Thursday, 11 August 2016

ನಿಂದಕರಿರಬೇಕೇ

ಇದು ಲೇಖನ ಅಂತ ಬರೆದದ್ದಲ್ಲ, ಎರಡು ಮೂರು ಕಡೆ ಬೇರೆ ಬೇರೆ ಸಂಧರ್ಭಗಳಲ್ಲಿ ಹಾಕಿದ ಕಾಂಮೆಂಟುಗಳನ್ನು ಸೇರಿಸಿ, ಜೋಡಿಸಿದ ವಿಚಾರಗಳನ್ನು ಇಲ್ಲಿ ಗುಡ್ಡೆ ಹಾಕಿದ್ದೇನೆ.
"ಕನ್ನಡ ಸಿನೆಮಾಗಳ ಗುಣಮಟ್ಟ ಸರಿಯಾಗಿಲ್ಲ. ಕೆಟ್ಟ ಕೆಟ್ಟ ಕತೆಗಳನ್ನು ಚಿತ್ರೀಕರಿಸುತ್ತಿದ್ದಾರೆ. ಯಾವೊಂದು ಸಿನೆಮಾನೂ ನೋಡಕ್ಕಾಗಲ್ಲ. ಅವುಗಳ ಹೆಸರು ಕೇಳಿದರೇ ಸಿಟ್ಟು ಬರುತ್ತೆ ಅಂತ ನಮ್ಮೂರಿನ ಮಂದಿ ಮಾತ್ರವಲ್ಲ, ಮೈಸೂರಿನ ಮಧ್ಯವಯಸ್ಕರು ಕೂಡ ಮಾತಾಡಲು ಶುರು ಮಾಡಿದ್ದಾರೆ. ಅಂಥವರೊಬ್ಬರನ್ನು ನಿಲ್ಲಿಸಿ, ನೀವು ಇತ್ತೀಚೆಗೆ ನೋಡಿದ ಸಿನೆಮಾ ಯಾವುದು ಎಂದು ಕೇಳಿದರೆ, ನಾನು ಸಿನೆಮಾ ನೋಡದೇ ಹತ್ತು ವರ್ಷವಾಯಿತು ಅಂದುಬಿಟ್ಟರು. ಮತ್ತೆ ಸಿನೆಮಾ ಕೆಟ್ಟದಾಗಿದೆ ಅಂತ ಹೇಗೆ ಹೇಳುತ್ತೀರಿ ಎಂದು ಮರುಪ್ರಶ್ನಿಸಿದರೆ, ಟೀವೀಲಿ ನೋಡ್ತೀವಲ್ಲ ಅಂತ ಸಮಜಾಯಿಷಿ ಕೊಟ್ಟರು." -----> ಜೋಗಿ
ಹೊಸತಾಗಿ ಏನು ವ್ಯಾಪಾರ ಶುರು ಮಾಡಬಹುದು ಕರ್ನಾಟಕದಲ್ಲಿ ? ಕನ್ನಡ ಚಿತ್ರಗಳನ್ನು ಬೈಯ್ಯುವುದು ಹೇಗೆ ಅಂತ ಒಂದು ಕೋಚಿಂಗ್ ಕ್ಲಾಸು ಶುರು ಮಾಡಿದರೆ ನಿಮಗೆ ಸೊಳ್ಳೆ ಹೊಡೆಯುವುದಕ್ಕೂ ಸಮಯ ಇಲ್ಲ ಅನ್ನಬಹುದಾದಷ್ಟು ಜನ ಬರಬಹುದು! ಇರಲಿ. ಬಯ್ಯುವವರಲ್ಲಿ ಯಾವ್ಯಾವ ತರ ಇರುತ್ತಾರೆ? ತೆಗಳುವವರು ಯಾವ ವಿಚಾರಗಳನ್ನು ಮನಸ್ಸಲ್ಲಿ ಇಟ್ಟುಕೊಂಡರೆ ಒಳ್ಳೆಯದು ?
ಕನ್ನಡ ಚಿತ್ರರಂಗ ಜಗತ್ತಿನ ಎಂಟು ಅದ್ಭುತಗಳಲ್ಲಿ ಒಂದು ಅಂತೇನಲ್ಲ, ಆದರೆ ಬಹಳಷ್ಟು ಜನ ಏನೂ ಗೊತ್ತಿಲ್ಲದೇ ಆಡಿಕೊಳ್ಳುತ್ತಾರೆ ಅನ್ನುವುದು ನಿಜ. ಚಿತ್ರರಂಗದ ಬಗ್ಗೆ ಜನರಿಗೆ ಸಾಕಷ್ಟು ಮೂಢನಂಬಿಕೆಗಳು ಇವೆ.
"ಬರೀ ಡಬಲ್ ಮೀನಿಂಗ್ ಚಿತ್ರಗಳೇ ಬರ್ತವೆ" ಅಂದರು ಒಬ್ಬರು, ಸರಿ, ಕಳೆದ ಎರಡು ವರ್ಷಗಳಲ್ಲಿ ಸುಮಾರು ಇನ್ನೂರೈವತ್ತು ಚಿತ್ರಗಳು ಬಂದಿರಬೇಕು, ಅದರಲ್ಲಿ ಹತ್ತು ಡಬಲ್ ಮೀನಿಂಗ್ ಚಿತ್ರಗಳ ಹೆಸರು ಹೇಳಿ ಅಂದೆ. ಅವರೂ ಕಡೆಯ ಕನ್ನಡ ಚಿತ್ರ ನೋಡಿದ್ದು ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿ ಮಾಡಿದ ಕಾಲದಲ್ಲಿ ಅಂತ ಗೊತ್ತಾಯಿತು. "ಕನ್ನಡದಲ್ಲಿ ಬರೀ ಮಚ್ಚು ಲಾಂಗ್ ಚಿತ್ರಗಳೇ ಬರ್ತವೆ" ಅಂತ ಮತ್ತೊಬ್ಬರು ಗುಡುಗಿದರು. "ಹತ್ತು" ಕೇಳಿ ಪೇಚಿಗೆ ಸಿಲುಕಿಸುವುದು ಬೇಡ ಅಂತ ಸ್ವಲ್ಪ ರಿಯಾಯಿತಿ ತೋರಿಸಿ, ನೀವು ಇತ್ತೀಚೆಗೆ ನೋಡಿರೋ ಮಚ್ಚು ಲಾಂಗು ಚಿತ್ರ ಯಾವುದು ಅಂತ ಕೇಳಿದೆ, ಜೋಗಿ ಬಂದಿತ್ತಲ್ಲ ಅಂದರು ! ಅವರು ಜೋಗಿಯನ್ನೂ ನೋಡಿರಲಿಲ್ಲ , ಆ ಮಾತು ಬೇರೆ.
ಕನ್ನಡದಲ್ಲಿ ಬರೀ violent ಚಿತ್ರಗಳು ಬರ್ತವೆ ಅನ್ನುವವರು Tarantino ಏನದ್ಭುತ ಅಂತಲೋ Game of thrones ಏನು ಸಕತ್ತಾಗಿದೆ ಅಂತ ಹೇಳುವವರೇ ಆಗಿರುತ್ತಾರೆ. ಕನ್ನಡದಲ್ಲಿ ಪೂಜಾ ಗಾಂಧೀ ಬೆನ್ನು ತೋರಿಸಿದ್ದು ಮಹಾಪರಾಧ ಅನ್ನುವವರು Wolf of wall street ಅನ್ನು ಒಂದು ಕಲಾ ಕೃತಿ ಅಂತ ಆರಾಧಿಸಿರುತ್ತಾರೆ. ಈ ಆಷಾಡಭೂತಿತನ (hypocrisy) ಕನ್ನಡಿಗರಿಗೇ ವಿಶಿಷ್ಟವಾದದ್ದು. ಬೇರೆ ಯಾರು ಮಾಡಿದರೂ ಕ್ರೀಂ ಬಿಸ್ಕತ್ತು, ಕನ್ನಡಿಗರು ಮಾಡಿದರೆ ಮಾತ್ರ ಮಾರಿ ಬಿಸ್ಕತ್ತು ಅನ್ನುವ, "ಮನೆಗೆ ಮಾರಿ(!) ಊರಿಗೆ ಉಪಕಾರಿ" ಆಗುವ ಗುಣ ಕನ್ನಡಿಗರಿಗೆ ಮೊದಲಿಂದಲೂ ಇದೆ.
ಹಾಗಂತ ನಮ್ಮದು ಶ್ರೇಷ್ಟ ಚಿತ್ರರಂಗ ಅಂತಲೂ ಹೇಳುವುದಿಲ್ಲ, ಸಮಸ್ಯೆಗಳು ಸಾಕಷ್ಟು ಇವೆ. ಕಳಪೆ ಚಿತ್ರಗಳು, ಒಳ್ಳೆ ಪ್ರಯತ್ನಗಳು, ಅತ್ತ್ಯುತ್ತಮ ಚಿತ್ರಗಳು ಎಲ್ಲವೂ ಇಲ್ಲಿ ಇವೆ. ಕನ್ನಡ ಚಿತ್ರಗಳನ್ನು ನಾನೂ ಆಗೀಗ ಬಯ್ಯುವವನೇ. ಆದರೆ ನೋಡದೇ ಆಡುವವರು ರೂಡಿಯೊಳಗುತ್ತಮರು ಅಂತ ಆಗಿರುವುದು ನೂರಕ್ಕೆ ನೂರು ಸತ್ಯ!
ಕನ್ನಡ ಸಿನೆಮಾವನ್ನ ಬಯ್ಯಬಾರದು ಅಂತ ನಾನು ಹೇಳಲಾರೆ, ಆದರೆ ಇಷ್ಟು ಬೈಬೇಡಿ, ಹೀಗೆ ಉಗೀಬೇಡಿ ಅನ್ನುವ ಕೆಲವರ ಕಳಕಳಿ ಯಾವುದರ ಬಗ್ಗೆ ಅಂತ ಹೇಳ್ತೇನೆ. ಟಾಪ್ ೫ ಹೀರೋಗಳನ್ನ ನಾವು ನೀವು ಏನೂ ಮಾಡಲಾರೆವು, ಅತ್ಯಂತ ಕಳಪೆಯಾಗಿದೆ ಅಂತ ಉಗಿಸಿಕೊಂಡ ಅಂಬರೀಷ ಎಷ್ಟು ದುಡ್ಡು ಮಾಡಿತು ಅಂತ ನಿಮಗೆ ಗೊತ್ತೇ ಇದೆ.
ನಮ್ಮ ಕಳಕಳಿ ಇರುವುದು Word of mouth ಮತ್ತು ಪತ್ರಿಕಾ ವಿಮರ್ಶೆಗಳಿಂದ ಮೇಲೆ ಬೀಳಬಹುದಾದ/ಸಾಯಬಹುದಾದ ಸಿನೆಮಾಗಳ ಬಗ್ಗೆ ಮಾತ್ರ. ಈಗ ರಂಗಿತರಂಗವನ್ನ ತಗೊಳ್ಳಿ. ಇದಕ್ಕೆ ಮೊದಲ ಹತ್ತು ಹದಿನೈದು ಸಾವಿರ ಜನ ರಕ್ಷಿತ್ ಶೆಟ್ಟಿ ಮಾತು ಕೇಳಿಯೇ ಬಂದವರು. ರಕ್ಷಿತ್, "ಸಿನಿಮಾ ಚೆನ್ನಾಗಿಲ್ಲ ಗುರೂ " ಅನ್ನುವ ಧಾಟಿಯಲ್ಲಿ ಬರೆದಿದ್ದರೆ ಅದರ ಕತೆ ಮುಗಿದೇ ಹೋಗುತ್ತಿತ್ತು. ಸುತ್ತಿಗೆಗೆ ಎಲ್ಲ ಕಡೆ ಮೊಳೆಯೇ ಕಾಣುತ್ತದೆ ಅನ್ನುವ ತರ ಸುತ್ತಿಗೆಗಳಾಗದೆ ಇಂತಹ ಚಿತ್ರಗಳಿಗೆ ಸ್ವಲ್ಪ ಕರುಣೆ ತೋರಿಸಿ ಅಂತ.
ಇಲ್ಲಿ ವೈಯಕ್ತಿಕ ಅಭಿರುಚಿ (ಪರ್ಸನಲ್ ಟೇಸ್ಟ್)ಯ ವಿಚಾರವೂ ಬರ್ತದೆ, ನಂಗೆ Django Unchained ಇಷ್ಟ ಆಗ್ಲಿಲ್ಲ, ಇಂಗ್ಮಾರ್ ಬರ್ಗಮನ್ ನ Autumn Sonata ನಿದ್ದೆ ಬರಿಸಿತು, ಹಾಗಂತ ಇವು ದರಿದ್ರ ಸಿನೆಮಾಗಳು ಅಂತ ಹೇಳಲಾರೆ. ಸಿನೆಮಾ ಡಬ್ಬಾ ಅನ್ನುವುದಕ್ಕೂ ನನ್ನ ಟೇಸ್ಟ್ ಗೆ ತಕ್ಕ ಹಾಗೆ ಇಲ್ಲ ಅನ್ನೋದಕ್ಕೂ ವ್ಯತ್ಯಾಸ ಇದೆ, ತುಂಬಾ ಜನ ಇದನ್ನು ಮರೆತೇ ಬಿಡುತ್ತಾರೆ.
ಎರಡನೇ ವಿಚಾರ ಒಂದು ಸಿನೆಮಾಕ್ಕೆ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳೋದಕ್ಕೆ ಎಷ್ಟು ಕಡಿಮೆ ಸಮಯ ಇರ್ತದೆ ಅನ್ನೋದು. ಈಶ್ವರೀಲಿ ಮಾಸ್ಟರ್ ಪೀಸ್ ಎರಡನೇ ವಾರದ ಶೇರ್ ಏಳು ಲಕ್ಷ ಇತ್ತು(ಶೇರ್ Gross ಅಲ್ಲ ), ಆದರೂ ಅದನ್ನ ಕಿತ್ತು ಬಿಸಾಡಿದರು. ಯಾವ ಕಾರಣಕ್ಕೆ ಅಂತ ನಾನು ಬಾಯಿ ಬಿಟ್ಟು ಹೇಳುವುದಿಲ್ಲ. ಯಶ್ ನಂತ ಓಡುವ ಕುದುರೆಗೆ ಓಡಿದಾಗಲೂ ಹೀಗೆ ಅಂದ್ರೆ ಹೊಸಬರ ಗತಿ ಹೇಗೆ ಅಂತ ಊಹಿಸಿಕೊಳ್ಳಿ. ಈಗ ಫೇಸ್ಬುಕ್ ಒಂದು ವಾರದಲ್ಲಿ ಕನಿಷ್ಟ ಒಂದು ಸಾವಿರ ಲೈಕ್ ಬರದೇ ಹೋದರೆ ನಮ್ ಪೋಸ್ಟ್ ಗಳನ್ನ ಡಿಲೀಟ್ ಮಾಡಿದರೆ ನಮ್ಗೆ ಹೇಗಾಗಬಹುದು ? ಬಾಹುಬಲಿಗೆ ಶೋ ಕೊಡುವುದಕ್ಕೆ ಚೆನ್ನಾಗೇ ಓಡುತ್ತಿದ್ದ ರಂಗಿಗೆ ಹೀಗೇ ಆಗಿತ್ತು, ಶೋ ಉಳಿಸಿಕೊಳ್ಳುದಕ್ಕೆ ಎಷ್ಟೆಲ್ಲಾ ಬಡಿದಾಡಬೇಕಾಯಿತು ಅಂತ ಹೇಳಿದರೆ ಅದೇ ಒಂದು ದೊಡ್ಡ ಕತೆ ಆಗ್ತದೆ. ಮುಂಗಾರು ಮಳೆಗೆ ಮೊದಲ ವಾರ ೩೦% ಕೂಡ occupancy ಇರಲಿಲ್ಲ. ಜನ ಬಂದದ್ದು ಐದು ವಾರ ಆದ ಮೇಲೆಯೇ, ಎರಡನೇ ವಾರಕ್ಕೆ ಒಡ್ಲಿಲ್ಲ ಅಂತ ಎತ್ತಂಗಡಿ ಮಾಡಿದ್ರೆ ಅದು ಅಲ್ಲೇ ಕೊನೆಯುಸಿರು ಎಳೀತಾ ಇತ್ತು . ಹೀಗಿರುವಾಗ ಮೊದಲ ದಿನವೇ ನಾವು ಕಲ್ಲು ಎತ್ತಾಕಿದರೆ ಅಷ್ಟೇ. ಎರಡನೇ ವಾರಕ್ಕೆ ಸಿನಿಮಾ ಕಿತ್ತು ಬಿಸಾಕುತ್ತಾರೆ, ಚಿತ್ರಕ್ಕೆ ನಿಜವಾದ Word of mouth ಏನಿತ್ತು ಅಂತ ಗೊತ್ತಾಗುವ ಮೊದಲೇ ಅದು ಸತ್ತಿರುತ್ತದೆ.
ಇನ್ನು ಸುತ್ತಿಗೆ ಮೊಳೆಗಳ ವಿಚಾರ. Mihir Fadnavis ಅಂತ ಒಬ್ಬ ಹಿಂದಿ ಚಿತ್ರಗಳಿಗೆ ವಿಮರ್ಶೆ ಬರೀತಾನೆ, ಆ ಪಾರ್ಟಿ ಹೆಂಗೆ ಅಂದ್ರೆ ನೂರು ಚಿತ್ರ ನೋಡಿದ್ರೆ ಅದ್ರಲ್ಲಿ ತೊಂಬತ್ತೆಂಟು ಅವ್ನಿಗೆ ಇಷ್ಟ ಆಗಿರೋದಿಲ್ಲ, ವಿಮರ್ಶೆ ಹೆಸರಲ್ಲಿ ಬಂದದ್ದನ್ನೆಲ್ಲಾ ಕೊಚ್ಚಿ ಬಿಸಾಕ್ತಾ ಇರೋದೇ ಅವನ ಕೆಲಸ, "ಹೆಂಗೆ ಚಚ್ಚಿದೆ ನೋಡಿ" ಅನ್ನುವ ರಣೋತ್ಸಾಹ ಬಿಟ್ರೆ ನಂಗೆ ಏನೂ ಕಾಣೋದಿಲ್ಲ ಅವನಲ್ಲಿ. ಬರೋ ನೂರಿಪ್ಪತ್ತರಲ್ಲಿ ನೂರ ಹದಿನೆಂಟು ಇಷ್ಟ ಆಗೋಲ್ಲ ಅನ್ನುವವರು, ಹಿಂದಿ ನೋಡುವುದು ಬಿಟ್ಟು ಅವರಿಗೆ ಇಷ್ಟ ಆಗುವ ಫ್ರೆಂಚ್, ಇರಾನಿಯನ್ ಇತ್ಯಾದಿ ನೋಡುವುದು ಒಳ್ಳೇದು.
ಇನ್ನು ಪೂರ್ವಾಪರ ಸಂದರ್ಭ(Context )ದ ವಿಚಾರ, ಕೆಲವರಿಗೆ ಒಂದು ಸಿನೆಮಾ ಒಂದು Contextನಲ್ಲಿ ತಯಾರಾಗಿರುತ್ತದೆ ಅಂತಲೇ ಗೊತ್ತಾಗುವುದಿಲ್ಲ. "ಮಾಸ್ಟರ್ ಪೀಸ್ ನೋಡಿ ಎಷ್ಟು ದರಿದ್ರವಾಗಿದೆ, ಕಾಸರವಳ್ಳಿನೇ ನಮ್ ದೇವ್ರು" ಅನ್ನೋ ಜಾತಿ ಇವರು . ರೋಹಿತ್ ಶೆಟ್ಟಿಯ ಚಿತ್ರಕ್ಕೂ ಅನುರಾಗ್ ಕಶ್ಯಪ್ ಚಿತ್ರಕ್ಕೂ ಹೋಲಿಕೆ ಮಾಡಬಾರದು. ರೋಹಿತ್ ಶೆಟ್ಟಿ ಒಂದು ಚಿತ್ರವನ್ನ ಯಾಕೆ, ಯಾರಿಗಾಗಿ ಮತ್ತು ಹೇಗೆ ಮಾಡಿರುತ್ತಾನೆ ಹಾಗೂ ಅನುರಾಗ್ ಕಶ್ಯಪ್ ಒಂದು ಚಿತ್ರವನ್ನ ಯಾವ ತರದವರಿಗೆ ಮಾಡಿರುತ್ತಾನೆ ಅನ್ನುವುದಕ್ಕೂ ವ್ಯತ್ಯಾಸ ಇರುತ್ತದೆ. ರೋಹಿತ್ ಶೆಟ್ಟಿ ತಾನು ಏನು ಮಾಡಬೇಕು ಅಂತ ಹೊರಟಿದ್ದಾನೋ ಅದನ್ನಾದರೂ ಮಾಡಿದ್ದಾನ ಅಂತಷ್ಟೇ ನೋಡಬೇಕು, ರೋಹಿತ್ ಶೆಟ್ಟಿಯ ಚಿತ್ರ Christopher Nolan ಮಟ್ಟಕ್ಕೆ ಇಲ್ಲ ಅಂತ ಹಲುಬಿದರೆ ತಪ್ಪು ಯಾರದ್ದು ?
ಇನ್ನು ನಿರಭಿಮಾನದ ಪ್ರಶ್ನೆ. Nenokkadine ಅಂತ ಒಂದು ತೆಲುಗು ಪಿಚ್ಚರ್ ಬಂದಿತ್ತು ಅದು ಸೂಪರ್ ಫ್ಲಾಪ್, ಆದರೂ ಸುಮಾರು ಅರುವತ್ತು ಕೋಟಿ ಬಿಸಿನೆಸ್ ಮಾಡಿತ್ತು, ನಮ್ಮ ಸೂಪರ್ ಹಿಟ್ ಗಳೂ ಇಷ್ಟು ಮಾಡುವುದಿಲ್ಲ. ತೆಲುಗು ಪ್ರೇಕ್ಷಕ looks for a reason to watch the film. ಕನ್ನಡ ಪ್ರೇಕ್ಷಕ looks for an excuse to skip the film, ಸಿನಿಮಾ ನೋಡುವುದಕ್ಕೆ ಏನಾದರೂ ಕಾರಣ ಸಿಗುತ್ತದೆಯೇ ಅಂತ ಹುಡುಕುವ ಸಿನಿಮಾ ಪ್ರೀತಿ ತೆಲುಗು ಪ್ರೇಕ್ಷಕನದ್ದು, ಸಿನಿಮಾ ನೋಡದೇ ಇರಲಿಕ್ಕೆ ಏನಾದರೂ ನೆಪ ಸಿಗುತ್ತದೆಯೇ ಅನ್ನುವ ರೀತಿ ಕನ್ನಡಿಗನದ್ದು . ಕನ್ನಡ ಸಿನಿಮಾ ಕ್ಕೆ ನಾಲ್ಕು ಒಳ್ಳೆ ವಿಮರ್ಷೆ ಬಂದು, ನೀವು ಒಬ್ಬರು ಬೈದರೆ, ಕನ್ನಡ ಪ್ರೇಕ್ಷಕ ನಾಲ್ಕು ಹೊಗಳಿರೋ ವಿಮರ್ಷೆ ಮರೆತು "ನೋಡ್ರೀ ಇವ್ರು ಹೇಗೆ ಉಗಿದಿದ್ದಾರೆ" ಅಂತ ನಿಮ್ಮ ರಿವ್ಯೂ ಅನ್ನೇ ನೆಚ್ಚಿಕೊಳ್ತಾನೆ, ಇದು ಕನ್ನಡಿಗರ ಗುಣ. ಸಿನಿಮಾ ಅಂತಲ್ಲ ಸಾಹಿತ್ಯದಂತ ಕ್ಷೇತ್ರದಲ್ಲೂ ಹೀಗಾಗುತ್ತದೆ. ತೆಲುಗಿನಲ್ಲೇನೂ world class ಚಿತ್ರಗಳು ಬರುತ್ತಿಲ್ಲ, ಆದರೂ ಅದು ನಮಗಿಂತ ಎಷ್ಟು ದೊಡ್ಡ ಇಂಡಸ್ಟ್ರಿ ನೋಡಿ. ಇದು ಪ್ರೇಕ್ಷಕರ ಗುಣ. ಕನ್ನಡಿಗರಿಗೆ ನೆಗೆಟಿವ್ ಅಂಶ ಹುಡುಕಿ ಕೀಳರಿಮೆ (Inferiority) ಬೆಳೆಸಿಕೊಳ್ಳುವ ಸ್ವಭಾವ ಮೊದಲಿಂದಲೂ ಇದೆ.
ಕಬಾಲಿ ಬಂತು ಅಂತ ಇಲ್ಲಿನವರು ಅಳುವಾಗ "ಹೀಗೆ ತಮ್ಮ ಸಿನೆಮಾ ನೋಡ್ರೋ ನೋಡ್ರೋ ಎಂದು ಬೇಡಿ ಕೊಂಡು ಕೈಮುಗಿದು ಅಳುವ ಸೀನನ್ನು ತಮಿಳುನಾಡಲ್ಲಿ, ಹೈದರಾಬಾದಲ್ಲಿ, ಬೇಡ ಮಲಯಾಳಿಗಳ ನೆಲದಲ್ಲಿ ನೋಡಿಲ್ಲ" ಅಂದರು ಒಬ್ಬರು. ಇದು ನಿಜ, ಹಾಗೆ ಕೈ ಮುಗಿದು ಅಳುವ ಪರಿಸ್ಥಿತಿಯನ್ನು ಅಲ್ಲಿನ ಪ್ರೇಕ್ಷಕ ನಿರ್ಮಿಸಿಲ್ಲ ಅನ್ನುವುದೂ ಅಷ್ಟೇ ನಿಜ. ಶ್ರೀಮಂತ ಮಾಲ್ ಕಟ್ಟಿಸುತ್ತಾನೆ, ಬಡವ ಕಿರಾಣಿ ಅಂಗಡಿ ಇಡುತ್ತಾನೆ, ನಮ್ಮ ಅಂಗಡಿಗೂ ಬನ್ನಿ ಅಂತ ಅಳುವ ಪ್ರಸಕ್ತಿ ಬರುವುದು ಕಿರಾಣಿ ಅಂಗಡಿಯವನಿಗೇ. ಒಟ್ಟಿನಲಿ level playing field ಇಲ್ಲ ಅನ್ನುವುದು ನಮ್ಮ ಕಳಕಳಿ. ತಮಿಳಿಗೋ, ತೆಲುಗಿಗೋ ಅಷ್ಟು ದೊಡ್ಡ ಮಾರುಕಟ್ಟೆ ಇರುವುದು ಗುಣಮಟ್ಟದ ಫಲವಾಗಿಯೋ, ಮಾರ್ಕೆಟಿಂಗ್ genius ನ ಫಲವಾಗಿಯೋ ಅಲ್ಲ. ತಮಿಳಿನಲ್ಲೋ , ತೆಲುಗುನಲ್ಲೋ ಜಗತ್ತೇ ಬೆರಗಾಗಿ ನೋಡುವಂತ್ ಮಾರ್ಕೆಟಿಂಗ್ ಕಲೆ ಏನೂ ಇಲ್ಲ. ತುಂಬ ದುಡ್ಡು ಸುರಿದರೆ ಮಾರ್ಕೆಟಿಂಗ್ ಮಾಡುವುದು ಕಷ್ಟವೇನಲ್ಲ.
ಇದು ಬರೀ ಗುಣಮಟ್ಟದ ಪ್ರಶ್ನೆಯೂ ಅಲ್ಲ, ಎಂಬತ್ತರ ದಶಕದಲ್ಲಿ ಹಿಂದಿಯಲ್ಲಿ ಎಷ್ಟು ಕಳಪೆ ಚಿತ್ರಗಳು ಬಂದಿದ್ದವು, ಮರಾಠಿ ಚಿತ್ರೋದ್ಯಮ ಮುಚ್ಚಿಯೇ ಹೋಯಿತು ಅಂತ ಆಗಿತ್ತು, ಮಲಯಾಳ ಚಿತ್ರಗಳು ಹೊಸದೇನು ಬರದೇ ಗತವೈಭವ ವೇ ಗತಿ ಅಂದ ಕಾಲ ಇತ್ತು . ಎಲ್ಲ ಕಡೆಯೂ ಇಲ್ಲಿರುವುದಕ್ಕಿಂತ ಹೆಚ್ಚು ಒಳ್ಳೆಯದು ಇನ್ನೊಂದು ಕಡೆ ಇದೆ ಅಂತ ತೋರಿಸಲು ಸಾಧ್ಯ ಇದೆ. ತೆಲುಗಿಗಿಂತ ಒಳ್ಳೆ ಚಿತ್ರಗಳು ಬೇರೆ ಕಡೆ ಬಂದರೂ ತೆಲುಗು ಪ್ರೇಕ್ಷಕ ಮನೆಯಾಕೆಯನ್ನು ಬಿಟ್ಟು ಪಕ್ಕದ ಮನೆಯಾಕೆಯ ಹಿಂದೆ ಹೋಗುವುದಿಲ್ಲ, ತಮಿಳಿಗಿಂತ ಒಳ್ಳೆ ಚಿತ್ರ ಹಾಲಿವುಡ್ಡಿನಲ್ಲಿ ಬಂದರೂ ತಮಿಳು ಪ್ರೇಕ್ಷಕ ತಮಿಳು ಚಿತ್ರಗಳನ್ನು ಯಾವತ್ತೂ ಅನಾಥವಾಗಿಸಿಲ್ಲ. ಉತ್ತರ ಪ್ರದೇಶದಲ್ಲಿ ಹಿಂದಿ ಚಿತ್ರಕ್ಕೆ ಸ್ಕ್ರೀನ್ ಸಿಗದೇ ಕನ್ನಡ ಚಿತ್ರಕ್ಕೆ ಐನೂರು ಶೋ ಸಿಕ್ಕಿದ್ದು ಇತಿಹಾಸದಲ್ಲೇ ಇಲ್ಲ, ಚೆನ್ನೈಯಲ್ಲಿ ಮಲಯಾಳಿ ಚಿತ್ರಕ್ಕೆ ನಾನೂರು ಶೋ ಕೊಟ್ಟು ತಮಿಳು ಚಿತ್ರಕ್ಕೆ ಚಿತ್ರ ಮಂದಿರ ಇಲ್ಲ ಅನ್ನುವ ಸನ್ನಿವೇಶ ಮೊದಲೂ ಬಂದಿಲ್ಲ, ಇನ್ನು ಮುಂದೆಯೂ ಬರುವುದಿಲ್ಲ, ಅಷ್ಟು ಉದಾರಿ ಕನ್ನಡಿಗ ಮಾತ್ರ! ಔದಾರ್ಯ ಒಳ್ಳೆಯದೇ, ಳ್ಳೆಯ ಪರಭಾಷಾ ಚಿತ್ರಗಳನ್ನು ಖಂಡಿತ ನೋಡೋಣ, ಅವುಗಳಿಗೆ ಇಲ್ಲಿ ಥಿಯೇಟರೂ ಕೊಡೋಣ. ನಾವು ಎಲ್ಲವನ್ನೂ ಗೌರವಿಸೋಣ, ಸ್ವೀಕರಿಸೋಣ, ಆದರೆ ಇಲ್ಲಿಯದ್ದು ಮಾತ್ರ ಕಳಪೆ, ಇಲ್ಲಿನದ್ದನ್ನು ಕೊಂದಾದರೂ ಬೇರೆಯದ್ದನ್ನು ಮೆರೆಸಬೇಕು ಅನ್ನುವ ಭಾವ ಬೇಡ.
"ಆಹಾ ಎಷ್ಟು ಚೆನ್ನಾಗಿದೆ ಎಂದು ಹೇಳಬಹುದಾದ ಹಾಸ್ಯ ಮತ್ತು ಹಾಡನ್ನು ಇಲ್ಲಿ ನಾನು ಕೇಳಿ ಯಾವುದೋ ಕಾಲ ಆಯಿತು" ಅಂದರು ಒಬ್ಬರು . ಇದರಲ್ಲಿ ಸತ್ಯ ಇಲ್ಲದಿಲ್ಲ ಅನ್ನಲಾರೆ . ಆದರೆ ನ ಧೀಮ್ ಧೀಮ್ ತನ , ಹೆಸರು ಪೂರ್ತಿ ಹೇಳದೆ, ಪರವಶನಾದೆನು , ಬಿದ್ದಲ್ಲೆ ಬೇರೂರಿ, ಕೆಂಡಸಂಪಿಗೆ , ಉಳಿದವರು ಕಂಡಂತೆ, ಜಟ್ಟ , ಗೋಧಿ ಬಣ್ಣ ಈ ಚಿತ್ರಗಳ ಹಾಡುಗಳನ್ನು ನೀವು ಕೇಳಿಲ್ಲವೇ ಅಂತ ಮರುಪ್ರಶ್ನೆ ಹಾಕಬಹುದು. ಹಿಂದಿ, ತೆಲುಗು , ತಮಿಳು ಪ್ರೇಕ್ಷಕನೂ ಆಹಾ ಎಷ್ಟು ಚೆನ್ನಾಗಿದೆ ಎಂದು ಹೇಳಬಹುದಾದ ಹಾಸ್ಯ ಮತ್ತು ಹಾಡನ್ನು ಕೇಳಿ ವರ್ಷಗಳೇ ಆಗಿವೆ, ಆದರೆ ಆತ ತನ್ನ ಭಾಷೆಯ ಚಿತ್ರ ನೋಡುವುದು ಬಿಟ್ಟಿಲ್ಲ.

“ಎಲ್ಲಾ ಇಂಡಸ್ಟ್ರಿ ಅಲ್ಲೂ ಕೆಟ್ಟ ಫಿಲಂಸ್ ಬರ್ತಾವೆ, ನಮ್ಮದೇನೂ ಸ್ಪೆಷಲ್ ಅಲ್ಲ” ಅಂತ Denial  ಮೋಡ್ ನಲ್ಲಿ ಇದನ್ನೆಲ್ಲ ಹೇಳಿದ್ದಲ್ಲ. ಕಾಲ ಕಾಲಕ್ಕೆ ಒಳ್ಳೆಯದು ಕೆಟ್ಟದು ಎಲ್ಲ ಕಡೆ ಬಂದಿದೆ. ಆದರೆ ಕನ್ನಡಿಗರು ಮತ್ತು ಉಳಿದವರು ಕೆಟ್ಟದ್ದಕ್ಕೆ ರಿಯಾಕ್ಟ್ ಮಾಡಿರುವ ರೀತಿಯಲ್ಲಿ ದೊಡ್ಡ ವ್ಯತ್ಯಾಸವೇ ಇದೆ. ಈಗ ಬಾಲಿವುಡ್ಡನ್ನೇ ತಗೊಂಡರೆ, ಅಲ್ಲಿ ಎಂಬತ್ತರ ದಶಕ ತೀರಾ mediocre ಚಿತ್ರಗಳು ಬಂದ ದಶಕ, ತೊಂಬತ್ತರ ದಶಕದಲ್ಲೂ ಹೇಳಿಕೊಳ್ಳುವಂತದ್ದು ಹೆಚ್ಚು ಏನೂ ಬರಲಿಲ್ಲ. ತುಂಬಾ ಕಡೆ ಯಾವುದೇ ನಾಚಿಕೆ ಇಲ್ಲದೆ ಹಾಲಿವುಡ್ ಕ್ಯಾಸೆಟ್ಗಳನ್ನು ಶೂಟಿಂಗ್ ಜಾಗಕ್ಕೆ ತಂದು ನೋಡಿಕೊಂಡೇ ಶೂಟಿಂಗ್ ಮಾಡಿದ, ಆ ಮಟ್ಟದ ಕಾಪಿವೀರರು ಇದ್ದರಂತೆ. ಸ್ಕ್ರಿಪ್ಟ್ ಮಾಡುವ ಸಂಪ್ರದಾಯವೇ ನಿಂತು ಹೋಗಿತ್ತಂತೆ, ಶಾರುಖ್ ಖಾನ್ bound ಸ್ಕ್ರಿಪ್ಟ್ ಇಲ್ಲದೆ ಚಿತ್ರ ಒಪ್ಪಿಕೊಳ್ಳುವುದಿಲ್ಲ ಅಂದಾಗ, "ಈ ಮನುಷ್ಯನಿಗೆ ದುರಹಂಕಾರ" ಅಂದಿದ್ದರಂತೆ! ಕುಚ್ ಕುಚ್ ಹೋತಾ ಹೈ ಬಂದಾಗ ಇದು ಹೊಸತನದ ಹರಿಕಾರ ಅನ್ನುವ ಪರಿಸ್ಥಿತಿ ಇತ್ತು! ಇಪ್ಪತ್ತು ವರ್ಷಗಳಲ್ಲಿ ಒಂದು ಎರಡು ಸಾವಿರ ಚಿತ್ರಗಳು ಬಂದವು ಅಂತ ಇಟ್ಟುಕೊಂಡರೆ, ಅದರಲ್ಲಿ ನೆನಪಿರುವ, ಇವತ್ತಿಗೂ ಚೆನ್ನಾಗಿದೆ ಅನ್ನಬಹುದಾದ, ಕದ್ದಿಲ್ಲದ ಚಿತ್ರಗಳು ಸುಮಾರು ಹತ್ತು ಹದಿನೈದು ಇರಬಹುದೇನೋ. ಇಪ್ಪತ್ತು ವರ್ಷ ಹೀಗಿದ್ದರೂ "ಇನ್ನು ನನ್ನ ಕೊನೆ ಉಸಿರು ಇರುವವವರೆಗೂ ಹಿಂದಿ ಚಿತ್ರಗಳನ್ನು ಕಣ್ಣೆತ್ತಿಯೂ ನೋಡಲಾರೆ" ಅಂತ ಪ್ರತಿಜ್ಞೆ ಮಾಡಿದವರು ಅಲ್ಲಿ ಅಥವಾ ಇಲ್ಲಿ ಎಷ್ಟಿದ್ದಾರೆ ? ಹಿಂದಿ ಚಿತ್ರ ನೋಡಿದರೆ ಮರ್ಯಾದೆಗೆ ಕಮ್ಮಿ ಅಂದವರು ಯಾರಿದ್ದಾರೆ ? 
ಮರಾಠಿ ಚಿತ್ರರಂಗ ಇನ್ನೇನು ಮುಚ್ಚಿಯೇ ಹೋಯಿತು ಅಂತಾಗಿತ್ತಲ್ಲ, ಕಳೆದ ಏಳೆಂಟು ವರ್ಷಗಳಲ್ಲಿ ಹೇಗೆ ಚಿಗಿತು ನಿಂತಿದೆ ನೋಡಿ. ಮರಾಠಿಗಳು ಯಾವತ್ತಾದರೂ ನಾನು ಮರಾಠಿ ಚಿತ್ರ ನೋಡಿ ಹನ್ನೊಂದು ವರ್ಷ ಆಯಿತು ಅಂತ ಹೇಳುವುದು ನೋಡಿದ್ದೀರಾ ? ಮಲಯಾಳದಲ್ಲಿ ನಾಲ್ಕೈದು ವರ್ಷ ಬರ ಬಂದಾಗ ಮಲ್ಲುಗಳು ಆಫೀಸಿನಲ್ಲಿ ನಮ್ಮ ಮಲಯಾಳದಷ್ಟು ಕೆಟ್ಟದ್ದು ಎಲ್ಲೂ ಇಲ್ಲ ಅನ್ನುವುದು ನೋಡಿದ್ದೀರಾ ? ತಮಿಳರು ವಿಜಯಕಾಂತ್ ಚಿತ್ರಗಳನ್ನು ಇಟ್ಟುಕೊಂಡು ನಮ್ಮ ತಮಿಳಿನ ಹಣೆಬರಹವೇ ಇಷ್ಟು, ಇನ್ನು ಹದಿನೈದು ವರ್ಷ ತಮಿಳಿನ ಕಡೆ ತಲೆ ಹಾಕಲಾರೆ ಅಂದ ಉದಾಹರಣೆಗಳು ಇವೆಯೇ? ಬಾಲಯ್ಯ ಚಿತ್ರಗಳನ್ನು ಇಟ್ಟುಕೊಂಡು, ನಾವು ಹೈ ಫೈ, ತೆಲುಗು ಚಿತ್ರ ನೋಡುವುದು ನಮ್ಮ ಲೆವೆಲ್ಲಿಗೆ ಕಮ್ಮಿ ಅನ್ನುವ ತೆಲುಗರು ಸಿಕ್ಕಲಾರರು. ಅಷ್ಟು overreact ಮಾಡುವುದು, ಇಲ್ಲಿಯವರು ಮಾತ್ರ. 

ಒಂದು ಚಿತ್ರ ಕನ್ನಡದ್ದು ಅಂದಮಾತ್ರಕ್ಕೆ ನೋಡಬೇಕು ಅಂತ ಹೇಳಲಾರೆ, ಇಲ್ಲಿ ಆಕ್ಷೇಪ ಇರುವುದು ಒಳ್ಳೆಯ ಚಿತ್ರಗಳೂ ಸಾಕಷ್ಟು ಬಂದಿದೆ ಅನುವುದನ್ನು ಲೆಕ್ಕಕ್ಕೇ ತಗೊಳ್ಳದೆ ಮಾತಾಡುವುದರ ಬಗ್ಗೆ, ಒಳ್ಳೆಯದು ಬಂದಾಗ ಪ್ರೋತ್ಸಾಹಿಸಿ, ಇಂತದ್ದು ನಮಗೆ ಬೇಕು ಅಂತ ಹೇಳುವ ಕೆಲಸ ಅಷ್ಟಾಗಿ ಆಗಿಲ್ಲ ಅಂತ (ಮೇಲೆ ಹೇಳಿದ್ದೇನಲ್ಲ ಆ ಪಟ್ಟಿಯಲ್ಲಿ ಇರುವ ಚಿತ್ರಗಳ ಬಾಕ್ಸ್ ಆಫೀಸ್ ಸಾಧನೆ ಬಗ್ಗೆ) . ಲೂಸಿಯಾ, ತಿಥಿ, ಕೆಂಡಸಂಪಿಗೆ ಇವೆಲ್ಲ ದುಡ್ಡು ಮಾಡುವುದಿಲ್ಲ ಅಂತಾದರೆ ಅದಕ್ಕೆ ಪ್ರೇಕ್ಷಕನನ್ನು ಹೊಣೆ ಮಾಡದೆ ಇರುವುದು ಹೇಗೆ ? ಅಂಬರೀಷದಂತ ಕಳಪೆ ಮಾಲು ಹತ್ತು ಹದಿನೈದು ಕೋಟಿ ಬಾಚುತ್ತದೆ, ಲೂಸಿಯಾ, ಕೆಂಡಸಂಪಿಗೆ, ತಿಥಿ ಗಳು ಎರಡರಿಂದ ನಾಲ್ಕು ಕೋಟಿ ಮಾಡಿದರೆ ಹೆಚ್ಚು ಅಂತಾದರೆ, ಸ್ಟಾರ್ ಗಳು, ದುಡ್ಡು ಸುರಿಯುವ ನಿರ್ಮಾಪಕರ ಆಯ್ಕೆ ಯಾವುದಾಗಿರುತ್ತದೆ ಅಂತ ಸುಲಭದಲ್ಲಿ ಊಹಿಸಬಹುದಲ್ಲ. ಸಯನೈಡ್, ಎದೆಗಾರಿಕೆ, ಸ್ಲಂ ಬಾಲ , ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ, ಅಟ್ಟಹಾಸ , ಲೂಸಿಯಾ , ಒಲವೇ ಮಂದಾರ , ಎದ್ದೇಳು ಮಂಜುನಾಥ , ಗೊಂಬೆಗಳ ಲವ್ , ಚಿತ್ರಮಂದಿರದಲ್ಲಿ, ಉಳಿದವರು ಕಂಡಂತೆ, ಸಿದ್ಲಿಂಗು, ಟೋನಿ , 6-5=2, ಬಹುಪರಾಕ್ , ಮೈನಾ, ರಂಗಿತರಂಗ, ಕಿಲ್ಲಿಂಗ್ ವೀರಪ್ಪನ್ , ನಾನು ಅವನಲ್ಲ ಅವಳು, ಭಾರತ್ ಸ್ಟೋರ್ಸ್ , ಕೂರ್ಮಾವತಾರ , ಉಗ್ರಂ, ಕೆಂಡಸಂಪಿಗೆ, ಯು ಟರ್ನ್ , ಪ್ಲಾನ್ , ಮೈತ್ರಿ , ಉಪ್ಪಿ 2, ಕಿಲ್ಲಿಂಗ್ ವೀರಪ್ಪನ್ , ರಾಟೆ , ಜಟ್ಟ , ತಿಥಿ , ಕಿರಗೂರಿನ ಗಯ್ಯಾಳಿಗಳು , ಕೃಷ್ಣ ಲೀಲಾ , ಹಗ್ಗದ ಕೊನೆ , ಗಣಪ , ಲಾಸ್ಟ್ ಬಸ್, ಕರ್ವ , ರಿಕ್ಕಿ , ಗೋಧಿ ಬಣ್ಣ. ಇಷ್ಟು ವಿಭಿನ್ನ ಚಿತ್ರಗಳು ಅನ್ನಬಹುದಲ್ಲ. ಇವೆಲ್ಲ ಶ್ರೇಷ್ಟ ಚಿತ್ರಗಳು ಅಂತಲ್ಲ, ಇಷ್ಟು ಬಂದಿದೆ ಕಳೆದ ಐದಾರು ವರ್ಷಗಳಲ್ಲಿ. ಡೈರೆಕ್ಟರ್ಸ್ ಸ್ಪೆಷಲ್, ದ್ಯಾವ್ರೆ, ಮಿಂಚಾಗಿ ನೀನು ಬರಲು , ದ್ಯಾವ್ರೆ, ಭಾಗ್ಯರಾಜ್ , ಅಪೂರ್ವ ತರದ ಸೋತ ಚಿತ್ರಗಳೂ ಇವೆ. ಯೋಗರಾಜ್, ಸೂರಿ, ಶಶಾಂಕ್ , ನಾಗಶೇಖರ್ ಇವರೆಲ್ಲ ಆರಕ್ಕೇರದೆ ಮೂರಕ್ಕಿಳಿಯಿದೆ, ಕೆಟ್ಟದ್ದೂ ಅಲ್ಲ ಭಯಂಕರ ಗ್ರೇಟ್ ಊ ಅಲ್ಲ ಅನ್ನಬಹುದಾದದ್ದು ಮಾಡುತ್ತಲೇ ಬಂದಿದ್ದಾರೆ. ಹೀಗೆ ಸಾಕಷ್ಟು ವಿಭಿನ್ನ, ಸ್ವಲ್ಪ ಮಟ್ಟಿಗಾದರೂ ಚೆನ್ನಾಗಿರುವ ಚಿತ್ರಗಳು ಬಂದಿವೆ, ಹೀಗೆ ಬೈಕೊಂಡು ಓಡಾಡುವವರು ಇವುಗಳಲ್ಲಿ ಅರ್ಧದಷ್ಟೂ ನೋಡಿರುವುದಿಲ್ಲ ಅಂತ ಬೆಟ್ ಕಟ್ಟಬಲ್ಲೆ ! 

ಇಂತದ್ದು ಬಂದಾಗ ನೋಡದೆ, ನಾನು ಕನ್ನಡ ಚಿತ್ರವೊಂದನ್ನು ನೋಡಿ ಹದಿನೈದು ವರ್ಷಗಳೇ ಆಯಿತು, ನಾನು ಸ್ವರ್ಗ ಲೋಕದಿಂದ ಇಳಿದವನು, ನನ್ನ ಲೆವೆಲ್ಲೇ ಬೇರೆ ಅಂದುಕೊಂಡು ಓಡಾಡಿದರೆ ಯಾರಿಗೂ ಯಾವ ಪ್ರಯೋಜನವೂ ಇಲ್ಲ. ಪ್ರೇಕ್ಷಕನಂತೆ ಕಲೆ. ಪ್ರೇಕ್ಷಕ ಒಳ್ಳೆಯದನ್ನು ನೋಡಿ ಚಪ್ಪಾಳೆ ತಟ್ಟಿದರೆ ಒಳ್ಳೆಯದು ಬರುತ್ತದೆ, ನಾವು ಥಿಯೇಟರಿಗೆ ಹೋಗುವುದಿಲ್ಲ ಅಂದರೆ ಅಲ್ಲಿಗೆ ಹೋಗುವವರಿಗೆ ಬೇಕಾದಂತದ್ದು ಬರುತ್ತದೆ. ಎರಡು ಸರ್ತಿ ದೋಸೆ ಮಾಡಿದಾಗ ಒಳ್ಳೆ ವ್ಯಾಪಾರ ಆಗಲಿಲ್ಲ ಅಂತಾದರೆ ಹೋಟೆಲಿನವರು ದೋಸೆ ಮಾಡುವುದು ನಿಲ್ಲಿಸುತ್ತಾರೆ. ಆಮೇಲೆ ದೋಸೆ ಇಲ್ಲ ಅಂತ ಇವರು ಹೋಗುವುದಿಲ್ಲ, ಇವರು ಹೇಗೂ ಬರುವುದಿಲ್ಲ ಅಂತ ಅವರು ದೋಸೆ ಹುಯ್ಯುವುದಿಲ್ಲ ಅಂತ ಆಗಿಬಿಡುತ್ತದೆ !! ಒಂದೋ ಹೋಟೆಲಿಗೆ ಹೋಗಿ ನಮಗೆ ದೋಸೆ ಬೇಕು ಅಂತ ಇವರು ಗೊತ್ತು ಮಾಡಿಸಬೇಕು, ಇಲ್ಲವೇ ಒಳ್ಳೆ ದೋಸೆಗೆ ಜನ ಬಂದೇ ಬರುತ್ತಾರೆ ಅಂತ ಅವರು ಧೈರ್ಯ ಮಾಡಬೇಕು. ಎರಡೂ ಕಳೆದ ಮೂರು ವರ್ಷಗಳಲ್ಲಿ ಸ್ವಲ್ಪವಾದರೂ ಆಗಿರುವುದು ಖುಷಿಯ ವಿಷಯ.
ಕನ್ನಡದ ಚಿತ್ರ ಅಂದ ಮಾತ್ರಕ್ಕೆ ಕಳಪೆ ಸರಕುಗಳನ್ನು ಹೊಗಳಬೇಕು ಅನ್ನುವುದು ಇದರ ತಾತ್ಪರ್ಯ ಅಲ್ಲ. ಏನೋ ಸ್ವಲ್ಪ ಹಾದಿ ತಪ್ಪಿರುವ ಮಗ ಮನೆಯಲ್ಲಿದ್ದರೆ ಪಕ್ಕದ ಮನೆಗಳಲ್ಲಿ ಸರ್ವಶ್ರೇಷ್ಟರೇ ಇದ್ದಾರೆ ಮತ್ತು ಜಗತ್ತಿನ ಅತ್ಯಂತ ದುಷ್ಟ ವ್ಯಕ್ತಿ ನಮ್ಮಲ್ಲಿದ್ದಾನೆ ಅನ್ನುವ ಭಾವ ಬೇಡ. ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ ಮತ್ತು ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್ ಎರಡು ಭಿನ್ನ ಧೋರಣೆ ಇಟ್ಟುಕೊಂಡಿದ್ದವು, ಎಲೆಕ್ಟ್ರಾನಿಕ್ಸ್ನಲ್ಲಿ ಲ್ಯಾಬಿನಲ್ಲಿ output ಬರದಿದ್ದಾರೂ ಏನೋ ಪಾಪ ಬದುಕಿಕೊಳ್ಳಲಿ ಅಂತ ಪಾಸಾಗುವಷ್ಟು ಮಾರ್ಕು ಕೊಟ್ಟು ಪಾರು ಮಾಡುತ್ತಿದ್ದರು, ಎಲೆಕ್ಟ್ರಿಕಲ್ನಲ್ಲಿ ಒಂದು ಸಣ್ಣ ತಪ್ಪಾದರೂ ನಿರ್ದಯವಾಗಿ ಸೊನ್ನೆಯೋ ಐದೋ ಹತ್ತೋ ಕೊಟ್ಟು ಫೇಲ್ ಮಾಡಿ ಕೂರಿಸುತ್ತಿದ್ದರು. ನಾವು ಎಲೆಕ್ಟ್ರಾನಿಕ್ಸ್ ವಿಭಾಗದ ಹಾಗಿದ್ದರೆ ಒಳ್ಳೆಯದು. ಉದಾಹರಣೆಗೆ ಟೋನಿ ಚಿತ್ರ, ಇದರಲ್ಲಿ ಹೀರೋ ಅಭಿನಯ ಸಪ್ಪೆ, ಕತೆಯ ಓಟಕ್ಕೆ ಹಾಡುಗಳು ಅಡ್ಡ ಬಂದಿವೆ, ಕೆಲವು ಕಡೆ ಕತೆ ಕುಂಟಿದೆ ಹೀಗೆ ಹುಡುಕಿದರೆ ತಪ್ಪುಗಳು ಸಿಗಬಹುದು, ಆದರೆ ಇದು ಒಂದು ಅದ್ಭುತ ಪ್ರಯೋಗ, ಇಲ್ಲಿ ಯಾವತ್ತೂ ಬಂದಿರದ ಕಥೆ, ಜಗತ್ತಿನಲ್ಲೇ ಅಪರೂಪ ಅನ್ನಿಸುವ ನಿರೂಪಣಾ ವಿಧಾನ ಇದೆ. ಏನೋ ಪ್ರತಿಭಾವಂತ ಹುಡುಗ, ಸ್ವಲ್ಪ ಗಡಿಬಿಡಿಯಲ್ಲಿ ಎಡವಿದ್ದಾನೆ ಅಂತ ಇಂತದ್ದನ್ನು ಪಾಸು ಮಾಡಿಬಿಡುವುದು ಒಳ್ಳೆಯದು. ಟೀವಿಯಲ್ಲಿ ಟೋನಿ ನೋಡಿ ಇಂತದ್ದೊಂದು ಅಪೂರ್ವ ಪ್ರಯೋಗ ಬಂದಿದೆ ಅಂತ ಗೊತ್ತೇ ಇರಲಿಲ್ಲ ಅಂತ ತುಂಬ ಜನ ಹೇಳಿದರಂತೆ.

ಇಲ್ಲಿನ ಜನರಿಗೆ ಕಂಟೆಂಟ್ based, issue based ಚಿತ್ರಗಳು ಬೇಕು, ವಿಭಿನ್ನ ಪ್ರಯತ್ನಗಳು ಬೇಕು ಅನ್ನುವುದಾದರೆ ಕಾಸರವಳ್ಳಿ, ಶೇಷಾದ್ರಿ ಚಿತ್ರಗಳು, ಹಗ್ಗದ ಕೊನೆ ತರದ್ದು ಯಾಕೆ ಒಂದು ಐವತ್ತು ಲಕ್ಷವೂ ಮಾಡುವುದಿಲ್ಲ ? ಲೂಸಿಯಾ ಯಾಕೆ ಬಿ ಮತ್ತು ಸಿ ಸೆಂಟರ್ ಗಳಲ್ಲಿ, ಸಿಂಗಲ್ ಸ್ಕ್ರೀನ್ಗಳಲ್ಲಿ ವಾಶೌಟ್ ಆಯಿತು ? ಸಯನೈಡ್ ಹತ್ತು ಕೋಟಿ , ಗೋಧಿ ಬಣ್ಣ ಇಪ್ಪತ್ತು ಕೋಟಿ, ಕೆಂಡಸಂಪಿಗೆ ಹದಿನೈದು ಕೋಟಿ , ರಿಕ್ಕಿ ಹತ್ತು ಕೋಟಿ ತರದ ಕಲೆಕ್ಷನ್ ಯಾಕಾಗಿಲ್ಲ ? ತಿಥಿ ಒಂದು ಎಂಟ್ ಹತ್ತು ಮಲ್ಟಿ ಪ್ಲೆಕ್ಸ್ ಗಳಲ್ಲಿ, ಅದೂ ಕಡಿಮೆ ಶೋ ಇಟ್ಟುಕೊಂಡು ಓಡಿದ್ದನ್ನೇ ಗೆಲುವು ಅನ್ನಬೇಕೆ ? ಯಾಕಾಗಿಲ್ಲ ಅಂದರೆ ಇವುಗಳನ್ನು ಗೆಲ್ಲಿಸಬಲ್ಲಂತವರು ಥಿಯೇಟರಿಗೆ ಬರುವುದೇ ಇಲ್ಲ. ಮತ್ತು ಕನ್ನಡಿಗರು in general ಚಿತ್ರ ನೋಡುವುದಿಲ್ಲ, ಅವರದ್ದೇನಿದ್ದರೂ ಫೇಸ್ಬುಕ್ ನಲ್ಲಿ ಬೈದು ಸುಮ್ಮನಾಗುವ ಸ್ವಭಾವ. 

ಸ್ಟಾರ್ ಗಳು ಅಂದಾಗ ನೆನಪಾಯಿತು , ಈ perception ಬರುವುದಕ್ಕೆ ದೊಡ್ಡ ಹೀರೋಗಳೂ ದೊಡ್ಡ ಕಾರಣ, ಸ್ಟಾರ್ ಗಳು ಸಾಲು ಸಾಲು ರಿಮೇಕು, ಮಸಾಲೆ ಚಿತ್ರಗಳು ಮಾಡಿದ್ದರಿಂದ ಎಲ್ಲವೂ ಹೀಗೆ ಅನ್ನುವ ಭಾವ ಬಂದಿರಬಹುದು. ಇಂತಹಾ ಕಳಂಕ ಅಂಟುವುದಕ್ಕೆ ಹೀರೋಗಳು ಕಾರಣವಾಗಿದ್ದಾರೆ ಅನ್ನಬಹುದು. 

ಯಾರ್ಯಾರು ಸಿನೇಮಾ ಮಾಡಲಿಕ್ಕೆ ಎಷ್ಟು ಕಷ್ಟ ಪಟ್ಟರು ಅನ್ನುವ ಕಾರಣಕ್ಕೆ ಪ್ರೇಕ್ಷಕ ನೋಡಬೇಕಾಗಿಲ್ಲ , ಅದನ್ನು ಹೇಳಿದ್ದು ಪ್ಯಾಶನ್ ಇರುವವರು ಯಾರಿದ್ದಾರೆ ಎಂಬ ಸಂದೇಹಕ್ಕೆ ಉತ್ತರವಾಗಿ. ಶೋಕಿಗೆ ಬರುವವರು, ಹೆಸರು ಹಾಳು ಮಾಡುವವರು ತುಂಬ ಜನ ಇದ್ದಾರೆ . ಹಾಗೆಯೇ ದೊಡ್ಡ ಸಂಬಳದ ಕಾರ್ಪೊರೇಟ್ ಕೆಲಸ ಬಿಟ್ಟು, ಸಾಕಷ್ಟು ಶ್ರದ್ದೆಯಿಂದ ಅಭ್ಯಾಸ ಮಾಡಿ , ಸ್ವಂತ ಮನೆ ಮಠ ಮಾರಿ ಎಲ್ಲ ಮಾಡಿರುವ ಪ್ಯಾಶನೇಟ್ ಜನರೂ ಸಾಕಷ್ಟು ಇದ್ದಾರೆ. 

ಮೂವತ್ತು ನಲವತ್ತರ ದಶಕದಲ್ಲಿ ಯಕ್ಷಗಾನ ಅಂದರೆ , ಅಶ್ಲೀಲ ನಿರೂಪಣೆ ಇರುವ , ಕಲಾವಂತಿಕೆ ಇಲ್ಲದ ಕಲಾವಿದರ ಸಂತೆ ಆಗಿತ್ತಂತೆ. ವಿದ್ಯಾವಂತರು ಸುಸಂಸ್ಕೃತರು ಇದನ್ನು ಕೆಳ ಮಟ್ಟದ ಚೀಪ್ ಕಲೆ ಅಂತ ದೂರ ಇಟ್ಟಿದ್ದರಂತೆ. ಆಮೇಲೆ ಕುರಿಯ ವಿಠ್ಠಲ ಶಾಸ್ತ್ರಿಗಳು, ಪೊಳಲಿ ಶಾಸ್ತ್ರಿಗಳು, ದೇರಾಜೆ ಸೀತಾರಾಮಯ್ಯ , ಶೇಣಿ ಗೋಪಾಲಕೃಷ್ಣ ಭಟ್ಟರು , ದೊಡ್ಡ ಸಾಮಗರು ಎಲ್ಲ ಬಂದ ಮೇಲೆ ಇದು ಕಲಾವಂತಿಕೆ ಇರುವ, ಸುಸಂಸ್ಕೃತರು, ವಿದ್ವಜ್ಜನರು ನೋಡಬಹುದಾದ, ನೋಡಬೇಕಾದ ಕಲೆ ಅಂತ ಆಯಿತಂತೆ. ಹೀಗೆ ಏರಿಳಿತಗಳು ಆಗುವುದು, ಅದನ್ನು ತಿಳಿದವರು ಬಂದು ಸರಿ ಮಾಡುವುದು, ಈ ತಿಳಿದವರು ಬಂದಾಗ ಪ್ರೇಕ್ಷಕ ಅವರನ್ನು ಮೆಚ್ಚಿ ಪ್ರೋತ್ಸಾಹಿಸುವುದು ಎಲ್ಲ ಆಗಬೇಕಾದ್ದು. ನಾನು ಮೊದಲೇ ಹೇಳಿದಂತೆ ಪ್ರೇಕ್ಷಕನಂತೆ ಕಲೆ. ಗೋಧಿಬಣ್ಣ ಮೂವತ್ತು ಕೋಟಿ ಮಾಡುತ್ತದೆ ಅಂತಾಗುವ ಪ್ರೇಕ್ಷಕ ಇದ್ದಾಗ ಅಂತದ್ದು ಬರುತ್ತದೆ. 

ದರ್ಶನ್ ಚಿತ್ರಗಳು ಇಪ್ಪತ್ತು ಕೋಟಿ ಮಾಡಿದರೆ ದರ್ಶನ್ ಚಿತ್ರಗಳ ತರದ್ದೇ ಬರುತ್ತದೆ. ಕುರಿಯ, ದೇರಾಜೆ, ಶೇಣಿ ಅವರಂತ ಕಲಾವಿದರೂ ಬರಬೇಕು, ಅವರ ಕ್ರಿಯೇಟಿವಿಟಿ , ವಿದ್ವತ್ತು ಆಸ್ವಾದಿಸಬಲ್ಲ ಪ್ರೇಕ್ಷಕರೂ ಬೇಕು. ಎರಡೂ ಕೈ ಸೇರದೆ ಚಪ್ಪಾಳೆ ಆಗುವುದಿಲ್ಲ. ಬರೀ ಮಾಸ್ ಪ್ರೇಕ್ಷಕರು ಬಂದಿದ್ದರೆ ಈ ಪಂಡಿತರು ಏನು ಕೊರೀತಾರಪ್ಪ ಅಂತ ಆಗುತ್ತಿತ್ತು. ಮಾಸ್ ಪ್ರೇಕ್ಷಕ ದೊಡ್ಡ ಸಂಖ್ಯೆಯಲ್ಲಿ ಇದ್ದಾಗ ಮಾಸ್ ಚಿತ್ರಗಳು ಬರುತ್ತವೆ, ಕ್ಲಾಸ್ ಪ್ರೇಕ್ಷಕ ಥಿಯೇಟರಿಗೆ ಬರದಿದ್ದರೆ, ಅವರಿದ್ದಾರೆ, ಅವರಿಗೆ ಆಗುವಂತ ಚಿತ್ರ ಮಾಡಿಯೂ ದುಡ್ಡು ಮಾಡಬಹುದು ಅಂತ ಗೊತ್ತಾಗುವುದು ಹೇಗೆ ? ಇಲ್ಲಿ ಕೋಳಿ ಮೊದಲೋ ಮೊಟ್ಟೆ ಮೊದಲೋ , ದೋಸೆ ಇಲ್ಲ ಅಂತ ಅವರು ಬರುವುದಿಲ್ಲವೇ, ಅವರು ಬರುವುದಿಲ್ಲ ಅಂತ ದೋಸೆ ಮಾಡುವುದಿಲ್ಲವೇ , ಅಥವಾ ಇಬ್ಬರದ್ದೂ ಸ್ವಲ್ಪ ಸ್ವಲ್ಪ ತಪ್ಪಿದೆ ಅನ್ನಬೇಕೇ ಅನ್ನುವುದು ಯೋಚಿಸಬಹುದಾದ ವಿಚಾರ.

ಒಳ್ಳೆಯದನ್ನು ಪ್ರೋತ್ಸಾಹಿಸಿ ಕೆಟ್ಟದ್ದನ್ನು ತಿರಸ್ಕರಿಸುವುದು ಎಲ್ಲ ಕಡೆ ಆಗುತ್ತದೆ, ಇಲ್ಲಿಯೂ ಆಗುತ್ತದೆ, ಆಗಬೇಕು. ಹೇಳಿ ಕೇಳಿ ಎಲ್ಲ ಚಿತ್ರಗಳೂ ಪ್ರಾಡಕ್ಟ್ ಗಳೇ, ಮಾರುಕಟ್ಟೆಯಲ್ಲಿ ಒಳ್ಳೆ ಪ್ರಾಡಕ್ಟ್ ಉಳಿಯುವುದು, ಕೆಟ್ಟದ್ದು ತಿರಸ್ಕರಿಸಲ್ಪಡುವುದು ಆಗುತ್ತದೆ, ಆಗಲೇಬೇಕು. ಆದರೆ ಉಗಿಯುವಾಗ ಸ್ವಲ್ಪ ನೋಡಿಕೊಂಡು, ಕೆಲವು ವಿಚಾರಗಳನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಉಗೀರಿ ಅನ್ನುವ ನಿಟ್ಟಿನಲ್ಲಿ ಈ ಮಾತುಗಳನ್ನು ಹೇಳಿದ್ದೇನೆ. ಮನೆಯಲ್ಲಿ ಹೆಂಡತಿ ಕೈಲಿ ಉಗಿಸಿಕೊಂಡರೆ ಕನ್ನಡ ಚಿತ್ರಗಳನ್ನು ಬೈದು ಸೇಡು ತೀರಿಸಿಕೊಳ್ಳಬಹುದು ಅನ್ನುವಷ್ಟು ಸಸಾರ ಆಗದಿರಲಿ! ಏನಂತೀರಿ ?

Very good books on Cinema

There are people would read a recommendation piece on movies, there people who would want a list of "Must read" books. Is there anyone who wants a listicle on the must read books on cinema? I am not so sure, I will write it anyway. I recently commented about this elsewhere and 3-4 people messaged me saying they would like to read something like that. So, here it is.
Firstly, the question of stories. What makes a good story? Why some stories work and some don't? How is a screenplay different from a normal story? I believe that one book will not have all the answers. I will recommend these books because each one has something unique to offer:
Writing Screenplays That Sell by Michael Hauge: This one covers all the basics. This should be a good place to start. Either this or Syd Field's book on Screenwriting can be your first book.
The Art of Dramatic Writing by Lajos Egri: originally written for playwrights, This one also covers the basics like Conflict and character development. This and the book suggested above should lay solid foundations.
Writing for Emotional Impact by Karl Iglesias: As the title implies, the author suggests ways to make the film emotionally appealing. Has many tricks and tips.
Wired for Story by Lisa Cron: The lessons you learn are similar to the ones you got in the Writing for Emotional Impact book suggested above. But this one addresses the "Why" part. Think of it as a book on why a story works(Explained in terms of Darvin's evolution and neuroscience/brain science). A very insightful, eye opening and entertaining book.
Save the Cat by Blake Snyder: The reason it is so famous is that it sells a formula by telling things like do this on page 11 and do that on page 27. Don't buy the formula blindly, but read it anyway. Just because he sells a formula, does not mean that Blake Snyder was running a scam. He gets some of the basics right. Very good points on how a commercial film's script should be. And the book itself is like an entertaining action film (no dry/ text bookish theories. Breezy and funny)
Zen and the Art of Screenwriting by William Froug: This is the perspective of someone who hates the formulas and structures that screenwriting gurus sell. Thought provoking and good. Has some interviews with established screenwriters also.
Tales from the Script: Has Interviews of people who are actually writing commercial films. They share their views on almost everything related to screenwriting. A must read.
I did not feel like I got enlightened about something new by reading these 3 but they still are highly readable, you might pick up a thing or two from these:
Lew Hunter's Screenwriting 434
Essentials of Screenwriting by Richard Walter
And read/watch any interviews of Hitchcock,Billy Wilder.
Filmmaking in General:
Hitchcock by Francois Truffaut - Believe it or not, there was a time when Alfred Hitchcock was considered to be just another commercial/mass director by critics. It is the intellectuals from France that sang his praise and changed the critical opinion about him. One such gentleman is Francois Truffaut(The man himself is a well known director, one of the leading figures of French New wave). Truffaut discusses every single film of Hitchcock with the maser himself. Hitchcock gives detailed explanations, theories, background stories and stuff. This masterclass from the master is thorough and an absolute delight. A must read for all movie buffs.
Conversations with Wilder by Cameron Crowe - Another case of one director interviewing a legendary director/writer. Not every filmmaker can explain his ART. Hitchcock and Billy Wilder are two geniuses who could articulate as to how their films worked. They had insights and theories on how their films worked. And they are worth listening to. Wilder is one of the most versatile filmmakers, he also wrote his films and he is one of the wittiest people you will ever come across.
Awake in the Dark: The Best of Roger Ebert - Anything everything by Ebert is worth reading. I have named one just for the sake of listing one. Ebert was an encyclopedia of cinema, you must listen to his audio commentaries for films like Citizen Cane and Yasujiro Ozu's Floating Weeds to understand how knowledgeable the guy was.
Directing the Story Francis Glebas - Glebas is a storyboard artist for Disney. This book is about how to visually tell your stories. He can be intellectual without being boring. This is one of the best books on stroytelling I've come across.
Talking Films: Conversations on Hindi Cinema with Javed Akhtar - Javed saab is as witty and wise as ever. He offers his unique perspectives on Indian cinema
Technical Film and TV for Nontechnical People by Drew Campbell - Written with a sense of humour. Must read for those who get easily bored with the dry technical books. Entertaining and informative.
In the Blink of an Eye by Walter Murch - Murch is a celebrated editor who shares his ideas on the craft of editing. Filled with anecodotes, theory and insights about artistic methodology behind his craft Murch has produced a must read book.
Some notable and intellectual books that are not as entertaining as the ones mentioned above, I recommend these for the intellectually hungry types:
On Directing Film by David Mamet - Filmmaker/playwright David Mamet musing on cinema.
On Film Making by Alexander MacKendrick - Director/teacher MacKendrick's insights, very thought provoking.
What Is Cinema? by Andre Bazin
Bruce Block's The Visual Story - This one covers only the visual language and composition. Film makers, photographer, graphic designers, movie buffs anybody can read it.

Movies set in Extotic Locations

Movies set in exotic locations! Our real lives are often mundane and incredibly boring. It is movies that take us to unfamiliar territories and make us vicariously fulfil our fantasies. I have prepared a list of films that take us to remote and exotic locations, the ones that transport us to worlds we have not seen, the ones that invoke a sense of wanderlust, the ones that make you feel like packing the bags and going in search of the endlessly fascinating mother nature. A bollywood song showing an exotic location does not count, the location has to be an essential part of the story. Some films in the list might be slow and minimalist, approach with caution.
Mutluluk(Bliss) - This cute Turkish film is set in a yacht sailing in the Exquisite coasts of Turkey, plenty of picturesque scenery and an engaging story. Highly recommended.
Bond films - Right from the days of Dr No and On her majesty's secret service Bond films have had gorgeous foreign locations as their major attractions.
Nordwand(North Face) - This German film is the story of men trying to climb the Eiger mountain(Part of Switzerland's Alps), it captures the terrifying and harrowing beauty of the Alps with impressive camera work. This might be the most realistic climbing film out there.
Around the world in 80 days(the one made in 1956) - Hold your breath: They shot in 112 locations in 13 countries and as if this was not enough they erected 140 sets, the cast including extras totalled 68,894 people as per Wiki. This film was actually shot around the world in around 80 days!
The Buffalo Boy (2004): Nobody seems to have watched this story of a boy who lives in the flooded lowlands of Vietnam. The boy has to take his buffalos to a place where they can find grass. Watch it for those Floating villages of Vietnam , the primitive yet beautiful landscape and a lyrical narration.
African Queen - Master director John Huston directing Humphrey Bogart and the characters are floating in a boat in the rivers of Congo in East Africa, it was shot on location, what more do you want?
Dersu Uzala (1975) - A less known film of Akira Kurosawa, It is about a Mongolian tracker who acts as a guide to a Russian surveyor in the Siberian wilderness. Scenes in the wilderness look so realistic.
Spring, Summer, Fall, Winter... And Spring - This Korean film plays like a Buddhist parable. Entire film is set in a floating Buddhist temple in a secluded lake. It is the story of a boy told through different seasons, as he learns to be a monk. Very interesting premise, executed in a visually arresting fashion, narrated poetically.
Vertical limit - Vertical limit is set in the Himalayan peak K2(Shot in New Zealand), It is your standard high-octane Hollywood action film, there are many snow-capped settings, there is enough eye candy to warrant a one time watch.
Himalaya - Nothing great but this one is actually shot in a remote Himalayan village in Nepal, A realistic depiction of the salt caravans that traverse the majestic Himalayan Mountains in Tibet. Can be watched once for the magnificent panoramas and the mountains and glaciers.
Days of Heaven by Terrence Mallick - This very slow-moving poetry on screen is hypnotic. They shot most of the film during the "magic hour"(between darkness and sunrise/sunset), Must watch for the astonishing images of the endless wheat fields and one lonely farmhouse. I had once said that you can take any scene from the films of the great Greek filmmaker Theodorous Angelopoulos, pause it and send the paused scene to a photography competition. I would say that about this film.
Dreams of dust - Set in the rural, dusty African country of Burkina Faso, this one shows the Gold mines in that place. It is slow, bleak, primitive and terrifying and makes you feel like you have learned a bit about a completely different culture. A quietly affecting, sombre story about grief, survival and hope.
Mountain Patrol (2004): This one chronicles the stories of the Tibetan vigilante group who fought poachers in the Chinese highlands, one of the most remote, harshest environments in the world, a haunting, stark, desolate region.
Tulpan - Steppes of Kazakistan. It shows a place where there are no landmarks, no roads, nothing. It is a funny, fascinating and charming story of people living in such an isolated place.
Eight below - Story of an explorer who has to leave his team of dogs in Antarctica. Of course, it is not shot on location!(Greenland and Canada were the shooting locations) But there are stock footages of Antarctica and the vistas are beautiful and convincing, the heartwarming story makes it a good watch.
Medicine Man (1992) - Directed by John McTiernan of Die hard fame, starring the charismatic Sean Connery, this one has breathtaking outdoors and a decent story. It is a Story of a scientist trying to find cure for Cancer in the jungles. Set in the Amazon rain forests of Brazil(Shot in Mexico), this one is an an old fashioned entertainer.
The way back- A treacherous trek to freedom across the world’s most merciless landscapes – from Siberia to India.
Lawrence of Arabia - Needs no introduction. An epic, majestically captures the desert.
The Hunter (2011) - Filmed on the Australian island of Tasmania, it is the story of a man hired to locate and extract the DNA from the last remaining Tasmanian tiger. Has unique landscapes,forests, highland lakes and valleys.
A far off Place - A standard Hollywood style journey for survival in the Kalahari Deserts of Africa.
Aguirre the wrath of god - Well, there are 2 types of people in the world. There is Werner Herzog and there is the rest of the world. Herzog once made a film called Fitzcarraldo(set in the South American jungles), a ship had to be moved from one river to another via a piece of land in the story. Guess how Herzog filmed it? He actually took a 320 ton ship there and asked people to manually pull it! In Aguirre: The Wrath of God, he tells the story of explorers searching for gold, floating down a river in the middle of the godforsaken jungle. There were no computers, no special effects -- everything that happened in the film had to happen in real life. Those pictures of Amazon rain forests in Aguirre are hypnotic, stunning and gorgeous. Fitzcarraldo, Rescue Dawn and all of his documentaries are also recommended.
Honourable mentions:
Blackboards - Iranian. A group of teachers with blackboards strapped to their backs, wander in search of students they can teach in the rugged terrain of Kurdistan
The English Patient (1996) - A grand, sweeping romance and an Oscar winner, this one has some real good scenes set in the African Sahara desert.
The Flight of the Phoenix (1965) - This is another film set in Sahara. It is the story about a group of people getting stranded in the desert after a plane crash.
Alive (1993) - Another plane crash/survival story set in the snow capped Andes mountains.
The Blue Butterfly (2004) - Story of a boy who wants to capture a blue butterfly, the film was underwhelming but the jungles of Costa Rica looked really good.
Jeremiah Johnson - Woods and snowy mountain regions of Utah
Munyurangabo - Landscapes of Rwandan countryside
Vodka Lemon - Iranian. A remote,snowy village in Armenia
Kandahar(Borders of Afghanistan)- Iranian. Story of an Afghan-Canadian lady journalist returning to her homeland after receiving a suicidal note from her sister who lives in the city of Kandahar. Shows the Talibani regions and provides indelible and touching images.

Yet to watch:
Postmen in the Mountains
The Thaw (2009)
Pathfinder (2007)
Sanctum (2011)
Black Water (2007)
Iron Will (1994)
Farewell to the King (1989)
Seven Years in Tibet (1997)
Jungle Child (2011) - A family of a German linguist lives with an indigenous tribe in Papua New Guinea
Suggestions are welcome 

Why there is so much hype about Christopher Nolan

Some paragraphs from an answer that I had written in Quora(About why there is so much hype about Christopher Nolan): Nolan has bridged the gap between the commercial and ART. I find the mainstream Hollywood to be formula driven,cliched and predictable. I find the Bergmans and Antonionis way too pretentious, intellectual, abstract and boring. My solution? Nolan!! He is a poor man’s version of Tarkovskys, Bergmans and Fellinis. He pursues arty themes and concepts like them. But he dresses them up like mainstream commercial stuff. Lots and lots of people crave for such a middle ground. ART films are abstract and boring for us, commercial films are cliched and dumb. Nolan gives us what we need – Commercial films that borrow good things from art films.

Another thing Nolan does is he makes his audience feel intelligent. We like solving puzzles. That is why we love detective fiction and mysteries. Nolan takes this to heights by designing movies as puzzles to be solved. And there is nothing like a reward that is earned. Let us say I decide to give 1 crore Rs to you. I have 2 options: a. I can give it as charity b. I can give it as an award for being the best quora/facebook user. Which option will you prefer? You will prefer b. You will feel that you have earned it. This psychological factor works.
Consider the screenwriting tips given by Billy Wilder( I will just quote the 7th, you may google for the rest):
7. A tip from Lubitsch: Let the audience add up two plus two. They’ll love you forever.
This is exactly what Nolan does. He gives 2+2 and lets the audience figure out that it is 4. Audience feels like they have earned it. It makes them feel intelligent.

There is one last reason for the fuss. He’s always original, always daring, and always interesting. His success means a lot to movie buffs because such successes will encourage more and more original ideas. Hollywood keeps churning out sequels, reboots, remakes, superhero films and stuff like Transformers part 20. So, if one daringly original idea wins studios will sponsor more and more original ideas.That is why there is lot of interest about Nolan. If films like his fail then studios will keep making Spider man part 6 and Transformers part 21, Star Wars 23 and so on.

ಮಾತು ಮತ್ತು ಅರ್ಥ

ಮಾತು, ಶಬ್ದ ಮತ್ತು ಅರ್ಥ! ನಾವು ಮಾತಾಡುತ್ತಾ ಹೋಗುತ್ತೇವೆ, ನಿಲ್ಲದ ಬೆಂಗಳೂರಿನ ಟ್ರಾಫಿಕ್ಕಿನಂತೆ ಮಾತು ಬರುತ್ತಲೇ ಹೋಗುತ್ತದೆ, ಮಾತು ಅಂದ ಮೇಲೆ ಶಬ್ದಗಳೂ ಬರುತ್ತವೆ, ಮಾತಾಡುವವರು ಸಾಕಷ್ಟು ಜನ ಇದ್ದಾರೆ, ಅರ್ಥ ಇಲ್ಲದ್ದನ್ನು ಮಾತಾಡುವವರೂ ಇದ್ದಾರೆ, ಕೆಲವರು ಮಾತಾಡಿದರೆ ಅರ್ಥಕ್ಕೇ ಹೊಸ ಅರ್ಥ ಬರುವುದೂ ಇದೆ. ಈ ಶಬ್ದ ಮತ್ತು ಅರ್ಥಗಳು ಹೇಗೆಲ್ಲ ಬರುತ್ತವೆ, ಬದಲಾಗುತ್ತವೆ ಅಂತ ಬೆದಕುತ್ತ ಹೋದರೆ, ಶಬ್ದಗಳನ್ನು ಮುಟ್ಟಿ, ತಟ್ಟಿ ಮಾತಾಡಿಸಿದರೆ ಹಲವು ಸೋಜಿಗಗಳು, ವಿಚಿತ್ರ ಕತೆಗಳು ಸಿಗುತ್ತವೆ. ಇಂತಹ ತಮಾಷೆಯ, "ಓಹೋ ಹೀಗೋ ವಿಚಾರ !!" ಅನ್ನಿಸುವ ಶಬ್ದಗಳು ಇವೆ ಸಾಕಷ್ಟು. ಇಂತಹ ವೇಷ ಬದಲಿಸುವ ಒಂದಷ್ಟು ಶಬ್ದಗಳನ್ನು ಭೇಟಿ ಮಾಡೋಣ ಇವತ್ತು.

ಈಗ ಸವಾಲು ಅನ್ನುವ ಶಬ್ದವನ್ನೇ ತಗೊಳ್ಳಿ, ಸವಾಲ್ ಎಂಬ ಪದಕ್ಕೆ ಹಿಂದಿ/ ಉರ್ದುವಿನಲ್ಲಿ ಪ್ರಶ್ನೆ ಎಂಬ ಅರ್ಥವಿದೆ ಆದರೆ ಕನ್ನಡದಲ್ಲಿ ಸವಾಲು ಅಂದರೆ ಅದನ್ನು ಚಾಲೆಂಜ್/ಕೆಣಕು. ಇದು ಯಾಕೆ ಹೀಗೆ ? ಈ ಯಾಕೆ ಅನ್ನುವುದಕ್ಕೆ ಉತ್ತರ ಹೀಗೆ : ಇದು ಒಂದು ದಿನ ಒಬ್ಬರು ಕುಳಿತು ಇವತ್ತಿನಿಂದ ಹೀಗೆ ಪ್ರಯೋಗಿಸೋಣ ಅಂತ ಮಾಡಿದ ನಿರ್ಧಾರ ಅಲ್ಲ. ಒಂದು ಶಬ್ದ ಲಕ್ಷಗಟ್ಟಲೆ ಜನರ ಬಾಯಿಗೆ ಸಿಕ್ಕಿ ಸಹಜವಾಗಿ ಆದ ಬದಲಾವಣೆ (ಅರ್ಥಾಂತರ). ಎಲ್ಲ ಜೀವಂತ ಭಾಷೆಗಳಲ್ಲಿ ಹೀಗೆ ಆಗುತ್ತದೆ. ಕೆಲವೊಮ್ಮೆ ಅನುಕರಣೆಯಿಂದ , ಒಮ್ಮೊಮ್ಮೆ ಅಜ್ಞಾನದಿಂದ, ಕೆಲವೊಮ್ಮೆ ಸೌಲಭ್ಯಾಕಾಂಕ್ಷೆಯಿಂದ.
ಈಗ ಒಬ್ಬರು ಆಟೋ ಚಾಲಕರು ಒಂದು ಇಂಗ್ಲಿಷು ಶಬ್ದ ಕೇಳುತ್ತಾರೆ ಅಂತಿಟ್ಟುಕೊಳ್ಳಿ. ಅವರಿಗೆ ಮೂಲ ಇಂಗ್ಲಿಷಿನ ಅರ್ಥ ತಿಳಿಯದು, ಸಂಧರ್ಭ ನೋಡಿ ಹೀಗಿರಬಹುದು ಅಂತ ಅರ್ಥ ಕಲ್ಪಿಸಿಕೊಳ್ಳುತ್ತಾರೆ, ಎರಡು ಮೂರು ಸಲ ಆ ಶಬ್ದ ಕಿವಿಗೆ ಬಿದ್ದ ಮೇಲೆ ಅವರೂ ಬಳಸುತ್ತಾರೆ . ಅವರನ್ನು ನೋಡಿ ಇನ್ನೊಬ್ಬರು , ಇನ್ನೊಬ್ಬರನ್ನು ನೋಡಿ ಮತ್ತೊಬ್ಬರು , ಹೀಗೆ ಅನುಕರಣೆಯಿಂದ ಕ್ರಮೇಣ ಎಲ್ಲರೂ ಬಳಸುತ್ತಾರೆ. ಉದಾಹರೆಣೆಗೆ : Recess ಅನ್ನುವ ಶಬ್ದ. Recess ಅಂದರೆ ಇಂಗ್ಲೀಷಿನಲ್ಲಿ ಬಿಡುವು. ಶಾಲೆಯಲ್ಲಿ ಬಿಡುವು ಇದ್ದಾಗ ಮಕ್ಕಳು ಮೂತ್ರ ವಿಸರ್ಜಿಸುವ ಕ್ರಮ ಇರುವುದರಿಂದ ಕೆಲವರು recess ಅಂದರೆ ಮೂತ್ರ ಮಾಡುವುದು ಅಂತಲೇ ಭಾವಿಸಿದರು. ಕ್ರಮೇಣ, "ನಮ್ ಹುಡುಗ recess ಮಾಡಬೇಕಂತೆ(ಮೂತ್ರ ವಿಸರ್ಜಿಸಬೇಕಂತೆ ಎಂಬರ್ಥದಲ್ಲಿ)" ಅಂತ ಬಳಸಿದರು. ಈಗ ತುಂಬ ಜನ ಹೀಗೇ ಬಳಸುತ್ತಾರೆ. ಇದು ಅಜ್ಞಾನದಿಂದ ಆದ ಅರ್ಥಾಂತರ.

ಅರ್ಥಗಳು ಐದು ತರದಲ್ಲಿ ಬದಲಾಗುತ್ತವೆ ಅಂತ ಭಾಷಾ ವಿಜ್ಞಾನಿಗಳು ಗುರುತಿಸಿದ್ದಾರೆ : ಅರ್ಥ ವಿಕಾಸ, ಅರ್ಥಸಂಕೋಚ, ಹೀನಾರ್ಥಪ್ರಾಪ್ತಿ, ಉತ್ತಮಾರ್ಥ ಪ್ರಾಪ್ತಿ ಮತ್ತು ಅರ್ಥಾಂತರ.
ಅರ್ಥ ವಿಕಾಸ - ಒಂದು ಸಂಸ್ಥೆ ಹೊಸ ಬ್ರಾಂಚುಗಳನ್ನು ತೆರೆದು ಬೆಳೆದ ಹಾಗೆ ಒಂದು ಶಬ್ದ ಬೆಳೆಯುವುದು. ಅದಕ್ಕೆ ಮೊದಲು ಇದ್ದ ಅರ್ಥಕ್ಕಿಂತ ಹೆಚ್ಚಿನ, ವಿಶಾಲವಾದ ಅರ್ಥವನ್ನು ಪಡೆಯುವುದು. ಉದಾ: ಎಣ್ಣೆ. ಎಣ್ಣೆ ಅಂದರೆ ಮೂಲದಲ್ಲಿ ಎಳ್ಳಿನ ಜಿಡ್ಡು (ಎಳ್ + ನೆಯ್ ). ಎಳ್ಳಿನ Oil. ಈಗ ಎಲ್ಲ Oilಗಳಿಗೂ, ಜಿಡ್ಡುಗಳಿಗೂ ಬಳಸುತ್ತಾರೆ, ತೆಂಗಿನ ಎಣ್ಣೆ, ಕಡಲೆ ಎಣ್ಣೆ ಇತ್ಯಾದಿ. ತೆಂಗಿನ ಎಣ್ಣೆ ಅಂದರೆ ತೆಂಗಿನ ಎಳ್ಳಿನ oil ಅಂದಂತೆ! ಇನ್ನು ದಿನಕ್ಕೆ ನಾಲ್ಕು ಸಲ ಕಿವಿಗೆ ಬೀಳುವ ಶಬ್ದ "ಸಕತ್". ಇದರ ಮೂಲ ಸಖ್ತ್ ಅನ್ನುವ ಪಾರಸಿ ಶಬ್ದ. ಸಖ್ತ್ ಅಂದರೆ ಬಲವಾದ, ಗಟ್ಟಿಯಾದ, ತೀವ್ರವಾದ ಅಂತ. ಜರೂರತ್ ಹೈ ಜರೂರತ್ ಹೈ ಸಖ್ತ್ ಜರೂರತ್ ಹೈ ಅನ್ನುವ ಹಾಡೇ ಇದೆಯಲ್ಲ! ಕನ್ನಡದಲ್ಲಿ ಇದು ಚಕ್ರವರ್ತಿಯನ್ನು ಕೂಡಿಸಿಕೊಂಡ ಕೆನೆಯುವ ಕುದುರೆಯ ಖುರಪುಟಗಳು ಧೂಳೆಬ್ಬಿಸುವ ಹಾಗೆ ಧೂಳೆಬ್ಬಿಸಿದೆ. ನೀರು ದೋಸೆ ಹೇಗಿತ್ತು ? ಸಕತ್ತಾಗಿತ್ತು. ಪರೀಕ್ಷೆ ಹೇಗಿತ್ತು ? ಸಕತ್ ಸುಲಭ. ಹುಡುಗಿ ಹೇಗಿದಾಳೆ ? ಸಕತ್ ! ಎಲ್ಲಿ ಬೇಕಾದರೂ ಬೇರೆ ಯಾವ ಶಬ್ದವೂ ನೆನಪಾಗದಿದ್ದರೆ ಸಕತ್ ಅನ್ನುವ ಶಬ್ದ ಪ್ರಯೋಗಿಸಿ ಮರ್ಯಾದೆ ಉಳಿಸಿಕೊಳ್ಳಬಹುದು. ಪಾರಸಿಯಲ್ಲಿ ಹೊದಿಕೆ ಹೊದ್ದು ಮಲಗಿದ್ದ ಶಬ್ದ ಕನ್ನಡದಲ್ಲಿ ನೆಗೆ ನೆಗೆದು, ಕುಪ್ಪಳಿಸಿ ಕುಣಿದಿದೆ!
ಅರ್ಥಸಂಕೋಚ - ಮಲ್ಯನ ಕಿಂಗಫಿಶರ್ನ ಹಾಗೆ ದೊಡ್ಡದು ಸಣ್ಣದಾಗುವುದು. ವಿಶಾಲ ಅರ್ಥವು ಒಂದೇ ಅರ್ಥಕ್ಕೆ ಸೀಮಿತ ಆಗಿ ಬಿಡುವುದು. ಉದಾ : ಖಲ್ಲಾಸ್ ಅನ್ನುವ ಶಬ್ದ. ಇದಕ್ಕೆ ಮುಗಿಸುವುದು ಅನ್ನುವ ಅರ್ಥ ಇದ್ದಿರಬೇಕು ಮೂಲದಲ್ಲಿ . ಕನ್ನಡದಲ್ಲಿ ಕೆಟ್ಟ ರೀತಿಯಲ್ಲಿ ಮುಗಿಸುವುದು ಅನ್ನುವ ಸೀಮಿತ ಅರ್ಥದಲ್ಲಿ ಈಗ ಬಳಸುತ್ತಾರೆ( ಉದಾ : ಹೆಚ್ಚಿಗೆ ಮಾತಾಡಿದರೆ ಖಲ್ಲಾಸ್ ಮಾಡಿ ಬಿಡ್ತೀನಿ ). ಈಚೆಗೆ ಅಲ್ ಜಜೀರಾ ಅನ್ನುವ ವಾರ್ತಾ ವಾಹಿನಿ (ಅರಬ್ ದೇಶಗಳಲ್ಲಿ ಹೆಸರು ಮಾಡಿರುವ ವಾಹಿನಿ )ಯಲ್ಲಿ ಒಂದು ಸಂದರ್ಶನ ನೋಡುತ್ತಿದ್ದೆ . ಇನ್ನು ಸಂದರ್ಶನ ಮುಗಿಸೋಣ ಅನ್ನುವುದಕ್ಕೆ ಅಲ್ಲಿ ಖಲ್ಲಾಸ್ ಮಾಡೋಣ ಅಂದರು.
ಹೀನಾರ್ಥಪ್ರಾಪ್ತಿ: ಒಂದು ಶಬಕ್ಕಿದ್ದ ಒಳ್ಳೆಯ ಅರ್ಥ ಕೆಟ್ಟ ಅರ್ಥಕ್ಕೆ ತಿರುಗುವುದು. ಇದಕ್ಕೆ ಎಲ್ಲೆಲ್ಲೂ ಕಣ್ಣಿಗೆ ರಾಚುತ್ತಿರುವ ಉದಾಹರಣೆ ಬುದ್ದಿ ಜೀವಿ ಅನ್ನುವ ಶಬ್ದ. ಈ ಶಬ್ದಕ್ಕೆ ಇಂಟಲೆಕ್ಚುಯಲ್, ಧೀಮಂತರು ಎಂಬರ್ಥ. ಇತ್ತೀಚಿಗೆ ಧರ್ಮ ನಿಂದಕರು, ಆಷಾಡಭೂತಿಗಳು, ಎಡೆಬಿಡಂಗಿಗಳು, ಒಂದು ಧರ್ಮವನ್ನು ದ್ವೇಶಿಸುವವರು, sickularಗಳು, Libtardಗಳು ಅನ್ನುವ ಅರ್ಥಕ್ಕೆ ತಿರುಗಿದೆ . ಬುದ್ಧಿ ಜೀವಿ ಎನ್ನುವುದು ಧರ್ಮಕ್ಕೆ, ಧರ್ಮ ನಿಂದನೆಗೆ,ಎಡ, ಬಲಗಳಿಗೆ ಸಂಬಂದ ಪಟ್ಟ ಶಬ್ದವೇ ಅಲ್ಲ. ಅದು ಇಂಗ್ಲಿಷ್ ನ ಇಂಟಲೆಕ್ಚುಯಲ್ ಅನ್ನುವುದಕ್ಕೆ ಸಂವಾದಿಯಾದ ಶಬ್ದ. ಒಬ್ಬ ಬುದ್ಧಿ ಜೀವಿ ಪರಮ ಭಕ್ತನೂ, ಬಲ ಪಂಥೀಯನೂ ಆಗಿರಬಹುದು. ಈ ಎಡ ಬಲಗಳ ಪೆಟ್ಟುಗುಟ್ಟಿನಲ್ಲಿ ತೀರ ಗೌರಿ ಲಂಕೇಶ್, ಬರ್ಖಾ ದತ್ , ಆರುಂಧತಿ ರಾಯ್, ಭಗವಾನ್ ಮುಂತಾದವರನ್ನೂ ಬುದ್ದಿ ಜೀವಿಗಳು ಅಂತ ಕರೆದದ್ದೂ ಆಯಿತು -- ಅವರುಗಳು ಇಂಟಲೆಕ್ಚುಯಲ್ ಆಗಿ ಏನೂ ಕಡಿದು ಗುಡ್ಡ ಹಾಕಿರದಿದ್ದರೂ !! ಇದು ಎಷ್ಟು ಅತಿಗೆ ಹೋಗಿದೆ ಎಂದರೆ ಇವತ್ತು ಬುದ್ಧಿ ಜೀವಿ ಎನ್ನುವುದು ಒಂದು ಬೈಗುಳವೇ ಆಗಿ ಹೋಗಿದೆ. ಯಾರಾದರೂ ಒಳ್ಳೆ ಇಂಟಲೆಕ್ಚುಯಲ್ ಸಾಧಕರನ್ನು ಹೊಗಳುವುದಕ್ಕೆ/ಸಂಬೋಧಿಸುವುದಕ್ಕೆ ಯಾವ ಶಬ್ದ ಆದೀತು ಅಂತ ಹುಡುಕಬೇಕಾದ ಪರಿಸ್ಥಿತಿ !! ವೇದಗಳಲ್ಲಿ ಯಜ್ಞ-ಯಾಗಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದ user manual ತರದ ಭಾಗವನ್ನು `ಕರ್ಮಕಾಂಡ' ಎಂದು ಕರೆಯುತ್ತಾರೆ. ಆದರೆ ಇವತ್ತು ಆ ಪದದ ಕರ್ಮಕಾಂಡವೇ ಆಗಿ ಹೋಗಿದೆ ! ಆಗ ತಂಗೂಳು ಅಂದರೆ ತಣ್ಣಗಿನ+ಕೂಳು=ತಣ್ಣಗಿರುವ ಆಹಾರ. ಈಗ ಇದಕ್ಕೆ ಹಳಸಿದ ಎಂಬರ್ಥ ಬಂದಿದೆ. ಕುನ್ನಿ ಅಂದರೆ ಮೊದಲು ಕನ್ನಡದಲ್ಲಿ ಪುಟ್ಟ ಗಂಡು ಮಗು ಅಂತ ಇದ್ದಿರಬೇಕು. ಈಗ ನಾಯಿಮರಿ ಅಂತ ಆಗಿಬಿಟ್ಟಿದೆ . ಈಗ ಗದಾಯುದ್ಧ ಯಕ್ಷಗಾನದಲ್ಲಿ , ಎಲಾ ಎಲಾ ಛೀ ನೃಪಕುಲ ಕುನ್ನಿ ಅಂತಲೇ ಮೂದಲಿಸಲಾಗುತ್ತದೆ. ಹವ್ಯಕ ಭಾಷೆಯಲ್ಲಿ ಈಗಲೂ ಪುಟ್ಟ ಮಕ್ಕಳನ್ನು ಮುದ್ದಿನಿಂದ ಒಪ್ಪಕುಂಞಿ ಅನ್ನುತ್ತಾರೆ. ಲೇಖಕ ಬೊಳುವಾರು ಮಹಮ್ಮದ್ ಕುಂಞಿ ಇದ್ದಾರಲ್ಲ ಹಳೇ ಅರ್ಥದ ಕುಂಞಿ ಅವರ ಹೆಸರಿನಲ್ಲಿ ಇರುವುದು.
ಉತ್ತಮಾರ್ಥ ಪ್ರಾಪ್ತಿ: ಒಂದು ಶಬಕ್ಕೆ ಒಳ್ಳೆಯ ಅರ್ಥ ಬಂದು ಬಿಡುವುದು . ಉದಾ : ದಿಗ್ಗಜ ಅಂದರೆ ದಿಕ್ಕುಗಳನ್ನು ಹೊತ್ತುನಿಂತ ಆನೆ. ಇವತ್ತು ಇದನ್ನು ದೊಡ್ಡ ಜನ, ಒಂದು ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ಪರಿಣತಿ ಹೊಂದಿದವರು ಅನ್ನುವ ಅರ್ಥದಲ್ಲಿ ಬಳಸುತ್ತಾರೆ. ಪಂಟರ್ ಎಂಬ ಇಂಗ್ಲಿಷ್ ಪದಕ್ಕೆ ಒಳ್ಳೆ ಜೂಜುಕೋರನೆಂಬ ಅರ್ಥವಷ್ಟೇ ಇತ್ತು, ಕನ್ನಡದಲ್ಲಿ ನಿಸ್ಸೀಮ, ನಿಷ್ಣಾತ ಅನ್ನುವ ಅರ್ಥದಲ್ಲಿ, "ಅವ್ನು ಬಿಡಪ್ಪಾ ಪಂಟ" ಅನ್ನದ ಕಾಲೇಜು ವಿದ್ಯಾರ್ಥಿಗಳೇ ಇಲ್ಲ.
ಅರ್ಥಾಂತರ: ಒಂದು ಪದ ಹಿಗ್ಗದೆ, ಕುಗ್ಗದೆ, ಹೀನ ಅಥವಾ ಉತ್ತಮ ಅರ್ಥಕ್ಕೆ ತಿರುಗದೆ ಬದಲಾದರೆ ಅದು ಅರ್ಥಾಂತರ. ಇಲ್ಲಿ ತಮಾಷೆ ಇರುವುದು ಸರೀ ಉಲ್ಟಾ ಅಥವಾ ವಿರುದ್ಧ ಅರ್ಥಕ್ಕೆ ಹಾರಿ ಪಕ್ಷಾಂತರ ಮಾಡುವ ರಾಜಕಾರಣಿಯಂತ ಶಬ್ಧಗಳಲ್ಲಿ. ಅಮ್ಮ ಅನ್ನುವ ಶಬ್ದ ಯಾರಿಗೆ ಗೊತ್ತಿಲ್ಲ. ಹಳಗನ್ನಡದಲ್ಲಿ ಅಮ್ಮ ಅಂದರೆ ಅಪ್ಪ ಅಂತಲೇ ಅರ್ಥ! ಹೀಗೆ ಅಂದರೆ ನೀವು ಟಿವಿ 9 ಇನ "ಹೀಗೂ ಉಂಟೆ" modeಗೆ ಹೋಗಬಹುದು. ಹಳಗನ್ನಡದಲ್ಲಿ ಅಬ್ಬೆಯರು ಇದ್ದಾರೆ ಅಮ್ಮ ಈಗ ಇರುವಲ್ಲಿ. ನೃಪತುಂಗನ ಮಗಳ ಹೆಸರು ಚಂದ್ರಬಲಬ್ಬೆ. ತುಳುವಿನಲ್ಲಿ ಈಗಲೂ ಅಮ್ಮೆ ಅಂದರೆ ಅಪ್ಪನೇ. ಅಪ್ಪನ ಜಾಗದಲ್ಲಿ ಅಬ್ಬೆಯನ್ನು/ಅಮ್ಮನನ್ನು ಕೂರಿಸಿ ತಿರುಗಾ ಮುರುಗಾ ಮಾಡಲಾಗಿದೆ. ರುಂಡ ಎಂದರೆ ಕುತ್ತಿಗೆ ಮೇಲಿನದ್ದು, ಮುಂಡ ಅಂದರೆ ಕೆಳಗಿನದ್ದು, ಆದರೂ ತಲೆಗೆ ಸುತ್ತುವ ವಸ್ತ್ರ ಮುಂಡಾಸು, ರುಂಡಾಸು ಅಲ್ಲ. ಮುಂಡ ಅಂದರೆ ಮೊದಲು ತಲೆ ಆಗಿದ್ದಿರಬೇಕು, ಈಗ ಉಲ್ಟಾ ಆಗಿದೆ.

ಇನ್ನೊಂದು ಭಾಷಾ  ಪ್ರಕ್ರಿಯೆ ಅಂದರೆ ಸ್ವೀಕರಣ
ಸ್ವೀಕರಣ : ಬೇರೆ ಭಾಷೆಗಳಿಂದ ಸಾಲ ಪಡೆಯುವುದು, ಕೆಲವೊಮ್ಮೆ ಸಾಲ ಪಡೆದದ್ದನ್ನು ತಿರುಚುವುದು. ಬೆಂಗಳೂರಿನಲ್ಲಿ ಕೂತಲ್ಲಿ ನಿಂತಲ್ಲಿ " ಬೇಜಾನ್ " ಅನ್ನದವರು ಯಾರಿದ್ದಾರೆ ? ಜಾನ್ ಅಂದರೆ ಉರ್ದುವಿನಲ್ಲಿ ಜೀವ. ಹಾಗಾಗಿ ಬೇಜಾನ್ ಅಂದರೆ ಜೀವ ಇಲ್ಲದಿರುವುದು, ನಿರ್ಜೀವವಾಗಿರುವುದು. ಇದನ್ನು ಯಾರೋ ಪುಣ್ಯಾತ್ಮ ಬೇಜಾನ್ ತಲೆ ಓಡಿಸಿ ಸಿಕ್ಕಾಪಟ್ಟೆ,ಅಪಾರ, ಬಹಳಷ್ಟು ಅನ್ನುವ ಅರ್ಥಕ್ಕೆ ತಿರುಗಿಸಿದ್ದಾನೆ. ಇದು ಮತ್ತು ಸಕತ್ ಅನ್ನುವ ಪದ ಇಲ್ಲದಿದ್ದರೆ ಬೆಂಗಳೂರಿಗರು ಬದುಕುಳಿಯುವುದು ಕಷ್ಟ ಅನ್ನುವ ಪರಿಸ್ಥಿತಿ ಇದೆ! ಇನ್ನೂ ಕೆಲವು ವಿಚಿತ್ರ ಪ್ರಯೋಗಗಳು : ಬಂದ್ಬಿಟ್ಟು . ಕೆಲವರು ಮಾತಿಗೊಮ್ಮೆ ಬಂದ್ಬಿಟ್ಟು ,ಬಂದ್ಬಿಟ್ಟು, ಬಂದ್ಬಿಟ್ಟು,ಬಂದ್ಬಿಟ್ಟು ಅಂತ ಹೇಳುವುದು ಕೇಳಿ, ಈ ಪುಣ್ಯಾತ್ಮ ಎಷ್ಟು ಸಲ ಬರ್ತಾರೆ ಮತ್ತು ಯಾಕೆ ಹೀಗೆ ಬರ್ತಾರೆ ಅಂತ ತಲೆ ಕೆರೆದುಕೊಂಡಿದ್ದೆ . ಆಮೇಲೆ ಗೊತ್ತಾಯಿತು ಇದು ತಮಿಳ್ ಸ್ಟೈಲ್ ಅಂತ . ಕೇಳ್ಪಟ್ಟೆ ಅನ್ನುವುದು ಮತ್ತೊಂದು ಅಂತದೇ ಪ್ರಯೋಗ . ಇದೇನಿದು ಕೇಳ್ಪಟ್ಟೆ ಅಂತ ಮೊದಮೊದಲು ಯೋಚನೆ ಮಾಡ್ತಾ ಇದ್ದೆ. ಈಗ ಅಭ್ಯಾಸ ಆಗಿದೆ.

ಮಂಗಳೂರಿನ ಮಾರೆ(ಮಹಾರಾಯವನ್ನು ಕುಗ್ಗಿಸಿದರೆ ಮಾರಾಯ, ಮಾರಾಯವನ್ನು ಸ್ವಲ್ಪ ಒತ್ತಿದರೆ ಮಾರೆ) ಮಾರೆ ಕೇಳಿ ಅಭ್ಯಾಸ ಆದವರಿಗೆ ಬೆಂಗಳೂರಿನ ಮಚ್ಚಾ ಎಂಬುದು ವಿಚಿತ್ರ ಅನ್ನಿಸಬಹುದು , ಈ ತಮಿಳು ಭಾಷೆಯ ಪದಕ್ಕೆ ಭಾವ ಅಂತ ಮೂಲಾರ್ಥ, ಹಿಂದಿಯ ಸಾಲಾ ಇದ್ದ ಹಾಗೆ. ಇನ್ನೊಂದು ವಿಚಿತ್ರ ಪ್ರಯೋಗ "ಕಿಂಡಲ್" ಮಾಡೋದು . ಇದ್ಯಾಕಪ್ಪ ಬೆಂಗಳೂರಿನಲ್ಲಿ ಹುಡುಗಿಯರನ್ನ ಹೀಗೆ ಕಿಂಡಲ್ ಮಾಡೋದು ಅಂತ ಅನ್ನಿಸ್ತಾ ಇತ್ತು . ಆಮೇಲೆ ಗೊತ್ತಾಯ್ತು , ತಮಿಳಿನಲ್ಲಿ ಯಾರೋ ಕಿಂಡಲ್ ಅನ್ನುವ ಶಬ್ದವನ್ನ ಚುಡಾಯಿಸುವುದು ಅನ್ನುವ ಅರ್ಥದಲ್ಲಿ ಬಳಕೆ ಮಾಡಿ ಪ್ರಸಿದ್ದಿಗೆ ತಂದಿದ್ದರಂತೆ (ಇಂಗ್ಲೀಷಿನಲ್ಲಿ ಅದಕ್ಕೆ ಆ ಅರ್ಥ ಇಲ್ಲ). ತಮಿಳರ ತಪ್ಪನ್ನ ನಾವೂ ಅನುಕರಣೆ ಮಾಡದೇ ಇದ್ದರೆ ಹೇಗೆ ? ಕಿಂಡಲ್ ಇಲ್ಲಿಗೂ ಬಂತು, ಉಳಿಯಿತು, ತಪ್ಪೇ ಆದರೂ. ಕಂತ್ರಿ ಅನ್ನುವುದು ಇಂಗ್ಲಿಷಿನ countryಯ ಕನ್ನಡ ಅವತಾರ ಆದರೆ ಆಶ್ಚರ್ಯ ಆಗಬಹುದು. Country dog ಕಂತ್ರಿ ನಾಯಿ ಇವನ್ನು ಹೋಲಿಸಿ ನೋಡಬಹುದು. ಮಾರ್ಕೆಟ್ ಅನ್ನುವುದಕ್ಕೆ ಯಾರೋ ಬುದ್ದಿವಂತರು ಅದೇ ರೀತಿ ಉಚ್ಚಾರಣೆ ಇರುವ ಮಾರುಕಟ್ಟೆ ಶಬ್ದ ಸೃಷ್ಟಿ ಮಾಡಿದ್ದಾರೆ. ಬಲ್ಬ್ ಅಂದರೆ ಮೂಲದಲ್ಲಿ ಗಡ್ಡೆ ಅನ್ನುವ ಅರ್ಥ. ನಾವು ಕುಡಿಯುವ ಕಾಫಿ ಮೂಲತಃ ಅರೇಬಿಯಾದ್ದು, ಈ ಕಾಫಿ ಅನ್ನುವ ಪದಕ್ಕೆ ಪೋರ್ಚುಗೀಸ್ ಭಾಷೆಯ Cafe ಅನ್ನುವುದೇ ಮೂಲ, ಹಾಗಾದರೆ ಕೆಫೆ ಕಾಫಿ ಡೇ ಅಂದರೆ ಏನು ? Coffee Coffee day ಅಂತಲೇ ಆಗುತ್ತದೆ ಅಲ್ಲವೇ ?! ರಾಜೀನಾಮೆ ಅಂದರೆ ಮೂಲದಲ್ಲಿ ಪಾರಸಿ ಭಾಷೆಯಲ್ಲಿ ರಾಜೀ + ನಾಮಾ , ರಾಜೀ = compromise , ನಾಮಾ ಅಂದರೆ ಬರಹದ ರೂಪದಲ್ಲಿ ಇರುವುದು. ಅಂದರೆ ಬರಹದ ರೂಪದಲ್ಲಿರುವ ಕಾಂಪ್ರೊಮೈಸ್. ಮೊನ್ನೆ ಮಂತ್ರಿ ಜಾರ್ಜ್ ಕೊಟ್ಟ ರಾಜೀನಾಮೆ ಪತ್ರ ಬರಹದ ರೂಪದಲ್ಲಿ ಮಾಡಿದ ರಾಜಿಯೇ ಒಂದು ರೀತಿಯಲ್ಲಿ!

ಕಣ್ಣಿಗೆ ಅಡಕವಾದದ್ದು ಕಣ್ಣಡಕ, ಜನರ ಬಾಯಲ್ಲಿ ಕನ್ನಡಕ ಆಗಿದೆ. ಮಸೂರ ಪಾಕ ಅಂದರೆ ಕಡಲೆ ಹಿಟ್ಟಿನ ಪಾಕ, ಈ ಮಸೂರ ಪಾಕ ಜನರ ಬಾಯಿಗೆ ಸಿಕ್ಕಿ ಮೈಸೂರು ಪಾಕ್ ಆಗಿದೆ ಅಂತ ವೈ ಎನ್ಕೆ ಒಂದು ಕಡೆ ಬರೆದಿದ್ದಾರೆ.
ಅಂತೂ ಯಾವುದೇ ಒಂದು ಶಬ್ದಕ್ಕೆ ಎಲ್ಲಾ ಕಾಲಕ್ಕೂ ಒಂದೇ ಅರ್ಥ ಇರಬೇಕೆಂದೇನೂ ಇಲ್ಲ. ಒಂದು ಶಬ್ದದ ಅರ್ಥ ಬದಲಾಗದ ಹಾಗೆ ಕಾಯುವ ಕಾವಲುಗಾರರು, ಪೊಲೀಸರು ಇಲ್ಲ. ಹಾಗಾಗಿ ಹೀಗೆಲ್ಲ ಆಗದೆ ವಿಧಿಯಿಲ್ಲ!

Thursday, 21 July 2016

ಸಿನೆಮಾ ಮತ್ತು ಕಳ್ಳತನ

ಬಹಳ ದಿನಗಳಿಂದ ತಲೆಯಲ್ಲಿ ತಿರುಗುತ್ತಿದ್ದ ವಿಷಯ ಸಿನೆಮಾ ಮತ್ತು ಕಳ್ಳತನ! ದಿನ ಬೆಳಗಾದರೆ ವಾಟ್ಸ್ ಅಪ್ಪಿನಲ್ಲೋ , ಫೇಸ್ಬುಕ್ಕಿನಲ್ಲೋ ಯಾರಾದರೂ ನಿನ್ನೆ ನೋಡಿದ ಈ ಚಿತ್ರ ಮೊನ್ನೆ ನೋಡಿದ ಆ ಸಿನೆಮಾದ ಹಾಗಿದೆ, ಇದನ್ನು ಅಲ್ಲಿಂದ ಕದ್ದಿದ್ದಾರಂತೆ, ಅದನ್ನು ಓ ಇಲ್ಲಿಂದ ಹಾರಿಸಿದ್ದಾರಂತೆ ಎಂದು ಮುಂತಾಗಿ ಪತ್ತೇದಾರಿಕೆ ಮಾಡಿ ಹೇಳುತ್ತಲೇ ಇರುತ್ತಾರೆ! ಆದರೆ ಇದು ಅಷ್ಟು ಸುಲಭದ ವಿಷಯ ಅಲ್ಲ ಅಂತ ನಿಮಗೂ ಅನ್ನಿಸಲಿ ಅಂತ ಇಷ್ಟು ಕೊರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ.

ಚೌರ್ಯಮೀಮಾಂಸೆ ಮಾಡುವ ಮೊದಲು ಒಂದು ಸಲ 2013ಕ್ಕೆ ಹೋಗಿ ಬರೋಣ. ಆಗ ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ ಅನ್ನುವ ಚಿತ್ರ ಬಂದಿತ್ತು, ಬೆಂಗಳೂರಿಗೆ ಕನ್ನಡಿ  ಹಿಡಿಯುವವರು ಒಬ್ಬರು ಬರೆದ ವಿಮರ್ಶೆ ಓದುತ್ತಿದ್ದೆ. ಇದು 50 First Datesನ ಕನ್ನಡ ಅವತಾರವೇನೋ ಅನ್ನುವಂತೆ ಬರೆದಿದ್ದರು, ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದು ಅದರ ಕಾಪಿಯೇ ಅಂತ ಬರೆದೂ ಬಿಟ್ಟರು! ಎರಡನ್ನೂ ನೋಡಿದ್ದ ನನಗೆ ಇದೇನಪ್ಪ ಕರ್ಮ ಅನಿಸಿತ್ತು. ಇಪ್ಪತ್ತೈದು ದೇಶಗಳ ಮೂವತ್ತೆಂಟು ಪತ್ತೇದಾರರು ಹುಡುಕಿದರೂ ಇದರ ಒಂದೇ ಒಂದು ದೃಶ್ಯ ಅದರ ಹಾಗಿರುವುದು ಸಿಕ್ಕಲಿಕ್ಕಿಲ್ಲ, ಎರಡೂ ಚಿತ್ರಗಳಲ್ಲಿ ಹೀರೋಯಿನ್ನಿಗೆ ಒಂದೇ ಖಾಯಿಲೆ ಇತ್ತು ಅಂದ ಮಾತ್ರಕ್ಕೆ ಕಾಪಿ ಮಂತ್ರ ಜಪಿಸುವ ಖಾಯಿಲೆ ನಮ್ಮ ಜನಕ್ಕೆ ಯಾಕೆ ಬಂತಪ್ಪ ಅಂತ ಸುಸ್ತಾಗಿದ್ದೆ. ಜಗತ್ತಿನಲ್ಲಿ ಬೇರೆ ಯಾರಿಗೂ ಅದೇ ಖಾಯಿಲೆ ಇರಬಾರದು ಅಂತ ಏನು ಕಾನೂನು ಇದೆಯೇ . ಹಾಗೆ ನೋಡಿದರೆ ಇವರುಗಳು ಬರೆಯುವ ವಿಮರ್ಶೆಗಳೂ ಈಗಾಗಲೇ ಸಾವಿರ ಸಲ ಬಂದಿರುವ ವಿಮರ್ಶೆಗಳ ಕಾಪಿಯೇ, ಚಿತ್ರದ ಕತೆಯನ್ನು ಉಂಡುಂಡೆಯಾಗಿ ಬರೆದು, ಕೊನೆಗೆ ಪಲ್ಯಕ್ಕೆ ಒಗ್ಗರಣೆ ಹಾಕಿದ ಹಾಗೆ ಛಾಯಾಗ್ರಹಣ ಚೆನ್ನಾಗಿದೆ, ಚಿತ್ರಕತೆ ಅಷ್ಟಕ್ಕಷ್ಟೇ, ಎಡಿಟಿಂಗ್ ಸರಿಯಿಲ್ಲ ಅಂತ ಸೇರಿಸಿರುವ ಅದದೇ ಸಾಲುಗಳಿರುವ ಅದೆಷ್ಟು ಸಾವಿರ ವಿಮರ್ಶೆಗಳ ಭಾರದಿಂದ ಫಣಿರಾಯ ತಿಣುಕಾಡಿಲ್ಲ! ಚಿತ್ರ ಮಾಡುವವರಿಗೆ ಕದಿಯುವ ಚಾಳಿಯಿರುವಷ್ಟೇ ನಮ್ಮ ಜನಗಳಿಗೆ ಸುಮ್ ಸುಮ್ನೆ ಕದ್ದ ಆರೋಪ ಹೊರಿಸುವ ಚಟವೂ ಇದೆ ಅಂದರೆ ತಪ್ಪಾಗಲಿಕ್ಕಿಲ್ಲ!

ಮಹಾ ಮೇಧಾವಿಯಾದ ನಿರ್ದೇಶಕ ಹಬೆಯಾಡುವ ಚಾ ಕುಡಿಯುತ್ತಾ ಕೂತಿರುತ್ತಾನೆ, ಒಮ್ಮೆಲೇ ಧಡಾರನೆ ಸಿಡಿಲು ಅಪ್ಪಳಿಸಿದ ಹಾಗೆ ಚಿತ್ರದ ಕತೆ ಆತನ ತಲೆಗೆ ಬರುತ್ತದೆ, ಚಾ ಮುಗಿಯುವಷ್ಟರಲ್ಲಿ ಆತನ ತಲೆಯಲ್ಲಿ ಭೋರ್ಗರೆದುರುಳುರುಳುವ ಜಲಪಾತದ ಹಾಗೆ ಇಡೀ ಎರಡೂವರೆ ಘಂಟೆಗಳ ಚಿತ್ರಕತೆ ಸುರಿದು ಹರಿದು ಉಕ್ಕಿ ತಯಾರಾಗಿ ಕೂತಿರುತ್ತದೆ, ಇದು ಜನಸಾಮಾನ್ಯರ ತಲೆಗೆ ಬರುವ ಚಿತ್ರ. ಈ ಮೂಢನಂಬಿಕೆಯೇ ಇಂತಹಾ ಆರೋಪಗಳಿಗೆ ಕಾರಣವೂ ಕೂಡ.

ಮೊನ್ನೆ ಮಧ್ಯಾಹ್ನ ನೋಡಿದ ಘಟನೆಯೊಂದು ಕೈ ಹಿಡಿದು ಜಗ್ಗುತ್ತದೆ, ಅದಕ್ಕೆ ಕಳೆದ ವರ್ಷ ನೋಡಿದ ಚಿತ್ರವೊಂದರ ದೃಶ್ಯವನ್ನು ಸ್ವಲ್ಪ ತಿರುಗಿಸಿ ಬದಲಾಯಿಸಿ ಸೇರಿಸುತ್ತಾನೆ, ನಡುವಿನಲ್ಲಿ ಮತ್ತೊಂದು ಚಿತ್ರದ ದೃಶ್ಯ ಹೀಗೆ ಬದಲಾಯಿಸಿ ತಂದರೆ ಹೇಗೆ ಅಂದುಕೊಳ್ಳುತ್ತಾನೆ, ಕೊನೆಯ ದೃಶ್ಯ ಓದಿ ಕೆಳಗಿಡಲಾರೆ ಅನ್ನಿಸಿದ್ದ ಆ ಕಾದಂಬರಿಯ ಹಾಗಿರಬೇಕು ಅಂದುಕೊಳ್ಳುತ್ತಾನೆ, ನಡುವಿನ ಕತೆ ಕಳೆದ ತಿಂಗಳು ನೋಡಿದ್ದ ಚಿತ್ರದ ಆರಂಭದ ಹಾಗೆ ಓಡಬೇಕು ಅಂತ ಲೆಕ್ಕ ಹಾಕುತ್ತಾನೆ. ಇದು ಸ್ವಲ್ಪ ವಾಸ್ತವಕ್ಕೆ ಹತ್ತಿರದ ಚಿತ್ರಣ. ಇದು ಬರೀ ಚಿತ್ರರಂಗದ ಕತೆ ಅಲ್ಲ. ಎಲ್ಲ ಕ್ರಿಯೇಟಿವಿಟಿಯೂ ಹೀಗೆಯೇ. ಅದು ಓದಿದ್ದನ್ನು, ನೋಡಿದ್ದನ್ನು, ಕೇಳಿದ್ದನ್ನು ಗುದ್ದಿ, ಚಿವುಟಿ, ಕಲಸಿ, ಬೆರೆಸಿ, ಎಳೆದು, ಒತ್ತಿ ಒಂದು ಹೊಸ ಹದಕ್ಕೆ ತಂದ ಹಾಗೆ. ಅಜ್ಜಿ ಕೊಟ್ಟ ಮಾವಿನ ಹಣ್ಣು, ಸಂತೆಯಿಂದ ತಂದ ದಾಳಿಂಬೆ, ಸೂಪರ್ ಮಾರ್ಟಿನಲ್ಲಿ ಹೆಕ್ಕಿದ ಸೇಬು, ಮನೆಯ ಹಿಂದೆ ಇದ್ದ ಚಿಕ್ಕು ಮರದ ಚಿಕ್ಕು ಎಲ್ಲ ಸೇರಿಸಿ ಮಾಡಿದ ನಮ್ಮದೇ ಸ್ವಂತದ(!) ಫ್ರುಟ್ ಸಲಾಡಿನಂತದ್ದು ಸೃಜಿಸುವ ಕ್ರಿಯೆ.

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಕೇಳಿದ್ದೀರಿ, ಅದರಲ್ಲಿ ಬದುಕಿದು ಜಟಕಾ ಬಂಡಿ,ಇದು ವಿಧಿ ಓಡಿಸುವ ಬಂಡಿ ಅನ್ನುವ ಸಾಲು ಬರೆಯುವಾಗ ಹಂಸಲೇಖರ ತಲೆಯಲ್ಲಿ ಡಿವಿಜಿ ಬರೆದ, ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅನ್ನುವ ಸಾಲು ಇದ್ದಿರಬೇಕು, ಇದರಿಂದ ಹಂಸಲೇಖರಿಗೆ ಕಳಂಕವೇನೂ ತಟ್ಟಿಲ್ಲವಲ್ಲ. 
ಹಳಗನ್ನಡದ ಬಲಿಷ್ಠಕವಿ ರನ್ನ ಬರೆದಿರುವ ಈ ಸಾಲು ನೋಡಿ : "ಈ ಬೂತೆನ್ನ ಸರಂಗೇಲ್ದೊಡಲ್ಲದೆ ಪೊರಮಡುವನಲ್ಲಮ್. ಇವಂಗಾನೆ ಸಾಲ್ವೆಮ್" (ನನ್ನ ಸ್ವರ ಕೇಳದೆ ಈ ಭೂತ ಹೊರ ಬರಲಾರದು, ಇವನಿಗೆ ನಾನೇ ಸಾಕು ಬಿಡಿ ಅಂತ ಭೀಮ ಹೇಳುವ ಮಾತು), ಇದನ್ನು ಮಹಾಕವಿ ಪಂಪನ ಈ ಸಾಲುಗಳ ಪಕ್ಕದಲ್ಲಿ ಇಡಿ : ಎನ್ನ ಸರಂಗೇಲ್ದಲ್ಲದೀ ಬೂತು ಪೊರಮಡುವನಲ್ಲಮ್. ಈತಂಗಾನೆ ಬಲ್ಲೆಂ. ಪಂಪನ ಸಾಲನ್ನು ರನ್ನ copy paste ಮಾಡಿದ ಹಾಗಿದೆ! ಸರಿ, ಈಗ ಪಂಪನ ಈ ಸಾಲುಗಳನ್ನು ನೋಡಿ :

ಮಹಾಪ್ರಳಯ ಭೈರವ ಕ್ಷುಭಿತ ಪುಷ್ಕಳಾವರ್ತಮಾ 
ಮಹೋಗ್ರರಿಪುಭೂಭುಜ ಶ್ರವಣ ಭೈರವಾಡಂಬರಂ
ಆಯಿತಲ್ಲ, ಈಗ ಸಂಸ್ಕೃತ ನಾಟಕವೊಂದರ ಈ ಸಾಲು ನೋಡಿ :
ಮಹಾಪ್ರಲಯ ಮಾರುತ ಕ್ಷುಭಿತ ಪುಷ್ಕಲಾವರ್ತಕ
ಪ್ರಚಂಡ ಘನಗರ್ಜಿತ ಪ್ರತಿರವಾನುಕಾರೀ ಮುಹುಃ

ಇದರಿಂದ ಪಂಪನ ಪೆಂಪು ಕಡಿಮೆಯೇನೂ ಆಗುವುದಿಲ್ಲ. ಇದರ ಕುರಿತಾಗಿ ತೀನಂಶ್ರೀ ಅವರು ಹೇಳಿರುವುದನ್ನು ನೋಡಿ : "ಹಿಂದಿನವರಿಗೆ ಋಣಿಯಲ್ಲದ ಕವಿ ಜಗತ್ತಿನಲ್ಲಿ ಎಲ್ಲುಂಟು ? ರನ್ನನು ಪಂಪನ ಕಾವ್ಯಭಾಗದ ತಳಹದಿಯ ಮೇಲೆ ತನ್ನ ಕೃತಿಮಂದಿರವನ್ನು ಕಟ್ಟಿದನು; ಪಂಪನು ಕಾಳಿದಾಸ, ಭಾರವಿ, ಮಾಘ , ಭಟ್ಟ ನಾರಾಯಣಾದಿಗಳಿಂದ ಬೇಕಾದಷ್ಟು ಸಹಾಯ ಪಡೆದನು ; ಕಾಳಿದಾಸನು ಕೂಡ ಅಲ್ಲಲ್ಲಿ ಅಶ್ವಘೋಷನನ್ನು ಅನುಸರಿಸುವಂತೆ ತೋರುತ್ತದೆ. ಅಶ್ವಘೋಷನ ಕಾವ್ಯದಲ್ಲಿ ವಾಲ್ಮೀಕಿ ರಾಮಾಯಣದ ಛಾಯೆ ಗೋಚರವಾಗುತ್ತದೆ -- ಈ ಪರಂಪರೆಗೆ ಕೊನೆಯೆಲ್ಲಿ ! "

ನಮ್ಮ ನವ್ಯ ಸಾಹಿತಿಗಳು ವಾರಕ್ಕೆರಡು ಸಲ ಜಪ ಮಾಡುತ್ತಿದ್ದ ಹೆಸರು T. S. Eliotನದ್ದು. ಆನಂತಮೂರ್ತಿಯವರು ಬರೆದಿರುವ ಈ ಸಾಲುಗಳನ್ನು ನೋಡಿ: "ಉತ್ತಮಕಾವ್ಯದಲ್ಲಿ ಕವಿ ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದಾನೆ ಎನಿಸುತ್ತದೆ ಅಥವಾ ತನ್ನಂಥವರ ಜೊತೆ ಮಾತಾಡುತ್ತಿದ್ದಾನೆ ಎಂದೆನಿಸುತ್ತದೆ, ಇನ್ನೂ ಉತ್ತಮ ಕಾವ್ಯದಲ್ಲಿ, ಇಲ್ಲಿ ಈ ಕವನದಲ್ಲಿಯೇ ಕವಿ ತಾನು ಭಾವಿಸುವ ಕ್ರಮವನ್ನು ಅಭಿನಯಿಸಿ ತೋರಿಸುತ್ತಿದ್ದಾನೆ ಎನಿಸುತ್ತದೆ" ಇದನ್ನು ಎಲಿಯಟ್ಟನ ಈ ಸಾಲುಗಳ ಜತೆಗಿಟ್ಟು ನೋಡಿ : “The first voice is the voice of the poet talking to himself–or to nobody. The second is the voice of the poet addressing an audience, whether large or small. The third is the voice of the poet when he attempts to create a dramatic character speaking in verse.”
ಈಗ ಎಲಿಯಟ್ ಬರೆದಿರುವ ಈ ಸಾಲನ್ನು ಓದಿ : 
"The Chair she sat in, like a burnished throne, / Glowed on the marble."
ಇದನ್ನು ಆತ ಷೇಕ್ಸಪಿಯರ್ ಬರೆದಿರುವ ಈ ಸಾಲಿಂದ ಎತ್ತಿದ್ದು ಪ್ರಸಿದ್ಧವಾಗಿದೆ : "The barge she sat in, like a burnish'd throne, / Burn'd on the water". ಇನ್ನು ಷೇಕ್ಸಪಿಯರ್ ಅಂತೂ ಇಡೀ ಕತೆಗಳನ್ನೂ ಎಷ್ಟೋ ಸಾಲುಗಳನ್ನೂ ಹಾಗಾಗೇ ಎಗರಿಸಿದ್ದಾನೆ. ಆದರೂ ಅವನ ಕೀರ್ತಿ ಪತಾಕೆ ಪಟ ಪಟಿಸುತ್ತಲೇ ಇದೆ. ಎಷ್ಟು ದೊಡ್ಡ ಲೇಖಕರನ್ನು ತೆಗೆದುಕೊಂಡರೂ ಅವರಿಗೆ ಸ್ವಲ್ಪವಾದರೂ ಋಣಭಾರ ಇರುವುದನ್ನು ತೋರಿಸಬಹುದು.  

ಹಾಲಿವುಡ್ಡಿನ ಮಹಾನ್ ಪ್ರತಿಭೆ Christopher Nolan ತನ್ನ interstellar ಚಿತ್ರದ ಬಗ್ಗೆ ಮಾತಾಡುತ್ತಾ, ನಾನು ಸುಮಾರು ಚಿತ್ರಗಳಿಂದ ಎತ್ತಿದ್ದೇನೆ ಅಂತ ಒಮ್ಮೆ ತಮಾಷೆ ಮಾಡಿದ್ದ. ಅತ್ಯಂತ ಕ್ರಿಯಾಶೀಲ, daringly original, ಯಾರೂ ಮಾಡಿರದ್ದನ್ನು ಮಾಡುವವ ಅನ್ನಿಸಿಕೊಂಡಿರುವ ನೋಲನ್ನನೇ ಹೀಗಂದರೆ ಚಿಲ್ಲರೆ ಪಿಲ್ಲರೆಗಳ ಕತೆ ಹೇಗಿರಬೇಡ! ಟೈಟಾನಿಕ್ ಆಗಲೇ ನಾಲ್ಕೈದು ಸಲ ಬಂದಿದ್ದ ಕತೆ. ಟರ್ಮಿನೇಟರ್ ಸೈನ್ಸ್ ಫಿಕ್ಷನ್ ಕೃತಿಗಳಲ್ಲಿ ಇದ್ದ ಸರಕೇ. ಜುರಾಸಿಕ್ ಪಾರ್ಕ್ ಬರುವ ಮೊದಲೇ ಡೈನೋಸಾರ್ಗಳ ಬಗ್ಗೆ ಒಂದಷ್ಟು ಚಿತ್ರಗಳು ಇದ್ದವು. ಅದ್ಭುತ ಸ್ಟೈಲಿಸ್ಟ್ ಅನ್ನಿಸಿಕೊಂಡ, ಗುಡ್ ಬ್ಯಾಡ್ ಅಗ್ಲೀ ತರದ ಕೌಬಾಯ್ ಚಿತ್ರಗಳಿಂದ ಹೆಸರು ಮಾಡಿದ್ದ Sergio Leoneಯ ಮೇಲೆ ಕೃತಿ ಚೌರ್ಯದ ಕೇಸೇ ಜಡಿದಿತ್ತು. ನಮ್ಮ ಸಲೀಂ ಜಾವೇದ್ ರ ಶೋಲೆ ಕೂಡ ಐದಾರು ಚಿತ್ರಗಳ ಕಲಸು ಮೇಲೋಗರವೇ, ಧರ್ಮೇಂದ್ರ ನೀರಿನ ಟಾಂಕಿಯಲ್ಲಿ ಮಾಡುವ ನಾಟಕ The secret of Santa Vittoriaದಲ್ಲಿ ಬಂದದ್ದೇ. ಅಷ್ಟಾದರೂ ಶೋಲೆ ಸ್ವಂತ ಚಿತ್ರವೇ. ಒಂದು ಹತ್ತು ನಿಮಿಷಗಳ ಸರಕು ಎತ್ತಿದ್ದು ಅಂತಲೇ ಇಟ್ಟುಕೊಂಡರೂ ಇನ್ನು ಮೂರು ಘಂಟೆಗಳ ಚಿತ್ರಕತೆ ಕಷ್ಟ ಪಟ್ಟು ಬರೆದದ್ದೇ. ಬಾಹುಬಲಿಯಲ್ಲಂತೂ ಜಾಗತಿಕ ಸಿನೆಮಾಗಳನ್ನು ನೋಡಿರುವವರಿಗೆ ಮತ್ತು ತರಾಸು, ಕೊರಟಿ ಶ್ರೀನಿವಾಸ ರಾವ್ ಅವರ ಕಾದಂಬರಿಗಳನ್ನು ಓದಿರುವವರಿಗೆ ಯಾವ್ಯಾವುದು ಎಲ್ಲಿಂದ ಬಂದಿದೆ ಅಂತ ಎದ್ದು ಕಾಣುತ್ತದೆ. ಈ ಸಲ ಆಸ್ಕರ್ ಗೆದ್ದಿರುವ ಶೇಪ್ ಆಫ್ ವಾಟರ್ ಅದೆಷ್ಟು ಸಲ ಬಂದಿದ್ದ ಕಥೆಯೋ. ನಮ್ಮ ಪ್ರಾಚೀನರಿಗಂತೂ ಹೊಸ ಕಥೆಗಳನ್ನು ಹುಟ್ಟಿಸುವ ಆಸಕ್ತಿಯೇ ಇದ್ದಂತಿಲ್ಲ. ಅವರಿಗೆ ಏನಿದ್ದರೂ ರಾಮಾಯಣ, ಮಹಾಭಾರತಗಳನ್ನು, ಪುರಾಣಗಳನ್ನು ಇನ್ನೊಮ್ಮೆ ಮತ್ತೊಮ್ಮೆ ಮಗುಳೊಮ್ಮೆ ಹೊಸ ತರದಲ್ಲಿ ಹೇಳುವುದರಲ್ಲಿಯೇ ಉತ್ಸುಕತೆ,ತೃಪ್ತಿ. 

Quentin Tarantinoನದ್ದು ಇನ್ನೂ ವಿಚಿತ್ರ ಕೇಸು. ಪ್ರಭಾವ ಯಾವುದು, "ಎತ್ತಿದ್ದು" ಯಾವುದು, Tribute ಯಾವುದು, ಹಾಗಾಗೇ ತಂದದ್ದು ಎಷ್ಟು ಅಂತ ಹೇಳುವುದು ಕಷ್ಟ ಅವನ ವಿಚಾರದಲ್ಲಿ. ಎತ್ತಿದರೂ ಸಾಕಷ್ಟು ಸ್ವಂತಿಕೆ ಮೆರೆಯುತ್ತಾನೆ ಅನ್ನಬಹುದು. ಒಟ್ಟು ಒಂದು ಇನ್ನೂರೈವತ್ತು ಚಿತ್ರಗಳ ಪ್ರಭಾವವಾದರೂ ಅವನ ಚಿತ್ರಗಳಲ್ಲಿ ಕಾಣುತ್ತದೆ ಅನ್ನಬಹುದು. ಅಷ್ಟರ ಮಟ್ಟಿಗೆ ಆತ ಹಾಲಿವುಡ್ಡಿನ ಓಂ ಪ್ರಕಾಶ್ ರಾವೇ!! Reservoir Dogs ನಲ್ಲಂತೂ ಒಂದಿಡೀ ಕತೆಯನ್ನೇ ಎತ್ತಿದ್ದಾನೆ, ಇದನ್ನು ಬರೀ ಪ್ರಭಾವ ಅಂತ ಒರೆಸಿ ಹಾಕುವುದು ಕಷ್ಟ. ಕಿಲ್ ಬಿಲ್ ಅಂತೂ ಅದೆಷ್ಟೋ ಚಿತ್ರಗಳ ಕಿಚಡಿಯೇ. ಅದರಲ್ಲಿ ಕಡೆಗೆ ಹೀರೋಯಿನ್ ಹಾಕುವ ಹಳದಿ ಟ್ರಾಕ್ ಸೂಟು ಕೂಡ ಒಂದು ಚೈನೀಸ್ ಚಿತ್ರದ್ದು! ಇಡೀ ಕತೆಯನ್ನೇ ಎಗರಿಸಿದರೂ ಸ್ವಂತ ಕ್ರಿಯಾಶೀಲತೆಯೂ ಖಂಡಿತಾ ಇದೆ ಟರಾಂಟಿನೋ ಚಿತ್ರಗಳಲ್ಲಿ.

ಹಾಗಾದರೆ ಸ್ವಂತಿಕೆ ಅಂದರೆ ಏನು ? ಕುವೆಂಪು ಒಂದು ಕಡೆ ಹೀಗೆ ಹೇಳಿದ್ದಾರೆ : ಅಂಗಡಿಯಿಂದ ಯಾರು ಬೇಕಾದರೂ ತಾಮ್ರದ ತಂತಿಯನ್ನು ಕೊಂಡು ತರಬಹುದು. ಅದನ್ನು ಮುಟ್ಟಿದರೆ ಏನೋ ಆಗುವುದಿಲ್ಲ. ಅದು ವಿದ್ಯುತ್ ಕಂಬವನ್ನೇರಿದ ಮೇಲೆ ತಾನೆ ಅದರ ಗೌರವ ಬೇರೆಯಾಗುತ್ತದೆ! ಆಗ ಅದನ್ನು ಮುಟ್ಟಿದವನಿಗೆ ಅನುಭವ ಗೋಚರವಾಗುತ್ತದೆ ಅಗೋಚರವಾದ ಶಕ್ತಿಯ ತಟಿಚ್ಚುಂಬನ!

ಇದು ಒಪ್ಪಬೇಕಾದ ಮಾತು. ತಾಮ್ರದ ತಂತಿಯನ್ನು ಎಲ್ಲಿಂದಾದರೂ ತನ್ನಿ, ಕಂಬ ನೀವೇ ನೆಡಬೇಕು , ತಂತಿ ನಿಮ್ಮದೇ ಶೈಲಿಯಲ್ಲಿ ಬಿಗಿದು ಕಟ್ಟಬೇಕು, ತಂತಿಗೆ ವಿದ್ಯುತ್ ನಿಮ್ಮದೇ ಇರಬೇಕು. ಹಣ್ಣು ಎಲ್ಲಿಂದಾದರೂ ತನ್ನಿ, ಸಲಾಡ್ಗೆ ನಿಮ್ಮ ರುಚಿಯೇ ಇರಬೇಕು, ಬರೀ ಮಾವಿನ ಹಣ್ಣಿನಲ್ಲಿ, ಸೇಬಿನಲ್ಲಿ ಇಲ್ಲದ ರುಚಿ, ಸ್ವಾದ ಸಲಾಡಿನಲ್ಲಿ ಇರಲೇಬೇಕು. ತಂದದ್ದಕ್ಕೆ ಏನಾದರೂ ಸೇರಿಸಿ ಮೂಲದಲ್ಲಿ ಇಲ್ಲದ ಹೊಸತೇನಾದರೂ ಕೊಡಲೇ ಬೇಕು. ಹೊಸತನ ಇರುವುದು ವಿವರಗಳಲ್ಲಿ. ಅದೆಷ್ಟು ಸಾವಿರ ಪ್ರೇಮ ಕತೆಗಳು ಬಂದಿಲ್ಲ ? ಎಲ್ಲದರ ಕತೆಯೂ ಒಂದೇ . ಹೀರೊ ಹೀರೋಯಿನ್ ಭೇಟಿ, ಪ್ರೇಮಾಂಕುರ, ಅಡ್ಡಿ ಆತಂಕಗಳು, ಕೊನೆಗೆ ಒಂದಾಗುತ್ತಾರೆ ಅಥವಾ ಬೇರೆಯಾಗುತ್ತಾರೆ. ಇಷ್ಟೇ. ಮತ್ತೆ ಹೊಸ ಪ್ರೇಮ ಕತೆಗಳನ್ನು ಯಾಕೆ ನೋಡಬೇಕು ಹಾಗಾದರೆ ? ನಿರೂಪಣೆಗಾಗಿಯೇ ತಾನೇ ? ವಿವರಗಳಿಗಾಗಿಯೇ ತಾನೇ ? ವ್ಯಾಸರು ಬರೆದ ಕಥೆಯನ್ನೇ ಕುಮಾರವ್ಯಾಸ ಮತ್ತೊಮ್ಮೆ ಹೇಳಿದರೂ ಅದರಲ್ಲಿ ಅತಿಶಯವಾದ ಚೆಲುವು ಕಾಣುವುದು ಮರುನಿರೂಪಣೆಯಲ್ಲಿ ಇರುವ ಸ್ವಂತಿಕೆಯಿಂದಲೇ ಅಲ್ಲವೇ ? 

ಒಂದು ಕತೆ ತಗೊಳ್ಳಿ. ಹೀರೋ ಬೆಂಗ್ಳೂರಿಂದ ಮಂಗ್ಳೂರಿಗೆ ಹೋಗುತ್ತಾನೆ. ಇದು ಕತೆ. ಈ ಕತೆಯಿಂದ ಹತ್ತು ಜನ ಹತ್ತು ತರದ ಚಿತ್ರ ಮಾಡಬಹುದು. ಮಂಗಳೂರಿಗೆ ಎತ್ತಿನ ಗಾಡಿಯಲ್ಲಿ ಹೋದರೆ ಅದೇ ಒಂದು ತರದ ಪಿಚ್ಚರ್, ಬೆಂಗ್ಳೂರಿಂದ ಮಂಗಳ ಗ್ರಹಕ್ಕೆ ಹೋಗಿ ಅಲ್ಲಿಂದ ಮಂಗ್ಳೂರಿಗೆ ಬಂದರೆ ಆ ಕತೆಯೇ ಬೇರೆ. ಹೋಗುವಾಗ ದಾರಿಯಲ್ಲಿ ಹೀರೋಯಿನ್ ಸಿಕ್ಕಿ ಪ್ರೀತಿ ಪ್ರೇಮ ಪ್ರಣಯ ಆದರೆ ಅದು ಯೋಗರಾಜ ಭಟ್ಟರ ಚಿತ್ರ, ಹಾಸನದ ಹತ್ತಿರ ಮಚ್ಚು ಹಿಡಿದವರು ಸಿಕ್ಕಿದರೆ ಪ್ರೇಮ್ ಮತ್ತು ಸೂರಿ ಖುಷಿ ಪಟ್ಟಾರು ! ಹೀರೊ ಮಂಗಳೂರಿಗೆ ನಡೆದೇ ಹೊರಟರೆ, ದಾರಿಯಲ್ಲಿ ಇಪ್ಪತ್ತು ಕರಡಿಗಳು ಸಿಕ್ಕಿದರೆ ಹೇಗೆ ಅಂತ ಸಾಹಸಪ್ರಿಯರು ಕಲ್ಪಿಸಿಕೊಳ್ಳಬಹುದು. ಬೆಂಗಳೂರಿಂದ ಹೊರಟವನು ತಪ್ಪಿ ಹೈದೆರಾಬಾದ್ ಸೇರಿದರೆ ಅದು ಇನ್ನೊಂದು ತರದ್ದೇ ಚಿತ್ರಕಥೆ. ಹೀರೊ ಪ್ರಧಾನ ಮಂತ್ರಿಯಾದರೆ ಈ ಪ್ರಯಾಣ ಬೇರೆಯೇ ರೀತಿಯದ್ದಾಗಬಹುದು. ಎಲ್ಲ ಚಿತ್ರಗಳ ಕತೆಯೂ ಒಂದೇ, ಹೀರೋ ಬೆಂಗ್ಳೂರಿಂದ ಮಂಗ್ಳೂರಿಗೆ ಹೋಗುವುದು. ಅಷ್ಟು ಮಾತ್ರಕ್ಕೆ ಕಾಪಿ ಅನ್ನುವುದು ಹೇಗೆ ಮತ್ತು ಯಾಕೆ ?! ನಿರೂಪಣೆ, ವಿವರಗಳು ಬೇರೆ ಬೇರೆಯೇ ಇರುತ್ತದಲ್ಲ ? ಈ ಎಲ್ಲ ಪ್ರಯಾಣಗಳೂ ಬೇರೆ ಬೇರೆ ಅನುಭವಗಳನ್ನೇ ಕಟ್ಟಿ ಕೊಡುತ್ತವಲ್ಲ. ಈ ಪ್ರಯಾಣದ ಎಲ್ಲ ವಿವರಗಳೂ ಕಾಪಿ ಪೇಸ್ಟ್ ಮಾಡಿದ ಹಾಗಿರಬಾರದು. ಗೇಮ್ ಆಫ್ ಥಾರ್ನ್ಸ್ ಅನ್ನು ಬರೆದ ಜಾರ್ಜ್ ಆರ್ ಆರ್ ಮಾರ್ಟಿನ್ ಹೀಗೆ ಹೇಳಿದ್ದಾನೆ : “Ideas are cheap. I have more ideas now than I could ever write up. To my mind, it’s the execution that is all-important.”

ಸಿನೆಮಾದಂತಹಾ ಸಂಕೀರ್ಣ ಮಾಧ್ಯಮದಲ್ಲಿ ಕಥೆಯಷ್ಟಲ್ಲದಿದ್ದರೂ, ಉಳಿದ ಮಾಧ್ಯಮಗಳಿಗಿಂತ ಹೆಚ್ಚಿನ ಪ್ರಾಮುಖ್ಯ ತಾಂತ್ರಿಕತೆಗೂ ಇದೆ. ಕಥೆಯ ಹೋಲಿಕೆ ಎಲ್ಲರಿಗೂ ಗೊತ್ತಾಗುತ್ತದೆ, ಆದರೆ ನಾನು ತಾಂತ್ರಿಕವಾದ ವಿಷಯಗಳನ್ನು ಕದ್ದದ್ದು ಯಾರಿಗೂ ಗೊತ್ತಾಗಲಿಲ್ಲ ಅಂತ ರಾಮ್ ಗೋಪಾಲ್ ವರ್ಮಾ ತಮಾಷೆ ಮಾಡಿದ್ದ. ಕ್ಯಾಮೆರಾದ ಮೂಲಕ ಹೇಗೆ ಕಥೆ ಹೇಳಬಹುದು, ಬೆಳಕನ್ನು ಹೇಗೆ ಸಂಯೋಜಿಸಿದರೆ ಉಚಿತ, ಸಂಕಲನ ಹೇಗೆ ಮಾಡಿದರೆ ಪರಿಣಾಮಕಾರಿ ಎಂಬುದಕ್ಕೆಲ್ಲ ಹಳಬರು ಹಾಕಿಕೊಟ್ಟ ಮಾದರಿಗಳನ್ನೇ ಬಹುತೇಕ ಈಗಲೂ ಅನುಸರಿಸಲಾಗುತ್ತದೆ ಮತ್ತು ಅನುಕರಿಸಲಾಗುತ್ತದೆ. ಕ್ಯಾಮೆರಾದ ಬಳಕೆಯ ತಂತ್ರವನ್ನೋ, ಬೆಳಕಿನಿಂದ ಚಿತ್ರಿಸುವ ಕೌಶಲವನ್ನೋ ಸಾಲ ತೆಗೆದುಕೊಂಡರೆ ಅದು ಹಲವರಿಗೆ ಗೊತ್ತೇ ಆಗುವುದಿಲ್ಲ. ಇಲ್ಲೂ ಎಲ್ಲರೂ ಪೂರ್ವಸೂರಿಗಳಿಗೆ ಋಣಿಗಳೇ ಆಗಿದ್ದಾರೆ. 

ಇನ್ನೊಂದು ವಿಷಯ ಪ್ರತಿಕ್ರಿಯೆಯದ್ದು, ಈಚೆಗೆ ಹಾಲಿವುಡ್ ರಿಪೋರ್ಟರ್ ಪತ್ರಿಕೆ ನಡೆಸಿಕೊಟ್ಟ ಹಾಲಿವುಡ್ಡಿನ ನಿರ್ದೇಶಕರ ರೌಂಡ್ ಟೇಬಲ್ ಗೋಷ್ಠಿಯೊಂದರಲ್ಲಿ ಈ ವಿಚಾರ ಬಂತು. ಬಹಳಷ್ಟು ಚಿತ್ರಗಳು ಚಿತ್ರಕಥೆ ಬರೆದವನು ಈಗಾಗಲೇ ನೋಡಿದ ಚಿತ್ರವೊಂದಕ್ಕೆ ಪ್ರತಿಕ್ರಿಯೆ ಎಂಬಂತೆ ಹುಟ್ಟಿರುತ್ತದೆ ಅಂತೊಬ್ಬಳು ನಿರ್ದೇಶಕಿ ಹೇಳಿದಳು. ಇದನ್ನು ಬಿಡಿಸಿ ಹೇಳುವುದಾದರೆ ತರದ ಪ್ರತಿಸ್ಪಂದನ ಬೇರೆ ಬೇರೆ ರೂಪಗಳಲ್ಲಿರಬಹುದು. "ಆಹಾ ಇದೆಷ್ಟು ಸೊಗಸಾಗಿದೆ, ನಾನೂ ಯಾಕೆ ಇಂತಾದ್ದೊಂದನ್ನು ಮಾಡಬಾರದು" ಎಂಬ ಧಾಟಿಯ ಸ್ಫೂರ್ತಿಯಿರಬಹುದು, "ಇದು ಸರಿಯಲ್ಲ, ಇದನ್ನು ಹೇಳಬೇಕಾದ ರೀತಿ ಇದಲ್ಲ, ನಾನು ಇದನ್ನೇ ಇದಕ್ಕಿಂತ ಚೆನ್ನಾಗಿ ಹೇಳಬಲ್ಲೆ" ಎಂಬ ಭಾವ ಇರಬಹುದು, "ಇದನ್ನೇ ಹೋಲುವ ಇನ್ನೊಂದು ಕಥೆಯೂ ಇದೆಯಲ್ಲ, ಅದನ್ಯಾಕೆ ಹೇಳಬಾರದು" ಅನ್ನುವ ತರದ ಸ್ಪೂರ್ತಿಯೂ ಇರಬಹುದು. The borrowing and retooling of ideas is a core part of what makes film tick. To argue otherwise is to deny a cinematic tradition of resonant, fruitful, and revealing 
intertextuality ಅಂತೊಬ್ಬರು ಹೇಳಿರುವುದರಲ್ಲಿ ಸತ್ಯವಿದೆ. 

ಸ್ಪೀಡ್ ಎಂಬ ಚಿತ್ರದಲ್ಲಿ ಬಸ್ಸೊಂದರಲ್ಲಿ ಭಯೋತ್ಪಾದಕನೊಬ್ಬ ಬಾಂಬು ಇಟ್ಟಿರುತ್ತಾನೆ, ಬಸ್ಸು ಘಂಟೆಗೆ ಎಂಬತ್ತಕ್ಕಿಂತ ಹೆಚ್ಚು ವೇಗವಾಗಿ ಹೋದರೆ ಅದು ಸಿಡಿಯುತ್ತದೆ. ಈ ಚಿತ್ರ ಬಂದಾಗ ಅದನ್ನು Die hard in a bus ಅಂತ ವಿಮರ್ಶಕರು ಕರೆದರು, ಡೈ ಹಾರ್ಡಿನಲ್ಲಿ ಒಂದು ಕಟ್ಟಡವನ್ನು ಭಯೋತ್ಪಾದಕರು ವಶಕ್ಕೆ ತೆಗೆದುಕೊಂಡಿರುತ್ತಾರೆ, ಇಲ್ಲಿ ಕಟ್ಟಡಕ್ಕೆ ಬದಲಾಗಿ ಬಸ್ಸು ಇದೆ ಎಂಬುದು ಅಲ್ಲಿನ ಭಾವ. ಆದರೆ ಅದರ ಚಿತ್ರಕಥೆ ಬರೆದವರ ಚಿಂತನೆ ಹಾಗಿರಲಿಲ್ಲ, ಡೈ ಹಾರ್ಡ್ ಅವರ ತಲೆಯಲ್ಲಿಯೇ ಇರಲಿಲ್ಲವಂತೆ, ಅವರು ಸ್ಪೀಡ್ ಅನ್ನು ಬರೆದದ್ದು Runaway Train ಎಂಬ ಚಿತ್ರಕ್ಕೆ ಪ್ರತಿಕ್ರಿಯೆಯಾಗಿ. ರೈಲೊಂದಕ್ಕೆ ಬ್ರೇಕು, ಚಾಲಕ ಎರಡೂ ಇಲ್ಲದಾದಾಗ ಅದರಲ್ಲಿ ಸಿಕ್ಕಿ ಬಿದ್ದವರ ಕಥೆ ಅದು. ರೈಲು ಇಲ್ಲಿ ಬಸ್ಸಾಗಿದೆ, ಅಲ್ಲಿ ಬ್ರೇಕು ಇಲ್ಲದ್ದರಿಂದ ಅದು ನಿಲ್ಲಲಾರದು ಇಲ್ಲಿ ಬಾಂಬಿರುವುದರಿಂದ ನಿಲ್ಲಕೂಡದು. ತರಕಾರಿ ಅಲ್ಲಿನದು, ಸಾಂಬಾರು ನಮ್ಮದೇ ಎಂಬಂತೆ ಆ ಚಿತ್ರಕ್ಕೆ ಪ್ರತಿಕ್ರಿಯೆಯಾಗಿ ಇದು ಹುಟ್ಟಿದೆ. ರೈಲು ನಿಲ್ಲದಿದ್ದರೆ ಆಗುವ ತೊಂದರೆಯೇ ಬೇರೆ, ಪೇಟೆಯಲ್ಲಿ ಬಸ್ಸು ಎಂಬತ್ತಕ್ಕಿಂತ ಕಡಮೆ ವೇಗದಲ್ಲಿ ಓಡಲಾರದಾದರೆ ಆಗುವ ಕೋಲಾಹಲವೇ ಬೇರೆ, ಕಥೆಗಳ ಆಕೃತಿ ಒಂದೇ, ಆದರೆ ವಿವರಗಳು ಎಷ್ಟು ಬೇರೆ ಅಂದರೆ ವಿಮರ್ಶಕರು ಚಿತ್ರವನ್ನು ಡೈ ಹಾರ್ಡಿಗೆ ಹೋಲಿಸಿದರಲ್ಲದೆ ನಿಜಕ್ಕೂ ಅದು ಯಾವಚಿತ್ರಕ್ಕೆ ಪ್ರತಿಸ್ಪಂದನವಾಗಿತ್ತೋ ಅದನ್ನು ಗುರುತಿಸಲಿಲ್ಲ. ಬೇರೆ ಕಡೆಯಿಂದ ಬಂದ ಸಾಮಗ್ರಿ ನಮ್ಮದೇ ಆಗುವುದು ಹೀಗೆಯೇ.  
ಒಬ್ಬರು ನಿರ್ದೇಶಕರು ಹೀಗೂ ಹೇಳಿದ್ದಾರೆ : “Nothing is original. Steal from anywhere that resonates with inspiration or fuels your imagination. Devour old films, new films, music, books, paintings, photographs, poems, dreams, random conversations, architecture, bridges, street signs, trees, clouds, bodies of water, light and shadows. Select only things to steal from that speak directly to your soul. If you do this, your work (and theft) will be authentic. Authenticity is invaluable; originality is non-existent. And don’t bother concealing your thievery - celebrate it if you feel like it. In any case, always remember what Jean-Luc Godard said: “It’s not where you take things from - it’s where you take them to."    

ಎಡಿಸನ್ ಬಲ್ಬು ಕಂಡು ಹಿಡಿಯಲಿಲ್ಲ, ಈಗಾಗಲೇ ಇದ್ದ ಕಳಪೆ ಬಲ್ಬುಗಳಿಗೆ ಹೊಸ ರೂಪ ಕೊಟ್ಟದ್ದಷ್ಟೇ ಅವನು ಮಾಡಿದ್ದು. ಕಂಪ್ಯೂಟರ್ ಅನ್ನು ಅದು ಈಗ ಇರುವಂತೆ ಮಾಡಿದ್ದು ಸ್ಟೀವ್ ಜಾಬ್ಸ್ ಅನ್ನುತ್ತಾರೆ, ಅವನೂ Xerox ಕಂಪನಿ ಮಾಡಿದ್ದನ್ನು ಎಗರಿಸಿ ಅದಕ್ಕೆ ಹೊಸ ರೀತಿಯಲ್ಲಿ ಸಿಂಗಾರ ಬಂಗಾರ ಮಾಡಿದವನೇ. Xerox ಕಂಪನಿಯದ್ದೂ ಇದ್ದದ್ದಕ್ಕೆ ರೆಕ್ಕೆ ಪುಕ್ಕ ಸೇರಿಸಿದ ಸಾಧನೆಯೇ. ಎಲ್ಲವೂ ಫ್ರುಟ್ ಸಲಾಡೇ. ಆಡಂ ಗ್ರ್ಯಾಂಟ್ ಎಂಬ ಲೇಖಕನು Originals ಎಂಬ ಪುಸ್ತಕದಲ್ಲಿ ಸಾಧಕರು ಹೆಚ್ಚಾಗಿ ಯಾವುದನ್ನೂ ಇದಂಪ್ರಥಮವಾಗಿ ಮಾಡುವುದಿಲ್ಲ, ಕಡಮೆ ಪ್ರತಿಭೆಯವರು ಈಗಾಗಲೇ ಮಾಡಿರುವುದನ್ನು ನೋಡಿ, ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವಾಗ ಬರಬಹುದಾದ ಅಡ್ಡಿ ಆತಂಕಗಳು, ಯೋಜನೆಯ ಸಾಧಕ ಬಾಧಕಗಳು ಇವನ್ನೆಲ್ಲ ತೂಗಿನೋಡಿಯೇ ರಂಗಪ್ರವೇಶ ಮಾಡುತ್ತಾರೆ ಅನ್ನುತಾನೆ. ತಮ್ಮಷ್ಟು ಅಸಾಧಾರಣ ಸಾಮರ್ಥ್ಯವಿಲ್ಲದವರು ಈಗಾಗಲೇ ಅವಿಕಸಿತ ಸ್ಥಿತಿಯಲ್ಲಿ ರೂಪಿಸಿರುವುದಕ್ಕೇ ಒಪ್ಪ ಓರಣ ಮಾಡಿ ಅದಕ್ಕೆ ಒನಪು ಒಯ್ಯಾರಗಳನ್ನು ಕೂಡಿಸಿ, ಅದರಲ್ಲಿರುವ ಕುಂದು ಕೊರತೆಗಳನ್ನು ಸರಿಮಾಡಿ, ಅದೊಂದು ಹೊಸತೇ ವಿಷಯ ಅನ್ನಿಸುವಷ್ಟು ಅದನ್ನು ಬದಲಿಸಿ ಅದನ್ನು ಸರ್ವಜನಾದರಣೀಯವಾಗಿ ಮಾಡುವುದೇ ಹಲವು ದೊಡ್ಡ ಸಾಧಕರು ಮಾಡಿರುವ ಕೆಲಸ ಎಂಬರ್ಥದಲ್ಲಿ ಈ ಪುಸ್ತಕದಲ್ಲಿ ತತ್ತ್ವಮಂಡನೆ ಮಾಡಲಾಗಿದೆ. 

ಹಾಗಂತ ಕದ್ದದ್ದಕ್ಕೆಲ್ಲ ಕ್ಷಮೆಯಿದೆ ಅಂತಲೂ ಅಲ್ಲ. ನಮ್ಮಲ್ಲಿ ಫ್ರೇಮ್ ಟು ಫ್ರೇಮ್ ಕಾಪಿ, ಇದ್ದ ಹಾಗೆಯೇ ಇಡಿಕ್ಕಿಡೀ ಇಳಿಸಿದ್ದಾರೆ ಅನ್ನುವಂತದ್ದೂ ಬಹಳಷ್ಟು ಇದೆ, ಇದು ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಕಳ್ಳರ ಹಾವಳಿಯಿಂದಾಗಿ ಎಂತ ಬೋದಾಳ ಶಂಕರನೂ ಎಷ್ಟು ದೊಡ್ಡ ಜೀನಿಯಸ್ಸಿನ ಮೇಲೂ ಕಳ್ಳತನದ ಆರೋಪ ಹೊರಿಸಬಹುದು ಅನ್ನುವಂತೆ ಆಗದಿರಲಿ. ಎಲ್ಲೋ ಸ್ವಲ್ಪ ಹೋಲಿಕೆ ಇದೆ ಅಂದ ಮಾತ್ರಕ್ಕೆ ಕದ್ದ ಆರೋಪ ಬೇಡ. ನಿಮ್ಮ ಮನೆಯಲ್ಲೂ ಬೆಡ್ ರೂಮು, ಅಡಿಗೆ ಕೋಣೆ ಇರುತ್ತದೆ, ಪಕ್ಕದ ಮನೆಯಲ್ಲೂ ಇರುತ್ತದೆ, ಹಾಗಂತ ನಿಮ್ಮದು ಕದ್ದ ಮನೆಯಲ್ಲವಷ್ಟೇ. ಹೋಲಿಕೆ, ಸಾಮ್ಯ, ಸಮಾನ ಗುಣ ಧರ್ಮಗಳೇ ಬೇರೆ, ಕದಿಯುವುದೇ ಬೇರೆ. ಇನ್ನು ಕದ್ದ ಆರೋಪವನ್ನೇ ಕದಿಯುವವರೂ ಇದ್ದಾರೆ! X ಚಿತ್ರ Yನ ಹಾಗಿದೆ ಅಂತ ಯಾರೋ ಹೇಳಿದ್ದು ಕೇಳಿ ಹೇಳುವವರು. ಇನ್ನೊಬ್ಬರು ಹಾಕಿದ ಸ್ಟೇಟಸ್ ಅನ್ನೇ ನೋಡಿ ಸ್ಟೇಟಸ್ ಹಾಕುವವರು ಎಷ್ಟು ಜನ ಇಲ್ಲ.

ರಜನಿಕಾಂತನ ಈಮೈಲ್ ಅಡ್ರೆಸ್ಸ್ ಏನು ಅಂತ ಒಂದು ಜೋಕು ಇತ್ತು, gmail@RAJINIKANTH.com ಅನ್ನುವುದೇ ಉತ್ತರ. ಇದನ್ನು rediffmail @RAJINIKANTH.com ಅಂತ ಬದಲಾಯಿಸಿದರೂ ಇದು ಬೇರೆ ಜೋಕಾಗುವುದಿಲ್ಲ. ಜೋಕಿನ ಸತ್ವ, ಆತ್ಮ, ಆಕರ್ಷಣೆ ಬದಲಾದ ಮೇಲೂ ಅದುವೇ. ಇಲ್ಲಿ ವಿವರ ಬದಲಾದರೂ ಜೋಕು ಸ್ವಂತದ್ದಾಗಲಿಲ್ಲ, ಹೊಸ ದೇಹದಲ್ಲಿ ಹಳೆ ಆತ್ಮ ಇಟ್ಟ ಹಾಗಾಗಿದೆ ಅಷ್ಟೇ. ಹೀಗೆ ಆತ್ಮವನ್ನು ಎಗರಿಸಿದ್ದಾರೆಯೇ ಅನ್ನುವುದು ಮುಖ್ಯ. ಇದನ್ನೆಲ್ಲ ಯೋಚಿಸಿ ಆರೋಪ ಹೊರಿಸಿದರೆ ಒಳ್ಳೆಯದು ಅಂತ ಹೇಳಿ ನಿಮ್ಮ ತಲೆಗೆ ಒಂದೆರಡು ಹುಳವಾದರೂ ಬಿಟ್ಟಿದ್ದೇನೆ ಅಂದುಕೊಂಡು ಮುಗಿಸುತ್ತೇನೆ.

ಅನೂಪ್ ಭಂಡಾರಿ ಸಂದರ್ಶನ(Anup Bhandari's interview)

ಇದನ್ನು ಪ್ರಕಟಿಸಿ ಆಗಲೇ ಒಂದು ಒಂದು ವರ್ಷ ಆಯಿತು, ಕಾಲಕ್ಕೇನು ಧಾಡಿ ? ಕಾಲ ಅನ್ನುವುದು ಧೋನಿ ಓಡಿದ ಹಾಗೆ ದಡಬಡನೆ ಓಡಿದೆ. ಅಲ್ಲಿಗೆ ರಂಗಿಯೂ ಪೂರ್ತಿ ಒಂದು ವರ್ಷ ಮುಗಿಸಿದೆ, ಬಾಹುಬಲಿ ತನ್ನ ಬಾಹುಬಲ ಪ್ರದರ್ಶಿಸಿ ಥಿಯೇಟರ್ ಕಿತ್ತುಕೊಂಡಾಗ ರೊಚ್ಚಿಗೆದ್ದದ್ದು, ವಾಟ್ಸ್ ಅಪ್ ನಲ್ಲಿ ಪ್ರಚಾರ ಕೊಟ್ಟದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದು ಎಲ್ಲ ಮೊನ್ನೆ ಬಂದ ಮಳೆಯ ನೆನಪಿನ ಹಾಗೇ ಮನಸ್ಸಿನಲ್ಲಿಯೇ ಇದೆ. ಓದಿಲ್ಲದಿದ್ದರೆ ಓದಿ, ಅನೂಪ್ ತುಂಬ ಮಾತಾಡಿ, ಸಾಕಷ್ಟು ವಿಚಾರಗಳನ್ನು ಹಂಚಿಕೊಡಿದ್ದಾರೆ:

Yes, I know. You’ve barely finished talking about how Ranna performed at the Box office or what you felt about Vajra Kaaya or how cool was that new film Ganapa, and I am already looking ahead to all of the other goodies 2015 has to offer. Can you blame me? It’s as crowded a time as ever, not just for the big ticket blockbusters but also for the low profile but exciting fares arriving over the next several months. And when I talked about exciting stuff, Rangitaranga was what I had in my mind!! That exciting film whose trailer impressed everyone. Here is the good thing. You can now mark the dates on your calendars(Who uses calendars these days anyway!!). July 3rd it is! Rangitaranga will finally be released on July 3rd.
There is nothing to match the thrill and surprise of discovering a great film for the first time, it is this thrill and, in our case, the anticipation of it that made us talk to the director. In this wide-ranging talk, Nam Cinema spoke to the captain of the ship Anup Bhandari about his inspirations, his thoughts about helming this film, and how he created his ambitious movie. Read on!!
Let us begin from the beginning. How did you get attracted to this medium?
From as long as I can remember I have been influenced by movies and music. Even at 4-5 years old I could sing the whole Prema Loka album A side to B side with prelude and interlude music. When we weren’t playing cricket, my brother and I would pretend to make movies and our little minds would come up with songs for the different sequences in those movies. I started taking movies seriously during my engineering days where I started working on a script for Sudeep (He had just become a star and I wanted my dad to make a movie with him). My dad liked the script and encouraged me to focus on directing it myself. I then started making short films. One thing led to another and I had a few short films under my belt, the most popular being my last short WORDS featuring Hollywood actor Russell Harvard, which got international acclaim.
Loving films is one thing, learning how to make one is quite another. How did you learn filmmaking?
I learnt by doing and by watching thousands of movies. I watch movies from all over the world and from all the greatest film makers. There was a time when I used to watch 3-4 films a day. In 2008 alone I must have watched around 600 movies. Subconsciously, my mind started imbibing the real art of film making. What is right what is wrong? When wrong can be made to look right. I also read a lot about film making and would listen to great filmmakers talk about their work. Add to this my exposure to masala movies from a very young age and you get a masala movie that is shot sensibly.
Your father Sudhakar Bhandari is also a director. Which serials did he direct?
He has directed several TV serials and ads, the most are Kurigalu Saar and Premada Kadambari in which Sudeep played the lead before going on to become a superstar. Quite a few famous Kannada actors have first acted with him. Chikkanna was also his find.
You composed the theme song of the TV show Kurigalu. What was the extent of your involvement in Kurigalu?
I haven’t worked on the sets of Kurigalu or any of my dad’s serials. I hardly ever went to the set except for his very first TV serial “Jolly Jolly picnic” in which I acted as a child artist and also dubbed for a few other kids at the age of 9.
You worked in Infosys. What was your thought behind shifting form an IT job for movies? Did you face any problems in this regard?
Even before joining IT, I was looking at making a movie. IT was always meant to be a stop gap arrangement. While in IT I was fortunate enough to make a lot of short films which helped me in honing my skills. Coming back to the question, there was never any second thought. Film making was always meant to be my final destination. I did not face any problems. Everyone was very supportive about my decision to make movies. The hardest part was leaving my wife and daughter behind in the US and working the movie here. My daughter is 3 years old now and out of that I have only been with her for 1 year.
Rakshith Shetty had liked the script of Rangitaranga and he would have played the lead role had it been not for the issues with Dates. What is the story behind that?
I had initially approached Rakshit Shetty on Facebook to play the lead. He was very impressed with WORDS and even liked the one line story. He was keen to have further discussion but unfortunately he was busy with another film and I had to start immediately. We then decided to cast a new comer.
Your brother Nirup was the next choice?
Nirup was at the time assisting me and I knew that he was perfect for the role but I wanted it to be a collective decision as he is my brother. Luckily for me, the suggestion to cast him came from our producer Mr. H.K. Prakash who had seen him earlier in a TV serial. We still had a audition for the lead role as we wanted to cast the best and Nirup was way ahead.
Who is producing the film? How did you find the producer?
Mr. H.K. Prakash (Shree Devi Entertainers) has produced the film. A mutual friend introduced me to him. He was in search of a passionate and sensible film maker to direct his debut feature film. He had seen my short film WORDS and was very impressed. We first met each other on Skype as I was in the US. I narrated the one line story and sang a couple of songs which I had written and composed for the movie (Akka Pakka and Kele Cheluve). He loved the story and was particularly impressed with the pure and meaningful Kannada lyrics. He immediately agreed to do the movie.
Any budget problems?
Mr. H.K. Prakash was very supportive throughout the process. He never compromised on anything. Considering the existing small market for a Kannada film and that too one starring new comers, we have spent well but wisely.
Movie seems to be set in interesting locations. What was Location scouting like? Any challenges there?
We spent months finding locations because in the script I had very specific locations in mind. It was not possible to find all of them in one place, so we travelled all across South India. The toughest location to find was a house that places a pivotal role in the movie. We have seen at least 100-120 houses and finally found the right one in Ottapalam Kerala. Another location that really made us travel thousands of kilometers was a vehicle ferry. We needed 2 ferries, one to carry the car and the actors and another to carry the jimmy jib and the crew. We finally found it in Alleppy.
It is often said that many directors find shooting to be as dramatic as their films. Stuff like location nightmares, grueling schedules, constraints, unexpected problems and such. Any filmy stories about the shooting?
We constantly worked for 18-20 hrs a day but the crew was very supportive. We had snake problems, we had elephant problems, problem with local hunters, we had an incident where Nirup almost broke his head while doing a spin in Yakshagana costume around a 300 Kg brass container. It was 2:30 AM and we were already 30 mins past pack up time. The ground was uneven made of hard stone and we had poured water all over to look pleasing on camera. Nirup did the whole spin in one take with two cameras capturing it but towards the end he slipped and fell on the brass vessel, head first. We feared the worst. But luckily the head gear protected from a fatal fall.
You came as an outsider(As an NRI), how did KFI look like for an outsider like you?
I am still an outsider. We never announced our film when we started because we didn’t want our work to get affected by unnecessary attention. According to the people who worked on our sets, it was a new experience to them. Even the production team who take care of our food and refreshments were in tears at the end of the shoot. They walked up to me and said that for first time in their 25 years of service they were not shouted at in a movie set. We were a task oriented team. Our goal was to get the job done and at the same time we treated everyone on the set equally.
One of the DOPs is an American. What is his background?
Lance Kaplan has worked on several films and corporate ads in America. I first worked with him in WORDS and we both loved each other’s work. When I first asked him to work on this movie, I wasn’t quite sure he would be interested in coming down to India for such a long duration. But he said yes even before I could finish my sentence.
Was he amused by the ways of Kananda film industry?
He would find our movies a little outside his taste barring a few movies that I suggested and being a naturalist he would find the lighting unusual and disconnected but what he really loved was the commitment of the crew. He was amazed at how our people would take risks without thinking twice and without any safety measures which no one would ever do in the US. He did love the colorful songs and dances in our movies.
Visuals in the trailers are outstanding. Any technical innovations that you people brought in?
We have tried to shoot the movie in a very classic style and have not resorted to gimmicky techniques (for the lack of a better word). We have tried to tell a story visually, so the camera kind of works as a story telling tool. The camera movements are very smooth and it goes with the flow. We have deliberately avoided ramp shots or jump cuts in a jimmy shot. For most part we have tried to stay natural and consistent with respect to lighting. We have some very interesting shots in the movie but almost all of them follow the classic style of film making.
Anything inspirational that you would like to share from this journey? Any problems you solved or any lessons learned?
The first day of shoot was overwhelming, I had a crew of around 100 plus and they were all waiting for me to say what to do. I didn’t know most of them, I didn’t know who was what expect for my associates and a few guys who were part of pre-production. But I didn’t let anyone know that. I just started working and back of my mind I knew I would be able to pull it off. By the end of the day I was in total control and we were very efficient on the very first day. More than that the entire crew started talking about the making style and they started to realize that it was going to be something different.
Throughout the shoot we faced problems at every step, be it rain or some prop not getting ready on time, almost all of heroines costumes getting stolen. But my strength is that I don’t easily panic. I look for solutions and I overcame all the obstacles and I am pretty satisfied with the result.
Any plans for special/unusual releases(Like film festivals, outside India, Online release etc.) ?
We were approached by London film festival, but we are still working on the subtitles so we are not sure if we will be ready in time. Haven’t really focused on festivals as I am totally held up but it was something I wanted to do right from the beginning. One of the few regrets. I do plan to release it online and if possible overseas. The latter depends on the success.
Who are your favorite filmmakers and why you like them?
I love Martin Scorsese for his sheer depth of knowledge and how well he uses it to tell a story. I love Quentin Tarantino for his total disregard for conventional rules and just backing his crazy ideas. I love Steven Spielberg for thinking big and for being able to make Jurassic Park and Schindler’s List almost at the same time. I love David Fincher for his ability to make dark and dreary look beautiful. I love Puttana Kanagal for his ability hit moral grey area and still appeal to the conservative audience. I love Ravichandran for having the guts to adapt Grease 2 and make a movie like Prema Loka which no had even started to think of at the time. The list can go on…..
Mandatory follow up question to that!! Any favorite movies that excite you?
Quite a few. I love 12 angry men, The Green Mile, Life is Beautiful, To Kill A Mockingbird, The Departed, Saving Private Ryan. There is no particular genre. However if I have to pick one it would be mystery. I just love watching a good mystery movie.
Why did you come to this industry? What do you intend to do?
Film making has always been my passion. And making a Kannada film has been my dream. My dream was to bring global attention to Kannada cinema. There is commercial cinema and there is artistically rich cinema but my idea is to make cinema which is entertaining and commercial but handled sensibly. Thanks to the superstars of the industry we have commercially grown like never before. The budget and the returns are expanding. So financially we are in a good place. Now we need to make the best of this and steer towards more sensible cinema which can travel outside the state. We need to create a unique stamp and avoid cloning the styles of other industries.
Nam Cinema wishes ALL THE BEST to the creative team of Rangitaranga. Hope it sets the Box Office ringing and wins the hearts!
http://namcinema.com/news/rangitaranga-interview-anup-bhandari-director/