks or mint candies. Moral of the story? Correlation does not always imply causation. Just because A and B are occurring together you can not say that A causes B. But people still say things like whenever I wear a red shirt Indian Cricket team wins, whenever X has acted in a film it has failed, so X is an Iron leg and such. Check some hilarious correlation graphs here:http://www.tylervigen.com/spurious-correlations
As Someone had rightly put it: There are three kinds of lies: lies, damned lies, and statistics

Thursday, 11 August 2016

ನಿಂದಕರಿರಬೇಕೇ

ಇದು ಲೇಖನ ಅಂತ ಬರೆದದ್ದಲ್ಲ, ಎರಡು ಮೂರು ಕಡೆ ಬೇರೆ ಬೇರೆ ಸಂಧರ್ಭಗಳಲ್ಲಿ ಹಾಕಿದ ಕಾಂಮೆಂಟುಗಳನ್ನು ಸೇರಿಸಿ, ಜೋಡಿಸಿದ ವಿಚಾರಗಳನ್ನು ಇಲ್ಲಿ ಗುಡ್ಡೆ ಹಾಕಿದ್ದೇನೆ.
"ಕನ್ನಡ ಸಿನೆಮಾಗಳ ಗುಣಮಟ್ಟ ಸರಿಯಾಗಿಲ್ಲ. ಕೆಟ್ಟ ಕೆಟ್ಟ ಕತೆಗಳನ್ನು ಚಿತ್ರೀಕರಿಸುತ್ತಿದ್ದಾರೆ. ಯಾವೊಂದು ಸಿನೆಮಾನೂ ನೋಡಕ್ಕಾಗಲ್ಲ. ಅವುಗಳ ಹೆಸರು ಕೇಳಿದರೇ ಸಿಟ್ಟು ಬರುತ್ತೆ ಅಂತ ನಮ್ಮೂರಿನ ಮಂದಿ ಮಾತ್ರವಲ್ಲ, ಮೈಸೂರಿನ ಮಧ್ಯವಯಸ್ಕರು ಕೂಡ ಮಾತಾಡಲು ಶುರು ಮಾಡಿದ್ದಾರೆ. ಅಂಥವರೊಬ್ಬರನ್ನು ನಿಲ್ಲಿಸಿ, ನೀವು ಇತ್ತೀಚೆಗೆ ನೋಡಿದ ಸಿನೆಮಾ ಯಾವುದು ಎಂದು ಕೇಳಿದರೆ, ನಾನು ಸಿನೆಮಾ ನೋಡದೇ ಹತ್ತು ವರ್ಷವಾಯಿತು ಅಂದುಬಿಟ್ಟರು. ಮತ್ತೆ ಸಿನೆಮಾ ಕೆಟ್ಟದಾಗಿದೆ ಅಂತ ಹೇಗೆ ಹೇಳುತ್ತೀರಿ ಎಂದು ಮರುಪ್ರಶ್ನಿಸಿದರೆ, ಟೀವೀಲಿ ನೋಡ್ತೀವಲ್ಲ ಅಂತ ಸಮಜಾಯಿಷಿ ಕೊಟ್ಟರು." -----> ಜೋಗಿ
ಹೊಸತಾಗಿ ಏನು ವ್ಯಾಪಾರ ಶುರು ಮಾಡಬಹುದು ಕರ್ನಾಟಕದಲ್ಲಿ ? ಕನ್ನಡ ಚಿತ್ರಗಳನ್ನು ಬೈಯ್ಯುವುದು ಹೇಗೆ ಅಂತ ಒಂದು ಕೋಚಿಂಗ್ ಕ್ಲಾಸು ಶುರು ಮಾಡಿದರೆ ನಿಮಗೆ ಸೊಳ್ಳೆ ಹೊಡೆಯುವುದಕ್ಕೂ ಸಮಯ ಇಲ್ಲ ಅನ್ನಬಹುದಾದಷ್ಟು ಜನ ಬರಬಹುದು! ಇರಲಿ. ಬಯ್ಯುವವರಲ್ಲಿ ಯಾವ್ಯಾವ ತರ ಇರುತ್ತಾರೆ? ತೆಗಳುವವರು ಯಾವ ವಿಚಾರಗಳನ್ನು ಮನಸ್ಸಲ್ಲಿ ಇಟ್ಟುಕೊಂಡರೆ ಒಳ್ಳೆಯದು ?
ಕನ್ನಡ ಚಿತ್ರರಂಗ ಜಗತ್ತಿನ ಎಂಟು ಅದ್ಭುತಗಳಲ್ಲಿ ಒಂದು ಅಂತೇನಲ್ಲ, ಆದರೆ ಬಹಳಷ್ಟು ಜನ ಏನೂ ಗೊತ್ತಿಲ್ಲದೇ ಆಡಿಕೊಳ್ಳುತ್ತಾರೆ ಅನ್ನುವುದು ನಿಜ. ಚಿತ್ರರಂಗದ ಬಗ್ಗೆ ಜನರಿಗೆ ಸಾಕಷ್ಟು ಮೂಢನಂಬಿಕೆಗಳು ಇವೆ.
"ಬರೀ ಡಬಲ್ ಮೀನಿಂಗ್ ಚಿತ್ರಗಳೇ ಬರ್ತವೆ" ಅಂದರು ಒಬ್ಬರು, ಸರಿ, ಕಳೆದ ಎರಡು ವರ್ಷಗಳಲ್ಲಿ ಸುಮಾರು ಇನ್ನೂರೈವತ್ತು ಚಿತ್ರಗಳು ಬಂದಿರಬೇಕು, ಅದರಲ್ಲಿ ಹತ್ತು ಡಬಲ್ ಮೀನಿಂಗ್ ಚಿತ್ರಗಳ ಹೆಸರು ಹೇಳಿ ಅಂದೆ. ಅವರೂ ಕಡೆಯ ಕನ್ನಡ ಚಿತ್ರ ನೋಡಿದ್ದು ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿ ಮಾಡಿದ ಕಾಲದಲ್ಲಿ ಅಂತ ಗೊತ್ತಾಯಿತು. "ಕನ್ನಡದಲ್ಲಿ ಬರೀ ಮಚ್ಚು ಲಾಂಗ್ ಚಿತ್ರಗಳೇ ಬರ್ತವೆ" ಅಂತ ಮತ್ತೊಬ್ಬರು ಗುಡುಗಿದರು. "ಹತ್ತು" ಕೇಳಿ ಪೇಚಿಗೆ ಸಿಲುಕಿಸುವುದು ಬೇಡ ಅಂತ ಸ್ವಲ್ಪ ರಿಯಾಯಿತಿ ತೋರಿಸಿ, ನೀವು ಇತ್ತೀಚೆಗೆ ನೋಡಿರೋ ಮಚ್ಚು ಲಾಂಗು ಚಿತ್ರ ಯಾವುದು ಅಂತ ಕೇಳಿದೆ, ಜೋಗಿ ಬಂದಿತ್ತಲ್ಲ ಅಂದರು ! ಅವರು ಜೋಗಿಯನ್ನೂ ನೋಡಿರಲಿಲ್ಲ , ಆ ಮಾತು ಬೇರೆ.
ಕನ್ನಡದಲ್ಲಿ ಬರೀ violent ಚಿತ್ರಗಳು ಬರ್ತವೆ ಅನ್ನುವವರು Tarantino ಏನದ್ಭುತ ಅಂತಲೋ Game of thrones ಏನು ಸಕತ್ತಾಗಿದೆ ಅಂತ ಹೇಳುವವರೇ ಆಗಿರುತ್ತಾರೆ. ಕನ್ನಡದಲ್ಲಿ ಪೂಜಾ ಗಾಂಧೀ ಬೆನ್ನು ತೋರಿಸಿದ್ದು ಮಹಾಪರಾಧ ಅನ್ನುವವರು Wolf of wall street ಅನ್ನು ಒಂದು ಕಲಾ ಕೃತಿ ಅಂತ ಆರಾಧಿಸಿರುತ್ತಾರೆ. ಈ ಆಷಾಡಭೂತಿತನ (hypocrisy) ಕನ್ನಡಿಗರಿಗೇ ವಿಶಿಷ್ಟವಾದದ್ದು. ಬೇರೆ ಯಾರು ಮಾಡಿದರೂ ಕ್ರೀಂ ಬಿಸ್ಕತ್ತು, ಕನ್ನಡಿಗರು ಮಾಡಿದರೆ ಮಾತ್ರ ಮಾರಿ ಬಿಸ್ಕತ್ತು ಅನ್ನುವ, "ಮನೆಗೆ ಮಾರಿ(!) ಊರಿಗೆ ಉಪಕಾರಿ" ಆಗುವ ಗುಣ ಕನ್ನಡಿಗರಿಗೆ ಮೊದಲಿಂದಲೂ ಇದೆ.
ಹಾಗಂತ ನಮ್ಮದು ಶ್ರೇಷ್ಟ ಚಿತ್ರರಂಗ ಅಂತಲೂ ಹೇಳುವುದಿಲ್ಲ, ಸಮಸ್ಯೆಗಳು ಸಾಕಷ್ಟು ಇವೆ. ಕಳಪೆ ಚಿತ್ರಗಳು, ಒಳ್ಳೆ ಪ್ರಯತ್ನಗಳು, ಅತ್ತ್ಯುತ್ತಮ ಚಿತ್ರಗಳು ಎಲ್ಲವೂ ಇಲ್ಲಿ ಇವೆ. ಕನ್ನಡ ಚಿತ್ರಗಳನ್ನು ನಾನೂ ಆಗೀಗ ಬಯ್ಯುವವನೇ. ಆದರೆ ನೋಡದೇ ಆಡುವವರು ರೂಡಿಯೊಳಗುತ್ತಮರು ಅಂತ ಆಗಿರುವುದು ನೂರಕ್ಕೆ ನೂರು ಸತ್ಯ!
ಕನ್ನಡ ಸಿನೆಮಾವನ್ನ ಬಯ್ಯಬಾರದು ಅಂತ ನಾನು ಹೇಳಲಾರೆ, ಆದರೆ ಇಷ್ಟು ಬೈಬೇಡಿ, ಹೀಗೆ ಉಗೀಬೇಡಿ ಅನ್ನುವ ಕೆಲವರ ಕಳಕಳಿ ಯಾವುದರ ಬಗ್ಗೆ ಅಂತ ಹೇಳ್ತೇನೆ. ಟಾಪ್ ೫ ಹೀರೋಗಳನ್ನ ನಾವು ನೀವು ಏನೂ ಮಾಡಲಾರೆವು, ಅತ್ಯಂತ ಕಳಪೆಯಾಗಿದೆ ಅಂತ ಉಗಿಸಿಕೊಂಡ ಅಂಬರೀಷ ಎಷ್ಟು ದುಡ್ಡು ಮಾಡಿತು ಅಂತ ನಿಮಗೆ ಗೊತ್ತೇ ಇದೆ.
ನಮ್ಮ ಕಳಕಳಿ ಇರುವುದು Word of mouth ಮತ್ತು ಪತ್ರಿಕಾ ವಿಮರ್ಶೆಗಳಿಂದ ಮೇಲೆ ಬೀಳಬಹುದಾದ/ಸಾಯಬಹುದಾದ ಸಿನೆಮಾಗಳ ಬಗ್ಗೆ ಮಾತ್ರ. ಈಗ ರಂಗಿತರಂಗವನ್ನ ತಗೊಳ್ಳಿ. ಇದಕ್ಕೆ ಮೊದಲ ಹತ್ತು ಹದಿನೈದು ಸಾವಿರ ಜನ ರಕ್ಷಿತ್ ಶೆಟ್ಟಿ ಮಾತು ಕೇಳಿಯೇ ಬಂದವರು. ರಕ್ಷಿತ್, "ಸಿನಿಮಾ ಚೆನ್ನಾಗಿಲ್ಲ ಗುರೂ " ಅನ್ನುವ ಧಾಟಿಯಲ್ಲಿ ಬರೆದಿದ್ದರೆ ಅದರ ಕತೆ ಮುಗಿದೇ ಹೋಗುತ್ತಿತ್ತು. ಸುತ್ತಿಗೆಗೆ ಎಲ್ಲ ಕಡೆ ಮೊಳೆಯೇ ಕಾಣುತ್ತದೆ ಅನ್ನುವ ತರ ಸುತ್ತಿಗೆಗಳಾಗದೆ ಇಂತಹ ಚಿತ್ರಗಳಿಗೆ ಸ್ವಲ್ಪ ಕರುಣೆ ತೋರಿಸಿ ಅಂತ.
ಇಲ್ಲಿ ವೈಯಕ್ತಿಕ ಅಭಿರುಚಿ (ಪರ್ಸನಲ್ ಟೇಸ್ಟ್)ಯ ವಿಚಾರವೂ ಬರ್ತದೆ, ನಂಗೆ Django Unchained ಇಷ್ಟ ಆಗ್ಲಿಲ್ಲ, ಇಂಗ್ಮಾರ್ ಬರ್ಗಮನ್ ನ Autumn Sonata ನಿದ್ದೆ ಬರಿಸಿತು, ಹಾಗಂತ ಇವು ದರಿದ್ರ ಸಿನೆಮಾಗಳು ಅಂತ ಹೇಳಲಾರೆ. ಸಿನೆಮಾ ಡಬ್ಬಾ ಅನ್ನುವುದಕ್ಕೂ ನನ್ನ ಟೇಸ್ಟ್ ಗೆ ತಕ್ಕ ಹಾಗೆ ಇಲ್ಲ ಅನ್ನೋದಕ್ಕೂ ವ್ಯತ್ಯಾಸ ಇದೆ, ತುಂಬಾ ಜನ ಇದನ್ನು ಮರೆತೇ ಬಿಡುತ್ತಾರೆ.
ಎರಡನೇ ವಿಚಾರ ಒಂದು ಸಿನೆಮಾಕ್ಕೆ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳೋದಕ್ಕೆ ಎಷ್ಟು ಕಡಿಮೆ ಸಮಯ ಇರ್ತದೆ ಅನ್ನೋದು. ಈಶ್ವರೀಲಿ ಮಾಸ್ಟರ್ ಪೀಸ್ ಎರಡನೇ ವಾರದ ಶೇರ್ ಏಳು ಲಕ್ಷ ಇತ್ತು(ಶೇರ್ Gross ಅಲ್ಲ ), ಆದರೂ ಅದನ್ನ ಕಿತ್ತು ಬಿಸಾಡಿದರು. ಯಾವ ಕಾರಣಕ್ಕೆ ಅಂತ ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಯಶ್ ನಂತ ಓಡುವ ಕುದುರೆಗೆ ಓಡಿದಾಗಲೂ ಹೀಗೆ ಅಂದ್ರೆ ಹೊಸಬರ ಗತಿ ಹೇಗೆ ಅಂತ ಊಹಿಸಿಕೊಳ್ಳಿ. ಈಗ ಫೇಸ್ಬುಕ್ ಒಂದು ವಾರದಲ್ಲಿ ಕನಿಷ್ಟ ಒಂದು ಸಾವಿರ ಲೈಕ್ ಬರದೇ ಹೋದರೆ ನಮ್ ಪೋಸ್ಟ್ ಗಳನ್ನ ಡಿಲೀಟ್ ಮಾಡಿದರೆ ನಮ್ಗೆ ಹೇಗಾಗಬಹುದು ? ಬಾಹುಬಲಿಗೆ ಶೋ ಕೊಡುವುದಕ್ಕೆ ಚೆನ್ನಾಗೇ ಓಡುತ್ತಿದ್ದ ರಂಗಿಗೆ ಹೀಗೇ ಆಗಿತ್ತು, ಶೋ ಉಳಿಸಿಕೊಳ್ಳುದಕ್ಕೆ ಎಷ್ಟೆಲ್ಲಾ ಬಡಿದಾಡಬೇಕಾಯಿತು ಅಂತ ಹೇಳಿದರೆ ಅದೇ ಒಂದು ದೊಡ್ಡ ಕತೆ ಆಗ್ತದೆ. ಮುಂಗಾರು ಮಳೆಗೆ ಮೊದಲ ವಾರ ೩೦% ಕೂಡ occupancy ಇರಲಿಲ್ಲ. ಜನ ಬಂದದ್ದು ಐದು ವಾರ ಆದ ಮೇಲೆಯೇ, ಎರಡನೇ ವಾರಕ್ಕೆ ಒಡ್ಲಿಲ್ಲ ಅಂತ ಎತ್ತಂಗಡಿ ಮಾಡಿದ್ರೆ ಅದು ಅಲ್ಲೇ ಕೊನೆಯುಸಿರು ಎಳೀತಾ ಇತ್ತು . ಹೀಗಿರುವಾಗ ಮೊದಲ ದಿನವೇ ನಾವು ಕಲ್ಲು ಎತ್ತಾಕಿದರೆ ಅಷ್ಟೇ. ಎರಡನೇ ವಾರಕ್ಕೆ ಸಿನಿಮಾ ಕಿತ್ತು ಬಿಸಾಕುತ್ತಾರೆ, ಚಿತ್ರಕ್ಕೆ ನಿಜವಾದ Word of mouth ಏನಿತ್ತು ಅಂತ ಗೊತ್ತಾಗುವ ಮೊದಲೇ ಅದು ಸತ್ತಿರುತ್ತದೆ.
ಇನ್ನು ಸುತ್ತಿಗೆ ಮೊಳೆಗಳ ವಿಚಾರ. Mihir Fadnavis ಅಂತ ಒಬ್ಬ ಹಿಂದಿ ಚಿತ್ರಗಳಿಗೆ ವಿಮರ್ಶೆ ಬರೀತಾನೆ, ಆ ಪಾರ್ಟಿ ಹೆಂಗೆ ಅಂದ್ರೆ ನೂರು ಚಿತ್ರ ನೋಡಿದ್ರೆ ಅದ್ರಲ್ಲಿ ತೊಂಬತ್ತೆಂಟು ಅವ್ನಿಗೆ ಇಷ್ಟ ಆಗಿರೋದಿಲ್ಲ, ವಿಮರ್ಶೆ ಹೆಸರಲ್ಲಿ ಬಂದದ್ದನ್ನೆಲ್ಲಾ ಕೊಚ್ಚಿ ಬಿಸಾಕ್ತಾ ಇರೋದೇ ಅವನ ಕೆಲಸ, "ಹೆಂಗೆ ಚಚ್ಚಿದೆ ನೋಡಿ" ಅನ್ನುವ ರಣೋತ್ಸಾಹ ಬಿಟ್ರೆ ನಂಗೆ ಏನೂ ಕಾಣೋದಿಲ್ಲ ಅವನಲ್ಲಿ. ಬರೋ ನೂರಿಪ್ಪತ್ತರಲ್ಲಿ ನೂರ ಹದಿನೆಂಟು ಇಷ್ಟ ಆಗೋಲ್ಲ ಅನ್ನುವವರು, ಹಿಂದಿ ನೋಡುವುದು ಬಿಟ್ಟು ಅವರಿಗೆ ಇಷ್ಟ ಆಗುವ ಫ್ರೆಂಚ್, ಇರಾನಿಯನ್ ಇತ್ಯಾದಿ ನೋಡುವುದು ಒಳ್ಳೇದು.
ಇನ್ನು ಪೂರ್ವಾಪರ ಸಂದರ್ಭ(Context )ದ ವಿಚಾರ, ಕೆಲವರಿಗೆ ಒಂದು ಸಿನೆಮಾ ಒಂದು Contextನಲ್ಲಿ ತಯಾರಾಗಿರುತ್ತದೆ ಅಂತಲೇ ಗೊತ್ತಾಗುವುದಿಲ್ಲ. "ಮಾಸ್ಟರ್ ಪೀಸ್ ನೋಡಿ ಎಷ್ಟು ದರಿದ್ರವಾಗಿದೆ, ಕಾಸರವಳ್ಳಿನೇ ನಮ್ ದೇವ್ರು" ಅನ್ನೋ ಜಾತಿ ಇವರು . ರೋಹಿತ್ ಶೆಟ್ಟಿಯ ಚಿತ್ರಕ್ಕೂ ಅನುರಾಗ್ ಕಶ್ಯಪ್ ಚಿತ್ರಕ್ಕೂ ಹೋಲಿಕೆ ಮಾಡಬಾರದು. ರೋಹಿತ್ ಶೆಟ್ಟಿ ಒಂದು ಚಿತ್ರವನ್ನ ಯಾಕೆ, ಯಾರಿಗಾಗಿ ಮತ್ತು ಹೇಗೆ ಮಾಡಿರುತ್ತಾನೆ ಹಾಗೂ ಅನುರಾಗ್ ಕಶ್ಯಪ್ ಒಂದು ಚಿತ್ರವನ್ನ ಯಾವ ತರದವರಿಗೆ ಮಾಡಿರುತ್ತಾನೆ ಅನ್ನುವುದಕ್ಕೂ ವ್ಯತ್ಯಾಸ ಇರುತ್ತದೆ. ರೋಹಿತ್ ಶೆಟ್ಟಿ ತಾನು ಏನು ಮಾಡಬೇಕು ಅಂತ ಹೊರಟಿದ್ದಾನೋ ಅದನ್ನಾದರೂ ಮಾಡಿದ್ದಾನ ಅಂತಷ್ಟೇ ನೋಡಬೇಕು, ರೋಹಿತ್ ಶೆಟ್ಟಿಯ ಚಿತ್ರ Christopher Nolan ಮಟ್ಟಕ್ಕೆ ಇಲ್ಲ ಅಂತ ಹಲುಬಿದರೆ ತಪ್ಪು ಯಾರದ್ದು ?
ಇನ್ನು ನಿರಭಿಮಾನದ ಪ್ರಶ್ನೆ. Nenokkadine ಅಂತ ಒಂದು ತೆಲುಗು ಪಿಚ್ಚರ್ ಬಂದಿತ್ತು ಅದು ಸೂಪರ್ ಫ್ಲಾಪ್, ಆದರೂ ಸುಮಾರು ಅರುವತ್ತು ಕೋಟಿ ಬಿಸಿನೆಸ್ ಮಾಡಿತ್ತು, ನಮ್ಮ ಸೂಪರ್ ಹಿಟ್ ಗಳೂ ಇಷ್ಟು ಮಾಡುವುದಿಲ್ಲ. ತೆಲುಗು ಪ್ರೇಕ್ಷಕ looks for a reason to watch the film. ಕನ್ನಡ ಪ್ರೇಕ್ಷಕ looks for an excuse to skip the film, ಸಿನಿಮಾ ನೋಡುವುದಕ್ಕೆ ಏನಾದರೂ ಕಾರಣ ಸಿಗುತ್ತದೆಯೇ ಅಂತ ಹುಡುಕುವ ಸಿನಿಮಾ ಪ್ರೀತಿ ತೆಲುಗು ಪ್ರೇಕ್ಷಕನದ್ದು, ಸಿನಿಮಾ ನೋಡದೇ ಇರಲಿಕ್ಕೆ ಏನಾದರೂ ನೆಪ ಸಿಗುತ್ತದೆಯೇ ಅನ್ನುವ ರೀತಿ ಕನ್ನಡಿಗನದ್ದು . ಕನ್ನಡ ಸಿನಿಮಾ ಕ್ಕೆ ನಾಲ್ಕು ಒಳ್ಳೆ ವಿಮರ್ಷೆ ಬಂದು, ನೀವು ಒಬ್ಬರು ಬೈದರೆ, ಕನ್ನಡ ಪ್ರೇಕ್ಷಕ ನಾಲ್ಕು ಹೊಗಳಿರೋ ವಿಮರ್ಷೆ ಮರೆತು "ನೋಡ್ರೀ ಇವ್ರು ಹೇಗೆ ಉಗಿದಿದ್ದಾರೆ" ಅಂತ ನಿಮ್ಮ ರಿವ್ಯೂ ಅನ್ನೇ ನೆಚ್ಚಿಕೊಳ್ತಾನೆ, ಇದು ಕನ್ನಡಿಗರ ಗುಣ. ಸಿನಿಮಾ ಅಂತಲ್ಲ ಸಾಹಿತ್ಯದಂತ ಕ್ಷೇತ್ರದಲ್ಲೂ ಹೀಗಾಗುತ್ತದೆ. ತೆಲುಗಿನಲ್ಲೇನೂ world class ಚಿತ್ರಗಳು ಬರುತ್ತಿಲ್ಲ, ಆದರೂ ಅದು ನಮಗಿಂತ ಎಷ್ಟು ದೊಡ್ಡ ಇಂಡಸ್ಟ್ರಿ ನೋಡಿ. ಇದು ಪ್ರೇಕ್ಷಕರ ಗುಣ. ಕನ್ನಡಿಗರಿಗೆ ನೆಗೆಟಿವ್ ಅಂಶ ಹುಡುಕಿ ಕೀಳರಿಮೆ (Inferiority) ಬೆಳೆಸಿಕೊಳ್ಳುವ ಸ್ವಭಾವ ಮೊದಲಿಂದಲೂ ಇದೆ.
ಕಬಾಲಿ ಬಂತು ಅಂತ ಇಲ್ಲಿನವರು ಅಳುವಾಗ "ಹೀಗೆ ತಮ್ಮ ಸಿನೆಮಾ ನೋಡ್ರೋ ನೋಡ್ರೋ ಎಂದು ಬೇಡಿ ಕೊಂಡು ಕೈಮುಗಿದು ಅಳುವ ಸೀನನ್ನು ತಮಿಳುನಾಡಲ್ಲಿ, ಹೈದರಾಬಾದಲ್ಲಿ, ಬೇಡ ಮಲಯಾಳಿಗಳ ನೆಲದಲ್ಲಿ ನೋಡಿಲ್ಲ" ಅಂದರು ಒಬ್ಬರು. ಇದು ನಿಜ, ಹಾಗೆ ಕೈ ಮುಗಿದು ಅಳುವ ಪರಿಸ್ಥಿತಿಯನ್ನು ಅಲ್ಲಿನ ಪ್ರೇಕ್ಷಕ ನಿರ್ಮಿಸಿಲ್ಲ ಅನ್ನುವುದೂ ಅಷ್ಟೇ ನಿಜ. ಶ್ರೀಮಂತ ಮಾಲ್ ಕಟ್ಟಿಸುತ್ತಾನೆ, ಬಡವ ಕಿರಾಣಿ ಅಂಗಡಿ ಇಡುತ್ತಾನೆ, ನಮ್ಮ ಅಂಗಡಿಗೂ ಬನ್ನಿ ಅಂತ ಅಳುವ ಪ್ರಸಕ್ತಿ ಬರುವುದು ಕಿರಾಣಿ ಅಂಗಡಿಯವನಿಗೇ. ಒಟ್ಟಿನಲಿ level playing field ಇಲ್ಲ ಅನ್ನುವುದು ನಮ್ಮ ಕಳಕಳಿ. ತಮಿಳಿಗೋ, ತೆಲುಗಿಗೋ ಅಷ್ಟು ದೊಡ್ಡ ಮಾರುಕಟ್ಟೆ ಇರುವುದು ಗುಣಮಟ್ಟದ ಫಲವಾಗಿಯೋ, ಮಾರ್ಕೆಟಿಂಗ್ genius ನ ಫಲವಾಗಿಯೋ ಅಲ್ಲ. ತಮಿಳಿನಲ್ಲೋ , ತೆಲುಗುನಲ್ಲೋ ಜಗತ್ತೇ ಬೆರಗಾಗಿ ನೋಡುವಂತ್ ಮಾರ್ಕೆಟಿಂಗ್ ಕಲೆ ಏನೂ ಇಲ್ಲ. ತುಂಬ ದುಡ್ಡು ಸುರಿದರೆ ಮಾರ್ಕೆಟಿಂಗ್ ಮಾಡುವುದು ಕಷ್ಟವೇನಲ್ಲ.
ಇದು ಬರೀ ಗುಣಮಟ್ಟದ ಪ್ರಶ್ನೆಯೂ ಅಲ್ಲ, ಎಂಬತ್ತರ ದಶಕದಲ್ಲಿ ಹಿಂದಿಯಲ್ಲಿ ಎಷ್ಟು ಕಳಪೆ ಚಿತ್ರಗಳು ಬಂದಿದ್ದವು, ಮರಾಠಿ ಚಿತ್ರೋದ್ಯಮ ಮುಚ್ಚಿಯೇ ಹೋಯಿತು ಅಂತ ಆಗಿತ್ತು, ಮಲಯಾಳ ಚಿತ್ರಗಳು ಹೊಸದೇನು ಬರದೇ ಗತವೈಭವ ವೇ ಗತಿ ಅಂದ ಕಾಲ ಇತ್ತು . ಎಲ್ಲ ಕಡೆಯೂ ಇಲ್ಲಿರುವುದಕ್ಕಿಂತ ಹೆಚ್ಚು ಒಳ್ಳೆಯದು ಇನ್ನೊಂದು ಕಡೆ ಇದೆ ಅಂತ ತೋರಿಸಲು ಸಾಧ್ಯ ಇದೆ. ತೆಲುಗಿಗಿಂತ ಒಳ್ಳೆ ಚಿತ್ರಗಳು ಬೇರೆ ಕಡೆ ಬಂದರೂ ತೆಲುಗು ಪ್ರೇಕ್ಷಕ ಮನೆಯಾಕೆಯನ್ನು ಬಿಟ್ಟು ಪಕ್ಕದ ಮನೆಯಾಕೆಯ ಹಿಂದೆ ಹೋಗುವುದಿಲ್ಲ, ತಮಿಳಿಗಿಂತ ಒಳ್ಳೆ ಚಿತ್ರ ಹಾಲಿವುಡ್ಡಿನಲ್ಲಿ ಬಂದರೂ ತಮಿಳು ಪ್ರೇಕ್ಷಕ ತಮಿಳು ಚಿತ್ರಗಳನ್ನು ಯಾವತ್ತೂ ಅನಾಥವಾಗಿಸಿಲ್ಲ. ಉತ್ತರ ಪ್ರದೇಶದಲ್ಲಿ ಹಿಂದಿ ಚಿತ್ರಕ್ಕೆ ಸ್ಕ್ರೀನ್ ಸಿಗದೇ ಕನ್ನಡ ಚಿತ್ರಕ್ಕೆ ಐನೂರು ಶೋ ಸಿಕ್ಕಿದ್ದು ಇತಿಹಾಸದಲ್ಲೇ ಇಲ್ಲ, ಚೆನ್ನೈಯಲ್ಲಿ ಮಲಯಾಳಿ ಚಿತ್ರಕ್ಕೆ ನಾನೂರು ಶೋ ಕೊಟ್ಟು ತಮಿಳು ಚಿತ್ರಕ್ಕೆ ಚಿತ್ರ ಮಂದಿರ ಇಲ್ಲ ಅನ್ನುವ ಸನ್ನಿವೇಶ ಮೊದಲೂ ಬಂದಿಲ್ಲ, ಇನ್ನು ಮುಂದೆಯೂ ಬರುವುದಿಲ್ಲ, ಅಷ್ಟು ಉದಾರಿ ಕನ್ನಡಿಗ ಮಾತ್ರ! ಔದಾರ್ಯ ಒಳ್ಳೆಯದೇ, ಳ್ಳೆಯ ಪರಭಾಷಾ ಚಿತ್ರಗಳನ್ನು ಖಂಡಿತ ನೋಡೋಣ, ಅವುಗಳಿಗೆ ಇಲ್ಲಿ ಥಿಯೇಟರೂ ಕೊಡೋಣ. ನಾವು ಎಲ್ಲವನ್ನೂ ಗೌರವಿಸೋಣ, ಸ್ವೀಕರಿಸೋಣ, ಆದರೆ ಇಲ್ಲಿಯದ್ದು ಮಾತ್ರ ಕಳಪೆ, ಇಲ್ಲಿನದ್ದನ್ನು ಕೊಂದಾದರೂ ಬೇರೆಯದ್ದನ್ನು ಮೆರೆಸಬೇಕು ಅನ್ನುವ ಭಾವ ಬೇಡ.
"ಆಹಾ ಎಷ್ಟು ಚೆನ್ನಾಗಿದೆ ಎಂದು ಹೇಳಬಹುದಾದ ಹಾಸ್ಯ ಮತ್ತು ಹಾಡನ್ನು ಇಲ್ಲಿ ನಾನು ಕೇಳಿ ಯಾವುದೋ ಕಾಲ ಆಯಿತು" ಅಂದರು ಒಬ್ಬರು . ಇದರಲ್ಲಿ ಸತ್ಯ ಇಲ್ಲದಿಲ್ಲ ಅನ್ನಲಾರೆ . ಆದರೆ ನ ಧೀಮ್ ಧೀಮ್ ತನ , ಹೆಸರು ಪೂರ್ತಿ ಹೇಳದೆ, ಪರವಶನಾದೆನು , ಬಿದ್ದಲ್ಲೆ ಬೇರೂರಿ, ಕೆಂಡಸಂಪಿಗೆ , ಉಳಿದವರು ಕಂಡಂತೆ, ಜಟ್ಟ , ಗೋಧಿ ಬಣ್ಣ ಈ ಚಿತ್ರಗಳ ಹಾಡುಗಳನ್ನು ನೀವು ಕೇಳಿಲ್ಲವೇ ಅಂತ ಮರುಪ್ರಶ್ನೆ ಹಾಕಬಹುದು. ಹಿಂದಿ, ತೆಲುಗು , ತಮಿಳು ಪ್ರೇಕ್ಷಕನೂ ಆಹಾ ಎಷ್ಟು ಚೆನ್ನಾಗಿದೆ ಎಂದು ಹೇಳಬಹುದಾದ ಹಾಸ್ಯ ಮತ್ತು ಹಾಡನ್ನು ಕೇಳಿ ವರ್ಷಗಳೇ ಆಗಿವೆ, ಆದರೆ ಆತ ತನ್ನ ಭಾಷೆಯ ಚಿತ್ರ ನೋಡುವುದು ಬಿಟ್ಟಿಲ್ಲ.

“ಎಲ್ಲಾ ಇಂಡಸ್ಟ್ರಿ ಅಲ್ಲೂ ಕೆಟ್ಟ ಫಿಲಂಸ್ ಬರ್ತಾವೆ, ನಮ್ಮದೇನೂ ಸ್ಪೆಷಲ್ ಅಲ್ಲ” ಅಂತ Denial  ಮೋಡ್ ನಲ್ಲಿ ಇದನ್ನೆಲ್ಲ ಹೇಳಿದ್ದಲ್ಲ. ಕಾಲ ಕಾಲಕ್ಕೆ ಒಳ್ಳೆಯದು ಕೆಟ್ಟದು ಎಲ್ಲ ಕಡೆ ಬಂದಿದೆ. ಆದರೆ ಕನ್ನಡಿಗರು ಮತ್ತು ಉಳಿದವರು ಕೆಟ್ಟದ್ದಕ್ಕೆ ರಿಯಾಕ್ಟ್ ಮಾಡಿರುವ ರೀತಿಯಲ್ಲಿ ದೊಡ್ಡ ವ್ಯತ್ಯಾಸವೇ ಇದೆ. ಈಗ ಬಾಲಿವುಡ್ಡನ್ನೇ ತಗೊಂಡರೆ, ಅಲ್ಲಿ ಎಂಬತ್ತರ ದಶಕ ತೀರಾ mediocre ಚಿತ್ರಗಳು ಬಂದ ದಶಕ, ತೊಂಬತ್ತರ ದಶಕದಲ್ಲೂ ಹೇಳಿಕೊಳ್ಳುವಂತದ್ದು ಹೆಚ್ಚು ಏನೂ ಬರಲಿಲ್ಲ. ತುಂಬಾ ಕಡೆ ಯಾವುದೇ ನಾಚಿಕೆ ಇಲ್ಲದೆ ಹಾಲಿವುಡ್ ಕ್ಯಾಸೆಟ್ಗಳನ್ನು ಶೂಟಿಂಗ್ ಜಾಗಕ್ಕೆ ತಂದು ನೋಡಿಕೊಂಡೇ ಶೂಟಿಂಗ್ ಮಾಡಿದ, ಆ ಮಟ್ಟದ ಕಾಪಿವೀರರು ಇದ್ದರಂತೆ. ಸ್ಕ್ರಿಪ್ಟ್ ಮಾಡುವ ಸಂಪ್ರದಾಯವೇ ನಿಂತು ಹೋಗಿತ್ತಂತೆ, ಶಾರುಖ್ ಖಾನ್ bound ಸ್ಕ್ರಿಪ್ಟ್ ಇಲ್ಲದೆ ಚಿತ್ರ ಒಪ್ಪಿಕೊಳ್ಳುವುದಿಲ್ಲ ಅಂದಾಗ, "ಈ ಮನುಷ್ಯನಿಗೆ ದುರಹಂಕಾರ" ಅಂದಿದ್ದರಂತೆ! ಕುಚ್ ಕುಚ್ ಹೋತಾ ಹೈ ಬಂದಾಗ ಇದು ಹೊಸತನದ ಹರಿಕಾರ ಅನ್ನುವ ಪರಿಸ್ಥಿತಿ ಇತ್ತು! ಇಪ್ಪತ್ತು ವರ್ಷಗಳಲ್ಲಿ ಒಂದು ಎರಡು ಸಾವಿರ ಚಿತ್ರಗಳು ಬಂದವು ಅಂತ ಇಟ್ಟುಕೊಂಡರೆ, ಅದರಲ್ಲಿ ನೆನಪಿರುವ, ಇವತ್ತಿಗೂ ಚೆನ್ನಾಗಿದೆ ಅನ್ನಬಹುದಾದ, ಕದ್ದಿಲ್ಲದ ಚಿತ್ರಗಳು ಸುಮಾರು ಹತ್ತು ಹದಿನೈದು ಇರಬಹುದೇನೋ. ಇಪ್ಪತ್ತು ವರ್ಷ ಹೀಗಿದ್ದರೂ "ಇನ್ನು ನನ್ನ ಕೊನೆ ಉಸಿರು ಇರುವವವರೆಗೂ ಹಿಂದಿ ಚಿತ್ರಗಳನ್ನು ಕಣ್ಣೆತ್ತಿಯೂ ನೋಡಲಾರೆ" ಅಂತ ಪ್ರತಿಜ್ಞೆ ಮಾಡಿದವರು ಅಲ್ಲಿ ಅಥವಾ ಇಲ್ಲಿ ಎಷ್ಟಿದ್ದಾರೆ ? ಹಿಂದಿ ಚಿತ್ರ ನೋಡಿದರೆ ಮರ್ಯಾದೆಗೆ ಕಮ್ಮಿ ಅಂದವರು ಯಾರಿದ್ದಾರೆ ? 
ಮರಾಠಿ ಚಿತ್ರರಂಗ ಇನ್ನೇನು ಮುಚ್ಚಿಯೇ ಹೋಯಿತು ಅಂತಾಗಿತ್ತಲ್ಲ, ಕಳೆದ ಏಳೆಂಟು ವರ್ಷಗಳಲ್ಲಿ ಹೇಗೆ ಚಿಗಿತು ನಿಂತಿದೆ ನೋಡಿ. ಮರಾಠಿಗಳು ಯಾವತ್ತಾದರೂ ನಾನು ಮರಾಠಿ ಚಿತ್ರ ನೋಡಿ ಹನ್ನೊಂದು ವರ್ಷ ಆಯಿತು ಅಂತ ಹೇಳುವುದು ನೋಡಿದ್ದೀರಾ ? ಮಲಯಾಳದಲ್ಲಿ ನಾಲ್ಕೈದು ವರ್ಷ ಬರ ಬಂದಾಗ ಮಲ್ಲುಗಳು ಆಫೀಸಿನಲ್ಲಿ ನಮ್ಮ ಮಲಯಾಳದಷ್ಟು ಕೆಟ್ಟದ್ದು ಎಲ್ಲೂ ಇಲ್ಲ ಅನ್ನುವುದು ನೋಡಿದ್ದೀರಾ ? ತಮಿಳರು ವಿಜಯಕಾಂತ್ ಚಿತ್ರಗಳನ್ನು ಇಟ್ಟುಕೊಂಡು ನಮ್ಮ ತಮಿಳಿನ ಹಣೆಬರಹವೇ ಇಷ್ಟು, ಇನ್ನು ಹದಿನೈದು ವರ್ಷ ತಮಿಳಿನ ಕಡೆ ತಲೆ ಹಾಕಲಾರೆ ಅಂದ ಉದಾಹರಣೆಗಳು ಇವೆಯೇ? ಬಾಲಯ್ಯ ಚಿತ್ರಗಳನ್ನು ಇಟ್ಟುಕೊಂಡು, ನಾವು ಹೈ ಫೈ, ತೆಲುಗು ಚಿತ್ರ ನೋಡುವುದು ನಮ್ಮ ಲೆವೆಲ್ಲಿಗೆ ಕಮ್ಮಿ ಅನ್ನುವ ತೆಲುಗರು ಸಿಕ್ಕಲಾರರು. ಅಷ್ಟು overreact ಮಾಡುವುದು, ಇಲ್ಲಿಯವರು ಮಾತ್ರ. 

ಒಂದು ಚಿತ್ರ ಕನ್ನಡದ್ದು ಅಂದಮಾತ್ರಕ್ಕೆ ನೋಡಬೇಕು ಅಂತ ಹೇಳಲಾರೆ, ಇಲ್ಲಿ ಆಕ್ಷೇಪ ಇರುವುದು ಒಳ್ಳೆಯ ಚಿತ್ರಗಳೂ ಸಾಕಷ್ಟು ಬಂದಿದೆ ಅನುವುದನ್ನು ಲೆಕ್ಕಕ್ಕೇ ತಗೊಳ್ಳದೆ ಮಾತಾಡುವುದರ ಬಗ್ಗೆ, ಒಳ್ಳೆಯದು ಬಂದಾಗ ಪ್ರೋತ್ಸಾಹಿಸಿ, ಇಂತದ್ದು ನಮಗೆ ಬೇಕು ಅಂತ ಹೇಳುವ ಕೆಲಸ ಅಷ್ಟಾಗಿ ಆಗಿಲ್ಲ ಅಂತ (ಮೇಲೆ ಹೇಳಿದ್ದೇನಲ್ಲ ಆ ಪಟ್ಟಿಯಲ್ಲಿ ಇರುವ ಚಿತ್ರಗಳ ಬಾಕ್ಸ್ ಆಫೀಸ್ ಸಾಧನೆ ಬಗ್ಗೆ) . ಲೂಸಿಯಾ, ತಿಥಿ, ಕೆಂಡಸಂಪಿಗೆ ಇವೆಲ್ಲ ದುಡ್ಡು ಮಾಡುವುದಿಲ್ಲ ಅಂತಾದರೆ ಅದಕ್ಕೆ ಪ್ರೇಕ್ಷಕನನ್ನು ಹೊಣೆ ಮಾಡದೆ ಇರುವುದು ಹೇಗೆ ? ಅಂಬರೀಷದಂತ ಕಳಪೆ ಮಾಲು ಹತ್ತು ಹದಿನೈದು ಕೋಟಿ ಬಾಚುತ್ತದೆ, ಲೂಸಿಯಾ, ಕೆಂಡಸಂಪಿಗೆ, ತಿಥಿ ಗಳು ಎರಡರಿಂದ ನಾಲ್ಕು ಕೋಟಿ ಮಾಡಿದರೆ ಹೆಚ್ಚು ಅಂತಾದರೆ, ಸ್ಟಾರ್ ಗಳು, ದುಡ್ಡು ಸುರಿಯುವ ನಿರ್ಮಾಪಕರ ಆಯ್ಕೆ ಯಾವುದಾಗಿರುತ್ತದೆ ಅಂತ ಸುಲಭದಲ್ಲಿ ಊಹಿಸಬಹುದಲ್ಲ. ಸಯನೈಡ್, ಎದೆಗಾರಿಕೆ, ಸ್ಲಂ ಬಾಲ , ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ, ಅಟ್ಟಹಾಸ , ಲೂಸಿಯಾ , ಒಲವೇ ಮಂದಾರ , ಎದ್ದೇಳು ಮಂಜುನಾಥ , ಗೊಂಬೆಗಳ ಲವ್ , ಚಿತ್ರಮಂದಿರದಲ್ಲಿ, ಉಳಿದವರು ಕಂಡಂತೆ, ಸಿದ್ಲಿಂಗು, ಟೋನಿ , 6-5=2, ಬಹುಪರಾಕ್ , ಮೈನಾ, ರಂಗಿತರಂಗ, ಕಿಲ್ಲಿಂಗ್ ವೀರಪ್ಪನ್ , ನಾನು ಅವನಲ್ಲ ಅವಳು, ಭಾರತ್ ಸ್ಟೋರ್ಸ್ , ಕೂರ್ಮಾವತಾರ , ಉಗ್ರಂ, ಕೆಂಡಸಂಪಿಗೆ, ಯು ಟರ್ನ್ , ಪ್ಲಾನ್ , ಮೈತ್ರಿ , ಉಪ್ಪಿ 2, ಕಿಲ್ಲಿಂಗ್ ವೀರಪ್ಪನ್ , ರಾಟೆ , ಜಟ್ಟ , ತಿಥಿ , ಕಿರಗೂರಿನ ಗಯ್ಯಾಳಿಗಳು , ಕೃಷ್ಣ ಲೀಲಾ , ಹಗ್ಗದ ಕೊನೆ , ಗಣಪ , ಲಾಸ್ಟ್ ಬಸ್, ಕರ್ವ , ರಿಕ್ಕಿ , ಗೋಧಿ ಬಣ್ಣ. ಇಷ್ಟು ವಿಭಿನ್ನ ಚಿತ್ರಗಳು ಅನ್ನಬಹುದಲ್ಲ. ಇವೆಲ್ಲ ಶ್ರೇಷ್ಟ ಚಿತ್ರಗಳು ಅಂತಲ್ಲ, ಇಷ್ಟು ಬಂದಿದೆ ಕಳೆದ ಐದಾರು ವರ್ಷಗಳಲ್ಲಿ. ಡೈರೆಕ್ಟರ್ಸ್ ಸ್ಪೆಷಲ್, ದ್ಯಾವ್ರೆ, ಮಿಂಚಾಗಿ ನೀನು ಬರಲು , ದ್ಯಾವ್ರೆ, ಭಾಗ್ಯರಾಜ್ , ಅಪೂರ್ವ ತರದ ಸೋತ ಚಿತ್ರಗಳೂ ಇವೆ. ಯೋಗರಾಜ್, ಸೂರಿ, ಶಶಾಂಕ್ , ನಾಗಶೇಖರ್ ಇವರೆಲ್ಲ ಆರಕ್ಕೇರದೆ ಮೂರಕ್ಕಿಳಿಯಿದೆ, ಕೆಟ್ಟದ್ದೂ ಅಲ್ಲ ಭಯಂಕರ ಗ್ರೇಟ್ ಊ ಅಲ್ಲ ಅನ್ನಬಹುದಾದದ್ದು ಮಾಡುತ್ತಲೇ ಬಂದಿದ್ದಾರೆ. ಹೀಗೆ ಸಾಕಷ್ಟು ವಿಭಿನ್ನ, ಸ್ವಲ್ಪ ಮಟ್ಟಿಗಾದರೂ ಚೆನ್ನಾಗಿರುವ ಚಿತ್ರಗಳು ಬಂದಿವೆ, ಹೀಗೆ ಬೈಕೊಂಡು ಓಡಾಡುವವರು ಇವುಗಳಲ್ಲಿ ಅರ್ಧದಷ್ಟೂ ನೋಡಿರುವುದಿಲ್ಲ ಅಂತ ಬೆಟ್ ಕಟ್ಟಬಲ್ಲೆ ! 

ಇಂತದ್ದು ಬಂದಾಗ ನೋಡದೆ, ನಾನು ಕನ್ನಡ ಚಿತ್ರವೊಂದನ್ನು ನೋಡಿ ಹದಿನೈದು ವರ್ಷಗಳೇ ಆಯಿತು, ನಾನು ಸ್ವರ್ಗ ಲೋಕದಿಂದ ಇಳಿದವನು, ನನ್ನ ಲೆವೆಲ್ಲೇ ಬೇರೆ ಅಂದುಕೊಂಡು ಓಡಾಡಿದರೆ ಯಾರಿಗೂ ಯಾವ ಪ್ರಯೋಜನವೂ ಇಲ್ಲ. ಪ್ರೇಕ್ಷಕನಂತೆ ಕಲೆ. ಪ್ರೇಕ್ಷಕ ಒಳ್ಳೆಯದನ್ನು ನೋಡಿ ಚಪ್ಪಾಳೆ ತಟ್ಟಿದರೆ ಒಳ್ಳೆಯದು ಬರುತ್ತದೆ, ನಾವು ಥಿಯೇಟರಿಗೆ ಹೋಗುವುದಿಲ್ಲ ಅಂದರೆ ಅಲ್ಲಿಗೆ ಹೋಗುವವರಿಗೆ ಬೇಕಾದಂತದ್ದು ಬರುತ್ತದೆ. ಎರಡು ಸರ್ತಿ ದೋಸೆ ಮಾಡಿದಾಗ ಒಳ್ಳೆ ವ್ಯಾಪಾರ ಆಗಲಿಲ್ಲ ಅಂತಾದರೆ ಹೋಟೆಲಿನವರು ದೋಸೆ ಮಾಡುವುದು ನಿಲ್ಲಿಸುತ್ತಾರೆ. ಆಮೇಲೆ ದೋಸೆ ಇಲ್ಲ ಅಂತ ಇವರು ಹೋಗುವುದಿಲ್ಲ, ಇವರು ಹೇಗೂ ಬರುವುದಿಲ್ಲ ಅಂತ ಅವರು ದೋಸೆ ಹುಯ್ಯುವುದಿಲ್ಲ ಅಂತ ಆಗಿಬಿಡುತ್ತದೆ !! ಒಂದೋ ಹೋಟೆಲಿಗೆ ಹೋಗಿ ನಮಗೆ ದೋಸೆ ಬೇಕು ಅಂತ ಇವರು ಗೊತ್ತು ಮಾಡಿಸಬೇಕು, ಇಲ್ಲವೇ ಒಳ್ಳೆ ದೋಸೆಗೆ ಜನ ಬಂದೇ ಬರುತ್ತಾರೆ ಅಂತ ಅವರು ಧೈರ್ಯ ಮಾಡಬೇಕು. ಎರಡೂ ಕಳೆದ ಮೂರು ವರ್ಷಗಳಲ್ಲಿ ಸ್ವಲ್ಪವಾದರೂ ಆಗಿರುವುದು ಖುಷಿಯ ವಿಷಯ.
ಕನ್ನಡದ ಚಿತ್ರ ಅಂದ ಮಾತ್ರಕ್ಕೆ ಕಳಪೆ ಸರಕುಗಳನ್ನು ಹೊಗಳಬೇಕು ಅನ್ನುವುದು ಇದರ ತಾತ್ಪರ್ಯ ಅಲ್ಲ. ಏನೋ ಸ್ವಲ್ಪ ಹಾದಿ ತಪ್ಪಿರುವ ಮಗ ಮನೆಯಲ್ಲಿದ್ದರೆ ಪಕ್ಕದ ಮನೆಗಳಲ್ಲಿ ಸರ್ವಶ್ರೇಷ್ಟರೇ ಇದ್ದಾರೆ ಮತ್ತು ಜಗತ್ತಿನ ಅತ್ಯಂತ ದುಷ್ಟ ವ್ಯಕ್ತಿ ನಮ್ಮಲ್ಲಿದ್ದಾನೆ ಅನ್ನುವ ಭಾವ ಬೇಡ. ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ ಮತ್ತು ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ಎರಡು ಭಿನ್ನ ಧೋರಣೆ ಇಟ್ಟುಕೊಂಡಿದ್ದವು, ಎಲೆಕ್ಟ್ರಾನಿಕ್ಸ್ನಲ್ಲಿ ಲ್ಯಾಬಿನಲ್ಲಿ output ಬರದಿದ್ದಾರೂ ಏನೋ ಪಾಪ ಬದುಕಿಕೊಳ್ಳಲಿ ಅಂತ ಪಾಸಾಗುವಷ್ಟು ಮಾರ್ಕು ಕೊಟ್ಟು ಪಾರು ಮಾಡುತ್ತಿದ್ದರು, ಎಲೆಕ್ಟ್ರಿಕಲ್ನಲ್ಲಿ ಒಂದು ಸಣ್ಣ ತಪ್ಪಾದರೂ ನಿರ್ದಯವಾಗಿ ಸೊನ್ನೆಯೋ ಐದೋ ಹತ್ತೋ ಕೊಟ್ಟು ಫೇಲ್ ಮಾಡಿ ಕೂರಿಸುತ್ತಿದ್ದರು. ನಾವು ಎಲೆಕ್ಟ್ರಾನಿಕ್ಸ್ ವಿಭಾಗದ ಹಾಗಿದ್ದರೆ ಒಳ್ಳೆಯದು. ಉದಾಹರಣೆಗೆ ಟೋನಿ ಚಿತ್ರ, ಇದರಲ್ಲಿ ಹೀರೋ ಅಭಿನಯ ಸಪ್ಪೆ, ಕತೆಯ ಓಟಕ್ಕೆ ಹಾಡುಗಳು ಅಡ್ಡ ಬಂದಿವೆ, ಕೆಲವು ಕಡೆ ಕತೆ ಕುಂಟಿದೆ ಹೀಗೆ ಹುಡುಕಿದರೆ ತಪ್ಪುಗಳು ಸಿಗಬಹುದು, ಆದರೆ ಇದು ಒಂದು ಅದ್ಭುತ ಪ್ರಯೋಗ, ಇಲ್ಲಿ ಯಾವತ್ತೂ ಬಂದಿರದ ಕಥೆ, ಜಗತ್ತಿನಲ್ಲೇ ಅಪರೂಪ ಅನ್ನಿಸುವ ನಿರೂಪಣಾ ವಿಧಾನ ಇದೆ. ಏನೋ ಪ್ರತಿಭಾವಂತ ಹುಡುಗ, ಸ್ವಲ್ಪ ಗಡಿಬಿಡಿಯಲ್ಲಿ ಎಡವಿದ್ದಾನೆ ಅಂತ ಇಂತದ್ದನ್ನು ಪಾಸು ಮಾಡಿಬಿಡುವುದು ಒಳ್ಳೆಯದು. ಟೀವಿಯಲ್ಲಿ ಟೋನಿ ನೋಡಿ ಇಂತದ್ದೊಂದು ಅಪೂರ್ವ ಪ್ರಯೋಗ ಬಂದಿದೆ ಅಂತ ಗೊತ್ತೇ ಇರಲಿಲ್ಲ ಅಂತ ತುಂಬ ಜನ ಹೇಳಿದರಂತೆ.

ಇಲ್ಲಿನ ಜನರಿಗೆ ಕಂಟೆಂಟ್ based, issue based ಚಿತ್ರಗಳು ಬೇಕು, ವಿಭಿನ್ನ ಪ್ರಯತ್ನಗಳು ಬೇಕು ಅನ್ನುವುದಾದರೆ ಕಾಸರವಳ್ಳಿ, ಶೇಷಾದ್ರಿ ಚಿತ್ರಗಳು, ಹಗ್ಗದ ಕೊನೆ ತರದ್ದು ಯಾಕೆ ಒಂದು ಐವತ್ತು ಲಕ್ಷವೂ ಮಾಡುವುದಿಲ್ಲ ? ಲೂಸಿಯಾ ಯಾಕೆ ಬಿ ಮತ್ತು ಸಿ ಸೆಂಟರ್ ಗಳಲ್ಲಿ, ಸಿಂಗಲ್ ಸ್ಕ್ರೀನ್ಗಳಲ್ಲಿ ವಾಶೌಟ್ ಆಯಿತು ? ಸಯನೈಡ್ ಹತ್ತು ಕೋಟಿ , ಗೋಧಿ ಬಣ್ಣ ಇಪ್ಪತ್ತು ಕೋಟಿ, ಕೆಂಡಸಂಪಿಗೆ ಹದಿನೈದು ಕೋಟಿ , ರಿಕ್ಕಿ ಹತ್ತು ಕೋಟಿ ತರದ ಕಲೆಕ್ಷನ್ ಯಾಕಾಗಿಲ್ಲ ? ತಿಥಿ ಒಂದು ಎಂಟ್ ಹತ್ತು ಮಲ್ಟಿ ಪ್ಲೆಕ್ಸ್ ಗಳಲ್ಲಿ, ಅದೂ ಕಡಿಮೆ ಶೋ ಇಟ್ಟುಕೊಂಡು ಓಡಿದ್ದನ್ನೇ ಗೆಲುವು ಅನ್ನಬೇಕೆ ? ಯಾಕಾಗಿಲ್ಲ ಅಂದರೆ ಇವುಗಳನ್ನು ಗೆಲ್ಲಿಸಬಲ್ಲಂತವರು ಥಿಯೇಟರಿಗೆ ಬರುವುದೇ ಇಲ್ಲ. ಮತ್ತು ಕನ್ನಡಿಗರು in general ಚಿತ್ರ ನೋಡುವುದಿಲ್ಲ, ಅವರದ್ದೇನಿದ್ದರೂ ಫೇಸ್ಬುಕ್ ನಲ್ಲಿ ಬೈದು ಸುಮ್ಮನಾಗುವ ಸ್ವಭಾವ. 

ಸ್ಟಾರ್ ಗಳು ಅಂದಾಗ ನೆನಪಾಯಿತು , ಈ perception ಬರುವುದಕ್ಕೆ ದೊಡ್ಡ ಹೀರೋಗಳೂ ದೊಡ್ಡ ಕಾರಣ, ಸ್ಟಾರ್ ಗಳು ಸಾಲು ಸಾಲು ರಿಮೇಕು, ಮಸಾಲೆ ಚಿತ್ರಗಳು ಮಾಡಿದ್ದರಿಂದ ಎಲ್ಲವೂ ಹೀಗೆ ಅನ್ನುವ ಭಾವ ಬಂದಿರಬಹುದು. ಇಂತಹಾ ಕಳಂಕ ಅಂಟುವುದಕ್ಕೆ ಹೀರೋಗಳು ಕಾರಣವಾಗಿದ್ದಾರೆ ಅನ್ನಬಹುದು. 

ಯಾರ್ಯಾರು ಸಿನೇಮಾ ಮಾಡಲಿಕ್ಕೆ ಎಷ್ಟು ಕಷ್ಟ ಪಟ್ಟರು ಅನ್ನುವ ಕಾರಣಕ್ಕೆ ಪ್ರೇಕ್ಷಕ ನೋಡಬೇಕಾಗಿಲ್ಲ , ಅದನ್ನು ಹೇಳಿದ್ದು ಪ್ಯಾಶನ್ ಇರುವವರು ಯಾರಿದ್ದಾರೆ ಎಂಬ ಸಂದೇಹಕ್ಕೆ ಉತ್ತರವಾಗಿ. ಶೋಕಿಗೆ ಬರುವವರು, ಹೆಸರು ಹಾಳು ಮಾಡುವವರು ತುಂಬ ಜನ ಇದ್ದಾರೆ . ಹಾಗೆಯೇ ದೊಡ್ಡ ಸಂಬಳದ ಕಾರ್ಪೊರೇಟ್ ಕೆಲಸ ಬಿಟ್ಟು, ಸಾಕಷ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿ , ಸ್ವಂತ ಮನೆ ಮಠ ಮಾರಿ ಎಲ್ಲ ಮಾಡಿರುವ ಪ್ಯಾಶನೇಟ್ ಜನರೂ ಸಾಕಷ್ಟು ಇದ್ದಾರೆ. 

ಮೂವತ್ತು ನಲವತ್ತರ ದಶಕದಲ್ಲಿ ಯಕ್ಷಗಾನ ಅಂದರೆ , ಅಶ್ಲೀಲ ನಿರೂಪಣೆ ಇರುವ , ಕಲಾವಂತಿಕೆ ಇಲ್ಲದ ಕಲಾವಿದರ ಸಂತೆ ಆಗಿತ್ತಂತೆ. ವಿದ್ಯಾವಂತರು ಸುಸಂಸ್ಕೃತರು ಇದನ್ನು ಕೆಳ ಮಟ್ಟದ ಚೀಪ್ ಕಲೆ ಅಂತ ದೂರ ಇಟ್ಟಿದ್ದರಂತೆ. ಆಮೇಲೆ ಕುರಿಯ ವಿಠ್ಠಲ ಶಾಸ್ತ್ರಿಗಳು, ಪೊಳಲಿ ಶಾಸ್ತ್ರಿಗಳು, ದೇರಾಜೆ ಸೀತಾರಾಮಯ್ಯ , ಶೇಣಿ ಗೋಪಾಲಕೃಷ್ಣ ಭಟ್ಟರು , ದೊಡ್ಡ ಸಾಮಗರು ಎಲ್ಲ ಬಂದ ಮೇಲೆ ಇದು ಕಲಾವಂತಿಕೆ ಇರುವ, ಸುಸಂಸ್ಕೃತರು, ವಿದ್ವಜ್ಜನರು ನೋಡಬಹುದಾದ, ನೋಡಬೇಕಾದ ಕಲೆ ಅಂತ ಆಯಿತಂತೆ. ಹೀಗೆ ಏರಿಳಿತಗಳು ಆಗುವುದು, ಅದನ್ನು ತಿಳಿದವರು ಬಂದು ಸರಿ ಮಾಡುವುದು, ಈ ತಿಳಿದವರು ಬಂದಾಗ ಪ್ರೇಕ್ಷಕ ಅವರನ್ನು ಮೆಚ್ಚಿ ಪ್ರೋತ್ಸಾಹಿಸುವುದು ಎಲ್ಲ ಆಗಬೇಕಾದ್ದು. ನಾನು ಮೊದಲೇ ಹೇಳಿದಂತೆ ಪ್ರೇಕ್ಷಕನಂತೆ ಕಲೆ. ಗೋಧಿಬಣ್ಣ ಮೂವತ್ತು ಕೋಟಿ ಮಾಡುತ್ತದೆ ಅಂತಾಗುವ ಪ್ರೇಕ್ಷಕ ಇದ್ದಾಗ ಅಂತದ್ದು ಬರುತ್ತದೆ. 

ದರ್ಶನ್ ಚಿತ್ರಗಳು ಇಪ್ಪತ್ತು ಕೋಟಿ ಮಾಡಿದರೆ ದರ್ಶನ್ ಚಿತ್ರಗಳ ತರದ್ದೇ ಬರುತ್ತದೆ. ಕುರಿಯ, ದೇರಾಜೆ, ಶೇಣಿ ಅವರಂತ ಕಲಾವಿದರೂ ಬರಬೇಕು, ಅವರ ಕ್ರಿಯೇಟಿವಿಟಿ , ವಿದ್ವತ್ತು ಆಸ್ವಾದಿಸಬಲ್ಲ ಪ್ರೇಕ್ಷಕರೂ ಬೇಕು. ಎರಡೂ ಕೈ ಸೇರದೆ ಚಪ್ಪಾಳೆ ಆಗುವುದಿಲ್ಲ. ಬರೀ ಮಾಸ್ ಪ್ರೇಕ್ಷಕರು ಬಂದಿದ್ದರೆ ಈ ಪಂಡಿತರು ಏನು ಕೊರೀತಾರಪ್ಪ ಅಂತ ಆಗುತ್ತಿತ್ತು. ಮಾಸ್ ಪ್ರೇಕ್ಷಕ ದೊಡ್ಡ ಸಂಖ್ಯೆಯಲ್ಲಿ ಇದ್ದಾಗ ಮಾಸ್ ಚಿತ್ರಗಳು ಬರುತ್ತವೆ, ಕ್ಲಾಸ್ ಪ್ರೇಕ್ಷಕ ಥಿಯೇಟರಿಗೆ ಬರದಿದ್ದರೆ, ಅವರಿದ್ದಾರೆ, ಅವರಿಗೆ ಆಗುವಂತ ಚಿತ್ರ ಮಾಡಿಯೂ ದುಡ್ಡು ಮಾಡಬಹುದು ಅಂತ ಗೊತ್ತಾಗುವುದು ಹೇಗೆ ? ಇಲ್ಲಿ ಕೋಳಿ ಮೊದಲೋ ಮೊಟ್ಟೆ ಮೊದಲೋ , ದೋಸೆ ಇಲ್ಲ ಅಂತ ಅವರು ಬರುವುದಿಲ್ಲವೇ, ಅವರು ಬರುವುದಿಲ್ಲ ಅಂತ ದೋಸೆ ಮಾಡುವುದಿಲ್ಲವೇ , ಅಥವಾ ಇಬ್ಬರದ್ದೂ ಸ್ವಲ್ಪ ಸ್ವಲ್ಪ ತಪ್ಪಿದೆ ಅನ್ನಬೇಕೇ ಅನ್ನುವುದು ಯೋಚಿಸಬಹುದಾದ ವಿಚಾರ.

ಒಳ್ಳೆಯದನ್ನು ಪ್ರೋತ್ಸಾಹಿಸಿ ಕೆಟ್ಟದ್ದನ್ನು ತಿರಸ್ಕರಿಸುವುದು ಎಲ್ಲ ಕಡೆ ಆಗುತ್ತದೆ, ಇಲ್ಲಿಯೂ ಆಗುತ್ತದೆ, ಆಗಬೇಕು. ಹೇಳಿ ಕೇಳಿ ಎಲ್ಲ ಚಿತ್ರಗಳೂ ಪ್ರಾಡಕ್ಟ್ ಗಳೇ, ಮಾರುಕಟ್ಟೆಯಲ್ಲಿ ಒಳ್ಳೆ ಪ್ರಾಡಕ್ಟ್ ಉಳಿಯುವುದು, ಕೆಟ್ಟದ್ದು ತಿರಸ್ಕರಿಸಲ್ಪಡುವುದು ಆಗುತ್ತದೆ, ಆಗಲೇಬೇಕು. ಆದರೆ ಉಗಿಯುವಾಗ ಸ್ವಲ್ಪ ನೋಡಿಕೊಂಡು, ಕೆಲವು ವಿಚಾರಗಳನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಉಗೀರಿ ಅನ್ನುವ ನಿಟ್ಟಿನಲ್ಲಿ ಈ ಮಾತುಗಳನ್ನು ಹೇಳಿದ್ದೇನೆ. ಮನೆಯಲ್ಲಿ ಹೆಂಡತಿ ಕೈಲಿ ಉಗಿಸಿಕೊಂಡರೆ ಕನ್ನಡ ಚಿತ್ರಗಳನ್ನು ಬೈದು ಸೇಡು ತೀರಿಸಿಕೊಳ್ಳಬಹುದು ಅನ್ನುವಷ್ಟು ಸಸಾರ ಆಗದಿರಲಿ! ಏನಂತೀರಿ ?

Very good books on Cinema

There are people would read a recommendation piece on movies, there people who would want a list of "Must read" books. Is there anyone who wants a listicle on the must read books on cinema? I am not so sure, I will write it anyway. I recently commented about this elsewhere and 3-4 people messaged me saying they would like to read something like that. So, here it is.
Firstly, the question of stories. What makes a good story? Why some stories work and some don't? How is a screenplay different from a normal story? I believe that one book will not have all the answers. I will recommend these books because each one has something unique to offer:
Writing Screenplays That Sell by Michael Hauge: This one covers all the basics. This should be a good place to start. Either this or Syd Field's book on Screenwriting can be your first book.
The Art of Dramatic Writing by Lajos Egri: originally written for playwrights, This one also covers the basics like Conflict and character development. This and the book suggested above should lay solid foundations.
Writing for Emotional Impact by Karl Iglesias: As the title implies, the author suggests ways to make the film emotionally appealing. Has many tricks and tips.
Wired for Story by Lisa Cron: The lessons you learn are similar to the ones you got in the Writing for Emotional Impact book suggested above. But this one addresses the "Why" part. Think of it as a book on why a story works(Explained in terms of Darvin's evolution and neuroscience/brain science). A very insightful, eye opening and entertaining book.
Save the Cat by Blake Snyder: The reason it is so famous is that it sells a formula by telling things like do this on page 11 and do that on page 27. Don't buy the formula blindly, but read it anyway. Just because he sells a formula, does not mean that Blake Snyder was running a scam. He gets some of the basics right. Very good points on how a commercial film's script should be. And the book itself is like an entertaining action film (no dry/ text bookish theories. Breezy and funny)
Zen and the Art of Screenwriting by William Froug: This is the perspective of someone who hates the formulas and structures that screenwriting gurus sell. Thought provoking and good. Has some interviews with established screenwriters also.
Tales from the Script: Has Interviews of people who are actually writing commercial films. They share their views on almost everything related to screenwriting. A must read.
I did not feel like I got enlightened about something new by reading these 3 but they still are highly readable, you might pick up a thing or two from these:
Lew Hunter's Screenwriting 434
Essentials of Screenwriting by Richard Walter
And read/watch any interviews of Hitchcock,Billy Wilder.
Filmmaking in General:
Hitchcock by Francois Truffaut - Believe it or not, there was a time when Alfred Hitchcock was considered to be just another commercial/mass director by critics. It is the intellectuals from France that sang his praise and changed the critical opinion about him. One such gentleman is Francois Truffaut(The man himself is a well known director, one of the leading figures of French New wave). Truffaut discusses every single film of Hitchcock with the maser himself. Hitchcock gives detailed explanations, theories, background stories and stuff. This masterclass from the master is thorough and an absolute delight. A must read for all movie buffs.
Conversations with Wilder by Cameron Crowe - Another case of one director interviewing a legendary director/writer. Not every filmmaker can explain his ART. Hitchcock and Billy Wilder are two geniuses who could articulate as to how their films worked. They had insights and theories on how their films worked. And they are worth listening to. Wilder is one of the most versatile filmmakers, he also wrote his films and he is one of the wittiest people you will ever come across.
Awake in the Dark: The Best of Roger Ebert - Anything everything by Ebert is worth reading. I have named one just for the sake of listing one. Ebert was an encyclopedia of cinema, you must listen to his audio commentaries for films like Citizen Cane and Yasujiro Ozu's Floating Weeds to understand how knowledgeable the guy was.
Directing the Story Francis Glebas - Glebas is a storyboard artist for Disney. This book is about how to visually tell your stories. He can be intellectual without being boring. This is one of the best books on stroytelling I've come across.
Talking Films: Conversations on Hindi Cinema with Javed Akhtar - Javed saab is as witty and wise as ever. He offers his unique perspectives on Indian cinema
Technical Film and TV for Nontechnical People by Drew Campbell - Written with a sense of humour. Must read for those who get easily bored with the dry technical books. Entertaining and informative.
In the Blink of an Eye by Walter Murch - Murch is a celebrated editor who shares his ideas on the craft of editing. Filled with anecodotes, theory and insights about artistic methodology behind his craft Murch has produced a must read book.
Some notable and intellectual books that are not as entertaining as the ones mentioned above, I recommend these for the intellectually hungry types:
On Directing Film by David Mamet - Filmmaker/playwright David Mamet musing on cinema.
On Film Making by Alexander MacKendrick - Director/teacher MacKendrick's insights, very thought provoking.
What Is Cinema? by Andre Bazin
Bruce Block's The Visual Story - This one covers only the visual language and composition. Film makers, photographer, graphic designers, movie buffs anybody can read it.

Movies set in Extotic Locations

Movies set in exotic locations! Our real lives are often mundane and incredibly boring. It is movies that take us to unfamiliar territories and make us vicariously fulfil our fantasies. I have prepared a list of films that take us to remote and exotic locations, the ones that transport us to worlds we have not seen, the ones that invoke a sense of wanderlust, the ones that make you feel like packing the bags and going in search of the endlessly fascinating mother nature. A bollywood song showing an exotic location does not count, the location has to be an essential part of the story. Some films in the list might be slow and minimalist, approach with caution.
Mutluluk(Bliss) - This cute Turkish film is set in a yacht sailing in the Exquisite coasts of Turkey, plenty of picturesque scenery and an engaging story. Highly recommended.
Bond films - Right from the days of Dr No and On her majesty's secret service Bond films have had gorgeous foreign locations as their major attractions.
Nordwand(North Face) - This German film is the story of men trying to climb the Eiger mountain(Part of Switzerland's Alps), it captures the terrifying and harrowing beauty of the Alps with impressive camera work. This might be the most realistic climbing film out there.
Around the world in 80 days(the one made in 1956) - Hold your breath: They shot in 112 locations in 13 countries and as if this was not enough they erected 140 sets, the cast including extras totalled 68,894 people as per Wiki. This film was actually shot around the world in around 80 days!
The Buffalo Boy (2004): Nobody seems to have watched this story of a boy who lives in the flooded lowlands of Vietnam. The boy has to take his buffalos to a place where they can find grass. Watch it for those Floating villages of Vietnam , the primitive yet beautiful landscape and a lyrical narration.
African Queen - Master director John Huston directing Humphrey Bogart and the characters are floating in a boat in the rivers of Congo in East Africa, it was shot on location, what more do you want?
Dersu Uzala (1975) - A less known film of Akira Kurosawa, It is about a Mongolian tracker who acts as a guide to a Russian surveyor in the Siberian wilderness. Scenes in the wilderness look so realistic.
Spring, Summer, Fall, Winter... And Spring - This Korean film plays like a Buddhist parable. Entire film is set in a floating Buddhist temple in a secluded lake. It is the story of a boy told through different seasons, as he learns to be a monk. Very interesting premise, executed in a visually arresting fashion, narrated poetically.
Vertical limit - Vertical limit is set in the Himalayan peak K2(Shot in New Zealand), It is your standard high-octane Hollywood action film, there are many snow-capped settings, there is enough eye candy to warrant a one time watch.
Himalaya - Nothing great but this one is actually shot in a remote Himalayan village in Nepal, A realistic depiction of the salt caravans that traverse the majestic Himalayan Mountains in Tibet. Can be watched once for the magnificent panoramas and the mountains and glaciers.
Days of Heaven by Terrence Mallick - This very slow-moving poetry on screen is hypnotic. They shot most of the film during the "magic hour"(between darkness and sunrise/sunset), Must watch for the astonishing images of the endless wheat fields and one lonely farmhouse. I had once said that you can take any scene from the films of the great Greek filmmaker Theodorous Angelopoulos, pause it and send the paused scene to a photography competition. I would say that about this film.
Dreams of dust - Set in the rural, dusty African country of Burkina Faso, this one shows the Gold mines in that place. It is slow, bleak, primitive and terrifying and makes you feel like you have learned a bit about a completely different culture. A quietly affecting, sombre story about grief, survival and hope.
Mountain Patrol (2004): This one chronicles the stories of the Tibetan vigilante group who fought poachers in the Chinese highlands, one of the most remote, harshest environments in the world, a haunting, stark, desolate region.
Tulpan - Steppes of Kazakistan. It shows a place where there are no landmarks, no roads, nothing. It is a funny, fascinating and charming story of people living in such an isolated place.
Eight below - Story of an explorer who has to leave his team of dogs in Antarctica. Of course, it is not shot on location!(Greenland and Canada were the shooting locations) But there are stock footages of Antarctica and the vistas are beautiful and convincing, the heartwarming story makes it a good watch.
Medicine Man (1992) - Directed by John McTiernan of Die hard fame, starring the charismatic Sean Connery, this one has breathtaking outdoors and a decent story. It is a Story of a scientist trying to find cure for Cancer in the jungles. Set in the Amazon rain forests of Brazil(Shot in Mexico), this one is an an old fashioned entertainer.
The way back- A treacherous trek to freedom across the world’s most merciless landscapes – from Siberia to India.
Lawrence of Arabia - Needs no introduction. An epic, majestically captures the desert.
The Hunter (2011) - Filmed on the Australian island of Tasmania, it is the story of a man hired to locate and extract the DNA from the last remaining Tasmanian tiger. Has unique landscapes,forests, highland lakes and valleys.
A far off Place - A standard Hollywood style journey for survival in the Kalahari Deserts of Africa.
Aguirre the wrath of god - Well, there are 2 types of people in the world. There is Werner Herzog and there is the rest of the world. Herzog once made a film called Fitzcarraldo(set in the South American jungles), a ship had to be moved from one river to another via a piece of land in the story. Guess how Herzog filmed it? He actually took a 320 ton ship there and asked people to manually pull it! In Aguirre: The Wrath of God, he tells the story of explorers searching for gold, floating down a river in the middle of the godforsaken jungle. There were no computers, no special effects -- everything that happened in the film had to happen in real life. Those pictures of Amazon rain forests in Aguirre are hypnotic, stunning and gorgeous. Fitzcarraldo, Rescue Dawn and all of his documentaries are also recommended.
Honourable mentions:
Blackboards - Iranian. A group of teachers with blackboards strapped to their backs, wander in search of students they can teach in the rugged terrain of Kurdistan
The English Patient (1996) - A grand, sweeping romance and an Oscar winner, this one has some real good scenes set in the African Sahara desert.
The Flight of the Phoenix (1965) - This is another film set in Sahara. It is the story about a group of people getting stranded in the desert after a plane crash.
Alive (1993) - Another plane crash/survival story set in the snow capped Andes mountains.
The Blue Butterfly (2004) - Story of a boy who wants to capture a blue butterfly, the film was underwhelming but the jungles of Costa Rica looked really good.
Jeremiah Johnson - Woods and snowy mountain regions of Utah
Munyurangabo - Landscapes of Rwandan countryside
Vodka Lemon - Iranian. A remote,snowy village in Armenia
Kandahar(Borders of Afghanistan)- Iranian. Story of an Afghan-Canadian lady journalist returning to her homeland after receiving a suicidal note from her sister who lives in the city of Kandahar. Shows the Talibani regions and provides indelible and touching images.

Yet to watch:
Postmen in the Mountains
The Thaw (2009)
Pathfinder (2007)
Sanctum (2011)
Black Water (2007)
Iron Will (1994)
Farewell to the King (1989)
Seven Years in Tibet (1997)
Jungle Child (2011) - A family of a German linguist lives with an indigenous tribe in Papua New Guinea
Suggestions are welcome 

Why there is so much hype about Christopher Nolan

Some paragraphs from an answer that I had written in Quora(About why there is so much hype about Christopher Nolan): Nolan has bridged the gap between the commercial and ART. I find the mainstream Hollywood to be formula driven,cliched and predictable. I find the Bergmans and Antonionis way too pretentious, intellectual, abstract and boring. My solution? Nolan!! He is a poor man’s version of Tarkovskys, Bergmans and Fellinis. He pursues arty themes and concepts like them. But he dresses them up like mainstream commercial stuff. Lots and lots of people crave for such a middle ground. ART films are abstract and boring for us, commercial films are cliched and dumb. Nolan gives us what we need – Commercial films that borrow good things from art films.

Another thing Nolan does is he makes his audience feel intelligent. We like solving puzzles. That is why we love detective fiction and mysteries. Nolan takes this to heights by designing movies as puzzles to be solved. And there is nothing like a reward that is earned. Let us say I decide to give 1 crore Rs to you. I have 2 options: a. I can give it as charity b. I can give it as an award for being the best quora/facebook user. Which option will you prefer? You will prefer b. You will feel that you have earned it. This psychological factor works.
Consider the screenwriting tips given by Billy Wilder( I will just quote the 7th, you may google for the rest):
7. A tip from Lubitsch: Let the audience add up two plus two. They’ll love you forever.
This is exactly what Nolan does. He gives 2+2 and lets the audience figure out that it is 4. Audience feels like they have earned it. It makes them feel intelligent.

There is one last reason for the fuss. He’s always original, always daring, and always interesting. His success means a lot to movie buffs because such successes will encourage more and more original ideas. Hollywood keeps churning out sequels, reboots, remakes, superhero films and stuff like Transformers part 20. So, if one daringly original idea wins studios will sponsor more and more original ideas.That is why there is lot of interest about Nolan. If films like his fail then studios will keep making Spider man part 6 and Transformers part 21, Star Wars 23 and so on.

ಮಾತು ಮತ್ತು ಅರ್ಥ

ಮಾತು, ಶಬ್ದ ಮತ್ತು ಅರ್ಥ! ನಾವು ಮಾತಾಡುತ್ತಾ ಹೋಗುತ್ತೇವೆ, ನಿಲ್ಲದ ಬೆಂಗಳೂರಿನ ಟ್ರಾಫಿಕ್ಕಿನಂತೆ ಮಾತು ಬರುತ್ತಲೇ ಹೋಗುತ್ತದೆ, ಮಾತು ಅಂದ ಮೇಲೆ ಶಬ್ದಗಳೂ ಬರುತ್ತವೆ, ಮಾತಾಡುವವರು ಸಾಕಷ್ಟು ಜನ ಇದ್ದಾರೆ, ಅರ್ಥ ಇಲ್ಲದ್ದನ್ನು ಮಾತಾಡುವವರೂ ಇದ್ದಾರೆ, ಕೆಲವರು ಮಾತಾಡಿದರೆ ಅರ್ಥಕ್ಕೇ ಹೊಸ ಅರ್ಥ ಬರುವುದೂ ಇದೆ. ಈ ಶಬ್ದ ಮತ್ತು ಅರ್ಥಗಳು ಹೇಗೆಲ್ಲ ಬರುತ್ತವೆ, ಬದಲಾಗುತ್ತವೆ ಅಂತ ಬೆದಕುತ್ತ ಹೋದರೆ, ಶಬ್ದಗಳನ್ನು ಮುಟ್ಟಿ, ತಟ್ಟಿ ಮಾತಾಡಿಸಿದರೆ ಹಲವು ಸೋಜಿಗಗಳು, ವಿಚಿತ್ರ ಕತೆಗಳು ಸಿಗುತ್ತವೆ. ಇಂತಹ ತಮಾಷೆಯ, "ಓಹೋ ಹೀಗೋ ವಿಚಾರ !!" ಅನ್ನಿಸುವ ಶಬ್ದಗಳು ಇವೆ ಸಾಕಷ್ಟು. ಇಂತಹ ವೇಷ ಬದಲಿಸುವ ಒಂದಷ್ಟು ಶಬ್ದಗಳನ್ನು ಭೇಟಿ ಮಾಡೋಣ ಇವತ್ತು.

ಈಗ ಸವಾಲು ಅನ್ನುವ ಶಬ್ದವನ್ನೇ ತಗೊಳ್ಳಿ, ಸವಾಲ್ ಎಂಬ ಪದಕ್ಕೆ ಹಿಂದಿ/ ಉರ್ದುವಿನಲ್ಲಿ ಪ್ರಶ್ನೆ ಎಂಬ ಅರ್ಥವಿದೆ ಆದರೆ ಕನ್ನಡದಲ್ಲಿ ಸವಾಲು ಅಂದರೆ ಅದನ್ನು ಚಾಲೆಂಜ್/ಕೆಣಕು. ಇದು ಯಾಕೆ ಹೀಗೆ ? ಈ ಯಾಕೆ ಅನ್ನುವುದಕ್ಕೆ ಉತ್ತರ ಹೀಗೆ : ಇದು ಒಂದು ದಿನ ಒಬ್ಬರು ಕುಳಿತು ಇವತ್ತಿನಿಂದ ಹೀಗೆ ಪ್ರಯೋಗಿಸೋಣ ಅಂತ ಮಾಡಿದ ನಿರ್ಧಾರ ಅಲ್ಲ. ಒಂದು ಶಬ್ದ ಲಕ್ಷಗಟ್ಟಲೆ ಜನರ ಬಾಯಿಗೆ ಸಿಕ್ಕಿ ಸಹಜವಾಗಿ ಆದ ಬದಲಾವಣೆ (ಅರ್ಥಾಂತರ). ಎಲ್ಲ ಜೀವಂತ ಭಾಷೆಗಳಲ್ಲಿ ಹೀಗೆ ಆಗುತ್ತದೆ. ಕೆಲವೊಮ್ಮೆ ಅನುಕರಣೆಯಿಂದ , ಒಮ್ಮೊಮ್ಮೆ ಅಜ್ಞಾನದಿಂದ, ಕೆಲವೊಮ್ಮೆ ಸೌಲಭ್ಯಾಕಾಂಕ್ಷೆಯಿಂದ.
ಈಗ ಒಬ್ಬರು ಆಟೋ ಚಾಲಕರು ಒಂದು ಇಂಗ್ಲಿಷು ಶಬ್ದ ಕೇಳುತ್ತಾರೆ ಅಂತಿಟ್ಟುಕೊಳ್ಳಿ. ಅವರಿಗೆ ಮೂಲ ಇಂಗ್ಲಿಷಿನ ಅರ್ಥ ತಿಳಿಯದು, ಸಂಧರ್ಭ ನೋಡಿ ಹೀಗಿರಬಹುದು ಅಂತ ಅರ್ಥ ಕಲ್ಪಿಸಿಕೊಳ್ಳುತ್ತಾರೆ, ಎರಡು ಮೂರು ಸಲ ಆ ಶಬ್ದ ಕಿವಿಗೆ ಬಿದ್ದ ಮೇಲೆ ಅವರೂ ಬಳಸುತ್ತಾರೆ . ಅವರನ್ನು ನೋಡಿ ಇನ್ನೊಬ್ಬರು , ಇನ್ನೊಬ್ಬರನ್ನು ನೋಡಿ ಮತ್ತೊಬ್ಬರು , ಹೀಗೆ ಅನುಕರಣೆಯಿಂದ ಕ್ರಮೇಣ ಎಲ್ಲರೂ ಬಳಸುತ್ತಾರೆ. ಉದಾಹರೆಣೆಗೆ : Recess ಅನ್ನುವ ಶಬ್ದ. Recess ಅಂದರೆ ಇಂಗ್ಲೀಷಿನಲ್ಲಿ ಬಿಡುವು. ಶಾಲೆಯಲ್ಲಿ ಬಿಡುವು ಇದ್ದಾಗ ಮಕ್ಕಳು ಮೂತ್ರ ವಿಸರ್ಜಿಸುವ ಕ್ರಮ ಇರುವುದರಿಂದ ಕೆಲವರು recess ಅಂದರೆ ಮೂತ್ರ ಮಾಡುವುದು ಅಂತಲೇ ಭಾವಿಸಿದರು. ಕ್ರಮೇಣ, "ನಮ್ ಹುಡುಗ recess ಮಾಡಬೇಕಂತೆ(ಮೂತ್ರ ವಿಸರ್ಜಿಸಬೇಕಂತೆ ಎಂಬರ್ಥದಲ್ಲಿ)" ಅಂತ ಬಳಸಿದರು. ಈಗ ತುಂಬ ಜನ ಹೀಗೇ ಬಳಸುತ್ತಾರೆ. ಇದು ಅಜ್ಞಾನದಿಂದ ಆದ ಅರ್ಥಾಂತರ.

ಅರ್ಥಗಳು ಐದು ತರದಲ್ಲಿ ಬದಲಾಗುತ್ತವೆ ಅಂತ ಭಾಷಾ ವಿಜ್ಞಾನಿಗಳು ಗುರುತಿಸಿದ್ದಾರೆ : ಅರ್ಥ ವಿಕಾಸ, ಅರ್ಥಸಂಕೋಚ, ಹೀನಾರ್ಥಪ್ರಾಪ್ತಿ, ಉತ್ತಮಾರ್ಥ ಪ್ರಾಪ್ತಿ ಮತ್ತು ಅರ್ಥಾಂತರ.
ಅರ್ಥ ವಿಕಾಸ - ಒಂದು ಸಂಸ್ಥೆ ಹೊಸ ಬ್ರಾಂಚುಗಳನ್ನು ತೆರೆದು ಬೆಳೆದ ಹಾಗೆ ಒಂದು ಶಬ್ದ ಬೆಳೆಯುವುದು. ಅದಕ್ಕೆ ಮೊದಲು ಇದ್ದ ಅರ್ಥಕ್ಕಿಂತ ಹೆಚ್ಚಿನ, ವಿಶಾಲವಾದ ಅರ್ಥವನ್ನು ಪಡೆಯುವುದು. ಉದಾ: ಎಣ್ಣೆ. ಎಣ್ಣೆ ಅಂದರೆ ಮೂಲದಲ್ಲಿ ಎಳ್ಳಿನ ಜಿಡ್ಡು (ಎಳ್ + ನೆಯ್ ). ಎಳ್ಳಿನ Oil. ಈಗ ಎಲ್ಲ Oilಗಳಿಗೂ, ಜಿಡ್ಡುಗಳಿಗೂ ಬಳಸುತ್ತಾರೆ, ತೆಂಗಿನ ಎಣ್ಣೆ, ಕಡಲೆ ಎಣ್ಣೆ ಇತ್ಯಾದಿ. ತೆಂಗಿನ ಎಣ್ಣೆ ಅಂದರೆ ತೆಂಗಿನ ಎಳ್ಳಿನ oil ಅಂದಂತೆ! ಇನ್ನು ದಿನಕ್ಕೆ ನಾಲ್ಕು ಸಲ ಕಿವಿಗೆ ಬೀಳುವ ಶಬ್ದ "ಸಕತ್". ಇದರ ಮೂಲ ಸಖ್ತ್ ಅನ್ನುವ ಪಾರಸಿ ಶಬ್ದ. ಸಖ್ತ್ ಅಂದರೆ ಬಲವಾದ, ಗಟ್ಟಿಯಾದ, ತೀವ್ರವಾದ ಅಂತ. ಜರೂರತ್ ಹೈ ಜರೂರತ್ ಹೈ ಸಖ್ತ್ ಜರೂರತ್ ಹೈ ಅನ್ನುವ ಹಾಡೇ ಇದೆಯಲ್ಲ! ಕನ್ನಡದಲ್ಲಿ ಇದು ಚಕ್ರವರ್ತಿಯನ್ನು ಕೂಡಿಸಿಕೊಂಡ ಕೆನೆಯುವ ಕುದುರೆಯ ಖುರಪುಟಗಳು ಧೂಳೆಬ್ಬಿಸುವ ಹಾಗೆ ಧೂಳೆಬ್ಬಿಸಿದೆ. ನೀರು ದೋಸೆ ಹೇಗಿತ್ತು ? ಸಕತ್ತಾಗಿತ್ತು. ಪರೀಕ್ಷೆ ಹೇಗಿತ್ತು ? ಸಕತ್ ಸುಲಭ. ಹುಡುಗಿ ಹೇಗಿದಾಳೆ ? ಸಕತ್ ! ಎಲ್ಲಿ ಬೇಕಾದರೂ ಬೇರೆ ಯಾವ ಶಬ್ದವೂ ನೆನಪಾಗದಿದ್ದರೆ ಸಕತ್ ಅನ್ನುವ ಶಬ್ದ ಪ್ರಯೋಗಿಸಿ ಮರ್ಯಾದೆ ಉಳಿಸಿಕೊಳ್ಳಬಹುದು. ಪಾರಸಿಯಲ್ಲಿ ಹೊದಿಕೆ ಹೊದ್ದು ಮಲಗಿದ್ದ ಶಬ್ದ ಕನ್ನಡದಲ್ಲಿ ನೆಗೆ ನೆಗೆದು, ಕುಪ್ಪಳಿಸಿ ಕುಣಿದಿದೆ!
ಅರ್ಥಸಂಕೋಚ - ಮಲ್ಯನ ಕಿಂಗಫಿಶರ್ನ ಹಾಗೆ ದೊಡ್ಡದು ಸಣ್ಣದಾಗುವುದು. ವಿಶಾಲ ಅರ್ಥವು ಒಂದೇ ಅರ್ಥಕ್ಕೆ ಸೀಮಿತ ಆಗಿ ಬಿಡುವುದು. ಉದಾ : ಖಲ್ಲಾಸ್ ಅನ್ನುವ ಶಬ್ದ. ಇದಕ್ಕೆ ಮುಗಿಸುವುದು ಅನ್ನುವ ಅರ್ಥ ಇದ್ದಿರಬೇಕು ಮೂಲದಲ್ಲಿ . ಕನ್ನಡದಲ್ಲಿ ಕೆಟ್ಟ ರೀತಿಯಲ್ಲಿ ಮುಗಿಸುವುದು ಅನ್ನುವ ಸೀಮಿತ ಅರ್ಥದಲ್ಲಿ ಈಗ ಬಳಸುತ್ತಾರೆ( ಉದಾ : ಹೆಚ್ಚಿಗೆ ಮಾತಾಡಿದರೆ ಖಲ್ಲಾಸ್ ಮಾಡಿ ಬಿಡ್ತೀನಿ ). ಈಚೆಗೆ ಅಲ್ ಜಜೀರಾ ಅನ್ನುವ ವಾರ್ತಾ ವಾಹಿನಿ (ಅರಬ್ ದೇಶಗಳಲ್ಲಿ ಹೆಸರು ಮಾಡಿರುವ ವಾಹಿನಿ )ಯಲ್ಲಿ ಒಂದು ಸಂದರ್ಶನ ನೋಡುತ್ತಿದ್ದೆ . ಇನ್ನು ಸಂದರ್ಶನ ಮುಗಿಸೋಣ ಅನ್ನುವುದಕ್ಕೆ ಅಲ್ಲಿ ಖಲ್ಲಾಸ್ ಮಾಡೋಣ ಅಂದರು.
ಹೀನಾರ್ಥಪ್ರಾಪ್ತಿ: ಒಂದು ಶಬಕ್ಕಿದ್ದ ಒಳ್ಳೆಯ ಅರ್ಥ ಕೆಟ್ಟ ಅರ್ಥಕ್ಕೆ ತಿರುಗುವುದು. ಇದಕ್ಕೆ ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿರುವ ಉದಾಹರಣೆ ಬುದ್ದಿ ಜೀವಿ ಅನ್ನುವ ಶಬ್ದ. ಈ ಶಬ್ದಕ್ಕೆ ಇಂಟಲೆಕ್ಚುಯಲ್, ಧೀಮಂತರು ಎಂಬರ್ಥ. ಇತ್ತೀಚಿಗೆ ಧರ್ಮ ನಿಂದಕರು, ಆಷಾಡಭೂತಿಗಳು, ಎಡೆಬಿಡಂಗಿಗಳು, ಒಂದು ಧರ್ಮವನ್ನು ದ್ವೇಶಿಸುವವರು, sickularಗಳು, Libtardಗಳು ಅನ್ನುವ ಅರ್ಥಕ್ಕೆ ತಿರುಗಿದೆ . ಬುದ್ಧಿ ಜೀವಿ ಎನ್ನುವುದು ಧರ್ಮಕ್ಕೆ, ಧರ್ಮ ನಿಂದನೆಗೆ,ಎಡ, ಬಲಗಳಿಗೆ ಸಂಬಂದ ಪಟ್ಟ ಶಬ್ದವೇ ಅಲ್ಲ. ಅದು ಇಂಗ್ಲಿಷ್ ನ ಇಂಟಲೆಕ್ಚುಯಲ್ ಅನ್ನುವುದಕ್ಕೆ ಸಂವಾದಿಯಾದ ಶಬ್ದ. ಒಬ್ಬ ಬುದ್ಧಿ ಜೀವಿ ಪರಮ ಭಕ್ತನೂ, ಬಲ ಪಂಥೀಯನೂ ಆಗಿರಬಹುದು. ಈ ಎಡ ಬಲಗಳ ಪೆಟ್ಟುಗುಟ್ಟಿನಲ್ಲಿ ತೀರ ಗೌರಿ ಲಂಕೇಶ್, ಬರ್ಖಾ ದತ್ , ಆರುಂಧತಿ ರಾಯ್, ಭಗವಾನ್ ಮುಂತಾದವರನ್ನೂ ಬುದ್ದಿ ಜೀವಿಗಳು ಅಂತ ಕರೆದದ್ದೂ ಆಯಿತು -- ಅವರುಗಳು ಇಂಟಲೆಕ್ಚುಯಲ್ ಆಗಿ ಏನೂ ಕಡಿದು ಗುಡ್ಡ ಹಾಕಿರದಿದ್ದರೂ !! ಇದು ಎಷ್ಟು ಅತಿಗೆ ಹೋಗಿದೆ ಎಂದರೆ ಇವತ್ತು ಬುದ್ಧಿ ಜೀವಿ ಎನ್ನುವುದು ಒಂದು ಬೈಗುಳವೇ ಆಗಿ ಹೋಗಿದೆ. ಯಾರಾದರೂ ಒಳ್ಳೆ ಇಂಟಲೆಕ್ಚುಯಲ್ ಸಾಧಕರನ್ನು ಹೊಗಳುವುದಕ್ಕೆ/ಸಂಬೋಧಿಸುವುದಕ್ಕೆ ಯಾವ ಶಬ್ದ ಆದೀತು ಅಂತ ಹುಡುಕಬೇಕಾದ ಪರಿಸ್ಥಿತಿ !! ವೇದಗಳಲ್ಲಿ ಯಜ್ಞ-ಯಾಗಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದ user manual ತರದ ಭಾಗವನ್ನು `ಕರ್ಮಕಾಂಡ' ಎಂದು ಕರೆಯುತ್ತಾರೆ. ಆದರೆ ಇವತ್ತು ಆ ಪದದ ಕರ್ಮಕಾಂಡವೇ ಆಗಿ ಹೋಗಿದೆ ! ಆಗ ತಂಗೂಳು ಅಂದರೆ ತಣ್ಣಗಿನ+ಕೂಳು=ತಣ್ಣಗಿರುವ ಆಹಾರ. ಈಗ ಇದಕ್ಕೆ ಹಳಸಿದ ಎಂಬರ್ಥ ಬಂದಿದೆ. ಕುನ್ನಿ ಅಂದರೆ ಮೊದಲು ಕನ್ನಡದಲ್ಲಿ ಪುಟ್ಟ ಗಂಡು ಮಗು ಅಂತ ಇದ್ದಿರಬೇಕು. ಈಗ ನಾಯಿಮರಿ ಅಂತ ಆಗಿಬಿಟ್ಟಿದೆ . ಈಗ ಗದಾಯುದ್ಧ ಯಕ್ಷಗಾನದಲ್ಲಿ , ಎಲಾ ಎಲಾ ಛೀ ನೃಪಕುಲ ಕುನ್ನಿ ಅಂತಲೇ ಮೂದಲಿಸಲಾಗುತ್ತದೆ. ಹವ್ಯಕ ಭಾಷೆಯಲ್ಲಿ ಈಗಲೂ ಪುಟ್ಟ ಮಕ್ಕಳನ್ನು ಮುದ್ದಿನಿಂದ ಒಪ್ಪಕುಂಞಿ ಅನ್ನುತ್ತಾರೆ. ಲೇಖಕ ಬೊಳುವಾರು ಮಹಮ್ಮದ್ ಕುಂಞಿ ಇದ್ದಾರಲ್ಲ ಹಳೇ ಅರ್ಥದ ಕುಂಞಿ ಅವರ ಹೆಸರಿನಲ್ಲಿ ಇರುವುದು.
ಉತ್ತಮಾರ್ಥ ಪ್ರಾಪ್ತಿ: ಒಂದು ಶಬಕ್ಕೆ ಒಳ್ಳೆಯ ಅರ್ಥ ಬಂದು ಬಿಡುವುದು . ಉದಾ : ದಿಗ್ಗಜ ಅಂದರೆ ದಿಕ್ಕುಗಳನ್ನು ಹೊತ್ತುನಿಂತ ಆನೆ. ಇವತ್ತು ಇದನ್ನು ದೊಡ್ಡ ಜನ, ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ಪರಿಣತಿ ಹೊಂದಿದವರು ಅನ್ನುವ ಅರ್ಥದಲ್ಲಿ ಬಳಸುತ್ತಾರೆ. ಪಂಟರ್ ಎಂಬ ಇಂಗ್ಲಿಷ್ ಪದಕ್ಕೆ ಒಳ್ಳೆ ಜೂಜುಕೋರನೆಂಬ ಅರ್ಥವಷ್ಟೇ ಇತ್ತು, ಕನ್ನಡದಲ್ಲಿ ನಿಸ್ಸೀಮ, ನಿಷ್ಣಾತ ಅನ್ನುವ ಅರ್ಥದಲ್ಲಿ, "ಅವ್ನು ಬಿಡಪ್ಪಾ ಪಂಟ" ಅನ್ನದ ಕಾಲೇಜು ವಿದ್ಯಾರ್ಥಿಗಳೇ ಇಲ್ಲ.
ಅರ್ಥಾಂತರ: ಒಂದು ಪದ ಹಿಗ್ಗದೆ, ಕುಗ್ಗದೆ, ಹೀನ ಅಥವಾ ಉತ್ತಮ ಅರ್ಥಕ್ಕೆ ತಿರುಗದೆ ಬದಲಾದರೆ ಅದು ಅರ್ಥಾಂತರ. ಇಲ್ಲಿ ತಮಾಷೆ ಇರುವುದು ಸರೀ ಉಲ್ಟಾ ಅಥವಾ ವಿರುದ್ಧ ಅರ್ಥಕ್ಕೆ ಹಾರಿ ಪಕ್ಷಾಂತರ ಮಾಡುವ ರಾಜಕಾರಣಿಯಂತ ಶಬ್ಧಗಳಲ್ಲಿ. ಅಮ್ಮ ಅನ್ನುವ ಶಬ್ದ ಯಾರಿಗೆ ಗೊತ್ತಿಲ್ಲ. ಹಳಗನ್ನಡದಲ್ಲಿ ಅಮ್ಮ ಅಂದರೆ ಅಪ್ಪ ಅಂತಲೇ ಅರ್ಥ! ಹೀಗೆ ಅಂದರೆ ನೀವು ಟಿವಿ 9 ಇನ "ಹೀಗೂ ಉಂಟೆ" modeಗೆ ಹೋಗಬಹುದು. ಹಳಗನ್ನಡದಲ್ಲಿ ಅಬ್ಬೆಯರು ಇದ್ದಾರೆ ಅಮ್ಮ ಈಗ ಇರುವಲ್ಲಿ. ನೃಪತುಂಗನ ಮಗಳ ಹೆಸರು ಚಂದ್ರಬಲಬ್ಬೆ. ತುಳುವಿನಲ್ಲಿ ಈಗಲೂ ಅಮ್ಮೆ ಅಂದರೆ ಅಪ್ಪನೇ. ಅಪ್ಪನ ಜಾಗದಲ್ಲಿ ಅಬ್ಬೆಯನ್ನು/ಅಮ್ಮನನ್ನು ಕೂರಿಸಿ ತಿರುಗಾ ಮುರುಗಾ ಮಾಡಲಾಗಿದೆ. ರುಂಡ ಎಂದರೆ ಕುತ್ತಿಗೆ ಮೇಲಿನದ್ದು, ಮುಂಡ ಅಂದರೆ ಕೆಳಗಿನದ್ದು, ಆದರೂ ತಲೆಗೆ ಸುತ್ತುವ ವಸ್ತ್ರ ಮುಂಡಾಸು, ರುಂಡಾಸು ಅಲ್ಲ. ಮುಂಡ ಅಂದರೆ ಮೊದಲು ತಲೆ ಆಗಿದ್ದಿರಬೇಕು, ಈಗ ಉಲ್ಟಾ ಆಗಿದೆ.

ಇನ್ನೊಂದು ಭಾಷಾ  ಪ್ರಕ್ರಿಯೆ ಅಂದರೆ ಸ್ವೀಕರಣ
ಸ್ವೀಕರಣ : ಬೇರೆ ಭಾಷೆಗಳಿಂದ ಸಾಲ ಪಡೆಯುವುದು, ಕೆಲವೊಮ್ಮೆ ಸಾಲ ಪಡೆದದ್ದನ್ನು ತಿರುಚುವುದು. ಬೆಂಗಳೂರಿನಲ್ಲಿ ಕೂತಲ್ಲಿ ನಿಂತಲ್ಲಿ " ಬೇಜಾನ್ " ಅನ್ನದವರು ಯಾರಿದ್ದಾರೆ ? ಜಾನ್ ಅಂದರೆ ಉರ್ದುವಿನಲ್ಲಿ ಜೀವ. ಹಾಗಾಗಿ ಬೇಜಾನ್ ಅಂದರೆ ಜೀವ ಇಲ್ಲದಿರುವುದು, ನಿರ್ಜೀವವಾಗಿರುವುದು. ಇದನ್ನು ಯಾರೋ ಪುಣ್ಯಾತ್ಮ ಬೇಜಾನ್ ತಲೆ ಓಡಿಸಿ ಸಿಕ್ಕಾಪಟ್ಟೆ,ಅಪಾರ, ಬಹಳಷ್ಟು ಅನ್ನುವ ಅರ್ಥಕ್ಕೆ ತಿರುಗಿಸಿದ್ದಾನೆ. ಇದು ಮತ್ತು ಸಕತ್ ಅನ್ನುವ ಪದ ಇಲ್ಲದಿದ್ದರೆ ಬೆಂಗಳೂರಿಗರು ಬದುಕುಳಿಯುವುದು ಕಷ್ಟ ಅನ್ನುವ ಪರಿಸ್ಥಿತಿ ಇದೆ! ಇನ್ನೂ ಕೆಲವು ವಿಚಿತ್ರ ಪ್ರಯೋಗಗಳು : ಬಂದ್ಬಿಟ್ಟು . ಕೆಲವರು ಮಾತಿಗೊಮ್ಮೆ ಬಂದ್ಬಿಟ್ಟು ,ಬಂದ್ಬಿಟ್ಟು, ಬಂದ್ಬಿಟ್ಟು,ಬಂದ್ಬಿಟ್ಟು ಅಂತ ಹೇಳುವುದು ಕೇಳಿ, ಈ ಪುಣ್ಯಾತ್ಮ ಎಷ್ಟು ಸಲ ಬರ್ತಾರೆ ಮತ್ತು ಯಾಕೆ ಹೀಗೆ ಬರ್ತಾರೆ ಅಂತ ತಲೆ ಕೆರೆದುಕೊಂಡಿದ್ದೆ . ಆಮೇಲೆ ಗೊತ್ತಾಯಿತು ಇದು ತಮಿಳ್ ಸ್ಟೈಲ್ ಅಂತ . ಕೇಳ್ಪಟ್ಟೆ ಅನ್ನುವುದು ಮತ್ತೊಂದು ಅಂತದೇ ಪ್ರಯೋಗ . ಇದೇನಿದು ಕೇಳ್ಪಟ್ಟೆ ಅಂತ ಮೊದಮೊದಲು ಯೋಚನೆ ಮಾಡ್ತಾ ಇದ್ದೆ. ಈಗ ಅಭ್ಯಾಸ ಆಗಿದೆ.

ಮಂಗಳೂರಿನ ಮಾರೆ(ಮಹಾರಾಯವನ್ನು ಕುಗ್ಗಿಸಿದರೆ ಮಾರಾಯ, ಮಾರಾಯವನ್ನು ಸ್ವಲ್ಪ ಒತ್ತಿದರೆ ಮಾರೆ) ಮಾರೆ ಕೇಳಿ ಅಭ್ಯಾಸ ಆದವರಿಗೆ ಬೆಂಗಳೂರಿನ ಮಚ್ಚಾ ಎಂಬುದು ವಿಚಿತ್ರ ಅನ್ನಿಸಬಹುದು , ಈ ತಮಿಳು ಭಾಷೆಯ ಪದಕ್ಕೆ ಭಾವ ಅಂತ ಮೂಲಾರ್ಥ, ಹಿಂದಿಯ ಸಾಲಾ ಇದ್ದ ಹಾಗೆ. ಇನ್ನೊಂದು ವಿಚಿತ್ರ ಪ್ರಯೋಗ "ಕಿಂಡಲ್" ಮಾಡೋದು . ಇದ್ಯಾಕಪ್ಪ ಬೆಂಗಳೂರಿನಲ್ಲಿ ಹುಡುಗಿಯರನ್ನ ಹೀಗೆ ಕಿಂಡಲ್ ಮಾಡೋದು ಅಂತ ಅನ್ನಿಸ್ತಾ ಇತ್ತು . ಆಮೇಲೆ ಗೊತ್ತಾಯ್ತು , ತಮಿಳಿನಲ್ಲಿ ಯಾರೋ ಕಿಂಡಲ್ ಅನ್ನುವ ಶಬ್ದವನ್ನ ಚುಡಾಯಿಸುವುದು ಅನ್ನುವ ಅರ್ಥದಲ್ಲಿ ಬಳಕೆ ಮಾಡಿ ಪ್ರಸಿದ್ದಿಗೆ ತಂದಿದ್ದರಂತೆ (ಇಂಗ್ಲೀಷಿನಲ್ಲಿ ಅದಕ್ಕೆ ಆ ಅರ್ಥ ಇಲ್ಲ). ತಮಿಳರ ತಪ್ಪನ್ನ ನಾವೂ ಅನುಕರಣೆ ಮಾಡದೇ ಇದ್ದರೆ ಹೇಗೆ ? ಕಿಂಡಲ್ ಇಲ್ಲಿಗೂ ಬಂತು, ಉಳಿಯಿತು, ತಪ್ಪೇ ಆದರೂ. ಕಂತ್ರಿ ಅನ್ನುವುದು ಇಂಗ್ಲಿಷಿನ countryಯ ಕನ್ನಡ ಅವತಾರ ಆದರೆ ಆಶ್ಚರ್ಯ ಆಗಬಹುದು. Country dog ಕಂತ್ರಿ ನಾಯಿ ಇವನ್ನು ಹೋಲಿಸಿ ನೋಡಬಹುದು. ಮಾರ್ಕೆಟ್ ಅನ್ನುವುದಕ್ಕೆ ಯಾರೋ ಬುದ್ದಿವಂತರು ಅದೇ ರೀತಿ ಉಚ್ಚಾರಣೆ ಇರುವ ಮಾರುಕಟ್ಟೆ ಶಬ್ದ ಸೃಷ್ಟಿ ಮಾಡಿದ್ದಾರೆ. ಬಲ್ಬ್ ಅಂದರೆ ಮೂಲದಲ್ಲಿ ಗಡ್ಡೆ ಅನ್ನುವ ಅರ್ಥ. ನಾವು ಕುಡಿಯುವ ಕಾಫಿ ಮೂಲತಃ ಅರೇಬಿಯಾದ್ದು, ಈ ಕಾಫಿ ಅನ್ನುವ ಪದಕ್ಕೆ ಪೋರ್ಚುಗೀಸ್ ಭಾಷೆಯ Cafe ಅನ್ನುವುದೇ ಮೂಲ, ಹಾಗಾದರೆ ಕೆಫೆ ಕಾಫಿ ಡೇ ಅಂದರೆ ಏನು ? Coffee Coffee day ಅಂತಲೇ ಆಗುತ್ತದೆ ಅಲ್ಲವೇ ?! ರಾಜೀನಾಮೆ ಅಂದರೆ ಮೂಲದಲ್ಲಿ ಪಾರಸಿ ಭಾಷೆಯಲ್ಲಿ ರಾಜೀ + ನಾಮಾ , ರಾಜೀ = compromise , ನಾಮಾ ಅಂದರೆ ಬರಹದ ರೂಪದಲ್ಲಿ ಇರುವುದು. ಅಂದರೆ ಬರಹದ ರೂಪದಲ್ಲಿರುವ ಕಾಂಪ್ರೊಮೈಸ್. ಮೊನ್ನೆ ಮಂತ್ರಿ ಜಾರ್ಜ್ ಕೊಟ್ಟ ರಾಜೀನಾಮೆ ಪತ್ರ ಬರಹದ ರೂಪದಲ್ಲಿ ಮಾಡಿದ ರಾಜಿಯೇ ಒಂದು ರೀತಿಯಲ್ಲಿ!

ಕಣ್ಣಿಗೆ ಅಡಕವಾದದ್ದು ಕಣ್ಣಡಕ, ಜನರ ಬಾಯಲ್ಲಿ ಕನ್ನಡಕ ಆಗಿದೆ. ಮಸೂರ ಪಾಕ ಅಂದರೆ ಕಡಲೆ ಹಿಟ್ಟಿನ ಪಾಕ, ಈ ಮಸೂರ ಪಾಕ ಜನರ ಬಾಯಿಗೆ ಸಿಕ್ಕಿ ಮೈಸೂರು ಪಾಕ್ ಆಗಿದೆ ಅಂತ ವೈ ಎನ್ಕೆ ಒಂದು ಕಡೆ ಬರೆದಿದ್ದಾರೆ.
ಅಂತೂ ಯಾವುದೇ ಒಂದು ಶಬ್ದಕ್ಕೆ ಎಲ್ಲಾ ಕಾಲಕ್ಕೂ ಒಂದೇ ಅರ್ಥ ಇರಬೇಕೆಂದೇನೂ ಇಲ್ಲ. ಒಂದು ಶಬ್ದದ ಅರ್ಥ ಬದಲಾಗದ ಹಾಗೆ ಕಾಯುವ ಕಾವಲುಗಾರರು, ಪೊಲೀಸರು ಇಲ್ಲ. ಹಾಗಾಗಿ ಹೀಗೆಲ್ಲ ಆಗದೆ ವಿಧಿಯಿಲ್ಲ!