Sunday 6 January 2019

ಕಪಾಟು

ಪುಸ್ತಕಪ್ರೇಮಿ ಪ್ರಶಾಂತ ಭಟ್ಟರು ತಮ್ಮ ಪುಸ್ತಕದ ಕಪಾಟಿನ ಫೋಟೋ ಹಾಕಿದ್ದನ್ನು ನೋಡಿ, ಮೂರ್ತಿ ದೇರಾಜೆಯವರು ಹಂಚಿಕೊಂಡ ಕತೆ, ಅವರದೇ ವಾಕ್ಯಗಳಲ್ಲಿ :
ನಮ್ಮ ಲೈನ್ ಕಜೆ ರಾಮಚಂದ್ರರ ತಂದೆಯವರು ..
ಒಮ್ಮೆ ಮಂಗಳೂರಿನ ಕಪಾಟು ಅಂಗಡಿಗೆ ಹೋಗಿ ..
ಇದಕ್ಕೆಷ್ಟು... ಇದಕ್ಕೆಷ್ಟು ಅಂತ ...
ಒಂದರ್ದ ಗಂಟೆ ವಿಚಾರಿಸಿದರಂತೆ ...
ಅಂಗಡಿಯವನಿಗೆ ಸ್ವಲ್ಪ ಅಂದಾಜಾಯ್ತು ..
ಈ ಜನ ತೆಕ್ಕೊಳ್ಳುವ ಗಿರಾಕಿ ಅಲ್ಲ ...
ಅವರ ಡ್ರೆಸ್ಸೂ ಹಾಗೇ ಇತ್ತು ..
ಹಳ್ಳಿಯ ಕೃಷಿಕರಲ್ವಾ ...
...ಓ ಇದಕ್ಕೆಷ್ಟು ಅಂತ ಮತ್ತೊಮ್ಮೆ ಕೇಳಿದಾಗ ...
"ಅದೆಲ್ಲಾ ನಿಮಗೆ ಆಗ್ಲಿಕ್ಕಿಲ್ಲ ಭಟ್ರೆ .. ಕಾಸ್ಟ್ಲಿ ... !!
ನೀವು ಗುಜ್ರಿ ಡಬ್ಬಿ ಅಂಗಡಿಗೆ ಹೋದ್ರೆ ಸಿಕ್ಕೀತು..." ಅಂತ
ಡೋಂಗಿ ಮಾಡಿದ ...
ಇವರು ಕೂಲಾಗಿ ... "ಕಾಸ್ಟ್ಲಿಯೋ...??
ನಿಮ್ಮ ಅಂಗಡಿಯಲ್ಲಿರುವ
ಎಲ್ಲಾ ಕಪಾಟುಗಳಿಗೆ ಒಟ್ಟು ಎಷ್ಟಾಗ್ತದೆ ...?"
ಅಂತ ಕೇಳಿದರು. ...... ಅಂವ ಎಷ್ಟೋ ಹೇಳಿದ ..
"ಎಲ್ಲವನ್ನೂ ಪ್ಯಾಕ್ ಮಾಡ್ಸಿ ..
ವೆಂಕಟ್ರಮಣ ಸರ್ವೀಸು ಲೋರಿಗೆ ... ಹಾಕಿ..."
ಅಂತ ಅಂವ ಹೇಳಿದಷ್ಟು ದುಡ್ಡು ಕೊಟ್ಟು ..
ಇವರು ಮೋಹಿನಿ ವಿಲಾಸಕ್ಕೆ ಹೋದರಂತೆ .

No comments:

Post a Comment